Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜೊತೆಗೆ ಚರ್ಚೆ- HDK

07/02/2026 8:41 PM

BIG NEWS : ನಾವು ಇನ್ನು 5000 ದ್ವೇಷ ಭಾಷಣಗಳನ್ನು ಮಾಡುತ್ತೇವೆ : ರಾಜ್ಯ ಸರ್ಕಾರದ ವಿರುದ್ಧ BL ಸಂತೋಷ್ ವಾಗ್ದಾಳಿ

07/02/2026 8:38 PM

SHOCKING: ಮನೆಯಲ್ಲೇ ನನ್ನನ್ನು ಯಾರೂ ಕೇಳಲ್ಲ, ನೀವ್ಯಾರು ಕೇಳೋಕೆ?: ಶಿಕ್ಷಕಿಗೆ ಕಪಾಳಮೋಕ್ಷ ಮಾಡಿದ ವಿದ್ಯಾರ್ಥಿ

07/02/2026 8:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಷ್ಟ್ರಲಾಂಛನವನ್ನು `ಸತ್ಯ ಮೇವ ಜಯತೆ’ ಧೇಯವಾಕ್ಯದೊಂದಿಗೆ ಪ್ರದರ್ಶಿಸುವುದು ಕಡ್ಡಾಯ : ರಾಜ್ಯ ಸರ್ಕಾರ ಮಹತ್ವದ ಆದೇಶ.!
KARNATAKA

BIG NEWS : ರಾಷ್ಟ್ರಲಾಂಛನವನ್ನು `ಸತ್ಯ ಮೇವ ಜಯತೆ’ ಧೇಯವಾಕ್ಯದೊಂದಿಗೆ ಪ್ರದರ್ಶಿಸುವುದು ಕಡ್ಡಾಯ : ರಾಜ್ಯ ಸರ್ಕಾರ ಮಹತ್ವದ ಆದೇಶ.!

By kannadanewsnow5715/03/2025 5:22 AM

ಬೆಂಗಳೂರು : ರಾಷ್ಟ್ರಲಾಂಛನವನ್ನು “ಸತ್ಯಮೇವ ಜಯತೆ” ಧೈಯವಾಕ್ಯದೊಂದಿಗೆ ಸಂಪೂರ್ಣವಾಗಿ ಪ್ರದರ್ಶಿಸುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.

ಭಾರತದ ರಾಷ್ಟ್ರಲಾಂಛನವನ್ನು ಅಧಿಕೃತ ಉದ್ದೇಶಗಳಿಗೆ ಬಳಸಲು ಅಧಿಕಾರ ಹೊಂದಿರುವ ಕೆಲವು ಸರ್ಕಾರಿ ಏಜೆನ್ಸಿಗಳು ರಾಷ್ಟ್ರ ಲಾಂಛನದ ಸಿಂಹ ಮುಕುಟದ ಚಿತ್ರದ ಕೆಳಗೆ ದೇವನಾಗರಿ ಲಿಪಿಯಲ್ಲಿ ಬರೆದಿರುವ ಸತ್ಯಮೇವ ಜಯತೆ’ ಧೈಯ ವಾಕ್ಯವನ್ನು ಬಳಸದಿರುವುದು ಕಂಡುಬಂದಿರುತ್ತದೆ. ಇದು ರಾಷ್ಟ್ರಲಾಂಛನದ ಅಪೂರ್ಣ ಪ್ರದರ್ಶನವಾಗಿದ್ದು, ಭಾರತದ ರಾಷ್ಟ್ರಲಾಂಛನ (ಅನುಚಿತ ಬಳಕೆ ನಿಷೇಧ) ಅಧಿನಿಯಮ, 2005 ಮತ್ತು ಭಾರತದ ರಾಷ್ಟ್ರ ಲಾಂಛನ (ಬಳಕೆಯ ನಿಯಂತ್ರಣ) ನಿಯಮಗಳು, 2007ರ ಉಲ್ಲಂಘನೆಯಾಗುತ್ತದೆಯೆಂದು ಉಲ್ಲೇಖಿತ ಪತ್ರದಲ್ಲಿ ತಿಳಿಸಲಾಗಿದೆ. ಆದ್ದರಿಂದ, “ಸತ್ಯಮೇವ ಜಯತೆ” ಧೈಯವಾಕ್ಯವನ್ನು ಹೊಂದಿರುವ ರಾಷ್ಟ್ರಲಾಂಛನದ ಪೂರ್ಣ ಚಿತ್ರವನ್ನು ಬಳಸಬೇಕೆಂದು ಈ ಮೂಲಕ ಮತ್ತೊಮ್ಮೆ ತಿಳಿಸಲಾಗಿದೆ.

ಮುಂದುವರೆದು, ಹಲವು ಕಡೆಗಳಲ್ಲಿ ಅನಧಿಕೃತ ವ್ಯಕ್ತಿಗಳು / ಸಂಸ್ಥೆಗಳು ರಾಷ್ಟ್ರಲಾಂಛನವನ್ನು ಮುದ್ರಣ ಸಾಮಗ್ರಿ ಹಾಗೂ ವಾಹನಗಳ ಮೇಲೆ ಬಳಸುತ್ತಿರುವುದು ಕಂಡು ಬಂದಿರುತ್ತದೆ. ಭಾರತದ ರಾಷ್ಟ್ರ ಲಾಂಛನ (ಅನುಚಿತ ಬಳಕೆ ನಿಷೇಧ) ಅಧಿನಿಯಮ, 2005 ಮತ್ತು ಭಾರತದ ರಾಷ್ಟ್ರಲಾಂಛನ (ಬಳಕೆಯ ನಿಯಂತ್ರಣ) ನಿಯಮಗಳು, 2007ರಲ್ಲಿ ತಿಳಿಸಿರುವ ಅಧಿಕಾರಿಗಳಿಗೆ / ಉದ್ದೇಶಗಳಿಗೆ ಮಾತ್ರ ರಾಷ್ಟ್ರಲಾಂಛನದ ಬಳಕೆಯು ಸೀಮಿತವಾಗಿರುತ್ತದೆ ಎಂದು ಈ ಮೂಲಕ ಸ್ಪಷ್ಟಪಡಿಸಿದೆ.

ಈ ಹಿನ್ನೆಲೆಯಲ್ಲಿ ತಮ್ಮ ಆಡಳಿತಾತ್ಮಕ ವ್ಯಾಪ್ತಿಯಲ್ಲಿ ಬರುವ ಸಂಸ್ಥೆ / ಕಛೇರಿಗಳಿಗೆ ಕೇಂದ್ರ ಸರ್ಕಾರದ ಪತ್ರದಲ್ಲಿ ತಿಳಿಸಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತಾಗಿ ಮತ್ತು ಮೇಲ್ಕಂಡ ಅಧಿನಿಯಮ ಹಾಗೂ ನಿಯಮಗಳ ಉಲ್ಲಂಘನೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಕ್ತ ನಿರ್ದೇಶನ ನೀಡುವಂತೆ ಕೋರಿದೆ.

BIG NEWS: It is mandatory to display the national emblem with the motto `Satya Meva Jayate': Important order by the state government!
Share. Facebook Twitter LinkedIn WhatsApp Email

Related Posts

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜೊತೆಗೆ ಚರ್ಚೆ- HDK

07/02/2026 8:41 PM3 Mins Read

BIG NEWS : ನಾವು ಇನ್ನು 5000 ದ್ವೇಷ ಭಾಷಣಗಳನ್ನು ಮಾಡುತ್ತೇವೆ : ರಾಜ್ಯ ಸರ್ಕಾರದ ವಿರುದ್ಧ BL ಸಂತೋಷ್ ವಾಗ್ದಾಳಿ

07/02/2026 8:38 PM2 Mins Read

ಬೀದರ್ : ಶಿವರಾತ್ರಿಗೆ ಚಂದಾ ಕೊಡಲಿಲ್ಲವೆಂದು ಯುವಕನ ಕುತ್ತಿಗೆಗೆ ಚಾಕು ಇರಿತ!

07/02/2026 8:03 PM1 Min Read
Recent News

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜೊತೆಗೆ ಚರ್ಚೆ- HDK

07/02/2026 8:41 PM

BIG NEWS : ನಾವು ಇನ್ನು 5000 ದ್ವೇಷ ಭಾಷಣಗಳನ್ನು ಮಾಡುತ್ತೇವೆ : ರಾಜ್ಯ ಸರ್ಕಾರದ ವಿರುದ್ಧ BL ಸಂತೋಷ್ ವಾಗ್ದಾಳಿ

07/02/2026 8:38 PM

SHOCKING: ಮನೆಯಲ್ಲೇ ನನ್ನನ್ನು ಯಾರೂ ಕೇಳಲ್ಲ, ನೀವ್ಯಾರು ಕೇಳೋಕೆ?: ಶಿಕ್ಷಕಿಗೆ ಕಪಾಳಮೋಕ್ಷ ಮಾಡಿದ ವಿದ್ಯಾರ್ಥಿ

07/02/2026 8:27 PM

ಫರಿದಾಬಾದ್ ನಲ್ಲಿ ಸುನಾಮಿ ಸ್ವಿಂಗ್ ಕುಸಿದು ಬಿದ್ದು ಓರ್ವ ಪೊಲೀಸ್ ಇನ್ಸ್ ಪೆಕ್ಟರ್ ಸಾವು, ಹಲವರಿಗೆ ಗಾಯ

07/02/2026 8:12 PM
State News
KARNATAKA

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜೊತೆಗೆ ಚರ್ಚೆ- HDK

By kannadanewsnow0907/02/2026 8:41 PM KARNATAKA 3 Mins Read

ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ತರುವ ಬಗ್ಗೆ ಶೀಘ್ರದಲ್ಲಿಯೇ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರನ್ನು…

BIG NEWS : ನಾವು ಇನ್ನು 5000 ದ್ವೇಷ ಭಾಷಣಗಳನ್ನು ಮಾಡುತ್ತೇವೆ : ರಾಜ್ಯ ಸರ್ಕಾರದ ವಿರುದ್ಧ BL ಸಂತೋಷ್ ವಾಗ್ದಾಳಿ

07/02/2026 8:38 PM

ಬೀದರ್ : ಶಿವರಾತ್ರಿಗೆ ಚಂದಾ ಕೊಡಲಿಲ್ಲವೆಂದು ಯುವಕನ ಕುತ್ತಿಗೆಗೆ ಚಾಕು ಇರಿತ!

07/02/2026 8:03 PM

SHOCKING : ಕೋಲಾರದಲ್ಲಿ 5 ಲಕ್ಷಕ್ಕೆ 7 ದಿನದ ಗಂಡು ಮಗು ಮಾರಾಟ : ದಂಪತಿ ಸೇರಿ ಮೂವರು ಅರೆಸ್ಟ್!

07/02/2026 7:57 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.