Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಹಾತ್ಮ ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ !

23/02/2026 5:59 AM

BIG NEWS : ರಾಜ್ಯದಲ್ಲಿ ಪಂಚಾಯಿತಿ ಚುನಾವಣೆಗೆ ಮುಹೂರ್ತ ಫಿಕ್ಸ್ : CM ಸಿದ್ದರಾಮಯ್ಯ ಮಾಹಿತಿ

23/02/2026 5:43 AM

BIG NEWS : ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ `ಮೊಬೈಲ್’ ನಿಷೇಧ : ಕುಲಪತಿಗಳ ಸಭೆಯಲ್ಲಿ `CM’ ಪ್ರಸ್ತಾಪ

23/02/2026 5:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ‘SC, ST ಸರ್ಕಾರಿ ನೌಕರ’ರಿಗೆ ‘ಒಳ ಮೀಸಲಾತಿ’ ಕುರಿತು ಮಹತ್ವದ ಮಾಹಿತಿ
KARNATAKA

BIG NEWS : ರಾಜ್ಯದ ‘SC, ST ಸರ್ಕಾರಿ ನೌಕರ’ರಿಗೆ ‘ಒಳ ಮೀಸಲಾತಿ’ ಕುರಿತು ಮಹತ್ವದ ಮಾಹಿತಿ

By kannadanewsnow5719/03/2025 9:39 AM
vidhana soudha
vidhana soudha

ಬೆಂಗಳೂರು : ನ್ಯಾಯಮೂರ್ತಿಗಳಾದ ಹೆಚ್.ಎನ್ ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತಂತೆ ಪರಿಶಿಷ್ಟ ಜಾತಿಯ ನೌಕರರ ಮಾಹಿತಿಯನ್ನು ನೀಡುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.

ಮೇಲಿನ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಮತ್ತು ಸರಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು Empirical Data ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ (ಉಪ ವರ್ಗೀಕರಣ) ಬಗ್ಗೆ ಸೂಕ್ತ ಶಿಫಾರಸ್ಸಿನೊಂದಿಗೆ ಎರಡು ತಿಂಗಳ ಅವಧಿಯೊಳಗಾಗಿ ವರದಿ ಸಲ್ಲಿಸಲು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಹೆಚ್ ಎನ್ ನಾಗಮೋಹನ ದಾಸ್ ಇವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಲಾಗಿದ್ದು, ಸದರಿ ಆಯೋಗದಿಂದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತಂತೆ ಸರ್ಕಾರಕ್ಕೆ ಜರೂರಾಗಿ ವರದಿ ಸಲ್ಲಿಸಬೇಕಾಗಿರುವುದರಿಂದ ಸರ್ಕಾರದ ವಿವಿಧ ಇಲಾಖೆ/ನಿಗಮ/ಮಂಡಳಿ/ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ-ಬೋಧಕೇತರ ಪರಿಶಿಷ್ಟ ಜಾತಿಯ ಅಧಿಕಾರಿ/ನೌಕರರ ಉಪಜಾತಿಗಳ ಬಗ್ಗೆ ಮತ್ತು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಬಗ್ಗೆ ನಿಗಧಿತ ನಮೂನೆಗಳಲ್ಲಿ ಮಾಹಿತಿಯನ್ನು ಪಡೆಯಲು Format ನ್ನು ಸಿದ್ಧಪಡಿಸಿ Online ಮೂಲಕ ಸಲ್ಲಿಸಲು Web Portal ನ್ನು ಅಭಿವೃದ್ಧಿಗೊಳಿಸಲಾಗಿದ್ದು, ಇದನ್ನು ಸಮಾಜ ಕಲ್ಯಾಣ ಇಲಾಖೆಯ Website www.sw.kar.nic.in ನಲ್ಲಿ host ಮಾಡಲಾಗಿದ್ದು, ಈ ಮಾಹಿತಿಯನ್ನು ಸಂಗ್ರಹಿಸಿ web portal ನಲ್ಲಿ Update ಮಾಡಲು ಪ್ರತಿ ಇಲಾಖೆಯಲ್ಲಿ ತಾಂತ್ರಿಕ ಜ್ಞಾನವುಳ್ಳ ನುರಿತ ನೋಡಲ್ ಅಧಿಕಾರಿಯನ್ನು ನೇಮಿಸಿ ಸದರಿಯವರ ಹೆಸರು, ಹುದ್ದೆಯ ಪದನಾಮ, ಮೋಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸವನ್ನು 2-ಉಲ್ಲೇಖ[1]ರ ಪ್ರಕಾರ ಸೂಚಿಸಿರುತ್ತಾರೆ justicengmdasinquirycommission@gmail.com ಗೆ ಸಲ್ಲಿಸಲು ಸೂಚಿಸಿರುತ್ತಾರೆ.

ಆದಕಾರಣ ಶಾಲಾ ಶಿಕ್ಷಣ ಇಲಾಖೆಯ ಪರಿಶಿಷ್ಟ ಜಾತಿಯ ಗ್ರೂಪ್ ಎ, ಬಿ, ಸಿ ಮತ್ತು ಡಿ ವೃಂದವಾರು ನೌಕರರ ಉಪಜಾತಿಯ ಮಾಹಿತಿಯನ್ನು ಸಮಾಜ ಕಲ್ಯಾಣ ಇಲಾಖೆಯ Website www.sw.kar.nic.in ನಲ್ಲಿ ಅಭಿವೃದ್ಧಿಗೊಳಿಸಿರುವ web portal ನಲ್ಲಿ ನಮೂದಿಸಲು ಈ ಇಲಾಖೆಯಿಂದ ನೇಮಕಗೊಂಡ ನೋಡಲ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಉಲ್ಲೇಖ [2]ರಪಕಾರ ಕೋರಿರುತ್ತಾರೆ.

ಸದರಿ ಪತ್ರದ ಜೊತೆಗೆ ನಮೂನೆ-1 ಹಾಗೂ ಒಟ್ಟು 05 ಅನುಬಂಧಗಳಿದ್ದು, ನಮೂನೆ-1 ರಲ್ಲಿ ಪ್ರತಿಯೊಬ್ಬ ಪರಿಶಿಷ್ಟ ಜಾತಿಯ ಅಧಿಕಾರಿ/ಸಿಬ್ಬಂದಿಗಳಿಂದ ಪ್ರತ್ಯೇಕವಾಗಿ ಮಾಹಿತಿಯನ್ನು ಪಡೆದು ಕ್ರೋಢೀಕರಿಸಿ, ಅನುಬಂಧ 1ರಿಂದ 5 ರ ನಮೂನೆಗಳನ್ನು ಭರ್ತಿ ಮಾಡಿ ಇಲಾಖೆಯ ಒಟ್ಟಾಗಿ ವೃಂದವಾರು ಸಂಖ್ಯೆಯನ್ನು ಮಾತ್ರ web portal ನಲ್ಲಿ Update ಮಾಡಲು ಸೂಚಿಸಿರುತ್ತಾರೆ.

ಪ್ರಯುಕ್ತ ಉಲ್ಲೇಖಿತ ಪತ್ರ ಹಾಗೂ ನಮೂನೆ/ಅನುಬಂಧಗಳನ್ನು ಈ ಪತ್ರಕ್ಕೆ ಲಗತ್ತಿಸಿ ಕಳುಹಿಸುತ್ತಾ, ಉಲ್ಲೇಖಿತ ಪತ್ರಗಳಲ್ಲಿ ಸೂಚಿಸಿರುವಂತೆ, ತಮ್ಮ ಜಿಲ್ಲೆಯ ಎಲ್ಲ ವೃಂದಗಳ ಪರಿಶಿಷ್ಟ ಜಾತಿಯ ಅಧಿಕಾರಿ/ನೌಕರರ ಮಾಹಿತಿಯನ್ನು ಪಡೆದು ಅನುಬಂಧಗಳಲ್ಲಿ ಭರ್ತಿ ಮಾಡಿ ದೃಢೀಕರಿಸಿ ಸಲ್ಲಿಸಲು ಸೂಚಿಸಿದೆ. ಸದರಿ ಮಾಹಿತಿಯನ್ನು ತುರ್ತಾಗಿ ಸರಕಾರಕ್ಕೆ ಸಲ್ಲಿಸಬೇಕಾಗಿರುವುದರಿಂದ ಯಾವುದೇ ರೀತಿಯ ವಿಳಂಬ ನೀತಿ ಅನುಸರಿಸದೇ, ನೆನಪೋಲೆಗಳಿಗೆ ಅವಕಾಶ ನೀಡದೇ ಸದರಿ ಮಾಹಿತಿಯನ್ನು ತುರ್ತಾಗಿ ಈ ಕಛೇರಿಗೆ ಸಲ್ಲಿಸಲು ಸೂಚಿಸಿದೆ.

ಸದರಿ ಮಾಹಿತಿಯನ್ನು ನಿಖರವಾದ ಅಂಕಿ ಸಂಖ್ಯೆಗಳೊಂದಿಗೆ ಕಾಲಮಿತಿಯಲ್ಲಿ ಸಲ್ಲಿಸಬೇಕಾಗಿರುವುದರಿಂದ ಈ ಕುರಿತು ತಮ್ಮ ಜಿಲ್ಲಾ ಹಂತದಲ್ಲಿ ತಾಂತ್ರಿಕ ಜ್ಞಾನವುಳ್ಳ ನುರಿತ ನೋಡಲ್ ಅಧಿಕಾರಿಯನ್ನು ನೇಮಿಸಿ, ಅವರ ವಿವರಗಳನ್ನು ಕೂಡಲೇ ಮರುಟಪಾಲಿನಲ್ಲಿ ಈ ಕಛೇರಿಗೆ ಸಲ್ಲಿಸಲು ಸೂಚಿಸಿದೆ.

BIG NEWS: Important information about 'internal reservation' for 'SC ST government employees' in the state
Share. Facebook Twitter LinkedIn WhatsApp Email

Related Posts

ಮಹಾತ್ಮ ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ !

23/02/2026 5:59 AM1 Min Read

BIG NEWS : ರಾಜ್ಯದಲ್ಲಿ ಪಂಚಾಯಿತಿ ಚುನಾವಣೆಗೆ ಮುಹೂರ್ತ ಫಿಕ್ಸ್ : CM ಸಿದ್ದರಾಮಯ್ಯ ಮಾಹಿತಿ

23/02/2026 5:43 AM1 Min Read

BIG NEWS : ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ `ಮೊಬೈಲ್’ ನಿಷೇಧ : ಕುಲಪತಿಗಳ ಸಭೆಯಲ್ಲಿ `CM’ ಪ್ರಸ್ತಾಪ

23/02/2026 5:36 AM1 Min Read
Recent News

ಮಹಾತ್ಮ ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ !

23/02/2026 5:59 AM

BIG NEWS : ರಾಜ್ಯದಲ್ಲಿ ಪಂಚಾಯಿತಿ ಚುನಾವಣೆಗೆ ಮುಹೂರ್ತ ಫಿಕ್ಸ್ : CM ಸಿದ್ದರಾಮಯ್ಯ ಮಾಹಿತಿ

23/02/2026 5:43 AM

BIG NEWS : ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ `ಮೊಬೈಲ್’ ನಿಷೇಧ : ಕುಲಪತಿಗಳ ಸಭೆಯಲ್ಲಿ `CM’ ಪ್ರಸ್ತಾಪ

23/02/2026 5:36 AM

ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ : 10ನೇ ಗ್ಯಾರಂಟಿಯಾಗಿ ಎಲ್ಲರಿಗೂ ‘ಉಚಿತ ಆರೋಗ್ಯ ಸೇವೆ’ ಘೋಷಣೆ

23/02/2026 5:35 AM
State News
KARNATAKA

ಮಹಾತ್ಮ ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ !

By kannadanewsnow5723/02/2026 5:59 AM KARNATAKA 1 Min Read

ಯಾದಗಿರಿ : ಗಾಂಧೀಜಿ ನಮ್ಮ ಭಾರತದ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನದ ರಾಷ್ಟ್ರಪಿತ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…

BIG NEWS : ರಾಜ್ಯದಲ್ಲಿ ಪಂಚಾಯಿತಿ ಚುನಾವಣೆಗೆ ಮುಹೂರ್ತ ಫಿಕ್ಸ್ : CM ಸಿದ್ದರಾಮಯ್ಯ ಮಾಹಿತಿ

23/02/2026 5:43 AM

BIG NEWS : ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ `ಮೊಬೈಲ್’ ನಿಷೇಧ : ಕುಲಪತಿಗಳ ಸಭೆಯಲ್ಲಿ `CM’ ಪ್ರಸ್ತಾಪ

23/02/2026 5:36 AM

ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ : 10ನೇ ಗ್ಯಾರಂಟಿಯಾಗಿ ಎಲ್ಲರಿಗೂ ‘ಉಚಿತ ಆರೋಗ್ಯ ಸೇವೆ’ ಘೋಷಣೆ

23/02/2026 5:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.