Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಿನಲ್ಲಿ `ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಕೇಸ್’ : ಕಾಲಿಗೆ ಬಿದ್ದು ಕ್ಷಮೆ ಕೇಳಿದ ದಂಪತಿ |WATCH VIDEO

02/06/2025 8:44 AM

ಬ್ಯಾಂಕ್ ನೋಟುಗಳಿಂದ ‘ಶೇಖ್ ಮುಜಿಬುರ್ ರೆಹಮಾನ್’ ಭಾವಚಿತ್ರ ತೆಗೆದುಹಾಕಿದ ಬಾಂಗ್ಲಾದೇಶ

02/06/2025 8:37 AM

BREAKING : ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಲೀಕತ್ವದ ಬೆಂಗಳೂರಿನ ಪಬ್ ವಿರುದ್ಧ `FIR’ ದಾಖಲು

02/06/2025 8:34 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರಿ ನೌಕರರಿಗೆ `ಡಿಜಿಟಲ್ ವೇತನ ಬಿಲ್ಲು’ : ಸರ್ಕಾರದಿಂದ ಮಹತ್ವದ ಆದೇಶ.!
KARNATAKA

BIG NEWS : ರಾಜ್ಯ ಸರ್ಕಾರಿ ನೌಕರರಿಗೆ `ಡಿಜಿಟಲ್ ವೇತನ ಬಿಲ್ಲು’ : ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5701/06/2025 5:15 AM

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಹೆಚ್.ಆರ್.ಎಂ.ಎಸ್ ಮತ್ತು ಖಜಾನೆ-2 ರಲ್ಲಿ ಸೃಜಿಸಲಾದ ರಾಜ್ಯ ವಲಯದ ವೇತನ ಬಿಲ್ಲುಗಳನ್ನು ಭೌತಿಕ ಬಿಲ್ಲುಗಳ ಬದಲಿಗೆ ಆನ್ ಲೈನಲ್ಲಿ ಮಾತ್ರ ಅಂಗೀಕರಿಸುವ ಕುರಿತು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲೆ ಓದಲಾದ (1) ರ ಆದೇಶದಲ್ಲಿ ವೋಚರುಗಳ ಡಿಜಟಲೀಕರಣದ ಅಂಗವಚಾಗಿ ಹೆಚ್‌ಆರ್‌ಎಂಎಸ್ ಹಾಗೂ ಖಜಾನೆ-2 ರಲ್ಲಿ ವೇತನ ಬಿಲ್ಲು ಮತ್ತು ವೇತನಗಳಲ್ಲಿನ ಕಡಿತ, ವಸೂಲಾತಿಗಳ ಸಂಬಂಧ ಭೌತಿಕ ಷೆಡ್ಯೂಲ್ ಗಳ ಬದಲು ಆನ್ ಲೈನ್ ನಲ್ಲಿ ಅಂಗೀಕರಿಸಲು ದಿನಾಂಕ: 1.4.2022 ರಿಂದ ಜಾರಿಗೆ ಬರುವಂತೆ ಹೆಚ್ ಆರ್ ಎಂ ಎಸ್ ಹಾಗೂ ಖಜಾನೆ 2 ರಲ್ಲಿ ಸೃಜಿಸುವ ವೇತನಗಳಿಗೆ ಸಂಬಂಧಿಸಿದ ಬಿಲ್ಲುಗಳನ್ನು ಡಿಡಿಓರವರು ಡಿ.ಎಸ್. ಸಿ ಮೂಲಕ ದೃಢೀಕರಿಸಿ ಖಜಾನೆಗಳಿಗೆ ಆನ್ ಲೈನ್ ಮೂಲಕ ಸಲ್ಲಿಸಲು ಹಾಗೂ ಯಾವುದೇ ಕಡಿತ ಮತ್ತು ವಸೂಲಾತಿಗಳ ಷೆಡ್ಯೂಲ್ / ಚಲನ್ ಗಳನ್ನು ಭೌತಿಕವಾಗಿ ಮುದ್ರಿಸಿ ಸಲ್ಲಿಸದಿರಲು ಆದೇಶಿಸಲಾಗಿದೆ.

ಮೇಲೆ (3) ರಲ್ಲಿ ಓದಲಾದ ಆದೇಶದಲ್ಲಿ ಜಿಲ್ಲಾ ವಲಯದ ವೇತನ ಬಿಲ್ಲುಗಳನ್ನೂ ಸಹ ಭೌತಿಕವಾಗಿ ಸಲ್ಲಿಸದೆ ಡಿಜಿಟಲ್ ರೂಪದಲ್ಲಿ ಸಲ್ಲಿಸಲು ಆದೇಶಿಸಲಾಗಿದೆ.

ಮೇಲೆ (2) ರಲ್ಲಿ ಓದಲಾದ ಖಜಾನೆ ಆಯುಕ್ತರ ಪತ್ರದಲ್ಲಿ, ಮಹಾಲೇಖಪಾಲರಿಗೆ ವೋಚರುಗಳಿಗಾಗಿಯೇ ಮೀಸಲಾದ ಸರ್ವರ್(Dedicated Server) ಅನ್ನು ಒದಗಿಸಲಾಗಿದ್ದು, ವೇತನಕ್ಕೆ ಸಂಬಂಧಿಸಿದ ವೋಚರ್ ಗಳು ಸಂಪೂರ್ಣವಾಗಿ ಡಿಜಿಟೈಸ್ಟ್ ರೂಪದಲ್ಲಿ ಲಭ್ಯವಾಗುವುದಾಗಿ ಹಾಗೂ ಡಿಜಿಟೈಸ್ ವೇತನದ ಬಿಲ್ಲುಗಳು ಐಟಿ ಆಕ್ಸ್ 2000 ಮತ್ತು Evidence Act 1872 ರಲ್ಲಿ ಸೂಚಿಸಿರುವ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವುದರಿಂದ ಮಹಾಲೇಖಪಾಲರಿಗೆ ಈ ಸಂಬಂಧ Standard Operating Procedure ಅನ್ನು ಕಳುಹಿಸಿ ವೇತನ ಮತ್ತು ವೇತನ ಭತ್ಯೆಗಳಿಗೆ ಸಂಬಂಧಿಸಿದ ಬಿಲ್ಲುಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಲು ಕೋರಲಾಗಿರುವುದಾಗಿ ತಿಳಿಸುತ್ತಾ ಈ ಕುರಿತು ಎಲ್ಲಾ ಇಲಾಖೆಗಳಿಗೆ ಸೂಚನೆಗಳನ್ನು ನೀಡಲು ಕೋರಿರುತ್ತಾರೆ.

ಮೇಲೆ (4) ರಲ್ಲಿ ಓದಲಾದ ಪತ್ರದಲ್ಲಿ ಮಹಾಲೇಖಪಾಲರು ರಾಜ್ಯ ವಲಯಕ್ಕೆ ಸಂಬಂಧಿಸಿದ ವೇತನ ಬಿಲ್ಲುಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಲು Standard Operating Procedure ನಲ್ಲಿ ತಿಳಿಸಿರುವಂತೆ ನಡೆದುಕೊಳ್ಳುವ ಷರತ್ತಿಗೊಳಪಟ್ಟು ಸಹಮತಿಸಿರುತ್ತಾರೆ.

ಪ್ರಸ್ತಾವನೆಯನ್ನು ಪರಿಶೀಲಿಸಿ, ಅದರಂತೆ ಆದೇಶಿಸಿದೆ.

  1. ವೋಚರ್‌ಗಳ ಡಿಜಿಟಲೀಕರಣದ ಅಂಗವಾಗಿ ದಿನಾಂಕ: 1.6.2025 ರಿಂದ ಜಾರಿಗೆ ಬರುವಂತೆ ರಾಜ್ಯ ವಲಯದ ಎಲ್ಲಾ ಹಣ ಸೆಳೆಯುವ ಬಟವಾಡೆ ಅಧಿಕಾರಿಗಳು ಸರ್ಕಾರದ ಆದೇಶ ಸಂ. ಆಇ 1 ಟಿಟಿಸಿ 2022, ದಿ:23.3.2022 ರಲ್ಲಿನ ಸೂಚನೆಗಳಿಗೆ ಒಳಪಟ್ಟು ಹೆಚ್‌ಆರ್‌ಎಂಎಸ್ ಹಾಗೂ ಖಜಾನೆ-2ರಲ್ಲಿ ಸೃಜಿಸುವ ರಾಜ್ಯ ವಲಯದ ವೇತನ ಬಿಲ್ಲುಗಳು ಹಾಗೂ ಸಂಬಂಧಿಸಿದ ವೇತನಗಳಲ್ಲಿನ ಕಡಿತ. ವಸೂಲಾತಿಗಳ ಸಂಬಂಧ ಭೌತಿಕ ರೆಡ್ಯೂಲ್‌ಗಳ ಬದಲು ಅನ್‌ಲೈನ್‌ನಲ್ಲಿ ಸಲ್ಲಿಸಲು ಹಾಗೂ ಇದಕ್ಕೆ ಸಂಬಂಧಿಸಿದ ಬಿಲ್ಲುಗಳನ್ನು ಡಿಡಿಓಗಳು ಡಿಎಸ್‌ಸಿ ಮೂಲಕ ದೃಢೀಕರಿಸ ಖಜಾನೆಗಳಿಗೆ ಆನ್‌ಲೈನ್ ಮೂಲಕ ಸಲ್ಲಿಸುವಂತೆ ಹಾಗೂ ಭೌತಿಕವಾಗಿ ಸಲ್ಲಿಸಲು ಆದೇಶಿಸಲಾಗಿದೆ. ವೇತನ ಬಿಲ್ಲಿನಲ್ಲಿ ಸೆಳೆಯುವ ಇತರೆ ಭತ್ಯೆ ಬಿಲ್ಲುಗಳನ್ನು ಎಂದಿನಂತೆಯೇ ಭೌತಿಕವಾಗಿ ಸಲ್ಲಿಸುವುದು.
  1. ಖಜಾನಾಧಿಕಾರಿಗಳು ವೇತನ / ವೇತನೇತರ ಭತ್ಯೆಗಳಿಗೆ ಸಂಬಂಧಿಸಿದ ಬಿಲ್ಲುಗಳನ್ನು ಆನ್‌ಲೈನ್‌ನಲ್ಲಿ ಅಂಗೀಕರಿಸಿದ ನಂತರ ಕಡಿತ/ವಸೂಲಾತಿಗಳ soft ಪ್ರತಿ ಆಧಾರದ ಮೇಲೆ ಮೌಲ್ಯಾಂಶಗಳನ್ನು ವರಿಶೀಲಿಸಿ, ಖಜಾನಾಧಿಕಾರಿಗಳು ಪ್ರತಿಯೊಂದು ಕಡಿತ/ವಸೂಲಾತಿಗಳನ್ನು hyperlink ಮೂಲಕ ವರಿಶೀಲಿಸಿದ ನಂತರ ಪಾವತಿ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವುದು.
  1. ಮಂಜೂರಾತಿ ಆದೇಶ ಮತ್ತಿತರ ಹೆಚ್ಚುವರಿ ಲಗತ್ತುಗಳನ್ನು ಕಡ್ಡಾಯವಾಗಿ ಬಿಲ್ಲಿನೊಂದಿಗೆ ಸಲ್ಲಿಸಬೇಕಾಗಿದ್ದಲ್ಲಿ ಅಂತಹ ಬಿಲ್ಲುಗಳನ್ನು (ಉದಾಹರಣೆಗೆ, ಗೃಹ ಪರಿಚಾರಿಕೆ ಭತ್ಯೆ. ಪ್ರಭಾರ ಭತ್ಯೆ ಹೊನ ನೇಮಕಾತಿ ಪ್ರಕರಣಗಳಲ್ಲಿ ಹಾಗೂ ಹಿಂದಿನ ತಿಂಗಳುಗಳ ವೇತನ ಇತ್ಯಾದೆ) ಆನ್‌ಲೈನ್‌ನಲ್ಲಿ ಹಾಗೂ ಭೌತಿಕವಾಗಿ ಖಜಾನೆಗೆ ಸಲ್ಲಿಸುವುದು. HRMS 2.0 ವ್ಯವಸ್ಥೆ ಅನುಷ್ಠಾನವಾದ ನಂತರ ಇದನ್ನು ಮರುಪರಿಶೀಲಿಸಲಾಗುವುದು.
  1. ಈ ಸಂಬಂಧ ಕರ್ನಾಟಕ ಆರ್ಥಿಕ ಸಂಹಿತ ಮತ್ತು ಕರ್ನಾಟಕ ಖಜಾನೆ ಸಂಹಿತೆ ನಿಯಮಗಳಿಗೆ ಸೂಕ್ತ ತಿದ್ದುಪಡಿ ತರಲಾಗುವುದು.

BIG NEWS: `Digital salary bill' for state government employees: Important order from the government!
Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಿನಲ್ಲಿ `ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಕೇಸ್’ : ಕಾಲಿಗೆ ಬಿದ್ದು ಕ್ಷಮೆ ಕೇಳಿದ ದಂಪತಿ |WATCH VIDEO

02/06/2025 8:44 AM1 Min Read

BREAKING : ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಲೀಕತ್ವದ ಬೆಂಗಳೂರಿನ ಪಬ್ ವಿರುದ್ಧ `FIR’ ದಾಖಲು

02/06/2025 8:34 AM1 Min Read

BIG NEWS : ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ವರ್ಗಾವಣೆ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ.!

02/06/2025 8:22 AM2 Mins Read
Recent News

BREAKING : ಬೆಂಗಳೂರಿನಲ್ಲಿ `ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಕೇಸ್’ : ಕಾಲಿಗೆ ಬಿದ್ದು ಕ್ಷಮೆ ಕೇಳಿದ ದಂಪತಿ |WATCH VIDEO

02/06/2025 8:44 AM

ಬ್ಯಾಂಕ್ ನೋಟುಗಳಿಂದ ‘ಶೇಖ್ ಮುಜಿಬುರ್ ರೆಹಮಾನ್’ ಭಾವಚಿತ್ರ ತೆಗೆದುಹಾಕಿದ ಬಾಂಗ್ಲಾದೇಶ

02/06/2025 8:37 AM

BREAKING : ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಲೀಕತ್ವದ ಬೆಂಗಳೂರಿನ ಪಬ್ ವಿರುದ್ಧ `FIR’ ದಾಖಲು

02/06/2025 8:34 AM

`UPI’ ಬಳಕೆದಾರರೇ ಗಮನಿಸಿ : `PhonePe, Paytm ವಹಿವಾಟಿನ ನಿಯಮಗಳಲ್ಲಿ ಮಹತ್ವದ ಬದಲಾವಣೆ.!

02/06/2025 8:29 AM
State News
KARNATAKA

BREAKING : ಬೆಂಗಳೂರಿನಲ್ಲಿ `ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಕೇಸ್’ : ಕಾಲಿಗೆ ಬಿದ್ದು ಕ್ಷಮೆ ಕೇಳಿದ ದಂಪತಿ |WATCH VIDEO

By kannadanewsnow5702/06/2025 8:44 AM KARNATAKA 1 Min Read

ಬೆಂಗಳೂರು:  ಬೆಂಗಳೂರಿನಲ್ಲಿ ಸ್ಕೂಟಿಗೆ ಆಟೋ ಟಚ್ ಆಗಿದ್ದಕ್ಕೆ ಹೊರ ರಾಜ್ಯದ ಯುವತಿ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ…

BREAKING : ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಲೀಕತ್ವದ ಬೆಂಗಳೂರಿನ ಪಬ್ ವಿರುದ್ಧ `FIR’ ದಾಖಲು

02/06/2025 8:34 AM

BIG NEWS : ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ವರ್ಗಾವಣೆ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ.!

02/06/2025 8:22 AM

BIG NEWS : ಜ್ವರ, ಕೆಮ್ಮು, ನೆಗಡಿ ಇದ್ರೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ : ರಾಜ್ಯ ಸರ್ಕಾರದಿಂದ `ಕೋವಿಡ್ ಮಾರ್ಗಸೂಚಿ’ ಪ್ರಕಟ.!

02/06/2025 7:57 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.