ಬೆಂಗಳೂರು : ರಾಜ್ಯ ಸರ್ಕಾರವು ಕೋವಿಡ್-19 ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ತನಿಖೆ ನಡೆಸಲು ವಿಚಾರಣಾ ಆಯೋಗ ರಚನೆ ಮಾಡಿದ್ದು, ವಿಚಾರಣಾ ಆಯೋಗದ ವರದಿ ಇಂದು ಸಿಎಂ ಸಿದ್ದರಾಮಯ್ಯ ಕೈ ಸೇರಲಿದೆ.
ಸಿಎಂ ಸಿದ್ದರಾಂಯ್ಯ ವಿರುದ್ಧ ಮುಡಾ ಅಸ್ತ್ರ ಪ್ರಯೋಗ ಮಾಡಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರ ವಿರುದ್ಧ ರಾಜ್ಯ ಸರ್ಕಾರ ಕೋವಿಡ್ ಅಕ್ರಮದ ಕುರಿತು ತನಿಖಾಸ್ತ್ರ ಪ್ರಯೋಗಿಸಿದ್ದು, ನಿವೃತ್ತ ನ್ಯಾ. ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿದ್ದು, ಇಂದು ಆಯೋಗವು ಇಂದು ಕೋವಿಡ್ ತನಿಖಾ ವರದಿಯನ್ನು ಸಿಎಂ ಸಿದ್ದರಾಮಯ್ಯಗೆ ಸಲ್ಲಿಸಲಿದ್ದಾರೆ. ಈ ಮೂಲಕ ಮೈತ್ರಿ ನಾಯಕರಿಗೆ ರಾಜ್ಯ ಸರ್ಕಾರ ಶಾಕ್ ನೀಡಲು ಮುಂದಾಗಿದೆ.
ಕೋವಿಡ್-19ರ ವಿಚಾರಣಾ ಆಯುಕ್ತರು, ನ್ಯಾಯಮೂರ್ತಿ ಶ್ರೀ ಜಾನ್ ಮೈಕಲ್ ಕುನ್ನ, ನಿವೃತ್ತ ನ್ಯಾಯಾಧೀಶರು, ಘನವೆತ್ತ ಉಚ್ಚ ನ್ಯಾಯಾಲಯ, ಕರ್ನಾಟಕ ಇವರ ಪತ್ರ ಸಂಖ್ಯೆ: ಆ.ಇ/ಕೋವಿಡ್-19/ವಿಚಾರಣಾ ಆಯೋಗ/70/2023-24, ದಿನಾಂಕ: 10.04.2024ರ ಮನವಿಯಲ್ಲಿ, ಸದರಿ ವಿಚಾರಣಾ ಆಯೋಗದ ಅವಧಿಯು ದಿನಾಂಕ:24.05.2024ಕ್ಕೆ ಕೊನೆಗೊಳ್ಳಲಿರುವುದರಿಂದ, ದಿನಾಂಕ:25.05.2024 ರಿಂದ 31.08.2024 ರವರೆಗೆ ವಿಚಾರಣಾ ಆಯೋಗವನ್ನು ವಿಸ್ತರಿಸಲಾಗಿತ್ತು.