Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Watch Video: ಕೇರಳದಲ್ಲಿ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಆನೆ: ಮೈ ಜುಂ ಎನ್ನುವ ವೀಡಿಯೊ ವೈರಲ್

26/02/2026 5:57 PM

‘ಮೊಬೈಲ್ ಬಿಡಿ, ಪುಸ್ತಕ ಹಿಡಿಯಿರಿ’: ಸೋಷಿಯಲ್ ಮೀಡಿಯಾ ನಿಯಂತ್ರಣಕ್ಕೆ ಸಚಿವ ಮಧು ಬಂಗಾರಪ್ಪ ಚಿಂತನೆ

26/02/2026 5:47 PM

ಎಜಿಆರ್, ಆದಾಯದಲ್ಲಿ ಶೇ 43ರಷ್ಟು ಪಾಲಿನೊಂದಿಗೆ ಬಲವಾದ ಬೆಳವಣಿಗೆಯೊಂದಿಗೆ ಜಿಯೋ ಮುಂಚೂಣಿಯಲ್ಲಿ

26/02/2026 5:43 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : 2024 ನೇ ಸಾಲಿನ ಮುಖ್ಯಮಂತ್ರಿಗಳ ಪದಕ : ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಸರ್ಕಾರದಿಂದ ಮಹತ್ವದ ಸುತ್ತೋಲೆ.!
KARNATAKA

BIG NEWS : 2024 ನೇ ಸಾಲಿನ ಮುಖ್ಯಮಂತ್ರಿಗಳ ಪದಕ : ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಸರ್ಕಾರದಿಂದ ಮಹತ್ವದ ಸುತ್ತೋಲೆ.!

By kannadanewsnow5718/01/2025 1:38 PM
vidhana soudha
vidhana soudha

ಬೆಂಗಳೂರು : 2024ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಪದಕಕ್ಕೆ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ಶಿಫಾರಸ್ಸುಗಳನ್ನು ಸಲ್ಲಿಸುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಸುತ್ತೋಲೆ ಹೊರಡಿಸಲಾಗಿದೆ.

1. 2024 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಪದಕಕ್ಕೆ ತಮ್ಮ ಘಟಕದ ಅರ್ಹ ಪೊಲೀಸ್ ಅಧಿಕಾರಿ/ಸಿಬ್ಬಂದಿಯವರ ಶಿಫಾರಸ್ಸುಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ದ್ವಿಪ್ರತಿಯಲ್ಲಿ ಇದರೊಂದಿಗೆ ಲಗತ್ತಿಸಿರುವ ನಿಗದಿತ ನಮೂನೆಯಲ್ಲಿ Soft copy & Hard Copy ಸಿಡಿ/ ಪೆನ್‌ಡ್ರೈವ್‌ನಲ್ಲಿ ದಿನಾಂಕ:05-02-2025ರ ಒಳಗಾಗಿ ಈ ಕಛೇರಿಗೆ ತಲುಪುವಂತೆ ತಪ್ಪದೇ ಕಳುಹಿಸಿಕೊಡಲು ಕೋರಲಾಗಿದೆ.

2. ಈ ಸುತ್ತೋಲೆಯೊಂದಿಗೆ ಲಗತ್ತಿಸಲಾದ ನಮೂನೆಗಳಲ್ಲಿಯೇ ಶಿಫಾರಸ್ಸುಗಳನ್ನು ಕಳುಹಿಸಿಕೊಡುವುದು, ಹಿಂದಿನ ಅವಧಿಯಲ್ಲಿನ ಹಳೆಯ ನಮೂನೆಗಳನ್ನು ಉಪಯೋಗಿಸಬಾರದು.

3. ಈ ಸುತ್ತೋಲೆಯನ್ನು ಎಲ್ಲಾ ಉಪ-ವಿಭಾಗಗಳು ಮತ್ತು ಠಾಣೆಗಳಿಗೆ ಕಳುಹಿಸಿ, ಎಲ್ಲಾ ಅಧೀನಾಧಿಕಾರಿಗಳು ಮತ್ತು ಅಧೀನ ಸಿಬ್ಬಂದಿಗಳ ಗಮನಕ್ಕೆ ತರಲು ಪ್ರಚುರ ಪಡಿಸುವುದು.

4. ಘಟಕಾಧಿಕಾರಿಗಳು ಶಿಫಾರಸ್ಸುಗಳನ್ನು ಕಳುಹಿಸುವ ಮೊದಲು ಅಗತ್ಯ ತಪಾಸಣೆ ನಡೆಸಿ, ಎಲ್ಲಾ ಅರ್ಹತೆ ಹಾಗೂ ನಿಬಂಧನೆಗಳನ್ನು ಪೂರೈಸುವ ಅರ್ಹ ಅಧಿಕಾರಿ/ಸಿಬ್ಬಂದಿಗಳ ಶಿಫಾರಸ್ಸುಗಳನ್ನು ಮಾತ್ರ ಕಳುಹಿಸಬೇಕೆ ಹೊರತು ಸ್ವೀಕರಿಸಿದ ಎಲ್ಲಾ ಮನವಿಗಳನ್ನು ಕಳುಹಿಸತಕ್ಕದ್ದಲ್ಲ.

5. ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳ ಪದಕ ಪಡೆದ ಅಧಿಕಾರಿ / ಸಿಬ್ಬಂದಿಗಳ ಹೆಸರನ್ನು ಮತ್ತೊಮ್ಮೆ ಇದೇ ಪದಕಕ್ಕೆ ಶಿಫಾರಸ್ಸು ಮಾಡಬಾರದೆಂದು ತಿಳಿಸಲಾಗಿದೆ.

6. ಪದಕಕ್ಕೆ ಶಿಫಾರಸ್ಸು ಮಾಡುತ್ತಿರುವ ಯಾವುದೇ ಅಧಿಕಾರಿ / ಸಿಬ್ಬಂದಿಯವರ ವಿರುದ್ಧ ಯಾವುದೇ ಇಲಾಖಾ ವಿಚಾರಣೆ / ಚಾಲ್ತಿ ಶಿಕ್ಷೆ ಬಾಕಿ ಇದ್ದಲ್ಲಿ ಅಥವಾ ಕೈಗೊಳ್ಳಲು ಉದ್ದೇಶಿಸಿದ್ದಲ್ಲಿ ಹಾಗೂ ಆಮಾನತ್ತಿನ ಮೇಲೆ ಇದ್ದಲ್ಲಿ ಅಂತಹ ಅಧಿಕಾರಿ/ಸಿಬ್ಬಂದಿಗಳ ಶಿಫಾರಸ್ಸುಗಳನ್ನು ಕಳುಹಿಸಬಾರದೆಂದು ಸೂಚಿಸಿದೆ ಹಾಗೂ ಮುಂದೆ ಆದೇಶಿಸಬಹುದಾದ ವಿಚಾರಣೆಗಳಿದ್ದರೆ/ಯಾವುದಾದರೂ ನ್ಯಾಯಾಂಗ ವಿಚಾರಣೆ /ಕ್ರಿಮಿನಲ್ ಮೊಕದ್ದಮೆ /ಲೋಕಾಯುಕ್ತ/ಎಸಿಬಿ ಪ್ರಕರಣ ಇತ್ಯಾದಿ ಕುರಿತು ತಪ್ಪದೆ ಪರಿಶೀಲಿಸಿದ ನಂತರವೇ ಶಿಫಾರಸ್ಸುಗಳನ್ನು ಕಳುಹಿಸುವುದು.

7. ಪದಕಕ್ಕೆ ಶಿಫಾರಸ್ಸು ಮಾಡಲಾದ ಯಾವುದೇ ಅಧಿಕಾರಿ/ ಸಿಬ್ಬಂದಿಗಳ ವಿರುದ್ಧ ಪದಕಕ್ಕೆ ಆಯ್ಕೆಗೊಂಡ ಬಗ್ಗೆ ಅಂತಿಮ ಪಟ್ಟಿ ಘೋಷಣೆಯಾಗುವವರೆಗೆ ಯಾವುದಾದರೂ ಇಲಾಖಾ ಶಿಸ್ತು ಕ್ರಮ / ಅಮಾನತ್ತು / ಪ್ರತಿಕೂಲ ವರದಿ ಇತ್ಯಾದಿ ಕಂಡುಬಂದಲ್ಲಿ ಕೂಡಲೇ ಈ ಕಛೇರಿಗೆ ಮಾಹಿತಿ ಕಳುಹಿಸಿಕೊಡುವುದು,

8. ಗುಣಕಥನವು ಈ ಕೆಳಕಂಡ ಮಾನದಂಡಗಳನ್ನು ಮಾತ್ರ ಹೊಂದಿದ್ದು, 2 ಪುಟಗಳಿಗೆ ಮೀರದಂತೆ ಸಂಕ್ಷಿಪ್ತವಾಗಿರತಕ್ಕದ್ದು.

1. ಅಸಾಧಾರಣ ಕಾರ್ಯ ಕುಶಲತೆ.

2. ಸ್ಪಷ್ಟವಾಗಿ ಎದ್ದು ಕಾಣುವ ಕರ್ತವ್ಯ ನಿಷ್ಠೆ,

3. ಯಾವುದೇ ಗಂಭೀರವಾದ ಅಥವಾ ವ್ಯಾಪಕವಾಗಿ ಹಬ್ಬಿದ ಅಪರಾಧದ ಅಥವಾ ಸಾರ್ವಜನಿಕ ವ್ಯವಸ್ಥೆಯ ನಿರ್ವಹಣೆಯಲ್ಲಿ ತೋರಿದ ಆಸಾಮಾನ್ಯ ಸೇವೆ.

4. ಜಟಿಲ ಪ್ರಕರಣಗಳಲ್ಲಿ ತೋರಿದ ಅಸಾಧಾರಣಾ ತನಿಖಾ ಕೌಶಲ್ಯ.

5. ಉನ್ನತ ಮಟ್ಟದ ಬಂದೋಬಸ್ತ್ ವ್ಯವಸ್ಥೆಯ ಸಂಘಟನೆ.

6. ರಾಜ್ಯ/ರಾಷ್ಟ್ರ/ಅಂತರ್‌ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ತೋರಿದ ಅತ್ಯುತ್ತಮವಾದ ಪ್ರತಿಭೆ.

7. ಎದ್ದು ಕಾಣುವ ಧೈರ್ಯ ಮತ್ತು ಸಾಹಸವನ್ನು ಮೆರೆದ ಇತರೆ ಯಾವುದೇ ಕಾರ್ಯ,

ಮೇಲ್ಕಂಡ ಮಾನದಂಡಗಳ ಅಂಶಗಳ ಬಗ್ಗೆ 2024ನೇ ಸಾಲಿಗೆ ಆ ಒಂದು ವರ್ಷದ ಅವಧಿಯಲ್ಲಿ ತೋರಿದ ಅಸಾಧಾರಣ ಕಾರ್ಯ ನಿರ್ವಹಣೆ ಮಾತ್ರ ಪದಕ ಪ್ರದಾನಕ್ಕೆ ಪರಿಗಣಿಸಲಾಗುವುದು.

ಮಾನ್ಯ ಮುಖ್ಯಮಂತ್ರಿಗಳ ಪದಕಗಳಿಗೆ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ನಾನ್-ಐಪಿಎಸ್) ಮತ್ತು ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ವಲಯ/ವಿಭಾಗದ ಮಟ್ಟದಲ್ಲಿ ಆಯ್ಕೆ ಮಾಡುವ ಸಲುವಾಗಿ ಈ ಕೆಳಗಿನ ವಲಯ/ವಿಭಾಗ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಗಳು ತಮ್ಮ ವಿಭಾಗದಲ್ಲಿರುವ ಅರ್ಹ ಅಧಿಕಾರಿ ಮತ್ತು ಸಿಬ್ಬಂದಿಯವರ ಪಟ್ಟಿಯನ್ನು ಸಿದ್ಧಪಡಿಸಿ, ಪ್ರಧಾನ ಕಚೇರಿಗೆ ಕಳುಹಿಸತಕ್ಕದ್ದು.

BIG NEWS : 2024 ನೇ ಸಾಲಿನ ಮುಖ್ಯಮಂತ್ರಿಗಳ ಪದಕ : ಪೊಲೀಸ್ ಅಧಿಕಾರಿ BIG NEWS: CHIEF MINISTER'S MEDAL FOR THE YEAR 2024: Govt issues circular to police officers staff ಸಿಬ್ಬಂದಿಗಳಿಗೆ ಸರ್ಕಾರದಿಂದ ಮಹತ್ವದ ಸುತ್ತೋಲೆ.!
Share. Facebook Twitter LinkedIn WhatsApp Email

Related Posts

‘ಮೊಬೈಲ್ ಬಿಡಿ, ಪುಸ್ತಕ ಹಿಡಿಯಿರಿ’: ಸೋಷಿಯಲ್ ಮೀಡಿಯಾ ನಿಯಂತ್ರಣಕ್ಕೆ ಸಚಿವ ಮಧು ಬಂಗಾರಪ್ಪ ಚಿಂತನೆ

26/02/2026 5:47 PM1 Min Read

ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಕೇಸ್ ಗೆ ಬಿಗ್ ಟ್ವಿಸ್ಟ್: ಉಲ್ಟಾ ಹೊಡೆದ ಬಾಲಕಿಯ ಪೋಷಕರು

26/02/2026 5:22 PM1 Min Read

ದೆಹಲಿಯಲ್ಲಿ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ಮಂಜುನಾಥ್ ಗೌಡ ನೇತೃತ್ವದಲ್ಲಿ ರಾಜ್ಯದ ಕಾರ್ಯಕರ್ತರು ಭಾಗಿ

26/02/2026 5:09 PM1 Min Read
Recent News

Watch Video: ಕೇರಳದಲ್ಲಿ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಆನೆ: ಮೈ ಜುಂ ಎನ್ನುವ ವೀಡಿಯೊ ವೈರಲ್

26/02/2026 5:57 PM

‘ಮೊಬೈಲ್ ಬಿಡಿ, ಪುಸ್ತಕ ಹಿಡಿಯಿರಿ’: ಸೋಷಿಯಲ್ ಮೀಡಿಯಾ ನಿಯಂತ್ರಣಕ್ಕೆ ಸಚಿವ ಮಧು ಬಂಗಾರಪ್ಪ ಚಿಂತನೆ

26/02/2026 5:47 PM

ಎಜಿಆರ್, ಆದಾಯದಲ್ಲಿ ಶೇ 43ರಷ್ಟು ಪಾಲಿನೊಂದಿಗೆ ಬಲವಾದ ಬೆಳವಣಿಗೆಯೊಂದಿಗೆ ಜಿಯೋ ಮುಂಚೂಣಿಯಲ್ಲಿ

26/02/2026 5:43 PM

ಅಡುಗೆ ಮನೆಯ ‘ಶುಂಠಿ’ ಕೇವಲ ಸಾಂಬಾರ ಪದಾರ್ಥವಲ್ಲ, ಇದು ಸರ್ವರೋಗ ನಿವಾರಕ! | Ginger Health Benefits

26/02/2026 5:35 PM
State News
KARNATAKA

‘ಮೊಬೈಲ್ ಬಿಡಿ, ಪುಸ್ತಕ ಹಿಡಿಯಿರಿ’: ಸೋಷಿಯಲ್ ಮೀಡಿಯಾ ನಿಯಂತ್ರಣಕ್ಕೆ ಸಚಿವ ಮಧು ಬಂಗಾರಪ್ಪ ಚಿಂತನೆ

By kannadanewsnow0926/02/2026 5:47 PM KARNATAKA 1 Min Read

ಬೆಂಗಳೂರು: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು (Social Media) ನಿಷೇಧಿಸುವ ಕುರಿತು ರಾಜ್ಯ ಸರ್ಕಾರ ಆಲೋಚಿಸುತ್ತಿದ್ದು, ಈ ನಿಟ್ಟಿನಲ್ಲಿ…

ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಕೇಸ್ ಗೆ ಬಿಗ್ ಟ್ವಿಸ್ಟ್: ಉಲ್ಟಾ ಹೊಡೆದ ಬಾಲಕಿಯ ಪೋಷಕರು

26/02/2026 5:22 PM

ದೆಹಲಿಯಲ್ಲಿ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ಮಂಜುನಾಥ್ ಗೌಡ ನೇತೃತ್ವದಲ್ಲಿ ರಾಜ್ಯದ ಕಾರ್ಯಕರ್ತರು ಭಾಗಿ

26/02/2026 5:09 PM

ರಾಜಧಾನಿಯ ಮಾಲಿನ್ಯ ನಿಯಂತ್ರಣಕ್ಕೆ ನಿರ್ದಿಷ್ಟ ಮಾನದಂಡ: ಶಾಸಕರೊಂದಿಗೆ ಸಭೆ ನಡೆಸಿದ ಸಚಿವ ಈಶ್ವರ್ ಖಂಡ್ರೆ

26/02/2026 5:03 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.