Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ತುಮಕೂರಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಬೇಕರಿಗೆ ನುಗ್ಗಿದ ಲಾರಿ : ಇಬ್ಬರು ಸಾವು, ಮೂವರಿಗೆ ಗಾಯ

22/07/2025 1:00 PM

Jagdeep Dhankhar Steps Down| ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜೀನಾಮೆ : ಪ್ರಧಾನಿ ಮೋದಿ ಹೇಳಿದ್ದೇನು ?

22/07/2025 12:56 PM

BREAKING : ಕೇರಳದ ನರ್ಸ್ `ನಿಮಿಷಾ ಪ್ರಿಯಾ’ ಗಲ್ಲು ಶಿಕ್ಷೆ ರದ್ದು, ಬಿಡುಗಡೆಗೆ ಯೆಮನ್ ಸಿದ್ಧ: ಕೆ.ಎ.ಪಾಲ್ | Nimisha Priya case

22/07/2025 12:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕನ್ನಡದಲ್ಲೇ ‘ಔಷಧಿ ಚೀಟಿ’ : ಆರೋಗ್ಯ ಸಚಿವರಿಗೆ ಬಿಳಿಮಲೆ ಪತ್ರ!
KARNATAKA

BIG NEWS : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕನ್ನಡದಲ್ಲೇ ‘ಔಷಧಿ ಚೀಟಿ’ : ಆರೋಗ್ಯ ಸಚಿವರಿಗೆ ಬಿಳಿಮಲೆ ಪತ್ರ!

By kannadanewsnow5710/09/2024 7:29 AM

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಯ ವೈದ್ಯರು ಕನ್ನಡದಲ್ಲೇ ರೋಗಿಗಳಿಗೆ ಔಷಧಿ ಚೀಟಿಯನ್ನು ಬರೆಯುವಂತೆ ಆದೇಶಿಸಿ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿರುವಂತ ಅವರು, ಆಧುನಿಕ ಕಾಲಘಟ್ಟದಲ್ಲಿ ಭಾಷಾಭಿಮಾನ ಎನ್ನುವುದು ನೇಪಥ್ಯಕ್ಕೆ ಸರಿಯುತ್ತಿರುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಠಿಯಿಂದ ಆರೋಗ್ಯಕರ ಬೆಳವಣಿಗೆ ಆಗಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಸಾಂಸ್ಥಿಕ ಪ್ರಯತ್ನಗಳು ಮಾತ್ರ ನಿರೀಕ್ಷಿತ ಪರಿಣಾಮವನ್ನು ದೊರಕಿಸಿ ಕೊಡುವುದಲ್ಲದೇ ರಾಜ್ಯಭಾಷೆಯ ಉಳಿವಿಗೆ ಮಹತ್ವದ ಕೊಡುಗೆಯನ್ನು ನೀಡುತ್ತವೆ. ಇತ್ತೀಚಿಗೆ ನಾನು ರಾಯಚೂರಿಗೆ ಕಾರ್ಯನಿಮಿತ್ತ ತೆರಳದ ಸಂದರ್ಭದಲ್ಲಿ ಜಿಲ್ಲೆಯ ವೈದ್ಯರು ತಮ್ಮ ಔಷಧಿ ಚೀಟಿಗಳನ್ನು ಕನ್ನಡದಲ್ಲಿ ಬರೆಯಬೇಕೆಂದು ಪ್ರೇರೇಪಿಸಿ ಅಲ್ಲಿನ ಜಿಲ್ಲಾಧಿಕಾರಿಯವರಿಗೆ ಈ ಕುರಿತಂತೆ ಅಗತ್ಯ ಸೂಚನೆಗಳನ್ನು ಹೊರಡಿಸಲು ನಿರ್ದೇಶನವನ್ನು ನೀಡಿದ್ದೆ ಎಂದಿದ್ದಾರೆ.

ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಗಮನಿಸಿ ನೂರಾರು ವೈದ್ಯರು ಸ್ವಯಂಪ್ರೇರಿತರಾಗಿ ತಾವು ಕನ್ನಡ ಭಾಷೆಯನ್ನು ಉಳಿಸಲು ಔಷಧಿ ಚೀಟಿಗಳನ್ನು ಕನ್ನಡದಲ್ಲಿ ಬರೆಯುವ ಕೆಲಸವನ್ನು ಆರಂಭಿಸುತ್ತೇವೆ ಎಂದು ತಮ್ಮ ಭಾಷಾಭಿಮಾನವನ್ನು ನನ್ನಲ್ಲಿ ವ್ಯಕ್ತಪಡಿಸಿದ್ದಾರೆ. ಹಲವಾರು ಜನ ತಾವು ಕನ್ನಡದಲ್ಲಿ ಬರೆದ ಔಷಧಿ ಚೀಟಿಗಳನ್ನು ನನ್ನಲ್ಲಿ ಹಂಚಿಕೊಂಡಿದ್ದಾರೆ. ಇದು ಪ್ರಾಧಿಕಾರದ ಅಧ್ಯಕ್ಷನಾಗಿ ನನಗೆ ರೋಮಾಂಚನಗೊಳುಸುವ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಈ ಪರಿಣಾಮಕಾರಿಯಾದ ಮಾನಸಿಕತೆಯ ಮೂಲಕ ಕನ್ನಡ ಭಾಷೆಗೆ ಒಂದು ಮಹತ್ವದ ಹಾದಿ ಇದೀಗ ತೆರೆದುಕೊಂಡಿದೆ ಎಂಬ ಅಭಿಪ್ರಾಯ ನನ್ನದಾಗಿದ್ದು, ಇದು ಸರ್ವವ್ಯಾಪಿಯಾಗಬೇಕಾದ ಅನಿವಾರ್ಯತೆ ಇರುತ್ತದೆ. ರಾಜ್ಯದ ಮೂಲೆಮೂಲೆಯಲ್ಲಿರುವ ಆರೋಗ್ಯ ಕೇಂದ್ರಗಳು ಸೇರಿದಂತೆ ತಾಲೂಕು, ಜಿಲ್ಲಾಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ವೈದ್ಯರುಗಳು ತಾವು ಬರೆಯುವ ಔಷಧ ಚೀಟಿಯಲ್ಲಿ ಕನ್ನಡದ ಬಳಕೆಗೆ ಪ್ರಾಧಾನ್ಯತೆಯನ್ನು ನೀಡಿದಲ್ಲಿ ಕನ್ನಡ ಅಸ್ಮಿತೆಯನ್ನು ಉಳಿಸುವ ಮಹತ್ವದ ಹೆಜ್ಜೆಯಾಗುತ್ತದೆ ಎಂದಿದ್ದಾರೆ.

ಇದು ಕಡ್ಡಾಯವಾಗದೆ ಹೋದಲ್ಲಿ ಇದರ ಅನುಷ್ಠಾನವೂ ನಿರೀಕ್ಷಿತ ಪ್ರಗತಿಯನ್ನು ಹೊಂದುವುದು ಸಾಧ್ಯವಿರುವುದಿಲ್ಲ. ಇಲ್ಲಿ ರಾಜ್ಯ ಸರ್ಕಾರದ ದೃಢ ನಿಲುವು ತನ್ನದೆ ಪರಿಣಾಮವನ್ನು ಹೊಂದುವ ಕಾರಣ ತಾವು ಈ ನಿಟ್ಟಿನಲ್ಲಿ ವೈಯಕ್ತಿಕ ಗಮನ ಹರಿಸಿ ರಾಜ್ಯದ ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರುಗಳು` ಕಡ್ಡಾಯವಾಗಿ ತಮ್ಮ ಔಷಧಿ ಚೀಟಿಗಳನ್ನು ಕನ್ನಡದಲ್ಲಿ ಬರೆಯಲು ಸರ್ಕಾರದ ಆದೇಶವನ್ನು ಜಾರಿ ಮಾಡಬೇಕಾಗಿ ಈ ಮೂಲಕ ಕೋರುತ್ತೇನೆ. ಕನ್ನಡಪ್ರಿಯ ವೈದ್ಯರುಗಳನ್ನು, ಅವರ ಭಾಷಾ ಪರವಾದ ಕ್ರಿಯಾಶೀಲ ಚಟುವಟಿಕೆಗಳನ್ನು ಗುರುತಿಸಿ ಪ್ರತಿವರ್ಷ ವೈದ್ಯರ ದಿನದಂದು ಅವರುಗಳನ್ನು ತಾಲೂಕು/ಜಿಲ್ಲೆ/ರಾಜ್ಯ ಹಂತದಲ್ಲಿ ಅಭಿನಂದಿಸುವ ಕೆಲಸವಾದರೆ ಮತ್ತಷ್ಟು ಉತ್ತಮ ಎಂಬ ಅಂಶವನ್ನು ಸಹ ನಿಮ್ಮಲ್ಲಿ ಹಂಚಿಕೊಳ್ಳ ಬಯಸುತ್ತೇನೆ ಎಂದು ಹೇಳಇದ್ದಾರೆ.

ಅದೇ ರೀತಿ ಖಾಸಗಿ ಆಸ್ಪತ್ರೆಗಳ ಕನ್ನಡಪ್ರಿಯ ವೈದ್ಯರಲ್ಲಿಯೂ, ಆಸ್ಪತ್ರೆಗಳ ಮುಖ್ಯಸ್ಥರಲ್ಲಿಯೂ ಕನ್ನಡ ಬಳಕೆಗೆ ರಾಜ್ಯ ಸರ್ಕಾರವು ಪ್ರೋತ್ಸಾಹದಾಯಕ ವಾತಾವರಣವನ್ನು ಒದಗಿಸುತ್ತದೆ ಎಂಬ ಭರವಸೆಯನ್ನು ಸಹ ನೀವು ಸಾರ್ವಜನಿಕವಾಗಿ ನೀಡಿದಲ್ಲಿ ಕನ್ನಡದ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿಯೂ ತಮ್ಮ ಆದ್ಯ ಗಮನವನ್ನು ಹರಿಸಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರಿದ್ದಾರೆ.

ಅಂದಹಾಗೇ ಇಂದು ಬೆಳಿಗ್ಗೆಯಷ್ಟೇ ನಿಮ್ಮ ಕನ್ನಡ ನ್ಯೂಸ್ ನೌ ಕನ್ನಡದಲ್ಲೇ ಔಷಧಿ ಚೀಟಿ ಬರೆದು ಮಾದರಿಯಾದ ವೈದ್ಯರು! ಎಂಬುದಾಗಿ ಸುದ್ದಿಯನ್ನು ಪ್ರಕಟಿಸಿತ್ತು. ಈ ಸುದ್ದಿಯ ಬೆನ್ನಲ್ಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದಂತ ಪುರುಷೋತ್ತಮ ಬಿಳಿಮಲೆ ಅವರು ಸರ್ಕಾರಿ ವೈದ್ಯರು ಆಸ್ಪತ್ರೆಯಲ್ಲಿ ಔಷಧಿ ಚೀಟಿಯನ್ನು ಕನ್ನಡದಲ್ಲೇ ಬರೆಯಲು ಆದೇಶಿಸುವಂತೆ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ಬೆಂಗಳೂರು ಕನ್ನಡಿಗರಿಗೆ ಸೇರಿದ್ದು: ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದ ಪೋಸ್ಟ್, ಟಾಕ್ ವಾರ್ | Bengaluru belongs to Kannadigas

BIG NEWS : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕನ್ನಡದಲ್ಲೇ 'ಔಷಧಿ ಚೀಟಿ' : ಆರೋಗ್ಯ ಸಚಿವರಿಗೆ ಬಿಳಿಮಲೆ ಪತ್ರ! BIG NEWS: Bilimale writes to Health Minister says 'prescriptions' in Kannada in state government hospitals
Share. Facebook Twitter LinkedIn WhatsApp Email

Related Posts

BREAKING : ತುಮಕೂರಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಬೇಕರಿಗೆ ನುಗ್ಗಿದ ಲಾರಿ : ಇಬ್ಬರು ಸಾವು, ಮೂವರಿಗೆ ಗಾಯ

22/07/2025 1:00 PM1 Min Read

ರಾಜ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ನಿರಂತರ ಅನುದಾನ ನೀಡಲು CM ಸಮ್ಮತಿ : ಬಸವರಾಜ ರಾಯರೆಡ್ಡಿ

22/07/2025 12:40 PM2 Mins Read

BREAKING : ಬಾಗಲಕೋಟೆಯಲ್ಲಿ ಬೆಚ್ಚಿ ಬೀಳಿಸೋ ಘಟನೆ : 3 ವರ್ಷದ ಮಗುವಿನ ಕತ್ತು ಕೊಯ್ದು ಬರ್ಬರ ಹತ್ಯೆ!

22/07/2025 12:37 PM1 Min Read
Recent News

BREAKING : ತುಮಕೂರಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಬೇಕರಿಗೆ ನುಗ್ಗಿದ ಲಾರಿ : ಇಬ್ಬರು ಸಾವು, ಮೂವರಿಗೆ ಗಾಯ

22/07/2025 1:00 PM

Jagdeep Dhankhar Steps Down| ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜೀನಾಮೆ : ಪ್ರಧಾನಿ ಮೋದಿ ಹೇಳಿದ್ದೇನು ?

22/07/2025 12:56 PM

BREAKING : ಕೇರಳದ ನರ್ಸ್ `ನಿಮಿಷಾ ಪ್ರಿಯಾ’ ಗಲ್ಲು ಶಿಕ್ಷೆ ರದ್ದು, ಬಿಡುಗಡೆಗೆ ಯೆಮನ್ ಸಿದ್ಧ: ಕೆ.ಎ.ಪಾಲ್ | Nimisha Priya case

22/07/2025 12:48 PM

ರಾಜ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ನಿರಂತರ ಅನುದಾನ ನೀಡಲು CM ಸಮ್ಮತಿ : ಬಸವರಾಜ ರಾಯರೆಡ್ಡಿ

22/07/2025 12:40 PM
State News
KARNATAKA

BREAKING : ತುಮಕೂರಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಬೇಕರಿಗೆ ನುಗ್ಗಿದ ಲಾರಿ : ಇಬ್ಬರು ಸಾವು, ಮೂವರಿಗೆ ಗಾಯ

By kannadanewsnow0522/07/2025 1:00 PM KARNATAKA 1 Min Read

ತುಮಕೂರು : ತುಮಕೂರಿನಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಬ್ಯಾಂಗಲ್ಸ್ ಸ್ಟೋರ್ ಗೆ ಹಾಗು ಬೇಕರಿಗೆ…

ರಾಜ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ನಿರಂತರ ಅನುದಾನ ನೀಡಲು CM ಸಮ್ಮತಿ : ಬಸವರಾಜ ರಾಯರೆಡ್ಡಿ

22/07/2025 12:40 PM

BREAKING : ಬಾಗಲಕೋಟೆಯಲ್ಲಿ ಬೆಚ್ಚಿ ಬೀಳಿಸೋ ಘಟನೆ : 3 ವರ್ಷದ ಮಗುವಿನ ಕತ್ತು ಕೊಯ್ದು ಬರ್ಬರ ಹತ್ಯೆ!

22/07/2025 12:37 PM

ಕೋಲಾರ : ದೆವ್ವ ಇದೆ ಎಂದು ತಮಾಷೆ ಮಾಡಿದಕ್ಕೆ, ವಿದ್ಯಾರ್ಥಿಗೆ ಮೈ ಮೇಲೆ ಬಾಸುಂಡೆ ಬರುವ ಹಾಗೆ ಹೊಡೆದ ವಾರ್ಡನ್

22/07/2025 12:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.