Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘ಕೊರೊನ’ ಮಧ್ಯ ರಾಜ್ಯಕ್ಕೆ ಮತ್ತೊಂದು ವೈರಸ್ ಎಂಟ್ರಿ : ಬಾಗಲಕೋಟೆಯಲ್ಲಿ ‘ಆಫ್ರಿಕನ್​ ಹಂದಿ’ ಜ್ವರ ಪತ್ತೆ

01/06/2025 2:14 PM

ಭಾರೀ ಮಳೆ : ಕೊಚ್ಚಿಹೋದ ಅಸ್ಸಾಂ ಮತ್ತು ಮೇಘಾಲಯ ಸಂಪರ್ಕಿಸುವ ಪ್ರಮುಖ ರಸ್ತೆ | Heavy rain

01/06/2025 1:44 PM

ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ 2 ಲಕ್ಷ ರೂ. ಸಬ್ಸಿಡಿ ಸಾಲ.!

01/06/2025 1:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಗ್ರಾಹಕರ ಅನುಮತಿ ಇಲ್ಲದೆ ಖಾತೆಯಲ್ಲಿನ ಹಣ ಕಡಿತವಾದ್ರೆ ಬ್ಯಾಂಕುಗಳೇ ಹೊಣೆ : ಗ್ರಾಹಕರ ಆಯೋಗ ಮಹತ್ವದ ಆದೇಶ.!
KARNATAKA

BIG NEWS : ಗ್ರಾಹಕರ ಅನುಮತಿ ಇಲ್ಲದೆ ಖಾತೆಯಲ್ಲಿನ ಹಣ ಕಡಿತವಾದ್ರೆ ಬ್ಯಾಂಕುಗಳೇ ಹೊಣೆ : ಗ್ರಾಹಕರ ಆಯೋಗ ಮಹತ್ವದ ಆದೇಶ.!

By kannadanewsnow5730/01/2025 5:34 AM

ಕೊಪ್ಪಳ : ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಗ್ರಾಹಕರ ಅನುಮತಿ ಇಲ್ಲದೆ ಖಾತೆಯಲ್ಲಿನ ಹಣ ಕಡಿತವಾದ್ರೆ ಬ್ಯಾಂಕುಗಳೇ ಹೊಣೆ ಎಂದು ಗ್ರಾಹಕರ ಆಯೋಗ ಮಹತ್ವದ ಆದೇಶ ಹೊರಡಿಸಿದೆ.

ಹೌದು, ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣ ಕಡಿತಗೊಂಡಿರುವ ಪ್ರಕರಣದಡಿ ದೂರುದಾರರಿಗೆ ಪರಿಹಾರ ನೀಡುವಂತೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ಪ್ರಕಟಿಸಿದೆ.

ಗ್ರಾಹಕ ಫಿರ್ಯಾದು ಸಂಖ್ಯೆ: 56/2024 ರಲ್ಲಿನ ಅಂತಿಮ ತೀರ್ಪಿನ ಸಾರಾಂಶದನ್ವಯ ಫಿರ್ಯಾದುದಾರರಾದ ವೀರಣ್ಣ ತಂದೆ ನಾಗಪ್ಪ ಮಟ್ಟಿ, ಉದ್ಯೋಗ: ಶಿಕ್ಷಕರು, ಅಳವಂಡಿ ಗ್ರಾಮ ತಾಲ್ಲೂಕ ಮತ್ತು ಜಿಲ್ಲೆ ಕೊಪ್ಪಳ, ಇವರು ಎದುರುದಾರರಾದ ಕೆನರಾ ಬ್ಯಾಂಕ್ ಬೆಟಗೇರಿ ಬ್ರಾಂಚ್ ಕೊಪ್ಪಳ ಜಿಲ್ಲೆ, ಇವರಲ್ಲಿ ಎಸ್.ಬಿ ಖಾತೆ ಹೊಂದಿದ್ದು ಎದುರುದಾರರ ಬ್ಯಾಂಕಿನ ಗ್ರಾಹಕರಾಗಿರುತ್ತಾರೆ. ತಮ್ಮ ಖಾತೆಯಿಂದ ರೂ. 50,000 ರಂತೆ ಎರಡು ಬಾರಿ ಒಟ್ಟು ರೂ. 1,00,000 ಗಳನ್ನು ಯಾವುದೇ ತರಹದ ಮಾಹಿತಿ ಇಲ್ಲದೆ ತನ್ನ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡಿದ್ದು, ದೂರುದಾರರ ಮೊಬೈಲಗೆ ಹಣ ಕಡಿತಗೊಂಡ ಬಗ್ಗೆ ಸಂದೇಶ ಬಂದಿರುತ್ತದೆ.

ಮೋಬೈಲನಲ್ಲಿ ಸಂದೇಶ ನೋಡಿದ ತಕ್ಷಣವೇ ದೂರುದಾರರರು ಎದುರುದಾರರ ಬ್ಯಾಂಕಿಗೆ ಹೋಗಿ ತನ್ನ ಎಸ್.ಬಿ. ಖಾತೆಯಿಂದ ಅನಧಿಕೃತವಾಗಿ ಹಣ ಕಡಿತಗೊಂಡಿರುವ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ ಹಾಗೂ ತಕ್ಷಣವೇ ತನ್ನ ಖಾತೆಯಲ್ಲಿ ಬಾಕಿ ಹಣ ಅನಧಿಕೃತವಾಗಿ ಕಡಿತವಾಗುವುದನ್ನು ತಡೆಹಿಡಿಯುವಂತೆ ಮತ್ತು ತನ್ನ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡ ಮೊತ್ತ ರೂ. 1,00,000 ಗಳನ್ನು ತನಗೆ ಹಿಂತಿರುಗಿಸುವಂತೆ ಲಿಖಿತ ರೂಪದಲ್ಲಿ ಕೋರಿರುತ್ತಾರೆ. ಇದರ ಜೊತೆಗೆ ಅಳವಂಡಿ ಪೋಲಿಸ್ ಠಾಣೆಗೆ ದೂರನ್ನು ಸಹ ಸಲ್ಲಿಸಿರುತ್ತಾರೆ. ಎದುರುದಾರರ ಬ್ಯಾಂಕಿನವರ ಸೂಚನೆಯಂತೆ ಸೈಬರ್ ಪೋಲಿಸ್ ರವರಿಗೂ ಸಹ ದೂರನ್ನು ನೀಡಿರುತ್ತಾರೆ. ಎದುರುದಾರರ ಬ್ಯಾಂಕಿನವರು ದೂರುದಾರರ ಮನವಿಗೆ ಸ್ಪಂದಿಸದೇ ಅವರ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡಿರುವ ಹಣ ರೂ. 1,00,000 ಗಳನ್ನು ಮರಳಿಸದೇ ಇದ್ದುದರಿಂದ ಮಾನಸಿಕವಾಗಿ ನೊಂದು ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.

ದೂರನ್ನು ದಾಖಲಿಸಿಕೊಂಡ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು ಎನ್ ಮೇತ್ರಿ ಅವರು ಉಭಯ ಪಕ್ಷಗಾರರ ವಾದ ಪ್ರತಿವಾದಗಳನ್ನು ಆಲಿಸಿ, ಎದುರುದಾರರಿಂದ ಉಂಟಾದ ಸೇವಾ ನ್ಯೂನತೆಗಾಗಿ ಎದುರುದಾರ ಕೆನರಾ ಬ್ಯಾಂಕ್, ಅಳವಂಡಿ ಶಾಖೆ ಇವರಿಗೆ ಆರ್.ಬಿ.ಐ ಮಾರ್ಗಸೂಚಿಗಳನ್ವಯ ದೂರುದಾರರ ಹೊಣೆಗಾರಿಕೆ ಶೂನ್ಯ ಇದ್ದು, ಎದುರುದಾರರ ಹೊಣೆಗಾರಿಕೆ ಹೆಚ್ಚಾಗಿದ್ದು ಎದುರುದಾರರು ತನ್ನ ಗ್ರಾಹಕರ ಖಾತೆಯಲ್ಲಿರುವ ಹಣವನ್ನು ಭದ್ರತೆಯಿಂದ ಕಾಪಾಡುವ ಹೊಣೆಗಾರಿಕೆ ಎದುರುದಾರರ ಬ್ಯಾಂಕಿನವರದ್ದಾಗಿದ್ದು, ಅದನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದು ಸೇವಾ ನ್ಯೂನತೆ ಎಸಗಿದ್ದರಿಂದ ದೂರುದಾರರ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡ ಮೊತ್ತ ರೂ. 1,00,000 ಗಳನ್ನು ಪರಿಹಾರವಾಗಿ ನೀಡುವಂತೆ ಆದೇಶಿಸಿರುತ್ತಾರೆ ಹಾಗೂ ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗಾಗಿ ರೂ. 10,000 ಗಳನ್ನು ಹಾಗೂ ದೂರಿನ ಖರ್ಚು ರೂ. 5,000 ಗಳನ್ನು ಈ ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಎದುರುದಾರರು ದೂರುದಾರರಿಗೆ ಪಾವತಿಸುವಂತೆ ಆದೇಶವನ್ನು ನೀಡಿರುತ್ತಾರೆ ಎಂದು ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟಾರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

BIG NEWS : ಗ್ರಾಹಕರ ಅನುಮತಿ ಇಲ್ಲದೆ ಖಾತೆಯಲ್ಲಿನ ಹಣ ಕಡಿತವಾದ್ರೆ ಬ್ಯಾಂಕುಗಳೇ ಹೊಣೆ : ಗ್ರಾಹಕರ ಆಯೋಗ ಮಹತ್ವದ ಆದೇಶ.! BIG NEWS: Banks will be held responsible for deduction of money in accounts without customer's consent: Consumer Commission
Share. Facebook Twitter LinkedIn WhatsApp Email

Related Posts

BREAKING : ‘ಕೊರೊನ’ ಮಧ್ಯ ರಾಜ್ಯಕ್ಕೆ ಮತ್ತೊಂದು ವೈರಸ್ ಎಂಟ್ರಿ : ಬಾಗಲಕೋಟೆಯಲ್ಲಿ ‘ಆಫ್ರಿಕನ್​ ಹಂದಿ’ ಜ್ವರ ಪತ್ತೆ

01/06/2025 2:14 PM1 Min Read

BREAKING : ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ : ಟ್ಯಾಂಕರ್ ಹರಿದು ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವು.!

01/06/2025 1:11 PM1 Min Read

BIG NEWS : `UPI’ ಬಳಕೆದಾರರೇ ಗಮನಿಸಿ : ತಪ್ಪಾಗಿ ಬೇರೆಯವರ ಖಾತೆಗೆ ಹಣ ಕಳಿಸಿದ್ರೆ ತಕ್ಷಣವೇ ಈ ಕೆಲಸ ಮಾಡಿ!

01/06/2025 1:08 PM2 Mins Read
Recent News

BREAKING : ‘ಕೊರೊನ’ ಮಧ್ಯ ರಾಜ್ಯಕ್ಕೆ ಮತ್ತೊಂದು ವೈರಸ್ ಎಂಟ್ರಿ : ಬಾಗಲಕೋಟೆಯಲ್ಲಿ ‘ಆಫ್ರಿಕನ್​ ಹಂದಿ’ ಜ್ವರ ಪತ್ತೆ

01/06/2025 2:14 PM

ಭಾರೀ ಮಳೆ : ಕೊಚ್ಚಿಹೋದ ಅಸ್ಸಾಂ ಮತ್ತು ಮೇಘಾಲಯ ಸಂಪರ್ಕಿಸುವ ಪ್ರಮುಖ ರಸ್ತೆ | Heavy rain

01/06/2025 1:44 PM

ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ 2 ಲಕ್ಷ ರೂ. ಸಬ್ಸಿಡಿ ಸಾಲ.!

01/06/2025 1:42 PM

ಜೂನ್ ತಿಂಗಳಲ್ಲಿ 12 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ : `RBI’ಯಿಂದ ಪಟ್ಟಿ ಬಿಡುಗಡೆ | Bank Holiday June

01/06/2025 1:25 PM
State News
KARNATAKA

BREAKING : ‘ಕೊರೊನ’ ಮಧ್ಯ ರಾಜ್ಯಕ್ಕೆ ಮತ್ತೊಂದು ವೈರಸ್ ಎಂಟ್ರಿ : ಬಾಗಲಕೋಟೆಯಲ್ಲಿ ‘ಆಫ್ರಿಕನ್​ ಹಂದಿ’ ಜ್ವರ ಪತ್ತೆ

By kannadanewsnow0501/06/2025 2:14 PM KARNATAKA 1 Min Read

ಬಾಗಲಕೋಟೆ : ಈಗಾಗಲೇ ರಾಜ್ಯದಲ್ಲಿ ಕೊರೊನಾ ವೈರಸ್‌ಗೆ ಮೂವರು ಬಲಿಯಾಗಿದ್ದು, ಕೊರೊನಾ ಪ್ರಕರಣಗಳ ಸಂಖ್ಯೆ 425 ಕ್ಕೆ ಏರಿಕೆಯಾಗಿದೆ. ಇದರ…

BREAKING : ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ : ಟ್ಯಾಂಕರ್ ಹರಿದು ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವು.!

01/06/2025 1:11 PM

BIG NEWS : `UPI’ ಬಳಕೆದಾರರೇ ಗಮನಿಸಿ : ತಪ್ಪಾಗಿ ಬೇರೆಯವರ ಖಾತೆಗೆ ಹಣ ಕಳಿಸಿದ್ರೆ ತಕ್ಷಣವೇ ಈ ಕೆಲಸ ಮಾಡಿ!

01/06/2025 1:08 PM

ALERT : ತಲೆಯ ಬಳಿ `ಮೊಬೈಲ್’ ಇಟ್ಟುಕೊಂಡು ಮಲಗುವವರೇ ಎಚ್ಚರ : ಈ ಗಂಭೀರ ಕಾಯಿಲೆ ಬರಬಹುದು.!

01/06/2025 12:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.