Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೈಸೂರು : ಪ್ರೀತ್ಸೆ ಪ್ರೀತ್ಸೆ ಅಂತ ಬೆನ್ನು ಬಿದ್ದ ಯುವಕ : ಕಿರುಕುಳಕ್ಕೆ ಬೇಸತ್ತು ಅಪ್ರಾಪ್ತೆ ಬಾಲಕಿ ಆತ್ಮಹತ್ಯೆಗೆ ಶರಣು!

08/01/2026 10:23 AM

BREAKING : ಶಿವಮೊಗ್ಗದಲ್ಲಿ ಪೊಲೀಸ್ ಠಾಣೆಯಲ್ಲಿಯೇ ನೇಣು ಬಿಗಿದುಕೊಂಡು ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ!

08/01/2026 10:15 AM

ಬೆಳಗಿನ ಉಪಾಹಾರ ಸ್ಕಿಪ್ ಮಾಡ್ತೀರಾ? ನಿಮ್ಮ ದೇಹದ ಒಳಗಾಗುವ ಅಪಾಯಗಳ ಬಗ್ಗೆ ಎಚ್ಚರ!

08/01/2026 10:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರೇ ಗಮನಿಸಿ : ಹೀಗಿವೆ ನಿಮ್ಮ ಕೆಲಸದ ಜವಾಬ್ದಾರಿಗಳು.!
KARNATAKA

BIG NEWS : ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರೇ ಗಮನಿಸಿ : ಹೀಗಿವೆ ನಿಮ್ಮ ಕೆಲಸದ ಜವಾಬ್ದಾರಿಗಳು.!

By kannadanewsnow5726/11/2025 7:33 AM

ಬೆಂಗಳೂರು : ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆರ ಜವಾಬ್ದಾರಿಗಳೇನು? ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಅಂಗನವಾಡಿ ಕಾರ್ಯಕರ್ತೆಯರು 3 ರಿಂದ 6 ವರ್ಷದ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ ನೀಡುವುದು, ಆರೋಗ್ಯ ತಪಾಸಣೆ, ರೋಗನಿರೋಧಕ ಲಸಿಕೆಗಳು, ಮತ್ತು ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕಾಂಶ ಶಿಕ್ಷಣ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಜನ ಸಮುದಾಯದ ಸಮೀಕ್ಷೆಯನ್ನು ಕೈಗೊಂಡು, ಸಹಾಯ ಅಗತ್ಯವಾಗಿರುವಂಥವರ ವಿವರ ಸಂಗ್ರಹಿಸುವುದು. ಆರು ವರ್ಷದ ಕೆಳಗಿನ ಮಕ್ಕಳ ಸಂಖ್ಯೆ, ಗರ್ಭಿಣಿ ಮತ್ತು ಹಾಲೂಣಿಸುತ್ತಿರುವ ತಾಯಂದಿರು, ಇವುಗಳನ್ನೂ ಸಂಗ್ರಹಿಸಬೇಕು. ಕುಟುಂಬಗಳ ಸಂಖ್ಯೆ, ಕುಟುಂಬದಲ್ಲಿ ಸದಸ್ಯರ ಸಂಖ್ಯೆ, ಕುಟುಂಬದ ಆದಾಯ ಇವುಗಳನ್ನು ಸಂಗ್ರಹಿಸಬೇಕು. ಮುಖ್ಯ ಅಂಕಿ-ಅಂಶಗಳಾದ ಜನನ-ಮರಣಗಳ ದಾಖಲೆಯನ್ನೂ ಇಡಬೇಕು.

3 ಮತ್ತು 6 ವರ್ಷಗಳ ನಡುವಣ ಮಕ್ಕಳ ಶಾಲಾಪೂರ್ವ ಶಿಕ್ಷಣವನ್ನು ಕೈಗೊಳ್ಳಬೇಕು.

0-6 ವರ್ಷಗಳ ನಡುವಿನ ಮಕ್ಕಳ ಮತ್ತು ಗರ್ಭಿಣಿ ಹಾಗೂ ಹಾಲೂಣಿಸುತ್ತಿರುವ ತಾಯಂದಿರಿಗೆ ಅಧಿಕ ಪೋಷಕಾಂಶ ಇರುವ ಅಹಾರವನ್ನು ಒದಗಿಸುವುದು.
ಪ್ರಾಥಮಿಕ ಆರೋಗ್ಯ ಹಾಗೂ ಪ್ರಥಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವುದು.

ರೋಗ ನಿರೋಧಕ ಚುಚ್ಚುಮದ್ದು ಮತ್ತು ಆರೋಗ್ಯ ತಪಾಸಣೆ ಮಾಡುವಲ್ಲಿ ಆರೋಗ್ಯ ಸಿಬ್ಬಂದಿಗೆ ಸಹಾಯ ಮಾಡುವುದು.

ಪ್ರಬಲವಾಗಿ ನ್ಯೂನಪೋಷಣೆಗೊಳಗಾದ, ಪೋಷಕಾಂಶದ ಅಗತ್ಯವುಳ್ಳ, ಅನಾರೋಗ್ಯ ಉಂಟಾದ, ಅಪಾಯದಲ್ಲಿರುವ ಮಕ್ಕಳನ್ನು, ಅಂಟುರೋಗ ಇರುವ ರೋಗಿಗಳನ್ನು ತಜ್ಞ ವೈದ್ಯರಲ್ಲಿಗೆ ಕಳುಹಿಸಬೇಕು.

ಅಂಗನವಾಡಿ ಕೇಂದ್ರಕ್ಕೆ ಬರುವ ಗರ್ಭಿಣಿ ಮತ್ತು ಹಾಲೂಡಿಸುತ್ತಿರುವ ತಾಯಂದಿರಿಗೆ ಅಂಗನವಾಡಿ ಕಾರ್ಯಕರ್ತರು ಮನೆ ಭೇಟಿ ಮಾಡುವ ವೇಳೆಯಲ್ಲಿ ಮತ್ತು ಶಿಕ್ಷಣ ಕಾರ್ಯಕ್ರಮದ ಕಾಲದಲ್ಲಿ ಆರೋಗ್ಯ ಮತ್ತು ಪೋಷಣೆಗೆ ಸಂಬಂದಿಸಿದ ತಿಳುವಳಿಕೆಯನ್ನು ಕೊಡಬೇಕು.

ಅಂಗನವಾಡಿಗೆ ಬರುವ ತಂದೆ-ತಾಯಿಯರನ್ನು ಕಂಡು ಅವರೊಡನೆ ಸಂಪರ್ಕ ಬೆಳೆಸುವುದು.

ತೂಕದ ಕಾರ್ಡ್ಗಳು, ರಿಜಿಸ್ಟರುಗಳು, ಮಗುವಿನ ಆರೋಗ್ಯ, ಪೋಷಕಾಂಶಕ್ಕೆ ಸಂಬಂಧಿಸಿದ ದಾಖಲೆಗಳು, ಅಂಗನವಾಡಿ ಹಾಜರಿ ದಾಖಲೆಗಳು ಇವುಗಳನ್ನು ಬರೆದಿಟ್ಟು ಜನ ಸಮುದಾಯ ಸೇವೆಯ ಉಪಯೋಗವನ್ನು ಸರಿಯಾಗಿ ಪಡೆಯುತ್ತಿದೆಯೇ ಎಂದು ತಿಳಿಯುವಲ್ಲಿ ಸಹಕರಿಸುವುದು.

ಗ್ರಾಮದ ಇತರ ಸಂಘ-ಸಂಸ್ಥೆಗಳಾದ ಪಂಚಾಯಿತಿ, ಮಹಿಳಾ ಮಂಡಲಿಗಳೊಡನೆ ಸಂಪರ್ಕ, ಶಾಲಾ ಉಪಾಧ್ಯಾಯರೊಡನೆ ಸಂಪರ್ಕ ಮತ್ತು ಕಾರ್ಯಕ್ರಮದ ಯಶಸ್ಸಿಗೆ ಅವರ ಸಹಕಾರ ಸಹಭಾಗಿತ್ವವನ್ನು ಕೋರುವುದು.

15-45 ವರ್ಷಗಳ ವಯಸ್ಸಿನ ಹೆಂಗಸರ ಅಕ್ಷರ ಕಲಿಕೆ ಕಾರ್ಯಕ್ರಮವನ್ನು ಏರ್ಪಡಿಸಿ ನಡೆಸುವುದು.

BIG NEWS: Attention Anganwadi workers of the state: These are your job responsibilities!
Share. Facebook Twitter LinkedIn WhatsApp Email

Related Posts

ಮೈಸೂರು : ಪ್ರೀತ್ಸೆ ಪ್ರೀತ್ಸೆ ಅಂತ ಬೆನ್ನು ಬಿದ್ದ ಯುವಕ : ಕಿರುಕುಳಕ್ಕೆ ಬೇಸತ್ತು ಅಪ್ರಾಪ್ತೆ ಬಾಲಕಿ ಆತ್ಮಹತ್ಯೆಗೆ ಶರಣು!

08/01/2026 10:23 AM1 Min Read

BREAKING : ಶಿವಮೊಗ್ಗದಲ್ಲಿ ಪೊಲೀಸ್ ಠಾಣೆಯಲ್ಲಿಯೇ ನೇಣು ಬಿಗಿದುಕೊಂಡು ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ!

08/01/2026 10:15 AM1 Min Read

BREAKING : ಬೆಂಗಳೂರಲ್ಲಿ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್ : ನಾಳೆ ಕೋರ್ಟ್ ಗೆ 1200 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ!

08/01/2026 10:13 AM1 Min Read
Recent News

ಮೈಸೂರು : ಪ್ರೀತ್ಸೆ ಪ್ರೀತ್ಸೆ ಅಂತ ಬೆನ್ನು ಬಿದ್ದ ಯುವಕ : ಕಿರುಕುಳಕ್ಕೆ ಬೇಸತ್ತು ಅಪ್ರಾಪ್ತೆ ಬಾಲಕಿ ಆತ್ಮಹತ್ಯೆಗೆ ಶರಣು!

08/01/2026 10:23 AM

BREAKING : ಶಿವಮೊಗ್ಗದಲ್ಲಿ ಪೊಲೀಸ್ ಠಾಣೆಯಲ್ಲಿಯೇ ನೇಣು ಬಿಗಿದುಕೊಂಡು ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ!

08/01/2026 10:15 AM

ಬೆಳಗಿನ ಉಪಾಹಾರ ಸ್ಕಿಪ್ ಮಾಡ್ತೀರಾ? ನಿಮ್ಮ ದೇಹದ ಒಳಗಾಗುವ ಅಪಾಯಗಳ ಬಗ್ಗೆ ಎಚ್ಚರ!

08/01/2026 10:15 AM

BREAKING : ಬೆಂಗಳೂರಲ್ಲಿ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್ : ನಾಳೆ ಕೋರ್ಟ್ ಗೆ 1200 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ!

08/01/2026 10:13 AM
State News
KARNATAKA

ಮೈಸೂರು : ಪ್ರೀತ್ಸೆ ಪ್ರೀತ್ಸೆ ಅಂತ ಬೆನ್ನು ಬಿದ್ದ ಯುವಕ : ಕಿರುಕುಳಕ್ಕೆ ಬೇಸತ್ತು ಅಪ್ರಾಪ್ತೆ ಬಾಲಕಿ ಆತ್ಮಹತ್ಯೆಗೆ ಶರಣು!

By kannadanewsnow0508/01/2026 10:23 AM KARNATAKA 1 Min Read

ಮೈಸೂರು : ಮೈಸೂರಲ್ಲಿ ಪ್ರೀತ್ಸೆ ಪ್ರೀತ್ಸೆ ಎಂದು ಯುವಕನೊಬ್ಬ ಅಪ್ರಾಪ್ತೆ ಬಾಲಕಿಯ ಬೆನ್ನುಬಿದ್ದಿದ್ದಾನೆ. ಇದರಿಂದ ಕಿರುಕುಳದಿಂದ ಮನನೊಂದ 17 ವರ್ಷದ…

BREAKING : ಶಿವಮೊಗ್ಗದಲ್ಲಿ ಪೊಲೀಸ್ ಠಾಣೆಯಲ್ಲಿಯೇ ನೇಣು ಬಿಗಿದುಕೊಂಡು ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ!

08/01/2026 10:15 AM

BREAKING : ಬೆಂಗಳೂರಲ್ಲಿ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್ : ನಾಳೆ ಕೋರ್ಟ್ ಗೆ 1200 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ!

08/01/2026 10:13 AM

BIG NEWS : ‘ಗ್ಯಾರಂಟಿ’ ಯೋಜನೆಗಳಿಂದ ನಮ್ಮ‌ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

08/01/2026 9:59 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.