ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗಾಗಿ ಕಳೆದೆರಡು ವರ್ಷಗಳಲ್ಲಿ 6.57 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆಗೆ 115 ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅದರಿಂದ 2.32 ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗಳಲ್ಲಿನ 2 ವರ್ಷಗಳ ಸಾಧನೆ ಕುರಿತ ಪ್ರಗತಿ ಪಥದ ಮುಂದಣ ಹೆಜ್ಜೆ ಕೈಪಿಡಿ ಬಿಡುಗಡೆ ಮಾಡಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ₹ 6,57,660 ಕೋಟಿ ಮೌಲ್ಯದ ಹೂಡಿಕೆಗಳನ್ನು ರಾಜ್ಯಕ್ಕೆ ಆಕರ್ಷಿಸಿದ್ದು, ಇದರಿಂದ ಅಂದಾಜು 2,32,771 ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.
ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳಿಂದ ಸುಮಾರು 906 ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದ್ದು, ₹1,13,200 ಕೋಟಿ ಹೂಡಿಕೆ ನಿರೀಕ್ಷೆಗಳಿವೆ. 2,23,982 ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ತಿಳಿಸಿದ್ದಾರೆ.
ಮುಖ್ಯ ಹೂಡಿಕೆದಾರರು:
ಫಾಕ್ಸ್ಕಾನ್ ₹22,000 cr, ಎನ್ಎಕ್ಸ್ಪಿ $1bn, ಟೊಯೋಟಾ ₹3,700 cr, ಎಮ್ವೀ ಎನರ್ಜಿ ₹5,000 cr, ಜಿಂದಾಲ್ ಎನರ್ಜಿ ₹4,960 cr, ಇತ್ಯಾದಿ.
ನೀತಿಯ ಅಭಿವೃದ್ಧಿ:2025-30 ಕೈಗಾರಿಕಾ ನೀತಿ ಮೂಲಕ ₹7.5 ಲಕ್ಷ ಕೋಟಿ ಹೂಡಿಕೆ, 20 ಲಕ್ಷ ಉದ್ಯೋಗ ಗುರಿ. ಕೈಗಾರಿಕಾ ಅನುಮೋದನೆಗಳನ್ನು ಸರಳಗೊಳಿಸಿ, ಹೊಸ ಏಕೀಕೃತ ಏಕಗವಾಕ್ಷಿ ವ್ಯವಸ್ಥೆ ಜಾರಿ ಪರಿಸರಸ್ನೇಹಿ ಇಂಧನ ನೀತಿ 2024-29 ಬಿಡುಗಡೆ. ಜಾಗತಿಕ ಜಾಲವಿಸ್ತಾರ:ಯುರೋಪ್, ಅಮೆರಿಕ, ಜಪಾನ್, ಕೊರಿಯಾದಲ್ಲಿ ರೋಡ್ ಶೋಗಳು. ದಾವೋಸ್ನಲ್ಲಿ ₹23,000 ಕೋಟಿ ಮೌಲ್ಯದ 8 ಒಪ್ಪಂದ.
ರಾಜ್ಯ ಸರಕಾರಿ ಸಂಸ್ಥೆಗಳ ಯಶಸ್ಸು:
#KSDL – ₹1,700Cr ವ್ಯವಹಾರ- ₹416Cr ಲಾಭ. #MSIL: ಐಷಾರಾಮಿ ಬೌಟಿಕ್, ಇ-ಕಾಮರ್ಸ್ ಆರಂಭ. ಹುಬ್ಬಳ್ಳಿ #NGEF ಟ್ರಾನ್ಸ್ ಫಾರ್ಮರ್ ಗಳು– ವಿದೇಶಕ್ಕೂ ರಫ್ತು- ಪುನಶ್ಚೇತನಕ್ಕೆ ಚಿಂತನೆ
ಭವಿಷ್ಯದ ದೃಷ್ಟಿ:
2030ರ ವೇಳೆಗೆ 1ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವುದು, ₹7.5 ಲಕ್ಷ ಕೋಟಿ ಹೂಡಿಕೆ, 20 ಲಕ್ಷ ಉದ್ಯೋಗ ಗುರಿ.
ಕರ್ನಾಟಕವನ್ನು ಸಿಲಿಕಾನ್ ರಾಜ್ಯವನ್ನಾಗಿ ಮಾಡುವುದು
ಡಾಬಸಪೇಟೆ- ದೊಡ್ಡಬಳ್ಳಾಪುರ ರಸ್ತೆಯಲ್ಲಿ 40,000 ಕೋಟಿ ರೂ. ಹೂಡಿಕೆಯೊಂದಿಗೆ 5,000 ಎಕರೆಯಲ್ಲಿ #KWINCity ನಿರ್ಮಾಣ
ಬೆಂಗಳೂರು ಸಮೀಪದಲ್ಲಿ 1,000 ಎಕರೆ ವಿಸ್ತೀರ್ಣದಲ್ಲಿ #SWIFTCity
ಮೂಲಸೌಕರ್ಯಗಳ ಅಭಿವೃದ್ಧಿ – ಪ್ರಮುಖ ಹಂತಗಳು:
ವಿಜಯಪುರ ಮತ್ತು ಬಾಗಲಕೋಟೆ ರೈಲು ಪ್ರಯಾಣ 10 ಗಂಟೆಗಷ್ಟೇ ಇಳಿಸಲು ಕ್ರಮ;
9 ರೈಲು ಮಾರ್ಗ ಯೋಜನೆಗಳು (50:50 ವೆಚ್ಚ ಹಂಚಿಕೆ) ಪ್ರಗತಿಯಲ್ಲಿ; ಶೀಘ್ರ ಪೂರ್ಣಗೊಳಿಸಲು ಕ್ರಮ.
2 ಜೋಡಿಹಳಿ ಯೋಜನೆಗಳು:
(1) ಬೈಯ್ಯಪ್ಪನಹಳ್ಳಿ–ಹೊಸೂರು
(2) ಯಶವಂತಪುರ–ಚನ್ನಸಂದ್ರ
ಬೆಂಗಳೂರು ಉಪನಗರ ರೈಲು ಯೋಜನೆ-#BSRP
ಒಟ್ಟು ರೂ 15,767 ಕೋಟಿ ಅಂದಾಜು ವೆಚ್ಚದಲ್ಲಿ, 57 ರೈಲು ನಿಲ್ದಾಣಗಳನ್ನೊಳಗೊಂಡ ಮತ್ತು 148 ಕಿ.ಮೀ. ಉದ್ದದ ಬೆಂಗಳೂರು ಉಪನಗರ ರೈಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರು ನಗರವನ್ನು ಮಾತ್ರ ಗುರಿಯಾಗಿಸಿಕೊಂಡಿದ್ದ ಯೋಜನೆಯನ್ನು ತುಮಕೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಮಾಲೂರು, ಬಂಗಾರಪೇಟೆ, ಮಾಗಡಿ ಮತ್ತು ಹೊಸೂರುಗಳಿಗೂ ವಿಸ್ತರಿಸುವ ಉದ್ದೇಶ
ವಿಮಾನ ನಿಲ್ದಾಣಗಳು:
ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಉದ್ದೇಶ.
ಶಿವಮೊಗ್ಗ – ಚಾಲನೆ.
ವಿಜಯಪುರ – ಉದ್ಘಾಟನೆಗೆ ಸಜ್ಜು.
ಮೈಸೂರು – ರನ್ವೇ ವಿಸ್ತರಣೆ ಪ್ರಗತಿಯಲ್ಲಿ.
ಹಾಸನ್ – 2026ರೊಳಗೆ ಪೂರ್ಣ.
ರಾಯಚೂರು – ಕಾಮಗಾರಿಗೆ ಅನುಮೋದನೆ.
ಚಿಕ್ಕಮಗಳೂರು, ಮಡಿಕೇರಿ, ಹಂಪಿ – ಹೆಲಿಪೋರ್ಟ್ ನಿರ್ಮಾಣ ಸಂಬಂಧ ಬಜೆಟ್ ನಲ್ಲಿ ಪ್ರಕಟಿಸಲಾಗಿದೆ.