ನವದೆಹಲಿ : ಭೂತಾನಿನ ಪ್ರಧಾನಿ ದಾಶೋ ತ್ಶೆರಿಂಗ್ ಟೋಬ್ಗೇ ಸೆಪ್ಟೆಂಬರ್ 5ರಂದು ಭಾರತಕ್ಕೆ ಬರುತ್ತಿದ್ದಾರೆ, ಅವರ ಭಾರತ ಭೇಟಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಭಾರತಕ್ಕೆ ಬಂದ ನಂತರ ಅವರು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಅಯೋಧ್ಯೆಯಲ್ಲಿ, ಭೂತಾನ್ ಪ್ರಧಾನಿ ರಾಮ ಜನ್ಮಭೂಮಿಯಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಪ್ರಧಾನಿ ದಾಸೋ ತ್ಸೆರಿಂಗ್ ಟೋಬ್ಗೆ ಸೆಪ್ಟೆಂಬರ್ 5ರಂದು ಬೆಳಿಗ್ಗೆ 9:30ರ ಸುಮಾರಿಗೆ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅವರ ಪತ್ನಿ ಓಂ ತಶಿಮ್ ದೋಮಾ ಕೂಡ ಅವರೊಂದಿಗೆ ಅಯೋಧ್ಯೆಗೆ ಬರಲಿದ್ದಾರೆ.
ಅಯೋಧ್ಯೆಯಲ್ಲಿ, ಸುಡಾನ್ ಪ್ರಧಾನಿ ಶ್ರೀರಾಮಲಾಲಾ, ಹನುಮಾನ್ಗಢಿ ಮತ್ತು ಅಯೋಧ್ಯೆಯ ಇತರ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತ ವಿಶೇಷ ಸಿದ್ಧತೆಗಳನ್ನ ಪ್ರಾರಂಭಿಸಿದೆ. ಭೂತಾನಿನ ಪ್ರಧಾನಿಗೆ ರೆಡ್ ಕಾರ್ಪೆಟ್ ಮೇಲೆ ಭವ್ಯ ಸ್ವಾಗತ ನೀಡಲಾಗುವುದು. ಈ ಸಂದರ್ಭದಲ್ಲಿ ಅನೇಕ ಸಚಿವರು ಸಹ ಉಪಸ್ಥಿತರಿರುತ್ತಾರೆ.
ದಾಶೋ ತ್ಶೆರಿಂಗ್ ಟೋಬ್ಗೇ ಅವರಿಗೆ ವಿಶೇಷ ಔತಣಕೂಟ ಆಯೋಜಿಸಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಖಿಲ್ ಟಿಕಾರಾಂ ಹೇಳಿದ್ದಾರೆ. ಅವರು ಮಧ್ಯಾಹ್ನ 1:30ರ ಸುಮಾರಿಗೆ ಅಯೋಧ್ಯೆಯಿಂದ ಹೊರಡಲಿದ್ದಾರೆ. ಅಯೋಧ್ಯೆಯ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ, ಅವ್ರು ಅಯೋಧ್ಯೆ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನ ಭೇಟಿ ಮಾಡಲಿದ್ದಾರೆ.