Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎತ್ತರದ ಪ್ರತಿಮೆ: ಜಗತ್ತಿನ ಅತಿ ದೊಡ್ಡ ಗಣೇಶನ ವಿಗ್ರಹ ಎಲ್ಲಿದೆ ಗೊತ್ತಾ | Tallest statue of Lord Ganesha

23/08/2025 1:17 PM

BREAKING : ಧರ್ಮಸ್ಥಳ ಕೇಸ್: ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು 10 ದಿನ SIT ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

23/08/2025 1:14 PM

ಫಿಫಾ ಸ್ನೇಹಕೂಟ: ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಭಾರತಕ್ಕೆ ಭೇಟಿ

23/08/2025 1:07 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ಜಯನಗರದ ವಿನಾಯಕ ದೇವಾಲಯದ ಹೆಸರಲ್ಲಿ ಹಣ ದುರುಪಯೋಗ: ಅಧಿಕಾರಿಗಳು ಸಸ್ಪೆಂಡ್
KARNATAKA

ಬೆಂಗಳೂರಿನ ಜಯನಗರದ ವಿನಾಯಕ ದೇವಾಲಯದ ಹೆಸರಲ್ಲಿ ಹಣ ದುರುಪಯೋಗ: ಅಧಿಕಾರಿಗಳು ಸಸ್ಪೆಂಡ್

By kannadanewsnow0916/10/2024 6:32 PM

ಬೆಂಗಳೂರು: ಸಾಮಾಜಿಕ ಜಾಲತಾಗಳಲ್ಲಿ ಹಂಚಿಗೊಂಡ ವೀಡಿಯೋದಲ್ಲಿ, ಕೆಲ ಇಲಾಖಾ ಅಧಿಕಾರಿಗಳು ದೇವಾಲಯಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡಿರುವ ಸಂಬಂದ ಬಂದ ದೂರಿಗೆ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ತ್ವರಿತಗತಿಯಲ್ಲಿ‌ ಕಠಿಣ ಕ್ರಮ ವಹಿಸಿದ್ದಾರೆ. ಬೆಂಗಳೂರಿನ ಜಯನಗರದ ವಿನಾಯಕ ದೇವಾಲಯದ ಹೆಸರಿನಲ್ಲಿ ಹಣ ದುರುಪಯೋಗ ಮಾಡಿಕೊಂಡ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ಆಡಿಯೋ ಸಂಭಾಷಣೆಯಲ್ಲಿ, ಬೆಂಗಳೂರು ಜಯನಗರದ ಶ್ರೀ ವಿನಾಯಕ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಟಿ.ಎನ್. ಮಂಜುಳ ಅವರ ಹೆಸರು ಪ್ರಸ್ತಾಪವಾಗಿದೆ. ಅವರು ಸೋಮಶೇಖರ್ ಅವರ ಸೂಚನೆ ಮೇರೆಗೆ, ದೇವಾಲಯದಿಂದ ₹25,000 ಗಳನ್ನು ದೇವಾಲಯದ ಸ್ವಚ್ಛತೆ ಕಾರ್ಯ, ಬೀಗದ ಕೀಲಿ ರಿಪೇರಿ ಮತ್ತು ಹಬ್ಬದ ಖರೀದಿಗಳ ಹೆಸರಲ್ಲಿ ದುರುಪಯೋಗಪಡಿಸಿಕೊಂಡಿದ್ದಾರೆಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಇಲಾಖಾ ವರ್ತನೆ ಮತ್ತು ಹಣಕಾಸು ವಹಿವಾಟನ್ನು ಕ್ರಮಬದ್ಧವಾಗಿ ನಿರ್ವಹಿಸದ ಕಾರಣ ಟಿ.ಎನ್. ಮಂಜುಳ ಮತ್ತು ಗಿರೀಶ್ ಅವರನ್ನು ಆಯುಕ್ತರು ಮುಜರಾಯಿ ಇಲಾಖೆರವರಾದ ಡಾ.ವೆಂಕಟೇಶ್ ಭಾಆಸೇ, ಅವರು ಸಾರಿಗೆ ಹಾಗೂ ಮುಜರಾಯಿ ಸಚಿವರ ಆದೇಶದಂತೆ ಅಮಾನತ್ತಿನಲ್ಲಿರಿಸಿ ಆದೇಶಿಸಿದ್ದಾರೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, 1997 ಮತ್ತು 2002ರ ನಿಯಮಗಳು 01.05.2003ರಿಂದ ಜಾರಿಗೆ ಬಂದಿದ್ದು, ಅಧಿಸೂಚಿತ ದೇವಾಲಯಗಳ ಆರ್ಥಿಕ ವಹಿವಾಟು ಪಾರದರ್ಶಕವಾಗಿರಬೇಕು. ಆದರೆ ಕೆಲವು ಅಧಿಕಾರಿಗಳು ದೇವಾಲಯದ ಹಣವನ್ನು ನಕಲಿ ವೋಚರ್ಸ್ಗಗಳ ಮೂಲಕ ದುರುಪಯೋಗ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ಹರಿದಾಡುತ್ತಿವೆ.

ದೇವಾಲಯದ ಯಾವುದೇ ಹಣವನ್ನು ನೌಕರರ ಅಥವಾ ಅಧಿಕಾರಿಗಳ ಹೆಸರಿನಲ್ಲಿ ಚೆಕ್ ಮೂಲಕ ವಿತ್ ಡ್ರಾ ಮಾಡಲು ಅವಕಾಶವಿಲ್ಲ. ಖರ್ಚುಗಳನ್ನು ಕಾನೂನುಬದ್ಧ ರೀತಿಯಲ್ಲಿ ನಡೆಸಲು ರಾಜ್ಯದ ಆರ್ಥಿಕ ಸಂಹಿತೆ ಮತ್ತು ನಿಯಮಾವಳಿಗಳನ್ನು ಪಾಲಿಸಬೇಕು. ಈ ಪ್ರಕ್ರಿಯೆ ನಿಯಮಬದ್ಧವಾಗಿದ್ದರೂ, ಕೆಲವರು ಹಣ ದುರುಪಯೋಗ ಮಾಡುವ ದೂರುಗಳು ಕೇಳಿ ಬರುತ್ತಿವೆ, ಇದರಿಂದ ಸಾರ್ವಜನಿಕ ವಲಯದಲ್ಲಿ ಇಲಾಖೆ ಬಗ್ಗೆ ಅಪಪ್ರಚಾರವಾಗುತ್ತದೆ. ಇದು ಅಕ್ಷಮ್ಯ.

ದೇವಾಲಯಗಳು ಆಧ್ಯಾತ್ಮಿಕ ಕೇಂದ್ರಗಳು, ಅಧಿಕಾರಿಗಳು‌‌ ನೌಕರರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಉತ್ತಮ ಸೇವೆ ನೀಡಬೇಕು. ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದರೆ, ಕಟ್ಟುನಿಟ್ಟಿನ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಮುಂದುವರೆದು, ಮಾನ್ಯ ಸಚಿವರು ದೇವಸ್ಥಾನಗಳ ಹಣವನ್ನು ಯಾವುದೇ ಕಾರಣಕ್ಕೂ ದುರುಪಯೋಗವಾಗಲು ಬಿಡುವುದಿಲ್ಲ, ಬೇರೆ ಅನ್ಯ ಕಾರ್ಯಗಳಿಗೆ ಬಳಸುವುದೂ ಇಲ್ಲ‌ ಎಂಬುದನ್ನು ಪುನರುಚ್ಚಿಸಿದ್ದಾರೆ. ಈ‌‌ ಬಗ್ಗೆ ಇಂದು ಸುತ್ತೋಲೆ ಕೂಡ ಮುಜರಾಯಿ‌ ಇಲಾಖೆಯಿಂದ ಹೊರಡಿಸಲಾಗಿದೆ‌.

ಹಾಗೂ ಮುಜರಾಯಿ ಕೇಂದ್ರ ಕಛೇರಿಯಲ್ಲಿರುವ ಕೆಲವು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಸಹ ಪರಾಮರ್ಶಿಸಿ ವರದಿ ನೀಡಲು ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ .ಯಾವುದೇ ಕಾರಣಕ್ಕೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂಬುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

BREAKING: ಬೆಂಗಳೂರಲ್ಲಿ ಭಾರೀ ಮಳೆಗೆ ಧರೆಗುರುಳಿದ ಮರ: ಆಟೋ ಜಖಂ, ಚಾಲಕ ಪ್ರಾಣಾಪಾಯದಿಂದ ಪಾರು

BREAKING: ರೇಣುಕಾಸ್ವಾಮಿ ಕೊಲೆ ಕೇಸ್: ಪವಿತ್ರಾ ಗೌಡ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ

Share. Facebook Twitter LinkedIn WhatsApp Email

Related Posts

BREAKING : ಧರ್ಮಸ್ಥಳ ಕೇಸ್: ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು 10 ದಿನ SIT ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

23/08/2025 1:14 PM1 Min Read

ಒಳ ಮೀಸಲಾತಿ ಜಾರಿ : ಅಲೆಮಾರಿ ಸಮುದಾಯಕ್ಕೆ ತೀವ್ರ ಅನ್ಯಾಯ: ಎನ್.ಆರ್.ಚಂದ್ರಶೇಖರ್

23/08/2025 12:57 PM1 Min Read

BREAKING : ದರ್ಶನ್ & ಗ್ಯಾಂಗ್ ಜೈಲು ವರ್ಗಾವಣೆ ಅರ್ಜಿ ವಿಚಾರ : ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿದ ಕೋರ್ಟ್

23/08/2025 12:54 PM1 Min Read
Recent News

ಎತ್ತರದ ಪ್ರತಿಮೆ: ಜಗತ್ತಿನ ಅತಿ ದೊಡ್ಡ ಗಣೇಶನ ವಿಗ್ರಹ ಎಲ್ಲಿದೆ ಗೊತ್ತಾ | Tallest statue of Lord Ganesha

23/08/2025 1:17 PM

BREAKING : ಧರ್ಮಸ್ಥಳ ಕೇಸ್: ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು 10 ದಿನ SIT ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

23/08/2025 1:14 PM

ಫಿಫಾ ಸ್ನೇಹಕೂಟ: ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಭಾರತಕ್ಕೆ ಭೇಟಿ

23/08/2025 1:07 PM

ಒಳ ಮೀಸಲಾತಿ ಜಾರಿ : ಅಲೆಮಾರಿ ಸಮುದಾಯಕ್ಕೆ ತೀವ್ರ ಅನ್ಯಾಯ: ಎನ್.ಆರ್.ಚಂದ್ರಶೇಖರ್

23/08/2025 12:57 PM
State News
KARNATAKA

BREAKING : ಧರ್ಮಸ್ಥಳ ಕೇಸ್: ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು 10 ದಿನ SIT ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

By kannadanewsnow0523/08/2025 1:14 PM KARNATAKA 1 Min Read

ದಕ್ಷಿಣಕನ್ನಡ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣದ ಅನಾಮಿಕ ದೂರುದಾರನನ್ನು ಎಸ್.ಐ.ಟಿ ಅಧಿಕಾರಿಗಳು ಬಂಧಿಸಿದ್ದಾರೆ. ಧರ್ಮಸ್ಥಳದಲ್ಲಿ ಶವ ಹೂತಿದೆ…

ಒಳ ಮೀಸಲಾತಿ ಜಾರಿ : ಅಲೆಮಾರಿ ಸಮುದಾಯಕ್ಕೆ ತೀವ್ರ ಅನ್ಯಾಯ: ಎನ್.ಆರ್.ಚಂದ್ರಶೇಖರ್

23/08/2025 12:57 PM

BREAKING : ದರ್ಶನ್ & ಗ್ಯಾಂಗ್ ಜೈಲು ವರ್ಗಾವಣೆ ಅರ್ಜಿ ವಿಚಾರ : ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿದ ಕೋರ್ಟ್

23/08/2025 12:54 PM

Rain Alert : ರಾಜ್ಯದ ಈ 9 ಜಿಲ್ಲೆಗಳಲ್ಲಿ ಭಾರಿ ಮಳೆ : ಯಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

23/08/2025 12:50 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.