ಬೆಂಗಳೂರು: 18 ವರ್ಷಗಳ ನಂತ್ರ ಆರ್ ಸಿ ಬಿ ಐಪಿಎಲ್ ಕಪ್ ಗೆದ್ದರು ಅಂತ ರಾಜ್ಯ ಕಾಂಗ್ರೆಸ್ ಸರ್ಕಾರವು ವಿಜಯೋತ್ಸವ ಆಚರಣೆ ಮಾಡೋದರಿಂದ ಹೆಸರು ಬರುತ್ತೆ ಅಂತ ಹೋಗಿ ಮಾಡಬಾರದ್ದು ಮಾಡಿ ಬಿಟ್ರು. ಒಂದು ವಾರ ಬಿಟ್ಟು ಮಾಡಬಹುದಿತ್ತು. ಕಾಲ್ತುಳಿತ ದುರಂತದ ನೈತಿಕ ಹೊಣೆ ಹೊತ್ತು ಸಿಎಂ ಸಿದ್ಧರಾಮಯ್ಯ ಅವರು ರಾಜೀನಾಮೆ ನೀಡಬೇಕು ಅಂಕ ಕೇಂದ್ರ ರಾಜ್ಯ ಖಾತೆಯ ರೈಲ್ವೆ ಸಚಿವ ವಿ.ಸೋಮಣ್ಣ ಆಗ್ರಹಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಕಾಲ್ತುಳಿದಲ್ಲಿ 11 ಜನರ ಸಾವಿನ ಪ್ರಕರಣ ವಿಚಾರವಾಗಿ ಮಾತನಾಡಿ, ನೋಡಿ, ಇದು ಲಜ್ಜಗೇಡಿ ಸರ್ಕಾರವಾಗಿದೆ. 18 ವರ್ಷದ ನಂತರ ಗೆದ್ರು. ಅದಕ್ಕೆ ಹೆಸರು ಬರುತ್ತೆ ಅಂತ ಹೀಗೆ ಮಾಡಿದ್ರು. ಒಂದು ವಾರ ಬಿಟ್ಟು ಮಾಡ್ಬಹುದಿತ್ತು. ಏನೇನ್ ಮಾಡಬಾರದಿತ್ತೋ ಎಲ್ಲಾ ಮಾಡಿದ್ರು. ಸಿದ್ದರಾಮಯ್ಯಗೆ ನೈತಿಕತೆ ಇದ್ರೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯನವರ ವಿವೇಚನೆ ಎಲ್ಲಿ ಹೋಗಿತ್ತು? ತಕ್ಷಣ ನಿರ್ಧಾರ ತೆಗೆದುಕೊಂಡ್ರುಯ ದಕ್ಷ ಕಮೀಷನರ್ಗೆ ನೋವು ಕೊಟ್ಟಿದ್ದೀರಿ. ನೀವು ಮಾಡಿರುವ ಅಕ್ಷಮ್ಯ ಅಪರಾಧ ಇದು ಎಂಬುದಾಗಿ ಕೇಂದ್ರ ಸಚಿವ ವಿ.ಸೋವಣ್ಣ ಕಿಡಿಕಾರಿದರು.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು: ಮಾಜಿ ಸಂಸದ ಡಿ.ಕೆ ಸುರೇಶ್