ಬೆಂಗಳೂರು: ಕೋರ್ಟ್ ಗೆ ತೆರಳುತ್ತಿದ್ದ ತಂದೆ-ಮಗನನ್ನು ಅಪಹರಿಸಿ ಆಂಧ್ರದಲ್ಲಿ ಬರ್ಬರ ಕೊಲೆ ಮಾಡಿರುವಂತ ಘಟನೆ ನಡೆದಿದೆ.
ಬೆಂಗಳೂರಿನ ಕಾಡುಗೋಡಿ ಮೂಲದ ಉದ್ಯಮಿಗಳು ಕೋರ್ಟ್ ಗೆ ತೆರಳುತ್ತಿದ್ದಂತ ಸಂದರ್ಭದಲ್ಲಿ ದುಷ್ಕರ್ಮಿಗಳು ಅಪಹರಿಸಿದ್ದಾರೆ. ಅವರನ್ನು ಆಂಧ್ರಪ್ರದೇಶಕ್ಕೆ ಅಪಹರಿಸಿ ಕರೆದೊಯ್ದು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಂತ ಉದ್ಯಮಿ ವೀರಸ್ವಾಮಿ, ಪ್ರಶಾಂತ್ ರೆಡ್ಡಿಯನ್ನು ಕೊಲೆ ಮಾಡಲಾಗಿದೆ. ಕಾರ್ಪೊರೇಷನ್ ಚುನಾವಣೆಗೆ ನಿಲ್ಲೋದಕ್ಕೆ ವೀರಸ್ವಾಮಿ, ಪ್ರಶಾಂತ್ ಸಿದ್ಧತೆ ನಡೆಸಿದ್ದರು.
ಮಹದೇವಪುರ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಹತ್ಯೆ ಮಾಡಲಾಗಿದೆ. ಆಂಧ್ರದ ಬಾಪೆಟ್ಲ ಜಿಲ್ಲೆಯ ಚೆಕ್ ಬೌನ್ಸ್ ಕೇಸ್ ದಾಖಲಾಗಿತ್ತು.
BREAKING: ಒಂದೇ ಒಂದು ದಿನದ ಮಟ್ಟಿಗೆ ‘ಪೌರಾಯುಕ್ತ’ರನ್ನು ವರ್ಗಾವಣೆ: ರಾಜ್ಯ ಸರ್ಕಾರ ಆದೇಶ