ಬೆಂಗಳೂರು: ಬ್ಯುಸಿನೆಸ್ ವಿಚಾರವಾಗಿ ಮಾತನಾಡೋದಿದೆ ಎಂಬುದಾಗಿ ಯುವತಿಯನ್ನು ಕರೆಸಿಕೊಂಡ ಉದ್ಯಮಿಯೊಬ್ಬರು, ಆಕೆಯ ಮೇಲೆ ಅತ್ಯಾಚಾರವೆಸಗಿ ನೀಚ ಕೃತ್ಯ ನಡೆಸಿರೋ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬಂದಿದೆ. ಅಲ್ಲದೇ ಈ ಸಂಬಂಧ ಉದ್ಯಮಿಯ ವಿರುದ್ಧ ದೂರಿನ ಬಳಿಕ, ಎಫ್ಐಆರ್ ದಾಖಲಾಗಿದೆ.

BREAKING NEWS: ‘ಪೊಲೀಸ್ ಗೌರವ’ದೊಂದಿಗೆ ‘ಗಾಯಕ ಶಿವಮೊಗ್ಗ ಸುಬ್ಬಣ್ಣ’ ಅಂತ್ಯಕ್ರಿಯೆಗೆ ‘ರಾಜ್ಯ ಸರ್ಕಾರ’ ಆದೇಶ

ತಮಿಳುನಾಡಿನಿಂದ ಬೆಂಗಳೂರಿಗೆ ತಮ್ಮ ವ್ಯವಹಾರ ಸಂಬಂಧ ಆಗಮಿಸಿದ್ದಂತ ಉದ್ಯಮಿ ರಮೇಶ್ ಎಂಬಾತ, ಆಗಸ್ಟ್ 6ರಂದು ಯುವತಿಯೊಬ್ಬಳನ್ನು ಕರೆಸಿಕೊಂಡಿದ್ದನು. ಮೊದಲು ಕಬ್ಬನ್ ಪಾರ್ಕ್ ನಲ್ಲಿ ಬ್ಯುಸಿನೆಸ್ ಬಗ್ಗೆ ಮಾತನಾಡಿ, ಆ ಬಳಿಕ ಊಟಕ್ಕೆಂದು ಹೋಟೆಲ್ ಗೆ ಯುವತಿಯನ್ನು ಕರೆದೊಯ್ದಿದ್ದಾರೆ.

BIG NEWS: ಹೇ.. ಬಾಯಿ ಮುಚ್ಚಿಕೊಂಡು ಇರು.! ಇಲ್ಲ ಅಂದ್ರೆ ನಿನ್ನ ಎಲ್ಲಾ ಕತೆ ಬಿಚ್ಚಿಡುವೆ: ಸಚಿವ ಸುಧಾಕರ್‌ಗೆ ಟಗರು ಖಡಕ್ ಎಚ್ಚರಿಕೆ.!

ಹೋಟೆಲ್ ನಲ್ಲಿ ಊಟವಾದ ಬಳಿಕ ಕೆಲ ಹೊತ್ತು ಮಾತನಾಡಿರುವ ಉದ್ಯಮಿ ರಮೇಶ್,  ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಆಗಸ್ಟ್ 6ರಂದು ನಡೆದಿರೋ ಘಟನೆ ಸಂಬಂಧ ಮೂರು ದಿನಗಳ ಬಳಿಕ, ಯುವತಿಯು ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರಿಗೆ ಅತ್ಯಾಚಾರ ಸಂಬಂಧ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

BIGG NEWS : ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ : ಕಾಂಗ್ರೆಸ್ ಗೆ ತಿರುಗೇಟು ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಅಂದಹಾಗೇ ಅತ್ಯಾಚಾರಕ್ಕೆ ಒಳಗಾದಂತ ಯುವತಿ ಉದ್ಯಮಿ ರಮೇಶ್ ಅವರ ಸಂಬಂಧಿ ಎಂಬುದಾಗಿ ತಿಳಿದು ಬಂದಿದೆ. ಇದೀಗ ಯುವತಿಯ ದೂರಿನ ಅನ್ವಯ ಎಫ್ಐಆರ್ ದಾಖಲಿಸಿಕೊಂಡಿರುವಂತ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share.
Exit mobile version