ಬೆಂಗಳೂರು: ರೈಲ್ವೆ ಸಚಿವಾಲಯದ ಅನುಮೋದನೆಯಂತೆ, ರೈಲು ಸಂಖ್ಯೆ 16597/98 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಅಲಿಪುರ್ದ್ವಾರ್ ಜಂ. – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಅಮೃತ್ ಭಾರತ್ ಸಾಪ್ತಾಹಿಕ ಎಕ್ಸ್ಪ್ರೆಸ್ ಸೇವೆಯು ಎಸ್.ಎಂ.ವಿ.ಟಿ. ಬೆಂಗಳೂರು ನಿಲ್ದಾಣದಿಂದ 24 ಜನವರಿ 2026ರಿಂದ ಮತ್ತು ಅಲಿಪುರ್ದ್ವಾರ್ ನಿಲ್ದಾಣದಿಂದ 26 ಜನವರಿ 2026ರಿಂದ ಆರಂಭಗೊಳ್ಳಲಿದೆ.
ರೈಲು ಸಂಖ್ಯೆ 16597 ಎಸ್ಎಂವಿಟಿ ಬೆಂಗಳೂರು – ಅಲಿಪುರ್ದ್ವಾರ್ ಜಂ. ಸಾಪ್ತಾಹಿಕ ಅಮೃತ್ ಭಾರತ್ ಎಕ್ಸ್ಪ್ರೆಸ್ ಪ್ರತಿ ಶನಿವಾರ ಬೆಳಿಗ್ಗೆ 08.50 ಕ್ಕೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಟು ಸೋಮವಾರ ಬೆಳಿಗ್ಗೆ 10:25ಕ್ಕೆ ಅಲಿಪುರ್ದ್ವಾರ್ ಜಂ. ತಲುಪುವುದು.
ರೈಲು ಸಂಖ್ಯೆ 16598 ಅಲಿಪುರ್ದ್ವಾರ್ ಜಂ. – ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಅಮೃತ್ ಭಾರತ್ ಎಕ್ಸ್ಪ್ರೆಸ್ ಪ್ರತಿ ಸೋಮವಾರ ರಾತ್ರಿ 10:25 ಕ್ಕೆ ಅಲಿಪುರ್ದ್ವಾರ್ ಜಂ. ನಿಂದ ಹೊರಟು ಗುರುವಾರ ಬೆಳಿಗ್ಗೆ 3 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣವನ್ನು ತಲುಪುವುದು.
ಮಾರ್ಗಮಧ್ಯೆ ಈ ರೈಲುಗಳಿಗೆ ಎರಡೂ ದಿಕ್ಕುಗಳಲ್ಲಿ ಕೃಷ್ಣರಾಜಪುರಂ, ಬಂಗಾರಪೇಟೆ ಜಂಕ್ಷನ್, ಕುಪ್ಪಂ, ಜೋಲಾರ್ಪೇಟ್ಟೈ ಜಂಕ್ಷನ್, ಕಾಟ್ಪಾಡಿ, ರೇಣಿಗುಂಟಾ, ನೆಲ್ಲೂರು, ಓಂಗೋಲ್, ಚಿರಾಲ, ತೆನಾಲಿ ಜಂಕ್ಷನ್., ವಿಜಯವಾಡ ಜಂಕ್ಷನ್., ಏಲೂರು, ರಾಜಮಂಡ್ರಿ, ಸಮಲ್ಕೋಟ್, ಅನಕಪಲ್ಲಿ, ದುವ್ವಾಡ, ಸಿಂಹಾಚಲಂ ಉತ್ತರ, ಪೆಂಡುರ್ತಿ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಲಂ ರೋಡ್, ಪಲಾಸ, ಬ್ರಹ್ಮಪುರ್, ಬಾಲುಗಾಂವ್, ಖುರ್ದಾ ರೋಡ್, ಭುವನೇಶ್ವರ್, ಕಟಕ್, ಜಾಜ್ಪುರ್ ಕಿಯೋಂಜರ್ ರೋಡ್, ಭದ್ರಕ್, ಬಾಲಸೋರ್, ಖರಗ್ಪುರ್ ಜಂ., ಆಂದುಲ್, ದಾಂಕುಣಿ, ಬರ್ಧಮಾನ್, ಬೋಲ್ ಪುರ್ ಶಾಂತಿನಿಕೇತನ, ರಾಮ್ ಪುರ್ ಹಟ್, ಮಾಲ್ಡಾ ಟೌನ್, ಬಾರ್ಸೋಯಿ ಜಂಕ್ಷನ್, ಕಿಶನ್ಗಂಜ್, ಆಲುಆಬಾರಿ ರೋಡ್, ನ್ಯೂ ಜಲ್ಪೈಗುರಿ, ಸಿಲಿಗುರಿ ಜಂಕ್ಷನ್, ಬಿನ್ನಾಗುರಿ ಮತ್ತು ಹಾಸಿಮಾರ ನಿಲ್ದಾಣಗಳಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ.
ಈ ರೈಲಿನಲ್ಲಿ 8 ಸ್ಲೀಪರ್ ಕೋಚ್ಗಳು, 11 ದ್ವಿತೀಯ ದರ್ಜೆ ಕೋಚ್ಗಳು, 02 ಎಸ್ಎಲ್ಆರ್ಡಿ ಮತ್ತು ಒಂದು ಪ್ಯಾಂಟ್ರಿ ಕಾರ್ ಸೇರಿದಂತೆ ಒಟ್ಟು 22 ಬೋಗಿಗಳು ಇರುತ್ತವೆ.
ಬೆಂಗಳೂರು ಉತ್ತರ ಆರ್ಟಿಒ ಕಚೇರಿಯಲ್ಲಿ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ
ಸದನದಲ್ಲಿನ ಗೂಂಡಾಗಿರಿ ಹೊಣೆ ಹೊತ್ತು ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ








