Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮದ್ದೂರಿಗೆ ಮೆಟ್ರೋ, ಏರ್ಪೋರ್ಟ್ ಬೇಡ ರೈತರಿಗೆ ನೀರಾವರಿ ಯೋಜನೆ ಕೊಡಿ: ಸಿಎಂಗೆ ಶಾಸಕ ಕೆ.ಎಂ.ಉದಯ್ ಬೇಡಿಕೆ

28/07/2025 6:29 PM

ಬೆಂಗಳೂರು ವಿಮಾನ ನಿಲ್ದಾಣ ಸೇವಾ ನಿಯಮಿತ ವತಿಯಿಂದ ತಿರುಚಿನಾಪಳ್ಳಿ ವಿಮಾನ ನಿಲ್ದಾಣದಲ್ಲಿ ಓ’ವೆಟ್ರಾ ಲೌಂಜ್ ಪ್ರಾರಂಭ

28/07/2025 6:23 PM

ಇವತ್ತಿನ ದಿನ ತುಂಬಾನೇ ವಿಶೇಷ.! ನೀವು ಹೀಗೆ ಪೂಜಿಸಿದ್ರೆ ಶಿವನ ಕೃಪೆ ಸಿಗೋದು ಶತಸಿದ್ಧ

28/07/2025 6:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು ವಿಮಾನ ನಿಲ್ದಾಣ ಸೇವಾ ನಿಯಮಿತ ವತಿಯಿಂದ ತಿರುಚಿನಾಪಳ್ಳಿ ವಿಮಾನ ನಿಲ್ದಾಣದಲ್ಲಿ ಓ’ವೆಟ್ರಾ ಲೌಂಜ್ ಪ್ರಾರಂಭ
KARNATAKA

ಬೆಂಗಳೂರು ವಿಮಾನ ನಿಲ್ದಾಣ ಸೇವಾ ನಿಯಮಿತ ವತಿಯಿಂದ ತಿರುಚಿನಾಪಳ್ಳಿ ವಿಮಾನ ನಿಲ್ದಾಣದಲ್ಲಿ ಓ’ವೆಟ್ರಾ ಲೌಂಜ್ ಪ್ರಾರಂಭ

By kannadanewsnow0928/07/2025 6:23 PM

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಬಿಐಎಎಲ್‌) ಅಂಗಸಂಸ್ಥೆಯಾದ ಬೆಂಗಳೂರು ವಿಮಾನ ನಿಲ್ದಾಣ ಸೇವಾ ನಿಯಮಿತ (ಬಿಎಎಸ್‌ಎಲ್‌) ತಿರುಚಿರಾಪಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಲೌಂಜ್ ಓ’ವೆಟ್ರಾವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

ಸೌಕರ್ಯ, ಸಂಸ್ಕೃತಿ ಮತ್ತು ಅನುಕೂಲತೆಯ ಸಮ್ಮಿಶ್ರಣವನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾದ ಓ’ವೆಟ್ರಾ, ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಭವವನ್ನು ಹೆಚ್ಚಿಸಲು ಸಜ್ಜಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ಮೊದಲು ವಿಶ್ರಾಂತಿ, ಊಟ ಮತ್ತು ಅತ್ಯುತ್ತಮ ಅನುಭವ ಪಡೆಯುವ ವಿಧಾನವನ್ನು ಈ ಸೌಲಭ್ಯವನ್ನು ಒದಗಿಸಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ 080 ಲೌಂಜ್‌ಗಳು ಹಲವು ಉನ್ನತ ಪ್ರಶಸ್ತಿಗಳನ್ನು ಗಳಿಸಿದ ಸೇವಾ ಶ್ರೇಷ್ಠತೆಯ ಮೇಲೆ ನಿರ್ಮಿಸಲಾದ ಹೊಸ ಲೌಂಜ್, ಸೊಗಸಾದ ಮತ್ತು ಸ್ವಾಗತಾರ್ಹ ವಾತಾವರಣದೊಂದಿಗೆ ತಿರುಚ್ಚಿ ವಿಮಾನ ನಿಲ್ದಾಣದ ಆತಿಥ್ಯಕ್ಕೆ ಹೊಸ ಆಯಾಮ ನೀಡಲಿದೆ.

ತಿರುಚಿರಾಪಳ್ಳಿಯ ಸಾಂಸ್ಕೃತಿಕ ರಚನೆಗೆ ಅನುಗುಣವಾಗಿರುವ ಹೊಸ ಲೌಂಜ್, ಸ್ಥಳೀಯ ಕಲೆ, ವಾಸ್ತುಶಿಲ್ಪ ಮತ್ತು ವಸ್ತುಗಳಿಂದ ಪಡೆದ ವಿನ್ಯಾಸ ಅಂಶಗಳ ಮೂಲಕ ನಗರದ ಗುರುತನ್ನು ಪ್ರತಿಬಿಂಬಿಸುತ್ತದೆ. ಕೋಲಂ ಪ್ರೇರಿತ ಸ್ವಾಗತ ಗೋಡೆಯು ಅತಿಥಿಗಳನ್ನು ಸಂಪ್ರದಾಯಬದ್ಧವಾಗಿ ಸ್ವಾಗತಿಸುತ್ತದೆ. ಮೃದುವಾದ ನೀಲಿ ನೆಲಹಾಸು ಕಾವೇರಿ ನದಿಯ ಹರಿವನ್ನು ಪ್ರತಿಬಿಂಬಿಸುತ್ತದೆ. ಕೈಯಿಂದ ಮಾಡಿದ ಕಬ್ಬಿನ ಮತ್ತು ಬಿದಿರಿನ ಚಿಟೈ ವಿವರಗಳು ಮೇಲ್ಛಾವಣಿಯನ್ನು ಅಲಂಕರಿಸುತ್ತವೆ. ಟೆರಾಕೋಟಾ ಕಲೆ ಮತ್ತಿತರ ಅಂಶಗಳು ರಾಕ್‌ಫೋರ್ಟ್ ದೇವಾಲಯಕ್ಕೆ ಗೌರವ ಸಲ್ಲಿಸುವುದಲ್ಲದೇ, ಸ್ಥಳೀಯ ಪರಂಪರೆಯನ್ನು ಜಾಗತಿಕ ಆಕರ್ಷಣೆಯೊಂದಿಗೆ ಸಂಯೋಜಿಸುತ್ತವೆ. ದೇಶೀಯ ಟರ್ಮಿನಲ್‌ನಲ್ಲಿ 450 ಚದರ ಮೀಟರ್ ಮತ್ತು ಅಂತಾರಾಷ್ಟ್ರೀಯ ಟರ್ಮಿನಲ್‌ನಲ್ಲಿ 620 ಚದರ ಮೀಟರ್ ವಿಸ್ತೀರ್ಣದಲ್ಲಿರುವ ಒ’ವೆಟ್ರಾ ಲೌಂಜ್‌ನ್ನು ಸೌಕರ್ಯ, ಪ್ರವೇಶದ ಸಾಧ್ಯತೆ ಮತ್ತು ಅರ್ಥಗರ್ಭಿತ ಸೇವೆಗೆ ಆದ್ಯತೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ದೇಶೀಯ ವಿಭಾಗದಲ್ಲಿ 107 ಅತಿಥಿಗಳು ಮತ್ತು ಅಂತಾರಾಷ್ಟ್ರೀಯ ವಿಭಾಗದಲ್ಲಿ 150 ಅತಿಥಿಗಳಿಗೆ ವಿಶ್ರಾಂತಿ ಕೊಠಡಿಗಳು ಅವಕಾಶ ಕಲ್ಪಿಸುತ್ತವೆ. ಏಕಾಂಗಿ ಪ್ರಯಾಣಿಕರು ಮತ್ತು ಸಣ್ಣ ಗುಂಪುಗಳಿಗೆ ಅನುಗುಣವಾಗಿ ಲೌಂಜ್ ಆಸನ ವಿನ್ಯಾಸಗಳನ್ನು ಹೊಂದಿದೆ.

ಬಿಎಎಸ್‌ಎಲ್‌ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಜಾರ್ಜ್ ಕುರುವಿಲ್ಲಾ ಅವರು ಮಾತನಾಡಿ, “ಬಿಎಎಸ್‌ಎಲ್‌ ನಲ್ಲಿ ನಮ್ಮ ದೃಷ್ಟಿಕೋನವು ಕೆಲಸಕ್ಕಷ್ಟೇ ಸೀಮಿತವಾಗದೇ, ಆಯಾ ಪ್ರದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ಥಳಗಳನ್ನು ಮತ್ತು ಪ್ರಯಾಣದ ಅನುಭವವನ್ನು ಉನ್ನತೀಕರಿಸುವ ವಿಶ್ರಾಂತಿ ಕೊಠಡಿಗಳನ್ನು ರಚಿಸುವುದಾಗಿದೆ. ನಾವು ಮೊದಲ ಬಾರಿಗೆ ಬೆಂಗಳೂರಿನಿಂದ ಆಚೆ ಈ ದೃಷ್ಟಿಕೋನವನ್ನು ವಿಸ್ತರಿಸುತ್ತಿದ್ದೇವೆ. ಓ’ವೆಟ್ರಾ ನ ಪ್ರಾರಂಭವು ನಮ್ಮ ರೋಮಾಂಚಕಾರಿ ಹೊಸ ಅಧ್ಯಾಯವನ್ನು ಗುರುತಿಸುತ್ತದೆ. ಇದು ಚಿಂತನಶೀಲ, ಸಂಸ್ಕೃತಿಯಲ್ಲಿ ಬೇರೂರಿರುವ ಮತ್ತು ದೇಶಾದ್ಯಂತ ಆತಿಥ್ಯದ ಹೊಸ ಮಾನದಂಡವನ್ನು ರೂಪಿಸುವತ್ತ ಒಂದು ಹೆಜ್ಜೆಯಾಗಿದೆ” ಎಂದು ತಿಳಿಸಿದರು.

ಉನ್ನತ ಮಟ್ಟದ ಪಾಕಶಾಲೆಗಳಿಂದ ಹಿಡಿದು, ಅಂತರ್ಗತವಾದ- ಪ್ರಯಾಣಿಕರ ಕೇಂದ್ರಿತ ವಿನ್ಯಾಸದವರೆಗೆ ಓ’ವೆಟ್ರಾ ನ ಪ್ರತಿಯೊಂದು ಅಂಶವೂ ಸಹ ಚಿಂತನಶೀಲ ಆತಿಥ್ಯದ ನೀತಿಯನ್ನು ಪ್ರತಿಬಿಂಬಿಸುತ್ತವೆ. ಅತಿಥಿಗಳು ಲೈವ್‌ ಪಾಕಶಾಲೆ, ಬಫೆ, ಜಾಗತಿಕ ಮತ್ತು ಪ್ರಾದೇಶಿಕತೆಯ ಸಮ್ಮಿಲನದಿಂದ ಸಂಯೋಜನೆಗೊಂಡ ಬಾರ್ ಪ್ರದೇಶಗಳನ್ನು ಆನಂದಿಸಬಹುದಾಗಿದೆ. ತಾಜಾ ಹಾಗೂ ಸ್ಥಳೀಯ ಪದಾರ್ಥಗಳಿಂದ ರಚಿಸಲಾದ ಮೆನು, ಉಪಹಾರ, ಊಟ, ಭೋಜನ ಮತ್ತು ಅತ್ಯುತ್ತಮ ಚಹಾದಂತಹ ವೈವಿಧ್ಯಮಯ ಆಹಾರಗಳನ್ನು ಹೊಸ ಲೌಂಜ್ ಪೂರೈಸುತ್ತದೆ. ಅಲ್ಲದೇ, ಅತ್ಯುತ್ತಮ ವೈವಿಧ್ಯತೆ ಹಾಗೂ ಗುಣಮಟ್ಟ ಎರಡನ್ನೂ ಖಚಿತಪಡಿಸುತ್ತದೆ.

ವಿಶ್ರಾಂತಿ ಕೊಠಡಿಗಳು ಕಡಿಮೆ/ಸೀಮಿತ ಚಲನಶೀಲತೆ ಹೊಂದಿರುವ ಪ್ರಯಾಣಿಕರಿಗೆ ಅನುಗುಣವಾಗಿರುವ ಶೌಚಾಲಯಗಳೊಂದಿಗೆ ಸಂಪೂರ್ಣವಾಗಿ ಸಜ್ಜುಗೊಂಡಿವೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಶವರ್ ಸೌಲಭ್ಯಗಳು ಹೆಚ್ಚುವರಿಯಾಗಿ ಲಭ್ಯವಿದೆ. ಉಚಿತ ಅತಿ ವೇಗದ ವೈಫೈ ಎಲ್ಲೆಡೆ ಲಭ್ಯವಿದ್ದು, ಅತಿಥಿಗಳು ಸಂಪರ್ಕದಲ್ಲಿರಲು, ಕೆಲಸ ಮಾಡಲು ಅಥವಾ ಸುಲಭವಾಗಿ ವಿಶ್ರಾಂತಿ ಪಡೆಯಲು ಅನುವು ಮಾಡಿಕೊಡುತ್ತದೆ.

ತಿರುಚಿರಾಪಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರು ಬಿಎಎಸ್‌ಎಲ್‌ ಒದಗಿಸುವ ಮೀಟ್ & ಗ್ರೀಟ್ ಮತ್ತು ಪೋರ್ಟರ್ ಸೇವೆಯನ್ನು ಪಡೆಯುವ ಮೂಲಕ ತಮ್ಮ ವಿಮಾನ ನಿಲ್ದಾಣದ ಅನುಭವವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಈ ಸೇವೆಯನ್ನು ಕಾಯ್ದಿರಿಸಲು, ದಯವಿಟ್ಟು 080-66785566 / 8438825281 ಅನ್ನು ಸಂಪರ್ಕಿಸಿ ಅಥವಾ customerservices@baslservices.com ಗೆ ಇಮೇಲ್ ಮಾಡಬಹುದು.

BREAKING: ನಾನು ಎಲ್ಲಾ ಹೆಣ್ಮಕ್ಕಳ ಪರವಾಗಿ ಬಂದು ದೂರು ನೀಡಿದ್ದೇನೆ: ನಟಿ ರಮ್ಯಾ

ಸಾಗರದಲ್ಲಿ ವಕೀಲರ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್ ಆದೇಶ

Share. Facebook Twitter LinkedIn WhatsApp Email

Related Posts

ಮದ್ದೂರಿಗೆ ಮೆಟ್ರೋ, ಏರ್ಪೋರ್ಟ್ ಬೇಡ ರೈತರಿಗೆ ನೀರಾವರಿ ಯೋಜನೆ ಕೊಡಿ: ಸಿಎಂಗೆ ಶಾಸಕ ಕೆ.ಎಂ.ಉದಯ್ ಬೇಡಿಕೆ

28/07/2025 6:29 PM2 Mins Read

BREAKING: ನಾನು ಎಲ್ಲಾ ಹೆಣ್ಮಕ್ಕಳ ಪರವಾಗಿ ಬಂದು ದೂರು ನೀಡಿದ್ದೇನೆ: ನಟಿ ರಮ್ಯಾ

28/07/2025 6:19 PM1 Min Read

ಸಾಗರದಲ್ಲಿ ವಕೀಲರ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್ ಆದೇಶ

28/07/2025 6:12 PM1 Min Read
Recent News

ಮದ್ದೂರಿಗೆ ಮೆಟ್ರೋ, ಏರ್ಪೋರ್ಟ್ ಬೇಡ ರೈತರಿಗೆ ನೀರಾವರಿ ಯೋಜನೆ ಕೊಡಿ: ಸಿಎಂಗೆ ಶಾಸಕ ಕೆ.ಎಂ.ಉದಯ್ ಬೇಡಿಕೆ

28/07/2025 6:29 PM

ಬೆಂಗಳೂರು ವಿಮಾನ ನಿಲ್ದಾಣ ಸೇವಾ ನಿಯಮಿತ ವತಿಯಿಂದ ತಿರುಚಿನಾಪಳ್ಳಿ ವಿಮಾನ ನಿಲ್ದಾಣದಲ್ಲಿ ಓ’ವೆಟ್ರಾ ಲೌಂಜ್ ಪ್ರಾರಂಭ

28/07/2025 6:23 PM

ಇವತ್ತಿನ ದಿನ ತುಂಬಾನೇ ವಿಶೇಷ.! ನೀವು ಹೀಗೆ ಪೂಜಿಸಿದ್ರೆ ಶಿವನ ಕೃಪೆ ಸಿಗೋದು ಶತಸಿದ್ಧ

28/07/2025 6:21 PM

BREAKING: ನಾನು ಎಲ್ಲಾ ಹೆಣ್ಮಕ್ಕಳ ಪರವಾಗಿ ಬಂದು ದೂರು ನೀಡಿದ್ದೇನೆ: ನಟಿ ರಮ್ಯಾ

28/07/2025 6:19 PM
State News
KARNATAKA

ಮದ್ದೂರಿಗೆ ಮೆಟ್ರೋ, ಏರ್ಪೋರ್ಟ್ ಬೇಡ ರೈತರಿಗೆ ನೀರಾವರಿ ಯೋಜನೆ ಕೊಡಿ: ಸಿಎಂಗೆ ಶಾಸಕ ಕೆ.ಎಂ.ಉದಯ್ ಬೇಡಿಕೆ

By kannadanewsnow0928/07/2025 6:29 PM KARNATAKA 2 Mins Read

ಮಂಡ್ಯ : ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ ಮೆಟ್ರೋ, ಏರ್ಪೋರ್ಟ್ ಬೇಡ ರೈತರಿಗೆ ನೀರಾವರಿ ಯೋಜನೆಗಳನ್ನು ಮಾಡಿಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

ಬೆಂಗಳೂರು ವಿಮಾನ ನಿಲ್ದಾಣ ಸೇವಾ ನಿಯಮಿತ ವತಿಯಿಂದ ತಿರುಚಿನಾಪಳ್ಳಿ ವಿಮಾನ ನಿಲ್ದಾಣದಲ್ಲಿ ಓ’ವೆಟ್ರಾ ಲೌಂಜ್ ಪ್ರಾರಂಭ

28/07/2025 6:23 PM

BREAKING: ನಾನು ಎಲ್ಲಾ ಹೆಣ್ಮಕ್ಕಳ ಪರವಾಗಿ ಬಂದು ದೂರು ನೀಡಿದ್ದೇನೆ: ನಟಿ ರಮ್ಯಾ

28/07/2025 6:19 PM

ಸಾಗರದಲ್ಲಿ ವಕೀಲರ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್ ಆದೇಶ

28/07/2025 6:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.