Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಸಹಾಯವಾಣಿಗೆ ಭರ್ಜರಿ ರೆಸ್ಪಾನ್ಸ್: ಪ್ರತಿನಿತ್ಯ 1000ಕ್ಕೂ ಹೆಚ್ಚು ನಾಗರಿಕರ ಕರೆ

08/08/2025 5:49 PM

ಮುರಿದು ಬಿದ್ದ ವಿದ್ಯುತ್ ಕಂಬ, ಹಾನಿಗೊಳಗಾದ ಸೈನ್ ಬೋರ್ಡ್ ತೆರವಿಗೆ ಬಿಬಿಎಂಪಿ ಆದೇಶ

08/08/2025 5:43 PM

ಉಜ್ವಲ ಯೋಜನೆಗೆ 12 ಸಾವಿರ ಕೋಟಿ, ತೈಲ ಕಂಪನಿಗಳಿಗೆ 30 ಸಾವಿರ ಕೋಟಿ ಸಬ್ಸಿಡಿ : ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರ

08/08/2025 5:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮುರಿದು ಬಿದ್ದ ವಿದ್ಯುತ್ ಕಂಬ, ಹಾನಿಗೊಳಗಾದ ಸೈನ್ ಬೋರ್ಡ್ ತೆರವಿಗೆ ಬಿಬಿಎಂಪಿ ಆದೇಶ
KARNATAKA

ಮುರಿದು ಬಿದ್ದ ವಿದ್ಯುತ್ ಕಂಬ, ಹಾನಿಗೊಳಗಾದ ಸೈನ್ ಬೋರ್ಡ್ ತೆರವಿಗೆ ಬಿಬಿಎಂಪಿ ಆದೇಶ

By kannadanewsnow0908/08/2025 5:43 PM

ಬೆಂಗಳೂರು : ಇಂದು ಪೂರ್ವ ವಲಯ ವ್ಯಾಪ್ತಿಯ ಸಿ.ವಿ. ರಾಮನ್ ರಸ್ತೆಯಿಂದ ಮೆಖ್ರಿ ವೃತ್ತದ ದಿಕ್ಕಿನಲ್ಲಿ ಬಲಭಾಗದಲ್ಲಿರುವ ಮುರಿದು ಬಿದ್ದ ವಿದ್ಯುತ್ ಕಂಬಗಳು ಹಾಗೂ ಹಾನಿಗೊಂಡ ಸೂಚನಾ ಫಲಕಗಳನ್ನು ತಕ್ಷಣವೇ ತೆರವುಗೊಳಿಸಲು ಪೂರ್ವ ವಲಯ ಆಯುಕ್ತರಾದ ಶ್ರೀಮತಿ ಸ್ನೇಹಲ್ ಆರ್. ಅವರು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ನಡೆದ ಸ್ಥಳ ಪರಿಶೀಲನೆ ವೇಳೆ, ವಲಯ ಆಯುಕ್ತರು ಮೆಖ್ರಿ ವೃತ್ತ, ಹೆಚ್.ಕ್ಯೂ.ಟಿ.ಸಿ. ಹಾಗೂ ಪ್ಯಾಲೆಸ್ ರೋಡ್‌ ಪ್ರದೇಶಗಳಲ್ಲಿ ಕಂಡುಬಂದ ಸ್ವಚ್ಛತೆ ಮತ್ತು ನಿರ್ವಹಣಾ ಸಮಸ್ಯೆಗಳ ಕುರಿತು ಹಲವು ತುರ್ತು ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡಿದರು.

ಡ್ರೈನ್ ಸ್ಲ್ಯಾಬ್ ಸುತ್ತಲಿನ ಜಲ್ಲಿ‌ ತೆರವಿಗೆ ಸೂಚನೆ:

ಹೆಚ್.ಕ್ಯೂ.ಟಿ.ಸಿ. ಗೇಟಿನ ಸಮೀಪದ ಪ್ರದೇಶದಲ್ಲಿ ಹೊಸದಾಗಿ ಅಳವಡಿಸಲಾದ ಡ್ರೈನ್ ಸ್ಲ್ಯಾಬ್ ಸುತ್ತಲಿನ ಸಣ್ಣ ಕಲ್ಲುಗಳು ಹಾಗೂ ಜಲ್ಲಿಯನ್ನು ತಕ್ಷಣವೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮುಂದುವರೆದಂತೆ, ಸಾರ್ವಜನಿಕರ ಸುರಕ್ಷತೆಗಾಗಿ ಹೆಚ್.ಕ್ಯೂ.ಟಿ.ಸಿ ಮುಂಭಾಗದಲ್ಲಿನ ಫುಟ್‌ಪಾತ್ ಮರುಸ್ಥಾಪಿಸುವಂತೆ ವಲಯ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಿಮೆಂಟ್ ಬೌಲ್ಡರ್ ತೆರವಿಗೆ ಸೂಚನೆ

ಮೆಖ್ರಿ ವೃತ್ತದ ಫುಟ್‌ಪಾತ್ ಬಳಿಯ ಸಿಮೆಂಟ್ ಬೌಲ್ಡರ್‌ಗಳನ್ನು ತೆಗೆದು ಹಾಕಿ, ಪಾದಚಾರಿ ಮಾರ್ಗ ಮತ್ತು ಕರ್ಬ್‌ಗಳನ್ನು ಸ್ವಚ್ಛಗೊಳಿಸುವಂತೆ ಅವರು ನಿರ್ದೇಶಿಸಿದರು.

ಪ್ಯಾಲೆಸ್ ಗುಟ್ಟಹಳ್ಳಿ ಫ್ಲೈಓವರ್ ಸ್ವೀಪಿಂಗ್ ಕಾರ್ಯ

ಪ್ಯಾಲೆಸ್ ಗುಟ್ಟಹಳ್ಳಿ ಫ್ಲೈಓವರ್ ಮೇಲೆ ಹಾಗೂ ಕೆಳಭಾಗದಲ್ಲೂ ಸ್ವಚ್ಛತಾ ಕಾರ್ಯಗಳನ್ನು ನಿರಂತರವಾಗಿ ನಡೆಸುವಂತೆ ಹಾಗೂ ಅವುಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಂದುವರೆದಂತೆ, ಪೋರ್ಶೆ ಶೋರೂಮ್‌ ಎದುರು ಭಾಗದಲ್ಲಿರುವ ಅನುಪಯುಕ್ತ ತಂತಿಗಳು, ತ್ಯಾಜ್ಯ, ಕಸ ಮತ್ತು ಮುರಿದ ಸಾಮಗ್ರಿಗಳನ್ನು ತೆಗೆದು ಹಾಕಿ ಸಾರ್ವಜನಿಕರಿಗೆ ಅಡೆತಡೆಯಿಲ್ಲದ ಪಾದಾಚಾರಿ ಮಾರ್ಗ ಖಚಿತಪಡಿಸಲು ಸೂಚಿಸಿದರು.

ರಸ್ತೆಗಳು ಮತ್ತು ಪಾದಚಾರಿ ಮಾರ್ಗದ ಮೇಲಿನ ಜಲ್ಲಿ ಕಲ್ಲಿನ ತೆರವಿಗೆ ಸೂಚನೆ

ರಸ್ತೆಯ ಮೇಲಿನ ಹಾಗೂ ಪಾದಚಾರಿ ಮಾರ್ಗದಲ್ಲಿನ ಜಲ್ಲಿ, ಸಣ್ಣ ಕಲ್ಲುಗಳು, ಮಣ್ಣು ಮತ್ತು ತ್ಯಾಜ್ಯವನ್ನು ತೆರವುಗೊಳಿಸಲು ಪೌರಕಾರ್ಮಿಕರಿಗೆ ಸೂಚನೆ ನೀಡಿದರು.

ಪಾದಚಾರಿ ಮಾರ್ಗಕ್ಕೆ ಕೊಳಚೆ ನೀರು ಬಿಟ್ಟ ಅಪಾರ್ಟ್ಮೆಂಟ್ ಗೆ ನೋಟಿಸ್

ಸುಮೀತ್ ಅಪಾರ್ಟ್‌ಮೆಂಟ್‌ನಿಂದ ಪಾದಚಾರಿ ಮಾರ್ಗದ ಮೇಲೆ ಕೊಳಚೆ ನೀರು ಹರಿಯುತ್ತಿರುವುದನ್ನು ಗಮನಿಸಿದ ವಲಯ ಆಯುಕ್ತರು, ಅಪಾರ್ಟ್‌ಮೆಂಟ್ ವ್ಯವಸ್ಥಾಪಕರಿಗೆ ನೋಟಿಸ್ ನೀಡಲು ಸೂಚಿಸಿ, ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಕಾರ್ಯಪಾಲಕ ಅಭಿಯಂತರರು, ಮಾರ್ಷಲ್ಸ್, ಬಿಬಿಎಂಪಿ ಹಾಗೂ ಬಿ.ಎಸ್.ಡಬ್ಲ್ಯೂ.ಎಮ್.ಎಲ್ ನ ಅಧಿಕಾರಿಗಳು ಸೇರಿದಂತೆ ಇತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Share. Facebook Twitter LinkedIn WhatsApp Email

Related Posts

ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಸಹಾಯವಾಣಿಗೆ ಭರ್ಜರಿ ರೆಸ್ಪಾನ್ಸ್: ಪ್ರತಿನಿತ್ಯ 1000ಕ್ಕೂ ಹೆಚ್ಚು ನಾಗರಿಕರ ಕರೆ

08/08/2025 5:49 PM1 Min Read

BREAKING : ಒಂದೇ ಕಟ್ಟಡದಲ್ಲಿ 80 ಜನ ವೋಟರ್ಸ್ ವಾಸ : ರಾಹುಲ್ ಗಾಂಧಿ ಆರೋಪಕ್ಕೆ ಅರವಿಂದ ಲಿಂಬಾವಳಿ ತಿರುಗೇಟು

08/08/2025 5:25 PM1 Min Read

ಆರೋಗ್ಯಕರ ಜೀವನ ನಡೆಸಲು ವರಮಹಾಲಕ್ಷ್ಮಿ ವ್ರತದ ದಿನ ಈ ಮಂತ್ರ ಪಠಿಸಿ, ಆರೋಗ್ಯಕರ & ಸಮೃದ್ಧ ಜೀವನವನ್ನು ನಡೆಸಬಹುದು

08/08/2025 5:12 PM3 Mins Read
Recent News

ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಸಹಾಯವಾಣಿಗೆ ಭರ್ಜರಿ ರೆಸ್ಪಾನ್ಸ್: ಪ್ರತಿನಿತ್ಯ 1000ಕ್ಕೂ ಹೆಚ್ಚು ನಾಗರಿಕರ ಕರೆ

08/08/2025 5:49 PM

ಮುರಿದು ಬಿದ್ದ ವಿದ್ಯುತ್ ಕಂಬ, ಹಾನಿಗೊಳಗಾದ ಸೈನ್ ಬೋರ್ಡ್ ತೆರವಿಗೆ ಬಿಬಿಎಂಪಿ ಆದೇಶ

08/08/2025 5:43 PM

ಉಜ್ವಲ ಯೋಜನೆಗೆ 12 ಸಾವಿರ ಕೋಟಿ, ತೈಲ ಕಂಪನಿಗಳಿಗೆ 30 ಸಾವಿರ ಕೋಟಿ ಸಬ್ಸಿಡಿ : ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರ

08/08/2025 5:39 PM

“ಪ್ರಧಾನಿ ಮೋದಿ ಅವ್ರಿಗೆ ಸುಸ್ವಾಗತ” ; ‘SCO ಶೃಂಗಸಭೆ’ಗೆ ನಮೋ ಸ್ವಾಗತಿಸಿದ ‘ಚೀನಾ’

08/08/2025 5:32 PM
State News
KARNATAKA

ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಸಹಾಯವಾಣಿಗೆ ಭರ್ಜರಿ ರೆಸ್ಪಾನ್ಸ್: ಪ್ರತಿನಿತ್ಯ 1000ಕ್ಕೂ ಹೆಚ್ಚು ನಾಗರಿಕರ ಕರೆ

By kannadanewsnow0908/08/2025 5:49 PM KARNATAKA 1 Min Read

ಬೆಂಗಳೂರು: ಬಿಬಿಎಂಪಿ ಇ-ಖಾತಾ ಸಹಾಯವಾಣಿ 94806 83695 ಗೆ ಪ್ರತಿದಿನ ಸುಮಾರು 1000 ನಾಗರಿಕರ ಕರೆಗಳಿಗೆ ಇ-ಖಾತಾ ಸಹಾಯವಾಣಿ ಪ್ರತಿಕ್ರಿಯೆ…

ಮುರಿದು ಬಿದ್ದ ವಿದ್ಯುತ್ ಕಂಬ, ಹಾನಿಗೊಳಗಾದ ಸೈನ್ ಬೋರ್ಡ್ ತೆರವಿಗೆ ಬಿಬಿಎಂಪಿ ಆದೇಶ

08/08/2025 5:43 PM

BREAKING : ಒಂದೇ ಕಟ್ಟಡದಲ್ಲಿ 80 ಜನ ವೋಟರ್ಸ್ ವಾಸ : ರಾಹುಲ್ ಗಾಂಧಿ ಆರೋಪಕ್ಕೆ ಅರವಿಂದ ಲಿಂಬಾವಳಿ ತಿರುಗೇಟು

08/08/2025 5:25 PM

ಆರೋಗ್ಯಕರ ಜೀವನ ನಡೆಸಲು ವರಮಹಾಲಕ್ಷ್ಮಿ ವ್ರತದ ದಿನ ಈ ಮಂತ್ರ ಪಠಿಸಿ, ಆರೋಗ್ಯಕರ & ಸಮೃದ್ಧ ಜೀವನವನ್ನು ನಡೆಸಬಹುದು

08/08/2025 5:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.