ಮಂಡ್ಯ: ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ ₹ 1.60 ಲಕ್ಷ ಹಣವನ್ನು ಆನ್ ಲೈನ್ ವಂಚಕರು ಲಪಟಾಯಿಸಿರುವ ಘಟನೆ ಮದ್ದೂರಿನಲ್ಲಿ ಜರುಗಿದೆ.
ರಾಂಪುರ ಗ್ರಾಮದ ಸೋಮಶೇಖರ್ (69) ಎಂಬುವವರೇ ಹಣ ಕಳೆದುಕೊಂಡವರು. ಈ ಕುರಿತು ಮಂಡ್ಯ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮದ್ಧೂರಿನ ಕೆನರಾ ಬ್ಯಾಂಕ್’ನಲ್ಲಿ ಸೋಮಶೇಖರ್ ಅವರ ಹೊಂದಿದ್ದ ಉಳಿತಾಯ ಖಾತೆಗೆ ಗ್ರಾಹಕರ ಗಮನಕ್ಕೆ ಬಾರದೇ ಯುಪಿಐ ಸಂಪರ್ಕ ಸಾಧಿಸಿ ಆನ್ ಲೈನ್ ಮೂಲಕ ಹಂತ ಹಂತವಾಗಿ ₹ 1,60,798 ಹಣ ಕಟಾವು ಮಾಡಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
SHOCKING: ಧರ್ಮಸ್ಥಳದಲ್ಲಿ ಕೇಸ್: ಪಾಯಿಂಟ್ ನಂ.6ರಲ್ಲಿ ಸಿಕ್ಕ ಮೂಳೆ 40 ವರ್ಷ ಹಳೆಯದ್ದು