Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIGG NEWS ; ಟ್ರಂಪ್ ಬೆದರಿಕೆಗಳ ನಡುವೆ ರಷ್ಯಾದಿಂದ ‘ತೈಲ ಖರೀದಿ’ ಮುಂದುವರಿಸಿದ ಭಾರತ

02/08/2025 7:02 PM

BREAKING : ಅನಿಲ್ ಅಂಬಾನಿ ವಿರುದ್ಧದ 3,000 ಕೋಟಿ ರೂ. ಸಾಲ ವಂಚನೆ ಕೇಸ್’ನಲ್ಲಿ ದೊಡ್ಡ ಬೆಳವಣಿಗೆ ; ಮೊದಲ ಬಂಧನ

02/08/2025 6:45 PM

ಟೀ, ಕಾಫಿ ಕುಡಿಯೋದ್ರಿಂದ ಬಿಪಿ ಹೆಚ್ಚಾಗುತ್ತಾ.? ನಿಮ್ಮ ಅನುಮಾನಗಳಿಗೆ ಫುಲ್ ಕ್ಲ್ಯಾರಿಟಿ ಇಲ್ಲಿದೆ!

02/08/2025 6:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿಗರೇ ಗಮನಿಸಿ: ‘ಕೆರೆ, ಉದ್ಯಾನ, ಹಸಿರು ರಕ್ಷಣೆ’ಗೆ ಈ ಮೂರು ಆ್ಯಪ್ ಬಳಸಿ
KARNATAKA

ಬೆಂಗಳೂರಿಗರೇ ಗಮನಿಸಿ: ‘ಕೆರೆ, ಉದ್ಯಾನ, ಹಸಿರು ರಕ್ಷಣೆ’ಗೆ ಈ ಮೂರು ಆ್ಯಪ್ ಬಳಸಿ

By kannadanewsnow0914/01/2024 7:27 PM

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಉದ್ಯಾನಗಳು, ಕೆರೆಗಳ ಸಂರಕ್ಷಣೆಯ ಜೊತೆಗೆ ನಿರ್ವಹಣೆ ಮಾಡುವುದು ಬಹಳ ಮುಖ್ಯವಾಗಿದೆ. ಜೊತೆಗೆ ನಗರವನ್ನು ಹಸರೀಕರಣಗೊಳಿಸುವುದು ಬಹಳ ಅವಶ್ಯಕತೆಯಿದ್ದು, ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಉದ್ಯಾನಗಳು, ಕೆರೆಗಳು ಹಾಗೂ ಹಸಿರೀಕರಣದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಸಲುವಾಗಿ ಪಾಲಿಕೆ ವತಿಯಿಚಿದ “ಹಸಿರು ರಕ್ಷಕ”, “ಉದ್ಯಾನ ಮಿತ್ರ” ಹಾಗೂ “ಕೆರೆ ಮಿತ್ರ” ಎಂಬ ಮೂರು ಮೊಬೈಲ್ ಆಪ್ ಹಾಗೂ ವೆಬ್ ಲಿಂಕ್ ಸಿದ್ದಪಡಿಸಲಾಗಿದ್ದು, ಸಂಪೂರ್ಣ ವಿವರ ಇಂತಿವೆ.

1. ಹಸಿರು ರಕ್ಷಕ

ಕರ್ನಾಟಕ ರಾಜ್ಯದ ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ರವರು ಜೂನ್ 05ರ ವಿಶ್ವಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ಮಕ್ಕಳನ್ನು ಒಳಗೊಂಡು ಗಿಡಗಳನ್ನು ನೆಟ್ಟು ಪೋಷಿಸುವ ಬಗ್ಗೆ ನೀಡಿದ ಸಲಹೆಯ ಮೇರೆಗೆ “ಹಸಿರುರಕ್ಷಕ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದಾದ ಬೆಂಗಳೂರನ್ನು ಹಸಿರೀಕರಣ ಮಾಡಲು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಹಾಗೂ ಮರಗಳ ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿಗೊಳಿಸುವ ಉದ್ದೇಶದಲ್ಲಿ ಬಿಬಿಎಂಪಿ ವ್ಯಾಪ್ತಿಯ 224 ಶಾಲಾ-ಕಾಲೇಜುಗಳ ಸುಮಾರು 52.015 ವಿದ್ಯಾರ್ಥಿಗಳು ನಡೆಲಾದ ಗಿಡಗಳಿಗೆ ಟ್ಯಾಗ್ ಮಾಡಿಸಿ ಹಸಿರು ರಕ್ಷಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹಸಿರು ರಕ್ಷಕ ಮೊಬೈಲ್ ಆಪ್

ಮೊಬೈಲ್ ಆಪ್‌ನಲ್ಲಿ ಟ್ಯಾಗ್ ಮಾಡಲಾದ ವಿದ್ಯಾರ್ಥಿಗಳು ಟ್ಯಾಗ್ ಐಡಿಯೊಂದಿಗೆ ಲಾಗಿನ್ ಆಗಿ ತಮಗೆ ಟ್ಯಾಗ್ ಮಾಡಲಾದ ಗಿಡದ ವಿವರ, ಬೆಳವಣಿಗೆ ಬಗ್ಗೆ ಹಾಗೂ ಪೋಷಣೆಯ ಬಗ್ಗೆ ಮಾಹಿತಿ ಪಡೆದುಕೊಂಡು ಗಿಡದ ಪೋಷಣೆಯ ಬಗ್ಗೆ ದೂರುಗಳು ಹಾಗೂ ಸಲಹೆಗಳನ್ನು ನೀಡಿದ್ದಲ್ಲಿ ಸದರಿ ದೂರುಗಳನ್ನು ಸಂಯೋಜಕರು /ಗುತ್ತಿಗೆದಾರರು ಬಗೆಹರಿಸಿ ಮಾಹಿತಿಯನ್ನು ಆಪ್‌ನಲ್ಲಿ ನಮೂದಿಸಲಾಗುತ್ತದೆ. 03 ವರ್ಷಗಳ ಕಾಲ ಯಶಸ್ವಿಯಾಗಿ ಗಿಡಗಳನ್ನು ಉಸ್ತುವಾರಿ ಮಾಡಿದ ವಿದ್ಯಾರ್ಥಿಗಳಿಗೆ “ಹಸಿರುರಕ್ಷಕ”ಎಂಬ ಪ್ರಮಾಣ ಪತ್ರವನ್ನು ನೀಡಲಾಗುವುದು.

• ಮೊಬೈಲ್ ಆಪ್‌ನಲ್ಲಿ ಗುತ್ತಿಗೆದಾರರಿಂದ 2023-24ನೇ ಸಾಲಿನಲ್ಲಿ ನೆಡಲಾದ ಗಿಡಗಳನ್ನು ಜಿಯೋ ಟ್ಯಾಗ್ ಮಾಡಲಾಗಿರುತ್ತದೆ.

• ಶಾಲಾ-ಮಕ್ಕಳು ತಮಗೆ ಟ್ಯಾಗ್ ಮಾಡಿರುವ ಐ.ಡಿಯಿಂದ ಹಾಗೂ ನೀಡಲಾಗಿರುವ Pass-Word ಬಳಸಿ “ನನ್ನ ಮರವನ್ನು ಪರಿಶೀಲಿಸಿ(Go to my tree)” ಟ್ಯಾಬ್ ಬಳಸಿ ಗಿಡಗಳ ಬಳಿ ಹೋಗಿ ಗಿಡವನ್ನು ಪರಿಶೀಲಿಸಿ ಗಿಡದ ಬೆಳವಣಿಗೆಯ ಬಗ್ಗೆ ಮಾಹಿತಿಯನ್ನು ಆಪ್-ಲೋಡ್ ಮಾಡಬಹುದಾಗಿದೆ.

• ಗಿಡದ ಬೆಳವಣಿಗೆಯಲ್ಲಿ ಏನಾದರೂ ತೊಂದರೆ ಇದ್ದಲ್ಲಿ ಮರಗಳ ಮಾಹಿತಿಯನ್ನು ದಾಖಲಿಸಲಾಗುವುದು.

• ದಾಖಲಾತಿಯ ದೂರನ್ನು ಗುತ್ತಿಗೆದಾರರು ಹಾಗೂ ಸಮನ್ವಯರಿಗೆ ಅಲರ್ಟ್ ಕಳುಹಿಸಲಾಗುತ್ತದೆ.

• ಗುತ್ತಿಗೆದಾರರ ದೂರನ್ನು ಪರಿಶೀಲಿಸಿ ಸರಿಪಡಿಸಲಾಗುತ್ತದೆ. ನಂತರ ಅಲರ್ಟ್ ಕೊನೆಗೊಳ್ಳುತ್ತದೆ.

ಹಸಿರು ರಕ್ಷಕ ವೆಬ್ ಆಪ್

hasirurakshaka.bbmpgov.in ಸದರಿ ವೆಬ್‌ಆಪ್‌ನಲ್ಲಿ ಸಾರ್ವಜನಿಕರು 2023-24ನೇ ಸಾಲಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನೆಡಲಾದ ಗಿಡಗಳ ವಿವರಗಳನ್ನು ವೀಕ್ಷಿಸಬಹುದಾಗಿದೆ ಹಾಗೂ ಸದರಿ ಲಿಂಕ್‌ನಲ್ಲಿಯೇ ಪಾಲಿಕೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಸಹಾಯ2.0ಗೆ ನೇರವಾಗಿ ಹಸಿರು ರಕ್ಷಕ ಸಂಬಂಧಿಸಿದ ದೂರನ್ನು ಸಹ ನೀಡುವ ಅವಕಾಶವನ್ನು ಕಲ್ಪಿಸಲಾಗಿರುತ್ತದೆ.

2. ಉದ್ಯಾನ ಮಿತ್ರ

• ಉದ್ಯಾನವನ ನಿರ್ವಹಣೆಯನ್ನು ವಿಕ್ಷೀಸುವ ಮೊಬೈಲ್ ಆಪ್ಲೀಕೇಷನ್‌ನಲ್ಲಿ ದೈನಂದಿನ ನಿರ್ವಹಣೆ ಕಾಮಗಾರಿಯ ತಪಾಸಣೆಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಲ್ಪಿಸಲಾದ ಮೊಬೈಲ್ ಆಪ್ಲೀಕೇಷನ್ ಆಗಿದ್ದು, ಸದರಿ ಆಪ್ಲೀಕೇಷನ್‌ನಿಂದ ತುರ್ತಾಗಿ ದೈನಂದಿನ ನಿರ್ವಹಣೆಯ ಕುರಿತು ಮೇಲಾಧಿಕಾರಿಗಳು ಕಾಲಕಾಲಕ್ಕೆ ವರದಿಯನ್ನು ಪಡೆಯುವ ಅವಕಾಶ ಕಲ್ಪಿಸಲಾಗಿರುತ್ತದೆ.

• ಸದರಿ ಆಪ್ಲಿಕೇಷನ್ ಬಳಕೆಯನ್ನು ಉದ್ಯಾನವನಗಳ ಅಧಿಕಾರಿಗಳು, ನಿರ್ವಹಣೆಯ ಗುತ್ತಿಗೆದಾರರು, ನೋಡಲ್ ಅಧಿಕಾರಿಗಳು ಹಾಗೂ ಹಸಿರು ಮಿತ್ರರು (ಉದ್ಯಾನವನಗಳ ನಿರ್ವಹಣೆಯ ಉಸ್ತುವರಿಯನ್ನು ವಹಿಸಲು ಇಚ್ಚಿಸಿರುವ ಸಾರ್ವಜನಿಕರಲ್ಲಿ ಆಯ್ಕೆಯಾಗಿರುವ ಉದ್ಯಾನವನ ಮಿತ್ರರು).

• ತಪಾಸಣೆಯ ವೇಳೆಯಲ್ಲಿ ಆಪ್ಲಿಕೇಷನ್‌ನಲ್ಲಿ ಕಲ್ಪಿಸಲಾದ ವಿವಿಧ ನಿರ್ವಹಣೆಯ ಅಂಶಗಳಾದ ಒಳಹರಿವಿನ ಸ್ವಚ್ಚತೆ, ಕಸ ಗುಡಿಸುವಿಕೆ, ಕಳೆ ತೆಗೆಯುವುದು, ಲಾನ್ ಮೂವಿಂಗ್, ಟ್ರೀಮಿಂಗ್,ಮರಗಿಡಗಳಿಗೆ ನೀರುಣಿಸುವಿಕೆ ಇತರೆ ನಿರ್ವಹಣೆಯ ಕಾಮಗಾರಿಗಳ ಬಗ್ಗೆ ದಿನನಿತ್ಯ ಪರಿಶೀಲಿಸಿ ಛಾಯಾಚಿತ್ರಗಳೊಂದಿಗೆ ಆಪ್‌ಲೋಡ್ ಮಾಡುವ ಅವಕಾಶ ಕಲ್ಪಿಸಲಾಗಿದೆ.

• ಸದರಿ ಆಪ್ಲಿಕೇಷನ್ ಬಳಕೆಯಿಂದ ಮೇಲಾಧಿಕಾರಿಗಳು, ದೈನಂದಿನ ನಿರ್ವಹಣೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುವ ಅವಕಾಶವಿರುತ್ತದೆ. ಹಾಗೂ ತ್ವರಿತವಾಗಿ ಸಾರ್ವಜನಿಕರ ಅವಾಹಲುಗಳಿಗೆ ಪರಿಹಾರವನ್ನು ನೀಡಬಹುದಾಗಿರುತ್ತದೆ.

• ಉದ್ಯಾನವನಗಳ ನಿರ್ವಹಣೆಯ ಆಪ್ಲಿಕೇಷನ್ ಹಾಗೂ ವೆಬ್ ಸೈಟ್‌ನಲ್ಲೂ ಸಹ ಸಾರ್ವಜನಿಕರಿಗೆ ಅನುಕೂಲವಾಗುವಂತೆ https://pms.bbmpgov.in/park ಸದರಿ ಲಿಂಕ್‌ನ ಮೂಲಕ ಉದ್ಯಾನವನ ಸೌಲಭ್ಯಗಳ ಬಗ್ಗೆ ಮಾಹಿತಿ ಉದ್ಯಾನವನಗಳ ನಿರ್ವಹಣೆಯ ಕುರಿತು ಸಾರ್ವಜನಿಕರು ವಿಕ್ಷೀಸಬಹುದಾಗಿರುತ್ತದೆ. ಹಾಗೂ ಸದರಿ https://pms.bbmpgov.in/park ಲಿಂಕ್‌ನಲ್ಲಿಯೇ ಪಾಲಿಕೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಸಹಾಯ2.0ಗೆ ನೇರವಾಗಿ ಉದ್ಯಾನವನಗಳಿಗೆ ಸಂಬಂಧಿಸಿದ ದೂರನ್ನು ಸಹ ನೀಡುವ ಅವಕಾಶವನ್ನು ಕಲ್ಪಿಸಲಾಗಿರುತ್ತದೆ.

• ಒಂದು ತಿಂಗಳಿನ ತಪಾಸಣೆಯ ಮಾಹಿತಿಗಳನ್ನು ಯಾವುದೇ ಸಂದರ್ಭದಲ್ಲಿ ವೀಕ್ಷಿಸುವ ಅವಕಾಶವನ್ನು ಕಲ್ಸಿಸಲಾಗಿರುತ್ತದೆ.

• ಉದ್ಯಾನ ಮಿತ್ರ- ಉದ್ಯಾನ ನಿರ್ವಹಣೆಯ ಉಸ್ತುವಾರಿಯನ್ನು ವಹಿಸಲು ಇಚ್ಚಿಸಿರುವ ಸಾರ್ವಜನಿಕರ ಆಯ್ಕೆಗಾಗಿ ನೋಂದಣಿ ಪ್ರಕ್ರಿಯೆನ್ನು ಹೊಸದಾಗಿ ಆರಂಭಿಸಲಾಗುವುದು.

3. ಕೆರೆ ಮಿತ್ರ

• ಸದರಿ ಮೊಬೈಲ್ ಆಪ್ಲೀಕೇಷನ್‌ನಲ್ಲಿ ದೈನಂದಿನ ಕೆರೆ ನಿರ್ವಹಣೆ ಕಾಮಗಾರಿಯ ತಪಾಸಣೆಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಲ್ಪಿಸಲಾದ ಮೊಬೈಲ್ ಆಪ್ಲೀಕೇಷನ್ ಆಗಿದ್ದು ಸದರಿ ಆಪ್ಲೀಕೇಷನ್‌ನಿಂದ ತುರ್ತಾಗಿ ದೈನಂದಿನ ನಿರ್ವಹಣೆಯ ಕುರಿತು ಮೇಲಾಧಿಕಾರಿಗಳು ಕಾಲಕಾಲಕ್ಕೆ ವರದಿಯನ್ನು ಪಡೆಯುವ ಅವಕಾಶ ಕಲ್ಪಿಸಲಾಗಿರುತ್ತದೆ. ಸದರಿ ಆಪ್ಲಿಕೇಷನ್ ಬಳಕೆಯನ್ನು ಕೆರೆಯ ಅಧಿಕಾರಿಗಳು, ನಿರ್ವಹಣೆಯ ಗುತ್ತಿಗೆದಾರರು, ನೋಡಲ್ ಅಧಿಕಾರಿಗಳು ಹಾಗೂ ಕೆರೆ ಮಿತ್ರರು (ಕೆರೆಯ ನಿರ್ವಹಣೆಯ ಉಸ್ತುವರಿಯನ್ನು ವಹಿಸಲು ಇಚ್ಚಿಸಿರುವ ಸಾರ್ವಜನಿಕರಲ್ಲಿ ಆಯ್ಕೆಯಾಗಿರುವ ಕೆರೆ ಮಿತ್ರರು).

• ತಪಾಸಣೆಯ ವೇಳೆಯಲ್ಲಿ ಆಪ್ಲಿಕೇಷನ್ನಲ್ಲಿ ಕಲ್ಪಿಸಲಾದ ವಿವಿಧ ನಿರ್ವಹಣೆಯ ಅಂಶಗಳಾದ ಒಳಹರಿವಿನ ಸ್ವಚ್ಚತೆ, ಹೊರಹರಿವಿನ ಸ್ವಚ್ಚತೆ, ಪಥ ಗುಡಿಸುವಿಕೆ, ಕಳೆ ತೆಗೆಯುವುದು, ನೀರಿನಲ್ಲಿರುವ ಕಳೆಯನ್ನು ತೆಗೆಯುವುದು, ಲಾನ್ ಟ್ರೀಮಿಂಗ್, ಮರಗಿಡಗಳಿಗೆ ನೀರುಣಿಸುವಿಕೆ ಇತರೆ ನಿರ್ವಹಣೆಯ ಕಾಮಗಾರಿಗಳ ಬಗ್ಗೆ ದಿನನಿತ್ಯ ಪರಿಶೀಲಿಸಿ ಛಾಯಾಚಿತ್ರಗಳೊಂದಿಗೆ ಆಪ್ಲೋಡ್ ಮಾಡುವ ಅವಕಾಶ ಕಲ್ಪಿಸಲಾಗಿದೆ.

• ಸದರಿ ಆಪ್ಲಿಕೇಷನ್ ಬಳಕೆಯಿಂದ ಮೇಲಾಧಿಕಾರಿಗಳು, ದೈನಂದಿನ ನಿರ್ವಹಣೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುವ ಅವಕಾಶವಿರುತ್ತದೆ. ಹಾಗೂ ತ್ವರಿತವಾಗಿ ಸಾರ್ವಜನಿಕರ ಅವಾಹಲುಗಳಿಗೆ ಪರಿಹಾರವನ್ನು ನೀಡಬಹುದಾಗಿರುತ್ತದೆ.

• ಕೆರೆಗಳ ನಿರ್ವಹಣೆಯ ಆಪ್ಲಿಕೇಷನ್ ಹಾಗೂ ವೆಬ್ ಸೈಟ್ನಲ್ಲೂ ಸಹ ಸಾರ್ವಜನಿಕರಿಗೆ ಅನುಕೂಲವಾಗುವಂತೆ lms.bbmpgov.in/lake ಸದರಿ ಲಿಂಕ್ನ ಮೂಲಕ ಕೆರೆಯ ಸೌಲಭ್ಯಗಳ ಬಗ್ಗೆ ಮಾಹಿತಿ ಕೆರೆಯ ನಿರ್ವಹಣೆಯ ಕುರಿತು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯ ಹಾಜರಾತಿಯನ್ನು ಸಹ ಸಾರ್ವಜನಿಕರು ವಿಕ್ಷೀಸಬಹುದಾಗಿರುತ್ತದೆ. ಹಾಗೂ ಸದರಿ lms.bbmpgov.in/lake ಲಿಂಕ್‌ನಲ್ಲಿಯೇ ಪಾಲಿಕೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಸಹಾಯ 2.0ಗೆ ನೇರವಾಗಿ ಕೆರೆಗಳಿಗೆ ಸಂಬಂಧಿಸಿದ ದೂರನ್ನು ಸಹ ನೀಡುವ ಅವಕಾಶವನ್ನು ಕಲ್ಪಿಸಲಾಗಿರುತ್ತದೆ.

• ಒಂದು ತಿಂಗಳಿನ ತಪಾಸಣೆಯ ಮಾಹಿತಿಗಳನ್ನು ಯಾವುದೇ ಸಂಧರ್ಬದಲ್ಲಿ ವೀಕ್ಷಿಸುವ ಅವಕಾಶವನ್ನು ಕಲ್ಸಿಸಲಾಗಿರುತ್ತದೆ.

• ಕೆರೆ ಮಿತ್ರ- ಕೆರೆಯ ನಿರ್ವಹಣೆಯ ಉಸ್ತುವಾರಿಯನ್ನು ವಹಿಸಲು ಇಚ್ಚಿಸಿರುವ ಸಾರ್ವಜನಿಕರ ಆಯ್ಕೆಗಾಗಿ ನೋಂದಣಿ ಪ್ರಕ್ರಿಯೆನ್ನು ಹೊಸದಾಗಿ ಆರಂಭಿಸಲಾಗುವುದು.

‘ಮಾಶಾಸನ’ಕ್ಕಾಗಿ 5 ಕಿಮೀ ದೂರ ತೆವಳಿದ ‘ವೃದ್ಧೆ’: ‘ಗ್ಯಾರಂಟಿ’ ಕೊಟ್ಟ ಸರ್ಕಾರಕ್ಕೆ ಕರುಣೆ ಇಲ್ಲವೆಂದ ‘HDK’

‘ಹಾನಗಲ್ ಪ್ರಕರಣ’ ದುಡ್ಡು ಕೊಟ್ಟು ಮುಚ್ಚಿಹಾಕಲು ಯತ್ನ: ಮಾಜಿ ಸಿಎಂ ‘ಬೊಮ್ಮಾಯಿ’ ಗಂಭೀರ ಆರೋಪ

Share. Facebook Twitter LinkedIn WhatsApp Email

Related Posts

BREAKING: ರಾಜ್ಯದಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಮಹತ್ವದ ಕ್ರಮ: ಕಾರ್ಯಪಡೆ ಘಟಕ ರಚಿಸಿ ಸರ್ಕಾರ ಅಧಿಕೃತ ಆದೇಶ

02/08/2025 6:22 PM3 Mins Read

ಮತಗಳ್ಳತನ ಆರೋಪ: ಕಾಂಗ್ರೆಸ್ ವಿರುದ್ಧ ಸಂಸದ ಡಾ.ಸಿಎನ್ ಮಂಜುನಾಥ್ ವಾಗ್ಧಾಳಿ

02/08/2025 6:18 PM1 Min Read

ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ : ನ್ಯಾಯಾಲಯದ ತೀರ್ಪುನ್ನು ಗೌರವಿಸಬೇಕು – ಸಂಸದ ಡಾ. ಸಿ.ಎನ್.ಮಂಜುನಾಥ್

02/08/2025 6:17 PM1 Min Read
Recent News

BIGG NEWS ; ಟ್ರಂಪ್ ಬೆದರಿಕೆಗಳ ನಡುವೆ ರಷ್ಯಾದಿಂದ ‘ತೈಲ ಖರೀದಿ’ ಮುಂದುವರಿಸಿದ ಭಾರತ

02/08/2025 7:02 PM

BREAKING : ಅನಿಲ್ ಅಂಬಾನಿ ವಿರುದ್ಧದ 3,000 ಕೋಟಿ ರೂ. ಸಾಲ ವಂಚನೆ ಕೇಸ್’ನಲ್ಲಿ ದೊಡ್ಡ ಬೆಳವಣಿಗೆ ; ಮೊದಲ ಬಂಧನ

02/08/2025 6:45 PM

ಟೀ, ಕಾಫಿ ಕುಡಿಯೋದ್ರಿಂದ ಬಿಪಿ ಹೆಚ್ಚಾಗುತ್ತಾ.? ನಿಮ್ಮ ಅನುಮಾನಗಳಿಗೆ ಫುಲ್ ಕ್ಲ್ಯಾರಿಟಿ ಇಲ್ಲಿದೆ!

02/08/2025 6:30 PM

BREAKING: ರಾಜ್ಯದಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಮಹತ್ವದ ಕ್ರಮ: ಕಾರ್ಯಪಡೆ ಘಟಕ ರಚಿಸಿ ಸರ್ಕಾರ ಅಧಿಕೃತ ಆದೇಶ

02/08/2025 6:22 PM
State News
KARNATAKA

BREAKING: ರಾಜ್ಯದಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಮಹತ್ವದ ಕ್ರಮ: ಕಾರ್ಯಪಡೆ ಘಟಕ ರಚಿಸಿ ಸರ್ಕಾರ ಅಧಿಕೃತ ಆದೇಶ

By kannadanewsnow0902/08/2025 6:22 PM KARNATAKA 3 Mins Read

ಬೆಂಗಳೂರು: ರಾಜ್ಯದಲ್ಲಿ ಪ್ರತ್ಯೇಕವಾಗಿ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ ಘಟಕವನ್ನು ಸೃಜಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ…

ಮತಗಳ್ಳತನ ಆರೋಪ: ಕಾಂಗ್ರೆಸ್ ವಿರುದ್ಧ ಸಂಸದ ಡಾ.ಸಿಎನ್ ಮಂಜುನಾಥ್ ವಾಗ್ಧಾಳಿ

02/08/2025 6:18 PM

ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ : ನ್ಯಾಯಾಲಯದ ತೀರ್ಪುನ್ನು ಗೌರವಿಸಬೇಕು – ಸಂಸದ ಡಾ. ಸಿ.ಎನ್.ಮಂಜುನಾಥ್

02/08/2025 6:17 PM

BREAKING: ಮಾಜಿ ಸಚಿವ ವರ್ತೂರು ಪ್ರಕಾಶ್‌ ಅಪಹರಣದ ರೂವಾರಿ, ಭೂಗತ ಪಾತಕಿ ಕವಿರಾಜ್‌ ಅರೆಸ್ಟ್

02/08/2025 6:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.