Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀವು ನಿದ್ದೆ ಮಾಡುತ್ತಿದ್ರೂ ನಿಮ್ಮ ಆದಾಯ ಬೆಳೆಯುತ್ತೆ! ಹಣ ಗಳಿಸುವ 5 ಆನ್ಲೈನ್ ‘ಬ್ಯುಸಿನೆಸ್’ಗಳಿವು.!

24/10/2025 5:42 PM

ನಿಮಗಿದು ಗೊತ್ತಾ? ನಿಮ್ಮನ್ನು ಕೋಟ್ಯಾಧಿಪತಿ ಮಾಡುವ ಶಕ್ತಿ ‘ವೀಳ್ಯದೆಲೆ ಮತ್ತು ಅಡಿಕೆʼಗಿದೆ

24/10/2025 5:30 PM

ಪ್ರಯಾಣಿಕರ ಗಮನಕ್ಕೆ: ಈ ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿ ವಿಸ್ತರಣೆ

24/10/2025 5:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಬೆಂಗಳೂರು ವಿವಿಯಿಂದ ಯಡವಟ್ಟು: ನಾಳೆ ‘CA ಪರೀಕ್ಷೆ’ಯ ಸಮಯಕ್ಕೆ ಬಿಕಾಂ ಪರೀಕ್ಷೆ ನಿಗದಿ
KARNATAKA

BIG NEWS: ಬೆಂಗಳೂರು ವಿವಿಯಿಂದ ಯಡವಟ್ಟು: ನಾಳೆ ‘CA ಪರೀಕ್ಷೆ’ಯ ಸಮಯಕ್ಕೆ ಬಿಕಾಂ ಪರೀಕ್ಷೆ ನಿಗದಿ

By kannadanewsnow0915/01/2025 7:12 PM

ಬೆಂಗಳೂರು: ನಾಳೆ ಸಿಎ ಪರೀಕ್ಷೆ ನಡೆಸಲು ನಿಗದಿ ಪಡಿಸಲಾಗಿದೆ. ಇದೇ ಸಮಯಕ್ಕೆ ಇಂದು ದಿಢೀರ್ ಬೆಂಗಳೂರು ವಿವಿಯಿಂದ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟ ಎನ್ನುವಂತೆ ನಾಳೆ ಬಿಕಾಂ ಪರೀಕ್ಷೆಯನ್ನು ಇರಿಸಲಾಗಿದೆ. ಇದೀಗ ನಾಳೆ ಸಿಎ ಪರೀಕ್ಷೆ ಬರೆಯೋದೋ ಅಥವಾ ಬಿಕಾಂ ಪರೀಕ್ಷೆ ಬರೆಯೋದೋ ಎನ್ನುವ ಆತಂಕದಲ್ಲಿ ವಿದ್ಯಾರ್ಥಿಗಳನ್ನು ದೂಡಲಾಗಿದೆ.

ಈ ಕುರಿತಂತೆ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಅವರ ಪೋಸ್ಟ್ ಸಾರಾಂಶ ಈ ಕೆಳಕಂಡಂತಿದೆ.

ನನ್ನ ಮನೆಗೆ ಇಂದು ಸಂಜೆ ಓರ್ವ ಫಸ್ಟ್ ಬಿಕಾಂ ವಿದ್ಯಾರ್ಥಿನಿ ತನ್ನ ತಂದೆಯ ಜೊತೆ ಬಂದಿದ್ದರು. ನಾಳೆ ಬೆಳಗ್ಗೆ (16.1.2025, ಗುರುವಾರ) 9.30 ಗಂಟೆಗೆ ಅವರಿಗೆ ಮೊದಲನೇ ಬಿಕಾಂ ನ ಪರೀಕ್ಷೆ ನಿಗದಿಯಾಗಿತ್ತು. ಆಕೆ ಸಿಎ ಶಿಕ್ಷಣವನ್ನು ಸಹ ಪಡೆಯುತ್ತಿರುವುದರಿಂದ, ಸಿಎ ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿದೆ.

ಆದರೆ ಇಂದು ಸಂಜೆ 4:30ಗೆ ಆಕೆಯ ಮೊಬೈಲ್ ಗೆ ಬೆಂಗಳೂರು ನಗರ ವಿಶ್ವವಿದ್ಯಾನಿಲಯದಿಂದ ಈ ಕೆಳಕಂಡ ಮೆಸೇಜ್ ಬಂದು “ನಾಳೆ ಬೆಳಗ್ಗೆ ಒಂಬತ್ತು ಗಂಟೆಗೆ ನಿಗದಿಯಾಗಿದ್ದ ಪರೀಕ್ಷೆಯನ್ನು ನಾಳೆ ಮಧ್ಯಾಹ್ನ 2.00 ಗಂಟೆಗೆ (ಧಿಡೀರನೆ ಯಾವುದೇ ಕಾರಣವನ್ನೂ ನೀಡದೆ) ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ.

ವಿದ್ಯಾರ್ಥಿನಿ ಮತ್ತು ತಂದೆ ಗಾಬರಿಯಿಂದ ನನ್ನ ಬಳಿ ಬಂದರು. ನಾನು ತಕ್ಷಣ ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ. ಎಂಸಿ ಸುಧಾಕರ್ ಜೊತೆಗೆ ಮಾತನಾಡಿ ಈ ಗೊಂದಲವನ್ನು ವಿದ್ಯಾರ್ಥಿಗಳ ದೃಷ್ಟಿಯಿಂದ ಪರಿಹರಿಸಬೇಕೆಂದು ಕೋರಿಕೊಂಡೆ.

ಅವರು ದೆಹಲಿಯಲ್ಲಿದ್ದಿದ್ದರಿಂದ ಅವರ ಆಪ್ತ ಕಾರ್ಯದರ್ಶಿ ನನ್ನ ಜೊತೆ ಮಾತನಾಡಿ ಯುನಿವರ್ಸಿಟಿಯ ಕುಲಸಚಿವರೊಂದಿಗೆ ಕಾನ್ಫರೆನ್ಸ್ ಕಾಲ್ ತೆಗೆದುಕೊಂಡರು.

ಕುಲಸಚಿವರು ತಮ್ಮದೇ ಆದ ರೀತಿಯಲ್ಲಿ ನಾಳೆ ಬೆಳಗ್ಗೆ ಪರೀಕ್ಷೆಯ ಮುಂದೂಡಿಕೆ ಅವಶ್ಯಕವೆಂದು ವಾದಿಸಿದರು. ಹಾಗಾದರೆ ಈ ವಿದ್ಯಾರ್ಥಿನಿ ಮತ್ತು ಇಂತಹ ಹಲವು ವಿದ್ಯಾರ್ಥಿ ವಿದ್ಯಾರ್ಥಿನಿಯರು ನಾಳೆ ಒಂದೇ ಸಮಯದಲ್ಲಿ ನಡೆಯಲಿರುವ ಯಾವ ಪರೀಕ್ಷೆಯನ್ನು ತೆಗೆದುಕೊಳೋದು ಎಂಬುದಾಗಿ ಪ್ರಶ್ನಿಸಿದ್ದಾರೆ.

ಒಟ್ಟಾರೆಯಾಗಿ ಬೆಂಗಳೂರು ವಿವಿಯಿಂದ ಇಂದು ಮಧ್ಯಾಹ್ನ ದಿಢೀರ್ ನಾಳೆ 9 ಗಂಟೆಗೆ ನಿಗದಿಯಾಗಿದ್ದಂತ ಬಿಕಾಂ ಪರೀಕ್ಷೆಯನ್ನು ಸಿಎ ಪರೀಕ್ಷೆಯ ಮಧ್ಯಾಹ್ನ 2 ಗಂಟೆಯ ಸಮಯಕ್ಕೇ ಬದಲಾವಣೆ ಮಾಡಿ ಮಹಾ ಎಡವಟ್ಟು ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಆ ಮೂಲಕ ಗೊಂದಲಕ್ಕೆ ದೂಡಿ, ಭವಿಷ್ಯದ ಜೊತೆಗೆ ಚೆಲ್ಲಾಟ ಆಡುವಂತ ಕೆಲಸ ಮಾಡಿದೆ. ಈ ಕೂಡಲೇ ನಾಳೆಯ ಪರೀಕ್ಷೆಯ ಸಮಯವನ್ನು ಬದಲಾವಣೆ ಮಾಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ

BREAKING: ರಾಜ್ಯ ಸರ್ಕಾರದಿಂದ ಖಾಸಗಿ ಅನುದಾನಿತ ಪ್ರೌಢ ಶಾಲೆಗಳಲ್ಲಿನ ಬೋಧಕರ ಖಾಲಿ ಹುದ್ದೆ ಭರ್ತಿಗೆ ಗ್ರೀನ್ ಸಿಗ್ನಲ್

ಸಿದ್ದರಾಮಯ್ಯ ರಾಜೀನಾಮೆ ಕೊಡುವ ಕಾಲ ಸನ್ನಿಹಿತ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

Share. Facebook Twitter LinkedIn WhatsApp Email

Related Posts

ನಿಮಗಿದು ಗೊತ್ತಾ? ನಿಮ್ಮನ್ನು ಕೋಟ್ಯಾಧಿಪತಿ ಮಾಡುವ ಶಕ್ತಿ ‘ವೀಳ್ಯದೆಲೆ ಮತ್ತು ಅಡಿಕೆʼಗಿದೆ

24/10/2025 5:30 PM3 Mins Read

ಪ್ರಯಾಣಿಕರ ಗಮನಕ್ಕೆ: ಈ ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿ ವಿಸ್ತರಣೆ

24/10/2025 5:26 PM1 Min Read

‘ಶರಾವತಿ ಪಂಪ್ಡ್ ಸ್ಟೋರೇಜ್’ ಯೋಜನೆ: ಅ.27ರಂದು ಮಾಧ್ಯಮದವರೊಂದಿಗೆ ‘KPCL ಸಂವಾದ’ ನಿಗದಿ

24/10/2025 5:18 PM1 Min Read
Recent News

ನೀವು ನಿದ್ದೆ ಮಾಡುತ್ತಿದ್ರೂ ನಿಮ್ಮ ಆದಾಯ ಬೆಳೆಯುತ್ತೆ! ಹಣ ಗಳಿಸುವ 5 ಆನ್ಲೈನ್ ‘ಬ್ಯುಸಿನೆಸ್’ಗಳಿವು.!

24/10/2025 5:42 PM

ನಿಮಗಿದು ಗೊತ್ತಾ? ನಿಮ್ಮನ್ನು ಕೋಟ್ಯಾಧಿಪತಿ ಮಾಡುವ ಶಕ್ತಿ ‘ವೀಳ್ಯದೆಲೆ ಮತ್ತು ಅಡಿಕೆʼಗಿದೆ

24/10/2025 5:30 PM

ಪ್ರಯಾಣಿಕರ ಗಮನಕ್ಕೆ: ಈ ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿ ವಿಸ್ತರಣೆ

24/10/2025 5:26 PM

‘ಶರಾವತಿ ಪಂಪ್ಡ್ ಸ್ಟೋರೇಜ್’ ಯೋಜನೆ: ಅ.27ರಂದು ಮಾಧ್ಯಮದವರೊಂದಿಗೆ ‘KPCL ಸಂವಾದ’ ನಿಗದಿ

24/10/2025 5:18 PM
State News
KARNATAKA

ನಿಮಗಿದು ಗೊತ್ತಾ? ನಿಮ್ಮನ್ನು ಕೋಟ್ಯಾಧಿಪತಿ ಮಾಡುವ ಶಕ್ತಿ ‘ವೀಳ್ಯದೆಲೆ ಮತ್ತು ಅಡಿಕೆʼಗಿದೆ

By kannadanewsnow0924/10/2025 5:30 PM KARNATAKA 3 Mins Read

ವೀಳ್ಯದೆಲೆಯನ್ನು ಸಾಮಾನ್ಯವಾಗಿ ನಮ್ಮ ಮನೆಯಲ್ಲಿರುವ ಹಿರಿಯರು ತಿನ್ನುವುದನ್ನು ನೋಡಿದ್ದೇವೆ. ಆದರೆ ಇದನ್ನು ದೇವರಿಗೂ ಅರ್ಪಿಸಲಾಗುತ್ತದೆ ಎನ್ನುವುದು ಕೆಲವರಿಗೆ ಮಾತ್ರ ತಿಳಿದಿದೆ.…

ಪ್ರಯಾಣಿಕರ ಗಮನಕ್ಕೆ: ಈ ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿ ವಿಸ್ತರಣೆ

24/10/2025 5:26 PM

‘ಶರಾವತಿ ಪಂಪ್ಡ್ ಸ್ಟೋರೇಜ್’ ಯೋಜನೆ: ಅ.27ರಂದು ಮಾಧ್ಯಮದವರೊಂದಿಗೆ ‘KPCL ಸಂವಾದ’ ನಿಗದಿ

24/10/2025 5:18 PM

BIGG NEWS: ಕರ್ನಾಟಕ ಪೊಲೀಸರು ಕರ್ತವ್ಯದ ವೇಳೆ ಈ ‘ಮಾರ್ಗಸೂಚಿ ಪಾಲನೆ’ ಕಡ್ಡಾಯ…!

24/10/2025 5:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.