ಬೆಂಗಳೂರು :  60 ದಿನಗಳಲ್ಲಿ ರಾಜ್ಯಾದ್ಯಂತ 50 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಕಾರ್ಡ್ ವಿತರಿಸಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. 

ಈ  ಬಗ್ಗೆ ಟ್ವೀಟ್ ಮಾಡಿರುವ ಸುಧಾಕರ್  ರಾಜ್ಯದ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಸಮರೋಪಾದಿಯಲ್ಲಿ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಕಾರ್ಡ ಗಳನ್ನು ವಿತರಿಸಿರುವ ನನ್ನ ಕರೆಗೆ ಓಗೊಟ್ಟು ಕಳೆದ 60 ದಿನಗಳಲ್ಲಿ ರಾಜ್ಯಾದ್ಯಂತ 50 ಲಕ್ಷಕ್ಕೂ ಹೆಚ್ಚು ಕಾರ್ಡ್ ವಿತರಿಸಿರುವ ಗ್ರಾಮ ಒನ್ ತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಶೇ.100%ರಷ್ಟು ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸುವ ನಿಟ್ಟಿನಲ್ಲಿ ಗ್ರಾಮ ಒನ್ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಮುಂದಿನ 15 ದಿನಗಳಲ್ಲಿ ಒಂದು ಕೋಟಿ ಕಾರ್ಡ್ ವಿತರಣೆ ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದಿದ್ದಾರೆ.

Kitchen tips : ಹಣ್ಣು, ತರಕಾರಿಗಳು ಹಾಳಾಗದಂತೆ ಸ್ಟೋರ್ ಮಾಡುವುದು ಹೇಗೆ ? ಇಲ್ಲಿದೆ ಅಗತ್ಯ ಮಾಹಿತಿ

ರಸ್ತೆ ಗುಂಡಿಯಿಂದಾದ ಸಾವುಗಳನ್ನು “ಸರ್ಕಾರಿ ಕೊಲೆ” ಎಂದೇ ಪರಿಗಣಿಸಬೇಕು – ಕಾಂಗ್ರೆಸ್ ಆಗ್ರಹ

 

ಭಕ್ತರೇ ಗಮನಿಸಿ : ಸೂರ್ಯ ಗ್ರಹಣವಿದ್ದರೂ ನಾಳೆ ಈ ದೇವಸ್ಥಾನಗಳಲ್ಲಿ ದೇವರ ‘ದರ್ಶನ ಭಾಗ್ಯ’ ಲಭ್ಯ

Share.
Exit mobile version