Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಯಸ್ಸಾದಂತೆ ಬದಲಾಗುವ ಮೂತ್ರನಾಳದ ಆರೋಗ್ಯ: 30, 40 ಮತ್ತು 50ರ ಹರೆಯದವರು ಗಮನಿಸಬೇಕಾದ ಅಂಶಗಳು

02/04/2026 5:08 AM

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರೇ ಗಮನಿಸಿ : 2025-26ನೇ ಸಾಲಿನ ವರ್ಗಾವಣೆಗೆ ಅಂತಿಮ `ವೇಯ್ಟೆಡ್ ಅಂಕ’ ಪ್ರಕಟ.!

02/04/2026 4:28 AM

ವಿದ್ಯಾರ್ಥಿಗಳೇ ಗಮನಿಸಿ : ಕರ್ನಾಟಕದ ಅಧಿಕೃತ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ, ಪ್ರವೇಶಾತಿಗೂ ಮುನ್ನ ಇಲ್ಲಿ ಚೆಕ್ ಮಾಡಿ !

02/04/2026 4:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿಕಾರಿಪುರದಲ್ಲಿ ಯಶಸ್ವಿಯಾಗಿ ನಡೆದ ‘ಮಕ್ಕಳ ಹಕ್ಕು, ಬಾಲ್ಯ ವಿವಾಹ ನಿಷೇಧ’ ಕುರಿತ ಅರಿವು ತರಬೇತಿ ಕಾರ್ಯಕ್ರಮ
KARNATAKA

ಶಿಕಾರಿಪುರದಲ್ಲಿ ಯಶಸ್ವಿಯಾಗಿ ನಡೆದ ‘ಮಕ್ಕಳ ಹಕ್ಕು, ಬಾಲ್ಯ ವಿವಾಹ ನಿಷೇಧ’ ಕುರಿತ ಅರಿವು ತರಬೇತಿ ಕಾರ್ಯಕ್ರಮ

By kannadanewsnow0916/03/2025 7:57 PM

ಶಿವಮೊಗ್ಗ: ಪ್ರಸ್ತುದ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿರುವಂತ ಬಾಲಾಪರಾಧ, ಮಕ್ಕಳ ಹಕ್ಕುಗಳ ಉಲ್ಲಂಘನೆ, ಜಾಗೃತಿಯಂತ ಅರಿವು ಕಾರ್ಯಗಾರವನ್ನು ಶಿಕಾರಿಪುರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಯಶಸ್ವಿಯಾಗಿ ನಡೆಸಿಕೊಡಲಾಯಿತು.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಸ್ತ್ರೀ ಶಕ್ತಿ ಭವನದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಒಂದು ದಿನ ಕಾರ್ಯಾಗಾರ ನಡೆಯಿತು. ಬಾಲ್ಯ ನ್ಯಾಯ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮಕ್ಕಳ ಹಕ್ಕುಗಳ ರಕ್ಷಣೆ, ಪೋಕ್ಸೋ ಕಾಯ್ದೆ, ಆನ್ ಲೈನ್ ಸುರಕ್ಷತೆ, ಸಾಮಾಜಿಕ ಜಾಲತಾಣ, ಅಪರಾಧಗಳ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿಗಳಿಗೆ, ಸಾರ್ಜನಿಕರಿಗೆ, ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.

ಈ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದಂತ ಶಿಕಾರಿಪುರ ನಗರ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶರತ್.ಹೆಚ್ ಅವರು, ಕಾನೂನು ಉಲ್ಲಂಘನೆ ಮಾಡಿ ಮಕ್ಕಳನ್ನು ಶಾಲೆಯನ್ನು ಬಿಡಿಸೋದು, ಕೂಲಿ ಕೆಲಸ ಮಾಡಿಸೋದು ಸರಿಯಲ್ಲ. ಹೀಗೆ ಒಂದು ವೇಳೆ ಮಾಡಿದ್ರೆ ಮಕ್ಕಳ ಸಹಾಯವಾಣಿ ಕರೆ ಮಾಡಿದ್ರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ನಮ್ಮ ಠಾಣೆಯಲ್ಲೂ ಈ ಬಗ್ಗೆ ಕೆಲ ಪ್ರಕರಣಗಳು ದಾಖಲಾಗಿದ್ದಾವೆ. ಬಾಲ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ಅಪರಾಧವಾಗಿದೆ ಅಂತ ತಿಳಿಸಿಕೊಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದಂತ ಶಿಕಾರಿಪುರದ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುನೀತಾ ಮೂಡೇರ ಅವರು, ಬಾಲ್ಯ ವಿವಾಹ ಕಾನೂನಿನಲ್ಲಿ ಅಪರಾಧ. 18 ವರ್ಷದೊಳಗಿನ ಮಕ್ಕಳನ್ನು ವಿವಾಹ ಮಾಡುವುದು ಕಾನೂನಿನಡಿ ಅಪರಾಧವಾಗಿದೆ. ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಬಾಲ್ಯ ವಿವಾಹ ಸಂಬಂಧ ಸಾರ್ವಜನಿಕರು ದೂರು ನೀಡಬಹುದು ಎಂದರು.

ಮುಖ್ಯ ಅತಿಥಿಗಳಾಗಿ ಭಾಗಿಯಾಗಿ ಮಾತನಾಡಿದಂತ ಶಿಕಾರಿಪುರ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಗೀತಾ.ಪಿ ಮಕ್ಕಳನ್ನು ಶಾಲೆಗೆ ಕಳುಹಿಸಿ. ಯಾವುದೇ ಕಾರಣಕ್ಕೂ ಶಾಲೆ ಬಿಡಿಸಬೇಡಿ. ನಿಮ್ಮ ಮಕ್ಕಳು ಚೆನ್ನಾಗಿ ಓದಿದರೇ ಅವರೇ ನಿಮ್ಮ ಆಸ್ತಿ ಇದ್ದಂತೆ. ಆ ನಿಟ್ಟಿನಲ್ಲಿ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡುವಂತೆ ಪೋಷಕರಿಗೆ ಕಿವಿಮಾತು ಹೇಳಿದರು.

ತರಬೇತಿಗಾರಾಗಿ ಆಗಮಿಸಿದ್ದಂತ ಶಿವಮೊಗ್ಗ ಈಸ್ಟ್ ಟ್ರಾಫಿಕ್ ಪೊಲೀಸ್ ಠಾಣೆಯ ಮಂಜುನಾಥ ಪಾಟೀಲ್, ಮಕ್ಕಳ ಅಪರಾಧಗಳ ಕಾನೂನು, ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿಕೊಟ್ಟರು. ಮಕ್ಕಳನ್ನು ಬಂಧಿಸಿ ತಕ್ಷಣ ಅದನ್ನು ಅರೆಸ್ಟ್ ಅಂತ ಹೇಳಬಾರದು. ಅಬ್ಸರ್ವೇಷನ್ ಅಂತ ಕರೆಯ ಬೇಕು. ಮಕ್ಕಳ ಹಕ್ಕುಗಳನ್ನು ಉಲ್ಲಂಘನೆ ಮಾಡಿದರೇ ಏನೆಲ್ಲ ಶಿಕ್ಷೆ ಆಗಲಿದೆ ಎಂಬುದನ್ನು ತಿಳಿಸಿಕೊಟ್ಟರು.

ಬೆಂಗಳೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಶಿವಮೊಗ್ಗ ಜಿಲ್ಲಾ ಪಂಚಾಯ್ತಿ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿವಮೊಗ್ಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದಂತ ಒಂದು ದಿನ ಕಾರ್ಯಕ್ರಮವಾಗಿದೆ.

ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಜ್ಯೋತಿ ಶೆರ್ವೆಗಾರ್ ನಿರೂಪಿಸಿದರೇ, ಕ್ಷೇತ್ರ ಕಾರ್ಯಕರ್ತ ಪುನೀತ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ಶಿಕಾರಿಪುರ ಆಪ್ತ ಸಮಾಲೋಚಕಿ ಅರ್ಪಿತಾ.ಎನ್ ಅವರು ವಂದಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ಟೀಕೆ ಪ್ರಜಾಪ್ರಭುತ್ವದ ಆತ್ಮ, ನಾನು ಅದನ್ನು ಸ್ವಾಗತಿಸುತ್ತೇನೆ: ಪ್ರಧಾನಿ ಮೋದಿ | PM Modi in Lex Fridman Podcast

SHOCKING : ರಾಜ್ಯದಲ್ಲಿ ಅಮಾನವೀಯ ಘಟನೆ : ಕಲ್ಬುರ್ಗಿಯಲ್ಲಿ ‘ಮಂಗಳಮುಖಿಯನ್ನು’ ಬೆತ್ತಲೆಗೊಳಿಸಿ, ತಲೆ ಬೋಳಿಸಿ ಹಲ್ಲೆ!

Share. Facebook Twitter LinkedIn WhatsApp Email

Related Posts

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರೇ ಗಮನಿಸಿ : 2025-26ನೇ ಸಾಲಿನ ವರ್ಗಾವಣೆಗೆ ಅಂತಿಮ `ವೇಯ್ಟೆಡ್ ಅಂಕ’ ಪ್ರಕಟ.!

02/04/2026 4:28 AM1 Min Read

ವಿದ್ಯಾರ್ಥಿಗಳೇ ಗಮನಿಸಿ : ಕರ್ನಾಟಕದ ಅಧಿಕೃತ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ, ಪ್ರವೇಶಾತಿಗೂ ಮುನ್ನ ಇಲ್ಲಿ ಚೆಕ್ ಮಾಡಿ !

02/04/2026 4:25 AM1 Min Read

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ `ದಿನಗೂಲಿ ನೌಕರರಿಗೆ’ ಗುಡ್ ನ್ಯೂಸ್ : 5 ಲಕ್ಷ ರೂ. ವರೆಗೆ ನಗದು ರಹಿತ `ಆರೋಗ್ಯ ಯೋಜನೆ’ ಜಾರಿ.!

02/04/2026 4:15 AM1 Min Read
Recent News

ವಯಸ್ಸಾದಂತೆ ಬದಲಾಗುವ ಮೂತ್ರನಾಳದ ಆರೋಗ್ಯ: 30, 40 ಮತ್ತು 50ರ ಹರೆಯದವರು ಗಮನಿಸಬೇಕಾದ ಅಂಶಗಳು

02/04/2026 5:08 AM

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರೇ ಗಮನಿಸಿ : 2025-26ನೇ ಸಾಲಿನ ವರ್ಗಾವಣೆಗೆ ಅಂತಿಮ `ವೇಯ್ಟೆಡ್ ಅಂಕ’ ಪ್ರಕಟ.!

02/04/2026 4:28 AM

ವಿದ್ಯಾರ್ಥಿಗಳೇ ಗಮನಿಸಿ : ಕರ್ನಾಟಕದ ಅಧಿಕೃತ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ, ಪ್ರವೇಶಾತಿಗೂ ಮುನ್ನ ಇಲ್ಲಿ ಚೆಕ್ ಮಾಡಿ !

02/04/2026 4:25 AM

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ `ದಿನಗೂಲಿ ನೌಕರರಿಗೆ’ ಗುಡ್ ನ್ಯೂಸ್ : 5 ಲಕ್ಷ ರೂ. ವರೆಗೆ ನಗದು ರಹಿತ `ಆರೋಗ್ಯ ಯೋಜನೆ’ ಜಾರಿ.!

02/04/2026 4:15 AM
State News
KARNATAKA

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರೇ ಗಮನಿಸಿ : 2025-26ನೇ ಸಾಲಿನ ವರ್ಗಾವಣೆಗೆ ಅಂತಿಮ `ವೇಯ್ಟೆಡ್ ಅಂಕ’ ಪ್ರಕಟ.!

By kannadanewsnow5702/04/2026 4:28 AM KARNATAKA 1 Min Read

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರ 2025-26ನೇ ಸಾಲಿನ ಸಾಮಾನ್ಯ ವರ್ಗಾವಣೆಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ಪ್ರಕಟಣೆ…

ವಿದ್ಯಾರ್ಥಿಗಳೇ ಗಮನಿಸಿ : ಕರ್ನಾಟಕದ ಅಧಿಕೃತ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ, ಪ್ರವೇಶಾತಿಗೂ ಮುನ್ನ ಇಲ್ಲಿ ಚೆಕ್ ಮಾಡಿ !

02/04/2026 4:25 AM

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ `ದಿನಗೂಲಿ ನೌಕರರಿಗೆ’ ಗುಡ್ ನ್ಯೂಸ್ : 5 ಲಕ್ಷ ರೂ. ವರೆಗೆ ನಗದು ರಹಿತ `ಆರೋಗ್ಯ ಯೋಜನೆ’ ಜಾರಿ.!

02/04/2026 4:15 AM

ಕರ್ನಾಟಕ `ಖಾದಿ ಮಂಡಳಿ ನೌಕರರಿಗೆ’ ಗುಡ್ ನ್ಯೂಸ್ : 7ನೇ ವೇತನ ಆಯೋಗದ ಶಿಫಾರಸ್ಸು ಪೂರ್ವಾನ್ವಯ ಜಾರಿಗೆ ಸರ್ಕಾರ ಆದೇಶ

02/04/2026 4:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.