Author: kannadanewsnow57

ನ್ಯೂಜಿಲೆಂಡ್‌ನ ಆಲ್‌ರೌಂಡರ್ ಡೌಗ್ ಬ್ರೇಸ್‌ವೆಲ್ ತಮ್ಮ 35ನೇ ವಯಸ್ಸಿನಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ಅವರ ವೃತ್ತಿಜೀವನಕ್ಕೆ ಅಂತ್ಯ ಹಾಡಿದೆ. ಐಸಿಸಿ ವೆಬ್‌ಸೈಟ್ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಮೂಲಕ ಸೋಮವಾರ ಈ ಘೋಷಣೆಯನ್ನು ದೃಢಪಡಿಸಲಾಯಿತು, ಡೌಗ್ ಬ್ರೇಸ್‌ವೆಲ್ ನಿವೃತ್ತಿಯನ್ನು ಅಧಿಕೃತವಾಗಿ ಗುರುತಿಸಲಾಗಿದೆ. ಬ್ರೇಸ್‌ವೆಲ್ 2011 ಮತ್ತು 2023 ರ ನಡುವೆ ಮೂರು ಸ್ವರೂಪಗಳಲ್ಲಿ ಬ್ಲ್ಯಾಕ್‌ಕ್ಯಾಪ್ಸ್ ಅನ್ನು ಪ್ರತಿನಿಧಿಸಿದ್ದಾರೆ. ಈ ಅವಧಿಯಲ್ಲಿ, ಅವರು ನ್ಯೂಜಿಲೆಂಡ್ ಪರ 28 ಟೆಸ್ಟ್, 21 ಏಕದಿನ ಮತ್ತು 20 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಬೌಲಿಂಗ್ ಮೂಲಕ, ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 74 ಸೇರಿದಂತೆ 120 ಅಂತರರಾಷ್ಟ್ರೀಯ ವಿಕೆಟ್‌ಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು. ಅವರು ಬ್ಯಾಟಿಂಗ್‌ನಲ್ಲೂ ಕೊಡುಗೆ ನೀಡಿದರು, ಎಲ್ಲಾ ಸ್ವರೂಪಗಳಲ್ಲಿ 915 ರನ್ ಗಳಿಸಿದರು, ಆಗಾಗ್ಗೆ ಒತ್ತಡದ ಸಂದರ್ಭಗಳಲ್ಲಿ ಹೆಜ್ಜೆ ಹಾಕಿದರು. ಡೌಗ್ ಬ್ರೇಸ್‌ವೆಲ್ ನಿವೃತ್ತಿಯು ನ್ಯೂಜಿಲೆಂಡ್‌ನ ವಿಶ್ವಾಸಾರ್ಹ ಸೀಮ್-ಬೌಲಿಂಗ್ ಆಲ್-ರೌಂಡರ್‌ನ…

Read More

ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ವೃಂದದಲ್ಲಿ ಖಾಲಿ ಇರುವ ವಿವಿಧ ವೃಂದದ 877 ಅರೆ ವೈದ್ಯಕೀಯ ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ (1)ರ ಪತ್ರಗಳಲ್ಲಿ ಕೋರಲಾದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ವೃಂದದಲ್ಲಿ ಖಾಲಿ ಇದ್ದ ವಿವಿಧ ವೃಂದದ 877 ಅರವೈದ್ಯಕೀಯ ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ಮತ್ತು ಸಿಬ್ಬಂದಿ ಮತ್ತು CA ಸುಧಾರಣೆ ಇಲಾಖೆಗಳೊಂದಿಗೆ ಸಮಾಲೋಚಿಸಲಾಗಿರುತ್ತದೆ. ಅರೆ ಅದರನ್ವಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಕಲ್ಯಾಣ ಕರ್ನಾಟಕ ವೃಂದದಲ್ಲಿ ಖಾಲಿಯಿರುವ ವಿವಿಧ ವೃಂದದ 877 ವೈದ್ಯಕೀಯ ಹುದ್ದೆಗಳನ್ನು ನೇರನೇಮಕಾತಿಯಿಂದ ಭರ್ತಿ ಮಾಡಲು ಆರ್ಥಿಕ ಇಲಾಖೆಯು ಸಹಮತಿ ನೀಡದಿರುವ ಹಿನ್ನೆಲೆಯಲ್ಲಿ Q : DPAR 6 PLX 2012, ໖: 06.11.2013 2 2 10(2) ಇಲಾಖೆಯ…

Read More

ಬೆಂಗಳೂರು : ರಾಜ್ಯ ಸರ್ಕಾರವು ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ಶಾಲೆಗಳ ಶಿಕ್ಷಕರಿಗೆ ಸಿಹಿಸುದ್ದಿ ನೀಡಿದ್ದು, ಜೇಷ್ಠತಾ ಪಟ್ಟಿಗೆ ಅನುಗುಣವಾಗಿ ಖಾಲಿ ಇರುವ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗಳಿಗೆ ಬಡ್ತಿ ನೀಡಲು ರಾಜ್ಯಾದ್ಯಂತ ಏಕಕಾಲಕ್ಕೆ ಕೌನ್ಸಿಲಿಂಗ್ ನಡೆಸಲು ಮಹತ್ವದ ಆದೇಶ ಹೊರಡಿಸಲಾಗಿದೆ. ಹೌದು, ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಹಿರಿಯ ಮುಖ್ಯ ಶಿಕ್ಷಕರಾಗಿ ಬಡ್ತಿ ನೀಡುವ ಪ್ರಕ್ರಿಯೆಯನ್ನು ಜನವರಿ 1ರಿಂದ ಆರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಮುಖ್ಯ ಶಿಕ್ಷಕರ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿದ ಬಳಿಕ ವಿವಿಧ ಹಂತದ ಪ್ರಕ್ರಿಯೆ ಪೂರ್ಣಗೊಳಿಸಿ ಕೌನ್ಸೆಲಿಂಗ್ ಮೂಲಕ ಬಡ್ತಿ ನೀಡಿ ಸ್ಥಳ ನಿಯೋಜನೆ ಮಾಡಲಾಗುವುದು. ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರಂತರ ಪ್ರಯತ್ನದ ಫಲವಾಗಿ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪ್ರಕ್ರಿಯೆಗೆ ಮರು ಚಾಲನೆ ನೀಡಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಸುಮಾರು 2000ಕ್ಕೂ ಹೆಚ್ಚು ಮುಖ್ಯ ಶಿಕ್ಷಕರಿಗೆ ಬಡ್ತಿ ಭಾಗ್ಯ ಸಿಗುವ ಸಾಧ್ಯತೆ ಇದೆ. ಜ. 31ರೊಳಗೆ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು…

Read More

ನಾವು ಒಂದು ಪ್ರಮುಖ ಕೆಲಸದ ಮೇಲೆ ಹೊರಗೆ ಹೋದಾಗ ಅಥವಾ ಮನೆಯಲ್ಲಿದ್ದಾಗ, ಕೆಲವು ಅಸಾಮಾನ್ಯ ಘಟನೆಗಳು ಸಂಭವಿಸುತ್ತವೆ. ಇವುಗಳನ್ನು ನಾವು ಕೇವಲ ಕಾಕತಾಳೀಯ ಎಂದು ತಳ್ಳಿಹಾಕುತ್ತೇವೆ. ಆದರೆ ವಿದ್ವಾಂಸರು ಇವು ಮುಂಬರುವ ತೊಂದರೆಗಳ ಮುಂಚಿನ ಎಚ್ಚರಿಕೆಗಳು ಎಂದು ಹೇಳುತ್ತಾರೆ. ಆ ಚಿಹ್ನೆಗಳು ಯಾವುವು ಎಂಬುದನ್ನು ತಿಳಿಯೋಣ. ಮನೆಯೊಳಗೆ ಕಂಡುಬರುವ ಅಶುಭ ಚಿಹ್ನೆಗಳು ಮನೆಯಲ್ಲಿ ಅರಿಶಿನ ಅಥವಾ ಕುಂಕುಮ ನೆಲದ ಮೇಲೆ ಬೀಳುವುದು ಅಥವಾ ಹಾಲು ನೆಲದ ಮೇಲೆ ಚೆಲ್ಲುವುದನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಕನ್ನಡಿ ಅಥವಾ ಗಾಜಿನ ವಸ್ತುಗಳು ಇದ್ದಕ್ಕಿದ್ದಂತೆ ಒಡೆದರೆ, ಅದು ಏನಾದರೂ ನಷ್ಟದ ಸಂಕೇತವಾಗಿದೆ. ಆರತಿ ಮಾಡುವಾಗ ಅಥವಾ ಪೂಜೆಯ ಸಮಯದಲ್ಲಿ ಎಣ್ಣೆ ಮತ್ತು ಬತ್ತಿ ಸರಿಯಾಗಿದ್ದರೂ ದೀಪ ಪದೇ ಪದೇ ಆರಿಹೋದರೆ, ದೈವಿಕ ಶಕ್ತಿಯ ಕೊರತೆಯಿದೆ ಎಂದರ್ಥ. ಮನೆಯಲ್ಲಿ ಸಾಲುಗಟ್ಟಿ ಕೆಂಪು ಇರುವೆಗಳು ಕಂಡುಬಂದರೆ, ಅದು ಆರ್ಥಿಕ ತೊಂದರೆಗಳು ಅಥವಾ ಜಗಳಗಳಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಪ್ರಾಣಿಗಳು ಮತ್ತು ಪಕ್ಷಿಗಳ ನಡವಳಿಕೆ ಮನೆಯ ಮುಂದೆ ನಾಯಿಗಳು ವಿಚಿತ್ರವಾಗಿ…

Read More

ನವದೆಹಲಿ : ಉನ್ನವು ಅತ್ಯಾಚಾರ ದೋಷಿಗೆ ಶಿಕ್ಷೆ ಕಡಿತ ಮತ್ತು ಜಾಮೀನು ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್ ಆದೇಶಕ್ಕೆ ಇದೀಗ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಅಪರಾಧಿ ಕುಲದೀಪ್ ಸೇಂಗಾರ್ ಬಿಡುಗಡೆ ಮಾಡದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ ಕುಟುಂಬಕ್ಕೆ ಇದೀಗ ನಿರಾಳ ಆಗಿದ್ದು ಸುಪ್ರೀಂ ಕೋರ್ಟ್ ನಲ್ಲಿ ಸಿಬಿಐ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಿತು ಈ ವೇಳೆ ಕುಲದೀಪ್ ಸಿಂಗಾರ್ ನನ್ನು ಬಿಡುಗಡೆ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತು. ಸುಪ್ರೀಂ ಕೋರ್ಟ್ ನಲ್ಲಿ ಸಿಬಿಐ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಿತು ಅಪರಾಧಿಗೆ ಜಾಮೀನು ನೀಡಿದ್ದನು ಪ್ರಶ್ನಿಸಿ ಸಿ ಬಿ ಐ ಮೇಲ್ಮನೆ ಅರ್ಜಿ ಸಲ್ಲಿಸಿತ್ತು. ಉತ್ತರಪ್ರದೇಶದ ನಾವು ಅತ್ಯಾಚಾರ ಪ್ರಕರಣ ಗಂಭೀರವಾದದ್ದು ಅಪರಾಧಿ ಕುಲದೀಪ್ ಶಂಕರ್ ಗೆ ಜಾಮೀನು ನೀಡಬಾರದು ಎಂದು ಸಿಬಿಐ ಮನವಿ ಮಾಡಿಕೊಂಡಿತ್ತು. ಸಿಬಿಐ ವಾದವನ್ನು ಇದೀಗ ಸುಪ್ರೀಂ ಕೋರ್ಟ್ ಪುರಸ್ಕರಿಸಿದ್ದು, ಆರೋಪಿ ಕುಲದೀಪ್ ಸೆಂಗಾರ್ ಬಿಡುಗಡೆ ಮಾಡದಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.…

Read More

ನಿರ್ದಿಷ್ಟ ಭಂಗಿಯು ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ಹೇಳಿದೆ.ಈ ಅಧ್ಯಯನವನ್ನು ಅಮೆರಿಕ ಮತ್ತು ಯುರೋಪಿನ 10,000 ಮಹಿಳೆಯರ ಮೇಲೆ ನಡೆಸಲಾಯಿತು. ವೈದ್ಯರ ಎಚ್ಚರಿಕೆ: ಸ್ತ್ರೀರೋಗತಜ್ಞರು ಸುರಕ್ಷಿತ ವಿಧಾನಗಳನ್ನು ಅನುಸರಿಸಲು ಮತ್ತು ಅಸಾಮಾನ್ಯ ಭಂಗಿಗಳ ಬಗ್ಗೆ ಜಾಗರೂಕರಾಗಿರಲು ಸಲಹೆ ನೀಡುತ್ತಾರೆ. HPV ಸೋಂಕು: ಗರ್ಭಕಂಠದ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾದ HPV ವೈರಸ್ ಅಸುರಕ್ಷಿತ ಲೈಂಗಿಕತೆಯ ಮೂಲಕ ವೇಗವಾಗಿ ಹರಡುತ್ತದೆ. ತಡೆಗಟ್ಟುವ ಕ್ರಮಗಳು: ಸುರಕ್ಷಿತ ಲೈಂಗಿಕತೆ, ನಿಯಮಿತ ವೈದ್ಯಕೀಯ ಪರೀಕ್ಷೆಗಳು (ಪ್ಯಾಪ್ ಸ್ಮೀಯರ್) ಮತ್ತು HPV ಲಸಿಕೆಯಿಂದ ಈ ಅಪಾಯವನ್ನು ಕಡಿಮೆ ಮಾಡಬಹುದು. ಕ್ಯಾನ್ಸರ್ ಅಪಾಯ ಏಕೆ ಹೆಚ್ಚಾಗುತ್ತದೆ? ತೀವ್ರ ಒತ್ತಡ: ಕೆಲವು ಭಂಗಿಗಳಲ್ಲಿ ಗರ್ಭಕಂಠದ ಮೇಲಿನ ಅತಿಯಾದ ಒತ್ತಡದಿಂದ ಮೈಕ್ರೋಟ್ರಾಮಾ ಉಂಟಾಗಬಹುದು. ವೈರಸ್ ಹರಡುವಿಕೆ: ಪಾಲುದಾರನಿಗೆ HPV ಇದ್ದರೆ, ಆಳವಾದ ನುಗ್ಗುವಿಕೆಯಿಂದಾಗಿ ವೈರಸ್ ನೇರವಾಗಿ ಗರ್ಭಕಂಠವನ್ನು ತಲುಪಬಹುದು. ಹಾರ್ಮೋನುಗಳ ಅಸಮತೋಲನ: ಅಸಾಮಾನ್ಯ ದೈಹಿಕ ಬದಲಾವಣೆಗಳಿಂದಾಗಿ ಕೆಲವೊಮ್ಮೆ ಹಾರ್ಮೋನುಗಳ ಸಮತೋಲನವು ಅಡ್ಡಿಪಡಿಸಬಹುದು. ಅಪಾಯಕಾರಿ ಚಿಹ್ನೆಗಳನ್ನು ಹೇಗೆ ಗುರುತಿಸುವುದು? ಅಸಹಜ ರಕ್ತಸ್ರಾವ:…

Read More

ಜ್ಯೋತಿಷ್ಯದಲ್ಲಿ ವಾಸ್ತು ಬಹಳ ಮುಖ್ಯ. ಯಾವುದೇ ಕೆಲಸ ಮಾಡಿದರೂ ವಾಸ್ತು ನಿಯಮಗಳನ್ನು ಪಾಲಿಸಬೇಕು ಎಂದು ಹೇಳಲಾಗುತ್ತದೆ. ಆದಾಗ್ಯೂ, ತಿಳಿಯದೆ ಮಾಡುವ ಕೆಲವು ಕೆಲಸಗಳು ಮನೆಯೊಳಗೆ ಘರ್ಷಣೆಗೆ ಕಾರಣವಾಗಬಹುದು. ಆದರೆ ಮನೆಯಲ್ಲಿ ಯಾವ ರೀತಿಯ ಸಮಸ್ಯೆಗಳು ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ನೋಡೋಣ. ರಾತ್ರಿಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು, ಮನೆಗೆ ಶಾಂತಿ ತರಲು ಮತ್ತು ಕುಟುಂಬವನ್ನು ಸಂತೋಷಪಡಿಸಲು ಏನು ಮಾಡಬಹುದು. ರಾತ್ರಿಯಲ್ಲಿ ಮನೆಯನ್ನು ಗುಡಿಸಬಾರದು ಎಂದು ಹೇಳಲಾಗುತ್ತದೆ. ವಿಶೇಷವಾಗಿ ಸಂಜೆ 6 ಗಂಟೆಯ ನಂತರ ಮನೆಯನ್ನು ಗುಡಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವರು ಇದನ್ನು ನಿರ್ಲಕ್ಷಿಸಿ ರಾತ್ರಿಯಲ್ಲಿ ಮನೆಯನ್ನು ಗುಡಿಸುತ್ತಾರೆ. ಆದಾಗ್ಯೂ, ರಾತ್ರಿಯಲ್ಲಿ ಮನೆಯನ್ನು ಗುಡಿಸುವುದು ಸಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಮನೆಯೊಳಗೆ ಘರ್ಷಣೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ರಾತ್ರಿಯಲ್ಲಿ ಮನೆಯನ್ನು ಗುಡಿಸುವವರಿಗೆ ಅವರ ಮನೆಯಲ್ಲಿ ಹೆಚ್ಚಿನ ಆರ್ಥಿಕ ಸಮಸ್ಯೆಗಳಿವೆ ಎಂದು ತಜ್ಞರು ಹೇಳುತ್ತಾರೆ. ಕೆಲವರು ಮಲಗುವ ಕೋಣೆಯಲ್ಲಿ ತಿಳಿದೋ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಅವರು…

Read More

ಬೆಂಗಳೂರು : ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಮತ್ತು ನೌಕರರ ಕರ್ತವ್ಯ ಹಾಗೂ ಜವಾಬ್ದಾರಿಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ. ಪೌರಾಯುಕ್ತರ/ಮುಖ್ಯಾಧಿಕಾರಿಗಳ ಕರ್ತವ್ಯಗಳು ಮತ್ತು ಅಧಿಕಾರ ಹಾಗೂ ಜವಾಬ್ದಾರಿಗಳು: ಕರ್ನಾಟಕ ಪೌರಸಭೆಗಳ ಅಧಿಕಾರ ಪ್ರತ್ಯಾಯೋಜನೆ. ಮತ್ತು ಅಧಿಕಾರಿಗಳ ಮತ್ತು ನೌಕರರುಗಳ ಕರ್ತವ್ಯಗಳ ನಿಯಮಾವಳಿ 1973ರ ನಿಯಮ 7. 8. 9 ಮತ್ತು 10 ರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಕರ್ನಾಟಕ ಪೌರಸಭೆಗಳ ಅಧಿನಿಯಮ 19640 50 330, 332, 338, 339, 340, 341, 342, 344, 345, 346, 347, 2 348 ಅವುಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ತರುವಾಯ ಸರ್ಕಾರವು ಸುತ್ತೊಲೆ ಸಂಖ್ಯೆ HUD.15.TMD 95 ದಿನಾಂಕ 18-2-1995ರ ಮೂಲಕ ಈ ಕುರಿತು ಸ್ಪಷ್ಟವಾಗಿ ತಿಳಿಸಿದೆ. 1. ಕಛೇರಿಯ ಸಮಸ್ತ ಪ್ರಮುಖ ದಾಖಲೆ ಪತ್ರಗಳನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಳ್ಳುವುದು 2. ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಯವರ ಮೇಲ್ವಿಚಾರಣೆ ಮಾಡುವುದು. 3. ದೈನಂದಿನ ಲೆಕ್ಕ ಪತ್ರಗಳ ದಾಖಲೆಗಳ ನಿರ್ವಹಣೆ ಮೇಲ್ವಿಚಾರಣೆ ಮಾಡುವುದು. 4.…

Read More

ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪೋಷಕರ ಶಿಕ್ಷಕರ ಸಭೆಯನ್ನು ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪೋಷಕರ-ಶಿಕ್ಷಕರ ಮಹಾಸಭೆಯನ್ನು ನಡೆಸುವ ಬಗ್ಗೆ ಉಲ್ಲೇಖಿತ ಸುತ್ತೋಲೆಯೊಂದಿಗೆ ನೀಡಲಾಗಿರುವ ಸೂಚನೆಗಳು ಮತ್ತು ಅನುಬಂಧದಲ್ಲಿ ತಿಳಿಸಲಾಗಿರುವ ವೇಳಾಪಟ್ಟಿಯಂತೆ ಹಾಗೂ ನವೆಂಬರ್ 14ರಂದು ಮಕ್ಕಳ ದಿನಾಚಾರಣೆಯ ಪ್ರಯುಕ್ತ ರಾಜ್ಯಾದ್ಯಂತ ಪೋಷಕರ-ಶಿಕ್ಷಕರ ಮಹಾ ಸಭೆಯಯನ್ನು ಅಯೋಜಿಸಿ ನಡೆಸಲಾಗಿದೆ. ಇದೇ ರೀತಿ ಮುಂದೆ ಪ್ರತಿ ಎರಡು ತಿಂಗಳಿಗೊಮ್ಮೆ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪೋಷಕರ-ಶಿಕ್ಷಕರ ಸಭೆಯನ್ನು ಕಡ್ಡಾಯವಾಗಿ ನಡೆಸಲು ಈ ಕೆಳಕಂಡ ದಿನಾಂಕಗಳನ್ನು ನಿಗಧಿಪಪಡಿಸಿದೆ ಹಾಗೂ ಈ ಕೆಳಕಂಡ ನಮೂನೆಯಂತೆ ವರದಿಯನ್ನು ಕ್ರೋಡಿಕರಿಸಿ ಈ ಕಛೇರಿಗೆ ಸಲ್ಲಿಸಲು ಶಾಲಾ ಶಿಕ್ಷಣ ಇಲಾಖೆಯ ಸಂಬಂಧಿಸಿದ ಎಲ್ಲಾ ಆಧಿಕಾರಿಗಳಿಗೆ ಅಗತ್ಯ ಕ್ರಮವಹಿಸಲು ತಿಳಿಸಲಾಗಿದೆ (ಸುತ್ತೋಲೆ ಲಗತ್ತಿಸಿದೆ).

Read More

ಚಾಮರಾಜನಗರ : ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಇತ್ತೀಚೆಗೆ ಗೋಕಾಕದಲ್ಲಿ ಲಕ್ಷ್ಮಿ ದೇವಿ ಜಾತ್ರೆಯಲ್ಲಿ ಕರ್ತವ್ಯನಿರತ ಎ ASI ಒಬ್ಬರು ಹೃದಯಘಾತದಿಂದ ಸಾವನ್ನಪ್ಪಿದ್ದರು. ಇದೀಗ ರಾತ್ರಿ ಕರ್ತವ್ಯ ಮುಗಿಸಿ ಬೆಳಗಿನ ಜಾವ ಮನೆಗೆ ಮರಳಿದ್ದ ಎಎಸ್‌ಐ (ASI) ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಸಂತೇಮರಹಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ನಾಗನಾಯಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಾಗನಾಯಕ ರಾತ್ರಿ ಡ್ಯೂಟಿ ಮುಗಿಸಿ ಬೆಳಗ್ಗೆ ಮನೆಗೆ ಬಂದಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ASI ಕೊನೆಯುಸಿರೆಳೆದಿದ್ದಾರೆ. ನಗರದ ಪೊಲೀಸ್ ಗೃಹದಲ್ಲಿ ವಾಸವಿದ್ದ ಮನೆಯಲ್ಲಿ ಕುಸಿದು ಬಿದ್ದು ಎಎಸ್‌ಐ ನಾಗನಾಯಕ ಮೃತಪಟ್ಟಿದ್ದಾರೆ

Read More