Author: kannadanewsnow57

ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಹ್ಯಾಕಿಂಗ್ ಎಂಬುದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಹ್ಯಾಕರ್‌ಗಳು ದಿನಕ್ಕೊಂದು ಹೊಸ ದಾರಿಯ ಮೂಲಕ ಜನಸಾಮಾನ್ಯರ ಹಣಕ್ಕೆ ಕನ್ನ ಹಾಕುತ್ತಿದ್ದಾರೆ. ಇಂಟರ್ನೆಟ್ ಅಥವಾ ಬಗ್‌ಗಳ ಮೂಲಕ ಹ್ಯಾಕ್ ಮಾಡುವುದು ಹಳೆಯದಾಯಿತು, ಈಗ ‘ಕಾಲ್ ಫಾರ್ವರ್ಡಿಂಗ್’ (Call Forwarding) ಮೂಲಕ ಸುಲಭವಾಗಿ ಹ್ಯಾಕ್ ಮಾಡಲಾಗುತ್ತಿದೆ. ಹ್ಯಾಕರ್‌ ಗಳ ಹೊಸ ಪ್ಲಾನ್ ಹೀಗಿದೆ: ಸೈಬರ್ ಅಪರಾಧಿಗಳು ನಿಮಗೆ ಒಂದು ಮೆಸೇಜ್ ಅಥವಾ ಕಾಲ್ ಮಾಡುತ್ತಾರೆ. “ನಿಮ್ಮ ಕೊರಿಯರ್ ಬಂದಿದೆ”, “ನಿಮಗೊಂದು ಉಡುಗೊರೆ ಕಾಯುತ್ತಿದೆ” ಅಥವಾ “ಡೆಲಿವರಿ ಬಾಯ್‌ಗೆ ಅಡ್ರೆಸ್ ತಿಳಿಯುತ್ತಿಲ್ಲ, ಈ ನಂಬರ್‌ಗೆ ಕಾಲ್ ಮಾಡಿ” ಎಂದು ನಂಬಿಸುತ್ತಾರೆ. ಅವರು ನೀಡಿದ ನಂಬರ್‌ಗೆ ನೀವು ಕರೆ ಮಾಡಿದ ತಕ್ಷಣ, ನಿಮ್ಮ ಫೋನಿನ ಕಾಲ್ ಮತ್ತು ಮೆಸೇಜ್‌ಗಳು ಹ್ಯಾಕರ್ ನಂಬರ್‌ಗೆ ಫಾರ್ವರ್ಡ್ ಆಗುತ್ತವೆ. ಇದರಿಂದ ನಿಮ್ಮ ಬ್ಯಾಂಕ್ OTPಗಳು ಮತ್ತು ವೈಯಕ್ತಿಕ ಕರೆಗಳು ಅವರಿಗೆ ತಲುಪುತ್ತವೆ. ಅಷ್ಟೇ ಅಲ್ಲದೆ, ನಿಮ್ಮ ವಾಟ್ಸಾಪ್ ಕೂಡ ಅವರ ವಶವಾಗುವ ಸಾಧ್ಯತೆ ಇರುತ್ತದೆ. ಹ್ಯಾಕ್ ಆಗಿದೆಯೇ…

Read More

ಕೊಪ್ಪಳ ಜಿಲ್ಲೆಯಲ್ಲಿರುವ ಅನಧಿಕೃತ ರೆಸಾರ್ಟ್ಗಳ ವಿರುದ್ಧ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು. ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲೆಯಲ್ಲಿರುವ ಅನಧಿಕೃತ ರೆಸಾರ್ಟ್ ಮತ್ತು ಹೋಂಸ್ಟೇಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಎಫ್ಐಆರ್ ಆದ ರೆಸಾರ್ಟ್ಗಳ ಟ್ರೇಡ್ ಲೈಸೆನ್ಸ್ ರದ್ದುಪಡಿಸಿ ಇತರೆ ಕ್ರಮಗಳನ್ನು ಜರುಗಿಸಬೇಕು. ಪ್ರತಿಯೊಂದಕ್ಕೂ ನಾನೇ ಕರೆದು ತಮಗೆ ಹೇಳಬೇಕಾ, ಹಾಗಾದರೆ ತಮ್ಮ ಜವಾಬ್ದಾರಿ ಏನು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಮ್ಮ ಇಲಾಖೆಗಳಿಗೆ ಸಂಬAಧಿಸಿದ ಕೆಲಸವನ್ನು ಜವಾಬ್ದಾರಿಯಿಂದ ತಾವು ನಿರ್ವಹಿಸಬೇಕು. ಸರ್ಕಾರದ ನಿಯಮಗಳನ್ವಯ ಅಗತ್ಯ ದಾಖಲೆಗಳನ್ನು ಪರಿಶೀಲಿಸದೆ ಹೋಂಸ್ಟೇ ಮತ್ತು ರೆಸಾರ್ಟ್ಗಳಿಗೆ ಕಟ್ಟಡ ಪರವಾನಗಿ ನೀಡಿದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೇಳಿದರು. ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ರೆಸಾರ್ಟ್ ಹಾಗೂ ಹೋಂಸ್ಟೇಗಳು…

Read More

ಮೂಲರೂಪ : ಶಂಕುಕರ್ಣ ಅವತಾರಗಳು : ಪ್ರಹ್ಲಾದರಾಜರು, ಬಾಹ್ಲೀಕರಾಜರು, ವ್ಯಾಸರಾಜರು, ಶ್ರೀ ರಾಘವೇಂದ್ರ ಗುರುಸಾರ್ವಭೌಮರು. ಮನೆತನ : ಷಾಷ್ಠಿಕ ವಂಶದ ಬೀಗಮುದ್ರೆ ಮನೆತನ ಗೋತ್ರ : ಗೌತಮ ಮುತ್ತಾತ : ಶ್ರೀ ಕೃಷ್ಣಭಟ್ಟ ತಾತ : ಶ್ರೀ ಕನಕಾಚಲ ಭಟ್ಟ ತಂದೆ : ಶ್ರೀ ತಿಮ್ಮಣ್ಣ ಭಟ್ಟ ತಾಯಿ : ಶ್ರೀಮತಿ ಗೋಪಿಕಾಂಬ ಅಕ್ಕ : ಶ್ರೀಮತಿ ವೇಂಕಟಾಂಬಾ ಅಣ್ಣ : ಶ್ರೀ ಗುರುರಾಜಾಚಾರ್ಯ ಜನನ : ಕ್ರಿ.ಶ. 1595ನೇ ಮನ್ಮಥನಾಮ ಸಂವತ್ಸರ ಫಾಲ್ಗುಣ ಶುದ್ಧ ಸಪ್ತಮಿ ಗುರುವಾರ/ಶುಕ್ರವಾರ ಜನ್ಮ ನಕ್ಷತ್ರ : ಮೃಗಶಿರಾ ಜನ್ಮಸ್ಥಳ : ಭುವನಗಿರಿ ಪೂರ್ವಾಶ್ರಮದ ಹೆಸರು : ವೇಂಕಟನಾಥ ಚೌಲ ಹಾಗೂ ಅಕ್ಷರಾಭ್ಯಾಸ : ಕ್ರಿ.ಶ. 1597-98ನೇ ಹೇವಿಲಂಬಿ ಸಂವತ್ಸರ ಭಾವ ಹಾಗೂ ಪ್ರಾಥಮಿಕ ಗುರುಗಳು : ಶ್ರೀ ಲಕ್ಷ್ಮೀನರಸಿಂಹಾಚಾರ್ಯರು ಉಪನಯನ : ಕ್ರಿ.ಶ. 1602ನೇ ಶುಭಕೃತ ಸಂವತ್ಸರ ಉನ್ನತ ವಿದ್ಯಾಭ್ಯಾಸ : ಶ್ರೀ ಸುಧೀಂದ್ರತೀರ್ಥರಲ್ಲಿ ವಿವಾಹ : ಕ್ರಿ.ಶ. 1614ನೇ ಆನಂದನಾಮ ಸಂವತ್ಸರ ಪತ್ನಿಯ…

Read More

ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಶಾಲೆಯಲ್ಲಿ ಓದುತ್ತಿದ್ದ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಹಿನ್ನೆಲೆ: ಕಳೆದ ಫೆಬ್ರವರಿ 19 ರಂದು ವಿದ್ಯಾರ್ಥಿನಿಗೆ ಹಠಾತ್ ರಕ್ತಸ್ರಾವ ಉಂಟಾಗಿತ್ತು. ಆಕೆಯನ್ನು ತಪಾಸಣೆಗೆ ಒಳಪಡಿಸಿದಾಗ ಆಕೆ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿದೆ. ಘಟನೆ ಸಂಬಂಧ ದೂರು ದಾಖಲಾಗುತ್ತಿದ್ದಂತೆಯೇ ತನಿಖೆ ಚುರುಕುಗೊಳಿಸಿದ ಪೊಲೀಸರು, ವಿದ್ಯಾರ್ಥಿನಿಯನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿ ವಂಚಿಸಿದ ಆರೋಪಿಯನ್ನು ಪತ್ತೆಹಚ್ಚಿ ಜೈಲಿಗಟ್ಟಿದ್ದಾರೆ. ಸರ್ಕಾರದ ಸುಪರ್ದಿಯಲ್ಲಿರುವ, ಅತ್ಯಂತ ಕಟ್ಟುನಿಟ್ಟಾದ ಕಾವಲು ಇರಬೇಕಾದ ವಸತಿ ಶಾಲೆಯ ಆವರಣದಲ್ಲೇ ಇಂತಹ ಘಟನೆ ನಡೆದಿರುವುದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಘಟನೆಯ ಗಂಭೀರತೆ ಅರಿತು ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ ವಾರ್ಡನ್ ಹಾಗೂ ಶಾಲಾ ಸಿಬ್ಬಂದಿ ವಿರುದ್ಧ…

Read More

ದೈನಂದಿನ ಜೀವನದಲ್ಲಿ ನಾವು ಸಣ್ಣಪುಟ್ಟ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ. ನಾಲ್ಕು ಜನರ ಮಧ್ಯೆ ಇದ್ದಾಗ ಸೀನು ಬಂದರೆ ಮುಜುಗರ ಎಂದು ಮೂಗು ಅಥವಾ ಬಾಯಿ ಮುಚ್ಚಿ ಅದನ್ನು ತಡೆಯಲು ಪ್ರಯತ್ನಿಸುತ್ತೇವೆ. “ಒಂದು ಸೀನು ತಡೆದರೆ ಏನಾಗುತ್ತೆ?” ಎಂದು ನಾವು ಅಂದುಕೊಳ್ಳಬಹುದು, ಆದರೆ ಬ್ರಿಟಿಷ್ ವ್ಯಕ್ತಿಯೊಬ್ಬನಿಗೆ ಎದುರಾದ ಈ ಅನುಭವ ಕೇಳಿದರೆ ನೀವು ಬೆಚ್ಚಿಬೀಳುತ್ತೀರಿ. ಚಾಲನೆ ಮಾಡುವಾಗ ಸೀನನ್ನು ತಡೆದಿದ್ದರಿಂದ ಆ ವ್ಯಕ್ತಿಯ ಗಂಟಲಿನಲ್ಲಿ ರಂಧ್ರ ಉಂಟಾಗಿ, ಗಾಳಿಯು ಶ್ವಾಸಕೋಶದೊಳಗೆ ನುಗ್ಗಿದೆ. ಇದು ವೈದ್ಯಕೀಯ ಲೋಕದಲ್ಲೇ ಅತ್ಯಂತ ಅಪರೂಪದ ಪ್ರಕರಣವಾಗಿದ್ದು, BMJ Case Reports ಜರ್ನಲ್‌ನಲ್ಲಿ ಪ್ರಕಟವಾಗಿದೆ. ಸಾವಿನ ಹತ್ತಿರ ಹೋಗಿ ಬಂದ ವ್ಯಕ್ತಿ 2023ರಲ್ಲಿ ಬ್ರಿಟನ್‌ನ 30 ವರ್ಷದ ಆರೋಗ್ಯವಂತ ವ್ಯಕ್ತಿಯೊಬ್ಬ ಕಾರು ಚಲಾಯಿಸುತ್ತಿದ್ದಾಗ, ಅಲರ್ಜಿಯಿಂದಾಗಿ ಸೀನು ಬಂದಿದೆ. ಸೀನನ್ನು ತಡೆಯಲು ಆತ ತನ್ನ ಮೂಗನ್ನು ಗಟ್ಟಿಯಾಗಿ ಹಿಡಿದು ಬಾಯಿಯನ್ನು ಮುಚ್ಚಿಕೊಂಡಿದ್ದಾನೆ. ಸೀನು ಏನೋ ನಿಂತಿತು, ಆದರೆ ತಕ್ಷಣವೇ ಆತನ ಗಂಟಲಿನಲ್ಲಿ ಅಸಹನೀಯ ನೋವು ಕಾಣಿಸಿಕೊಂಡಿದೆ. ಗಂಟಲಿನ ಒಳಗೆ ಏನೋ ಒಡೆದಂತ ಅನುಭವವಾಗಿ,…

Read More

ಬೆಂಗಳೂರು: ಗ್ರಾಮೀಣ ಭಾಗದ ರೈತರಲ್ಲಿ ‘ಪೋಡಿ’ ಎಂಬ ಪದ ಸದಾ ಚರ್ಚೆಯಲ್ಲಿರುತ್ತದೆ. ಆದರೆ ಅನೇಕರಿಗೆ ಪೋಡಿ ಎಂದರೆ ಏನು? ಅದನ್ನು ಏಕೆ ಮಾಡಿಸಬೇಕು ಎಂಬ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಜಮೀನಿನ ಹಕ್ಕು ಮತ್ತು ಗಡಿ ನಿರ್ಧಾರದಲ್ಲಿ ಪೋಡಿ ಪ್ರಕ್ರಿಯೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಸಂಪೂರ್ಣ ವಿವರ ಇಲ್ಲಿದೆ. ಪೋಡಿ ಅಂದರೇನು? ಸರಳವಾಗಿ ಹೇಳುವುದಾದರೆ, ಪೋಡಿ ಎಂದರೆ ಜಮೀನಿನ ದುರಸ್ತಿ ಅಥವಾ ವಿಭಜನೆ. ಒಂದು ಸರ್ವೆ ನಂಬರ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಮಾಲೀಕರಿದ್ದಾಗ (ಬಹು ಮಾಲೀಕತ್ವ), ಅದನ್ನು ಅವರವರ ಹಿಸ್ಸಾ (ಪಾಲು) ಪ್ರಕಾರ ಪ್ರತ್ಯೇಕಿಸಿ, ಹೊಸ ಸರ್ವೆ ನಂಬರ್ ಮತ್ತು ಪ್ರತ್ಯೇಕ ಪಹಣಿ (RTC) ನೀಡುವುದಕ್ಕೆ ‘ಪೋಡಿ’ ಎನ್ನಲಾಗುತ್ತದೆ. ಇಲ್ಲಿ ಕೇವಲ ಜಮೀನಿನ ಗಡಿಯನ್ನು (Boundary) ಮಾತ್ರ ಗುರುತಿಸಲಾಗುತ್ತದೆ. ಪೋಡಿಯ 4 ಪ್ರಮುಖ ವಿಧಗಳು: ತತ್ಕಾಲ್ ಪೋಡಿ: ತುರ್ತಾಗಿ ಅಥವಾ ಶೀಘ್ರವಾಗಿ ಮಾಡಿಸಿಕೊಳ್ಳುವ ಪ್ರಕ್ರಿಯೆ. ದರ್ಖಾಸ್ ಪೋಡಿ: ಸರ್ಕಾರದಿಂದ ಮಂಜೂರಾದ ಜಮೀನುಗಳಿಗೆ ಮಾಡುವ ಪೋಡಿ. ಅಲಿನೇಷನ್ ಪೋಡಿ: ಕೃಷಿ ಭೂಮಿಯನ್ನು ವಾಣಿಜ್ಯ…

Read More

ಪಾಟ್ನಾ: ವರದಕ್ಷಿಣೆ ಕಿರುಕುಳದ ಪ್ರಕರಣವೊಂದರಲ್ಲಿ ಪಾಟ್ನಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೇವಲ ಅಸ್ಪಷ್ಟ ಮತ್ತು ಸಾಮಾನ್ಯ ಆರೋಪಗಳ ಆಧಾರದ ಮೇಲೆ ಕುಟುಂಬದ ಸದಸ್ಯರನ್ನು, ವಿಶೇಷವಾಗಿ ಅತ್ತೆಯನ್ನು ಕಾನೂನು ಪ್ರಕ್ರಿಯೆಗೆ ಎಳೆಯುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಮೂಲಕ ಅತ್ತೆಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿ ಸೌರೇಂದ್ರ ಪಾಂಡೆ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ. ವೈವಾಹಿಕ ಕಲಹಗಳಲ್ಲಿ ಯಾವುದೇ ಬಲವಾದ ಸಾಕ್ಷ್ಯಗಳಿಲ್ಲದೆ ಸಂಬಂಧಿಕರನ್ನು ಆರೋಪಿಗಳನ್ನಾಗಿ ಮಾಡುವುದು ಕಾನೂನಿನ ದುರುಪಯೋಗ ಎಂದು ಕೋರ್ಟ್ ಎಚ್ಚರಿಸಿದೆ. ಪ್ರಕರಣದ ಹಿನ್ನೆಲೆ: ಈ ಪ್ರಕರಣವು ಔರಂಗಾಬಾದ್ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದ್ದಾಗಿದೆ. ದೂರುದಾರೆ ಸಿಮ್ರಾನ್ ಕುಮಾರಿ ಎಂಬುವವರು ತನ್ನ ಪತಿ ಸನ್ನಿ ಕುಮಾರ್ ಮತ್ತು ಅತ್ತೆ ಸುಮಿತ್ರಾ ದೇವಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. 2023ರ ಜೂನ್ನಲ್ಲಿ ವಿವಾಹವಾದ ಸಂದರ್ಭದಲ್ಲಿ 30 ಲಕ್ಷ ರೂ. ನಗದು ಮತ್ತು ಚಿನ್ನಾಭರಣ ನೀಡಿದ್ದರೂ, ನಂತರ ಮೋಟಾರ್ ಸೈಕಲ್ ಮತ್ತು…

Read More

ಲಂಡನ್: ನಾವು ಮನೆಯಲ್ಲಿ ಸಾಕುವ ನಾಯಿಗಳನ್ನು ಕುಟುಂಬದ ಸದಸ್ಯರಂತೆಯೇ ಪ್ರೀತಿಸುತ್ತೇವೆ. ಅವುಗಳು ಪ್ರೀತಿಯಿಂದ ನಮ್ಮನ್ನು ನೆಕ್ಕಿದಾಗ ನಮಗೂ ಸಂಭ್ರಮವೆನಿಸುತ್ತದೆ. ಆದರೆ, ಪ್ರೀತಿಯಿಂದ ನೆಕ್ಕುವ ನಾಲಗೆಯೇ ಸಾವಿನ ದೂತನಾಗಬಹುದು ಎಂಬ ಕಹಿ ಸತ್ಯವೊಂದು ಈಗ ಜಗತ್ತನ್ನು ಬೆಚ್ಚಿಬೀಳಿಸಿದೆ. ಬ್ರಿಟನ್‌ನ 52 ವರ್ಷದ ಮಂಜೀತ್ ಸಂಘ ಎಂಬ ಮಹಿಳೆ ತನ್ನ ಮುದ್ದಿನ ನಾಯಿ ನೆಕ್ಕಿದ ಕಾರಣಕ್ಕೆ ಇಂದು ತಮ್ಮ ಎರಡೂ ಕೈ ಮತ್ತು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಏನಿದು ಘಟನೆ? 2025ರ ಜುಲೈನಲ್ಲಿ ಕೆಲಸ ಮುಗಿಸಿ ಮನೆಗೆ ಮರಳಿದ್ದ ಮಂಜೀತ್ ಅವರಿಗೆ ಅಲ್ಪ ಸುಸ್ತು ಕಾಣಿಸಿಕೊಂಡಿತ್ತು. ಆದರೆ ಮರುದಿನವೇ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಮೈ ಕೈ ತಣ್ಣಗಾಗುವುದು, ತುಟಿಗಳು ನೀಲಿ ಬಣ್ಣಕ್ಕೆ ತಿರುಗುವುದು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಶಾಕಿಂಗ್ ವಿಷಯವೊಂದು ಬೆಳಕಿಗೆ ಬಂದಿದೆ. ಮಂಜೀತ್ ಅವರ ದೇಹಕ್ಕೆ ‘ಸೆಪ್ಸಿಸ್’ (Sepsis) ಎಂಬ ಭೀಕರ ಸೋಂಕು ತಗುಲಿತ್ತು. ಚಿಕಿತ್ಸೆಯ ಅವಧಿಯಲ್ಲಿ ಅವರು ಬರೋಬ್ಬರಿ 6 ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದರು. ಸೋಂಕು…

Read More

ಬೆಂಗಳೂರು: ನೀವು ಬ್ಯಾಂಕ್ಗೆ ಸಾಲ ಮರುಪಾವತಿ ಮಾಡಿದ್ದರೂ, ನಿಮ್ಮ ಜಮೀನಿನ ಪಹಣಿ (RTC) ಪತ್ರದಲ್ಲಿ ಇನ್ನೂ ಸಾಲದ ವಿವರಗಳು ಹಾಗೆಯೇ ಉಳಿದುಕೊಂಡಿವೆಯೇ? ಇದರಿಂದ ಮುಂದಿನ ದಿನಗಳಲ್ಲಿ ಹೊಸ ಸಾಲ ಪಡೆಯಲು ಅಥವಾ ಜಮೀನು ವ್ಯವಹಾರ ಮಾಡಲು ತೊಂದರೆಯಾಗಬಹುದು. ಈ ಸಮಸ್ಯೆಯನ್ನು ಪತ್ತೆಹಚ್ಚಲು ಈಗ ನೀವು ಬ್ಯಾಂಕ್ ಅಥವಾ ಕಂದಾಯ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ನಿಮ್ಮ ಕೈಯಲ್ಲಿರುವ ಮೊಬೈಲ್ ಮೂಲಕವೇ ಕೇವಲ 2 ನಿಮಿಷದಲ್ಲಿ ಸಾಲದ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಪಹಣಿ ಪರಿಶೀಲನೆ ಏಕೆ ಮುಖ್ಯ? ಋಣಭಾರ ಮುಕ್ತ ದಾಖಲೆ: ನಿಮ್ಮ ಆಸ್ತಿಯ ದಾಖಲೆಗಳು ‘ಕ್ಲೀನ್’ ಆಗಿದ್ದಾಗ ಮಾತ್ರ ಅದರ ಮೌಲ್ಯ ಹೆಚ್ಚಿರುತ್ತದೆ. ಸಾಲ ತೀರಿಸಿದ ನಂತರವೂ ಪಹಣಿಯಲ್ಲಿ ‘ಋಣಭಾರ’ (Encumbrance) ತೋರಿಸುತ್ತಿದ್ದರೆ ಅದನ್ನು ತಕ್ಷಣ ಸರಿಪಡಿಸಿಕೊಳ್ಳುವುದು ಉತ್ತಮ. ವಂಚನೆ ತಡೆಗಟ್ಟಲು: ಕೆಲವು ಪ್ರಕರಣಗಳಲ್ಲಿ ರೈತರಿಗೆ ತಿಳಿಯದೆಯೇ ಅವರ ದಾಖಲೆ ಬಳಸಿ ಬೇರೆಯವರು ಸಾಲ ಪಡೆದಿರುವ ಸಾಧ್ಯತೆ ಇರುತ್ತದೆ. ಇದನ್ನು ಪತ್ತೆ ಹಚ್ಚಲು ಈ ಆನ್ಲೈನ್ ತಪಾಸಣೆ ಸಹಕಾರಿ. ನಿಖರ ಮಾಹಿತಿ: ಭೂಮಿ (Bhoomi)…

Read More

ಇಂದಿನ ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ವಯಸ್ಸಾದವರು ಮಾತ್ರವಲ್ಲದೆ ಯುವಕರೂ ಕೂಡ ಮೊಣಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂತರೆ ಏಳಲಾಗದ, ನಡೆದರೆ ಕಟ-ಕಟ ಎಂಬ ಶಬ್ದ ಬರುವ ಮತ್ತು ವಿಪರೀತ ನೋವಿನಿಂದಾಗಿ ರಾತ್ರಿ ನಿದ್ದೆ ಕೂಡ ಬಾರದ ಪರಿಸ್ಥಿತಿ ಇಂದು ಅನೇಕರದ್ದಾಗಿದೆ. ಹಳೆಯ ಕಾಲದ ಶುದ್ಧ ಆಹಾರಗಳು ಇಂದು ಸಿಗುತ್ತಿಲ್ಲದಿರುವುದು ಈ ಮೂಳೆ ಸಂಬಂಧಿ ಕಾಯಿಲೆಗಳಿಗೆ ಮುಖ್ಯ ಕಾರಣ. ಆದರೆ ಗಾಬರಿಯಾಗುವ ಅಗತ್ಯವಿಲ್ಲ; ನಿಮ್ಮ ಅಡುಗೆಮನೆಯಲ್ಲಿರುವ ಕೆಲವು ಪದಾರ್ಥಗಳ ಮೂಲಕವೇ ಮೊಣಕಾಲು ನೋವನ್ನು ಹೋಗಲಾಡಿಸಿ ಮೂಳೆಗಳನ್ನು ಬಲಿಷ್ಠಗೊಳಿಸಬಹುದು. ಆ ಅದ್ಭುತ ಮನೆಮದ್ದುಗಳು ಇಲ್ಲಿವೆ: 1. ಪಾರಿಜಾತದ ಎಲೆಗಳ ಕಷಾಯ (Night Jasmine) ಪಾರಿಜಾತದ ಎಲೆಗಳು ಕೀಲು ನೋವಿಗೆ ರಾಮಬಾಣ. 6 ರಿಂದ 7 ಪಾರಿಜಾತದ ಎಲೆಗಳನ್ನು ಅರೆದು ಚಟ್ನಿ ಮಾಡಿ, ಅದನ್ನು ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನೀರು ಅರ್ಧದಷ್ಟು ಆದ ಮೇಲೆ ಸೋಸಿಕೊಂಡು, ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿರುವಾಗ ಕುಡಿಯಿರಿ. ಇದು ಯಾವುದೇ ಹಳೆಯ…

Read More