Subscribe to Updates
Get the latest creative news from FooBar about art, design and business.
Author: kannadanewsnow57
ಭಾರತದಲ್ಲಿರುವ ಪ್ರತಿಯೊಬ್ಬ ಉದ್ಯೋಗಿ ಮತ್ತು ಉದ್ಯಮಿಯು ತಮ್ಮ ಕಷ್ಟಪಟ್ಟು ಸಂಪಾದಿಸಿದ ಆದಾಯವನ್ನು ಸಾಧ್ಯವಾದಷ್ಟು ಉಳಿಸಲು ಬಯಸುತ್ತಾರೆ. ಹೆಚ್ಚುತ್ತಿರುವ ಹಣದುಬ್ಬರ ಮತ್ತು ಬದಲಾಗುತ್ತಿರುವ ತೆರಿಗೆ ನಿಯಮಗಳೊಂದಿಗೆ, ತೆರಿಗೆ ಯೋಜನೆ ಇತ್ತೀಚಿನ ದಿನಗಳಲ್ಲಿ ನಿರ್ಣಾಯಕ ಅಗತ್ಯವಾಗಿದೆ. ಜನರು ಸಾಮಾನ್ಯವಾಗಿ ಉತ್ತಮ ಆದಾಯವನ್ನು ನೀಡುವ ಆದರೆ ಕಡಿಮೆ ತೆರಿಗೆ ಹೊರೆಯನ್ನು ನೀಡುವ ಹೂಡಿಕೆ ಆಯ್ಕೆಗಳನ್ನು ಹುಡುಕುತ್ತಾರೆ. ಆದಾಗ್ಯೂ, ಭಾರತದ ಆದಾಯ ತೆರಿಗೆ ಕಾನೂನು ಸರ್ಕಾರವು ಸಂಪೂರ್ಣವಾಗಿ ತೆರಿಗೆ ಮುಕ್ತಗೊಳಿಸಿರುವ ಕೆಲವು ಆದಾಯಗಳನ್ನು ನಿರ್ದಿಷ್ಟಪಡಿಸುತ್ತದೆ. ಇದರರ್ಥ ನೀವು ಈ ಮೂಲಗಳಿಂದ ಬರುವ ಆದಾಯದ ಮೇಲೆ ಒಂದು ರೂಪಾಯಿ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. 2026 ರ ಇತ್ತೀಚಿನ ನಿಯಮಗಳ ಪ್ರಕಾರ, ಕಾನೂನುಬದ್ಧವಾಗಿ ತೆರಿಗೆ ಮುಕ್ತವಾಗಿರುವ ಮತ್ತು ನಿಮ್ಮ ನಿವ್ವಳ ಉಳಿತಾಯವನ್ನು ಹೆಚ್ಚಿಸಲು ಸಹಾಯ ಮಾಡುವ 10 ಪ್ರಮುಖ ಆದಾಯ ಮೂಲಗಳು ಇಲ್ಲಿವೆ: ಕೃಷಿ ಭಾರತದಲ್ಲಿ, ಕೇಂದ್ರ ಸರ್ಕಾರವು ಕೃಷಿಯಿಂದ ಬರುವ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ವಿಧಿಸುವುದಿಲ್ಲ. ನೀವು ಬೆಳೆಗಳನ್ನು ಮಾರಾಟ ಮಾಡುವುದರಿಂದ ಅಥವಾ ನಿಮ್ಮ ಕೃಷಿ ಭೂಮಿಯನ್ನು ಬಾಡಿಗೆಗೆ…
ಕಲಬುರಗಿ : ಕಲಬುರಗಿಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಮನೆಯ ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡಲು ಇಳಿದಿದ್ದ ಕಾರ್ಮಿಕ ಹಾಗೂ ಮನೆಯ ಮಾಲೀಕ ಇಬ್ಬರೂ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಲಬುರಗಿಯಲ್ಲಿ ಕಾರ್ಮಿಕ ರತನ್ ಹಾಗೂ ಮನೆಯ ಮಾಲೀಕ ಶಿವಕುಮಾರ್ ನಂದೂರ್ ಮೃತರು. ಶಿವಕುಮಾರ್ ಅವರು ತಮ್ಮ ಮನೆಯಲ್ಲಿನ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ರತನ್ ಎಂಬುವರಿಗೆ ಹೇಳಿದ್ದು ಆತ ಟ್ಯಾಂಕ್ ಒಳಗಡೆ ಇಳಿದಿದ್ದ. ರತನ್ ಒಳಗೆ ಇಳಿದು ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ರತನ್ ಮೇಲೆ ಬರದಿದ್ದಾಗ ಆತನ ರಕ್ಷಣೆಗೆ ತೆರಳಿದ ಮನೆಯ ಮಾಲೀಕ ಶಿವಕುಮಾರ್ ಅವರೂ ಉಸಿರುಗಟ್ಟಿ ಸಾವನ್ನಪ್ಪಿರುವುದು ತಿಳಿದು ಬಂದಿದೆ. ವಿಷಯ ತಿಳಿಯುತ್ತಿದಂತೆ ಅಶೋಕನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ರಾಜ್ಯದ ಜಿಲ್ಲಾ, ತಾಲೂಕು, ಸಮುದಾಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಔಷಧ ಖರೀದಿಗಾಗಿ ರಾಜ್ಯ ಸರ್ಕಾರ ಹೆಚ್ಚುವರಿ 30 ಕೋಟಿ ರು. ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಉಚಿತ ಔಷಧಿ ಯೋಜನೆ ಹಾಗೂ ಜನನಿ ಶಿಶು ಸುರಕ್ಷಾ ಕಾರ್ಯಕ್ರಮದಡಿ ಅನುದಾನ ಬಿಡುಗಡೆ ಆಗದಿರುವುದರಿಂದ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುವ ಬಡ ರೋಗಿಗಳ ಹಿತದೃಷ್ಟಿಯಿಂದ ಅಗತ್ಯ ಔಷಧಗಳನ್ನು ಪೂರೈಸಲು ಹೆಚ್ಚುವರಿ ಅನುದಾನ ಬಿಡುಗಡೆಗೆ ನಿರ್ಧರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಏನಿದೆ ಸರ್ಕಾರದ ಆದೇಶದಲ್ಲಿ? ರಾಜ್ಯದ ಸರ್ಕಾರಿ ಆರೋಗ್ಯ ಸಂಸ್ಥೆಗಳಾದ ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಇತರೆ ಆರೋಗ್ಯ ಸಂಸ್ಥೆಗಳಿಗೆ ಅಗತ್ಯ ಔಷಧಿಗಳ ಖರೀದಿಗಾಗಿ ಹೆಚ್ಚಿನ ಅನುದಾನವನ್ನು ನೀಡಲು ತೀರ್ಮಾನಿಸಲಾಗಿರುತ್ತದೆ. ಉಚಿತ ಔಷಧಿ ಯೋಜನೆ (Free Drugs Scheme) ಹಾಗೂ ಜನನಿ ಶಿಶು ಸುರಕ್ಷಾ ಕಾರ್ಯಕ್ರಮ (JSSK) ಅಡಿಯಲ್ಲಿ ನೀಡಲಾಗುವ ಅನುದಾನಬಳಸಿಕೊಂಡು ಆಸ್ಪತ್ರೆಗಳಲ್ಲಿ ಸ್ಥಳೀಯವಾಗಿ ಔಷದಿಗಳನ್ನು ಖರೀದಿಸಲಾಗಿತಿದೆ. ಕೇಂದ್ರ ಸರ್ಕಾರದ ಯೋಜನೆಯಾದ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಸಾರಿಗೆ ನೌಕರರ ಹಿಂಬಾಕಿ ವೇತನ, ವೇತನ ಪರಿಷ್ಕರಣೆಯನ್ನು ಮಾಡಿ ಅಧಿಕೃತ ಆದೇಶ ಮಾಡಿದೆ. ಇದರ ನಡುವೆಯೂ ನಾಳೆ ಬೆಂಗಳೂರು ಚಲೋ ಫಿಕ್ಸ್ ಆಗಿದೆ. ಇಂದು ನಿಗದಿಯಂತೆ ಬೆಂಗಳೂರು ಚಲೋ ನಡೆಯಲಿದೆ ಎಂಬುದಾಗಿ ಸಾರಿಗೆ ನೌಕರರ ಮುಖಂಡ ಜಗದೀಶ್ ತಿಳಿಸಿದ್ದಾರೆ. ಬೆಂಗಳೂರಲ್ಲಿ ಸಾರಿಗೆ ನೌಕರರ ಮುಖಂಡ ಜಗದೀಶ್ ಮಾಹಿತಿ ನೀಡಿದ್ದು, ನಮಗೆ ಇನ್ನೂ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಇಂದು 5ರಿಂದ 10 ಸಾವಿರ ನೌಕರರು ಫ್ರೀಡಂ ಪಾರ್ಕ್ ನಲ್ಲಿ ಸೇರಲಿದ್ದಾರೆ. ರಾಜ್ಯ ಸರ್ಕಾರವು 38 ತಿಂಗಳ ಹಿಂಬಾಕಿ ಕೊಡಲೇಬೇಕು ಎಂದು ಆಗ್ರಹಿಸಿದರು. 2024ರಿಂದ ವೇತನ ಪರಿಷ್ಕರಣೆ ಆಗಬೇಕೆನ್ನುವುದು ನಮ್ಮ ಕನಸಾಗಿತ್ತು. ಕಾರ್ಮಿಕ ಮುಖಂಡ ದಿವಂಗತ ಅನಂತ ಸುಬ್ಬರಾವ್ ಅವರ ಕನಸು ಕೂಡ ಇದೇ ಆಗಿತ್ತು. ಸರ್ಕಾರದ ನಿರ್ಧಾರದಿಂದ ಸಿಬ್ಬಂದಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಲಿದೆ. ಮುಷ್ಕರದ ಬಗ್ಗೆ ಇಂದು ಸಂಜೆ 4 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ರಾಜ್ಯ ಸರ್ಕಾರದಿಂದ ಸಾರಿಗೆ ನೌಕರರ…
ಬೆಂಗಳೂರು : ಸಾಮಾಜಿಕ ನ್ಯಾಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹತ್ತಾರು ಭಿನ್ನ ಅಭಿಪ್ರಾಯಗಳು ಬಲವಾಗಿ ಅಸ್ತಿತ್ವದಲ್ಲಿ ಇರುವ ಸಂದರ್ಭದಲ್ಲೇ ನಮ್ಮ ಸರ್ಕಾರವು ಸುಪ್ರಿಂ ಕೋರ್ಟ್ ನ ಆದೇಶಕ್ಕೆ ಅನ್ವಯವಾಗಿ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸುವ ಕೆಲಸವನ್ನು ಮಾಡಿದೆ ಎಂದು ಸಚಿವ ಡಾ.ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ. 101 ಪರಿಶಿಷ್ಟ ಸಮುದಾಯಗಳನ್ನು ABC ಎಂದು ವರ್ಗೀಕರಿಸಿ ಒಳ ಮೀಸಲಾತಿಯನ್ನು ಹಂಚಿಕೆ ಮಾಡಿದ ನಂತರದಲ್ಲಿ ಇನ್ನಷ್ಟು ತಾಂತ್ರಿಕ ಸವಾಲುಗಳು ಎದುರಾಗಿದ್ದು, ಈ ಬಗ್ಗೆ ವಿವಿಧ ಪರಿಶಿಷ್ಟ ಜಾತಿಯ ಯುವಕರು ಮತ್ತು ತಜ್ಞರು ನಿಯಮಿತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಇದ್ದರೆ, ಮತ್ತೆ ಕೆಲವರು ರಾಜಕೀಯ ಪ್ರೇರಿತವಾಗಿ ಪರಿಶಿಷ್ಟ ಸಮುದಾಯಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ನ್ಯಾಯದ ಪ್ರಶ್ನೆ ಬಂದಾಗ, ಸಮಚಿತ್ತವಾಗಿ ಎಲ್ಲವನ್ನೂ ಕೇಳಿ, ಪರಾಮರ್ಶಿಸಿ, ನ್ಯಾಯವನ್ನು ನಿರ್ಧರಿಸಬೇಕಾದ್ದು ಯಾವುದೇ ಜನಪ್ರತಿನಿಧಿಯ ಕರ್ತವ್ಯ ಆಗಿರುತ್ತದೆ ಎಂಬ ಸಂಗತಿಯನ್ನು ನಾನು ಸದಾ ನಂಬುತ್ತೇನೆ. ಈ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯದ ನೇಮಕಾತಿಯ ವಿಷಯದಲ್ಲಿ ಪರಿಶಿಷ್ಟ ಜಾತಿ…
ಬೆಂಗಳೂರು : ರಾಜ್ಯದ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸಿ, ಮೊಬೈಲ್ ಬಳಕೆ ನಿಯಂತ್ರಿಸುವ ಉದ್ದೇಶದಿಂದ “ಮೊಬೈಲ್ ಬಿಡಿ ಪುಸ್ತಕ ಹಿಡಿ” ಅಭಿಯಾನವನ್ನು ಅನುಷ್ಠಾನಗೊಳಿಸಿ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿಯನ್ನು ವ್ಯವಸ್ಥಿತವಾಗಿ ಬೆಳೆಸಿ, ಕ್ರಿಯಾಶೀಲ, ವಿವೇಚನೆಯುಕ್ತ ಹಾಗೂ ಉನ್ನತ ಚಿಂತನಾ ಸಾಮರ್ಥ್ಯವನ್ನು ಹೊಂದಿರುವ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವುದು ಶಿಕ್ಷಣ ಇಲಾಖೆಯ ಪ್ರಮುಖ ಉದ್ದೇಶವಾಗಿರುತ್ತದೆ. ಓದುವಿಕೆಯು ವಿದ್ಯಾರ್ಥಿಗಳ ಬೌದ್ಧಿಕ ವಿಕಾಸ, ಮೌಲ್ಯಾಧಾರಿತ ಚಿಂತನೆ, ಆಲೋಚನಾ ಸಾಮರ್ಥ್ಯ ಹಾಗೂ ಜೀವನ ಕೌಶಲ್ಯಗಳ ಸಮಗ್ರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮೊಬೈಲ್ ಫೋನ್ಗಳು ಹಾಗೂ ಇತರೆ ಡಿಜಿಟಲ್ ಸಾಧನಗಳ ಅತಿಯಾದ ಹಾಗೂ ಅನಿಯಂತ್ರಿತ ಬಳಕೆಯಿಂದಾಗಿ ಓದುವಿಕೆಯಲ್ಲಿ ಗಣನೀಯ ಕುಸಿತ ಉಂಟಾಗುತ್ತಿರುವುದು, ಕಲಿಕಾ ಆಸಕ್ತಿ ಗಂಭೀರವಾಗಿ ಕುಂಠಿತವಾಗುತ್ತಿರುವುದು, ಏಕಾಗ್ರತೆಯಲ್ಲಿ ಹಿನ್ನಡೆಯಾಗಿರುವುದು, ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತಿರುವುದು ಹಾಗೂ ಶೈಕ್ಷಣಿಕ ಸಾಧನೆಗೆ ಸ್ಪಷ್ಟ ಅಡ್ಡಿಯುಂಟಾಗುತ್ತಿರುವುದನ್ನು ಗಮನಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಓದುವ ಅಭ್ಯಾಸವನ್ನು…
ಬೆಂಗಳೂರು : ರೈತರು ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಕಾಲುದಾರಿ, ಬಂಡಿದಾರಿ ಅಥವಾ ಸೌಲಭ್ಯ ಒದಗಿಸುವ ಸಲುವಾಗಿ ಕ್ರಮವಹಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಬಳಸುವ ಕೃಷಿ ಸಲಕರಣೆಗಳನ್ನು ಸಾಗಿಸಲು ಅನ್ಯ ಭೂಮಾಲೀಕರ ಖಾಸಗಿ ಜಮೀನುಗಳಲ್ಲಿ ತಿರುಗಾಡಲು ‘ದಾರಿ’ ಸಮಸ್ಯೆ ಇದ್ದು, ಬಳಕೆದಾರ ರೈತರುಗಳಿಗೆ ತೊಂದರೆಗಳಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ‘ದಾರಿ’ ಸಮಸ್ಯೆ ಬಹುಕಾಲದಿಂದಲೂ ಇದ್ದು, ಅಕ್ಕಪಕ್ಕದ ಜಮೀನುಗಳ ರೈತರು ಕೆಲವು ಖಾಸಗಿ ಜಮೀನುಗಳನ್ನು ದಾಟಿಕೊಂಡು ಕೃಷಿ ಪೂರಕ ಚಟುವಟಿಕೆಗಳನ್ನು ಜರುಗಿಸಲು ಹಾಗೂ ಬೆಳೆದ ಫಸಲನ್ನು ಹೊರತರಲಾಗದೆ ನಷ್ಟ ಹೊಂದುತ್ತಿರುವುದು ಕೆಲವು ಮಾಧ್ಯಮಗಳಿಂದ ತಿಳಿದು ಬಂದಿರುತ್ತದೆ ಹಾಗೂ ಈ ಬಗ್ಗೆ ಸಾರ್ವಜನಿಕರಿಂದ ಮನವಿ/ದೂರುಗಳು ಸ್ವೀಕೃತವಾಗಿರುತ್ತವೆ. ಗ್ರಾಮ ನಕಾಶೆ ಕಂಡ ದಾರಿಗಳಲ್ಲಿ ಬಳಕೆದಾರ ರೈತರು ತಿರುಗಾಡಲು ಅವಕಾಶವಿದ್ಯಾಗ್ಯೂ ಕೆಲವು ಭೂಮಾಲೀಕರು ಬಳಕೆದಾರ ರೈತರುಗಳಿಗೆ ತಿರುಗಾಡಲು ಅಡ್ಡಿಪಡಿಸುತ್ತಿರುವುದು ಅಥವಾ ಅಂತಹ ಜಾಗಗಳನ್ನು ಮುಚ್ಚಿರುವುದು ಹಾಗೂ ರೈತರು ಬಹುಕಾಲದಿಂದಲೂ ಬಳಸುವ ದಾರಿಗಳಲ್ಲಿ ತಿರುಗಾಡಲು ಕೆಲವು…
ಪ್ರತಿಯೊಂದು ಕುಟುಂಬವು ತಮ್ಮ ಮನೆಗಳಲ್ಲಿ ನವಜಾತ ಶಿಶುಗಳ ಒಟ್ಟಾರೆ ಯೋಗಕ್ಷೇಮವನ್ನ ಖಚಿತಪಡಿಸಿಕೊಳ್ಳಲು ಅನುಸರಿಸುವ ಕೆಲವು ಪ್ರಾಚೀನ ಪದ್ಧತಿಗಳನ್ನ ಹೊಂದಿದೆ. ನೀವು ಒಂದು ದೇಸಿ ಮನೆಯಲ್ಲಿ ಜನಿಸಿದ್ರೆ, ನಿಮ್ಮ ಹಿರಿಯರು ಮಗುವಿನ ಮೂಗನ್ನು ನೇರಗೊಳಿಸಲು ಎಳೆಯುವುದು, ಕಿವಿ ಮತ್ತು ಮೂಗಿಗೆ ಎಣ್ಣೆ ಹಾಕುವುದು ಮತ್ತು ಇನ್ನೂ ಹೆಚ್ಚಿನ ತಂತ್ರಗಳನ್ನ ಅಭ್ಯಾಸ ಮಾಡುವುದನ್ನ ನೀವು ನೋಡಿರಬಹುದು. ಆದರೆ ಈ ಪದ್ಧತಿಗಳು ಎಷ್ಟು ಉಪಯುಕ್ತ ಅಥವಾ ಹಾನಿಕಾರಕ? ನಿಮ್ಮ ಮಗುವಿಗೆ ನೀವು ಎಂದಿಗೂ ಮಾಡಬಾರದು ಅಥವಾ ನೀಡಬಾರದ 10 ವಿಷಯಗಳು.! ಇನ್ಸ್ಟಾಗ್ರಾಮ್ ಪೋಸ್ಟ್’ನಲ್ಲಿ, ಮಕ್ಕಳ ಬೆಳವಣಿಗೆ, ನರವಿಜ್ಞಾನ ಮತ್ತು ಪೋಷಣೆಯಲ್ಲಿ ಪರಿಣತಿ ಹೊಂದಿರುವ ಮಕ್ಕಳ ತಜ್ಞೆ ಮತ್ತು ಸ್ವತಃ ತಾಯಿಯಾಗಿರುವ ಡಾ. ಸಾಂಚಿ ರಸ್ತೋಗಿ, ಮಕ್ಕಳ ವೈದ್ಯರಾಗಿ ತಮ್ಮ ಮಗುವಿಗೆ ಎಂದಿಗೂ ಮಾಡದ 10 ವಿಷಯಗಳನ್ನ ಹಂಚಿಕೊಂಡಿದ್ದಾರೆ. ಅವು ಯಾವುವು ಎಂಬುದನ್ನು ತಿಳಿಯೋಣ. ಪೋಸ್ಟ್ ಹಂಚಿಕೊಳ್ಳುತ್ತಾ, ಡಾ. ಸಾಂಚಿ ರಸ್ತೋಗಿ, “ಮಕ್ಕಳ ವಿಷಯಕ್ಕೆ ಬಂದಾಗ ನಮ್ಮ ಹಳೆಯ ಪೀಳಿಗೆಯವರು ನಮ್ಮಲ್ಲಿ ಹಲವರಿಗೆ ಹಳೆಯ ಅಭ್ಯಾಸಗಳನ್ನ ಅನುಸರಿಸಲು…
ನಾಯಿಗಳೊಂದಿಗೆ ಆಟವಾಡುವಾಗ, ಅವುಗಳ ಉಗುರುಗಳು ಹೆಚ್ಚಾಗಿ ಜನರನ್ನು ಮುಟ್ಟುತ್ತವೆ.. ಕೆಲವೊಮ್ಮೆ ನಾಯಿಯ ಉಗುರುಗಳು ಕೆರೆದು ಕಚ್ಚುತ್ತವೆ. ಇದರಿಂದಾಗಿ, ರೇಬೀಸ್ ಉಗುರುಗಳ ಮೂಲಕ ಹರಡಬಹುದೆಂದು ಜನರು ಭಯಪಡುತ್ತಾರೆ. ಆದಾಗ್ಯೂ.. ಇದರ ಬಗ್ಗೆ ಎಚ್ಚರಿಕೆ ಮತ್ತು ನಿಖರವಾದ ಮಾಹಿತಿ ಬಹಳ ಮುಖ್ಯ. ನಾಯಿ ಆಕಸ್ಮಿಕವಾಗಿ ರೇಬೀಸ್ ಸೋಂಕಿಗೆ ಒಳಗಾಗಿದ್ದರೆ, ನೀವು ಸಹ ಸೋಂಕಿಗೆ ಒಳಗಾಗಬಹುದು ಎಂದು ವೈದ್ಯಕೀಯ ತಜ್ಞರು ಎಚ್ಚರಿಸುತ್ತಾರೆ. ರೇಬೀಸ್ ರೇಬೀಸ್ ವೈರಸ್ನಿಂದ ಉಂಟಾಗುವ ಮಾರಕ. ಅಪಾಯಕಾರಿ ಕಾಯಿಲೆಯಾಗಿದೆ. ರೇಬೀಸ್ ನಾಯಿ ಕಡಿತದಿಂದ ಉಂಟಾಗುತ್ತದೆ. ಆದರೆ ರೇಬೀಸ್ ನಾಯಿ ಉಗುರುಗಳ ಮೂಲಕವೂ ಹರಡುತ್ತದೆಯೇ? ನಾಯಿಗಳೊಂದಿಗೆ ಆಟವಾಡುವಾಗ, ಅವುಗಳ ಉಗುರುಗಳು ಹೆಚ್ಚಾಗಿ ಜನರನ್ನು ಮುಟ್ಟುತ್ತವೆಯೇ..? ಅಂತಹ ಸಂದರ್ಭಗಳಲ್ಲಿ, ನಾಯಿಯ ಉಗುರುಗಳಿಂದ ಪರಚಿದ್ರೆ ನಮಗೆ ರೇಬೀಸ್ ಬರುತ್ತದೆಯೇ? ಅನೇಕರು ಅನುಮಾನಗಳು ಮತ್ತು ಪ್ರಶ್ನೆಗಳನ್ನು ವ್ಯಕ್ತಪಡಿಸುತ್ತಾರೆ.. ಆದಾಗ್ಯೂ.. ಕೆಲವೊಮ್ಮೆ ಜನರು ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ.. ಇದು ಅಪಾಯಕಾರಿ ಎಂದು ಸಹ ಸಾಬೀತುಪಡಿಸಬಹುದು. ವೈದ್ಯರು ನಿಮಗೆ ಉಗುರು ಪರಚಿದ್ರೆ ಸಾಮಾನ್ಯವಾಗಿ ರೇಬೀಸ್ ಅಪಾಯವಿಲ್ಲ ಎಂದು ಹೇಳುತ್ತಾರೆ. ಆದರೆ, ಉಗುರು…
SHOCKING : ಪುಟ್ಟ ಮಕ್ಕಳಿಗೆ `ಚುಂಬಿಸುವ’ ಮುನ್ನ ಎಚ್ಚರ : ಅಪಾಯಕಾರಿ ಸೋಂಕಿನಿಂದ ದೃಷ್ಟಿ ಕಳೆದುಕೊಂಡ 2 ವರ್ಷದ ಮಗು !
ಚುಂಬನದ ಮೂಲಕ ಹರಡಿದ ವೈರಸ್ನಿಂದಾಗಿ ತನ್ನ ಎರಡು ವರ್ಷದ ಮಗನ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ ನಂತರ ತಾಯಿಯೊಬ್ಬರು ಪೋಷಕರಿಗೆ ನೋವಿನ ಎಚ್ಚರಿಕೆಯನ್ನು ಹಂಚಿಕೊಂಡಿದ್ದಾರೆ. ಈ ಘಟನೆಯು ಅವರ ಕುಟುಂಬವನ್ನು ಧ್ವಂಸಗೊಳಿಸಿದೆ ಮತ್ತು ಸಂಬಂಧಿಕರು ಮತ್ತು ಸ್ನೇಹಿತರು ಶಿಶುಗಳನ್ನು ಚುಂಬಿಸಲು ಅನುಮತಿಸುವ ಅಪಾಯಗಳ ಬಗ್ಗೆ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ. ಜುವಾನ್ ಅವರ ಕಣ್ಣಿನಲ್ಲಿ ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ ಸೋಂಕಿಗೆ ಒಳಗಾದ ನಂತರ ಅವರ ಜೀವನ ಬದಲಾಯಿತು. ಸರಳ ಸೋಂಕಿನಂತೆ ಕಾಣುತ್ತಿದ್ದದ್ದು ಶೀಘ್ರದಲ್ಲೇ ವೈದ್ಯಕೀಯ ದುಃಸ್ವಪ್ನವಾಗಿ ಮಾರ್ಪಟ್ಟಿತು. ವೈರಸ್ ಅವನ ಕಣ್ಣುಗುಡ್ಡೆಯ ಮೇಲೆ ಗುಳ್ಳೆಯನ್ನು ಉಂಟುಮಾಡಿತು, ಇದು ಅವನ ಕಾರ್ನಿಯಾದಲ್ಲಿ 4 ಮಿಮೀ ರಂಧ್ರಕ್ಕೆ ಕಾರಣವಾಯಿತು. ವಾರಗಳ ಚಿಕಿತ್ಸೆಯ ಹೊರತಾಗಿಯೂ, ವೈದ್ಯರು ಪೀಡಿತ ಕಣ್ಣಿನಲ್ಲಿ ಅವನ ದೃಷ್ಟಿಯನ್ನು ಉಳಿಸಲು ಸಾಧ್ಯವಾಗಲಿಲ್ಲ. ಚುಂಬಿಸಿದ ನಂತರ ಮಗು ದೃಷ್ಟಿ ಕಳೆದುಕೊಳ್ಳುತ್ತದೆ ಕಳೆದ ವರ್ಷ ಆಗಸ್ಟ್ ನಲ್ಲಿ ಮಗುವಿನ ಸಂಕಷ್ಟ ಪ್ರಾರಂಭವಾಯಿತು, ಆಗ ಕೇವಲ 16 ತಿಂಗಳ ವಯಸ್ಸಿನಲ್ಲಿ, ಅವನ ಪೋಷಕರು ಸಾಮಾನ್ಯ ಕಣ್ಣಿನ ಸೋಂಕು…














