Author: kannadanewsnow57

ಬಳ್ಳಾರಿ : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ಬೆನ್ನುನೋವಿನ ಸಮಸ್ಯೆ ಕಾಣಿಸಿಕೊಂಡಿದ್ದು, ಇಂದು ಜೈಲಿನ ವೈದ್ಯರು ನಟ ದರ್ಶನ್ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ ಬೆನ್ನಲ್ಲೇ ಪತಿ ನಟ ದರ್ಶನ್ ನೋಡಲು ವಿಜಯಲಕ್ಷ್ಮೀ ಆಗಮಿಸಿದ್ದರು. ಈ ವೇಳೆ ತಮ್ಮ ಪತಿ ದರ್ಶನ್ ಗೆ ಬೆನ್ನು ನೋವಿನ ಸಮಸ್ಯೆಯಿಂದ ಚಿಕಿತ್ಸೆ ನೀಡಲು ಡಿಐಜಿ ಟಿ. ಪಿ. ಶೇಷ ಅವರ ಬಳಿ ಮನವಿ ಮಾಡಿದ್ದರು. ಹೀಗಾಗಿ ನಟ ದರ್ಶನ್ ಗೆ ಬೆನ್ನುನೋವಿನ ಕುರಿತು ಆಸ್ಪತ್ರೆ ದಾಖಲೆ ತರುವಂತೆ ಟಿಐಜಿ ಸೂಚನೆ ನೀಡಿದ್ದರು. ವಿಜಯಲಕ್ಷ್ಮೀ ಅವರು ಸದ್ಯ ಬೆನ್ನು ನೋವಿನ ಸಮಸ್ಯೆ ಕುರಿತು ಆಸ್ಪತ್ರೆ ದಾಖಲೆ ಸಲ್ಲಿಸಿದ್ದು, ಇಂದು ಜೈಲಿನ ವೈದ್ಯರು ನಟ ದರ್ಶನ್ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಬೆನ್ನುನೋವು, ಮಲಬದ್ಧತೆ ಸಮಸ್ಯೆ ಅಷ್ಟೊಂದು ಗಂಭೀರ ಸಮಸ್ಯೆ ಅಲ್ಲ. ಅಗತ್ಯ ಬಿದ್ದರೆ ಜೈಲಿನ ವೈದ್ಯರೇ ಚಿಕಿತ್ಸೆ ಕೊಡುತ್ತಾರೆ ಎಂದು…

Read More

ಭಾರತ ಸೇರಿದಂತೆ ವಿಶ್ವದ ಅತಿದೊಡ್ಡ ತೆಂಗಿನಕಾಯಿ ಉತ್ಪಾದಿಸುವ ದೇಶಗಳು ಸೆಪ್ಟೆಂಬರ್ 2 ರನ್ನು ತೆಂಗಿನ ದಿನವೆಂದು ಆಚರಿಸುತ್ತವೆ. 1969 ರಲ್ಲಿ ಏಷ್ಯನ್ ಪೆಸಿಫಿಕ್ ತೆಂಗಿನ ಸಮುದಾಯವನ್ನು (ಎಪಿಸಿಸಿ) ಸ್ಥಾಪಿಸಿದಾಗ ಈ ದಿನವನ್ನು ಮೊದಲು ಆಚರಿಸಲಾಯಿತು. ವಿಶ್ವ ತೆಂಗಿನ ದಿನದ ಪ್ರಾಮುಖ್ಯತೆ ಈ ದಿನವು ತೆಂಗಿನಕಾಯಿಯ ಅನೇಕ ಪ್ರಯೋಜನಗಳನ್ನು ಎತ್ತಿ ತೋರಿಸುತ್ತದೆ, ಅಡುಗೆಯಲ್ಲಿ ಅವುಗಳ ಬಳಕೆಯಿಂದ ಹಿಡಿದು ವಿವಿಧ ಕೈಗಾರಿಕೆಗಳಲ್ಲಿ ಅವರ ಪಾತ್ರದವರೆಗೆ. ಈ ಹಬ್ಬವು ತೆಂಗಿನಕಾಯಿಯ ಪೌಷ್ಠಿಕಾಂಶದ ಮೌಲ್ಯ ಮತ್ತು ಆರ್ಥಿಕ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು. ಈ ಬಹುಮುಖ ಹಣ್ಣನ್ನು ನಮ್ಮ ಟೇಬಲ್‌ಗೆ ತರಲು ಶ್ರಮಿಸುವ ರೈತರು ಮತ್ತು ನಿರ್ಮಾಪಕರನ್ನು ಸಹ ಇದು ಗೌರವಿಸುತ್ತದೆ. ವಿಶ್ವ ತೆಂಗಿನ ದಿನವನ್ನು ಆಚರಿಸುವ ಮೂಲಕ, ಜಾಗತಿಕ ಆರೋಗ್ಯ ಮತ್ತು ಕೃಷಿಯಲ್ಲಿ ತೆಂಗಿನಕಾಯಿಯ ಪ್ರಮುಖ ಪಾತ್ರವನ್ನು ನಾವು ಸ್ವೀಕರಿಸುತ್ತೇವೆ. ವಿಶ್ವ ತೆಂಗಿನಕಾಯಿ ದಿನ 2024 ರ ವಿಷಯ ಯಾವುದು? ವಿಶ್ವ ತೆಂಗಿನಕಾಯಿ ದಿನ 2024 ರ ವಿಷಯ “ವೃತ್ತಾಕಾರದ ಆರ್ಥಿಕತೆಗಾಗಿ ತೆಂಗಿನಕಾಯಿ: ಗರಿಷ್ಠ ಮೌಲ್ಯಕ್ಕಾಗಿ…

Read More

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗತಿಗಳ ಸ್ಥಾನ ನೊಡಿ ಭವಿಷ್ಯ ಹೇಳಲಾಗುವುದು, ಈ ವಾರ (ಸೆಪ್ಟೆಂಬರ್ 1-7ರವರೆಗೆ) ಈ ರಾಶಿಗಳಿಗೆ ಅದೃಷ್ಟಕರ… ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಮಿಥುನ ರಾಶಿ ಈ ವಾರ ನಿಮಗೆ ಶುಭವಾಗಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ವೈವಾಹಿಕ ಬದುಕಿನಲ್ಲಿ ಹೊಂದಾಣಿಕೆ ಕಂಡು ಬರಲಿದೆ. ವೃತ್ತಿ ಜೀವನದ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಪ್ರಯತ್ನಿಸುತ್ತಿದ್ದರೆ ನೀವು ಯಶಸ್ವಿಯಾಗಬಹುದು. ಕೆಲಸದಲ್ಲಿ ನೀವು ಕೆಲ ಸಮಸ್ಯೆ ಎದುರಿಸಿದರೆ ಆತ್ಮವಿಶ್ವಾಸದಿಮದ ಎದುರಿಸಲು ಪ್ರಯತ್ನಿಸಿ. ಈ ವಾರ ನಿಮಗೆ ಅದೃಷ್ಟದ ಬಣ್ಣ ನೀಲಿ ಅದೃಷ್ಟದ ಸಂಖ್ಯೆ 5 ಶುಭ ದಿನ: ಭಾನುವಾರ ಕನ್ಯಾ ರಾಶಿ ಕೆಲಸದ ಸ್ಥಳದಲ್ಲಿ ಯಶಸ್ಸಿನ ಸಾಧ್ಯತೆಗಳಿವೆ. ನಿಮ್ಮ ಶ್ರಮಕ್ಕೆ ಒಳ್ಳೆಯ ಫಲ ಸಿಗಲಿದೆ. ಉದ್ಯೋಗಿಗಳಿಗೆ ಈ ಅವಧಿ ಉತ್ತಮವಾಗಿರಲಿದೆ. ವ್ಯಾಪಾರಿಗಳು ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು. ಇನ್ನು ಆರ್ಥಿಕವಾಗಿ…

Read More

ಬೆಂಗಳೂರು: ದಿನೇ ದಿನೇ ಆನ್ ಲೈನ್ ಗೇಮ್, ಬೆಟ್ಟಿಂಗ್ ಕಾರಣದಿಂದಾಗಿ ಅನೇಕ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಇಂತಹ ಆನ್ ಲೈನ್ ಗೇಮ್ಸ್, ಬೆಟ್ಟಿಂಗ್ ನಿಷೇಧಿಸುವಂತ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಈ ಕುರಿತಂತೆ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದು, ಅದರಲ್ಲಿ ಆನ್ ಲೈನ್ ಗೇಮ್ಸ್, ಬೆಟ್ಟಿಂಗ್ ನಿಷೇಧಿಸುವಂತೆ ಮನವಿ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಅನೇಕ ಆನ್ ಲೈನ್ ಗೇಮ್ಸ್ ನಿಷೇಧಿಸಲಾಗಿತ್ತು. ಈಗಲೂ ಅಂತದ್ದೇ ಮಹತ್ವದ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಸಚಿವ ಅಮಿತ್ ಶಾಗೆ ಬರೆದಂತ ಪತ್ರದಲ್ಲಿ ಕೋರಿದ್ದಾರೆ. ಆನ್ ಲೈನ್ ಗೇಮ್ಸ್ ಗೆ ಅಡಿಟ್ ಆಗಿ ಅನೇಕ ಕುಟುಂಬಗಳು ಬೀದಿಗೆ ಬಿದ್ದಿದ್ದಾವೆ. ಆದರೇ ಆನ್ ಲೈನ್ ಗೇಮ್ಸ್ ಮಾಲೀಕರು ಲಾಭ ಪಡೆದುಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಆನ್ ಲೈನ್ ಗೇಮ್ ಗಳಿಗೆ ಕಡಿವಾಣ ಹಾಕುವಂತೆ ಕೇಂದ್ರ ಸಚಿವರಿಗೆ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ…

Read More

ನವದೆಹಲಿ:ಎತ್ತರವಾಗಿರುವ ಇಯೋಪಲ್ ಗಳು ಕ್ಯಾನ್ಸರ್ ಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ವಿಶ್ವ ಕ್ಯಾನ್ಸರ್ ಸಂಶೋಧನಾ ನಿಧಿಯ ವರದಿಯ ಪ್ರಕಾರ, ಎತ್ತರದ ಜನರು ಕ್ಯಾನ್ಸರ್ ಗೆ ತುತ್ತಾಗುವ ಹೆಚ್ಚಿನ ಸಾಧ್ಯತೆಯನ್ನು ಹೊಂದಿದ್ದಾರೆ ಎಂಬುದಕ್ಕೆ ಬಲವಾದ ಪುರಾವೆಗಳಿವೆ. ಮೇದೋಜ್ಜೀರಕ ಗ್ರಂಥಿ ದೊಡ್ಡ ಕರುಳು ಗರ್ಭಾಶಯ (ಎಂಡೊಮೆಟ್ರಿಯಂ) ಅಂಡಾಶಯ ಪ್ರಾಸ್ಟೇಟ್ ಮೂತ್ರಪಿಂಡ ಚರ್ಮ (ಮೆಲನೋಮಾ) ಮತ್ತು ಸ್ತನ (ಋತುಬಂಧದ ಮೊದಲು ಮತ್ತು ನಂತರ). ಆದರೆ ಯಾಕೆ? ನಮಗೆ ತಿಳಿದಿರುವ, ತಿಳಿಯದ ಮತ್ತು ಅನುಮಾನಿಸುವ ವಿಷಯಗಳು ಇಲ್ಲಿವೆ. ನೀವು ಎತ್ತರವಾಗಿದ್ದರೆ, ಅಪಾಯವು ಹೆಚ್ಚಾಗಿರುತ್ತದೆ ಯುಕೆ ಮಿಲಿಯನ್ ವುಮೆನ್ ಅಧ್ಯಯನವು ಅವರು ತನಿಖೆ ಮಾಡಿದ 17 ಕ್ಯಾನ್ಸರ್ಗಳಲ್ಲಿ 15 ಜನರಿಗೆ ಎತ್ತರವಾಗಿರುವ ವ್ಯಕ್ತಿಗಳಿಗೆ  ಹೊಂದುವ ಸಾಧ್ಯತೆ ಹೆಚ್ಚು ಎಂದು ಕಂಡುಹಿಡಿದಿದೆ. ಒಟ್ಟಾರೆಯಾಗಿ, ಎತ್ತರದಲ್ಲಿ ಪ್ರತಿ ಹತ್ತು ಸೆಂಟಿಮೀಟರ್ ಹೆಚ್ಚಳವು ಕ್ಯಾನ್ಸರ್ ಬರುವ ಅಪಾಯವನ್ನು ಸುಮಾರು 16 ಪ್ರತಿಶತದಷ್ಟು ಹೆಚ್ಚಿಸುತ್ತದೆ ಎಂದು ಅದು ಕಂಡುಹಿಡಿದಿದೆ. ಪುರುಷರಲ್ಲಿ ಇದೇ ರೀತಿಯ ಹೆಚ್ಚಳ ಕಂಡುಬಂದಿದೆ. ಅದನ್ನು ದೃಷ್ಟಿಕೋನದಲ್ಲಿ ಇಡೋಣ. ಪ್ರತಿ ವರ್ಷ…

Read More

ಯಾದಗಿರಿ : ರಾಜ್ಯದಲ್ಲಿ ಭಾರೀ ಮಳೆಗೆ ಮತ್ತೊಂದು ಬಲಿಯಾಗಿದ್ದು, ಮನೆಯ ಗೋಡೆ ಕುಸಿದ ಪರಿಣಾಮ ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಯಾದಿಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಪಕ್ಕದ ಮನೆಯ ಗೋಡೆ ಕುಸಿದ ಪರಿಣಾಮ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಮನೆಯ ಕಟ್ಟೆ ಮೇಲೆ ಕುಳಿತಿದ್ದ ವೇಳೆ ಭಾರೀ ಮಳೆಯಿಂದಾಗಿ ಪಕ್ಕದ ಮನೆಯ ಗೋಡೆ ಕುಸಿದ ಪರಿಣಾಮ ಗ್ರಾಮದ ಸಕೀನಾಬಿ ನದಾಫ್ (70) ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಕಲಬುರಗಿ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಇಸ್ಲಾಮಾಬಾದ್: ಕಾಶ್ಮೀರ ವಿವಾದವು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ವಿಷಯವಾಗಿದ್ದು, ಅದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಅನುಗುಣವಾಗಿ ಪರಿಹರಿಸಬೇಕು ಎಂದು ಪಾಕಿಸ್ತಾನ ಭಾನುವಾರ ಹೇಳಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಇತ್ತೀಚೆಗೆ ನೀಡಿದ ಹೇಳಿಕೆಗಳಿಗೆ ಪ್ರತಿಕ್ರಿಯಿಸುವಾಗ ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್ ಈ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದೊಂದಿಗಿನ ನಿರಂತರ ಮಾತುಕತೆಯ ಯುಗ ಮುಗಿದಿದೆ ಎಂದು ಜೈಶಂಕರ್ ಶುಕ್ರವಾರ ಹೇಳಿದ್ದಾರೆ. ಕ್ರಮಗಳು ಪರಿಣಾಮಗಳನ್ನು ಹೊಂದಿವೆ, ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ, 370 ನೇ ವಿಧಿಯನ್ನು ಮಾಡಲಾಗಿದೆ ಎಂದು ನಾನು ಭಾವಿಸುತ್ತೇನೆ. ಪಾಕಿಸ್ತಾನದೊಂದಿಗೆ ನಾವು ಯಾವ ರೀತಿಯ ಸಂಬಂಧವನ್ನು ಯೋಚಿಸಬಹುದು ಎಂಬುದು ಇಂದಿನ ಸಮಸ್ಯೆಯಾಗಿದೆ. ನಾನು ಹೇಳಲು ಬಯಸುವುದೇನೆಂದರೆ, ನಾವು ನಿಷ್ಕ್ರಿಯರಲ್ಲ, ಮತ್ತು ಘಟನೆಗಳು ಸಕಾರಾತ್ಮಕ ಅಥವಾ ನಕಾರಾತ್ಮಕ ದಿಕ್ಕನ್ನು ತೆಗೆದುಕೊಂಡರೂ, ನಾವು ಪ್ರತಿಕ್ರಿಯಿಸುತ್ತೇವೆ” ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರ ವಿವಾದವು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ವಿವಾದವಾಗಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ…

Read More

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಎನ್ನುವಂತೆ ಇಂದಿನಿಂದಲೇ ವಾರದಲ್ಲಿ 6 ದಿನವೂ ಮೊಟ್ಟೆ ವಿತರಣೆ ಮಾಡುವ ನಿರೀಕ್ಷೆಯಿದೆ. ಸೆಪ್ಟೆಂಬರ್‌ ತಿಂಗಳಿನಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದ 6 ದಿನವೂ ಮೊಟ್ಟೆ ವಿತರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಣೆಗೆ ರಜಾ ದಿನ ಹೊರತುಪಡಿಸಿ, ಪ್ರಸ್ತುತ ಮಕ್ಕಳಿಗೆ ವಾರಕ್ಕೆ 2 ದಿನ ಮೊಟ್ಟೆ ನೀಡಲಾಗುತ್ತಿದೆ.ವಾರದ 6 ದಿನವೂ ಮೊಟ್ಟೆ ವಿತರಣೆಗೆ ನಿರ್ಧರಿಸಲಾಗಿದೆ. ಇಂದಿನಿಂದ 6 ದಿನ ಮೊಟ್ಟೆ ವಿತರಣೆ ಮಾಡುವ ಸಾಧ್ಯತೆ ಇದೆ. ವಾರದ 6 ದಿನವೂ ಮಕ್ಕಳಿಗೆ ಮೊಟ್ಟೆ ನೀಡುವುದರಿಂದ ವಾರ್ಷಿಕ 1,400 ಕೋಟಿ ರು. ವೆಚ್ಚವಾಗಲಿದೆ.

Read More

ನವದೆಹಲಿ: ಚೀನಾದ ಸರಕುಗಳ ಒಳಹರಿವಿನಿಂದಾಗಿ ಛತ್ರಿಗಳು, ಗಾಜಿನ ವಸ್ತುಗಳು, ಕಟ್ಲರಿ, ಕೈಚೀಲಗಳು ಮತ್ತು ಸೌಂದರ್ಯವರ್ಧಕಗಳಂತಹ ವಿವಿಧ ಉತ್ಪನ್ನ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಣ್ಣ ಉದ್ಯಮಗಳು ದೇಶೀಯ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿವೆ ಎಂದು ಥಿಂಕ್ ಟ್ಯಾಂಕ್ ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (ಜಿಟಿಆರ್ಐ) ವರದಿ ತಿಳಿಸಿದೆ. ಚೀನಾದ ಆಮದಿನ ಪ್ರಾಬಲ್ಯವು ಸ್ಥಳೀಯ ಉತ್ಪಾದನೆಯನ್ನು ಸ್ಥಳಾಂತರಿಸುತ್ತಿದೆ, ಏಕೆಂದರೆ ಭಾರತದಲ್ಲಿ ಬಳಸುವ ಶೇಕಡಾ 90 ಕ್ಕೂ ಹೆಚ್ಚು ಛತ್ರಿಗಳು, ಕೃತಕ ಹೂವುಗಳು ಮತ್ತು ಮಾನವ ಕೂದಲಿನ ವಸ್ತುಗಳನ್ನು ಚೀನಾದಿಂದ ಪಡೆಯಲಾಗುತ್ತದೆ. ಗಾಜಿನ ವಸ್ತುಗಳು, ಚರ್ಮ ಮತ್ತು ಆಟಿಕೆಗಳಂತಹ ಉತ್ಪನ್ನ ವಿಭಾಗಗಳಲ್ಲಿ, ಈ ವಸ್ತುಗಳ ಭಾರತದ ಒಟ್ಟು ಮಾರುಕಟ್ಟೆಯಲ್ಲಿ ಚೀನಾದ ಪಾಲು ಶೇಕಡಾ 50 ಕ್ಕಿಂತ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಭಾರತದ ಶೇ.95.8ರಷ್ಟು ಛತ್ರಿಗಳು ಮತ್ತು ಸೂರ್ಯ ಛತ್ರಿಗಳು (31 ಮಿಲಿಯನ್ ಡಾಲರ್) ಮತ್ತು ಶೇ.91.9ರಷ್ಟು ಕೃತಕ ಹೂವುಗಳು ಮತ್ತು ಮಾನವ ಕೂದಲಿನ ವಸ್ತುಗಳನ್ನು (14 ಮಿಲಿಯನ್ ಡಾಲರ್) ಚೀನಾ ಪೂರೈಸುತ್ತದೆ. ಗಾಜಿನ ಪಾತ್ರೆಗಳಲ್ಲಿ…

Read More

ಶಿವಮೊಗ್ಗ: ಜಿಲ್ಲೆಯ ಜೋಗದ ಜಲಪಾತ ವೀಕ್ಷಣೆಗೆ ಈ ಮೊದಲು ಯಾವುದೇ ಸಮಯ ಇರಲಿಲ್ಲ. ಎಷ್ಟು ಹೊತ್ತಾದರೂ ಜೋಗದ ಜಲಪಾತದ ಸೊಬಗನ್ನು ಸವಿಯಬಹುದಾಗಿತ್ತು. ಆದರೇ ಇನ್ಮುಂದೆ ಇದಕ್ಕೆ ಅವಕಾಶವಿಲ್ಲ. ಕೇವಲ 2 ಗಂಟೆ ಮಾತ್ರವೇ ನೋಡಲು ಸಮಯ ನಿಗದಿ ಮಾಡಲಾಗಿದೆ. ಅಲ್ಲದೇ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಿ, ಪ್ರವಾಸಿಗರಿಗೆ ಬಿಗ್ ಶಾಕ್ ನೀಡಲಾಗಿದೆ. ಈ ಕುರಿತಂತೆ ಜೋಗ ನಿರ್ವಹಣಾ ಪ್ರಾಧಿಕಾರವು ಆದೇಶ ಹೊರಡಿಸಿದ್ದು, ಜೋಗದ ಜಲಪಾತವನ್ನು 2 ಗಂಟೆಯ ಒಳಗಾಗಿ ನೋಡಿಕೊಂಡು ವಾಪಾಸ್ಸು ಪ್ರವಾಸಿಗರು ಬರಬೇಕು. ಇದಕ್ಕಿಂತ ಹೆಚ್ಚು ಹೊತ್ತು ಇರುವಂತಿಲ್ಲ ಎಂಬುದಾಗಿ ತಿಳಿಸಿದೆ. ಇದಲ್ಲದೇ ಜೋಗದ ಜಲಪಾತ ವೀಕ್ಷಣೆಗೆ ತೆರಳುವಂತ ಬಸ್ ಗಳಿಗೆ 150 ರೂ ಇದ್ದಂತ ಶುಲ್ಕವನ್ನು 200 ರೂ.ಗೆ ಏರಿಕೆ ಮಾಡಲಾಗಿದೆ. ಕಾರಿಗೆ ರೂ.50 ಇದ್ದಂತ ಶುಲ್ಕವನ್ನು ರೂ.80ಕ್ಕೆ ಏರಿಸಲಾಗಿದೆ. ಪ್ರವಾಸಿಗರಿಗೆ 10 ರೂ ಇದ್ದಂತ ಪ್ರವೇಶ ಶುಲ್ಕವನ್ನು 20 ರೂ.ಗೆ ಹೆಚ್ಚಳ ಮಾಡಿ ಬಿಗ್ ಶಾಕ್ ನೀಡಲಾಗಿದೆ. ಜೋಗ ಅಭಿವೃದ್ಧಿ ಪ್ರಾಧಿಕಾರದಿಂದ ಪಾರ್ಕಿಂಗ್ ಶುಲ್ಕ, ಪ್ರವೇಶ ಶುಲ್ಕವನ್ನು…

Read More