Subscribe to Updates
Get the latest creative news from FooBar about art, design and business.
Author: kannadanewsnow57
ನವದೆಹಲಿ : ಅಮುಲ್ ಅಡಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಗಾರ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (ಜಿಸಿಎಂಎಂಎಫ್) ಜೂನ್ 3, 2024 ರಿಂದ ಜಾರಿಗೆ ಬರುವಂತೆ ತಾಜಾ ಹಾಲಿನ ಬೆಲೆಯನ್ನು ಲೀಟರ್ ಗೆ ಸುಮಾರು 2 ರೂ.ಗಳಷ್ಟು ಹೆಚ್ಚಿಸುವುದಾಗಿ ಹೇಳಿದೆ. ಈ ಕ್ರಮವು ದೇಶಾದ್ಯಂತ ಹಾಲಿನ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಅಮುಲ್ ಹಾಲಿನಲ್ಲಿ ಪ್ರತಿ ಲೀಟರ್ಗೆ 2 ರೂ.ಗಳ ಹೆಚ್ಚಳವು ಎಂಆರ್ಪಿಯಲ್ಲಿ 3-4% ಹೆಚ್ಚಳಕ್ಕೆ ಅನುವಾದಿಸುತ್ತದೆ, ಇದು ಸರಾಸರಿ ಆಹಾರ ಹಣದುಬ್ಬರಕ್ಕಿಂತ ಕಡಿಮೆಯಾಗಿದೆ. ಫೆಬ್ರವರಿ 2023 ರಿಂದ, ಅಮುಲ್ ಪ್ರಮುಖ ಮಾರುಕಟ್ಟೆಗಳಲ್ಲಿ ತಾಜಾ ಹಾಲಿನ ಬೆಲೆಯಲ್ಲಿ ಯಾವುದೇ ಹೆಚ್ಚಳವನ್ನು ಮಾಡಿಲ್ಲ. ಹಾಲಿನ ಕಾರ್ಯಾಚರಣೆ ಮತ್ತು ಉತ್ಪಾದನೆಯ ಒಟ್ಟಾರೆ ವೆಚ್ಚದ ಹೆಚ್ಚಳದಿಂದಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ . ನಮ್ಮ ಸದಸ್ಯ ಸಂಘಗಳು ಕಳೆದ ವರ್ಷಕ್ಕೆ ಹೋಲಿಸಿದರೆ ರೈತರ ಬೆಲೆಯನ್ನು ಸುಮಾರು 6-8% ಹೆಚ್ಚಿಸಿವೆ ಎಂದು ಒಕ್ಕೂಟವು ಹೇಳಿಕೆಯ ಮೂಲಕ ತಿಳಿಸಿದೆ, ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಗ್ರಾಹಕರು ಪಾವತಿಸುವ…
ಬೆಂಗಳೂರು : ಮಹಿಳೆ ಅಪಹರಣ ಪ್ರಕಣದಲ್ಲಿ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿರುವ ಭವಾನಿ ರೇವಣ್ಣಗೆ ಬಂಧನ ಭೀತಿ ಎದುರಾಗಿದ್ದು, ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಕಿಡ್ನ್ಯಾಪ್ ಪ್ರಕರಣದಲ್ಲಿ ಜಾಮೀನು ಸಿಗದೆ ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ತಲೆಮರೆಸಿಕೊಂಡಿದ್ದಾರೆ. ಎಸ್ಐಟಿ ಅಧಿಕಾರಿಗಳು ವಿಚಾರಣೆಗೆಂದು ಹೊಳೆನರಸೀಪುರದಲ್ಲಿರುವ ನಿವಾಸಕ್ಕೆ ತೆರಳಿದ ವೇಳೆ ಭವಾನಿ ರೇವಣ್ಣ ಅಲ್ಲಿರಲಿಲ್ಲ. 15 ದಿನಗಳ ಹಿಂದೆಯೇ ಅವರು ನಿಗೂಢ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಈ ನಡುವೆ ಜಾಮೀನು ಅರ್ಜಿಗಾಗಿ ಭವಾನಿ ರೇವಣ್ಣ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಬಂಧನದ ಭೀತಿಯಲ್ಲಿರುವ ಅವರು ಇಂದು ಜಾಮೀನು ಅರ್ಜಿ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದು, ಬಳಿಕ ಎಸ್ ಐಟಿ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಎನ್ನಲಾಗಿದೆ.
ಕೆಎನ್ ಎನ್ ಡಿಜಿಟಲ್ ಡೆಸ್ಕ್ : ಕೂದಲಿನ ಆರೈಕೆ ಅಷ್ಟು ಸುಲಭವಲ್ಲ. ಕೂದಲಿನ ಆರೈಕೆ ಮಾಡಿಕೊಳ್ಳಲು ಅನೇಕ ಮನೆಮದ್ದುಗಳಿವೆ ಹಾಗು ಮಾರುಕಟ್ಟೆಯಲ್ಲಿ ಅನೇಕ ಬಗೆಯ ಕಾಸ್ಮೆಟಿಕ್ಸ್ ಕೂಡ ಇವೆ. ಇವುಗಳಲ್ಲದೇ ಬಿಯರ್ ಮೂಲಕವಾಗಿಯೂ ಕೂದಲಿನ ಆರೈಕೆ ಮಾಡಿಕೊಳ್ಳಬಹುದು ಎಂಬ ಸಂಗತಿಯನ್ನು ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ. ಏನೇ ಮನೆಮದ್ದುಗಳನ್ನು ಟ್ರೈ ಮಾಡಿ ಕೂದಲು ಸೊಂಪಾಗಿ ಬೆಳೆಯದಿದ್ದಾಗ ಬಿಯರ್ ಟ್ರೈ ಮಾಡಿ ನೋಡಿ. ಹೌದು. ಬಿಯರ್ ಬಳಸಿ ಕೂದಲು ತೊಳೆಯುವುದರಿಂದ ಕೂದಲು ಆರೋಗ್ಯಕರವಾಗಿ ಸೊಂಪಾಗಿ ಬೆಳೆಯುತ್ತವೆ ಅನ್ನೋದು ಸಂಶೋಧನೆವೊಂದರ ವರದಿಯಾಗಿದೆ. ಕಾರಣ ಬಿಯರ್ನಲ್ಲಿ ವಿಟಮಿನ್ ಬಿ ಹೇರಳವಾಗಿದ್ದು. ಇದು ಕೂದಲನ್ನು ಸೊಂಪಾಗಿಸುತ್ತದೆ. ಅಷ್ಟೆ ಅಲ್ಲದೇ ಬಿಯರ್ನಲ್ಲಿ ಬಯೋಟಿಕ್, ಕ್ಯಾಲ್ಸಿಯಂ, ವಿಟಮಿನ್ ಡಿ, ಸತು, ಪೋಲೇಟ್ ನಂತಹ ಪೋಷಕಾಂಶಗಳಿವೆ. ಈ ಎಲ್ಲಾ ಪೋಷಕಾಂಶಗಳು ಕೂದಲಿನ ಆರೋಗ್ಯನ್ನು ಕಾಪಾಡುವುದರ ಜೊತೆಗೆ ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ. ನಿಮಗೆ ಇನ್ನೊಂದು ಮುಖ್ಯವಾದ ವಿಷಯ ಗೊತ್ತಿರಲಿ. ನೀವು ಈಗಾಗಲೇ ಬಿಯರ್ ಬಳಸಿ ಕೂದಲು ತೊಳೆದುಕೊಳ್ಳುತ್ತಿದ್ದೀರಿ. ಅದು ಹೇಗೆ ಅಂತಿರಾ? ಅನೇಕ ಶಾಂಪು…
ಕೆಎನ್ ಎನ್ ಡಿಜಿಟಲ್ ಡೆಸ್ಕ್ : ವೇಗದ ಜೀವನ ಆಫೀಸಿನ ಕೆಲಸದ ಒತ್ತಡ. ಇವುಗಳ ನಡುವೆ ಮನೆಯ ಬೇರೆ ಕೆಲಸ ಮಾಡಿಕೊಳ್ಳಲು ಸಮಯವಿಲ್ಲ. ಕೆಲವೊಮ್ಮೆ ಸಮಯವಿದ್ದರೂ ಸೋಮಾರಿತನ ಹೀಗಾಗಿ ಅದೆಷ್ಟೋ ಅಡುಗೆ ಪದಾರ್ಥಗಳನ್ನು ಹೊರಗಡೆ ಅಂಗಡಿಯಿಂದ ತರುತ್ತಿದ್ದೇವೆ. ಅವುಗಳಲ್ಲಿ ಖಾರದ ಪುಡಿ ಸಹ ಒಂದು. ಖಾರದ ಪುಡಿ ಮನೆಯಲ್ಲೇ ಮಾಡುವುದು ತುಂಬಾ ರಗಳೆ. ಹಾಗು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಅಂಗಡಿಯಿಂದ ತಂದ ಖಾರದ ಪುಡಿ ಎಷ್ಟು ಸೇಫ್. ಅದು ಅಸಲಿಯೋ ನಕಲಿಯೋ ಎಂದು ಪರೀಕ್ಷೆ ಮಾಡೋದು ಹೇಗೆ ಎಂದು ತಿಳಿದುಕೊಳ್ಳೋಣ. ಒಂದು ಪಾರದರ್ಶಕಯುಕ್ತ ಗಾಜಿನ ಲೋಟ ತೆಗೆದುಕೊಳ್ಳಿ. ಇದಕ್ಕೆ ನೀರು ತುಂಬಿ. ನಂತರ ಇದಕ್ಕೆ ಅಂಗಡಿಯಿಂದ ತಂದ ಕೆಂಪು ಮೆಣಸಿನಕಾಯಿ ಪುಡಿಯನ್ನು ಹಾಕಿ. ಒಂದು ವೇಳೆ ನೀವು ತಂದ ಖಾರದ ಪುಡು ನಕಲಿ ಅಥವಾ ಕೃತಕದ್ದಾಗಿದ್ದರೆ, ನೀರು ಅದರ ಬಣ್ಣ ಬದಲಾಯಿಸುತ್ತದೆ. ಒಂದು ವೇಳೆ ಆ ಖಾರದ ಪುಡಿಯಲ್ಲಿ ಇಟ್ಟಿಗೆ ಪುಡಿ ಬೆರೆತಿದ್ದರೆ ಅದು ಬಣ್ಣ ಬಿಡುತ್ತದೆ. ಕೆಂಪು-ಕಂದು ಬಣ್ಣಕ್ಕೆ…
ಕೆಎನ್ ಎನ್ ಡಿಜಿಟಲ್ ಡೆಸ್ಕ್ : ಒಬ್ಬ ಆರೋಗ್ಯವಂತ ವ್ಯಕ್ತಿಯ ತೂಕ ಎಷ್ಟಿರಬೇಕು. ಇನ್ನು ಇಷ್ಟು ಎತ್ತರವಿದ್ದ ವ್ಯಕ್ತಿಯ ತೂಕ ಎಷ್ಟಿರಬೇಕು. ವ್ಯಕ್ತಿಯ ಎತ್ತರಕ್ಕೂ ಹಾಗು ತೂಕಕ್ಕೂ ಏನಾದರೂ ಸಂಬಂಧ ಇದೆಯೇ..? ಅಥವಾ ಎತ್ತರಕ್ಕೆ ಅನುಗುಣವಾಗಿ ಎಷ್ಟು ತೂಕ ಇರಬೇಕು..? ಯಾವ ವಯಸ್ಸಿನಲ್ಲಿ ಎಷ್ಟು ತೂಕವಿದ್ದರೆ ಉತ್ತಮ? ಇಂತಹ ಗೊಂದಲಗಳು ಅನೇಕರಲ್ಲಿ ಇವೆ. ಇವುಗಳಿಗೆ ಉತ್ತರ ಕೊಡುವ ಪ್ರಯತ್ನವೇ ಈ ಲೇಖನ. ನೀವು ಇದೇ ರೀತಿಯ ಗೊಂದಲ ಹೊಂದಿದ್ದರೆ ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾಗಿ ವ್ಯಕ್ತಿಯ ತೂಕ ಎಷ್ಟು ಇರಬೇಕೆಂದು ನಾವು ನಿಮಗೆ ತಿಳಿಸುತ್ತೇವೆ. ವೈದ್ಯಕೀಯ ಲೋಕದ ಪ್ರಕಾರ ಒಂದು ಮಗು ಜನಿಸಿದ ಸಮಯದಲ್ಲಿ ಅದು ಗಂಡಾಗಿದ್ದರೆ ಅದರ ತೂಕ 3.3 ಕೆಜಿ ಇರಬೇಕು. ಅದೇ ಹೆಣ್ಣುಮಗುವಾಗಿದ್ದರೆ 3.2 ಕೆಜಿ ಇರಬೇಕು. ಅದೇ ರೀತಿಯಾಗಿ 3 ರಿಂದ 5 ತಿಂಗಳ ಗಂಡು ಮಗುವಿನ ತೂಕ 6 ಕೆಜಿ ಇರಬೇಕು. ಹೆಣ್ಣು ಮಗುವಿನ ತೂಕ 5.4 ಕೆಜಿಯ ಸಮೀಪದಲ್ಲಿರಬೇಕು. ಒಂದು ವರ್ಷ ತುಂಬಿದ…
ಕೆಎನ್ ಎನ್ ಡಿಜಿಟಲ್ ಡೆಸ್ಕ್ : ಇತ್ತಿಚೆಗೆ ಸಿಲಿಂಡರ್ ಗ್ಯಾಸ್ ಬೆಲೆ ದಿನೇ ದಿನೇಹೆಚ್ಚಾಗುತ್ತಾಹೋಗುತ್ತಿದೆ. ಹೀಗಾಗಿ ಅಡುಗೆಗೆ ಮಾಡಲು ಹೆಚ್ಚಾಗಿ ಗ್ಯಾಸ್ ಬಳಕೆ ಮಾಡುವಾಗ ಜನರು ಆದಷ್ಟು ಅಡುಗೆ ಅನಿಲವನ್ನು ಉಳಿತಾಯ ಮಾಡಲು ಪ್ರಯತ್ನಿಸಬೇಕು. ಹಾಗಾಗಿ ಕೆಲವೊಂದು ಸಿಂಪಲ್ ಟಿಪ್ಸ್ ಅನುಸರಿಸುವುದರ ಮೂಲಕ ಅಡುಗೆ ಅನಿಲವನ್ನು ಉಳಿತಾಯ ಮಾಡಬಹುದು. ಗ್ಯಾಸ್ ಬರ್ನರ್ನ್ನು ಶುಚಿ ಮಾಡದೆ ಇದ್ದಾಗ ಪೈಪ್ ಮುಖಾಂತರ ಗ್ಯಾಸ್ ಸರಿಯಾಗಿ ಬರದೇ ಬ್ಲಾಕ್ ಆಗುವ ಸಾಧ್ಯತೆ ಇದೆ. ಇದರಿಂದ ಬರ್ನರ್ ಕೂಡ ಸರಿಯಾಗಿ ಉರಿಯದು. ಮೊದಲಿಗೆ ಬರ್ನರ್ ನಲ್ಲಿ ಹಳದಿ ಅಥವಾ ಕಿತ್ತಳೆ ಬೆಂಕಿಯು ಬರುತ್ತಿದೆಯಾ ಅಥವಾ ಬೆಂಕಿಯು ಅಸ್ತವ್ಯಸ್ತವಾಗಿ ಇದೆಯಾ ಎಂದು ತಿಳಿದುಕೊಂಡು ಒಂದು ವೇಳೆ ಬೆಂಕಿ ಈ ಬಣ್ಣಕ್ಕೆ ತಿರುಗಿದ್ದರೆ, ಬರ್ನರ್ ನಲ್ಲಿ ಸಮಸ್ಯೆ ಎಂದರ್ಥ ಹೀಗಿದ್ದರೆ ಆಗ ನೀವು ಇದನ್ನು ತೆಗೆದು ಶುಚಿ ಮಾಡಬೇಕು. ಹೆಚ್ಚಾಗಿ ಧಾನ್ಯಗಳು ಹಾಗೂ ಅಕ್ಕಿ ಬೇಯಲು ತುಂಬಾ ಸಮಯ ಹಿಡಿಯುತ್ತದೆ. ಇದರಿಂದ ಕೆಲವೊಂದು ಧಾನ್ಯಗಳು ಅಥವಾ ಅಕ್ಕಿಯನ್ನು ಅಡುಗೆ ಮಾಡುವ…
ಕೆಎನ್ ಎನ್ ಡಿಜಿಟಲ್ ಡೆಸ್ಕ್ : ಆರೋಗ್ಯ ಎನ್ನುವುದು ಎಲ್ಲರಿಗೂ ಮುಖ್ಯವಾಗಿರುತ್ತದೆ. ದೇಹ ಸುಸ್ಥಿತಿಯಲ್ಲಿದ್ದರೆ ಮಾತ್ರ ದಿನನಿತ್ಯದ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ಸಾಧ್ಯ. ಅದು ಮಕ್ಕಳ ವಿಷಯದಲ್ಲಿಯೂ ಅನ್ವಯವಾಗುತ್ತದೆ. ಈಗಂತೂ ಸಾಂಕ್ರಾಮಿಕ ಕಾಯಿಲೆಗಳಿಂದ ಆರೋಗ್ಯವನ್ನು ರಕ್ಷಿಸಿಕೊಳ್ಳುವದು ತುಸು ಕಷ್ಟದ ಕೆಲಸವೇ ಸರಿ. ಇತ್ತೀಚೆಗೆ ಕೊರೋನಾ ಅಬ್ಬರ ಕಡಿಮೆಯಾಗುತ್ತಿದೆ. ಆದರೂ ಆತಂಕ ಮಾತ್ರ ಕಡಿಮೆಯಾಗಿಲ್ಲ. ಕಚೇರಿಗಳು ಆನ್ಲೈನ್ ಕೆಲಸಕ್ಕೆ ಅಂತ್ಯ ಹಾಡಿ ಆಫೀಸ್ಗೆ ಉದ್ಯೋಗಿಗಳನ್ನು ಕರೆಸಿಕೊಳ್ಳುತ್ತಿದೆ. ಅದೇ ರೀತಿ ಶಾಲೆಗಳೂ ಕೂಡ ಮಕ್ಕಳಿಗೆ ಆನ್ಲೈನ್ ಬದಲಿಗೆ ಭೌತಿಕವಾಗಿ ಪಾಠಮಾಡಲು ಆರಂಭಿಸಿವೆ. ಆದರೆ ಸಮಸ್ಯೆ ಎಂದರೆ ಶಾಲೆಗೆ ಹೋಗುವ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು. ಅದಕ್ಕೆ ಹಲವು ಕಾರಣಗಳಿದೆ. ಆಹಾರ, ಜೀವನ ಶೈಲಿ ಒಂದು ರೀತಿಯಲ್ಲಿ ಕಾರಣವಾದರೆ ಮಕ್ಕಳು ಇರುವ ವಾತಾವರಣ ಕೂಡ ಆರೋಗ್ಯ ಹಾಳಾಗಲು ಕಾರಣವಾಗುತ್ತದೆ. ಇದನ್ನು ಹೊರತುಪಡಿಸಿ ಇನ್ನೂಂದಿಷ್ಟು ಕಾರಣಗಳಿಂದ ಮಕ್ಕಳು ಆಗಾಗ ಹುಷಾರಿಲ್ಲದಂತೆ ಆಗುತ್ತಾರೆ. ಆ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಶಾಲೆಗೆ ಹೋಗುವ ಗಡಿಬಿಡಿಯಲ್ಲಿ ಸರಿಯಾಗಿ…
ಕೆಎನ್ ಎನ್ ಡಿಜಿಟಲ್ ಡೆಸ್ಕ್ : ತಾಯಿ ಎದೆ ಹಾಲು ಸರ್ವಶ್ರೇಷ್ಠ. ತಾಯಿ ಹಾಲನ್ನು ಅಮೃತಕ್ಕೆ ಹೋಲಿಸುತ್ತಾರೆ. ಹೀಗೆ ಹೇಳಲು ಅನೇಕ ವೈಜ್ಞಾನಿಕ ಕಾರಣಗಳಿವೆ. ಹಾಗಿದ್ದರೆ ಬನ್ನಿ ಮಗುವಿಗೆ ತಾಯಿಯ ಎದೆ ಹಾಲು ಪಾನದಿಂದಾಗು ಪ್ರಯೋಜನಗನ್ನು ತಿಳಿದುಕೊಳ್ಳೋಣ. ಆದರೆ ಕೆಲ ತಾಯಂದಿರು ಈ ಸ್ತನ್ಯಪಾನದ ಕುರಿತು ಕೆಲ ತಪ್ಪು ತಿಳುವಳಿಕೆಯನ್ನು ಹೊಂದಿದ್ದಾರೆ. ಹಾಗಾದರೆ ನಿಮ್ಮ ಮಗುವಿಗೆ ಎಷ್ಟು ದಿನಗಳವರೆಗೆ ಹಾಲುಣಿಸಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ. ನವಜಾತ ಶಿಶುವಿಗೆ ತಾಯಿಯ ಎದೆಹಾಲು ಕುಡಿಯುವುದನ್ನು ನಿಸರ್ಗವೇ ಹೇಳಿಕೊಡುತ್ತದೆ. ದಿನ ಕಳೆದಂತೆ ನಿಧಾನವಾಗಿ ಅದು ಎದೆ ಹಾಲು ಸೇವಿಸಲು ಶುರು ಮಾಡುತ್ತದೆ. ಆದರ ಕಲಿಕೆ ಹಾಗೂ ಹಸಿವಿನ ಅಗತ್ಯತೆಗೆ ಅನುಗುಣವಾಗಿ ಹಾಲಿನ ಪ್ರಮಾಣವೂ ಹೆಚ್ಚಾಗುತ್ತದೆ. ತಾಯಿ ಎದೆ ಹಾಲು ಮಗುವಿಗೆ ಪ್ರೋಟೀನ್, ಕ್ಯಾಲ್ಸಿಯಂ, ಕೊಬ್ಬು, ವಿಟಮಿನ್ ಎ ಪೋಷಕಾಂಶಗಳನ್ನು ಜೀವನ ಪರ್ಯಂತ ಒದಗಿಸಿಕೊಡುತ್ತದೆ. ಹಾಗು ಹೆಚ್ಚು ದಿನಗಳ ಕಾಲ ಸ್ತನ್ಯಪಾನ ಮಾಡಿದ ಮಗು ಹೆಚ್ಚು ರೋಗ ನಿರೋಧಕ ಶಕ್ತಿಯನ್ನೂ ಹೊಂದಿರುತ್ತದೆ. ಇನ್ನು ಯಾವ ತಾಯಿ…
ಮುಂಬೈ : ಪ್ಯಾರಿಸ್ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದಿಂದ ವಿಸ್ತಾರಾ ವಿಮಾನದಲ್ಲಿ ಕೈಬರಹದ ಬಾಂಬ್ ಬೆದರಿಕೆ ಪತ್ರ ಪತ್ತೆಯಾದ ನಂತರ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಬೆಳಿಗ್ಗೆ 10:08 ಕ್ಕೆ ವಿಮಾನದ ಚೀಲದಲ್ಲಿ ಬೆದರಿಕೆ ಪತ್ರವನ್ನು ಸಿಬ್ಬಂದಿ ಪತ್ತೆಹಚ್ಚಿದರು, ನಂತರ ವಿಮಾನವು ಬೆಳಿಗ್ಗೆ 10:19 ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ವಿಮಾನದಲ್ಲಿ 12 ಸಿಬ್ಬಂದಿ ಸೇರಿದಂತೆ 294 ಪ್ರಯಾಣಿಕರಿದ್ದರು. ಜೂನ್ 2, 2024 ರಂದು ಪ್ಯಾರಿಸ್ನಿಂದ ಮುಂಬೈಗೆ ಕಾರ್ಯನಿರ್ವಹಿಸುತ್ತಿರುವ ವಿಸ್ತಾರಾ ಫ್ಲೈಟ್ ಯುಕೆ 024 ನಲ್ಲಿ ನಮ್ಮ ಸಿಬ್ಬಂದಿ ಭದ್ರತಾ ಕಾಳಜಿಯನ್ನು ಗಮನಿಸಿದ್ದಾರೆ ಎಂದು ನಾವು ದೃಢಪಡಿಸುತ್ತೇವೆ” ಎಂದು ವಿಸ್ತಾರಾ ಏರ್ಲೈನ್ಸ್ ವಕ್ತಾರರು ತಿಳಿಸಿದ್ದಾರೆ.
ನವದೆಹಲಿ : ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ಲೋಕಸಭೆ ಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಗೆಲುವಿನ ವಿಶ್ವಾಸದಲ್ಲಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಜೂನ್ 4 ರಂದು ಮತ ಎಣಿಕೆಯ ದಿನದಂದು ದೇಶಾದ್ಯಂತ ಭವ್ಯ ಆಚರಣೆಗಳನ್ನು ಯೋಜಿಸಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಳು ಹಂತಗಳಲ್ಲಿ ಮತದಾನ ಮಾಡಿದ ನಂತರ 18 ನೇ ಲೋಕಸಭೆಗೆ ಸಂಸದರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಶನಿವಾರ ಮುಕ್ತಾಯಗೊಂಡಿದೆ. ಎಲ್ಲಾ ಪ್ರಮುಖ ಚುನಾವಣೋತ್ತರ ಸಮೀಕ್ಷೆಗಳು ಆಡಳಿತಾರೂಢ ಎನ್ಡಿಎ ಮತ್ತು ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಅಧಿಕಾರಕ್ಕೇರಲಿದ್ದಾರೆ ಎಂದು ಭವಿಷ್ಯ ನುಡಿದಿದ್ದು, ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ 353 ರಿಂದ 383 ಸ್ಥಾನಗಳು ಮತ್ತು ಪ್ರತಿಪಕ್ಷ ಇಂಡಿಯಾ ಬಣಕ್ಕೆ 152 ರಿಂದ 182 ಸ್ಥಾನಗಳು ಸಿಗಲಿವೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಭರ್ಜರಿ ವಿಜಯೋತ್ಸವ ಆಚರಣೆಗೆ ಬಿಜೆಪಿ ಸಿದ್ದತೆ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಬಿಜೆಪಿ ಕಚೇರಿಯಿಂದ ರೋಡ್ ಶೋ ನಡೆಸುವ ಸಾಧ್ಯತೆ…














