Subscribe to Updates
Get the latest creative news from FooBar about art, design and business.
Author: kannadanewsnow57
ಹೆಚ್ಚಿನ ಜನರು ಮಾಂಸವನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಮಾಂಸವನ್ನು ತಿನ್ನುವವರು ಹೆಚ್ಚು ಹಸಿ ಮಾಂಸವಿದ್ದರೆ ಅದನ್ನು ಫ್ರಿಜ್ನಲ್ಲಿ ಇರಿಸಿ ಮರುದಿನ ಬೇಯಿಸುತ್ತಾರೆ. ಇದು ಒಳ್ಳೆಯದೇ? ಹಸಿ ಮಾಂಸವನ್ನು ದೀರ್ಘಕಾಲ ಫ್ರಿಜ್ ನಲ್ಲಿ ಇಟ್ಟಾಗ ಏನಾಗುತ್ತದೆ? ಇದರೊಂದಿಗೆ ಬರುವ ಆರೋಗ್ಯ ಸಮಸ್ಯೆಗಳು ಯಾವುವು? ಈಗ ಅದನ್ನು ಕಂಡುಹಿಡಿಯೋಣ. ಮೂತ್ರನಾಳದ ಸೋಂಕುಗಳು ಫ್ರಿಜ್ ನಲ್ಲಿ ಹಸಿ ಮಾಂಸವನ್ನು ತಿನ್ನುವುದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಫ್ರಿಜ್ ನಲ್ಲಿ ಸಂಗ್ರಹಿಸಿದ ಮಾಂಸದಲ್ಲಿ ಇ ಕೋಲಿ ಎಂಬ ಬ್ಯಾಕ್ಟೀರಿಯಾ ಸಮೃದ್ಧವಾಗಿದೆ. ಮಹಿಳೆಯರು ಮಾಂಸವನ್ನು ಫ್ರಿಜ್ ನಿಂದ ಹೊರತೆಗೆದಾಗ, ಬ್ಯಾಕ್ಟೀರಿಯಾವು ಅವರ ಕೈಗಳ ಮೇಲ್ಭಾಗವನ್ನು ತಲುಪುತ್ತದೆ ಮತ್ತು ನಂತರ ಕೈಗಳಿಂದ ಮೂಗು ಮತ್ತು ಬಾಯಿಯ ಮೂಲಕ ತಲುಪುತ್ತದೆ. ಇದು ಹೊಟ್ಟೆಯನ್ನು ಪ್ರವೇಶಿಸುತ್ತದೆ. ಈ ಕಾರಣದಿಂದಾಗಿ, ಮಹಿಳೆಯರು ಮೂತ್ರನಾಳದ ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ. ಹಸಿ ಮಾಂಸವನ್ನು ಫ್ರಿಜ್ ನಲ್ಲಿ ಇಡುವಾಗ ಜಾಗರೂಕರಾಗಿರಿ ವಿಶೇಷವಾಗಿ ಮಹಿಳೆಯರಿಗೆ, ಹಸಿ ಮಾಂಸವನ್ನು ಫ್ರಿಜ್ನಲ್ಲಿ ಸಂಗ್ರಹಿಸಿದರೆ ತಿನ್ನಲು ಸೂಕ್ತವಲ್ಲ. ಹಸಿ ಮಾಂಸವನ್ನು ಫ್ರಿಜ್ ನಲ್ಲಿ ಸಂಗ್ರಹಿಸುವಾಗ…
ಬೆಂಗಳೂರು : ಅನರ್ಹರು ಹೊಂದಿರುವ ಅಂತ್ಯೋದಯ (ಎಎವೈ), ಆದ್ಯತಾ (ಬಿಪಿಎಲ್) ಪಡಿತರ ಚೀಟಿ ಹಿಂದಿರುಗಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ಈ ಮೂಲಕ ಎಲ್ಲಾ ಪಡಿತರ ಚೀಟಿದಾರರಿಗೆ ತಿಳಿಸುವುದೇನೆಂದರೆ, ಈ ಕೆಳಕಂಡ ಕುಟುಂಬಗಳು ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತಾ (ಬಿಪಿಎಲ್) ಪಡಿತರ ಚೀಟಿಯನ್ನು ಹೊಂದಲು ಅನರ್ಹರಾಗಿರುತ್ತಾರೆ. 1. ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ, ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು/ನಿಗಮಗಳು/ಸ್ವಾಯತ್ತ ಸಂಸ್ಥೆಗಳು ಇತ್ಯಾದಿ; 2. ಆದಾಯ ತೆರಿಗೆ/ ಸೇವಾ ತೆರಿಗೆ/ ವ್ಯಾಟ್/ ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು. 3. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ, ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು. 4. ಜೀವನೋಪಾಯಕ್ಕಾಗಿ…
ಚಿಕ್ಕಮಗಳುರು : ಮಕ್ಕಳನ್ನು ಕರೆದುಕೊಂಡು ಶಾಪಿಂಗ್ ಹೋಗುವ ಪೋಷಕರೇ ಎಚ್ಚರ. ದೀಪಾವಳಿ ಹಬ್ಬದ ಶಾಪಿಂಗ್ ಹೋಗಿದ್ದ ವೇಳೆ 2 ವರ್ಷದ ಮಗುವನ್ನು ಮಹಿಳೆ ಅಪಹರಣ ಮಾಡಿದ ಘಟನೆ ನಡೆದಿದೆ. ಚಿಕ್ಕಮಗಳುರು ಜಿಲ್ಲೆಯ ಕಡೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದ್ದು, ಸೀತಾಪುರ ಗ್ರಾಮದ ರಘುನಾಯಕ್ ಪುತ್ರಿ ಮಾನಸ (2) ಮಗುವನ್ನು ಮಹಿಳೆಯೊಬ್ಬಳು ಅಪಹರಣ ಮಾಡಿದ್ದಾಳೆ. ಎಣ್ಣೆ ಗಾಣದ ಅಂಗಡಿ ಬಳಿ ನಿಂತಿದ್ದ ಮಗುವನ್ನು ಮಹಿಳೆಯೊಬ್ಬಳು ಸೀರೆಯ ಸೆರೆಗು ಮುಚ್ಚಿಕೊಂಡು ಮಗುವನ್ನು ಅಪಹರಣ ಮಾಡಿದ್ದಾಳೆ. 2 ವರ್ಷದ ಮಗು ಕಿಡ್ನ್ಯಾಪ್ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕಡೂರು ಠಾಣೆಯ ಪೊಲೀಸರು ಮಗು ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಹಣದ ಹರಿವಿನಲ್ಲಿನ ಅಡೆತಡೆಗಳನ್ನು ನಿವಾರಿಸಲು ಮತ್ತು ಹಣದ ಹರಿವನ್ನು ಹೆಚ್ಚಿಸಲು ಬುಧವಾರ ಮೆಂತ್ಯದೊಂದಿಗೆ ಈ ಪರಿಹಾರವನ್ನು ಪ್ರಯತ್ನಿಸಿ. ಊಹಿಸಲಾಗದ ಬಹುಪಟ್ಟು ನಗದು ಹರಿವು. ಹಣದ ಹರಿವನ್ನು ಹೆಚ್ಚಿಸಲು ಬುಧವಾರದ ಪರಿಹಾರ ಭಗವಾನ್ ಚಿನ್ನ ಸಿಕ್ಕರೂ ಬುಧ ಸಿಗುವುದಿಲ್ಲ ಎನ್ನುತ್ತಾರೆ. ಬುಧ ಗ್ರಹವು ಬುದ್ಧಿವಂತರು ಮಾತ್ರವಲ್ಲದೆ ನಮ್ಮ ಸಂಪತ್ತು ಮತ್ತು ಸಮೃದ್ಧಿಗೆ ಉತ್ತಮ ಮಾರ್ಗವನ್ನು ತೋರಿಸಲು ಸಮರ್ಥರಾಗಿದ್ದಾರೆ. ಆದ್ದರಿಂದಲೇ ಪೆರುಮಾಳ್ ಬುಧ ಗ್ರಹದ ಪರಮ ದೇವತೆ. ಬುಧವಾರ ಭಗವಾನ್ ಬುಧವಾರದ ದಿನವೆಂದು ಪರಿಗಣಿಸಲಾಗಿದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9686268564 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ…
ಬೆಂಗಳೂರು : ಹೋಟೆಲ್ ಗ್ರಾಹಕರಿಗೆ ದೀಪಾವಳಿ ಬಳಿಕ ಶಾಕ್ ಎದುರಾಗಲಿದ್ದು, ಕಾಫಿ, ಚಹಾ ದರ 2 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಭಾರತೀಯ ಕಾಫಿ ವ್ಯಾಪಾರಿ ಸಂಘ (ಐಸಿಟಿಎ) ಕೇಜಿ ಕಾಫಿ ಪುಡಿಗೆ 100 ರೂ. ವರೆಗೆ ಹೆಚ್ಚಿಸುತ್ತಿರುವುದು ಹಾಗೂ ಟೀ ಪುಡಿಯ ದರ ಸಹ ಹೆಚ್ಚಾಗಿರು ವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಚಹಾ-ಕಾಫಿ ಬೆಲೆ ಹೆಚ್ಚಳ, ಸಿಲಿಂಡರ್ ದರ, ಹಾಲಿನ ದರ ಹೆಚ್ಚಳದ ಪರಿಣಾಮ ಕಾಫಿ, ಟೀ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದ್ದು, ಬೆಂಗಳೂರು ನಗರದಲ್ಲಿ ಕಾಫಿ-ಚಹಾಕ್ಕೆ 15- 35 ರೂ. (ಸಾಮಾನ್ಯ ಹೊಟೆಲ್) ಇದ್ದು, ಐಷಾರಾಮಿ ಹೊಟೆಲ್, ಕೆಫೆಗಳಲ್ಲಿ ದರ 100 ರೂ. ಮೇಲಿದೆ. ಸಾಮಾನ್ಯ ಹೊಟೆಲ್ಗಳಲ್ಲಿ 2ವರೆಗೆ ಬೆಲೆ ಹೆಚ್ಚಿಸಲು ಚಿಂತನೆ ನಡೆದಿದೆ. ಜನವರಿಯಲ್ಲಿ ಚಿಕೋರಿ ಮಿಶ್ರಿತ ಕಾಫಿ ಪುಡಿಗೆ ಕೇಜಿಗೆ 200- 250 ರೂ. ಇತ್ತು. ಆದರೆ ಇದೀಗ ಕಾಫಿ ಪುಡಿ ಬೆಲೆ ದುಪ್ಪಟ್ಟು ಏರಿಕೆಯಾಗಿದೆ. ರೊಬುಸ್ಟಾ ಕಾಫಿ ಪುಡಿ ಬೆಲೆ ಒಂದು…
ನವದೆಹಲಿ : ಅಸ್ಸಾಂನ ಗುವಾಹಟಿಯಲ್ಲಿ ವ್ಯಕ್ತಿಯೋರ್ವ ತನ್ನ ತಾಯಿ ಸತ್ತು ಅಂತಿಮ ಸಂಸ್ಕಾರವನ್ನು ಮಾಡದೇ ತಾಯಿಯ ಶವದೊಂದಿಗೆ ಮೂರು ತಿಂಗಳ ಕಾಲ ವಾಸವಾಗಿರುವ ಘಟನೆ ಬೆಳಕಿಗೆ ಬಂದಿದೆ. ತನ್ನ ತಾಯಿಯ ಶವವನ್ನು ಹಾಸಿಗೆಯ ಮೇಲೆ ಶವವನ್ನು ಇಟ್ಟುಕೊಂಡಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಪೂರ್ಣಿಮಾ ದೇವ್ ಎಂಬ ಮಹಿಳೆ ಸಾವನ್ನಪ್ಪಿದ್ದರು, ಆದರೆ ಅವರ ಮಗ ಜೈದೀಪ್ ದೇವ್ (40) ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ತನ್ನ ತಾಯಿಯ ಶವವನ್ನು ಮನೆಯಲ್ಲಿಯೇ ಇರಿಸಿದ್ದರು. ಜೈದೀಪ್ ಅವರ ಚಟುವಟಿಕೆಯಿಂದ ನೆರೆಹೊರೆಯವರು ಅನುಮಾನಗೊಂಡಾಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆಯಲ್ಲಿ ತನಿಖೆ ನಡೆಸಿದಾಗ ಪೂರ್ಣಿಮಾ ಅವರ ಅಸ್ಥಿಪಂಜರ ಪತ್ತೆಯಾಗಿದೆ. ಜೈದೀಪ್ ಅವರು ತಮ್ಮ ತಾಯಿಗಾಗಿ ‘ಓಂ ನಮಃ ಶಿವಾಯ’ ಎಂದು ಜಪಿಸುತ್ತಿದ್ದರು, ಮತ್ತು ಬಹುಶಃ ಅವರ ತಾಯಿ ಶಾಶ್ವತವಾಗಿ ಬದುಕುತ್ತಾರೆ ಎಂದು ನಂಬಿದ್ದರು. ಈ ಘಟನೆಯು ಜನರನ್ನು ಬೆಚ್ಚಿಬೀಳಿಸಿದೆ ಮತ್ತು ಸಮಾಜದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಪೊಲೀಸರು ಈ ಬಗ್ಗೆ ತನಿಖೆ…
ಮುಂಬೈ : ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಪುತ್ರ ಝೀಶಾನ್ ಸಿದ್ದಿಕಿ ಅವರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದು, ಅಜಿತ್ ಪವಾರ್ ಅವರ ಎನ್ಸಿಪಿ ಪಕ್ಷಕ್ಕೆ ಸೇರಿದ್ದಾರೆ. ಇತ್ತೀಚೆಗೆ ಗುಂಡೇಟಿನಿಂದ ಹತ್ಯೆಗೀಡಾಗಿದ್ದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಪುತ್ರ ಝೀಶಾನ್ ಸಿದ್ದಿಕಿ ಎನ್ಸಿಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಆಗಸ್ಟ್ ನಲ್ಲಿ ಅವರನ್ನು ಕಾಂಗ್ರೆಸ್ ನಿಂದ ಹೊರಹಾಕಲಾಗಿತ್ತು.ಇದೀಗ ಅವರು ಅಜಿತ್ ಪವಾರ್ ಅವರ ಎನ್ಸಿಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ನವದೆಹಲಿ:ಭಾರತೀಯ ಹಿನ್ನೆಲೆ ಗಾಯನಕ್ಕೆ ಅವರು ನೀಡಿದ ಕೊಡುಗೆಗಳನ್ನು ಗೌರವಿಸಿ ಮತ್ತು ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ ವಾರ್ಷಿಕೋತ್ಸವವನ್ನು ಸ್ಮರಿಸಿ, ಕೆಕೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೃಷ್ಣಕುಮಾರ್ ಕುನ್ನತ್ ಅವರಿಗೆ ಅನಿಮೇಟೆಡ್ ಡೂಡಲ್ ಮೂಲಕ ಗೂಗಲ್ ಶುಕ್ರವಾರ ಗೌರವ ಸಲ್ಲಿಸಿದೆ. 1996 ರಲ್ಲಿ ಈ ದಿನದಂದು, ಕೆಕೆ ಅವರ ಧ್ವನಿ ಮೊದಲ ಬಾರಿಗೆ “ಮಾಚಿಸ್” ಚಿತ್ರದ “ಛೋಡ್ ಆಯೆ ಹಮ್” ಹಾಡಿನ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿತು, ಇದು ಅವರ ಸಮೃದ್ಧ ವೃತ್ತಿಜೀವನದ ಆರಂಭವನ್ನು ಗುರುತಿಸಿತು. ಆಗಸ್ಟ್ 23, 1968 ರಂದು ದೆಹಲಿಯಲ್ಲಿ ಜನಿಸಿದ ಕೆಕೆ ದೆಹಲಿ ವಿಶ್ವವಿದ್ಯಾಲಯದ ಕಿರೋರಿ ಮಾಲ್ ಕಾಲೇಜಿನಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಮುಂದುವರಿಸಿದರು ಮತ್ತು ಆರಂಭದಲ್ಲಿ ಸಂಗೀತಕ್ಕೆ ದಾರಿ ಕಂಡುಕೊಳ್ಳುವ ಮೊದಲು ಮಾರ್ಕೆಟಿಂಗ್ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1994 ರಲ್ಲಿ, ಅವರು ವಿವಿಧ ಕಲಾವಿದರಿಗೆ ಡೆಮೊ ಟೇಪ್ ಅನ್ನು ಸಲ್ಲಿಸಿದರು, ಇದು ಅವರನ್ನು ವಾಣಿಜ್ಯ ಜಿಂಗಲ್ಸ್ನಲ್ಲಿ ಕೆಲಸ ಮಾಡಲು ಕಾರಣವಾಯಿತು, ಇದು ಅವರ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ನೀಡಿತು. 1999…
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಹಿಟ್ & ರನ್ ಗೆ ಬೈಕ್ ಸವಾರ ಬಲಿಯಾಗಿದ್ದು, ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಬೈಕ್ ಸವಾರನನ್ನು ಗಿರೀಶ್ ಎಂದು ಗುರುತಿಸಲಾಗಿದೆ. ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಹೊಡೆದು ಬಳಿಕ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
BIG NEWS : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ‘ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ’ ಪಾಸ್ ಮಾಡಲು ಡಿ.31 ರವರೆಗೆ ಅವಕಾಶ!
ಬೆಂಗಳೂರು : ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಿಗದಿಪಡಿಸಿದ್ದ ಕಾಲಾವಧಿಯನ್ನು ದಿನಾಂಕ 31-12-24 ರವರೆಗೆ ವಿಸ್ತರಿಸಲಾಗಿದ್ದು, ಈ ಅವಧಿಯೊಳಗೆ ಪರೀಕ್ಷೆ ಉತ್ತೀರ್ಣರಾಗದೇ ಇದ್ದಲ್ಲಿ ವಾರ್ಷಿಕ ಬಡ್ತಿಗೆ ಅನರ್ಹವಾಗಲಿದ್ದಾರೆ. ಈ ಪರೀಕ್ಷೆಯು ಸರ್ಕಾರಿ ನೌಕರರ ಪರಿವೀಕ್ಷಣಾ ಅವಧಿ,ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿಗೆ ಒಂದು ಅರ್ಹತಾ ಮಾನದಂಡವಾಗಿರುತ್ತದೆ.ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವಧಿ 31-12-23 ರವರೆಗೆ ವಿಸ್ತರಿಸಲಾಗಿತ್ತು.ಸದರಿ ಅವಧಿಯೊಳಗೆ ಕಂಪ್ಯೂಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದೇ ಇದ್ದಲ್ಲಿ ವಾರ್ಷಿಕ ಬಡ್ತಿ ಯಲ್ಲಿ ಅರ್ಹನಾಗತಕ್ಕದ್ದಲ್ಲ ಎಂದು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಿವಿಲ್ ಸೇವಾ ನಿಯಮಗಳು 2012 ನ್ನು ರೂಪಿಸಲಾಗಿದೆ. ಈ ನಿಯಮಾವಳಿಗಳ ನಿಯಮ 1(3) ರಲ್ಲಿ ನಿರ್ಧಿಷ್ಟಪಡಿಸಿರುವ ಕೆಲವೊಂದು ಹುದ್ದೆಗಳನ್ನು ಹೊರತುಪಡಿಸಿ ಉಳಿದ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.












