Author: kannadanewsnow57

ಮಕ್ಕಳಿಗೆ ನೈತಿಕತೆ ಮತ್ತು ಅತ್ಯುತ್ತಮ ಶೈಕ್ಷಣಿಕ ಜ್ಞಾನವನ್ನು ಪಡೆಯಲು ಪೂಜೆ ಸರಸ್ವತಿ ಅಧ್ಯಯನ ಇಂದಿನ ದಿನಗಳಲ್ಲಿ ಎಲ್ಲರೂ ಹಣಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಈ ಹಣವನ್ನು ಗಳಿಸಲು ಸಾಕಷ್ಟು ಜ್ಞಾನವನ್ನು ಹೊಂದಿರುವುದು ಮುಖ್ಯ ವಿಷಯ. ಅವರಿಗೆ ಜ್ಞಾನವಿದ್ದರೆ ಹೇಗಾದರೂ ಹಣ ಸಂಪಾದಿಸಬಹುದು. ಸರಸ್ವತಿ ದೇವಿಯು ಈ ಜ್ಞಾನದ ಅಧಿಪತಿ. ಸರಸ್ವತಿ ದೇವಿಯ ಪರಿಪೂರ್ಣ ಕೃಪೆ ಇರುವ ಯಾವುದೇ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಗೆ ಕೊರತೆಯಾಗುವುದಿಲ್ಲ ಎಂದು ಹೇಳಬೇಕು. ಆದ್ದರಿಂದ ಸಂಪತ್ತು ಮತ್ತು ಸಮೃದ್ಧಿಯಿಂದ ಬದುಕಲು ಬಯಸುವವರು ಮೊದಲು ಸರಸ್ವತಿ ದೇವಿಯನ್ನು ಪೂಜಿಸಬೇಕು. ಅದರ ನಂತರವೇ ಮಹಾಲಕ್ಷ್ಮಿಯನ್ನು ಪೂಜಿಸಬೇಕು. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ ಸರಸ್ವತಿ ದೇವಿಯನ್ನು ಪೂಜಿಸುವ ಸರಳ ವಿಧಾನವನ್ನು ನಾವು ನೋಡಲಿದ್ದೇವೆ . ವಾಕ್ಯ ಸಿದ್ದಿ, ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ 9686268564 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ,…

Read More

ಬೆಂಗಳೂರು: ವಾಹನ ಸವಾರರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವ್ಯಾಪ್ತಿಗೆ ಬರುವ ಕರ್ನಾಟಕದ ಒಟ್ಟು 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರವನ್ನು ಹೆಚ್ಚಿಸಲಾಗಿದ್ದು, ಈ ಹೊಸ ದರಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸಂಚರಿಸುವವರಿಗೆ ಈ ದರ ಏರಿಕೆ ದೊಡ್ಡ ಹೊರೆಯಾಗಲಿದೆ. ಪ್ರತಿ ವರ್ಷ ಹಣದುಬ್ಬರ ಮತ್ತು ಸಗಟು ಬೆಲೆ ಸೂಚ್ಯಂಕವನ್ನು (WPI) ಆಧರಿಸಿ ಟೋಲ್ ದರಗಳನ್ನು ಪರಿಷ್ಕರಿಸಲಾಗುತ್ತದೆ. ರಸ್ತೆಗಳ ನಿರ್ವಹಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಈ ಹೆಚ್ಚಳ ಅನಿವಾರ್ಯ ಎಂದು NHAI ಅಧಿಕಾರಿಗಳು ತಿಳಿಸಿದ್ದಾರೆ. ಪಾಸ್ ದರ ಏರಿಕೆ ಕೇವಲ ದಿನನಿತ್ಯದ ಟೋಲ್ ಮಾತ್ರವಲ್ಲದೆ, ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ದರದಲ್ಲೂ ಏರಿಕೆಯಾಗಿದೆ. ಪ್ರಸ್ತುತ ₹3,000 ಇರುವ ವಾರ್ಷಿಕ ಪಾಸ್ ದರ ಏಪ್ರಿಲ್ 1ರಿಂದ ₹3,075 ಆಗಲಿದೆ. ಈ ಪಾಸ್ ಮೂಲಕ ವರ್ಷಕ್ಕೆ 200 ಬಾರಿ ಟೋಲ್ ದಾಟಲು ಅವಕಾಶವಿರುತ್ತದೆ. ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ ವಾಹನಗಳ ಫಾಸ್ಟ್‌ಟ್ಯಾಗ್‌ನಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಕಡ್ಡಾಯ.…

Read More

ರಾಮನಗರ: ರಾಜ್ಯದ ಅತ್ಯಂತ ವೇಗದ ರಸ್ತೆಯಾದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ವಿವರ: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಖಾಸಗಿ ಸಂಸ್ಥೆಗೆ ಸೇರಿದ ಪಿಕೆ ಟ್ರಾವೆಲ್ಸ್ (PK Travels) ಬಸ್ ಬೆಂಗಳೂರಿನಿಂದ ಮೈಸೂರು ಕಡೆಗೆ ಸಾಗುತ್ತಿದ್ದಾಗ ರಸ್ತೆ ಬದಿಯ ಫೆನ್ಸಿಂಗ್‌ಗೆ ಅತಿ ವೇಗವಾಗಿ ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ಕಾರಣ: ಮೂಲಗಳ ಪ್ರಕಾರ, ಮುಂಜಾನೆ ಸಮಯದಲ್ಲಿ ಚಾಲಕನಿಗೆ ನಿದ್ದೆಯ ಮಂಪರು ಬಂದಿದ್ದರಿಂದ ಬಸ್‌ನ ಮೇಲಿನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಒಳಗೆ ಕುಳಿತಿದ್ದ ನಾಲ್ವರು ಪ್ರಯಾಣಿಕರು ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ: ಘಟನೆ ನಡೆದ ಕೂಡಲೇ ಚನ್ನಪಟ್ಟಣ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಗಾಯಗೊಂಡಿರುವ ಇತರ ಪ್ರಯಾಣಿಕರನ್ನು ಸಮೀಪದ…

Read More

ಹೊಟ್ಟೆಯಲ್ಲಿ ಗ್ಯಾಸ್ ಅಥವಾ ವಾಯು ಉತ್ಪತ್ತಿಯಾಗುವುದು ದೇಹದ ಒಂದು ನೈಸರ್ಗಿಕ ಪ್ರಕ್ರಿಯೆ. ಮಲಮೂತ್ರ ವಿಸರ್ಜನೆ ಅಥವಾ ಬೆವರಿನಂತೆ ಇದು ಕೂಡ ಸಾಮಾನ್ಯ ಕ್ರಿಯೆ. ಆದರೆ, ಸಾಮಾಜಿಕ ಮುಜುಗರದಿಂದಾಗಿ ಅನೇಕರು ಇದನ್ನು ತಡೆಹಿಡಿಯುತ್ತಾರೆ. ಹೀಗೆ ಮಾಡುವುದು ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಮತ್ತು ಗ್ಯಾಸ್ ಸಮಸ್ಯೆಯನ್ನು ಹೋಗಲಾಡಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಗ್ಯಾಸ್ ತಡೆಹಿಡಿದರೆ ಏನಾಗುತ್ತದೆ? ವೈದ್ಯಕೀಯ ತಜ್ಞರ ಪ್ರಕಾರ, ಗ್ಯಾಸ್ ಅನ್ನು ಹೊರಹಾಕದೆ ತಡೆಹಿಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಗಳು, ಕರುಳಿನಲ್ಲಿ ಬ್ಯಾಕ್ಟೀರಿಯಾಗಳ ಅತಿಯಾದ ಬೆಳವಣಿಗೆ, ವಾಂತಿ ಮತ್ತು ತೀವ್ರವಾದ ಹೊಟ್ಟೆನೋವು ಕಾಣಿಸಿಕೊಳ್ಳಬಹುದು. ಶಸ್ತ್ರಚಿಕಿತ್ಸೆಯ ನಂತರವೂ ವೈದ್ಯರು ರೋಗಿಗಳಲ್ಲಿ ಗ್ಯಾಸ್ ಬಿಡುಗಡೆಯಾಗುತ್ತಿದೆಯೇ ಎಂದು ವಿಚಾರಿಸುತ್ತಾರೆ, ಏಕೆಂದರೆ ಇದು ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಸಂಕೇತವಾಗಿದೆ. ಅತಿಯಾದ ಮತ್ತು ದುರ್ವಾಸನೆಯ ಗ್ಯಾಸ್‌ಗೆ ಕಾರಣಗಳೇನು? ಜೀರ್ಣಕ್ರಿಯೆ ಸಮಸ್ಯೆ: ಕರುಳಿನಲ್ಲಿ ಆಹಾರವು ದೀರ್ಘಕಾಲ ಉಳಿದುಕೊಂಡಾಗ, ಬ್ಯಾಕ್ಟೀರಿಯಾಗಳು ಅದನ್ನು ವಿಭಜಿಸುವ ಪ್ರಕ್ರಿಯೆಯಲ್ಲಿ ದುರ್ವಾಸನೆಯ ಗ್ಯಾಸ್ ಉತ್ಪತ್ತಿಯಾಗುತ್ತದೆ. ಆಹಾರ ಪದ್ಧತಿ: ಅತಿಯಾದ ಪ್ರೋಟೀನ್, ಹೆಚ್ಚು ಕೊಬ್ಬಿನಂಶವಿರುವ ಆಹಾರ ಮತ್ತು…

Read More

ನವದೆಹಲಿ: ನೀವು ಹೊಸದಾಗಿ ಪ್ಯಾನ್ ಕಾರ್ಡ್ (PAN Card) ಪಡೆಯಲು ಯೋಜಿಸುತ್ತಿದ್ದೀರಾ? ಹಾಗಿದ್ದಲ್ಲಿ ಈ ಸುದ್ದಿ ನಿಮಗಾಗಿ. ಏಪ್ರಿಲ್ 1ರಿಂದ ಪ್ಯಾನ್ ಕಾರ್ಡ್ ಅರ್ಜಿ ಸಲ್ಲಿಕೆಯ ನಿಯಮಗಳಲ್ಲಿ ಆದಾಯ ತೆರಿಗೆ ಇಲಾಖೆಯು ಪ್ರಮುಖ ಬದಲಾವಣೆಗಳನ್ನು ತರಲಿದ್ದು, ಇನ್ಮುಂದೆ ಕೇವಲ ಆಧಾರ್ ಕಾರ್ಡ್ ಇದ್ದರೆ ಸಾಲದು. ಏನೆಲ್ಲಾ ಬದಲಾವಣೆಗಳಾಗಲಿವೆ? ಇಲ್ಲಿಯವರೆಗೆ, ಪ್ಯಾನ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಅನ್ನು ಏಕೈಕ ದಾಖಲೆಯಾಗಿ ನೀಡಿ ಸುಲಭವಾಗಿ ಕಾರ್ಡ್ ಪಡೆಯುವ ಅವಕಾಶವಿತ್ತು. ಆದರೆ, ಹೊಸ ನಿಯಮದ ಪ್ರಕಾರ ಏಪ್ರಿಲ್ 1ರಿಂದ ಈ ಕೆಳಗಿನ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಲಿದೆ: ಜನನ ಪ್ರಮಾಣ ಪತ್ರ (Birth Certificate) ಮತದಾರರ ಗುರುತಿನ ಚೀಟಿ (Voter ID) 10ನೇ ತರಗತಿಯ ಅಂಕಪಟ್ಟಿ (SSLC Marks Card) ಪಾಸ್ಪೋರ್ಟ್ (Passport) ಮಾರ್ಚ್ 31ರೊಳಗೆ ಅರ್ಜಿ ಸಲ್ಲಿಸಿದರೆ ಲಾಭ! ಹಳೆಯ ನಿಯಮದಂತೆ ಕೇವಲ ಆಧಾರ್ ಕಾರ್ಡ್ ಮೂಲಕ ಸುಲಭವಾಗಿ ಪ್ಯಾನ್ ಪಡೆಯಲು ಇಚ್ಚಿಸುವವರು ಮಾರ್ಚ್ 31ರೊಳಗೆ ಅರ್ಜಿ ಸಲ್ಲಿಸುವುದು ಉತ್ತಮ. ಏಪ್ರಿಲ್…

Read More

ಬೆಂಗಳೂರು: ಆಸ್ತಿ ನೋಂದಣಿಯಾದ ನಂತರ ಸಾರ್ವಜನಿಕರು ಖಾತೆ ಬದಲಾವಣೆಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಜಾರಿಗೆ ತಂದಿರುವ ‘ಆಟೋ ಮ್ಯುಟೇಷನ್’ (ಸ್ವಯಂ ಚಾಲಿತ ಖಾತೆ ಬದಲಾವಣೆ) ವ್ಯವಸ್ಥೆ ಯಶಸ್ವಿಯಾಗಿದ್ದು, ಪ್ರಸ್ತುತ ಶೇ. 98ರಷ್ಟು ಖಾತೆಗಳು ಈ ಮೂಲಕವೇ ಬದಲಾವಣೆಯಾಗುತ್ತಿವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ರಾಮೋಜಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಂದಾಯ ಇಲಾಖೆಯಲ್ಲಿ ತಂದಿರುವ ಐತಿಹಾಸಿಕ ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿದರು. ಆಟೋ ಮ್ಯುಟೇಷನ್ ವ್ಯವಸ್ಥೆಯಿಂದಾಗಿ ಸಾರ್ವಜನಿಕರು ಯಾರನ್ನೂ ಭೇಟಿ ಮಾಡದೆ, ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾಗಿ ಖಾತೆ ಬದಲಾವಣೆ ಮಾಡಿಕೊಳ್ಳಬಹುದು. ತ್ವರಿತ ವಿಲೇವಾರಿ: ಅರ್ಜಿ ಸಲ್ಲಿಸಿದ ಕೆಲವು ಗಂಟೆಗಳಲ್ಲಿ ಅಥವಾ ಕಾನೂನುಬದ್ಧವಾಗಿ 8 ರಿಂದ 16 ದಿನಗಳ ಒಳಗಾಗಿ ಖಾತೆ ಬದಲಾವಣೆಯಾಗುತ್ತಿದೆ. ಕೇವಲ ತಕರಾರು ಇರುವ ಅರ್ಜಿಗಳು ಮಾತ್ರ ವಿಳಂಬವಾಗುತ್ತವೆ. ಎರಡು ಹಂತದ ಸುಧಾರಣೆ: ಕಳೆದ ವರ್ಷ ಶೇ. 66ರಷ್ಟಿದ್ದ ಆಟೋ ಮ್ಯುಟೇಷನ್ ಪ್ರಮಾಣವನ್ನು, ಕಳೆದ ತಿಂಗಳಿನಿಂದ ಶೇ. 98ಕ್ಕೆ ಹೆಚ್ಚಿಸಲಾಗಿದೆ. ಬಾಕಿ ಪ್ರಕರಣಗಳ…

Read More

ಬೆಂಗಳೂರು: ನಮಗೆ ಬಾಯಾರಿಕೆಯಾದಾಗ ಅಂಗಡಿಗೆ ಹೋಗಿ ನೀರಿನ ಬಾಟಲಿ ಕೊಳ್ಳುವುದು ಸಾಮಾನ್ಯ. ಆದರೆ ನೀವು ಎಂದಾದರೂ ಆ ಬಾಟಲಿಯ ಮುಚ್ಚಳದ (Cap) ಬಣ್ಣವನ್ನು ಗಮನಿಸಿದ್ದೀರಾ? ಹೆಚ್ಚಿನವರು ಇದನ್ನು ಕೇವಲ ವಿನ್ಯಾಸ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ, ಬಾಟಲಿಯ ಮುಚ್ಚಳದ ಬಣ್ಣವು ಆ ಬಾಟಲಿಯ ಒಳಗಿರುವ ನೀರಿನ ಗುಣಮಟ್ಟ ಮತ್ತು ಅದು ಎಲ್ಲಿಂದ ಬಂದಿದೆ ಎಂಬುದನ್ನು ಸೂಚಿಸುತ್ತದೆ. ಈ ರಹಸ್ಯ ಶೇ. 99ರಷ್ಟು ಜನರಿಗೆ ತಿಳಿದಿಲ್ಲ! ಹಾಗಾದರೆ, ವಿವಿಧ ಬಣ್ಣದ ಮುಚ್ಚಳಗಳು ಏನನ್ನು ಸೂಚಿಸುತ್ತವೆ? ಇಲ್ಲಿದೆ ಸಂಪೂರ್ಣ ಮಾಹಿತಿ: 1. ನೀಲಿ ಮುಚ್ಚಳ (Blue Cap): ನೈಸರ್ಗಿಕ ಖನಿಜಯುಕ್ತ ನೀರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಂಡುಬರುವ ನೀಲಿ ಮುಚ್ಚಳದ ಬಾಟಲಿಗಳು ‘ಮಿನರಲ್ ವಾಟರ್’ ಅಥವಾ ಖನಿಜಯುಕ್ತ ನೀರನ್ನು ಸೂಚಿಸುತ್ತವೆ. ಈ ನೀರನ್ನು ಹೆಚ್ಚಾಗಿ ಕೊಳವೆ ಬಾವಿ ಅಥವಾ ನೈಸರ್ಗಿಕ ಮೂಲಗಳಿಂದ ಸಂಗ್ರಹಿಸಿ, ಅಗತ್ಯ ಖನಿಜಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿರುತ್ತದೆ. ಇದು ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗಿದೆ. 2. ಬಿಳಿ ಮುಚ್ಚಳ (White Cap): ಸಂಸ್ಕರಿಸಿದ…

Read More

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಹಾಗೂ ತೇವಾಂಶ ಭರಿತ ಮೋಡಗಳ ಪ್ರಭಾವದಿಂದಾಗಿ ರಾಜ್ಯದ ಹಲವೆಡೆ ಮಾರ್ಚ್ 29ರವರೆಗೆ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾ. 25ರಿಂದ (2 ದಿನ): ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಮಾ. 27ರಿಂದ 29ರವರೆಗೆ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆಯಿದೆ. ಮಾ. 29ರಂದು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಯಚೂರು, ವಿಜಯಪುರ, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಕುಸಿದ ತಾಪಮಾನ ಬಿಸಿಲಿನ ತಾಪದಿಂದ ಕಂಗಾಲಾಗಿದ್ದ ರಾಜ್ಯದ ಜನತೆಗೆ ಮಳೆಯ ಮುನ್ಸೂಚನೆ ತುಸು ಸಮಾಧಾನ ತಂದಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಇಳಿಕೆ ಕಂಡುಬಂದಿದೆ. ಕಲಬುರಗಿಯಲ್ಲಿ ಗರಿಷ್ಠ 5.9 ಡಿಗ್ರಿ ಸೆಲ್ಸಿಯಸ್ ತಾಪಮಾನ ಇಳಿಕೆಯಾಗಿದೆ.…

Read More

ನವದೆಹಲಿ: ಈಗಾಗಲೇ ಬೆಲೆ ಏರಿಕೆ ಹಾಗೂ ಹವಾಮಾನ ವೈಪರೀತ್ಯದಿಂದ ಕಂಗಾಲಾಗಿರುವ ದೇಶದ ರೈತರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದ ಕಾರ್ಮೋಡ ಭಾರತದ ಕೃಷಿ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರಿದ್ದು, ದೇಶದಲ್ಲಿ ಯೂರಿಯಾ ಉತ್ಪಾದನೆ ಶೇ. 50ರಷ್ಟು ಕುಸಿತ ಕಂಡಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ನೈಸರ್ಗಿಕ ಅನಿಲ (Gas) ಪೂರೈಕೆಯಲ್ಲಿ ಜಾಗತಿಕ ಮಟ್ಟದ ಬಿಕ್ಕಟ್ಟು ಸೃಷ್ಟಿಯಾಗಿದೆ. ಯೂರಿಯಾ ತಯಾರಿಕೆಯಲ್ಲಿ ಎಲ್.ಎನ್.ಜಿ. (LNG) ಪ್ರಮುಖ ಕಚ್ಚಾ ವಸ್ತುವಾಗಿದ್ದು, ಇದರ ಕೊರತೆಯಿಂದಾಗಿ ಗೊಬ್ಬರ ತಯಾರಿಕಾ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ. ಪೆಟ್ರೋನೆಟ್ ಎಲ್.ಎನ್.ಜಿ. ಅಸಹಾಯಕತೆ: ಭಾರತದ ಅತಿದೊಡ್ಡ ಎಲ್.ಎನ್.ಜಿ. ಟರ್ಮಿನಲ್ ನಿರ್ವಹಿಸುವ ‘ಪೆಟ್ರೋನೆಟ್’ ಕಂಪನಿಯು ಬೇಡಿಕೆಗೆ ತಕ್ಕಷ್ಟು ಅನಿಲ ಪೂರೈಸಲು ವಿಫಲವಾಗಿದೆ. ಪೂರೈಕೆ ಕಡಿತ: ಗೇಲ್ (GAIL), ಇಂಡಿಯನ್ ಆಯಿಲ್ ಮತ್ತು ಭಾರತ್ ಪೆಟ್ರೋಲಿಯಂ ಮೂಲಕ ಗೊಬ್ಬರ ಘಟಕಗಳಿಗೆ ಸರಬರಾಜಾಗುವ ಅನಿಲ ಪ್ರಮಾಣದಲ್ಲಿ ಶೇ. 60 ರಿಂದ 65ರಷ್ಟು ಕಡಿತ ಉಂಟಾಗಿದೆ. ಅರ್ಧಕ್ಕೆ ಇಳಿದ ಉತ್ಪಾದನಾ ಸಾಮರ್ಥ್ಯ ಗ್ಯಾಸ್ ಲಭ್ಯವಿಲ್ಲದ ಕಾರಣ…

Read More

ಬೆಂಗಳೂರು: ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗ ಮೃತಪಟ್ಟರೆ ಅವರ ಕುಟುಂಬದವರಿಗೆ ನೀಡಲಾಗುವ ‘ಅನುಕಂಪದ ಆಧಾರದ ನೇಮಕಾತಿ’ ಎಂಬುದು ವಾರಸುದಾರರ ಜನ್ಮಸಿದ್ಧ ಹಕ್ಕಲ್ಲ ಅಥವಾ ಅದು ಪಿತ್ರಾರ್ಜಿತವಾಗಿ ಬರುವ ಉತ್ತರಾಧಿಕಾರದ ಹಕ್ಕಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಸರ್ಕಾರಿ ಕಚೇರಿಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು 2005ರಲ್ಲಿ ನಿಧನರಾಗಿದ್ದರು. ಅವರ ವಿವಾಹಿತ ಪುತ್ರಿಯು ಅನುಕಂಪದ ಆಧಾರದ ಮೇಲೆ ಕೆಲಸ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅಂದಿನ ನಿಯಮಗಳ ಪ್ರಕಾರ ವಿವಾಹಿತ ಪುತ್ರಿಯರಿಗೆ ಇಂತಹ ನೇಮಕಾತಿಗೆ ಅವಕಾಶವಿರಲಿಲ್ಲ ಎಂಬ ಕಾರಣಕ್ಕೆ ಸರ್ಕಾರ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಆಕೆ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಎಂ. ಶ್ಯಾಮ್ ಪ್ರಸಾದ್ ಮತ್ತು ಶಿವಶಂಕರ್ ಅಮರಣ್ಣವರ್ ಅವರಿದ್ದ ವಿಭಾಗೀಯ ಪೀಠವು ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿ ಅರ್ಜಿಯನ್ನು ವಜಾಗೊಳಿಸಿದೆ. ಅನುಕಂಪದ ನೇಮಕಾತಿಯ ಉದ್ದೇಶವು ಕುಟುಂಬದ ಯಜಮಾನನ ಸಾವಿನ ನಂತರ ಎದುರಾಗುವ ಹಠಾತ್ ಆರ್ಥಿಕ ಬಿಕ್ಕಟ್ಟಿನಿಂದ ಆ ಕುಟುಂಬವನ್ನು ರಕ್ಷಿಸುವುದೇ ಹೊರತು, ಅದನ್ನು…

Read More