Author: kannadanewsnow57

ಗ್ರೇಟರ್ ನೋಯಿಡಾ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಅವರ ತಂದೆ ಖಚಂದ್ರ ಸಿಂಗ್ (Khachandra Singh) ಅವರು ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್ (Stage 4 Liver Cancer) ನಿಂದ ಬಳಲುತ್ತಿದ್ದ ಅವರು, ಗ್ರೇಟರ್ ನೋಯಿಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕೊನೆಯ ದಿನಗಳಲ್ಲಿ ಸ್ಥಿತಿ ಗಂಭೀರ ಖಚಂದ್ರ ಸಿಂಗ್ ಅವರ ಆರೋಗ್ಯ ಸ್ಥಿತಿ ಕಳೆದ ಕೆಲವು ದಿನಗಳಿಂದ ತೀರಾ ಹದಗೆಟ್ಟಿತ್ತು. ವೈದ್ಯರು ಅವರನ್ನು ಉಳಿಸಿಕೊಳ್ಳಲು ತೀವ್ರ ಪ್ರಯತ್ನ ನಡೆಸಿದ್ದರು, ಅವರನ್ನು ವೆಂಟಿಲೇಟರ್ ಸಂಪರ್ಕದಲ್ಲಿ ಇರಿಸಲಾಗಿತ್ತು. ಮೂತ್ರಪಿಂಡದ ವೈಫಲ್ಯದ ಹಿನ್ನೆಲೆಯಲ್ಲಿ ಅವರಿಗೆ ನಿರಂತರ ಮೂತ್ರಪಿಂಡ ಬದಲೀ ಚಿಕಿತ್ಸೆ (CRRT) ನೀಡಲಾಗುತ್ತಿತ್ತು.ಆದರೆ, ಕ್ಯಾನ್ಸರ್ ಇಡೀ ದೇಹಕ್ಕೆ ಹರಡಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಪಂದ್ಯದ ಮಧ್ಯದಲ್ಲೇ ಹೊರಬಂದಿದ್ದ ರಿಂಕು ಟಿ20 ವಿಶ್ವಕಪ್ಗಾಗಿ ಭಾರತ ತಂಡದ ಜೊತೆಗಿದ್ದ ರಿಂಕು ಸಿಂಗ್ ಅವರಿಗೆ ತಂದೆಯ ಆರೋಗ್ಯ ಹದಗೆಟ್ಟ ಸುದ್ದಿ ತಿಳಿದ ತಕ್ಷಣವೇ ತಂಡವನ್ನು ಬಿಟ್ಟು…

Read More

ಬೆಂಗಳೂರು: ರಾಜ್ಯದಲ್ಲಿ ಕಳೆದ 6 ವರ್ಷಗಳಲ್ಲಿ 14,878 ಮಕ್ಕಳನ್ನು ಅಪಹರಣ ಮಾಡಿರುವಂತ ಶಾಕಿಂಗ್ ಮಾಹಿತಿಯು ವರದಿಯಿಂದ ಬಹಿರಂಗಗೊಂಡಿದೆ. ಈ ಬಗ್ಗೆ ರಾಜ್ಯದ ಸರ್ಕಾರಿ ಅಂಕಿ ಅಂಶಗಳಿಂದ ಮಾಹಿತಿ ಬಹಿರಂಗಗೊಂಡಿದ್ದು, ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಮಕ್ಕಳು ಅಪಹರಣಗೊಂಡಿದ್ದಾರೆ. ಬೆಂಗಳೂರು ನಗರ ಒಂದರಲ್ಲೇ 4,849 ಮಕ್ಕಳು ಕಿಡ್ನ್ಯಾಪ್ ಮಾಡಿದ್ದಾರೆ. ಹಿಂದಿನ ಬಿಜೆಪಿ ಅವಧಿಯಲ್ಲೂ ಸಾವಿರಾರು ಮಕ್ಕಳ ಅಪಹರಣ ಉಂಟಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇತ್ತೀಚೆಗೆ ಬೆಂಗಳೂರಲ್ಲಿ ಮಾಸ್ಕ್ ಮ್ಯಾನ್ ಓಡಾಟ ಹೆಚ್ಚಿರುವ ಹಿನ್ನಲೆ ಸಿಲಿಕಾನ್ ಸಿಟಿ ಪೋಷಕರಿಗೆ ಬೆಚ್ಚಿ ಬೀಳಿಸುವಂತ ಸುದ್ದಿ ಬಹಿರಂಗಗೊಂಡಿದೆ. ರಾಜ್ಯದಲ್ಲಿ ಕಳೆದ 6 ವರ್ಷಗಳಲ್ಲಿ 14,878 ಮಕ್ಕಳು ಅಪಹರಣವಾಗಿದ್ದಾವೆ. 2020-25ರ ಜುಲೈ ತನಕ 14,878 ಮಕ್ಕಳನ್ನು ಅಪಹರಿಸಲಾಗಿದೆ. ಕಿಡ್ನ್ಯಾಪ್ ಆದ ಕೆಲ ಮಕ್ಕಳು ಏನಾದವು ಅನ್ನೋದೇ ನಿಗೂಢವಾಗಿದೆ. ಕಣ್ಮರೆಯಾದ ಕೆಲ ಮಕ್ಕಳ ಬಗ್ಗೆ ಯಾವುದೇ ಮಾಹಿತಿಯೇ ಈವರೆಗೂ ಸಿಕ್ಕಿಲ್ಲ. 10,792 ಅಪ್ರಾಪ್ತರು ಕಿಡ್ನ್ಯಾಪ್ ಆಗಿದ್ದರೇ, 4,086 ಬಾಲಕರ ಅಪರಣವಾಗಿದೆ. ಅಪಹಣಕ್ಕೊಳಗಾದಂತ 10,792 ಅಪ್ರಾಪ್ತೆಯರಲ್ಲಿ 9,789 ಮಂದಿ ಮಾತ್ರವೇ ಪತ್ತೆಯಾಗಿದ್ದಾರೆ.…

Read More

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಬ್ರೇಕ್ ಹಾಕಲು ಮತ್ತು ಸಂಚಾರಿ ನಿಯಮಗಳ ಪಾಲನೆಯಲ್ಲಿ ಶಿಸ್ತು ತರಲು ಕೇಂದ್ರ ಸರ್ಕಾರವು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ಇನ್ಮುಂದೆ ಭಾರತದಲ್ಲಿ ‘ಗ್ರೇಡ್ (ಅಂಕ) ಆಧಾರಿತ ಚಾಲನಾ ಪರವಾನಗಿ’ (Grade-based Driving Licence) ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಪ್ರಸ್ತಾವಿತ ಯೋಜನೆಯನ್ನು ಖಚಿತಪಡಿಸಿದ್ದು, ಪದೇ ಪದೇ ಸಂಚಾರಿ ನಿಯಮ ಉಲ್ಲಂಘಿಸುವವರ ಪರವಾನಗಿಯನ್ನು ಅಮಾನತುಗೊಳಿಸುವುದು ಅಥವಾ ಶಾಶ್ವತವಾಗಿ ರದ್ದುಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ರಸ್ತೆ ಅಪಘಾತಗಳ ಭೀಕರ ಅಂಕಿ-ಅಂಶಗಳು ಭಾರತದಲ್ಲಿ ಪ್ರತಿ ವರ್ಷ ಸುಮಾರು 5 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಅಂದಾಜು 1.8 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಕುರಿತು ಆತಂಕಕಾರಿ ಮಾಹಿತಿ ಹಂಚಿಕೊಂಡ ಸಚಿವರು: ಮೃತರ ಪೈಕಿ 72% ರಷ್ಟು ಮಂದಿ 18 ರಿಂದ 45 ವರ್ಷದೊಳಗಿನವರು, ಇದು ದೇಶದ ಮಾನವ ಸಂಪನ್ಮೂಲಕ್ಕೆ ದೊಡ್ಡ…

Read More

ಬೆಂಗಳೂರು: ನ್ಯಾಯಾಲಯದಲ್ಲಿ ಆಸ್ತಿ ಹಕ್ಕಿನ ಬಗ್ಗೆ ಕಾನೂನು ಹೋರಾಟ ನಡೆಯುತ್ತಿರುವಾಗ (Pending Litigation), ಆ ಆಸ್ತಿಯನ್ನು ಖರೀದಿಸುವ ಮೂರನೇ ವ್ಯಕ್ತಿಗೆ ಯಾವುದೇ ಕಾನೂನುಬದ್ಧ ಹಕ್ಕು ಲಭಿಸುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆಸ್ತಿ ವರ್ಗಾವಣೆ ಕಾಯ್ದೆಯ ಸೆಕ್ಷನ್ 52ರ ಅಡಿಯಲ್ಲಿರುವ ‘ಲಿಸ್ ಪೆಂಡೆನ್ಸ್’ (Lis Pendens) ತತ್ವವನ್ನು ಎತ್ತಿಹಿಡಿದಿರುವ ನ್ಯಾಯಾಲಯ, ಮಾಲೀಕತ್ವ ವರ್ಗಾವಣೆಗೆ ನ್ಯಾಯಾಲಯದ ಅನುಮತಿ ಕಡ್ಡಾಯ ಎಂದು ಸ್ಪಷ್ಟಪಡಿಸಿದೆ. ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಹನುಮಂತನಗರದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಬಿದ್ದಿದೆ. ಪ್ರಕರಣದ ಮೂಲ ಅರ್ಜಿದಾರರಾದ ಎನ್. ಶಿವಾನಂದ್ ಅವರು 1994ರಲ್ಲಿ ಆಸ್ತಿ ಖರೀದಿ ಒಪ್ಪಂದ ಮಾಡಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಬಿ.ಕೆ. ಕೃಷ್ಣಮೂರ್ತಿ ಎಂಬುವವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠವು ವಜಾಗೊಳಿಸಿದೆ. ನ್ಯಾಯಾಲಯದ ಪ್ರಮುಖ ಅಂಶಗಳು: ನ್ಯಾಯಾಲಯದ ಅನುಮತಿ ಅಗತ್ಯ: ಯಾವುದೇ ಆಸ್ತಿಯ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾಗ, ಕೋರ್ಟ್ ಅನುಮತಿ ಇಲ್ಲದೆ ಆ ಆಸ್ತಿಯನ್ನು ವರ್ಗಾವಣೆ ಮಾಡುವಂತಿಲ್ಲ.…

Read More

ಬೆಂಗಳೂರು: ರಾಜ್ಯದ ಜನತೆಗೆ ಕಂದಾಯ ಇಲಾಖೆಯು ದೊಡ್ಡ ಸಮಾಧಾನಕರ ಸುದ್ದಿ ನೀಡಿದೆ. ಆಸ್ತಿ ನೋಂದಣಿ ಬಳಿಕ ಖಾತೆ ಬದಲಾವಣೆ (ಮ್ಯುಟೇಶನ್) ಮಾಡಿಸಲು ತಹಶೀಲ್ದಾರ್ ಕಚೇರಿ ಅಥವಾ ಅಧಿಕಾರಿಗಳ ಹಿಂದೆ ಅಲೆಯುವ ಕಾಲ ಈಗ ಮುಕ್ತಾಯಗೊಂಡಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ವಿಧಾನಸೌಧದಲ್ಲಿ ‘ಸ್ವಯಂ ಚಾಲಿತ ಮ್ಯುಟೇಶನ್’ (Automated Mutation) ಹೊಸ ತಂತ್ರಾಂಶಕ್ಕೆ ಚಾಲನೆ ನೀಡಿದ್ದಾರೆ. ಏನಿದು ಹೊಸ ವ್ಯವಸ್ಥೆ? ಹೇಗೆ ಕೆಲಸ ಮಾಡುತ್ತದೆ? ಈ ಹೊಸ ತಂತ್ರಾಂಶದ ಮೂಲಕ ಮಾನವ ಹಸ್ತಕ್ಷೇಪವಿಲ್ಲದೆ ಮ್ಯುಟೇಶನ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದರ ಪ್ರಮುಖ ಅಂಶಗಳು ಇಲ್ಲಿವೆ: ಸ್ವಯಂ ಅನುಮೋದನೆ: ಕ್ರಯ (Sale), ವಿಭಾಗ (Partition), ದಾನ (Gift), ಪೌತಿ (Inheritance) ಅಥವಾ ವಿಲ್ ಸಂಬಂಧಿತ ಮ್ಯುಟೇಶನ್‌ಗಳಿಗೆ ನಿಗದಿತ ನೋಟಿಸ್ ಅವಧಿ (7 ಅಥವಾ 15 ದಿನಗಳು) ಇರುತ್ತದೆ. ಈ ಅವಧಿ ಮುಗಿದ ತಕ್ಷಣ, ಸರ್ವರ್ ಮೂಲಕವೇ ಡಿಜಿಟಲ್ ಸಹಿಯೊಂದಿಗೆ ಮ್ಯುಟೇಶನ್ ಸ್ವಯಂ ಚಾಲಿತವಾಗಿ ಅನುಮೋದನೆಗೊಳ್ಳುತ್ತದೆ. ತಕರಾರು ಇದ್ದರೆ ಮಾತ್ರ ತಡೆ: ನೋಟಿಸ್ ಅವಧಿಯೊಳಗೆ…

Read More

ಇಸ್ಲಾಮಾಬಾದ್/ಕಾಬೂಲ್: ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿ ಸಂಘರ್ಷ ಈಗ ಯುದ್ಧದ ರೂಪ ಪಡೆದುಕೊಂಡಿದೆ. ಅಫ್ಘಾನಿಸ್ತಾನದ ತಾಲಿಬಾನ್ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ಭೀಕರ ವಾಯುದಾಳಿಯಲ್ಲಿ 133ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆಪರೇಷನ್ ‘ಗಜಬ್ ಲಿಲ್-ಹಕ್’ ಪಾಕಿಸ್ತಾನವು ‘ಆಪರೇಷನ್ ಗಜಬ್ ಲಿಲ್-ಹಕ್’ ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆಸಿದ್ದು, ಅಫ್ಘಾನಿಸ್ತಾನದ ಪ್ರಮುಖ ನಗರಗಳಾದ ಕಾಬೂಲ್, ಕಂದಹಾರ್ ಮತ್ತು ಪಕ್ತಿಕಾಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ದಾಳಿಯ ಪ್ರಮುಖ ಮುಖ್ಯಾಂಶಗಳು: ಜೀವಹಾನಿ: 133 ತಾಲಿಬಾನ್ ಕಾರ್ಯಕರ್ತರು ಸಾವು, 200ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ. ನೆಲೆಗಳ ಧ್ವಂಸ: ತಾಲಿಬಾನ್ ಆಡಳಿತದ 27 ಪೋಸ್ಟ್ಗಳು ನಾಶವಾಗಿದ್ದು, 9 ಪೋಸ್ಟ್ಗಳನ್ನು ಪಾಕ್ ಸೇನೆ ವಶಪಡಿಸಿಕೊಂಡಿದೆ. ಮಿಲಿಟರಿ ಆಸ್ತಿಪಾಸ್ತಿ ನಾಶ: 2 ಕಾರ್ಪ್ಸ್ ಕೇಂದ್ರ ಕಚೇರಿಗಳು, 3 ಬ್ರಿಗೇಡ್ ಕೇಂದ್ರ ಕಚೇರಿಗಳು, ಮದ್ದುಗುಂಡು ಡಿಪೋಗಳು ಸೇರಿದಂತೆ 80ಕ್ಕೂ ಹೆಚ್ಚು ಟ್ಯಾಂಕ್ಗಳು ಮತ್ತು ಫಿರಂಗಿಗಳನ್ನು ಧ್ವಂಸಗೊಳಿಸಿರುವುದಾಗಿ ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ತಿಳಿಸಿದ್ದಾರೆ.…

Read More

ಬೆಂಗಳೂರು: 2026ರ ವರ್ಷದ ಮೊದಲ ಪೂರ್ಣ ಚಂದ್ರಗ್ರಹಣವು ಮಾರ್ಚ್ 3ರಂದು ಸಂಭವಿಸಲಿದ್ದು, ಭಾರತದ ಆಕಾಶಪ್ರೇಮಿಗಳಿಗೆ ಒಂದು ಅಪರೂಪದ ದೃಶ್ಯ ಕಾದಿದೆ. ಈ ದಿನ ಚಂದ್ರನು ಕೆಂಪು ಮಿಶ್ರಿತ ತಾಮ್ರದ ಬಣ್ಣಕ್ಕೆ ತಿರುಗಲಿದ್ದು, ಇದನ್ನು ವಿಜ್ಞಾನಿಗಳು ‘ಬ್ಲಡ್ ಮೂನ್’ (Blood Moon) ಎಂದು ಕರೆಯುತ್ತಾರೆ. ಏನಿದು ಬ್ಲಡ್ ಮೂನ್? ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳರೇಖೆಯಲ್ಲಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಈ ಸಮಯದಲ್ಲಿ ಭೂಮಿಯ ವಾತಾವರಣದ ಮೂಲಕ ಹಾದುಹೋಗುವ ಸೂರ್ಯನ ಬೆಳಕು ಚದುರಿ, ಕೇವಲ ಕೆಂಪು ಬಣ್ಣದ ಕಿರಣಗಳು ಚಂದ್ರನ ಮೇಲೆ ಬೀಳುತ್ತವೆ. ಇದರಿಂದ ಚಂದ್ರನು ಕೆಂಪು ಬಣ್ಣದಲ್ಲಿ ಕಂಗೊಳಿಸುತ್ತಾನೆ. ಭಾರತದಲ್ಲಿ ಗ್ರಹಣದ ಸಮಯ (IST): ಕೋಲ್ಕತ್ತಾದ ಪೊಸಿಷನಲ್ ಅಸ್ಟ್ರೋನಾಮಿಕಲ್ ಸೆಂಟರ್ ನೀಡಿರುವ ಮಾಹಿತಿಯಂತೆ ಗ್ರಹಣದ ಪ್ರಮುಖ ಸಮಯಗಳು ಹೀಗಿವೆ: ಗ್ರಹಣ ಆರಂಭ: ಮಧ್ಯಾಹ್ನ 3:20ಕ್ಕೆ ಪೂರ್ಣ ಗ್ರಹಣ (Totality) ಆರಂಭ: ಸಂಜೆ 4:34ಕ್ಕೆ ಗರಿಷ್ಠ ಹಂತ: ಸಂಜೆ 5:10 ರಿಂದ 5:25 ರವರೆಗೆ ಪೂರ್ಣ ಗ್ರಹಣ…

Read More

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡಲು ನಡೆಸಲಾಗುತ್ತಿರುವ ಪರೀಕ್ಷೆಯ ಸಂಪೂರ್ಣ ವಿವರಗಳನ್ನು ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕವು ಪ್ರಕಟಿಸಿದೆ. ಮುಖ್ಯ ಮಾಹಿತಿ: ಪರೀಕ್ಷಾ ದಿನಾಂಕ: ಅರ್ಹತಾ ಪರೀಕ್ಷೆಯು ಏಪ್ರಿಲ್ 21 ರಂದು ನಡೆಯಲಿದೆ. ವಿವರಗಳು ಲಭ್ಯ: ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿರುವ ವಿಷಯಗಳು, ಪರೀಕ್ಷಾ ದಿನಾಂಕ, ಸಮಯ ಮತ್ತು ಪರೀಕ್ಷಾ ಕೇಂದ್ರಗಳ ವಿವರಗಳನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾಗಿದೆ. ಆಕ್ಷೇಪಣೆಗೆ ಅವಕಾಶ: ಪ್ರಕಟಿತ ಪಟ್ಟಿಯಲ್ಲಿ ಏನಾದರೂ ವ್ಯತ್ಯಾಸಗಳಿದ್ದಲ್ಲಿ ಅಥವಾ ತಿದ್ದುಪಡಿಗಳಿದ್ದಲ್ಲಿ ಅಭ್ಯರ್ಥಿಗಳು ಒಂದು ವಾರದೊಳಗೆ ಇಲಾಖೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಸಂಪರ್ಕಿಸಬೇಕಾದ ವಿಳಾಸ: ಅಭ್ಯರ್ಥಿಗಳು ತಮ್ಮ ದೂರು ಅಥವಾ ವ್ಯತ್ಯಾಸಗಳನ್ನು ಈ ಕೆಳಗಿನ ಇ-ಮೇಲ್ ಅಥವಾ ದೂರವಾಣಿ ಸಂಖ್ಯೆಯ ಮೂಲಕ ಸಲ್ಲಿಸಬಹುದು: ಇ-ಮೇಲ್: cackarnataka1@gmail.com ಮೊಬೈಲ್ ಸಂಖ್ಯೆ: 94498 23723 (ಸಹ ನಿರ್ದೇಶಕರು) ಅರ್ಹ ಶಿಕ್ಷಕರು ಕೂಡಲೇ ವೆಬ್ಸೈಟ್ ಪರಿಶೀಲಿಸಿ ಮಾಹಿತಿ ಖಚಿತಪಡಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read More

ರೈತರು ಪಿಎಂ-ಕಿಸಾನ್ ಪ್ರೋತ್ಸಾಹಧನ ಪಡೆಯಲು ರೈತರು ತಮ್ಮ ಫ್ರೂಟ್ಸ್ ಐಡಿ ಗೆ ಇ-ಕೆವೈಸಿ, ಮೊಬೈಲ್ ಸಂಖ್ಯೆ, ತಮ್ಮ ಹೆಸರಿನಲ್ಲಿರುವ ಎಲ್ಲಾ ಭೂಹಿಡುವಳಿಗಳನ್ನು ಕಡ್ಡಾಯವಾಗಿ ತಮ್ಮ ಎಫ್ಐಡಿಯಲ್ಲಿ ಸೇರ್ಪಡಿಸಿಕೊಳ್ಳುವ ಮೂಲಕ ಕೇಂದ್ರ ನೋಂದಾಯಿತ ರೈತರ ಸಂಖ್ಯೆ ಸೃಜನೆ ಮಾಡಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯ ಪ್ರಕಾರ ಫ್ರೂಟ್ಸ್ ಹಾಗೂ ಭೂಮಿ ದತ್ತಾಂಶಗಳನ್ನು ನಿಯತವಾಗಿ ಜೋಡಣೆ ಮಾಡುವುದು ಅತಿ ಮುಖ್ಯವಾಗಿದೆ. ಹಾಗಾಗಿ ರೈತರು ಫ್ರೂಟ್ಸ್ ತಂತ್ರಾAಶದಲ್ಲಿ ಇ-ಕೆವೈಸಿ, ಮೊಬೈಲ್ ನಂಬರ್ಗಳನ್ನು ಅಪ್ಡೇಟ್ ಮಾಡಿಕೊಳ್ಳುವುದು, ರೈತರ ಹೆಸರಿನಲ್ಲಿರುವ ಎಲ್ಲಾ ಭೂಹಿಡುವಳಿಗಳನ್ನು ಕಡ್ಡಾಯವಾಗಿ ತಮ್ಮ ಎಫ್.ಐ.ಡಿಯಲ್ಲಿ ಸೇರ್ಪಡಿಸಿಕೊಳ್ಳುವುದು ಮತ್ತು ರೈತರ ಸಹಮತಿ ಪತ್ರವನ್ನು ವಿದ್ಯುನ್ಮಾನ ರೀತಿಯಲ್ಲಿ ನೀಡುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದಿಂದ ಒಂದು ಕೇಂದ್ರ ನೋಂದಾಯಿತ ರೈತರ ಸಂಖ್ಯೆಯನ್ನು (ಸೆಂಟ್ರಲ್ ಫಾರ್ಮರ್ ಐಡಿ) ಸೃಜಿಸಲಾಗುತ್ತದೆ. ಈ ರೀತಿಯಾಗಿ ಸೃಜಿಸಲಾದ ಕೇಂದ್ರ ನೋಂದಾಯಿತ ರೈತ ಸಂಖ್ಯೆಯನ್ನು ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಳಿಸುವ ಪಿಎಂ-ಕಿಸಾನ್ ಯೋಜನೆ…

Read More

ಬಳ್ಳಾರಿ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಅರ್ಹ ಫಲಾನುಭವಿಗಳಿಂದ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿಶೇಷ ಘಟಕ ಯೋಜನೆ (SCP) ಮತ್ತು ಗಿರಿಜನ ಉಪಯೋಜನೆಯಡಿ (TSP) 10 ಕುರಿ/ಮೇಕೆ + 1 ಟಗರು/ಹೋತಗಳ ಘಟಕ ಸ್ಥಾಪಿಸಲು ಈ ಆರ್ಥಿಕ ನೆರವು ನೀಡಲಾಗುವುದು. ಅರ್ಹತೆಗಳು ಮತ್ತು ಮೀಸಲಾತಿ: ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ವೃತ್ತಿ: ಕೂಲಿ ಕಾರ್ಮಿಕರು ಅಥವಾ ಪಶು ಸಂಗೋಪನೆಯಲ್ಲಿ ತೊಡಗಿರುವವರು ಅರ್ಹರು. ವಯೋಮಿತಿ: 18 ರಿಂದ 60 ವರ್ಷದ ಒಳಗಿರಬೇಕು. ವಿಶೇಷ ಮೀಸಲಾತಿ: ಮಹಿಳೆಯರಿಗೆ ಶೇ. 33.3 ರಷ್ಟು ಹಾಗೂ ವಿಶೇಷಚೇತನರಿಗೆ ಶೇ. 3 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸುವ ವಿಧಾನ: ಆಸಕ್ತರು ಬಳ್ಳಾರಿ ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ತಾಲೂಕು ಮಟ್ಟದ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಹೊಸಪೇಟೆಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಅರ್ಜಿ…

Read More