Author: kannadanewsnow57

ನವದೆಹಲಿ: ಕೌಟುಂಬಿಕ ಕಲಹ ಹಾಗೂ ವಿಚ್ಛೇದನ ಪ್ರಕರಣಗಳಲ್ಲಿ ಪತ್ನಿಯ ನಿರ್ವಹಣೆ ಮಾಡುವುದು ಪತಿಯ ಸಾಂವಿಧಾನಿಕ ಮತ್ತು ನೈತಿಕ ಜವಾಬ್ದಾರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. “ನನ್ನ ಬಳಿ ಹಣವಿಲ್ಲ” ಎಂಬ ಪತಿಯ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, “ಹಣವಿಲ್ಲದಿದ್ದರೆ ಸಾಲ ಮಾಡಿಯಾದರೂ ಪತ್ನಿಗೆ ಜೀವನಾಂಶ ನೀಡಿ” ಎಂದು ಕಟುವಾಗಿ ನುಡಿದಿದೆ. ಪ್ರಕರಣದ ಹಿನ್ನೆಲೆ ಏನು? ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಗಳ ಪ್ರಕರಣವಿದು. ವಿಚಾರಣೆ ವೇಳೆ ಪತಿಯು ತಾನು ದಿನಗೂಲಿ ನೌಕರನಾಗಿದ್ದು, ದಿನಕ್ಕೆ ಕೇವಲ 325 ರೂಪಾಯಿ ಸಂಪಾದಿಸುತ್ತೇನೆ ಎಂದು ವಾದಿಸಿದ್ದನು. “ನನ್ನ ತಿಂಗಳ ಆದಾಯ ಕೇವಲ 9,000 ರೂಪಾಯಿಗಳು. ಹೀಗಿರುವಾಗ ಪತ್ನಿಗೆ ತಿಂಗಳಿಗೆ 12,000 ರೂಪಾಯಿ ಜೀವನಾಂಶ ನೀಡಲು ಹೇಗೆ ಸಾಧ್ಯ?” ಎಂದು ತನ್ನ ಅಸಹಾಯಕತೆ ವ್ಯಕ್ತಪಡಿಸಿದ್ದನು. ಆದರೆ, ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಸಂದೀಪ್‌ ಮೆಹ್ತಾ ಅವರಿದ್ದ ದ್ವಿಸದಸ್ಯ ಪೀಠವು ಈ ವಾದವನ್ನು ಒಪ್ಪಲು ನಿರಾಕರಿಸಿತು. ಇಂದಿನ ಬೆಲೆ ಏರಿಕೆಯ ಕಾಲದಲ್ಲಿ ಇಷ್ಟು ಕಡಿಮೆ ಆದಾಯ ಗಳಿಸುತ್ತೇನೆ…

Read More

ಬೆಂಗಳೂರು: ಪ್ರತಿಷ್ಠಿತ ಸುದ್ದಿ ಸಂಸ್ಥೆಯಾದ ‘ಕನ್ನಡ ನ್ಯೂಸ್ ನೌ’ (Kannada News Now) ತನ್ನ ವೆಬ್‌ಸೈಟ್‌ಗಾಗಿ ಅರೆಕಾಲಿಕ (Part-time) ಕೆಲಸ ನಿರ್ವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ವೆಬ್ ಸ್ಟೋರಿಗಳನ್ನು (Web Stories) ಆಕರ್ಷಕವಾಗಿ ಮತ್ತು ಸೃಜನಾತ್ಮಕವಾಗಿ ಸಿದ್ಧಪಡಿಸುವಲ್ಲಿ ಪರಿಣತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ವಿವರಗಳು: ಹುದ್ದೆಯ ಹೆಸರು: ವೆಬ್ ಸ್ಟೋರಿ ಕ್ರಿಯೇಟರ್ (ಅರೆಕಾಲಿಕ) ಅರ್ಹತೆ: ವೆಬ್ ಸ್ಟೋರಿ ತಯಾರಿಕೆಯಲ್ಲಿ ಕೌಶಲ ಮತ್ತು ಅನುಭವ ಹೊಂದಿರಬೇಕು. ವೇತನ: ನಿಮ್ಮ ಕೆಲಸದ ಅನುಭವ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಉತ್ತಮ ಸಂಬಳವನ್ನು ನೀಡಲಾಗುವುದು. ಅರ್ಜಿ ಸಲ್ಲಿಸುವುದು ಹೇಗೆ? ಆಸಕ್ತರು ತಮ್ಮ ವಿವರಗಳನ್ನು ಈ ಕೆಳಗಿನ ಇಮೇಲ್ ವಿಳಾಸಕ್ಕೆ ತಕ್ಷಣವೇ ಕಳುಹಿಸಿಕೊಡಲು ಕೋರಲಾಗಿದೆ: ಇಮೇಲ್: kannadanewsnow@gmail.com ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಇಮೇಲ್ ಮೂಲಕ ಸಂಪರ್ಕಿಸಬಹುದಾಗಿದೆ.

Read More

ತೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕವಿದಿದ್ದು, ಕಳೆದ 24 ಗಂಟೆಗಳಲ್ಲಿ ಇರಾನ್ ಅಕ್ಷರಶಃ ಅಟ್ಟಹಾಸ ಮೆರೆದಿದೆ. ಬರೋಬ್ಬರಿ 15 ದೇಶಗಳ ಮೇಲೆ ಏಕಕಾಲಕ್ಕೆ ಇರಾನ್ ಪಡೆಗಳು ವೈಮಾನಿಕ ದಾಳಿ ನಡೆಸಿರುವುದು ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ. ದಾಳಿಗೊಳಗಾದ ಪ್ರಮುಖ ದೇಶಗಳು: ಅಮೆರಿಕದ ಸೇನಾ ನೆಲೆಗಳನ್ನೇ ಗುರಿಯಾಗಿಸಿಕೊಂಡು ಇರಾನ್ ಈ ಬೃಹತ್ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ. ದಾಳಿಗೊಳಗಾದ ದೇಶಗಳ ಪಟ್ಟಿ ಹೀಗಿದೆ: ಇಸ್ರೇಲ್ ಮತ್ತು ಅಮೆರಿಕ ಗಲ್ಫ್ ರಾಷ್ಟ್ರಗಳು: ಸೌದಿ ಅರೇಬಿಯಾ, ಯುಎಇ (UAE), ಕತಾರ್, ಕುವೈತ್, ಬಹ್ರೇನ್ ಮತ್ತು ಒಮನ್. ನೆರೆಹೊರೆಯ ದೇಶಗಳು: ಇರಾಕ್, ಜೋರ್ಡಾನ್ ಮತ್ತು ಸಿರಿಯಾ. ಯುರೋಪಿಯನ್ ರಾಷ್ಟ್ರಗಳು: ಫ್ರಾನ್ಸ್, ಇಟಲಿ, ಯುನೈಟೆಡ್ ಕಿಂಗ್‌ಡಮ್ (UK) ಮತ್ತು ಸೈಪ್ರಸ್. ಫ್ರಾನ್ಸ್ ನೌಕಾ ನೆಲೆಯ ಮೇಲೆ ಅಟ್ಯಾಕ್! ಇರಾನ್ ಕೇವಲ ಅರಬ್ ರಾಷ್ಟ್ರಗಳನ್ನಷ್ಟೇ ಅಲ್ಲದೆ, ಐರೋಪ್ಯ ಒಕ್ಕೂಟದ ಪ್ರಬಲ ಶಕ್ತಿ ಫ್ರಾನ್ಸ್‌ನ ನೌಕಾ ನೆಲೆಯ ಮೇಲೂ ಭೀಕರ ವೈಮಾನಿಕ ದಾಳಿ ನಡೆಸಿದೆ. ಇದು ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ತೀವ್ರ ಸಂಘರ್ಷಕ್ಕೆ…

Read More

ವಾಷಿಂಗ್ಟನ್/ಕುವೈತ್ ಸಿಟಿ: ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಅಮೆರಿಕದ ಅತ್ಯಾಧುನಿಕ F-15 ಯುದ್ಧ ವಿಮಾನವೊಂದು ಕುವೈತ್ ಆಕಾಶದಲ್ಲಿ ಪತನಗೊಂಡಿದೆ ಎಂದು ವರದಿಯಾಗಿದೆ. ವಿಮಾನವು ಬೆಂಕಿಯ ಉಂಡೆಯಾಗಿ ಕೆಳಕ್ಕೆ ಬೀಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜಗತ್ತಿನಾದ್ಯಂತ ಆತಂಕ ಮೂಡಿಸಿವೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುದ್ಧ ವಿಮಾನವು ನಿಯಂತ್ರಣ ತಪ್ಪಿ ನೆಲಕ್ಕೆ ಅಪ್ಪಳಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಇದು ಶತ್ರು ಪಡೆಗಳ ದಾಳಿಯಿಂದ ಪತನವಾಗಿದೆಯೇ ಅಥವಾ ತಾಂತ್ರಿಕ ದೋಷವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಾಷಿಂಗ್ಟನ್ ಪ್ರತಿಕ್ರಿಯೆ: ಈ ಘಟನೆಗೆ ಸಂಬಂಧಿಸಿದಂತೆ ಅಮೆರಿಕದ ರಕ್ಷಣಾ ಇಲಾಖೆ (Pentagon) ಈವರೆಗೆ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ವಾಷಿಂಗ್ಟನ್‌ನಿಂದ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ. https://twitter.com/treeni/status/2028337079428829284?ref_src=twsrc%5Etfw%7Ctwcamp%5Etweetembed%7Ctwterm%5E2028337079428829284%7Ctwgr%5E8f5304a44f54a8a3b85afc793d9a3eb0a0e2debe%7Ctwcon%5Es1_c10&ref_url=https%3A%2F%2Fkannadadunia.com%2Firan-shoots-down-us-f-15-fighter-jet-in-kuwait-video-goes-viral-watch-video%2F

Read More

ಜೆರುಸಲೇಂ: ಇರಾನ್ ಮತ್ತು ಅದರ ಬೆಂಬಲಿತ ಗುಂಪುಗಳ ವಿರುದ್ಧ ಸಮರ ಸಾರಿರುವ ಇಸ್ರೇಲ್, ಇದೀಗ ಹಿಜ್ಬುಲ್ಲಾ ಸಂಘಟನೆಯ ಹಿರಿಯ ನಾಯಕ ಮೊಹಮ್ಮದ್ ರಾದ್ ನನ್ನು ವೈಮಾನಿಕ ದಾಳಿಯ ಮೂಲಕ ಹತ್ಯೆಗೈದಿದೆ ಎಂದು ವರದಿಯಾಗಿದೆ. ಇಸ್ರೇಲ್ ರಕ್ಷಣಾ ಪಡೆಗಳು (IDF) ನಡೆಸಿದ ನಿಖರ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಗುಂಪಿನ ಪ್ರಮುಖ ರಾಜಕೀಯ ಮತ್ತು ಸೈನಿಕ ನಾಯಕ ಮೊಹಮ್ಮದ್ ರಾದ್ ಸಾವನ್ನಪ್ಪಿದ್ದಾರೆ. ಇರಾನ್ ವಿರುದ್ಧದ ಕಾರ್ಯಾಚರಣೆ: ಕಳೆದ ಕೆಲವು ದಿನಗಳಿಂದ ಇರಾನ್ ಮೇಲೂ ದಾಳಿ ನಡೆಸುತ್ತಿರುವ ಇಸ್ರೇಲ್, ಈಗ ಹಿಜ್ಬುಲ್ಲಾ ನೆಲೆಗಳ ಮೇಲೆ ದಾಳಿಯನ್ನು ತೀವ್ರಗೊಳಿಸಿದೆ. ಹಿನ್ನಡೆ: ಮೊಹಮ್ಮದ್ ರಾದ್ ಹತ್ಯೆಯು ಹಿಜ್ಬುಲ್ಲಾ ಸಂಘಟನೆಗೆ ದೊಡ್ಡ ಹೊಡೆತವೆಂದು ಪರಿಗಣಿಸಲಾಗಿದೆ, ಇದು ಈ ಪ್ರಾಂತ್ಯದಲ್ಲಿ ಮತ್ತಷ್ಟು ಉದ್ವಿಗ್ನತೆಗೆ ಕಾರಣವಾಗುವ ಸಾಧ್ಯತೆಯಿದೆ. ದಾಳಿಯ ನಂತರ ಇಸ್ರೇಲ್ ತನ್ನ ಗಡಿಭಾಗದಲ್ಲಿ ಹೆಚ್ಚಿನ ಭದ್ರತೆಯನ್ನು ಕೈಗೊಂಡಿದ್ದು, ಯಾವುದೇ ಕ್ಷಣದಲ್ಲಿ ಪ್ರತಿದಾಳಿ ನಡೆಯಬಹುದು ಎಂಬ ಮುನ್ನೆಚ್ಚರಿಕೆ ವಹಿಸಿದೆ.

Read More

ದುಬೈ/ಜೆರುಸಲೇಂ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು ಮತ್ತಷ್ಟು ತೀವ್ರಗೊಂಡಿದೆ. ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮತ್ತು ಪ್ರಮುಖ ಸೇನಾಧಿಕಾರಿಗಳನ್ನು ಅಮೆರಿಕಾ ಹಾಗೂ ಇಸ್ರೇಲ್ ಜಂಟಿ ದಾಳಿಯಲ್ಲಿ ಹತ್ಯೆಗೈದ ಬೆನ್ನಲ್ಲೇ, ಇರಾನ್ ಈಗ ಪ್ರಬಲ ಪ್ರತಿಕಾರಕ್ಕೆ ಮುಂದಾಗಿದೆ. ಇಂದು ಮೂರನೇ ದಿನವೂ ಸಂಘರ್ಷ ಮುಂದುವರಿದಿದ್ದು, ಇಡೀ ವಿಶ್ವವೇ ಆತಂಕದಿಂದ ಇತ್ತ ನೋಡುವಂತಾಗಿದೆ. ಇಂದಿನ ಪ್ರಮುಖ ಬೆಳವಣಿಗೆಗಳು: ರಾಜಧಾನಿಗಳಲ್ಲಿ ಆತಂಕ: ಇರಾನ್ ತನ್ನ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ವಿಸ್ತರಿಸಿದ್ದು, ಇಂದು ಸತತ ಎರಡನೇ ದಿನವೂ ದುಬೈ ಮತ್ತು ದೋಹಾ ಬಳಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ಅರಬ್ ರಾಷ್ಟ್ರಗಳ ಮೇಲಿನ ಇರಾನ್‌ನ ಈ ದಾಳಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಅಮೆರಿಕಾ ಸೈನಿಕರ ಸಾವು: ಇರಾನ್ ನಡೆಸಿದ ವಾಯುದಾಳಿಯಲ್ಲಿ ಅಮೆರಿಕಾದ ಮೂವರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವಾಷಿಂಗ್ಟನ್ ಅಧಿಕೃತವಾಗಿ ಖಚಿತಪಡಿಸಿದೆ. ಇದು ಯುದ್ಧ ಆರಂಭವಾದ ನಂತರ ಅಮೆರಿಕಾ ಅನುಭವಿಸುತ್ತಿರುವ ಮೊದಲ ದೊಡ್ಡ ಜೀವಹಾನಿಯಾಗಿದೆ. ಟ್ರಂಪ್ ಎಚ್ಚರಿಕೆ: ಇರಾನ್‌ನ ಈ ನಡೆಯನ್ನು ಅಮೆರಿಕಾ…

Read More

ಹುಬ್ಬಳ್ಳಿ: ವಿದ್ಯುತ್ ಬಿಲ್ ಕಲೆಕ್ಟರ್ ಎಂದು ಸುಳ್ಳು ಹೇಳಿ ಮನೆಮನೆಗೆ ತೆರಳಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ವಂಚಕನೊಬ್ಬ ಸಿಕ್ಕಿಬಿದ್ದಿರುವ ಘಟನೆ ನಗರದ ಆನಂದನಗರದಲ್ಲಿ ನಡೆದಿದೆ. ಸದ್ಯ ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಡೆದಿದ್ದೇನು? ಆರೋಪಿಯು ಹೆಸ್ಕಾಂ (HESCOM) ಸಿಬ್ಬಂದಿಯಂತೆ ಸಮವಸ್ತ್ರ ಧರಿಸಿ, ತಾನು ವಿದ್ಯುತ್ ಬಿಲ್ ಕಲೆಕ್ಟರ್ ಎಂದು ಪರಿಚಯಿಸಿಕೊಳ್ಳುತ್ತಿದ್ದನು. ಮನೆಮನೆಗೆ ತೆರಳಿ ಕರೆಂಟ್ ಬಿಲ್ ಪಾವತಿಸುವಂತೆ ಹೇಳಿ, ಪ್ರತಿ ಮನೆಯಿಂದ ಅಂದಾಜು 1,000 ದಿಂದ 2,000 ರೂಪಾಯಿವರೆಗೆ ಹಣ ವಸೂಲಿ ಮಾಡುತ್ತಿದ್ದನು. ವಂಚಕನ ಕಾರ್ಯವೈಖರಿ ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಹಣ ಪಡೆದ ನಂತರ ಜನರು ರಸೀದಿ ಕೇಳಿದರೆ, “ಈಗ ಸರ್ವರ್ ಡೌನ್ ಇದೆ, ನಾಳೆ ತಂದು ಕೊಡುತ್ತೇನೆ” ಎಂದು ಹೇಳಿ ಪರಾರಿಯಾಗುತ್ತಿದ್ದನು. ಆರೋಪಿಯು ಹೆಚ್ಚಾಗಿ ಪುರುಷರಿಲ್ಲದ, ಕೇವಲ ಮಹಿಳೆಯರಿದ್ದ ಮನೆಗಳನ್ನೇ ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದನು. ರಸೀದಿ ನೀಡದಿರುವುದು: ಕೆಲವು ಕಡೆ ಹಣ ಪಡೆದರೂ ಯಾವುದೇ ಅಧಿಕೃತ ರಸೀದಿ ನೀಡದಿದ್ದಾಗ ಸ್ಥಳೀಯರಿಗೆ ಆತನ ಮೇಲೆ ಬಲವಾದ ಅನುಮಾನ…

Read More

ದುಬೈ/ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಮಿಲಿಟರಿ ಸಂಘರ್ಷದ ಪರಿಣಾಮವಾಗಿ ಪಶ್ಚಿಮ ಏಷ್ಯಾದ ವಾಯುಪ್ರದೇಶವನ್ನು (Airspace) ಮುಚ್ಚಲಾಗಿದ್ದು, ಜಾಗತಿಕ ವಿಮಾನಯಾನ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಕಳೆದ ಮೂರು ದಿನಗಳಿಂದ ಸಾವಿರಕ್ಕೂ ಹೆಚ್ಚು ಅಂತರಾಷ್ಟ್ರೀಯ ವಿಮಾನಗಳು ರದ್ದಾಗಿವೆ ಅಥವಾ ಮಾರ್ಗ ಬದಲಿಸಿವೆ. ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಾದ ದುಬೈ, ದೋಹಾ ಮತ್ತು ಅಬುಧಾಬಿಗಳಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಹತ್ತಾರು ಸಾವಿರ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲೇ ಸಿಲುಕಿಕೊಂಡಿದ್ದಾರೆ. ಭಾರತೀಯ ವಿಮಾನಗಳ ಮೇಲೆ ಪರಿಣಾಮ ಭಾರತದ ವಿಮಾನಯಾನ ಸಂಸ್ಥೆಗಳಿಗೂ ಈ ಸಂಘರ್ಷದ ಬಿಸಿ ತಟ್ಟಿದ್ದು, ಸುಮಾರು 300ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ವಿಶೇಷವಾಗಿ ದುಬೈ, ದೋಹಾ ಮತ್ತು ಜಿದ್ದಾಗೆ ಅತಿ ಹೆಚ್ಚು ವಿಮಾನಗಳನ್ನು ಓಡಿಸುವ ಇಂಡಿಗೋ (IndiGo) ಸಂಸ್ಥೆಯು ಅತಿ ಹೆಚ್ಚು ರದ್ದತಿಗಳನ್ನು ದಾಖಲಿಸಿದೆ. ಪ್ರಮುಖ ವಿಮಾನಯಾನ ಸಂಸ್ಥೆಗಳ ಸ್ಥಿತಿ: ರಾಯಿಟರ್ಸ್ ವರದಿಯ ಪ್ರಕಾರ, ಎಮಿರೇಟ್ಸ್ (Emirates) ಮತ್ತು ಕತಾರ್ ಏರ್ವೇಸ್ (Qatar Airways) ತಲಾ 400ಕ್ಕೂ ಹೆಚ್ಚು ವಿಮಾನಗಳನ್ನು…

Read More

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯು ಜಾಗತಿಕ ಆರ್ಥಿಕತೆಯ ಮೇಲೆ ಕದನ ಕಾರ್ಮೋಡ ಮೂಡಿಸಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಕಚ್ಚಾ ತೈಲ ಮತ್ತು ಚಿನ್ನದ ಬೆಲೆಗಳಲ್ಲಿ ಭಾರಿ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಹಾರ್ಮುಜ್ ಜಲಸಂಧಿಯನ್ನು ಸದ್ಯಕ್ಕೆ ಮುಚ್ಚುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವರು ಹೇಳಿದ್ದರೂ, ತೈಲ ಮಾರುಕಟ್ಟೆಯಲ್ಲಿನ ಆತಂಕ ಮಾತ್ರ ಕಡಿಮೆಯಾಗಿಲ್ಲ. ಹಾರ್ಮುಜ್ ಜಲಸಂಧಿ ಏಕೆ ಮುಖ್ಯ? ಹಾರ್ಮುಜ್ ಜಲಸಂಧಿಯು ಕೇವಲ 167 ಕಿಮೀ ಉದ್ದದ ಕಿರಿದಾದ ಸಮುದ್ರ ಮಾರ್ಗವಾಗಿದ್ದರೂ, ವಿಶ್ವದ ಒಟ್ಟು ತೈಲದ ಸುಮಾರು 20% ಭಾಗ ಇಲ್ಲಿಂದಲೇ ಸಾಗುತ್ತದೆ. ಭಾರತವು ತನ್ನ ತೈಲದ ಅಗತ್ಯತೆಯ 90% ಆಮದು ಮಾಡಿಕೊಳ್ಳುತ್ತದೆ, ಅದರಲ್ಲಿ 50% ಈ ಮಾರ್ಗದ ಮೂಲಕವೇ ಬರುತ್ತದೆ. ಒಂದು ವೇಳೆ ಈ ಮಾರ್ಗ ಸಂಪೂರ್ಣ ಬಂದ್ ಆಗಿದ್ದರೆ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 120 ಡಾಲರ್ ದಾಟುವ ಸಾಧ್ಯತೆ ಇತ್ತು. ಆದರೆ ಈಗ ತಜ್ಞರು ಇದು 100 ಡಾಲರ್ ತಲುಪಬಹುದು ಎಂದು ಅಂದಾಜಿಸಿದ್ದಾರೆ. ಬೆಲೆ…

Read More

ಬೆಂಗಳೂರು: ರಾಜ್ಯ, ದೇಶ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಪ್ರಮುಖ ಘಟನೆಗಳು ನಡೆದರೂ, ಅದಕ್ಕೆ ಹಾಸನದ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದ ಭವಿಷ್ಯವನ್ನು ತಾಳೆ ಹಾಕುವುದು ಈಗಿನ ಸಂಪ್ರದಾಯವಾಗಿ ಬಿಟ್ಟಿದೆ. ಈಗ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಬೆಳವಣಿಗೆಗಳು ಶ್ರೀಗಳ ಭವಿಷ್ಯವಾಣಿಯನ್ನು ಮತ್ತೆ ಮುನ್ನೆಲೆಗೆ ತಂದಿವೆ. ಜಾಗತಿಕ ನಾಯಕನ ದುರ್ಮರಣ: ಶ್ರೀಗಳ ಭವಿಷ್ಯವಾಣಿ ಕೆಲವು ದಿನಗಳ ಹಿಂದೆ ಬೆಳಗಾವಿಯ ಭಕ್ತರ ಮನೆಯೊಂದರಲ್ಲಿ ಮಾತನಾಡಿದ್ದ ಕೋಡಿಶ್ರೀಗಳು, “ದೇಶ ದೇಶಗಳ ನಡುವೆ ಜಿದ್ದು ಹೆಚ್ಚಾಗಲಿದೆ, ರಾಜಕೀಯ ಅರಾಜಕತೆ ಸೃಷ್ಟಿಯಾಗಲಿದೆ ಹಾಗೂ ಜಾಗತಿಕ ಮಟ್ಟದ ಪ್ರಭಾವಿ ನಾಯಕನೊಬ್ಬನ ದುರ್ಮರಣ ಸಂಭವಿಸಲಿದೆ” ಎಂದು ಮಾರ್ಮಿಕವಾಗಿ ನುಡಿದಿದ್ದರು. ಇದೀಗ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತರಾಗಿರುವುದು ಜಗತ್ತನ್ನೇ ಬೆಚ್ಚಿಬೀಳಿಸಿದೆ. ಇರಾನ್ ಸರ್ಕಾರಿ ಮಾಧ್ಯಮಗಳೇ ಈ ಸುದ್ದಿಯನ್ನು ಖಚಿತಪಡಿಸಿರುವ ಬೆನ್ನಲ್ಲೇ, ಕೋಡಿಶ್ರೀಗಳು ಅಂದೇ ಈ ಬಗ್ಗೆ ಸುಳಿವು ನೀಡಿದ್ದರೇ ಎಂಬ…

Read More