Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಟಿಕೆಟ್ ದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ, ಕಲಾತ್ಮಕ ಚಿತ್ರಗಳ ಪ್ರೋತ್ಸಾಹಕ್ಕೆ ಪ್ರತೀ ಜಿಲ್ಲೆಗೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ರವೀಂದ್ರ ಕಲಾ ಕ್ಷೇತ್ರದಲ್ಲಿ ಕನ್ನಡ ಸೇನಾನಿ ಸಾ.ರಾ.ಗೋವಿಂದು ಅವರ ಅಭಿನಂದನ ಕಾರ್ಯಕ್ರಮದಲ್ಲಿ ಗೋವಿಂದು ಅವರನ್ನು ಸನ್ಮಾನಿಸಿ, ಅಭಿನಂದಿಸಿ ಮಾತನಾಡಿದರು. ಪಕ್ಕದ ರಾಜ್ಯಗಳಲ್ಲಿ ಪರಭಾಷಾ ಚಿತ್ರಗಳಿಗೆ ಟಿಕೆಟ್ ದರ ಎಷ್ಟಿದೆ ಎಂದು ಪರಿಶೀಲಿಸಿ ರಾಜ್ಯದಲ್ಲಿ ಅದಕ್ಕೆ ತಕ್ಕಂತೆ ನಿಯಂತ್ರಣ ತರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದರು. ಕನ್ನಡ ಕೆಲಸಕ್ಕೆ ಸರ್ಕಾರ ಸದಾ ಮುಂದೆ ಇರುತ್ತದೆ. ದಿನಾಂಕ 27 ರಂದು ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿ ಪುತ್ಥಳಿ ಸ್ಥಾಪಿಸಲಾಗುವುದು ಎಂದರು. ಗೋವಿಂದು ಅವರು ರಾಜ್ ಕುಮಾರ್ ಸಂಘದ ಅಧ್ಯಕ್ಷರಾಗಿ ಮಾಡಿದ ಕೆಲಸಗಳು ಸ್ಮರಣೀಯ. ರಾಜ್ ಅವರ ವಿನಯ, ಸಭ್ಯತೆ, ಸರಳತೆ ಇಡೀ ಮನುಷ್ಯ ಕುಲಕ್ಕೇ ಮಾದರಿ. ಡಾ.ರಾಜ್ ಕುಮಾರ್ ಅವರಿಗೆ ರಾಜ್…
ಬೆಂಗಳೂರು: 66/11ಕೆವಿ ಗ್ಲೋಬಲ್ ಟೆಕ್ ಪಾರ್ಕ್ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 25.01.2025 (ಶನಿವಾರ) ರಂದು ಬೆಳಗ್ಗೆ 10:00 ರಿಂದ ಮಧ್ಯಾನ್ನ 2:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. “ಎಕೊವರ್ಲ್ಡ್ ಕ್ಯಾಂಪಸ್, ಮ್ಯಾರಿಯಟ್ ಹೋಟೆಲ್, ದೇವರಬೀಸನಹಳ್ಳಿ, ವಜ್ರಮ್ ಅಪಾರ್ಟ್ಮೆಂಟ್, ದೇವರಬೀಸನಹಳ್ಳಿ ಗ್ರಾಮ, ದೊಡ್ಡಕನ್ನೆಳ್ಳಿ ರೋಡ್, ಗೇರ್ ಸ್ಕೂಲ್ ರೋಡ್, ಆದರ್ಶ್, ಸಾಯಿ ಶೃತಿ, ಸ್ಟರ್ಲಿಂಗ್ ಅಸೆಂಟಿಯಾ, ಸಾಮ್ವಿ, ಜೆ.ವಿ ಹೋಟೆಲ್ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 66/11ಕೆವಿ ಸೇಂಟ್ಜಾನ್ವುಡ್ ಉಪಕೇಂದ್ರದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 27.01.2025 (ಸೋಮವಾರ) ರಂದು ಬೆಳಗ್ಗೆ 10:00 ರಿಂದ ಸಂಜೆ 3:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ಕರೆಂಟ್ ಇರೋದಿಲ್ಲ. “ಸೇಂಟ್ಜಾನ್ವುಡ್ ಅಪಾರ್ಟ್ಮೆಂಟ್ & ಆಸ್ಪತ್ರೆ, ತಾವರೆಕೆರೆ, ಅಕ್ಸೆಂಚರ್, ಒರೆಕಲ್, ಚರಿಸ್ಟ್ ಕಾಲೇಜು, ಮತ್ತು ಸುತ್ತಮುತ್ತಲಿನ ಸ್ಥಳ. ಬಿಟಿಎಮ್ ಲೇಔಟ್,ಮೆಜೆಸ್ಟಿಕ್ ಅಪಾರ್ಟ್ಮೆಂಟ್, ಎಕ್ಷಾ , ಆಕ್ಷಿಸ್ ಭವನ, ಸುದ್ದಗುಂಟೆ ಪಾಳ್ಯ, ಗುರಪ್ಪನ ಲೇಔಟ್,ಬಿಜಿ ರೋಡ್…
ಬೆಂಗಳೂರು: 66/11ಕೆವಿ ಶೋಭಾ ಅಪಾರ್ಟ್ ಮೇಂಟ್ ವಿ.ವಿ. ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 24.01.2025 (ಶುಕ್ರವಾರ) ರಂದು ಬೆಳಗ್ಗೆ 10:00 ರಿಂದ ಸಂಜೆ 15:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ನಾಳೆ ನಗರದ ಈ ಪ್ರದೆಶಗಳಲ್ಲಿ ವಿದ್ಯುತ್ ವ್ಯತ್ಯ “ಸರ್ಜಾಪುರ, ಸೆಸ್ಸಾನ ಗಾರ್ಡನ್ ಔಟರ್ ರೀಗ್ ರೋಡ್, ಸೆಂಟ್ರಲ್ ಮಾಲ್ ಎಕ್ಸೋರಾ ಬಿಸಿನೆಸ್ ಪಾರ್ಕ್ ಶೋಭಾ ಅಪಾರ್ಟ್ ಮೆಂಟ್, ಸರ್ಜಾಪುರ ಸಾಫ್ಟ್ ಜೋನ್, ತಕ್ಷಶೀಲಾ ಹೆಲ್ತ್ ಕೇರ್. ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ನವದೆಹಲಿ : ಆನ್ಲೈನ್ ಚಿಲ್ಲರೆ ವ್ಯಾಪಾರಿ ಅಮೆಜಾನ್ ಮುಂಬರುವ ಎರಡು ತಿಂಗಳಲ್ಲಿ ಕೆನಡಾದ ಕ್ವಿಬೆಕ್ನಲ್ಲಿರುವ ತನ್ನ ಎಲ್ಲಾ ಏಳು ಗೋದಾಮುಗಳನ್ನು ಮುಚ್ಚುವುದಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರವು ತನ್ನ ಗ್ರಾಹಕರಿಗೆ ದೀರ್ಘಾವಧಿಯ ಉಳಿತಾಯವನ್ನು ನೀಡುತ್ತದೆ ಎಂದು ಅಮೆಜಾನ್ ಹೇಳಿದೆ. ಆದಾಗ್ಯೂ, ಕೆನಡಾದ ಒಕ್ಕೂಟವು ಅಮೆಜಾನ್ ಈ ಪ್ರದೇಶದಲ್ಲಿ ತನ್ನ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿರುವುದರಿಂದ ಗೋದಾಮುಗಳನ್ನು ಮುಚ್ಚಲು ನಿರ್ಧರಿಸಿದೆ ಎಂದು ಆರೋಪಿಸಿದೆ. ಒಂದು ಗೋದಾಮನ್ನು ಯಶಸ್ವಿಯಾಗಿ ಸಂಘಟಿಸಿದ್ದೇವೆ ಎಂದು ಒಕ್ಕೂಟ ಹೇಳಿದೆ. ಅಮೆಜಾನ್ ಪ್ರಕಾರ, ಈ ನಿರ್ಧಾರವು ಗ್ರೇಟರ್ ಮಾಂಟ್ರಿಯಲ್ ಪ್ರದೇಶದಲ್ಲಿ ಸುಮಾರು 1,700 ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ, ಅದರಲ್ಲಿ 250 ಕಾರ್ಮಿಕರು ತಾತ್ಕಾಲಿಕ ರಜೆಯಲ್ಲಿದ್ದಾರೆ. ಪ್ಯಾಕೇಜ್ಗಳನ್ನು ತಲುಪಿಸಲು ಸ್ಥಳೀಯ ಮತ್ತು ಮೂರನೇ ವ್ಯಕ್ತಿಯ ಕಂಪನಿಗಳನ್ನು ನೇಮಿಸುವುದಾಗಿ ಅಮೆಜಾನ್ ತಿಳಿಸಿದೆ. ಅಮೆಜಾನ್ 2020 ರ ಮೊದಲು ಕ್ವಿಬೆಕ್ನಲ್ಲಿ ಅನುಸರಿಸಿದ ವ್ಯವಹಾರ ಮಾದರಿಯನ್ನು ಮರುಬಳಕೆ ಮಾಡುತ್ತದೆ. ಅಮೆಜಾನ್ ವಕ್ತಾರೆ ಬಾರ್ಬರಾ ಎಗ್ರೆಟ್ ಪ್ರಕಾರ, ಈ ನಿರ್ಧಾರವನ್ನು ಕಾರಣವಿಲ್ಲದೆ ತೆಗೆದುಕೊಳ್ಳಲಾಗಿಲ್ಲ. ಈ ನಿರ್ಧಾರದ ನಂತರ,…
ನವದೆಹಲಿ : 2000 ರಿಂದ ಭಾರತದಲ್ಲಿ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಈಗ ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ಒಂದು ಆಶಾಕಿರಣ ಹೊರಹೊಮ್ಮಿದೆ. ಏತನ್ಮಧ್ಯೆ, ಸ್ತನ ಕ್ಯಾನ್ಸರ್ ಗೆಡ್ಡೆಗಳನ್ನು ತೊಡೆದುಹಾಕಲು ಒಂದೇ ಡೋಸ್ ಅನ್ನು ಅಭಿವೃದ್ಧಿಪಡಿಸುವ ಮೂಲಕ ವಿಜ್ಞಾನಿಗಳು ಪ್ರಮುಖ ಪ್ರಗತಿಯನ್ನು ಸಾಧಿಸಿದ್ದಾರೆ. ಇದು ಗೆಡ್ಡೆಯನ್ನು ತೆಗೆದುಹಾಕುವಲ್ಲಿ ಸಹಾಯ ಮಾಡಿದೆ. ಅರ್ಬಾನಾ-ಚಾಂಪೇನ್ನಲ್ಲಿರುವ ಇಲಿನಾಯ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸ್ತನ ಕ್ಯಾನ್ಸರ್ ಗೆಡ್ಡೆಗಳನ್ನು ಕೊಲ್ಲುವ ERSO-TFPY ಎಂಬ ಅಣುವಿನ ಪ್ರಮಾಣವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಅಧ್ಯಯನದ ನೇತೃತ್ವ ವಹಿಸಿದ್ದ ಪ್ರೊಫೆಸರ್ ಪಾಲ್ ಹರ್ಗೆನ್ರೋಥರ್, ಮೌಸ್ ಮಾದರಿಗಳಲ್ಲಿ ಡೋಸೇಜ್ ಅನ್ನು ಪರೀಕ್ಷಿಸಲಾಯಿತು ಮತ್ತು ದೊಡ್ಡ ಸ್ತನ ಕ್ಯಾನ್ಸರ್ ಗೆಡ್ಡೆಗಳ ಗಾತ್ರದಲ್ಲಿ ಕಡಿತವನ್ನು ತೋರಿಸಿದೆ ಎಂದು ಹೇಳಿದರು. ಈ ಸಂಶೋಧನೆಯನ್ನು ಇಲಿಗಳ ಮೇಲೆ ಮಾತ್ರ ಮಾಡಲಾಗಿದ್ದರೂ, ಇದು ಚಿಕಿತ್ಸೆಗಾಗಿ ಹೊಸ ಭರವಸೆಗಳನ್ನು ಹುಟ್ಟುಹಾಕಿದೆ. ಈಗ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಪ್ರೊಫೆಸರ್ ಹರ್ಗೆನ್ರೋಥರ್ ಪ್ರಕಾರ, ಶೇಕಡಾ 70 ರಷ್ಟು ಸ್ತನ ಕ್ಯಾನ್ಸರ್ ರೋಗಿಗಳು ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ,…
ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಮಾಜಿ ಸಚಿವ ಎಸ್. ಸುರೇಶ್ ಅವರ ಈ ಕಾರ್ಯ ಭಾರೀ ಜನಮೆಚ್ಚುಗೆಗೆ ಪಾತ್ರವಾಗಿದ್ದು, ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಬೆಳಗ್ಗೆ ಸುಮಾರು 6:30 ಗಂಟೆ, ಚಿಕಿತ್ಸೆಗಾಗಿ ತೆರಳುತ್ತಿದ್ದ ವೇಳೆ ಚುಮುಚುಮು ಚಳಿ. ಆ ವಾತಾವರಣದಲ್ಲಿ ನಗುನಗುತ, ಹಿಂದೆ ಕ್ಯಾರಿಯರ್ ನಲ್ಲಿ ಒಂದಷ್ಟು ನ್ಯೂಸ್ ಪೇಪರ್ ಗಳನ್ನು ಕಟ್ಟಿಕೊಂಡು ಸೈಕಲ್ ತುಳಿಯುತ್ತಿದ್ದ ಈ ಪೋರ ನನ್ನ ಕಣ್ಣಿಗೆ ಬಿದ್ದ. ಈ ಬಾಲಕನ ಹೆಸರು #ಪುರುಷೋತ್ತಮ. ಶಿವನಗರದ ಸಿದ್ದಗಂಗಾ ಶಾಲೆಯಲ್ಲಿ #ಒಂಬತ್ತನೇ ಕ್ಲಾಸ್ ಓದುತ್ತಿದ್ದಾನೆ. ( ಇಂದು ಅಯೋಧ್ಯೆಯಲ್ಲಿ ಪುರುಷೋತ್ತಮ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ ದಿನ ಸಹ) ರಾಜಾಜಿನಗರದ ಇಂದಿರಾ ನಗರದಲ್ಲಿ ತಾಯಿ ಮತ್ತು ಇವನು ಇಬ್ಬರೇ ಇರುವುದು. ತಾಯಿ ಮನೆ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಮನೆಯ ಅಗತ್ಯತೆ ಗೊತ್ತಿರುವ ಬಾಲಕ ಪುರುಷೋತ್ತಮ್ ತನ್ನ ತಾಯಿಗೆ ಸಹಾಯ ಮಾಡಬೇಕೆಂದು ಪ್ರತಿದಿನ ಬೆಳಗ್ಗೆ ಸುಮಾರು 90 ಮನೆಗಳಿಗೆ ವೃತ್ತ ಪತ್ರಿಕೆಗಳನ್ನು (Newapapers) ತಲುಪಿಸುತ್ತಾನೆ. ತಿಂಗಳಿಗೆ ಅಂದಾಜು ₹ 800…
ದಾವೋಸ್ : ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಂದರ್ಭದಲ್ಲಿ, ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಅವರು 2025 ರಲ್ಲಿ ಭಾರತದ ಮೊದಲ ‘ಮೇಡ್ ಇನ್ ಇಂಡಿಯಾ’ ಚಿಪ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದರು. ಈ ಕುರಿತು ಮಾಹಿತಿ ನೀಡಿರುವ ಅವರು, “ಪ್ರಧಾನಿ ನರೇಂದ್ರ ಮೋದಿ ಅವರು ಸಂಪೂರ್ಣ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಮೇಲೆ ಕೇಂದ್ರೀಕರಿಸಿದ್ದಾರೆ ಮತ್ತು ಈ ಉದ್ಯಮವನ್ನು ವೇಗವಾಗಿ ಅಭಿವೃದ್ಧಿಪಡಿಸಿದ್ದಾರೆ” ಎಂದು ಸಚಿವ ವೈಷ್ಣವ್ ಹೇಳಿದರು. ಈಗಾಗಲೇ 104 ವಿಶ್ವವಿದ್ಯಾಲಯಗಳೊಂದಿಗೆ ತಿಳುವಳಿಕೆ ಪತ್ರ (ಎಂಒಯು)ಕ್ಕೆ ಸಹಿ ಹಾಕಲಾಗಿದೆ ಎಂದು ಅವರು ಹೇಳಿದರು. ಈ ಸಂಸ್ಥೆಗಳ ಪಠ್ಯಕ್ರಮವನ್ನು ನವೀಕರಿಸಲಾಗುತ್ತಿದೆ ಮತ್ತು ವಿನ್ಯಾಸಕ್ಕೆ ವಿಶೇಷ ಒತ್ತು ನೀಡಲು ಪ್ರತ್ಯೇಕ ಹೂಡಿಕೆ ಯೋಜನೆಯನ್ನು ರಚಿಸಲಾಗಿದೆ. ಸರ್ಕಾರಿ ನೀತಿಗಳ ಕೊಡುಗೆ ಫೆಬ್ರವರಿ 2022 ರಲ್ಲಿ, ಕೇಂದ್ರ ಸರ್ಕಾರವು ಭಾರತದಲ್ಲಿ ಮೂರು ಸೆಮಿಕಂಡಕ್ಟರ್ ಘಟಕಗಳ ಸ್ಥಾಪನೆಗೆ ಅನುಮೋದನೆ ನೀಡಿತು. ಅಶ್ವಿನಿ ವೈಷ್ಣವ್ ಈ ಸಾಧನೆಯನ್ನು “ವಿಶ್ವಾಸ ಮತ್ತು ಸರಿಯಾದ ನೀತಿಗಳ” ಪರಿಣಾಮವಾಗಿ ಬಣ್ಣಿಸಿದ್ದಾರೆ. ಜನವರಿ 2022…
ಥೈಲ್ಯಾಂಡ್ : ಇಂದಿನಿಂದ (ಗುರುವಾರ, ಜನವರಿ 23) ಥೈಲ್ಯಾಂಡ್ನಲ್ಲಿ ಸಲಿಂಗಕಾಮಿ ವಿವಾಹವನ್ನು ಕಾನೂನುಬದ್ಧಗೊಳಿಸಲಾಗಿದೆ. ಇದರೊಂದಿಗೆ, ನೂರಾರು LGBTQ ಜೋಡಿಗಳ ವಿವಾಹವು ಥೈಲ್ಯಾಂಡ್ನಲ್ಲಿ ಕಾನೂನುಬದ್ಧ ಮನ್ನಣೆಯನ್ನು ಪಡೆದುಕೊಂಡಿದೆ. ಗುರುವಾರ, ಸಲಿಂಗಕಾಮಿ ದಂಪತಿಗಳಿಗೆ ಸಮಾನ ಹಕ್ಕುಗಳನ್ನು ನೀಡುವ ಕಾನೂನು ಜಾರಿಗೆ ಬಂದಾಗ, ದೇಶಾದ್ಯಂತ ಆಚರಣೆಗಳು ಪ್ರಾರಂಭವಾದವು. ಆಗ್ನೇಯ ಏಷ್ಯಾದಲ್ಲಿ ಸಲಿಂಗ ವಿವಾಹ ಕಾನೂನನ್ನು ಜಾರಿಗೆ ತಂದ ಮೊದಲ ದೇಶ ಥೈಲ್ಯಾಂಡ್. ದೇಶದ ಸಲಿಂಗ ವಿವಾಹ ಕಾನೂನು ಜಾರಿಗೆ ಬಂದ ನಂತರ ಥೈಲ್ಯಾಂಡ್ನಲ್ಲಿ LGBTQ+ ದಂಪತಿಗಳು ತಮ್ಮ ವಿವಾಹಗಳನ್ನು ಕಾನೂನುಬದ್ಧಗೊಳಿಸಿದ್ದಾರೆ ಎಂದು AFP ವರದಿ ಮಾಡಿದೆ. ತೈವಾನ್ ಮತ್ತು ನೇಪಾಳ ನಂತರ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಏಷ್ಯಾದ ಮೂರನೇ ರಾಷ್ಟ್ರ ಥೈಲ್ಯಾಂಡ್ ಆಗಿದೆ. ಈ ಕ್ರಾಂತಿಕಾರಿ ಕಾನೂನು ಥೈಲ್ಯಾಂಡ್ನಲ್ಲಿ ಉನ್ನತ ಮಟ್ಟದ ಸಲಿಂಗಕಾಮಿ ದಂಪತಿಗಳ ವಿವಾಹದೊಂದಿಗೆ ಪ್ರಾರಂಭವಾಯಿತು. ಬ್ಯಾಂಕಾಕ್ನ ನೋಂದಾವಣೆ ಕಚೇರಿಯಲ್ಲಿ ಉನ್ನತ ಪ್ರೊಫೈಲ್ ದಂಪತಿಗಳಿಗೆ ಗುಲಾಬಿ ಬಣ್ಣದ ಗಡಿಯ ವಿವಾಹ ಪ್ರಮಾಣಪತ್ರಗಳನ್ನು ಹಸ್ತಾಂತರಿಸಲಾಯಿತು ಎಂದು ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ. “ನಾವು ಇದಕ್ಕಾಗಿ…
ಬೆಂಗಳೂರು, ಜನವರಿ 23: ಭಾರತವನ್ನು ಬ್ರಿಟೀಷರ ಆಳ್ವಿಕೆಯಿಂದ ಮುಕ್ತಗೊಳಿಸಿ, ಭಾರತೀಯರೆಲ್ಲರೂ ಬ್ರಿಟೀಷರ ಗುಲಾಮಗಿರಿಯಿಂದ ಸ್ವತಂತ್ರರಾಗಬೇಕೆನ್ನುವುದು ಎಂಬ ಹೆಗ್ಗುರಿಯಿಂದ ಹೋರಾಡಿದ ಸುಭಾಷ್ ಚಂದ್ರ ಬೋಸ್ ರವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅಪ್ರತಿಮ ದೇಶಭಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128 ನೇ ಜನ್ಮ ದಿನ. ದೇಶದ ಬಗ್ಗೆ ಅಪಾರ ಗೌರವಾಭಿಮಾನ ಹೊಂದಿದ್ದ ಮಹಾನ್ ದೇಶಭಕ್ತ. ಈಗಿನ ಐಎಎಸ್ ನಂತೆ ಬ್ರಿಟೀಷರ ಕಾಲದಲ್ಲಿದ್ದ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ ತಮ್ಮ ಉಜ್ವಲ ಭವಿಷ್ಯವನ್ನು ತ್ಯಾಗ ಮಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನು ಮೀಸಲಾಗಿಟ್ಟರು. ಎರಡು ಬಾರಿ ಕಾಂಗ್ರೆಸ್ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮಹಾತ್ಮಾ ಗಾಂಧಿಯವರು ಪ್ರತಿಪಾದಿಸುತ್ತಿದ್ದ ಸತ್ಯ ಹಾಗೂ ಅಹಿಂಸೆಯ ಮಾರ್ಗದಲ್ಲಿ ನಡೆದು ಭಾರತ ಸ್ವಾತಂತ್ರ್ಯ ಹೊಂದುವುದು…
BREAKING : ರಾಜ್ಯದಲ್ಲಿ ಹೆಚ್ಚಾಯ್ತು `ಮೈಕ್ರೋ ಫೈನಾನ್ಸ್’ ಕಾಟ : ಗ್ರಾಮವನ್ನೇ ತೊರೆದ 50 ಕ್ಕೂ ಹೆಚ್ಚು ಕುಟುಂಬಗಳು.!
ಮಡಿಕೇರಿ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಾಗಿದ್ದು, ಕೊಡಗು ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ಕುಟುಂಬಗಳು ರಾಜ್ಯವನ್ನೇ ತೊರೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಕುಶಾಲನಗರ ತಾಲೂಕಿನ ಮೀನುಕೊಲ್ಲಿ ಹಾಡಿಯಲ್ಲಿ ಮಹಿಳೆಯರು ಮರವೇರಿ ಕುಳಿತಿರುವ ಘಟನೆ ನಡೆದಿದೆ. ಹೌದು, ಸಿಬ್ಬಂದಿಗಳ ಕಾಟದಿಂದ ತಪ್ಪಿಸಿಕೊಳ್ಳು ಮಹಿಳೆಯರು ದಟ್ಟ ಅರಣ್ಯದಲ್ಲಿ ಪ್ರತಿನಿತ್ಯವೂ ಮರ ಏರಿ ಕುಳಿತುಕೊಳ್ಳುತ್ತಿದ್ದಾರೆ. ದಾಸವಾಳ ಪೈಸಾರಿ, ಬೆಳ್ಳಿ ಕಾಲೊನಿ ಈ ಭಾಗಗಳಲ್ಲಿಹಲವಾರು ಜನ ಕೂಲಿ ಕಾರ್ಮಿಕರಿದ್ದಾರೆ. ಇಲ್ಲಿನ ಕೆಲವು ನಿವಾಸಿಗಳು ನಾನಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಮರುಪಾವತಿಸಲು ಸಾಧ್ಯವಾಗದೆ ಊರು ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಮೈಕ್ರೋ ಫೈನಾನ್ಸ್ ಗಳಿಂದ ಸಾಲ ಪಡೆದ ಮಹಿಳೆಯರಿಗೆ ಮೈಕ್ರೋ ಫೈನ್ಸಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಮೀನುಕೊಲ್ಲಿ ಹಾಡಿಯ ಜನರು ಆರೋಪಿಸಿದ್ದಾರೆ. ಮನಸ್ಸೋ ಇಚ್ಚೇ ಬಡ್ಡಿ ವಿಧಿಸಿರುವುದರಿಂದ ಸಾಲ ಕಟ್ಟಲಾಗುತ್ತಿಲ್ಲ ಹೀಗಾಗಿ ಹಲವರು ಮನೆಗೆ ಬೀಗ ಹಾಕಿ ಬೇರೆ ರಾಜ್ಯಗಳಿಗೆ ಹೋಗಿದ್ದಾರೆ ಎಂದು ಅಲ್ಲಿನ ಜನರು ಆರೋಪಿಸಿದ್ದಾರೆ.











