Author: kannadanewsnow57

ಪ್ರಯಾಗ್‌ರಾಜ್‌ : ಸಂಪಾದಿಸುವ ಹೆಂಡತಿ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಹಿಳೆಯೊಬ್ಬರು ಸಂಪಾದಿಸುತ್ತಿದ್ದರೆ ಮತ್ತು ಆರ್ಥಿಕವಾಗಿ ತನ್ನನ್ನು ತಾನು ಪೋಷಿಸಿಕೊಳ್ಳಲು ಸಮರ್ಥರಾಗಿದ್ದರೆ, ಅವರು ತಮ್ಮ ಪತಿಯಿಂದ ಜೀವನಾಂಶವನ್ನು ಕೋರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯದ ಪ್ರಕಾರ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125(1)(ಎ) ಅಂತಹ ಪ್ರಕರಣಗಳಲ್ಲಿ ಜೀವನಾಂಶದ ಹಕ್ಕನ್ನು ನೀಡುವುದಿಲ್ಲ. ನ್ಯಾಯಮೂರ್ತಿ ಮದನ್ ಪಾಲ್ ಸಿಂಗ್ ಅವರ ಏಕ ಪೀಠವು ಈ ನಿರ್ಧಾರವನ್ನು ನೀಡಿದೆ. ನ್ಯಾಯಾಲಯವು ಪತಿಯ ಪರಿಶೀಲನಾ ಅರ್ಜಿಯನ್ನು ಅಂಗೀಕರಿಸಿತು, ಅಂಕಿತ್ ಸಹಾ ಮತ್ತು ನೋಯ್ಡಾ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು. ಕುಟುಂಬ ನ್ಯಾಯಾಲಯವು ಪತಿಗೆ ತನ್ನ ಹೆಂಡತಿಗೆ ಮಾಸಿಕ ಐದು ಸಾವಿರ ರೂಪಾಯಿಗಳನ್ನು ಜೀವನಾಂಶವಾಗಿ ಪಾವತಿಸಲು ನಿರ್ದೇಶಿಸಿತ್ತು, ಇದನ್ನು ಹೈಕೋರ್ಟ್ ಅಸಮಂಜಸವೆಂದು ಕಂಡುಕೊಂಡು ರದ್ದುಗೊಳಿಸಿತು. ಫೆಬ್ರವರಿ 17, 2024 ರಂದು ಕೌಟುಂಬಿಕ ನ್ಯಾಯಾಲಯವು ನೀಡಿದ ಆದೇಶವನ್ನು ಪ್ರಶ್ನಿಸಿ ಅಂಕಿತ್ ಸಹಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಸೆಕ್ಷನ್ 125 ರ ಅಡಿಯಲ್ಲಿ…

Read More

ಹಾಸನ : ಲಾರಿ ಡಿಕ್ಕಿಯಾಗಿ ಕೆಎಸ್ ಆರ್ ಟಿಸಿ ಚೆಕ್ಕಿಂಗ್ ಇನ್ಸ್ ಪೆಕ್ಟರ್ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯಾ ಬಳಿ ನಡೆದಿದೆ. ಪಾಳ್ಯಾ ಬಳಿ ಲಾರಿ ಡಿಕ್ಕಿಯಾಗಿ ಕೆಎಸ್ ಆರ್ ಟಿಸಿ ಚೆಕ್ಕಿಂಗ್ ಇನ್ಸ್ ಪೆಕ್ಟರ್ ಶಕುನಿಗೌಡ (57) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಕುನಿಗೌಡ ಹೆದ್ದಾರಿಯಲ್ಲಿ ಬಸ್ ತಡೆದು ಚೆಕ್ಕಿಂಗ್ ಮಾಡುವಾಗಲೇ ಲಾರಿ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ನಿಂದ ವೃದ್ಧರೊಬ್ಬರು ಬರೋಬ್ಬರಿ 1.32 ಕೋಟಿ ರೂ. ಕಳೆದುಕೊಂಡ ಘಟನೆ ನಡೆದಿದೆ. ಬೆಂಗಳೂರಿನ ಯಲಹಂಕ ನಿವಾಸಿ ವರದರಾಜನ್ (83) ಡಿಜಿಟಲ್ ಅರೆಸ್ಟ್ ಮಾಡಿ ವಂಚಕರು 1.32 ಕೋಟಿ ರೂ. ವಂಚಿಸಿದ್ದಾರೆ. ಆರ್ ಬಿಐ, ಮುಂಬೈ ಕ್ರೈಂ ಬ್ರ್ಯಾಂಚ್ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡಿದ್ದಾರೆ. ಮನಿಲಾಂಡರಿಂಗ್ ಆಗಿದೆ ಎಂದು ಹೆದರಿಸಿ 1.32 ಕೋಟಿ ರೂ. ಪಡೆದು ವೃದ್ಧರಿಗೆ ವಂಚಿಸಿದ್ದಾರೆ. ನವೆಂಬರ್ 19ರಿಂದ ಡಿಸೆಂಬರ್ 6ರವರೆಗೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಹಣ ಹಾಕಿಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಲಂಡನ್ ನಲ್ಲಿ ವೃದ್ಧ ವರದರಾಜನ್ ಇಬ್ಬರು ಮಕ್ಕಳು ನೆಲೆಸಿದ್ದಾರೆ. ವಂಚನೆ ಸಂಬಂಧ ವೃದ್ಧ ವರದರಾಜನ್ ಅವರು ಈಶಾನ್ಯ ವಿಭಾಗ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಾರ್ವಜನಿಕರೇ ಎಚ್ಚರ : ಈ ರೀತಿ ‘ಡಿಜಿಟಲ್ ಅರೆಸ್ಟ್’ ವಂಚನೆಗೆ ಬಲಿಯಾಗದಿರಿ.! ನೀವು ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧೆಡೆಗಳಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದರಿಂದಲೇ ಇಂದು ಡಿಜಿಟಲ್‌…

Read More

ಶಿವಮೊಗ್ಗ : ಶಿವಮೊಗ್ಗ, ಚಿಕ್ಕಮಗಳೂರು ಗಡಿ ಭಾಗದಲ್ಲಿ ಮಂಗನಕಾಯಿಲೆ ಭೀತಿ ಸೃಷ್ಟಿಯಾಗಿದ್ದು, ಕಮ್ಮರಡಗಿ ಗ್ರಾಮದ 40 ವರ್ಷದ ವ್ಯಕ್ತಿಗೆ ಮಂಗನಕಾಯಿಲೆ ದೃಢಪಟ್ಟಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಮ್ಮರಡಿ ಗ್ರಾಮದ 40 ವರ್ಷದ ವ್ಯಕ್ತಿಗೆ ಮಂಗನಕಾಯಿಲೆ ದೃಢಪಟ್ಟಿದ್ದು, ಸೋಂಕಿತ ವ್ಯಕ್ತಿಗೆ ಕಮ್ಮರಡಿ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

Read More

ಶಿವಮೊಗ್ಗ : ರಾಜ್ಯದಲ್ಲಿ ಮತ್ತೊಂದು ಡಬಲ್ ಮರ್ಡರ್ ನಡೆದಿದ್ದು, ಪ್ರೀತಿ ನಿರಾಕರಿಸಿದ್ದಕ್ಕೆ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜೈ ಭೀಮ್ ಬಡಾವಣೆಯಲ್ಲಿ ಪ್ರೇಮಿಗಳಿಗೆ ಸಹಕರಿಸಿದ ಇಬ್ಬರನ್ನ ಯುವತಿಯ ಸಹೋದರ ಹಾಗೂ ಹಾಗೂ ಆತನ ಸ್ನೇಹಿತರು ಹತ್ಯೆ ಮಾಡಿದ್ದಾರೆ. ಹತ್ಯೆಯಾದ ಯುವಕರನ್ನ ಕಿರಣ್ (25) ಮಂಜುನಾಥ್ (45) ಎಂದು ಗುರುತಿಸಲಾಗಿದೆ. ಮನೆ ಬಿಟ್ಟು ಬಂದ ಪ್ರೇಮಿಗಳು ಶುಕ್ರವಾರ ಸಂಜೆ ಹಳೆ ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಹುಡುಗನ ಸ್ನೇಹಿತರ ಮೇಲೆ ಯುವತಿಯ ಸಹೋದರ ಹಾಗೂ ಆತನ ಸ್ನೇಹಿತರು ದಾಳಿ ಮಾಡಿದ್ದಾರೆ. ಚಾಕುವಿನಿಂದ ಇರಿದು ಇಬ್ಬರನ್ನ ಹತ್ಯೆ ಮಾಡಿದ್ದಾರೆ. ಭದ್ರಾವತಿ ಹಳೆನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್, ವೆಂಕಟೇಶ್, ಸುರೇಶ್, ಮಂಜುನಾಥ್, ಭರತ್ ಸೇರಿ ಹಲವರನ್ನು ವಶಕ್ಕೆ ಪಡೆದಿದ್ದಾರೆ.

Read More

ಕೋಲ್ಕತ್ತಾ: ಡಿಸೆಂಬರ್ ತಿಂಗಳ ಚಳಿಯನ್ನು ಸಹಿಸದೆ ಸಾವಿರಾರು ಜನರು ಮಧ್ಯರಾತ್ರಿಯವರೆಗೂ ಕಾದು ಕುಳಿತಿದ್ದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ತಮ್ಮ ಮೂರು ದಿನಗಳ, ನಾಲ್ಕು ನಗರಗಳ GOAT ಇಂಡಿಯಾ ಟೂರ್ 2025 ಗಾಗಿ ಕೋಲ್ಕತ್ತಾಗೆ ಆಗಮಿಸಿದಾಗ ಅವರಿಗೆ ಅದ್ದೂರಿ ಸ್ವಾಗತ ಕೋರಿದರು. ಬಾರ್ಸಿಲೋನಾ ದಂತಕಥೆ ಶನಿವಾರ ಬೆಳಗಿನ ಜಾವ 2.26 ಕ್ಕೆ ಆಗಮಿಸಿದ್ದು ನಗರವನ್ನು ಉನ್ಮಾದಕ್ಕೆ ದೂಡಿತು. ಅಂತರರಾಷ್ಟ್ರೀಯ ಆಗಮನದ ಗೇಟ್ 4, ಘೋಷಣೆಗಳು, ಧ್ವಜಗಳು ಮತ್ತು ಮಿನುಗುವ ಫೋನ್‌ಗಳ ಸಮುದ್ರವಾಗಿ ಮಾರ್ಪಟ್ಟಿತು, ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯ ಕ್ಷಣಿಕ ನೋಟಕ್ಕಾಗಿ ಗೇಟ್‌ಗಳ ನಡುವೆ ಓಡುತ್ತಿದ್ದರು. ಮಕ್ಕಳು ಹೆಗಲ ಮೇಲೆ ಕುಳಿತಿದ್ದರು ಮತ್ತು ಮೆಸ್ಸಿಯನ್ನು ವಿಐಪಿ ಗೇಟ್ ಮೂಲಕ ಬೃಹತ್ ಭದ್ರತೆಯ ಅಡಿಯಲ್ಲಿ ಹೊರಗೆ ಕರೆದೊಯ್ಯುವಾಗ ಡ್ರಮ್‌ಗಳು ಉರುಳಿದವು. ನಂತರ ಭಾರೀ ಬೆಂಗಾವಲು ಪಡೆಯೊಂದು ಅವರನ್ನು ಅವರ ಹೋಟೆಲ್‌ಗೆ ಕರೆದೊಯ್ದಿತು, ಅಲ್ಲಿ ರಾತ್ರಿಯ ಆಳದಲ್ಲಿ ಮತ್ತೊಂದು ದೊಡ್ಡ ಜನಸಮೂಹ ಕಾಯುತ್ತಿತ್ತು. ಮೆಸ್ಸಿ ದೀರ್ಘಕಾಲದ ಸ್ಟ್ರೈಕ್ ಪಾಲುದಾರ ಲೂಯಿಸ್…

Read More

ಶಿವಮೊಗ್ಗ : ರಾಜ್ಯದಲ್ಲಿ ಮತ್ತೊಂದು ಡಬಲ್ ಮರ್ಡರ್ ನಡೆದಿದ್ದು, ಪ್ರೀತಿ ನಿರಾಕರಿಸಿದ್ದಕ್ಕೆ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜೈ ಭೀಮ್ ಬಡಾವಣೆಯಲ್ಲಿ ಪ್ರೇಮಿಗಳಿಗೆ ಸಹಕರಿಸಿದ ಇಬ್ಬರನ್ನ ಯುವತಿಯ ಸಹೋದರ ಹಾಗೂ ಹಾಗೂ ಆತನ ಸ್ನೇಹಿತರು ಹತ್ಯೆ ಮಾಡಿದ್ದಾರೆ. ಹತ್ಯೆಯಾದ ಯುವಕರನ್ನ ಕಿರಣ್ (25) ಮಂಜುನಾಥ್ (45) ಎಂದು ಗುರುತಿಸಲಾಗಿದೆ. ಮನೆ ಬಿಟ್ಟು ಬಂದ ಪ್ರೇಮಿಗಳು ಶುಕ್ರವಾರ ಸಂಜೆ ಹಳೆ ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಹುಡುಗನ ಸ್ನೇಹಿತರ ಮೇಲೆ ಯುವತಿಯ ಸಹೋದರ ಹಾಗೂ ಆತನ ಸ್ನೇಹಿತರು ದಾಳಿ ಮಾಡಿದ್ದಾರೆ. ಚಾಕುವಿನಿಂದ ಇರಿದು ಇಬ್ಬರನ್ನ ಹತ್ಯೆ ಮಾಡಿದ್ದಾರೆ. ಭದ್ರಾವತಿ ಹಳೆನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್, ವೆಂಕಟೇಶ್, ಸುರೇಶ್, ಮಂಜುನಾಥ್, ಭರತ್ ಸೇರಿ ಹಲವರನ್ನು ವಶಕ್ಕೆ ಪಡೆದಿದ್ದಾರೆ.

Read More

ಬೆಳಗಾವಿ : ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳು ದುರುಪಯೋಗವಾಗುತ್ತಿದ್ದು, ಸುಮಾರು 24.55 ಲಕ್ಷ ಅನುಮಾನಾಸ್ಪದ ವ್ಯಕ್ತಿಗಳು ಫಲಾನುಭವಿಗಳಾಗಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿಯ ಡಾ. ಭರತ್ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಪಿಎಲ್‌ ಕಾರ್ಡ್‌ ಪಡೆಯಲು ವಾರ್ಷಿಕ ಆದಾಯ ಮಿತಿ 32,000 ರು. ನಿಗದಿಗೊಳಿಸಲಾಗಿದೆ. ನಿಖರ ಆದಾಯ ಅಂದಾಜು ಮಾಡುವುದೇ ಸವಾಲಾಗಿದೆ. ಉದಾಹರಣೆಗೆ ಗೃಹ ಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿಗೆ ವಾರ್ಷಿಕ 24 ಸಾವಿರ ರು. ಹೋಗುತ್ತದೆ. ಬೇರೆ ಸವಲತ್ತೂ ಸಿಗುತ್ತಿದೆ. ಕೆಳ ಹಂತ ಅಧಿಕಾರಿಗಳು ಕುಳಿತಲ್ಲೇ ತಮಗೆ ತೋಚಿದಷ್ಟು ಆದಾಯ ನಿಗದಿಪಡಿಸಿ ಆದಾಯ ಪ್ರಮಾಣ ಪತ್ರ ನೀಡುತ್ತಿದ್ದಾರೆ ಎಂದು ಹೇಳಿದರು. ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳ ಆಧಾರ್ ಜೋಡಣೆ ಸಂದರ್ಭದಲ್ಲಿ ನಿಗದಿಪಡಿಸಿದ ವಯೋಮಿತಿಗೂ ಕಡಿಮೆ ವಯಸ್ಸಿನವರು ಸೌಲಭ್ಯ ಪಡೆಯುತ್ತಿದ್ದಾರೆ. ಆಧಾರ್ ಕಾರ್ಡ್‌ ಪ್ರಕಾರ 60 ವರ್ಷ ಆಗಿರುವುದಿಲ್ಲ. ಸುಳ್ಳು ದಾಖಲೆ ಕೊಟ್ಟು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಸಾಮಾಜಿಕ ಭದ್ರತಾ ಪಿಂಚಣಿ…

Read More

ನವದೆಹಲಿ : ಡ್ಯಾನಿಶ್ ಔಷಧ ಕಂಪನಿ ನೊವೊ ನಾರ್ಡಿಸ್ಕ್ ಅಂತಿಮವಾಗಿ ತನ್ನ ಜನಪ್ರಿಯ ಮಧುಮೇಹ ಔಷಧ ಓಜೆಂಪಿಕ್’ನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, 0.25 ಮಿಗ್ರಾಂ ಆರಂಭಿಕ ಡೋಸ್‌’ನ ಬೆಲೆಯನ್ನು ವಾರಕ್ಕೆ ₹2,200ಕ್ಕೆ ನಿಗದಿಪಡಿಸಿದೆ. ರಾಯಿಟರ್ಸ್ ವರದಿಯ ಪ್ರಕಾರ, ಕಂಪನಿಯು ದೇಶದಲ್ಲಿ 0.25 ಮಿಗ್ರಾಂ, 0.5 ಮಿಗ್ರಾಂ ಮತ್ತು 1 ಮಿಗ್ರಾಂ ಸಾಮರ್ಥ್ಯದಲ್ಲಿ ಚುಚ್ಚುಮದ್ದಿನ ಔಷಧವನ್ನು ಮಾರಾಟ ಮಾಡಲಿದೆ. ಗಮನಾರ್ಹವಾಗಿ, ಓಝೆಂಪಿಕ್ ಟೈಪ್ 2 ಮಧುಮೇಹಕ್ಕೆ ಚುಚ್ಚುಮದ್ದಿನ ಔಷಧವಾಗಿದ್ದು, ವಾರಕ್ಕೊಮ್ಮೆ ತೆಗೆದುಕೊಳ್ಳಬೇಕು. ಭಾರತದಲ್ಲಿ ಓಝೆಂಪಿಕ್ ಬೆಲೆ.! ಟೈಪ್ 2 ಮಧುಮೇಹ ಹೊಂದಿರುವ ಜನರಿಗೆ 2017ರಲ್ಲಿ ಯುಎಸ್ ಆಹಾರ ಮತ್ತು ಔಷಧ ಆಡಳಿತವು ವಾರದ ಇಂಜೆಕ್ಷನ್ ಅನ್ನು ಅನುಮೋದಿಸಿತು. ಅಂದಿನಿಂದ, ಇದು ಜಾಗತಿಕವಾಗಿ ಹೆಚ್ಚು ಮಾರಾಟವಾದ ಔಷಧವಾಗಿದೆ ಮತ್ತು ಅದರ ಹಸಿವು ಕಡಿಮೆ ಮಾಡುವ ಪರಿಣಾಮಗಳಿಂದಾಗಿ ತೂಕ ನಷ್ಟಕ್ಕೆ ಹೆಚ್ಚಾಗಿ ಲೇಬಲ್‌ನಿಂದ ಹೊರಗೆ ಬಳಸಲಾಗುತ್ತದೆ. ಔಷಧದ ಕಡಿಮೆ ಪ್ರಮಾಣವನ್ನು ವಾರಕ್ಕೆ ₹2,200 ಬೆಲೆಗೆ ಮಾರಾಟ ಮಾಡಲಾಗುತ್ತದೆ. ರಾಯಿಟರ್ಸ್ ವರದಿಯ ಪ್ರಕಾರ ಕಂಪನಿಯು ಇತರ ಡೋಸ್‌ಗಳ…

Read More

ಕೋಲಾರ : ಕೋಲಾರ, ಬೀದರ್ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬಾಂಬ್ ಬೆದರಿಕೆ ಹಾಕಿದ್ದು 13 ವರ್ಷದ ಬಾಲಕಿ ಎಂದು ತಿಳಿದುಬಂದಿದೆ. ಲೈಂಗಿಕ ದೌರ್ಜನ್ಯದಿಂದ ನೊಂದ 13 ವರ್ಷದ ಬಾಲಕಿ ಅಧಿಕಾರಿಗಳ ಗಮನ ಸೆಳೆಯಲ್ಲಿ ಈ ಬಾಂಬ್ ಬೆದರಿಕೆ ಹಾಕಿರುವುದಾಗಿ ತಿಳಿದುಬಂದಿದೆ. ಲೈಂಗಿಕ ದೌರ್ಜನ್ಯದಿಂದ ನೊಂದ 13 ವರ್ಷದ ಬಾಲಕಿ ತಮಿಳುನಾಡಿನಿಂದ ಇ-ಮೇಲ್ ಮಾಡಿ ಕೋಲಾರ, ಬೀದರ್ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಹಾಕಿದ್ದಾಳೆ ಎಂದು ವರದಿಯಾಗಿದೆ. ನನ್ನ ಹೆಸರು ಆರ್ನಾ ಅಶ್ವಿನ್‌ ಶೇಖರ್‌ (13). ಚೆನ್ನೈನ ಮೈಲಾಪುರ. ಬೀದರ್‌ ಮತ್ತು ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಐದು ಆರ್‌ಡಿಎಕ್ಸ್‌ ಐಇಡಿಗಳನ್ನು ಇಡಲಾಗಿದೆ. ಮಧ್ಯಾಹ್ನ ಎರಡು ಗಂಟೆಯೊಳಗೆ ಜಿಲ್ಲಾಧಿಕಾರಿ ಹಾಗೂ ಅಲ್ಲಿನ ಸಿಬ್ಬಂದಿಯನ್ನು ತೆರವುಗೊಳಿಸಬೇಕು ಎಂದು ಇಮೇಲ್‌ ಮಾಡಿದ್ದಳು.

Read More