Author: kannadanewsnow57

ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೆಚ್ಚಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ. ಆಸ್ಪತ್ರೆಗೆ ಕಾಲಿಟ್ಟರೆ ಸಾಕು ಸಾವಿರಾರು ರೂಪಾಯಿ ಹಾಗೂ ಲಕ್ಷಾಂತರ ರೂಪಾಯಿ ಹಣ ಖರ್ಚಾಗುವ ಪರಿಸ್ಥಿತಿ ಇದೆ. ಹೀಗಾಗಿ ಮಧ್ಯಮ ಮತ್ತು ಸಾಮಾನ್ಯ ವರ್ಗದ ಜನರಿಗೆ ಯಾವುದಾದರೂ ಗಂಭೀರ ಕಾಯಿಲೆ ಬಂದರೆ ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ. ಇಂತಹ ಸಮಯದಲ್ಲಿ ಆರ್ಥಿಕ ನಷ್ಟದಿಂದ ಪಾರಾಗಲು ಆರೋಗ್ಯ ವಿಮೆ (Health Insurance) ಅತ್ಯಂತ ಅತ್ಯಗತ್ಯವಾಗಿದೆ. ಆದರೆ, ನಮಗೆಲ್ಲರಿಗೂ ಸಾಮಾನ್ಯವಾಗಿ ಒಂದು ಅನುಮಾನ ಕಾಡುತ್ತಿರುತ್ತದೆ. ಜ್ವರ, ನೆಗಡಿ, ಶೀತದಂತಹ ಸಣ್ಣಪುಟ್ಟ ಕಾಯಿಲೆಗಳಿಗೆ ಆರೋಗ್ಯ ವಿಮೆ ಅನ್ವಯಿಸುತ್ತದೆಯೇ? ಇದಕ್ಕೆ ಉತ್ತರ ಇಲ್ಲಿದೆ. ಜ್ವರ, ಶೀತಕ್ಕೆ ಹೆಲ್ತ್ ಇನ್ಶೂರೆನ್ಸ್ ಸಿಗುತ್ತಾ? ಸಾಮಾನ್ಯವಾಗಿ ಜ್ವರ ಅಥವಾ ಶೀತ ಬಂದಾಗ ಯಾರೂ ಆಸ್ಪತ್ರೆಗೆ ದಾಖಲಾಗುವುದಿಲ್ಲ (Admit ಆಗುವುದಿಲ್ಲ). ಕೇವಲ ವೈದ್ಯರನ್ನು ಭೇಟಿಯಾಗಿ, ಅವರು ಬರೆದುಕೊಟ್ಟ ಮಾತ್ರೆಗಳನ್ನು ಪಡೆದು ಮನೆಗೆ ಮರಳುತ್ತೇವೆ. ಆದರೆ ನೀವು ತೆಗೆದುಕೊಳ್ಳುವ ಸಾಮಾನ್ಯ ಆರೋಗ್ಯ ವಿಮೆಯಲ್ಲಿ (Basic Health Insurance) ಈ ರೀತಿಯ ವೆಚ್ಚಗಳು ಕವರ್ ಆಗುವುದಿಲ್ಲ. ಏಕೆಂದರೆ ಪ್ರಾಥಮಿಕ…

Read More

ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬದ ಆಚರಣೆಯ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಧಕ್ಕೆ ಬರದಂತೆ ಸಾರ್ವಜನಿಕರು ಸಹಕರಿಸಬೇಕು ಎಂದು ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್. ಬಸವರಾಜ ಅವರು ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲಾ ವ್ಯಾಪ್ತಿಯ ತಾಲ್ಲೂಕು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮೊಹರಂ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಲಾಗುತ್ತದೆ. ಆದರೆ, ಈ ಹಬ್ಬದ ಪ್ರಯುಕ್ತ ರಾತ್ರಿ ಸಮಯದಲ್ಲಿ ನಡೆಸಲಾಗುವ ‘ಆಲಾಯಿ ಕುಣಿತ’ ಮತ್ತು ‘ಬೆಂಕಿ ಹಾಕುವ’ ಕಾರ್ಯಕ್ರಮಗಳಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಸಿರು ಮರಗಳನ್ನು ಕಡಿದು ಕುಣಿಗೆ ಹಾಕುವ ಪರಿಪಾಠವಿದೆ. ಇದರಿಂದಾಗಿ ಪರಿಸರ ಸಂರಕ್ಷಣೆಗೆ ಭಾರಿ ಧಕ್ಕೆ ಉಂಟಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬಿಸಿಲಿನ ಧಗೆ ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಮರ-ಗಿಡಗಳನ್ನು ಕಟಾವು ಮಾಡುವುದು ಸಾರ್ವಜನಿಕ ಹಿತದೃಷ್ಟಿಯಿಂದ ಒಳಿತಲ್ಲ. ಹಸಿರು ಮರಗಳನ್ನು ಕಡಿಯುವುದು ಕರ್ನಾಟಕ ಅರಣ್ಯ ಕಾಯ್ದೆ ಮತ್ತು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಪ್ರಕರಣಗಳು ಕಂಡುಬAದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನಾತ್ಮಕ…

Read More

ನೀವು ನಿಮ್ಮ ಬೈಕ್ ಅಥವಾ ಕಾರುಗಳಿಗೆ ಕಂಪನಿ ನೀಡಿದ ಸೈಲೆನ್ಸರ್ಗಳನ್ನು ಬದಲಾಯಿಸಿ, ಅತಿಯಾದ ಶಬ್ದ ಮಾಡುವ ‘ಮಾಡಿಫೈಡ್ ಸೈಲೆನ್ಸರ್’ (Modified Silencers) ಅಳವಡಿಸಿದ್ದೀರಾ? ಅಥವಾ ರಾತ್ರಿ ವೇಳೆ ಎದುರಿಗೆ ಬರುವ ವಾಹನ ಸವಾರರ ಕಣ್ಣು ಕೋರೈಸುವಂತಹ ತೀವ್ರತೆಯ ‘ಹೈ-ಬೀಮ್ ಲೈಟ್’ಗಳನ್ನು (High-Beam Lights) ಬಳಸುತ್ತಿದ್ದೀರಾ? ಹಾಗಿದ್ದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ಮೋಟಾರು ವಾಹನ ಕಾಯ್ದೆಯ ನಿಯಮಗಳ ಪ್ರಕಾರ, ಇಂತಹ ನಿಯಮ ಉಲ್ಲಂಘನೆಗಾಗಿ ನೀವು ಬರೋಬ್ಬರಿ 10,000 ರೂಪಾಯಿಗಳವರೆಗೆ ದಂಡ ತೆರಬೇಕಾಗಬಹುದು ಮತ್ತು ನಿಮ್ಮ ಚಾಲನಾ ಪರವಾನಗಿಯನ್ನು (Driving Licence) ಸಹ ಕಳೆದುಕೊಳ್ಳಬೇಕಾಗಬಹುದು. ಇತ್ತೀಚಿನ ದಿನಗಳಲ್ಲಿ ಯುವಕರು ತಮ್ಮ ಬೈಕ್ಗಳಿಗೆ, ವಿಶೇಷವಾಗಿ ರಾಯಲ್ ಎನ್ಫೀಲ್ಡ್ನಂತಹ ಬುಲೆಟ್ ವಾಹನಗಳಿಗೆ ಕರ್ಕಶ ಶಬ್ದ ಹೊರಡಿಸುವ ಸೈಲೆನ್ಸರ್ಗಳನ್ನು ಅಳವಡಿಸುವುದು ಹೆಚ್ಚಾಗುತ್ತಿದೆ. ಇದು ತೀವ್ರವಾದ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದು, ವೃದ್ಧರು, ರೋಗಿಗಳು ಹಾಗೂ ಆಸ್ಪತ್ರೆಯ ಸುತ್ತಮುತ್ತಲಿನ ಜನರಿಗೆ ದೊಡ್ಡ ಕಿರಿಕಿರಿಯಾಗಿದೆ. ಅದೇ ರೀತಿ, ವಾಹನಗಳಿಗೆ ಅತಿಯಾದ ಪ್ರಕಾಶಮಾನವಾದ ಎಲ್ಇಡಿ (LED) ಅಥವಾ ಹೈ-ಬೀಮ್ ಲೈಟ್ಗಳನ್ನು ಅಳವಡಿಸುವುದರಿಂದ ರಾತ್ರಿ ವೇಳೆ ಎದುರಿನಿಂದ…

Read More

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಯುಜಿಸಿ ನೆಟ್ (UGC NET 2026) ಜೂನ್ ಪರೀಕ್ಷೆಯ ಪ್ರವೇಶ ಪತ್ರಗಳನ್ನು (Admit Card) ಇಂದು ತನ್ನ ಅಧಿಕೃತ ವೆಬ್‌ಸೈಟ್‌ ಆದ ugcnet.nta.nic.in ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ತಮ್ಮ ಲಾಗಿನ್ ವಿವರಗಳನ್ನು ನಮೂದಿಸುವ ಮೂಲಕ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಪರೀಕ್ಷಾ ವೇಳಾಪಟ್ಟಿ ಮತ್ತು ವಿವರಗಳು: ಯುಜಿಸಿ ನೆಟ್ ಜೂನ್ 2026ರ ಪರೀಕ್ಷೆಗಳು ಜೂನ್ 22 ರಿಂದ ಜೂನ್ 30 ರವರೆಗೆ ದೇಶಾದ್ಯಂತ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನಡೆಯಲಿವೆ. ಪ್ರತಿದಿನ ಎರಡು ಶಿಫ್ಟ್‌ಗಳಲ್ಲಿ ಪರೀಕ್ಷೆ ಆಯೋಜಿಸಲಾಗಿದೆ: ಮೊದಲ ಶಿಫ್ಟ್: ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:00 ರವರೆಗೆ ಎರಡನೇ ಶಿಫ್ಟ್: ಮಧ್ಯಾಹ್ನ 3:00 ರಿಂದ ಸಂಜೆ 6:00 ರವರೆಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ? ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ugcnet.nta.nic.in ಮುಖಪುಟದಲ್ಲಿ ಕಾಣಿಸುವ ‘UGC NET Admit Card 2026’ ಲಿಂಕ್…

Read More

ತೆಲಂಗಾಣದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯಲ್ಲಿ ಭೀಕರ ಆಹಾರ ವಿಷಪೂರಿತ (ಫುಡ್ ಪಾಯ್ಸನಿಂಗ್) ಘಟನೆಯೊಂದು ಬೆಳಕಿಗೆ ಬಂದಿದೆ. ರಸ್ತೆ ಬದಿಯ ಗಾಡಿಯಲ್ಲಿ ಪಾನಿಪೂರಿ ತಿಂದ ಸುಮಾರು 20ಕ್ಕೂ ಹೆಚ್ಚು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಜಿಲ್ಲೆಯ ಮುಸ್ತಬಾದ್ ಮಂಡಲದ ಗೂಡೆಮ್ ಗ್ರಾಮದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಗ್ರಾಮಕ್ಕೆ ಬಂದಿದ್ದ ಪಾನಿಪೂರಿ ಬಂಡಿಯ ಬಳಿ ಸ್ಥಳೀಯ ಮಕ್ಕಳು ಸಾಯಂಕಾಲ ಪಾನಿಪೂರಿ ತಿಂದಿದ್ದಾರೆ. ಆದರೆ, ಪಾನಿಪೂರಿ ತಿಂದ ಕೆಲವೇ ಗಂಟೆಗಳಲ್ಲಿ ಮಕ್ಕಳಿಗೆ ತೀವ್ರ ಹೊಟ್ಟೆನೋವು, ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದೆ. ಒಂದೇ ಬಾರಿಗೆ ಹಲವು ಮಕ್ಕಳು ಅಸ್ವಸ್ಥರಾಗಿದ್ದರಿಂದ ಪೋಷಕರು ಗಾಬರಿಗೊಂಡಿದ್ದಾರೆ. ಅಸ್ವಸ್ಥರಾದ ಎಲ್ಲಾ ಮಕ್ಕಳನ್ನು ತಕ್ಷಣವೇ ಮುಸ್ತಬಾದ್‌ ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಕ್ಕಳಿಗೆ ವೈದ್ಯರು ತುರ್ತು ಚಿಕಿತ್ಸೆ ನೀಡುತ್ತಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಪಾನಿಪೂರಿ ತಯಾರಿಕೆಯಲ್ಲಿ ಕಲುಷಿತ ನೀರು ಅಥವಾ ಹಳಸಿದ ಆಹಾರ ಪದಾರ್ಥಗಳನ್ನು ಬಳಸಿರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಈ ಘಟನೆಯಿಂದಾಗಿ ಗ್ರಾಮಸ್ಥರು…

Read More

ಶಾಜಾಪುರ (ಮಧ್ಯಪ್ರದೇಶ): ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಸಣ್ಣ ನಿರ್ಲಕ್ಷ್ಯ ಅಥವಾ ತಾಂತ್ರಿಕ ದೋಷ ಎಷ್ಟು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಮಧ್ಯಪ್ರದೇಶದ ಶಾಜಾಪುರದಲ್ಲಿ ನಡೆದ ಘಟನೆಯೇ ಸಾಕ್ಷಿ. ಇಲ್ಲಿನ ಲಕ್ಷ್ಮಿ ನಗರ ಪ್ರದೇಶದಲ್ಲಿರುವ ಸರ್ಕಾರಿ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ನ ಅಡುಗೆ ಮನೆಯಲ್ಲಿ ಪ್ರೆಶರ್ ಕುಕ್ಕರ್ ಬಾಂಬ್ನಂತೆ ಭೀಕರವಾಗಿ ಸ್ಫೋಟಗೊಂಡಿದ್ದು, ಮಹಿಳಾ ಅಡುಗೆ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಇಡೀ ಭೀಕರ ದೃಶ್ಯ ಅಲ್ಲಿನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ನಡೆದಿದ್ದು ಹೇಗೆ? ಹಾಸ್ಟೆಲ್ನಲ್ಲಿ ಎಂದಿನಂತೆ ವಿದ್ಯಾರ್ಥಿಗಳಿಗೆ ಅಡುಗೆ ಸಿದ್ಧಪಡಿಸಲಾಗುತ್ತಿತ್ತು. ಗಾಯಗೊಂಡ ಮಹಿಳಾ ಸಿಬ್ಬಂದಿ ರಾಮಕನ್ಯಾ ಬಾಯಿ ಅವರು ಗ್ಯಾಸ್ ಒಲೆಯ ಒಂದು ಬರ್ನರ್ ಮೇಲೆ ಕಡಾಯಿಯನ್ನಿಟ್ಟು, ಮತ್ತೊಂದು ಬರ್ನರ್ ಮೇಲಿದ್ದ ಪ್ರೆಶರ್ ಕುಕ್ಕರ್ ಅನ್ನು ಮುಟ್ಟಲು ಮುಂದಾಗಿದ್ದಾರೆ. ಅದೇ ಕ್ಷಣದಲ್ಲಿ ಕುಕ್ಕರ್ ಭೀಕರ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಕುಕ್ಕರ್ನ ಮುಚ್ಚಳವು ಗಾಳಿಯಲ್ಲಿ ಹಾರಿ ಬಂದು ನೇರವಾಗಿ ಮಹಿಳೆಯ ಎದೆಗೆ ಬಡಿದಿದೆ.…

Read More

ಹದಿಹರೆಯದ ಹೆಣ್ಣುಮಕ್ಕಳಲ್ಲಿ ಕಂಡುಬರುತ್ತಿರುವ ಅಪೌಷ್ಟಿಕತೆ, ರಕ್ತಹೀನತೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಜಿಲ್ಲೆಯ ಎಲ್ಲಾ ವಸತಿಯುಕ್ತ ಶಾಲೆ, ಕಾಲೇಜು ಹಾಗೂ ಹಾಸ್ಟೆಲ್ಗಳಲ್ಲಿರುವ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಕಡ್ಡಾಯವಾಗಿ ವೈದ್ಯಕೀಯ ಆರೋಗ್ಯ ತಪಾಸಣೆ ನಡೆಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಸೂಚಿಸಿದ್ದಾರೆ. ಸಂಬAಧಪಟ್ಟ ವೈದ್ಯಾಧಿಕಾರಿಗಳು, ಆರ್.ಬಿ.ಎಸ್.ಕೆ ವೈದ್ಯರು ಹಾಗೂ ನಮ್ಮ ಕ್ಲಿನಿಕ್ ವೈದ್ಯರು ಈ ತಪಾಸಣೆಯನ್ನು ನಿಯಮಿತವಾಗಿ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ. ಹದಿಹರೆಯದವರ ಆರೋಗ್ಯದ ಮೇಲೆ ವಿಶೇಷ ನಿಗಾ 10 ರಿಂದ 19 ವರ್ಷದ ಹದಿಹರೆಯದ ಪ್ರಾಯದಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ವೇಗವಾಗಿ ಇರುತ್ತದೆ. ಈ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆ, ಲೈಂಗಿಕ ಆರೋಗ್ಯ, ಪೌಷ್ಟಿಕಾಂಶದ ಅಗತ್ಯತೆಗಳು ಹಾಗೂ ಭಾವನಾತ್ಮಕ ಸಮಸ್ಯೆಗಳ ಬಗ್ಗೆ ವಿಶೇಷ ಗಮನ ಹರಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ. ವೈದ್ಯಾಧಿಕಾರಿಗಳು ತಪಾಸಣೆ ವೇಳೆ ಪ್ರಮುಖ ಅಂಶಗಳ ಕಡೆಗೆ ಗಮನ ಹರಿಸಬೇಕು. ದೇಹದ ತೂಕ, ಎತ್ತರ ಪರಿಶೀಲನೆ, ಪೋಷಕಾಂಶಗಳ ಕೊರತೆ…

Read More

ಮುಂಬೈ: ನೀವು ಇನ್‌ಸ್ಟಾಗ್ರಾಮ್ ಬಳಸುವವರಾಗಿದ್ದರೆ ‘ಒರ್ರಿ’ (Orry) ಹೆಸರನ್ನು ಖಂಡಿತಾ ಕೇಳಿರುತ್ತೀರಿ. ಸೆಲೆಬ್ರಿಟಿಗಳ ಪಾರ್ಟಿ, ಸ್ಟಾರ್‌ಗಳ ಜೊತೆ ವಿದೇಶಿ ಪ್ರವಾಸ ಹೀಗೆ ಬಾಲಿವುಡ್‌ನ ಪ್ರತಿಯೊಂದು ಅದ್ಧೂರಿ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳುವ ಓರ್ಹಾನ್ ಅವಟ್ರಾಮಣಿ (Orry), ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದಾರೆ. ಯಾವುದೇ ಸಾಂಪ್ರದಾಯಿಕ 9 ರಿಂದ 5 ರ ಕೆಲಸವಿಲ್ಲದಿದ್ದರೂ, ಲಿಂಕ್ಡ್‌ಇನ್ ಪ್ರೊಫೈಲ್ ಇಲ್ಲದಿದ್ದರೂ ಒರ್ರಿ ಇಷ್ಟೊಂದು ಐಷಾರಾಮಿ ಜೀವನವನ್ನು ಹೇಗೆ ನಡೆಸುತ್ತಾರೆ? ಅವರಿಗೆ ಹಣ ಎಲ್ಲಿಂದ ಬರುತ್ತದೆ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಇದೀಗ ಕಾವ್ಯ ಕರ್ನಾಟಕ್ ಅವರ ‘ಲರ್ನ್ ಬೈ ಕೆಕೆ ಕ್ರಿಯೇಟ್’ ಪಾಡ್‌ಕಾಸ್ಟ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಒರ್ರಿ, ತಮ್ಮ ಆದಾಯದ ಮೂಲಗಳ ಬಗ್ಗೆ ಶಾಕಿಂಗ್ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಒಂದೇ ರೀಲ್‌ನಿಂದ ₹76 ಲಕ್ಷ ಸಂಪಾದನೆ! ತಮ್ಮ ಆದಾಯದ ಬಗ್ಗೆ ಮಾತನಾಡಿದ ಒರ್ರಿ, ಬ್ರ್ಯಾಂಡ್ ಕೊಲಾಬರೇಷನ್ ಹಾಗೂ ಪಾವತಿ ಕಾರ್ಯಕ್ರಮಗಳ ಮೂಲಕವೇ ತಾವು ಹೆಚ್ಚು ಗಳಿಸುವುದಾಗಿ ಹೇಳಿದ್ದಾರೆ. “ಕಳೆದ ತಿಂಗಳು ನಾನು ಕೇವಲ ಒಂದೇ ಒಂದು ರೀಲ್ಸ್ ಮತ್ತು…

Read More

ಬೆಂಗಳೂರು : ನೀವು ಭಾರತ ಗ್ಯಾಸ್ (Bharat Gas) ಗ್ರಾಹಕರಾಗಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಅತ್ಯಂತ ಪ್ರಮುಖ ಹಾಗೂ ಗಡುವಿನ ಮಾಹಿತಿಯಿದೆ. ಭಾರತ ಪೆಟ್ರೋಲಿಯಂ ಸಂಸ್ಥೆಯು ತನ್ನ ಎಲ್ಲಾ ಗ್ರಾಹಕರಿಗೆ ಬಯೋಮೆಟ್ರಿಕ್ ಅಥೆಂಟಿಕೇಶನ್ ಆಧಾರಿತ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಿದೆ. ಯಾವ ಗ್ರಾಹಕರು 30 ಜೂನ್ 2026 ರ ಒಳಗಾಗಿ ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಿಲ್ಲವೋ, ಅಂತಹವರ ಗ್ಯಾಸ್ ಸಬ್ಸಿಡಿಯನ್ನು ತಡೆಹಿಡಿಯಲಾಗುವುದು ಮತ್ತು ಗ್ಯಾಸ್ ಕನೆಕ್ಷನ್ ಪಡೆಯುವಲ್ಲಿ ತೊಂದರೆಯಾಗಬಹುದು ಎಂದು ಕಂಪನಿ ಎಚ್ಚರಿಕೆ ನೀಡಿದೆ. ಆದರೆ ಸಮಾಧಾನಕರ ವಿಷಯವೆಂದರೆ, ಈ ಕೆಲಸಕ್ಕಾಗಿ ನೀವು ಗ್ಯಾಸ್ ಏಜೆನ್ಸಿಗೆ ಅಲೆಯಬೇಕಾದ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಮೂಲಕ ಕೇವಲ ಕೆಲವೇ ನಿಮಿಷಗಳಲ್ಲಿ ಇದನ್ನು ಪೂರ್ಣಗೊಳಿಸಬಹುದು. ಅದಕ್ಕೆ ಸರಳವಾದ ವಿಧಾನ ಇಲ್ಲಿದೆ. ಇ-ಕೆವೈಸಿ ಏಕೆ ಕಡ್ಡಾಯ? ಪ್ರಸ್ತುತ ಸರ್ಕಾರ ಮತ್ತು ತೈಲ ಮಾರಾಟ ಕಂಪನಿಗಳು ಡಿಜಿಟಲ್ ವೆರಿಫಿಕೇಶನ್ಗೆ ಹೆಚ್ಚಿನ ಒತ್ತು ನೀಡುತ್ತಿವೆ. ಎಲ್ಪಿಜಿ ಗ್ರಾಹಕರಿಗೆ ಬಯೋಮೆಟ್ರಿಕ್ ಇ-ಕೆವೈಸಿ ಕಡ್ಡಾಯಗೊಳಿಸುವುದರ ಮುಖ್ಯ ಉದ್ದೇಶ ನಕಲಿ ಅಥವಾ…

Read More

ನವದೆಹಲಿ : ದೆಹಲಿಯ ವಿವೇಕ್ ವಿಹಾರ್ ಪ್ರದೇಶದ ವಸತಿ ಸಂಕೀರ್ಣವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ದುರಂತಕ್ಕೆ ಎಸಿ ಘಟಕದಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಬೇಸಿಗೆಯ ಬಿಸಿಲು ಹೆಚ್ಚಾದಂತೆ ಎಸಿ ಸ್ಫೋಟ ಮತ್ತು ಬೆಂಕಿ ಅವಘಡಗಳ ಸುದ್ದಿಗಳು ಹೆಚ್ಚಾಗುತ್ತಿವೆ. ತಜ್ಞರ ಪ್ರಕಾರ, ಇಂತಹ ಘಟನೆಗಳು ಆಕಸ್ಮಿಕವಲ್ಲ. ಬದಲಾಗಿ, ಯಂತ್ರಗಳ ಮೇಲಿನ ವಿಪರೀತ ಒತ್ತಡ, ಕಳಪೆ ನಿರ್ವಹಣೆ ಮತ್ತು ಅಸುರಕ್ಷಿತ ವಿದ್ಯುತ್ ಸಂಪರ್ಕಗಳೇ ಇಂತಹ ದುರಂತಗಳಿಗೆ ಪ್ರಮುಖ ಕಾರಣಗಳಾಗಿವೆ. ಎಸಿ ಸ್ಫೋಟಕ್ಕೆ ಅಥವಾ ಬೆಂಕಿಗೆ ಕಾರಣಗಳೇನು? ಕಂಪ್ರೆಸರ್ ಓವರ್ಹೀಟಿಂಗ್ (Compressor Overheating): ನಿರಂತರವಾಗಿ ಎಸಿ ಚಾಲನೆಯಲ್ಲಿದ್ದರೆ ಕಂಪ್ರೆಸರ್ ಬಿಸಿಯಾಗುತ್ತದೆ. ಕಂಡೆನ್ಸರ್ ಕಾಯಿಲ್ಗಳಲ್ಲಿ ಧೂಳು ತುಂಬಿಕೊಂಡಿದ್ದರೆ, ಸಿಸ್ಟಮ್ ಹೆಚ್ಚು ಶ್ರಮವಹಿಸಬೇಕಾಗುತ್ತದೆ, ಇದು ಯಾಂತ್ರಿಕ ವೈಫಲ್ಯಕ್ಕೆ ದಾರಿಯಾಗುತ್ತದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಬೇಸಿಗೆಯಲ್ಲಿ ಎಸಿ ಬಳಕೆಯಿಂದ ವೈರಿಂಗ್ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಕಳಪೆ ಗುಣಮಟ್ಟದ ವೈರ್ಗಳು ಅಥವಾ ಎಕ್ಸ್ಟೆನ್ಶನ್ ಬೋರ್ಡ್ಗಳನ್ನು ಬಳಸುವುದರಿಂದ ವೈರ್ಗಳು…

Read More