Author: kannadanewsnow57

ನವದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರ ಇಂದು ಕೇಂದ್ರ ಸರ್ಕಾರದ ಬಜೆಟ್ ಮಂಡಿಸಲಿದ್ದಾರೆ. ಈ ಮೂಲಕ ಅವರು ಸತತವಾಗಿ 9 ನೇ ಬಾರಿ ಬಜೆಟ್ ಮಂಡಿಸಿದ ದಾಖಲೆ ನಿರ್ಮಿಸಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ೊಪ್ಪಿಗೆ ಪಡೆದಿದ್ದಾರೆ. ಅವರು ಇಂದು ಬೆಳಿಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ಅನ್ನು ಮಂಡಿಸಲಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಭಾನುವಾರ ಮಂಡಿಸಲಾಗುತ್ತಿರುವ ಈವರೆಗಿನ 2ನೇ ಬಜೆಟ್ ಇದಾಗಿದೆ. ಈ ಹಿಂದೆ 1999ರಲ್ಲಿ ಭಾನುವಾರ ಬಜೆಟ್ ಮಂಡನೆ ಆಗಿತ್ತು. ಆಗ ದಿನಾಂಕ ಫೆ.28 ಆಗಿತ್ತು ಹಾಗೂ ಯಶವಂತ ಸಿನ್ಹಾ ಹಣಕಾಸು ಸಚಿವರಾಗಿ ದ್ದರು. ಆದರೆ ನಂತರ ಫೆ.1ಕ್ಕೆ ಬಜೆಟ್ ದಿನಾಂಕ ಬದಲಾಗಿತ್ತು. ಫೆ.1ಕ್ಕೆ ಬಜೆಟ್ ದಿನಾಂಕ ಬದ ಲಾದ ನಂತರ ಭಾನುವಾರ ಬಜೆಟ್…

Read More

ಭರತ ಹುಣ್ಣುಮೆ ಪ್ರಯುಕ್ತ ಜಗನ್ಮಾತೆ ಶ್ರೀ ರೇಣುಕ ಎಲ್ಲಮ್ಮ ದೇವಿಯು ಎಲ್ಲ ಭಕ್ತರ ಮಾತೆಯಾಗಿ ಎಲ್ಲರಿಗೆ ಅಮ್ಮನಾಗಿರುವದರಿಂದ “ಎಲ್ಲರ ಅಮ್ಮ ಯಲ್ಲಮ್ಮ” ಅಂತಾ ರೂಢನಾಮದೊಂದಿಗೆ ಪ್ರಖ್ಯಾತಳಾಗಿ ದಕ್ಷಿಣ ಭಾರತದ ಪ್ರಮುಖ ಶಕ್ತಿ ಕೇಂದ್ರವಾಗಿ ಭಕ್ತರ ಆರಾಧ್ಯ ದೇವತೆಯಾಗಿ ಭಕ್ತರ ಕಾಮಧೇನುವಾಗಿ ಇಷ್ಟಾರ್ಥ ಸಿದ್ಧಿಗಳನ್ನು ನೀಡುವ ಕರುಣಾಮಯಿ ತಾಯಿಯಾಗಿರುತ್ತಾಳೆ. ಇತಿಹಾಸ ಕಾಮಧೇನುವಿನ ವೈಶಿಷ್ಟ್ಯ ನೋಡಿ ಅದನ್ನು ಪಡೆಯುವ ದುರಾಸೆಯಿಂದ ಮಹಿಸ್ಪತಿ ನಗರದ ಅರಸು ಕಾರ್ತವೀರ್ಯಾರ್ಜುನ ರಾಜನು ಶ್ರೀ ಜಮದಗ್ನಿ ಋಷಿಗಳ ಮೇಲೆ ೨೧ ಸಲ ಘೋರವಾದ ಹೊಡೆತದ ಕೊಟ್ಟು ಹತ್ಯೆ ಮಾಡಿ ಕಾಮಧೇನು ಪಡೆಯಲು ಹೋದಾಗ ಅದು ಮಾಯವಾಗಿ ಬಿಡುತ್ತವೆ. ಕಾರ್ತವೀರ್ಯಾರ್ಜುನನು ಬರಿಗೈಯಿಂದ ಹಿಂತಿರುಗುತ್ತಾನೆ. ಶ್ರೀ ಜಮದಗ್ನಿ ಋಷಿಗಳ ಮಗನಾದ ರಾಮಭದ್ರನು ಮಾತೃಹತ್ಯೆ ವಿಮೋಚನೆಯಿಂದ ಮುಕ್ತನಾಗಿ ಶಿವನಿಂದ ಪರಶು ಅಸ್ತ್ರವನ್ನು ಪಡೆದು ಪರಶುರಾಮನೆಂದು ಖ್ಯಾತಿಹೊಂದಿ, ಶ್ರೀ ಪಾರ್ವತಿಯನ್ನು ಒಲಿಸಿಕೊಂಡು ಅಂಬಿಕಾಸ್ತ್ರವನ್ನು ಪಡೆದು ಪರಮ ಪರಾಕ್ರಮಿ ಎಂದೆನಿಸಿಕೊಳ್ಳುತ್ತಾನೆ. ಶ್ರೀ ಜಮದಗ್ನಿ ಋಷಿಯ ಆಶ್ರಮದಲ್ಲೆಲ್ಲಾ ಸ್ಮಶಾನ ಮೌನ ಆವರಿಸಿ ರೇಣುಕಾ ದೇವಿಯು ಜಮದಗ್ನಿ ಋಷಿಯ ಮೇಲೆ…

Read More

ಬೆಂಗಳೂರು : ಸ್ವಂತ ಟ್ರ್ಯಾಕ್ಟರ್ ಕೊಳ್ಳುವ ಕನಸು ಕಂಡ ರೈತರಿಗೆ ಸಿಹಿಸುದ್ದಿ, ಕೇಂದ್ರ ಸರ್ಕಾರವು ಟ್ರ್ಯಾಕ್ಟರ್ ಖರೀದಿಗೆ ಸಹಾಯ ಮಾಡುತ್ತದೆ. ಟ್ರ್ಯಾಕ್ಟರ್ ಖರೀದಿಸುವುದಕ್ಕೆ ಶೇಕಡ 50ರಷ್ಟು ಸಬ್ಸಿಡಿ ನೀಡುತ್ತಿದೆ. ಅಂದರೆ 10 ಲಕ್ಷ ರೂ. ಟ್ರ್ಯಾಕ್ಟರ್ ನಿಮಗೆ ಕೇವಲ 5 ಲಕ್ಷ ರೂ.ಗೆ ಸಿಗುತ್ತದೆ. ಹೌದು, ಕೃಷಿಯು ಭಾರತದಲ್ಲಿ ಯಾವಾಗಲೂ ಪ್ರಮುಖ ಆರ್ಥಿಕ ವಲಯವಾಗಿದ್ದು, ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಭೂಮಿಯನ್ನು ಅವಲಂಬಿಸಿರುವ ಶ್ರೀಮಂತರು ಮತ್ತು ಬಡವರು ಇಬ್ಬರನ್ನೂ ಬೆಂಬಲಿಸುತ್ತದೆ. ಆದಾಗ್ಯೂ, ಹೆಚ್ಚಿನ ಸಂದರ್ಭಗಳಲ್ಲಿ, ಸಾಂಪ್ರದಾಯಿಕ ಕೃಷಿ ಪದ್ಧತಿಗಳು ರೈತರು ಗರಿಷ್ಠ ಇಳುವರಿಯನ್ನು ಸಾಧಿಸುವುದನ್ನು ತಡೆಯುತ್ತವೆ ಮತ್ತು ಅವರ ಕೈಯಿಂದ ಮಾಡುವ ಶ್ರಮವನ್ನು ಹೆಚ್ಚಿಸುತ್ತವೆ. ಈ ಸಮಸ್ಯೆಯನ್ನು ಪರಿಹರಿಸಲು, ಭಾರತ ಸರ್ಕಾರವು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ, ಕೈಗೆಟುಕುವ ಬೆಲೆಯಲ್ಲಿ ಮತ್ತು ಸುಲಭ ಲಭ್ಯತೆಯಲ್ಲಿ ಆಧುನಿಕ ಕೃಷಿ ಉಪಕರಣಗಳನ್ನು ಒದಗಿಸುವ ಕ್ರಾಂತಿಕಾರಿ ಕಾರ್ಯಕ್ರಮವಾದ ಕಿಸಾನ್ ಟ್ರ್ಯಾಕ್ಟರ್ ಯೋಜನೆಯನ್ನು ಪ್ರಾರಂಭಿಸಿತು. ಟ್ರ್ಯಾಕ್ಟರ್ ಖರೀದಿಗಳ ಮೇಲೆ ಗಣನೀಯ ಸಬ್ಸಿಡಿಗಳನ್ನು ಒದಗಿಸುವ ಈ ಯೋಜನೆಯು ರೈತರನ್ನು…

Read More

ನವದೆಹಲಿ : ಇಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೂ ಮುನ್ನ ಸರ್ಕಾರವು ಗ್ರಾಹಕರಿಗೆ ಶಾಕ್ ನೀಡಿದ್ದು, ಸರ್ಕಾರವು LPG ಸಿಲಿಂಡರ್ಗಳ ಬೆಲೆಯನ್ನು ₹50 ರಷ್ಟು ಹೆಚ್ಚಿಸಿದೆ. ಸರ್ಕಾರವು 19 ಕೆಜಿ LPG ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸಿದೆ. LPG ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳದ ನಂತರ, ದೆಹಲಿಯಲ್ಲಿ 19 ಕೆಜಿ LPG ಸಿಲಿಂಡರ್ನ ಬೆಲೆ ಈಗ ₹1740.50 ಆಗಿದೆ. ಅದೇ ರೀತಿ, ಕೋಲ್ಕತ್ತಾದಲ್ಲಿ ಇದರ ಬೆಲೆ ₹1844.50 ಆಗಿದೆ. ಮುಂಬೈನಲ್ಲಿ, ಇದು ಈಗ ₹1692.00 ಗೆ ಲಭ್ಯವಿರುತ್ತದೆ, ಆದರೆ ಹಿಂದೆ ಇದು ₹1642.50 ಗೆ ಲಭ್ಯವಿತ್ತು. ಚೆನ್ನೈನಲ್ಲಿ, ಬೆಲೆ ₹1899.50 ಆಗಿದೆ. ಸರ್ಕಾರವು ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು ₹50 ರಷ್ಟು ಹೆಚ್ಚಿಸಿದೆ. ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಮನೆಗಳಲ್ಲಿ ಬಳಸುವ 14.2 ಕೆಜಿ ಎಲ್ಪಿಜಿ ಸಿಲಿಂಡರ್ನ ಬೆಲೆ ಬದಲಾಗದೆ ಉಳಿದಿದೆ. ಇದನ್ನು ಕೊನೆಯದಾಗಿ ಏಪ್ರಿಲ್ 8, 2025 ರಂದು ಪರಿಷ್ಕರಿಸಲಾಯಿತು. ದೆಹಲಿಯಲ್ಲಿ ಇದರ ಪ್ರಸ್ತುತ ಬೆಲೆ ₹853. 14…

Read More

ವಿಜಯನಗರ : ವಿಜಯನಗರದಲ್ಲಿ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೊಲೆಯ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಆರೋಪಿ ಅಕ್ಷಯ್ ತನ್ನ ತಂಗಿ ಮದುವೆಯಾಗದಿದ್ದರೂ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದು ಇಡೀ ಕುಟುಂಬವನ್ನೇ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಹೌದು, ತನ್ನ ತಂಗಿ ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು, ಇದಕ್ಕೆ ತಂದೆ-ತಾಯಿಯೂ ಬೆಂಬಲ ನೀಡಿದ್ದರು. ಅಮೃತ ಮದುವೆಯಾಗದೇ ಗರ್ಭಿಣಿಯಾಗಿದ್ದಳು, ಹೀಗಾಗಿ ತಂಗಿಯ ಗರ್ಭಪಾತಕ್ಕೆ ಅಕ್ಷಯ್ ಮುಂದಾಗಿದ್ದ, ಆದರೆ ತಂದೆ-ತಾಯಿ ಇದಕ್ಕೆ ಒಪ್ಪಿರಲ್ಲ. ಜೊತೆಗೆ ತಂಗಿ ಪ್ರೀತಿಸುತ್ತಿದ್ದ ಯುವಕನನ್ನು ಕರೆಸಿ ಎಚ್ಚರಿಕೆ ನೀಡಿದ್ದ. ಮರ್ಯಾದೆ ಹೊಯ್ತು ಎಂದು ತಂದೆ, ತಾಯಿ, ತಂಗಿಯನ್ನು ಕೊಲೆ ಮಾಡಿ ಮನೆಯಲ್ಲೇ ಶವಗಳನ್ನು ಹೂತು ಹಾಕಿದ್ದಾನೆ. ಮೊದಲು ತಾಯಿಯನ್ನು ಪಾಪಿ ಪುತ್ರ ಅಕ್ಷಯ್ ಕೊಲೆ ಮಾಡಿದ್ದಾನೆ. ಚಾಕುವಿನಿಂದ ಇರಿದು ತಾಯಿ ಜಯಲಕ್ಷ್ಮಿಯನ್ನು ಪುತ್ರ ಅಕ್ಷಯ್ ಕೊಲೆ ಮಾಡಿದ್ದಾನೆ. ಬಳಿಕ ಮನೆಯ ಕೊಠಡಿಯಲ್ಲಿ ತಾಯಿಯ ಶವವನ್ನು ಹಾಕಿದ್ದಾನೆ . ನಂತರ ತಂಗಿಗೆ ಕರೆ ಮಾಡಿ ಮನೆಗೆ ಕರೆದು ಚಾಕು ಇರಿದು ಕೊಲೆ ಮಾಡಿದ್ದಾನೆ. ನಿನಗೆ ಗಿಫ್ಟ್…

Read More

ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, 65 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಬಳಿಕ ವ್ಯಕ್ತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಂಗಳೂರಿನ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯನ್ನು ಅತ್ಯಾಚಾರವೆಸಗಿ, ಬಳಿಕ ನೇಣು ಬಿಗಿದುಕೊಂಡು ಆರೋಪಿ ದೇವರಾಜು (50) ಆತ್ಮಹತ್ಯೆಗೆ ಶರಣಾಗಿದ್ದಾನೆ. ದೇವರಾಜು ಮನೆಗೆಲಸ ಮಾಡುತ್ತಿದ್ದ 65 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಬೆಂಗಳೂರು : ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 2,846 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ.  ವಿಧಾನಪರಿಷತ್ ನಲ್ಲಿ ಬಿಜೆಪಿಯ ನಿರಾಣಿ ಹಣಮಂತ್ ರುದ್ರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಳೆ ನಷ್ಟ, ಪ್ರಕೃತಿ ವಿಕೋಪ, ಸಾಲಬಾಧೆ, ಆರ್ಥಿಕ ಸಂಕಷ್ಟ, ಸಾಮಾಜಿಕ, ಕೌಟುಂಬಿಕ ಕಾರಣಗಳಿಂದಾಗಿ 2023ರ ಮೇ ನಿಂದ 2025ರ ಡಿಸೆಂಬರ್ ವರೆಗೆ ಒಟ್ಟು 2,846 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. 2024-25 ರಲ್ಲಿ ಹಾವೇರಿ 133,ಬೆಳಗಾವಿ 88, ಬೀದರ್ 70, ಧಾರವಾಡ 57, ಮೈಸೂರು 68, ಕಲಬುರಗಿ 85, ಮಂಡ್ಯ ಮತ್ತು ಶಿವಮೊಗ್ಗ ತಲಾ 51, ವಿಜಯಪುರ 49 ಸೇರಿ 1,178 ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಈ ಪೈಕಿ 1,022 ಪ್ರಕರಣ ಅರ್ಹ ಎಂದು ಪರಿಗಣಿಸಿದೆ.2025-26ನೇ ಸಾಲಲ್ಲಿ ಡಿಸೆಂಬರ್31ರ ವೇಳೆಗೆ 414 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು 331 ಪ್ರಕರಣಗಳನ್ನು ಪರಿಹಾರಕ್ಕೆ ಅರ್ಹ ಪ್ರಕರಣವೆಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ. ಉಪ ವಿಭಾಗಾಧಿಕಾರಿಗಳ ಸಮಿತಿಯಲ್ಲಿ ತೀರ್ಮಾನಿಸಿ…

Read More

ನವದೆಹಲಿ : ಸಾರ್ವಜನಿಕ ಸ್ಥಳದಲ್ಲಿ ಅವಮಾನಿಸುವ ಉದ್ದೇಶವಿಲ್ಲದೆ ಕೇವಲ ಜಾತಿಯನ್ನು ಉಲ್ಲೇಖಿಸುವುದು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಛತ್ತೀಸ್ ಗಢ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪಿನಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಉದ್ದೇಶಪೂರ್ವಕವಾಗಿ ಅವಮಾನಿಸುವ ಅಥವಾ ಅವಮಾನಿಸುವ ಉದ್ದೇಶದಿಂದ ಕೃತ್ಯ ಎಸಗಲಾಗಿದೆ ಎಂದು ಸಾಬೀತಾಗದ ಹೊರತು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ವ್ಯಕ್ತಿಯ ಜಾತಿಯನ್ನು ಉಲ್ಲೇಖಿಸುವುದು ಅಪರಾಧವಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಕರಣದ ಹಿನ್ನೆಲೆ 16 ವರ್ಷಗಳ ಹಳೆಯ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿ, ಸೆಷನ್ಸ್ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ರದ್ದುಗೊಳಿಸಿತು. ನ್ಯಾಯಮೂರ್ತಿ ರಜನಿ ದುಬೆ ತೀರ್ಪು ನೀಡಿದರು. ಸೆಪ್ಟೆಂಬರ್ 3, 2008 ರಂದು, ಪಥಾರಿಯಾದಲ್ಲಿರುವ ಛತ್ತೀಸ್‌ಗಢ ರಾಜ್ಯ ವಿದ್ಯುತ್ ಮಂಡಳಿಯ ಉಪಕೇಂದ್ರದ ಕಿರಿಯ ಎಂಜಿನಿಯರ್ ಉತ್ತರ ಕುಮಾರ್ ಧೃತಲಹರೆ, ಆರೋಪಿ ಮನೋಜ್ ಪಾಂಡೆ ದುರ್ಗಾ ಪೂಜೆಗೆ ₹1,000 ದೇಣಿಗೆ ನಿರಾಕರಿಸಿದಾಗ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಪೊಲೀಸ್…

Read More

ರಾಯಚೂರು: ಇಲ್ಲಿನ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ರಾಯಚೂರು, ಎನ್ಹೆಚ್ಎಐ ಪ್ರಾದೇಶಿಕ ಕಚೇರಿ ಬೆಂಗಳೂರು ಹಾಗೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟಿçÃಯ ರಸ್ತೆ ಸುರಕ್ಷತಾ ಮಾಸ-2026ರ ಅಂಗವಾಗಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿನೂತನ ಜಾಗೃತಿ ಅಭಿಯಾನ ನಡೆಯಿತು. ಈ ಕಾರ್ಯಕ್ರಮದ ಭಾಗವಾಗಿ ಜನವರಿ 31ರಂದು ಶನಿವಾರ ದಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಯಚೂರಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಹೆಲ್ಮೆಟ್ಗಳನ್ನು ವಿತರಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಕಾರ್ಯಕ್ರಮದಲ್ಲಿ ಐಎಸ್ಐ ಗುರುತಿನ ಹೆಲ್ಮೆಟ್ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಪಾಲಿಸಬೇಕು ಮತ್ತು ಹೆಲ್ಮೆಟ್ ಧರಿಸುವ ಮಹತ್ವ ಅರಿಯಬೇಕು. ನ್ಯಾಷನಲ್ ಹೈವೇ ಕಡೆಯಿಂದ ನಮ್ಮ ಜಿಲ್ಲೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಹೆಲ್ಮೆಟ್ ಉಚಿತವಾಗಿ ನೀಡಲಾಗುತ್ತಿದ್ದು, ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕೆಂದರು. ಹೆಲ್ಮೆಟ್ ಧರಿಸದೇ ತಲೆಗೆ ಪೆಟ್ಟು ಬಿದ್ದು ಜೀವ…

Read More

ಬಳ್ಳಾರಿ : ರಸ್ತೆ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವ ಮೂಲಕ ವಾಹನ ಚಾಲನೆ ಮಾಡುವವರೇ ನಿಜವಾದ ಹೀರೋಗಳಾಗುತ್ತಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಜಿ ಶಾಂತಿ ಅವರು ಹೇಳಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್ ನ ಹೊಸ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 37 ನೇ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದಿನನಿತ್ಯ ಬಳಸುವ ರಸ್ತೆಯಲ್ಲಿ ಪ್ರತಿಯೊಬ್ಬರ ಜೀವನ ಅಡಗಿದ್ದು, ಜಾಗರೂಕರಾಗಿ ವಾಹನ ಚಲಾಯಿಸಬೇಕು. ರಸ್ತೆ ನಿಯಮ ಉಲ್ಲಂಘಿಸಿ, ಸಿಗ್ನಲ್ ಜಂಪ್ ಮಾಡಿ ಪೊಲೀಸರ ಕಣ್ಣು ತಪ್ಪಿಸಿ ಚಲಾಯಿಸುವುದು ಸಾಹಸವಲ್ಲ; ಬದಲಾಗಿ ನಿಯಮ ಪಾಲಿಸಿ ವಾಹನ ಚಲಾಯಿಸಿದರೆ ಮಾತ್ರ ಸುರಕ್ಷಿತರಾಗಿ ಮನೆಗೆ ಸೇರಬಹುದು ಎಂದರು. 18 ವರ್ಷದೊಳಗಿನ ಮಕ್ಕಳಿಗೆ…

Read More