Subscribe to Updates
Get the latest creative news from FooBar about art, design and business.
Author: kannadanewsnow57
ಬೆಳಗಾವಿ : ರಾಜ್ಯದಲ್ಲಿ ಖಾಸಗಿ ಫೈನಾನ್ಸ್ ಕಂಪನಿಗಳ ಕಿರುಕುಳ ಮುಂದುವರೆದಿದ್ದು, ಬೆಳಗಾವಿಯಲ್ಲಿ ಫೈನಾನ್ಸ್ ಕಂಪನಿ ಕಿರುಕುಳಕ್ಕೆ ಕುಟುಂಬವೊಂದು ಬೀದಿಗೆ ಬಿದ್ದಿದೆ. ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಕಂಪನಿ ಮನೆಯನ್ನು ಜಪ್ತಿ ಮಾಡಿದೆ. ಹೀಗಾಗಿ 3 ತಿಂಗಳ ಹಸುಗೂಸು ಸಮೇತ ಬೀದಿಗೆ ಬಿದ್ದಿದೆ. ಸಾಲ ಕಟ್ಟಿಲ್ಲವೆಂದು ಫೈನಾನ್ಸ್ ಸಿಬ್ಬಂದಿ ಮನೆಯನ್ನು ಸೀಜ್ ಮಾಡಿದ್ದಾರೆ. ರಾಯಭಾಗ ತಾಲೂಕಿನ ಅಲಕನೂರ ಗ್ರಾಮದಲ್ಲಿ ಫೈನಾನ್ಸ್ ಕಂಪನಿ ಸಿಬ್ಬಂದಿಗಳು ಮನೆ ಸೀಜ್ ಮಾಡಿದ ಹಿನ್ನೆಲೆಯಲ್ಲಿ ಕುಟುಂಬ ಬೀದಿಗೆ ಬಿದ್ದಿದೆ. ಮನೆ ಸಾಮಾಗ್ರಿಯನ್ನೂ ತೆಗೆದುಕೊಳ್ಳಲು ಬಿಡದೇ ಸಿಬ್ಬಂದಿ ದರ್ಪ ಮೆರೆದಿದ್ದಾರೆ. ಸೀಸಾದ 7 ಲಕ್ಷ ರೂ. ಸಾಲ ಬಾಕಿ ಇತ್ತು, ಕಂತು ಕಟ್ಟಿಲ್ಲ ಎಂದು ಮನೆ ಸೀಜ್ ಮಾಡಲಾಗಿದೆ. ಹಣ ಕಟ್ತೀವಿ ಸಮಯಾವಕಾಶ ಕೊಡಿ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಪ್ರತಿಯೊಬ್ಬರ ಮನೆಯಲ್ಲೂ ವಿದ್ಯುತ್ ಮೀಟರ್ ಇರುವುದು ಸಾಮಾನ್ಯ. ತಿಂಗಳಿಗೊಮ್ಮೆ ಬಿಲ್ ತೆಗೆಯಲು ಲೈನ್ಮನ್ ಬಂದಾಗ ಮಾತ್ರ ನಾವು ಅದನ್ನು ಗಮನಿಸುತ್ತೇವೆ. ಆದರೆ, ಅದರಲ್ಲಿ ಸತತವಾಗಿ ಮಿನುಗುವ (Blink) ಆ ಸಣ್ಣ ‘ಕೆಂಪು ಲೈಟ್’ (Meter Red Light) ನಮ್ಮ ಮನೆಯ ವಿದ್ಯುತ್ ಬಳಕೆಯ ಬಗ್ಗೆ ಅನೇಕ ರಹಸ್ಯಗಳನ್ನು ಹೇಳುತ್ತದೆ. ಇದನ್ನು ಸರಿಯಾಗಿ ಅರ್ಥಮಾಡಿಕೊಂಡರೆ ವಿದ್ಯುತ್ ಬಿಲ್ ಕಡಿಮೆ ಮಾಡುವುದಲ್ಲದೆ, ದೊಡ್ಡ ಅಪಾಯಗಳಿಂದಲೂ ಪಾರಾಗಬಹುದು. ಏನಿದು ‘ಇಂಪಲ್ಸ್ ಇಂಡಿಕೇಟರ್’? ಡಿಜಿಟಲ್ ಮೀಟರ್ನಲ್ಲಿ ಕಾಣಿಸುವ ಈ ಕೆಂಪು ಲೈಟ್ ನಾವು ಎಷ್ಟು ಕರೆಂಟ್ ಬಳಸುತ್ತಿದ್ದೇವೆ ಎಂಬುದನ್ನು ಪ್ರತಿ ಕ್ಷಣವೂ ಲೆಕ್ಕ ಹಾಕುತ್ತದೆ. ತಾಂತ್ರಿಕ ಭಾಷೆಯಲ್ಲಿ ಇದನ್ನು ‘ಇಂಪಲ್ಸ್ ಇಂಡಿಕೇಟರ್’ (Impulse Indicator) ಎನ್ನಲಾಗುತ್ತದೆ. ಮೀಟರ್ ಮೇಲ್ಭಾಗದಲ್ಲಿ ನೀವು 1600 imp/kWh ಅಥವಾ 3200 imp/kWh ಎಂಬ ಸಂಖ್ಯೆಗಳನ್ನು ಗಮನಿಸಬಹುದು. ಇದರರ್ಥ ಆ ಲೈಟ್ 3200 ಬಾರಿ ಬ್ಲಿಂಕ್ ಆದರೆ ನೀವು ಒಂದು ಯೂನಿಟ್ ಕರೆಂಟ್ ಬಳಸಿದ್ದೀರಿ ಎಂದರ್ಥ. ಒಂದು ವೇಳೆ 1600 ಎಂದಿದ್ದರೆ, ಪ್ರತಿ…
ಬೆಂಗಳೂರು: ಬಾನಂಗಳದಲ್ಲಿ ಈ ಬಾರಿ ಹೋಳಿ ಹಬ್ಬದ ಸಂಭ್ರಮದ ನಡುವೆಯೇ ಅಪರೂಪದ ಖಗೋಳ ವಿದ್ಯಮಾನವೊಂದು ಜರುಗಲಿದೆ. ಮಾರ್ಚ್ 3ರಂದು ‘ರಕ್ತ ಚಂದ್ರಗ್ರಹಣ’ (Blood Moon) ಸಂಭವಿಸಲಿದ್ದು, ಚಂದಿರ ಕೆಂಬಣ್ಣದಲ್ಲಿ ಕಂಗೊಳಿಸಲಿದ್ದಾನೆ. ಪಾಲ್ಗುಣ ಮಾಸದ ಹುಣ್ಣಿಮೆಯ ದಿನದಂದೇ ಈ ಗ್ರಹಣ ಸಂಭವಿಸುತ್ತಿರುವುದು ವಿಶೇಷ. ಭಾರತದಾದ್ಯಂತ ಈ ದೃಶ್ಯ ಗೋಚರಿಸಲಿದ್ದು, ಕರ್ನಾಟಕದ ಜನರಿಗೂ ಸುಮಾರು 25 ನಿಮಿಷಗಳ ಕಾಲ ಈ ಕೆಂಪು ಚಂದಿರನನ್ನು ನೋಡುವ ಅವಕಾಶ ಸಿಗಲಿದೆ. ಗ್ರಹಣದ ಸಮಯ ಎಷ್ಟು? ಭಾರತೀಯ ಕಾಲಮಾನದ ಪ್ರಕಾರ ಮಾರ್ಚ್ 3ರಂದು ಗ್ರಹಣದ ಪ್ರಕ್ರಿಯೆ ಹೀಗಿರಲಿದೆ: ಗ್ರಹಣ ಆರಂಭ: ಮಧ್ಯಾಹ್ನ 3:20ಕ್ಕೆ ಗ್ರಹಣ ಅಂತ್ಯ: ಸಂಜೆ 6:47ಕ್ಕೆ ಕರ್ನಾಟಕದಲ್ಲಿ ಗೋಚರತೆ: ಸರಿಸುಮಾರು 25 ನಿಮಿಷಗಳ ಕಾಲ ಗ್ರಹಣದ ಪ್ರಭಾವ ದೃಶ್ಯಮಾನವಾಗಲಿದೆ. ಗ್ರಹಣದ ಅವಧಿಯಲ್ಲಿ ಪಾಲಿಸಬೇಕಾದ ನಿಯಮಗಳು ಗ್ರಹಣದ ಸಮಯವನ್ನು ‘ಸೂತಕ ಕಾಲ’ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಧಾರ್ಮಿಕ ನಂಬಿಕೆಗಳ ಪ್ರಕಾರ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಉತ್ತಮ ಎನ್ನಲಾಗುತ್ತದೆ. ಏನು ಮಾಡಬೇಕು? ಶುದ್ಧೀಕರಣ: ಗ್ರಹಣ ಆರಂಭಕ್ಕೆ ಮೊದಲು…
ಗುರುವಾರದ ದಿನದಂದು ರಾಘವೇಂದ್ರ ಸ್ವಾಮಿಗಳನ್ನು ನಾವು ಪೂಜಿಸುವುದರ ಜೊತೆಗೆ ಅವರ ಆಶೀರ್ವಾದವನ್ನು ಪಡೆದುಕೊಳ್ಳುವ ಸಲುವಾಗಿ ಮಂತ್ರಗಳನ್ನು, ಸ್ತೋತ್ರಗಳನ್ನು ಕೂಡ ಪಠಿಸುತ್ತೇವೆ. ಗುರುವಾರದ ದಿನದಂದು ನಾವು ಪಠಿಸಬೇಕಾದ ಉತ್ತಮ ಮಂತ್ರ ಅಥವಾ ಸ್ತೋತ್ರಗಳಲ್ಲಿ ಶ್ರೀರಾಘವೇಂದ್ರ ಕವಚ ಕೂಡ ಒಂದಾಗಿದೆ. ಗುರುವಾರದ ದಿನದಂದು ಶ್ರೀರಾಘವೇಂದ್ರ ಕವಚವನ್ನು ಪಠಿಸುವುದರಿಂದ ವ್ಯಕ್ತಿಯು ತನ್ನೆಲ್ಲಾ ಕಷ್ಟಗಳಿಂದ ಪರಿಹಾರವನ್ನು ಕಂಡುಕೊಳ್ಳುತ್ತಾನೆ. ಗುರುವಾರ ದಿನದಂದು ತಪ್ಪದೇ ಪಠಿಸಿ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ಕವಚಂ ಶ್ರೀ ರಾಘವೇಂದ್ರಸ್ಯ ಯತೀಂದ್ರಸ್ಯ ಮಹಾತ್ಮನ ವಕ್ಷ್ಯಾಮಿ ಗುರುವರಸ್ಯ ವಾಂಚಿತಾರ್ಥ ಪ್ರದಾಯಕಂ|| ಋಷಿರಸ್ಯ ಅಪ್ಪಣ್ಣಾಚಾರ್ಯ ಚಾಂದೂನುಷ್ಟುಪ್ ಪ್ರಕೀರ್ತಿತಮ್ ದೇವತಾ ಶ್ರೀ…
ಧರ್ಮಸ್ಥಳ : ಮಾರ್ಚ್ 3ರಂದು ಸಂಭವಿಸಲಿರುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಂದು ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈ ಕುರಿತು ಧರ್ಮಸ್ಥಳದ ಆಡಳಿತ ಮಂಡಳಿಯು ಪ್ರಕಟಣೆ ಹೊರಡಿಸಿದ್ದು, ಭಕ್ತಾದಿಗಳು ಸಹಕರಿಸುವಂತೆ ಕೋರಿದೆ. ದರ್ಶನದ ಸಮಯದ ವಿವರ: ದಿನಾಂಕ: 03-03-2026, ಮಂಗಳವಾರ. ಬೆಳಗಿನ ಅವಧಿ: ಅಂದು ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ಮಧ್ಯಾಹ್ನದ ನಂತರ: ಗ್ರಹಣದ ಕಾರಣದಿಂದ ಮಧ್ಯಾಹ್ನ 1.30 ರಿಂದ ಸಂಜೆಯವರೆಗೆ ದರ್ಶನ ಸ್ಥಗಿತಗೊಳ್ಳಲಿದೆ. ರಾತ್ರಿಯ ಅವಧಿ: ರಾತ್ರಿ 7.30 ಗಂಟೆಯ ನಂತರ ಎಂದಿನಂತೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ದೂರದ ಊರುಗಳಿಂದ ಬರುವ ಭಕ್ತಾದಿಗಳು ಈ ಬದಲಾದ ಸಮಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರವಾಸವನ್ನು ಯೋಜಿಸಬೇಕೆಂದು ಕ್ಷೇತ್ರವು ವಿನಂತಿಸಿದೆ.
ಇಂದಿನ ದಿನಗಳಲ್ಲಿ ಪ್ರೀತಿ ಎಷ್ಟು ವೇಗವಾಗಿ ಚಿಗುರುತ್ತದೆಯೋ, ಅಷ್ಟೇ ವೇಗವಾಗಿ ಬ್ರೇಕಪ್ ಗಳು ಕೂಡ ನಡೆಯುತ್ತಿವೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ವ್ಯಕ್ತಿಯಿಂದ ದೂರವಾಗುವುದು ಅಥವಾ ಆ ನೆನಪುಗಳನ್ನು ಮರೆತು ಬದುಕುವುದು ಯಾರಿಗಾದರೂ ಅತೀವ ನೋವಿನ ಸಂಗತಿ. ಆದರೆ, ಈ ಕಷ್ಟಕಾಲದಿಂದ ಹೊರಬಂದು ಜೀವನವನ್ನು ಹೊಸದಾಗಿ ಹೇಗೆ ಆರಂಭಿಸಬೇಕು ಎಂಬುದರ ಕುರಿತು ಖ್ಯಾತ ರಿಲೇಷನ್ಶಿಪ್ ಕೋಚ್ ಮತ್ತು ಕೌನ್ಸೆಲರ್ ಕಂಫರ್ಟ್ ಒಮೊವ್ರೆ, ತಮ್ಮ ‘ಹಾರ್ಟ್ಸ್ ಬ್ಲೂಮ್ ಹಿಯರ್’ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಅದ್ಭುತ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಅವುಗಳ ವಿವರ ಇಲ್ಲಿದೆ: 1. ನಿಮ್ಮ ಮೇಲೆ ನಿಮಗಿರಲಿ ನಂಬಿಕೆ ಬ್ರೇಕಪ್ ನಂತರ, “ನಾನು ತೆಗೆದುಕೊಂಡ ನಿರ್ಧಾರ ಸರಿಯೇ?” ಎಂಬ ಸಂಶಯ ನಿಮ್ಮನ್ನು ಕಾಡಬಹುದು. ಆದರೆ, ನಿಮ್ಮ ಸಂತೋಷ ಮತ್ತು ಮಾನಸಿಕ ಶಾಂತಿಗಾಗಿ ನೀವು ಈ ನಿರ್ಧಾರ ತೆಗೆದುಕೊಂಡಿದ್ದೀರಿ ಎಂದು ಬಲವಾಗಿ ನಂಬಿ. ನಿಮ್ಮ ಮನಸ್ಸಿನಲ್ಲಿರುವ ಕೋಪ ಅಥವಾ ಅಪರಾಧಿ ಭಾವನೆಯನ್ನು ಹತ್ತಿಕ್ಕಬೇಡಿ; ಬದಲಾಗಿ ಅದನ್ನು ಡೈರಿಯಲ್ಲಿ ಬರೆಯಿರಿ. ತಪ್ಪು ಸಂಬಂಧದಲ್ಲಿ ಇಷ್ಟು ದಿನ ಏಕೆ…
ವೈದ್ಯಕೀಯ ಲೋಕವೇ ಅಚ್ಚರಿಪಡುವಂತಹ ಅಪರೂಪದ ಘಟನೆಯೊಂದು ಚೀನಾದಲ್ಲಿ ಸಂಭವಿಸಿದೆ. ಕ್ಸಿನ್ಜಿಯಾಂಗ್ ಪ್ರಾಂತ್ಯದ ದಿಲಿ (Dilie) ಎಂಬ 24 ವರ್ಷದ ಮಹಿಳೆ ಒಂದೇ ಬಾರಿಗೆ ಐವರು ಮುದ್ದಾದ ಮಕ್ಕಳಿಗೆ ಜನ್ಮ ನೀಡಿ ದಾಖಲೆ ನಿರ್ಮಿಸಿದ್ದಾರೆ. ವುಹಾನ್ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಅಪರೂಪದ ಪ್ರಸವ ಚೀನಾದ ಪ್ರಸಿದ್ಧ ವುಹಾನ್ ವಿಶ್ವವಿದ್ಯಾಲಯದ ಆಸ್ಪತ್ರೆ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ವೈದ್ಯಕೀಯ ತಜ್ಞರ ಪ್ರಕಾರ, ಇಂತಹ ಘಟನೆಗಳು ಅತ್ಯಂತ ವಿರಳ. ನೈಸರ್ಗಿಕವಾಗಿ ಐವರು ಮಕ್ಕಳು ಏಕಕಾಲದಲ್ಲಿ ಜನಿಸುವ ಸಾಧ್ಯತೆಗಳು ಬಹಳ ಕಡಿಮೆ ಇರುತ್ತವೆ ಎಂದು ಅವರು ತಿಳಿಸಿದ್ದಾರೆ. ವೈದ್ಯಕೀಯ ವಿಶೇಷತೆಗಳೇನು? ಸಾಮಾನ್ಯವಾಗಿ ಅವಳಿ ಅಥವಾ ಮೂವರು ಮಕ್ಕಳು ಜನಿಸುವುದನ್ನು ನಾವು ಕೇಳಿದ್ದೇವೆ. ಆದರೆ ಯಾವುದೇ ಕೃತಕ ವಿಧಾನಗಳ ಸಹಾಯವಿಲ್ಲದೆ (ನೈಸರ್ಗಿಕವಾಗಿ) ಐವರು ಮಕ್ಕಳು ಜನಿಸುವುದು 6 ಕೋಟಿ ಪ್ರಸವಗಳಲ್ಲಿ ಕೇವಲ ಒಂದು ಪ್ರಕರಣದಲ್ಲಿ ಮಾತ್ರ ಸಾಧ್ಯ ಎಂದು ವೈದ್ಯಕೀಯ ಶಾಸ್ತ್ರ ಹೇಳುತ್ತದೆ. ವೈದ್ಯರ ಹರ್ಷ: “ನಮ್ಮ 40 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಇಂತಹ ಅಪರೂಪದ ಪ್ರಸವವನ್ನು ನೋಡಿರುವುದು ಇದೇ…
ಬೆಂಗಳೂರು : 2026ರ ಮಾರ್ಚ್ ತಿಂಗಳಲ್ಲಿ ಹೋಳಿ, ಯುಗಾದಿ, ರಂಜಾನ್, ಮತ್ತು ಮಹಾವೀರ ಜಯಂತಿಯಂತಹ ದೊಡ್ಡ ಹಬ್ಬಗಳು ಸಾಲು ಸಾಲಾಗಿ ಬರುತ್ತಿರುವುದರಿಂದ ಬ್ಯಾಂಕುಗಳಿಗೆ ಭರ್ಜರಿ ರಜೆ ಸಿಗಲಿದೆ. ಆರ್ಬಿಐ (RBI) ಕ್ಯಾಲೆಂಡರ್ ಪ್ರಕಾರ, ಶನಿವಾರ ಮತ್ತು ಭಾನುವಾರ ಸೇರಿದಂತೆ ಈ ತಿಂಗಳಲ್ಲಿ ಒಟ್ಟು 18 ದಿನಗಳು ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ. ಮಾರ್ಚ್ ತಿಂಗಳು ಆರ್ಥಿಕ ವರ್ಷದ ಅಂತ್ಯ (Financial Year End) ಆಗಿರುವುದರಿಂದ ವಹಿವಾಟುಗಳು ಹೆಚ್ಚಿರುತ್ತವೆ. ಹೀಗಾಗಿ, ರಜೆಗಳ ಪಟ್ಟಿಯನ್ನು ಗಮನಿಸಿ ನಿಮ್ಮ ಕೆಲಸಗಳನ್ನು ಮುಂಚಿತವಾಗಿ ಯೋಜಿಸುವುದು ಉತ್ತಮ. ಮಾರ್ಚ್ ತಿಂಗಳ ಪ್ರಮುಖ ರಜಾದಿನಗಳ ಪಟ್ಟಿ: 1. ಹೋಳಿ ಹಬ್ಬದ ಸಂಭ್ರಮ: ಮಾರ್ಚ್ 2: ಹೋಳಿಕಾ ದಹನ್ (ಕಾನ್ಪುರ, ಲಕ್ನೋದಲ್ಲಿ ರಜೆ). ಮಾರ್ಚ್ 3: ಧುಲಿ ವಂದನಾ/ಡೋಲ್ ಜಾತ್ರಾ (ಮುಂಬೈ, ಪುಣೆ, ಹೈದರಾಬಾದ್, ಜೈಪುರ, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿ ರಜೆ). ಮಾರ್ಚ್ 4: ಹೋಳಿ ಎರಡನೇ ದಿನ (ನವದೆಹಲಿ, ಅಹಮದಾಬಾದ್, ಚಂಡೀಗಢದಲ್ಲಿ ರಜೆ). ಯುಗಾದಿ ಮತ್ತು ರಂಜಾನ್ ಸರಣಿ ರಜೆಗಳು: ಮಾರ್ಚ್…
ಗದಗ : ರಾಜ್ಯದಲ್ಲಿ ಮತ್ತೊಂದು ಭೀಕರ ಮರ್ಡರ್ ನಡೆದಿದ್ದು, ಆಸ್ತಿ ವಿಚಾರವಾಗಿ ಮಗನೇ ತನ್ನ ತಂದೆಯನ್ನು ಹತ್ಯೆ ಮಾಡಿರುವ ಘಟನೆ ಗದಗದಲ್ಲಿ ನಡೆದಿದೆ. ಗದಗ ಜಿಲ್ಲೆಯ ಗೋವನಾಳ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಮಗನೇ ಹೆತ್ತ ತಂದೆಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಶಂಕರ ಗೌಡ ದ್ಯಾವನಗೌಡ್ರ (60) ಎಂಬುವರನ್ನು ಅವರ ಮಗ ಪ್ರಭು ಹತ್ಯೆ ಮಾಡಿದ್ದಾನೆ. 2 ಎಕರೆ ಜಮೀನಿಗೊಸ್ಕರ ತಂದೆ-ಮಗನ ನಡುವೆ ಜಗಳವಾಗಿದ್ದು, ಈ ವೇಳೆ ತಂದೆ ಮೇಲೆ ಮಗ ಪ್ರಭು ಜೋರಾಗಿ ಹೊಡೆದಿದ್ದು, ಹೊಡೆದ ರಭಸಕ್ಕೆ ಶಂಕರಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಲಕ್ಷ್ಮೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಆರೋಪಿ ಮಗ ಪ್ರಭುವನ್ನು ಬಂಧಿಸಿದ್ದಾರೆ.
ಸೈನಿಕ ಶಾಲೆಯಲ್ಲಿ ಓದಬೇಕೆಂಬ ಕನಸು ಹೊತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಯ (AISSEE 2026) ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಈ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಈಗ ಅಧಿಕೃತ ವೆಬ್ಸೈಟ್ exams.nta.nic.in ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಪರೀಕ್ಷೆಯು ಜನವರಿ 18, 2026 ರಂದು ನಡೆದಿತ್ತು. ಫಲಿತಾಂಶ ಪಡೆಯಲು ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ಸಂಖ್ಯೆ, ಪಾಸ್ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕಾಗುತ್ತದೆ. ಈ ರೀತಿ ರಿಸಲ್ಟ್ ಚೆಕ್ ಮಾಡಿಕೊಳ್ಳಿ NTA ಬಿಡುಗಡೆ ಮಾಡಿರುವ ಸ್ಕೋರ್ಕಾರ್ಡ್ ಅನ್ನು ಡೌನ್ಲೋಡ್ ಮಾಡಲು ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು: ಹಂತ 1: ಮೊದಲು ಅಧಿಕೃತ ವೆಬ್ಸೈಟ್ exams.nta.nic.in ಗೆ ಭೇಟಿ ನೀಡಿ. ಹಂತ 2: ವೆಬ್ಸೈಟ್ನ ಮುಖಪುಟದಲ್ಲಿರುವ ‘Candidate Activity’ ವಿಭಾಗದ ಮೇಲೆ ಕ್ಲಿಕ್ ಮಾಡಿ. ಹಂತ 3: ನಂತರ…













