Author: kannadanewsnow57

ಬೆಂಗಳೂರು: ರಾಜ್ಯದಲ್ಲಿ 2026-27ನೇ ಶೈಕ್ಷಣಿಕ ವರ್ಷದ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ಪ್ರವೇಶಾತಿ ಪ್ರಕ್ರಿಯೆಗಳು ಆರಂಭವಾಗುತ್ತಿರುವ ಬೆನ್ನಲ್ಲೇ, ಶಾಲಾ ಶಿಕ್ಷಣ ಇಲಾಖೆಯು (ಪದವಿ ಪೂರ್ವ) ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಮಹತ್ವದ ಸಾರ್ವಜನಿಕ ಸಲಹೆಯೊಂದನ್ನು ನೀಡಿದೆ. ಕೆಲವು ಪದವಿ ಪೂರ್ವ ಕಾಲೇಜುಗಳು ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಎಚ್ಚರಿಕೆಯನ್ನು ಪ್ರಕಟಿಸಲಾಗಿದೆ. ಕೆಲವು ಪದವಿ ಪೂರ್ವ ಕಾಲೇಜುಗಳು ಇಲಾಖೆಯಿಂದ ಅನುಮೋದನೆ ಪಡೆದ ಅಧಿಕೃತ ಸ್ಥಳಗಳನ್ನು ಹೊರತುಪಡಿಸಿ ಬೇರೆಡೆ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಕೆಲವು ಪ್ರಕರಣಗಳಲ್ಲಿ ವಿದ್ಯಾರ್ಥಿಗಳಿಗೆ ಮಾನ್ಯತೆ ಪಡೆದ ಕಾಲೇಜುಗಳಲ್ಲೇ ಪ್ರವೇಶ ನೀಡಿದಂತೆ ತೋರಿಸಿ, ವಾಸ್ತವಿಕವಾಗಿ ಯಾವುದೇ ಅಧಿಕೃತ ಅನುಮೋದನೆ ಇಲ್ಲದ ಖಾಸಗಿ ತರಬೇತಿ ಅಥವಾ ಕೋಚಿಂಗ್ ಸಂಸ್ಥೆಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ. ಮಾನ್ಯತೆ ರದ್ದುಪಡಿಸುವ ಎಚ್ಚರಿಕೆ ಈ ರೀತಿಯ ಕಾನೂನುಬಾಹಿರ ಕ್ರಮಗಳು ‘ಕರ್ನಾಟಕ ಶಾಲಾ ಶಿಕ್ಷಣ (ಪದವಿ ಪೂರ್ವ) ನಿಯಮಗಳು, 2024’ ಹಾಗೂ ‘ಕರ್ನಾಟಕ ಶಿಕ್ಷಣ ಕಾಯಿದೆ, 1983’ರ…

Read More

ಬೆಂಗಳೂರು: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯು (ಪದವಿ ಪೂರ್ವ) ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಹತ್ವದ ಆನ್ಲೈನ್ ಸೌಲಭ್ಯವೊಂದನ್ನು ಜಾರಿಗೆ ತಂದಿದೆ. ಇನ್ಮುಂದೆ ರಾಜ್ಯದ ಪದವಿ ಪೂರ್ವ (PU) ಕಾಲೇಜುಗಳಲ್ಲಿ ಲಭ್ಯವಿರುವ ವಿವಿಧ ವಿಷಯ ಸಂಯೋಜನೆಗಳು (Subject Combinations) ಮತ್ತು ಅವುಗಳಿಗೆ ಅನುಮೋದಿಸಲಾದ ಒಟ್ಟು ಪ್ರವೇಶ ಸಾಮರ್ಥ್ಯದ (Intake Capacity) ನಿಖರ ಮಾಹಿತಿಯನ್ನು ಸಾರ್ವಜನಿಕರು ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಸುಲಭವಾಗಿ ಪರಿಶೀಲಿಸಬಹುದಾಗಿದೆ. ಈ ಕುರಿತು ಇಲಾಖೆಯು ಅಧಿಕೃತ ಬಳಕೆದಾರ ಕೈಪಿಡಿಯನ್ನು (User Manual) ಬಿಡುಗಡೆ ಮಾಡಿದ್ದು, ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ವಿವರಗಳನ್ನು ಪಡೆಯುವ ಹಂತ ಹಂತದ ವಿಧಾನವನ್ನು ವಿವರಿಸಿದೆ. ಪ್ರವೇಶ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ವಿದ್ಯಾರ್ಥಿಗಳು ತಮಗೆ ಬೇಕಾದ ಕಾಲೇಜುಗಳ ಸೀಟು ಲಭ್ಯತೆಯ ನೈಜ ಮಾಹಿತಿಯನ್ನು ಪಡೆಯಲು ಈ ವ್ಯವಸ್ಥೆ ಸಹಕಾರಿಯಾಗಿದೆ. ಪೋರ್ಟಲ್ನಿಂದ ಸಿಗುವ ಪ್ರಮುಖ ಪ್ರಯೋಜನಗಳು: ಕಾಲೇಜುಗಳ ಸುಲಭ ಹುಡುಕಾಟ: ಕರ್ನಾಟಕದ ಯಾವುದೇ ನೋಂದಾಯಿತ PU ಕಾಲೇಜಿನ ಸಂಪೂರ್ಣ ಮಾಹಿತಿಯನ್ನು ಸುಲಭವಾಗಿ ಪತ್ತೆಹಚ್ಚಬಹುದು. ವಿಷಯ…

Read More

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ನಮ್ಮ ದೇಹದ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಎಚ್ಚರವಾದಾಗಿನಿಂದ ಮಲಗುವವರೆಗೆ ಫೋನ್ ನಮ್ಮ ಜೊತೆಗೇ ಇರುತ್ತದೆ. ಆದರೆ, ರಾತ್ರಿ ಮಲಗುವಾಗ ಫೋನ್ ಅನ್ನು ತಲೆ ಪಕ್ಕದಲ್ಲೇ ಅಥವಾ ದಿಂಬಿನ ಕೆಳಗೆ ಇಟ್ಟುಕೊಳ್ಳುವ ಅಭ್ಯಾಸ ನಿಮಗಿದ್ದರೆ, ನೀವು ದೊಡ್ಡ ಆರೋಗ್ಯ ಸಂಕಷ್ಟವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದೀರಿ ಎಂದೇ ಅರ್ಥ. ಮೊಬೈಲ್ ಅನ್ನು ಪಕ್ಕದಲ್ಲಿಟ್ಟು ಮಲಗುವುದರಿಂದಾಗುವ ಅಪಾಯಗಳು: ನಿದ್ರಾಹೀನತೆ (Insomnia): ಮೊಬೈಲ್ ಫೋನ್‌ನಿಂದ ಹೊರಬರುವ ‘ನೀಲಿ ಬೆಳಕು’ (Blue Light) ನಮ್ಮ ಮೆದುಳಿನಲ್ಲಿ ನಿದ್ರೆಗೆ ಪೂರಕವಾದ ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪತ್ತಿಯನ್ನು ತಡೆಯುತ್ತದೆ. ಇದರಿಂದ ಗಾಢವಾದ ನಿದ್ರೆ ಬರುವುದಿಲ್ಲ ಮತ್ತು ದೀರ್ಘಕಾಲದ ನಿದ್ರಾಹೀನತೆಗೆ ಕಾರಣವಾಗಬಹುದು. ವಿಕಿರಣದ ಅಪಾಯ (Radiation): ಮೊಬೈಲ್ ಫೋನ್‌ಗಳು ನಿರಂತರವಾಗಿ ರೇಡಿಯೋ ಫ್ರೀಕ್ವೆನ್ಸಿ ಎಲೆಕ್ಟ್ರೋಮ್ಯಾಗ್ನೆಟಿಕ್ ವೇವ್ಸ್‌ಗಳನ್ನು ಹೊರಸೂಸುತ್ತವೆ. ದೀರ್ಘಕಾಲದವರೆಗೆ ಫೋನ್ ಅನ್ನು ತಲೆಗೆ ಹತ್ತಿರ ಇಟ್ಟುಕೊಳ್ಳುವುದರಿಂದ ಇದು ಮೆದುಳಿನ ಕೋಶಗಳ ಮೇಲೆ ಪರಿಣಾಮ ಬೀರಬಹುದು ಎಂದು ಅನೇಕ ಸಂಶೋಧನೆಗಳು ಎಚ್ಚರಿಸಿವೆ. ಮಾನಸಿಕ ಒತ್ತಡ: ಮಲಗುವ ಮುನ್ನ ಸೋಶಿಯಲ್…

Read More

ಬೆಂಗಳೂರು : ನೀವು ಭಾರತ ಗ್ಯಾಸ್ (Bharat Gas) ಗ್ರಾಹಕರಾಗಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಅತ್ಯಂತ ಪ್ರಮುಖ ಹಾಗೂ ಗಡುವಿನ ಮಾಹಿತಿಯಿದೆ. ಭಾರತ ಪೆಟ್ರೋಲಿಯಂ ಸಂಸ್ಥೆಯು ತನ್ನ ಎಲ್ಲಾ ಗ್ರಾಹಕರಿಗೆ ಬಯೋಮೆಟ್ರಿಕ್ ಅಥೆಂಟಿಕೇಶನ್ ಆಧಾರಿತ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಿದೆ. ಯಾವ ಗ್ರಾಹಕರು 30 ಜೂನ್ 2026 ರ ಒಳಗಾಗಿ ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಿಲ್ಲವೋ, ಅಂತಹವರ ಗ್ಯಾಸ್ ಸಬ್ಸಿಡಿಯನ್ನು ತಡೆಹಿಡಿಯಲಾಗುವುದು ಮತ್ತು ಗ್ಯಾಸ್ ಕನೆಕ್ಷನ್ ಪಡೆಯುವಲ್ಲಿ ತೊಂದರೆಯಾಗಬಹುದು ಎಂದು ಕಂಪನಿ ಎಚ್ಚರಿಕೆ ನೀಡಿದೆ. ಆದರೆ ಸಮಾಧಾನಕರ ವಿಷಯವೆಂದರೆ, ಈ ಕೆಲಸಕ್ಕಾಗಿ ನೀವು ಗ್ಯಾಸ್ ಏಜೆನ್ಸಿಗೆ ಅಲೆಯಬೇಕಾದ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಮೂಲಕ ಕೇವಲ ಕೆಲವೇ ನಿಮಿಷಗಳಲ್ಲಿ ಇದನ್ನು ಪೂರ್ಣಗೊಳಿಸಬಹುದು. ಅದಕ್ಕೆ ಸರಳವಾದ ವಿಧಾನ ಇಲ್ಲಿದೆ. ಇ-ಕೆವೈಸಿ ಏಕೆ ಕಡ್ಡಾಯ? ಪ್ರಸ್ತುತ ಸರ್ಕಾರ ಮತ್ತು ತೈಲ ಮಾರಾಟ ಕಂಪನಿಗಳು ಡಿಜಿಟಲ್ ವೆರಿಫಿಕೇಶನ್ಗೆ ಹೆಚ್ಚಿನ ಒತ್ತು ನೀಡುತ್ತಿವೆ. ಎಲ್ಪಿಜಿ ಗ್ರಾಹಕರಿಗೆ ಬಯೋಮೆಟ್ರಿಕ್ ಇ-ಕೆವೈಸಿ ಕಡ್ಡಾಯಗೊಳಿಸುವುದರ ಮುಖ್ಯ ಉದ್ದೇಶ ನಕಲಿ ಅಥವಾ…

Read More

ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಆನ್ಲೈನ್ ಸೇವೆಗಳನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಚಂದಾದಾರರು ಇಪಿಎಫ್ಒ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೇ, ಮನೆಯಲ್ಲೇ ಕುಳಿತು ಎಲ್ಲಾ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಆನ್ಲೈನ್ ಸೇವೆಗಳನ್ನು ನವೀಕರಿಸುತ್ತಿದೆ. ಇದರ ಭಾಗವಾಗಿ ಇಪಿಎಫ್ಒ ಇತ್ತೀಚೆಗೆ ಮತ್ತೊಂದು ದೊಡ್ಡ ಅಪ್ಡೇಟ್ ನೀಡಿದೆ. ಅದೇನಂದರೆ, ನಿಮ್ಮ ಯುಎಎನ್ (UAN) ಸಂಖ್ಯೆಗೆ ತಪ್ಪಾಗಿ ಲಿಂಕ್ ಆಗಿರುವ ಮೆಂಬರ್ ಐಡಿಯನ್ನು (Member ID) ಇನ್ಮುಂದೆ ನೀವೇ ಸ್ವತಃ ಸುಲಭವಾಗಿ ಡಿ-ಲಿಂಕ್ (De-link) ಮಾಡಬಹುದು. ಕಂಪನಿಗಳು ಅಚಾತುರ್ಯದಿಂದ ನಿಮ್ಮ UAN ಸಂಖ್ಯೆಯನ್ನು ಬೇರೆ ಕಂಪನಿಗೆ ಅಥವಾ ತಪ್ಪು ಮೆಂಬರ್ ಐಡಿಗೆ ಲಿಂಕ್ ಮಾಡಿದ್ದರೆ, ಅದನ್ನು ಇಪಿಎಫ್ಒ ಅಧಿಕೃತ ಪೋರ್ಟಲ್ ಮೂಲಕ ಕೆಲವೇ ನಿಮಿಷಗಳಲ್ಲಿ ತೆಗೆದುಹಾಕಬಹುದು. ಅದನ್ನು ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ. ಮೊದಲು ಸರ್ವಿಸ್ ಹಿಸ್ಟರಿ ಪರಿಶೀಲಿಸಿ ನಿಮ್ಮ ಖಾತೆಗೆ ಯಾವುದಾದರೂ ತಪ್ಪು ಮೆಂಬರ್ ಐಡಿ ಲಿಂಕ್ ಆಗಿದೆಯೇ ಎಂಬುದನ್ನು ನೀವು ‘ಸರ್ವಿಸ್ ಹಿಸ್ಟರಿ’ (Service History) ಮೂಲಕ…

Read More

ನವದೆಹಲಿ : ದೇಶದಲ್ಲಿ ತಾಪಮಾನವು ಭಾರೀ ಹೆಚ್ಚಳವಾಗಿದ್ದು,. ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿರುವ ನಕ್ಷೆಯನ್ನು ನೋಡಿದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತದೆ. ಮ್ಯಾಪ್ನಲ್ಲಿ ‘ಡಾರ್ಕ್ ರೆಡ್’ (ಗಾಢ ಕೆಂಪು) ಬಣ್ಣದಲ್ಲಿರುವ ಪ್ರದೇಶಗಳಲ್ಲಿ ತಾಪಮಾನ 44 ಡಿಗ್ರಿ ದಾಟಿದ್ದರೆ, ಅದರ ಮೇಲೆ ಕಪ್ಪು ಚುಕ್ಕೆಗಳಿರುವ (Black Points) ಪ್ರದೇಶಗಳಲ್ಲಿ ತಾಪಮಾನ ಭೀಕರ 48 ಡಿಗ್ರಿ ಸೆಲ್ಸಿಯಸ್ಗೆ ಹತ್ತಿರವಾಗುತ್ತಿದೆ! ಇದು ಅತ್ಯಂತ ಅಪಾಯಕಾರಿ ಸ್ಥಿತಿಯಾಗಿದ್ದು, ಸಾರ್ವಜನಿಕರು ತೀವ್ರ ಜಾಗ್ರತೆ ವಹಿಸುವಂತೆ ‘ಹೀಟ್ ಸ್ಟ್ರೋಕ್’ ಮುನ್ನೆಚ್ಚರಿಕೆ ನೀಡಲಾಗಿದೆ. ಏನಿದು ‘ನೌತಪಾ’? ಭೀಕರ ಸೆಕೆಗೆ ಕಾರಣವೇನು? ಜ್ಯೋತಿಷ್ಯ ಶಾಸ್ತ್ರ ಮತ್ತು ಹವಾಮಾನದ ಲೆಕ್ಕಾಚಾರದ ಪ್ರಕಾರ, ಮೇ 25 ರಂದು ಸೂರ್ಯನು ರೋಹಿಣಿ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಇಲ್ಲಿಂದ ಜೂನ್ 2 ರವರೆಗೆ ‘ನೌತಪಾ’ ಇರಲಿದ್ದು, ಇವು ವರ್ಷದ ಅತ್ಯಂತ ಕಡು ಬೇಸಿಗೆಯ 9 ದಿನಗಳಾಗಿವೆ. ಈ ಅವಧಿಯಲ್ಲಿ ಸೂರ್ಯನ ಕಿರಣಗಳು ಭೂಮಿಯ ಮೇಲೆ ನೇರವಾಗಿ ಬೀಳುವುದರಿಂದ ಬಿಸಿಲ ಬೇಗೆ ಗರಿಷ್ಠ ಮಟ್ಟದಲ್ಲಿರಲಿದೆ. ಆದರೆ, “ನೌತಪಾ ಎಷ್ಟು ಹೆಚ್ಚಾಗಿ…

Read More

ಬೆಂಗಳೂರು: ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ನೂತನ ವೇಳಾಪಟ್ಟಿಯಂತೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 29, 2026 ರಿಂದ ಪುನರಾರಂಭಗೊಳ್ಳಲಿವೆ. ಶೈಕ್ಷಣಿಕ ಅವಧಿಗಳ ವಿವರ: ನೂತನ ಶೈಕ್ಷಣಿಕ ವರ್ಷದಲ್ಲಿ ಒಟ್ಟು ಎರಡು ಅವಧಿಗಳಿರಲಿದ್ದು, ವಿವರಗಳು ಈ ಕೆಳಗಿನಂತಿವೆ: ಮೊದಲನೇ ಅವಧಿ: ದಿನಾಂಕ 29.05.2026 ರಿಂದ 02.10.2026 ರವರೆಗೆ. ಎರಡನೇ ಅವಧಿ: ದಿನಾಂಕ 22.10.2026 ರಿಂದ 10.04.2027 ರವರೆಗೆ. ರಜೆಗಳ ಪಟ್ಟಿ: ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪ್ರಮುಖ ರಜೆಗಳ ವಿವರ ಹೀಗಿದೆ: ದಸರಾ ರಜೆ: ದಿನಾಂಕ 03.10.2026 ರಿಂದ 21.10.2026 ರವರೆಗೆ. ಬೇಸಿಗೆ ರಜೆ: ದಿನಾಂಕ 11.04.2027 ರಿಂದ 28.05.2027 ರವರೆಗೆ. ವರ್ಷದ ಒಟ್ಟು ದಿನಗಳ ಲೆಕ್ಕಾಚಾರ: 2026-27ನೇ ಸಾಲಿನಲ್ಲಿ ಒಟ್ಟು 365 ದಿನಗಳಲ್ಲಿ ರಜೆ ಮತ್ತು ಕೆಲಸದ ದಿನಗಳ ಹಂಚಿಕೆ ಹೀಗಿದೆ: ಶಾಲಾ ಕರ್ತವ್ಯದ ದಿನಗಳು: 245 ದಿನಗಳು.…

Read More

ಬೆಂಗಳೂರು: ದೇಶಾದ್ಯಂತ ಡಿಜಿಟಲ್ ಪಾವತಿಗಳು ಅತ್ಯಂತ ವೇಗವಾಗಿ ಹೆಚ್ಚಾಗುತ್ತಿದ್ದು, ಯುಪಿಐ (UPI) ಆಧಾರಿತ ಕ್ಯೂಆರ್ ಕೋಡ್ (QR Code) ಪಾವತಿಗಳು ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿ ಮಾರ್ಪಟ್ಟಿವೆ. ಶಾಪಿಂಗ್ ಮಾಲ್‌ಗಳು, ಸಣ್ಣ ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಆನ್‌ಲೈನ್ ಡೆಲಿವರಿ ಹೀಗೆ ಪ್ರತಿಯೊಂದು ಕಡೆಯೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸುವುದು ಸಾಮಾನ್ಯವಾಗಿದೆ. ಆದರೆ, ಇದೇ ಸೌಕರ್ಯವನ್ನು ಸೈಬರ್ ಅಪರಾಧಿಗಳು ಈಗ ಹೊಸ ಮಾದರಿಯ ವಂಚನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಅಂಗಡಿಗಳಲ್ಲಿ ಅಸಲಿ ಕ್ಯೂಆರ್ ಕೋಡ್‌ಗಳ ಮೇಲೆ ತಮಗೆ ಸೇರಿದ ನಕಲಿ ಕ್ಯೂಆರ್ ಕೋಡ್‌ಗಳನ್ನು ಅಂಟಿಸಿ, ಗ್ರಾಹಕರ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಳ್ಳುವ ಘಟನೆಗಳು ಹೆಚ್ಚಾಗುತ್ತಿವೆ ಎಂದು ಸೈಬರ್ ಭದ್ರತಾ ತಜ್ಞರು ಎಚ್ಚರಿಸಿದ್ದಾರೆ. ವಂಚನೆ ನಡೆಯುವುದು ಹೇಗೆ? ಸಾಮಾನ್ಯವಾಗಿ ಗ್ರಾಹಕರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಯುಪಿಐ ಪಿನ್ (UPI PIN) ನಮೂದಿಸಿದ ತಕ್ಷಣ ಹಣವು ಸಂಬಂಧಪಟ್ಟ ಖಾತೆಗೆ ಜಮೆಯಾಗುತ್ತದೆ. ಆದರೆ, ನಕಲಿ ಕ್ಯೂಆರ್ ಕೋಡ್ ಇರುವ ಸಂದರ್ಭಗಳಲ್ಲಿ ಆ ಹಣ ಅಸಲಿ…

Read More

ಬಾಗಲಕೋಟೆ: ಜಾತ್ರೆಗೆಂದು ಹೋದ ಕಡೆಯಲ್ಲಿ ನಾಯಿ ಕಚ್ಚಿದ್ದನ್ನು ಗಂಭೀರವಾಗಿ ಪರಿಗಣಿಸದ ಯುವಕನೊಬ್ಬ, ಸೂಕ್ತ ಸಮಯದಲ್ಲಿ ಲಸಿಕೆ ಪಡೆಯದ ಕಾರಣ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೋಲಸಂಗಿ ಗ್ರಾಮದ ನಿವಾಸಿ ಪ್ರದೀಪ್ ಚಂದ್ರಶೇಖರ್ ಹಳೆರೊಳ್ಳಿ (22) ಎಂಬಾತನೇ ಈ ದುರ್ದೈವಿ. ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಈ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಕಳೆದ ಮಾರ್ಚ್ ತಿಂಗಳಲ್ಲಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬನ್ನಿಕೇರಿ ಚಂದ್ರಾದೇವಿ ಜಾತ್ರೆಗೆ ಪ್ರದೀಪ್ ಹೋಗಿದ್ದನು. ಜನಜಂಗುಳಿಯ ನಡುವೆ ಈತನಿಗೆ ಹುಚ್ಚು ನಾಯಿಯೊಂದು ಕಚ್ಚಿತ್ತು. ಆದರೆ, ಗಾಯವನ್ನು ಸಾಮಾನ್ಯ ಎಂದು ಭಾವಿಸಿದ ಪ್ರದೀಪ್, ರೇಬಿಸ್ ನಿರೋಧಕ ಲಸಿಕೆ (Anti-Rabies Vaccine) ಪಡೆದುಕೊಳ್ಳದೆ ಬೇಜವಾಬ್ದಾರಿತನ ತೋರಿದ್ದ ಎನ್ನಲಾಗಿದೆ. ನಾಯಿ ಕಚ್ಚಿದ ಹಲವು ದಿನಗಳ ಬಳಿಕ ಪ್ರದೀಪ್ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು. ರೇಬಿಸ್ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ, ವಾರದ ಹಿಂದೆ ಆತನನ್ನು ಮೊದಲು ನಿಡಗುಂದಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಕೈಮೀರುತ್ತಿದ್ದ…

Read More

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ದಾರುಣ ಘಟನೆ ಸಂಭವಿಸಿದೆ. ಕಾಂಪೌಂಡ್ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ 17 ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಾಣಸವಾಡಿಯಲ್ಲಿ ನಡೆದಿದೆ. ಮೃತ ಬಾಲಕನನ್ನು ಭೀಮೇಶ್ (17) ಎಂದು ಗುರುತಿಸಲಾಗಿದೆ.ಚಿಕ್ಕಬಾಣಸವಾಡಿಯಲ್ಲಿ ನಿನ್ನೆ (ಸೋಮವಾರ) ಈ ಅವಘಡ ಸಂಭವಿಸಿದೆ. ಕಾಂಪೌಂಡ್ ಗೋಡೆಯ ಕೆಳಭಾಗದಲ್ಲಿ ಮಣ್ಣು ಅಗೆಯುವ ಕೆಲಸ ನಡೆಯುತ್ತಿತ್ತು ಎನ್ನಲಾಗಿದೆ. ಈ ವೇಳೆ ಕಾರ್ಮಿಕರ ಜೊತೆಗೆ ಹೋಗಿದ್ದ ಬಾಲಕ ಭೀಮೇಶ್ ಅಲ್ಲಿ ನಿಂತಿದ್ದಾಗ, ಇದ್ದಕ್ಕಿದ್ದಂತೆ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಗೋಡೆಯ ಅವಶೇಷಗಳ ಅಡಿಯಲ್ಲಿ ಸಿಲುಕಿದ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆ ನಡೆದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬಾಣಸವಾಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More