Author: kannadanewsnow57

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇತ್ತೀಚೆಗೆ ಕಾರಿನೊಳಗೆ ಮಹಿಳೆಯೊಬ್ಬರು ಸುಟ್ಟು ಕರಕಲಾಗಿದ್ದ ನಿಗೂಢ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಪ್ರಿಯತಮೆ ತನ್ನ ಪತಿಯನ್ನು ಬಿಟ್ಟು ಬರಲು ನಿರಾಕರಿಸಿದ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿ, ಕಾರಿನ ಸಮೇತ ಸುಟ್ಟು ಹಾಕಿದ್ದ ಪ್ರಿಯಕರ, ನಂತರ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಿಗ್ರಮೆಗೊಳಿಸುವ ಸತ್ಯ ಪೊಲೀಸ್ ತನಿಖೆಯಿಂದ ಬಯಲಾಗಿದೆ. ಘಟನೆಯ ಹಿನ್ನೆಲೆ: ದೇವನಹಳ್ಳಿ ಮೂಲದ ಸುಜಾತಾ (35) ಕೊಲೆಯಾದ ದುರ್ದೈವಿ. ಆರೋಪಿ ರಾಮಾಂಜಿನಪ್ಪ ಈ ಕೃತ್ಯ ಎಸಗಿದ ಕಿರಾತಕ. ಇವರಿಬ್ಬರ ನಡುವೆ ಕಳೆದ ಕೆಲವು ಸಮಯದಿಂದ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಸುಜಾತಾಳ ಮೇಲಿನ ವ್ಯಾಮೋಹದಿಂದ ರಾಮಾಂಜಿನಪ್ಪ ನಾಲ್ಕು ತಿಂಗಳ ಹಿಂದಷ್ಟೇ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದನು. ಇದೇ ರೀತಿ ಸುಜಾತಾ ಕೂಡ ತನ್ನ ಪತಿಯನ್ನು ಬಿಟ್ಟು ತನ್ನೊಂದಿಗೆ ಬರಬೇಕೆಂದು ಆತ ಸತತವಾಗಿ ಒತ್ತಾಯಿಸುತ್ತಿದ್ದನು. ಕಾರಿನೊಳಗೆ ಸಜೀವ ದಹನ: ಘಟನೆಯ ದಿನದಂದು ಸುಜಾತಾ ಪತಿಯನ್ನು ಬಿಟ್ಟು ಬರಲು ಖಡಾಖಂಡಿತವಾಗಿ ನಿರಾಕರಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ರಾಮಾಂಜಿನಪ್ಪ, ದೊಡ್ಡಬಳ್ಳಾಪುರ ತಾಲೂಕಿನ…

Read More

ಬೆಂಗಳೂರು : ಸಚಿವ ಜಮೀರ್ ಅಹ್ಮದ್ ಖಾನ್ ನಿವಾಸದಲ್ಲಿ ಚಿನ್ನಾಭರಣ ಕದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಶಿವಾಜಿನಗರ ಠಾಣೆ ಪೋಲೀಸರು ಇದೀಗ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದು, ಬಂಧಿತ ಆರೋಪಿಗಳನ್ನು ಸಯ್ಯದ್ ಅಮೀರ್ ಹಾಗೂ ಅಮೀರ್ ಅಹ್ಮದ್ ಎಂದು ತಿಳಿದು ಬಂದಿದೆ. ಬಿಜಿನೆಸ್ ಲಾಸ್ ಆಗಿದ್ದಕ್ಕೆ ಪರಿಚಯಸ್ಥರಿಂದಲೇ ಕಳ್ಳತನ ಮಾಡಿದ್ದಾರೆ. ಸೈಯದ್ ಜೊತೆಗೆ ಅಮೀರ್ ಅಹ್ಮದ್ ಟ್ರಾವೆಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದ. ಜಮೀರ್ ಮನೆಯಲ್ಲಿ ಸಯ್ಯದ್ ಮತ್ತು ಅಮೀರ್ ಇಬ್ಬರು ಕಳ್ಳತನ ಮಾಡಿದ್ದರು. ಮನೆಯಲ್ಲಿ ಬಂದು ಚಿನ್ನಾಭರಣ ಕಳ್ಳತನ ಮಾಡಿದ್ದರು. ಜಮೀರ್ ತಾಯಿಯ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಗಳು, 1.13 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದರು. ಚಿನ್ನ ಕಳ್ಳತನ ಮಾಡಿ ಆಭರಣ ಅಡವಿಟ್ಟು ಆರೋಪಿಗಳು ಹಣ ಪಡೆದಿದ್ದರು. ಆ ಹಣವನ್ನು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿ ಲಾಭಕ್ಕೆ ಪ್ಲಾನ್ ಮಾಡಿದರು. ಕಾಲ್ ಮಾಡಿದಾಗ ರಿಸೀವ್ ಮಾಡಲಿಲ್ಲ. ಇಬ್ಬರ ಮೇಲೆ ಅನುಮಾನ ವ್ಯಕ್ತವಾಗಿದೆ. ಸದ್ಯ…

Read More

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರ ಹಿಡಿಯಲಿದೆ. ಈ ಮೂಲಕ ಕಳೆದ 15 ವರ್ಷಗಳಿಂದ ರಾಜ್ಯವಾಳುತ್ತಿದ್ದ ಟಿಎಂಸಿ ಮತ್ತು ಮಮತಾ ಬ್ಯಾನರ್ಜಿ ಅವರ ಆಡಳಿತಕ್ಕೆ ತೆರೆ ಬೀಳಲಿದೆ. ಈಗ ಎಲ್ಲರ ಕುತೂಹಲ ಇರುವುದು “ಬಂಗಾಳದ ಮುಂದಿನ ಮುಖ್ಯಮಂತ್ರಿ ಯಾರು?” ಎಂಬ ಪ್ರಶ್ನೆಯ ಮೇಲೆ. ಮುಖ್ಯಮಂತ್ರಿ ಸ್ಥಾನಕ್ಕೆ ರೇಸ್ನಲ್ಲಿರುವ ಪ್ರಮುಖ ನಾಯಕರು ಇವರು: 1. ಸುವೇಂದು ಅಧಿಕಾರಿ ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಎಂದೇ ಗುರುತಿಸಿಕೊಂಡಿರುವ ಸುವೇಂದು ಅಧಿಕಾರಿ ಪ್ರಸ್ತುತ ಸಿಎಂ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ನಂದಿಗ್ರಾಮದ ಹಾಲಿ ಶಾಸಕರಾಗಿರುವ ಇವರು, ಈ ಬಾರಿ ನಂದಿಗ್ರಾಮ ಮತ್ತು ಭವಾನಿಪುರ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದ್ದಾರೆ. 2021ರಲ್ಲಿ ಮಮತಾ ಬ್ಯಾನರ್ಜಿ ಅವರನ್ನೇ ಸೋಲಿಸಿದ್ದ ಇವರು, ಈ ಬಾರಿಯೂ ಭವಾನಿಪುರದಲ್ಲಿ ಮಮತಾ ವಿರುದ್ಧ ನೇರ ಹಣಾಹಣಿ ನಡೆಸುತ್ತಿದ್ದಾರೆ. ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿರುವ ಇವರಿಗೆ ಪಕ್ಷದೊಳಗೆ ಹೆಚ್ಚಿನ ಬೆಂಬಲವಿದೆ. 2. ದಿಲೀಪ್ ಘೋಷ್ ಪಶ್ಚಿಮ ಬಂಗಾಳ…

Read More

ನೋಯ್ಡಾ : ಗ್ರೇಟರ್ ನೋಯ್ಡಾದ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಶಿಕ್ಷಣದ ಹೆಸರಿನಲ್ಲಿ ‘ಗೂಂಡಾಗಿರಿ’ ನಡೆದಿದೆ. ಸೀನಿಯರ್ ವಿದ್ಯಾರ್ಥಿನಿಯರ ಗುಂಪೊಂದು ಜೂನಿಯರ್ ವಿದ್ಯಾರ್ಥಿನಿಯನ್ನು ಸುತ್ತುವರಿದು, ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸರಣಿ ಪೆಟ್ಟುಗಳನ್ನು ನೀಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯ ವಿವರ: ‘ಸಬ್ ಸೆ ಸಾರಿ ಬೋಲ್’ (ಎಲ್ಲರಿಗೂ ಕ್ಷಮೆ ಕೇಳು) ವೈರಲ್ ಆಗಿರುವ ವಿಡಿಯೋದಲ್ಲಿ, ಸೀನಿಯರ್ ವಿದ್ಯಾರ್ಥಿನಿಯೊಬ್ಬಳು ಜೂನಿಯರ್ ವಿದ್ಯಾರ್ಥಿನಿಯ ಕೆನ್ನೆಗೆ ಪದೇ ಪದೇ ಬಾರಿಸುತ್ತಿರುವುದು ಕಂಡುಬಂದಿದೆ. ಸಂತ್ರಸ್ತ ವಿದ್ಯಾರ್ಥಿನಿ ಎಷ್ಟೇ ಬೇಡಿಕೊಂಡರೂ ಬಿಡದ ಸೀನಿಯರ್ಸ್, ಆಕೆಯ ಕುಟುಂಬದ ಗೌರವಕ್ಕೆ ಧಕ್ಕೆ ತರುವಂತಹ ಮಾತುಗಳನ್ನಾಡಿದ್ದಾರೆ. ಅಲ್ಲದೆ, ಯಾವುದೋ ಅಸ್ಪಷ್ಟ ಕಾರಣಕ್ಕಾಗಿ ಬಲವಂತವಾಗಿ ಎಲ್ಲರ ಮುಂದೆ ಕ್ಷಮೆ ಕೇಳುವಂತೆ (ಸಾರಿ ಬೋಲ್) ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಇತರ ವಿದ್ಯಾರ್ಥಿನಿಯರು ಹಲ್ಲೆಯನ್ನು ತಡೆಯುವ ಬದಲು, ಹಲ್ಲೆ ಮಾಡುತ್ತಿದ್ದವಳಿಗೆ ಪ್ರಚೋದನೆ ನೀಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಪೊಲೀಸ್ ಮತ್ತು ವಿಶ್ವವಿದ್ಯಾಲಯದ ಕ್ರಮ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಗ್ರೇಟರ್ ನೋಯ್ಡಾ ಡಿಸಿಪಿ, ದಾದ್ರಿ ಪೊಲೀಸ್ ಠಾಣೆಯ ಮೂಲಕ…

Read More

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ‘ಭಾಗ್ಯಲಕ್ಷ್ಮಿ’ ಯೋಜನೆಯಡಿ ನೋಂದಾಯಿಸಿಕೊಂಡಿರುವ ಹೆಣ್ಣುಮಕ್ಕಳು, ಬಾಂಡ್ ಮೆಚ್ಯೂರಿಟಿ (ಪಕ್ವತೆ) ಅವಧಿಯ ನಂತರ ಸುಮಾರು 1 ಲಕ್ಷ ರೂಪಾಯಿವರೆಗಿನ ಹಣವನ್ನು ಪಡೆಯಲು ಅನುಸರಿಸಬೇಕಾದ ಕ್ರಮಗಳು ಮತ್ತು ಅಗತ್ಯ ದಾಖಲೆಗಳ ಬಗ್ಗೆ ಈ ಕೆಳಗಿನ ವಿವರವಾದ ಮಾಹಿತಿಯನ್ನು ನೀಡಲಾಗಿದೆ. ಅರ್ಜಿ ಸಲ್ಲಿಸಲು ಇರಬೇಕಾದ ಪ್ರಮುಖ ಷರತ್ತುಗಳು: ವಯೋಮಿತಿ: ಬಾಂಡ್ ಹಣ ಪಡೆಯಲು ಹೆಣ್ಣು ಮಗುವಿಗೆ ಕಡ್ಡಾಯವಾಗಿ 18 ವರ್ಷ ಪೂರ್ಣಗೊಂಡಿರಬೇಕು. ಶಿಕ್ಷಣ: ಮಗು ಕನಿಷ್ಠ 8ನೇ ತರಗತಿಯವರೆಗೆ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು. ಬಾಲ್ಯ ವಿವಾಹ ನಿಷೇಧ: 18 ವರ್ಷಕ್ಕೆ ಮುನ್ನ ಮಗುವಿಗೆ ಮದುವೆಯಾಗಿರಬಾರದು. ಬಾಲಕಾರ್ಮಿಕ ಪದ್ಧತಿ: ಮಗು ಯಾವುದೇ ಬಾಲಕಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಬಾರದು. ಅಗತ್ಯವಿರುವ ದಾಖಲೆಗಳು: ಒರಿಜಿನಲ್ ಭಾಗ್ಯಲಕ್ಷ್ಮಿ ಬಾಂಡ್: ಒಂದು ವೇಳೆ ಬಾಂಡ್ ಕಳೆದುಹೋಗಿದ್ದರೆ ಅದರ ಜೆರಾಕ್ಸ್ ಪ್ರತಿ ಮತ್ತು ಸ್ವಯಂ ಘೋಷಣಾ ಪತ್ರ ನೀಡಬೇಕು. ಆಧಾರ್ ಕಾರ್ಡ್: ಮಗುವಿನ ಆಧಾರ್ ಕಾರ್ಡ್ ಕಡ್ಡಾಯ. ಬಾಂಡ್ನಲ್ಲಿರುವ ಹೆಸರು ಮತ್ತು ಆಧಾರ್ ಹೆಸರು ಒಂದೇ ಆಗಿರಬೇಕು. ತಂದೆ-ತಾಯಿಯ ಆಧಾರ್: ಪೋಷಕರ…

Read More

ಮುಂಬೈ: ಭಾರತದ ಚಿನ್ನದ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರುವ ಉದ್ದೇಶದಿಂದ ರಾಷ್ಟ್ರೀಯ ಷೇರು ಮಾರುಕಟ್ಟೆಯು (NSE) ‘ಎಲೆಕ್ಟ್ರಾನಿಕ್ ಗೋಲ್ಡ್ ರಶೀದಿ’ (EGR) ಎಂಬ ಹೊಸ ವಿಭಾಗವನ್ನು ಪ್ರಾರಂಭಿಸಿದೆ. ಮೇ 4, 2026 ರಿಂದ ಜಾರಿಗೆ ಬರುವಂತೆ ಈ ವ್ಯವಸ್ಥೆಯು ಭೌತಿಕ ಚಿನ್ನ ಮತ್ತು ಹಣಕಾಸು ಮಾರುಕಟ್ಟೆಯ ನಡುವಿನ ಅಂತರವನ್ನು ಕಡಿಮೆ ಮಾಡಲಿದೆ. ಏನಿದು ಎಲೆಕ್ಟ್ರಾನಿಕ್ ಗೋಲ್ಡ್ ರಶೀದಿ (EGR)? EGRಗಳು ಡಿಜಿಟಲ್ ರೂಪದ ಭದ್ರತೆಗಳಾಗಿದ್ದು, ಇವು ಭೌತಿಕ ಚಿನ್ನದ ಮಾಲೀಕತ್ವವನ್ನು ಪ್ರತಿನಿಧಿಸುತ್ತವೆ. ನೀವು ಖರೀದಿಸುವ ಪ್ರತಿಯೊಂದು ಎಲೆಕ್ಟ್ರಾನಿಕ್ ರಶೀದಿಯ ಹಿಂದೆಯೂ ಅಷ್ಟೇ ಪ್ರಮಾಣದ ಭೌತಿಕ ಚಿನ್ನವಿರುತ್ತದೆ. ಈ ಚಿನ್ನವನ್ನು ಸೆಬಿ (SEBI) ಮಾನ್ಯತೆ ಪಡೆದ ಸುರಕ್ಷಿತ ವಾಲ್ಟ್ಗಳಲ್ಲಿ ಇರಿಸಲಾಗುತ್ತದೆ ಮತ್ತು ಡಿಪಾಸಿಟರಿಗಳ ಮೂಲಕ ಎಲೆಕ್ಟ್ರಾನಿಕ್ ರೂಪದಲ್ಲಿ ನಿರ್ವಹಿಸಲಾಗುತ್ತದೆ. ಜ್ಯುವೆಲ್ಲರ್ಸ್, ರಿಫೈನರ್ಸ್ ಮತ್ತು ಹೂಡಿಕೆದಾರರಿಗೆ ಚಿನ್ನದ ಬೆಲೆ ನಿರ್ಧಾರದಲ್ಲಿ ಪಾರದರ್ಶಕತೆ ಸಿಗಲಿದೆ. ಚಾಲನೆಯ ಅಂಗವಾಗಿ ಎನ್ಎಸ್ಇ ಈಗಾಗಲೇ 1000 ಗ್ರಾಂ ಚಿನ್ನದ ಬಟ್ಟಿಯನ್ನು (Gold Bar) ಯಶಸ್ವಿಯಾಗಿ ಎಲೆಕ್ಟ್ರಾನಿಕ್ ರಶೀದಿಯಾಗಿ…

Read More

ಇತ್ತೀಚಿನ ದಿನಗಳಲ್ಲಿ ನಾವು ಬಳಸುವ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಎನ್ನುವುದು ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ಹೈನು ಉತ್ಪನ್ನಗಳಲ್ಲಿ ಕಲಬೆರಕೆ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಹೋಟೆಲ್ಗಳಲ್ಲಿ ಬಳಸುವ ಪನೀರ್ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಸರ್ಕಾರವೇ ಆದೇಶ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲೇ ಮಹಾರಾಷ್ಟ್ರದ ಪುಣೆಯ ದೌಂಡ್ನಲ್ಲಿ ಹಾಲಿನ ಕಲಬೆರಕೆಗೆ ಸಂಬಂಧಿಸಿದ ಬೆಚ್ಚಿಬೀಳಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಲನ್ನು ಕಾಯಿಸಿದ ತಕ್ಷಣ ಅದು ಪ್ಲಾಸ್ಟಿಕ್ನಂತೆ ಮಾರ್ಪಟ್ಟಿದೆ. ನಡೆದಿದ್ದೇನು? ದೌಂಡ್ ತಾಲ್ಲೂಕಿನ ಪಾಟಸ್ ಎಂಬಲ್ಲಿ ಈ ಘಟನೆ ನಡೆದಿದೆ. ಪಾಟಸ್ ನಿವಾಸಿ ಯುವರಾಜ್ ಅವಹಾಡ್ ಎಂಬುವವರು ಸ್ಥಳೀಯ ಸ್ವೀಟ್ ಹೋಮ್ ಒಂದರಿಂದ ಹಾಲು ಖರೀದಿಸಿದ್ದರು. ಹಾಲನ್ನು ಮನೆಗೆ ತಂದ ಮೇಲೆ ಸ್ವಲ್ಪ ಹೊತ್ತು ಫ್ರಿಡ್ಜ್ನಲ್ಲಿ ಇಟ್ಟು, ನಂತರ ಕಾಯಿಸಲು ಸ್ಟೌ ಮೇಲೆ ಇಟ್ಟಿದ್ದಾರೆ. ಹಾಲು ಕಾಯುತ್ತಿದ್ದಂತೆ ಅದು ಒಡೆದಂತೆ ಕಂಡರೂ, ಹತ್ತಿರದಿಂದ ಗಮನಿಸಿದಾಗ ಯುವರಾಜ್ ಅವರಿಗೆ ಶಾಕ್ ಕಾದಿತ್ತು. ಹಾಲು ಒಡೆದು ಪ್ಲಾಸ್ಟಿಕ್ ಪದಾರ್ಥವಾಗಿ ಮಾರ್ಪಟ್ಟಿತ್ತು. ಅದರಲ್ಲಿ…

Read More

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಇದೀಗ ಅಧಿಕೃತವಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಇಂದು ಚೆನ್ನೈನ ರಾಜಭವನಕ್ಕೆ ತೆರಳಿದ ಟಿವಿಕೆ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿತು. ಹಕ್ಕು ಮಂಡನೆ: ಟಿವಿಕೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪಕ್ಷದ ಹಿರಿಯ ಪದಾಧಿಕಾರಿಗಳು ರಾಜ್ಯಪಾಲರಿಗೆ ಅಧಿಕೃತ ಪತ್ರವನ್ನು ಹಸ್ತಾಂತರಿಸುವ ಮೂಲಕ ಸರ್ಕಾರ ರಚನೆಯ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಐತಿಹಾಸಿಕ ಗೆಲುವು: ಚೊಚ್ಚಲ ಚುನಾವಣೆಯಲ್ಲೇ ಭರ್ಜರಿ ಬಹುಮತ ಪಡೆಯುವ ಮೂಲಕ ವಿಜಯ್ ಅವರ ಟಿವಿಕೆ ಪಕ್ಷವು ತಮಿಳುನಾಡಿನ ದ್ರಾವಿಡ ರಾಜಕಾರಣದಲ್ಲಿ ಹೊಸ ಪರ್ವ ಆರಂಭಿಸಿದೆ. ಮುಂದಿನ ನಡೆ: ರಾಜ್ಯಪಾಲರು ಹಕ್ಕು ಮಂಡನೆಯನ್ನು ಪರಿಶೀಲಿಸಿ, ವಿಜಯ್ ಅವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡಲಿದ್ದಾರೆ. ಶೀಘ್ರದಲ್ಲೇ ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.

Read More

ಇತ್ತೀಚಿನ ದಿನಗಳಲ್ಲಿ ಕ್ರೂಸ್ ಹಡಗುಗಳಲ್ಲಿ ಪ್ರಯಾಣಿಸಿದವರಲ್ಲಿ ಹಂಟಾವೈರಸ್ ಸೋಂಕಿನ ಲಕ್ಷಣಗಳು ಕಂಡುಬರುತ್ತಿರುವುದು ಆರೋಗ್ಯ ತಜ್ಞರಲ್ಲಿ ಆತಂಕ ಮೂಡಿಸಿದೆ. ಇದು ಅಪರೂಪದ ವೈರಸ್ ಆದರೂ, ಅತ್ಯಂತ ಅಪಾಯಕಾರಿ ಮತ್ತು ಮಾರಣಾಂತಿಕ ಎಂದು ವೈದ್ಯರು ಎಚ್ಚರಿಸಿದ್ದಾರೆ. ಏನಿದು ಹಂಟಾವೈರಸ್? ಹಂಟಾವೈರಸ್ ಎನ್ನುವುದು ಮುಖ್ಯವಾಗಿ ಇಲಿ ಮತ್ತು ಹೆಗ್ಗಣಗಳಿಂದ ಹರಡುವ ವೈರಸ್ಗಳ ಗುಂಪಾಗಿದೆ. ಇಲಿಗಳ ಮೂತ್ರ, ಲಾಲಾರಸ ಅಥವಾ ಮಲದ ಸಂಪರ್ಕಕ್ಕೆ ಬಂದಾಗ ಮನುಷ್ಯರಿಗೆ ಈ ಸೋಂಕು ತಗಲುತ್ತದೆ. ಹರಡುವಿಕೆ: ಕಲುಷಿತಗೊಂಡ ವಸ್ತುಗಳನ್ನು ಮುಟ್ಟುವುದರಿಂದ ಅಥವಾ ಇಲಿಗಳ ತ್ಯಾಜ್ಯದಿಂದ ಕೂಡಿದ ಗಾಳಿಯನ್ನು ಉಸಿರಾಡುವುದರಿಂದ ಈ ವೈರಸ್ ದೇಹವನ್ನು ಸೇರುತ್ತದೆ. ಗಮನಿಸಿ: ಕೋವಿಡ್-19 ಅಥವಾ ಇನ್ಫ್ಲುಯೆನ್ಸದಂತೆ ಇದು ಮನುಷ್ಯರಿಂದ ಮನುಷ್ಯರಿಗೆ ಅಷ್ಟು ಸುಲಭವಾಗಿ ಹರಡುವುದಿಲ್ಲ. ಕ್ರೂಸ್ ಹಡಗುಗಳಿಗೂ ಇದಕ್ಕೂ ಏನು ಸಂಬಂಧ? ಹಡಗುಗಳಲ್ಲಿ ಆಹಾರ ಸಂಗ್ರಹಣಾ ಕೊಠಡಿಗಳು, ತ್ಯಾಜ್ಯ ವಿಲೇವಾರಿ ಪ್ರದೇಶಗಳು ಮತ್ತು ತೇವಾಂಶವಿರುವ ಜಾಗಗಳಲ್ಲಿ ಇಲಿಗಳು ಆಶ್ರಯ ಪಡೆಯುವ ಸಾಧ್ಯತೆ ಇರುತ್ತದೆ. ಕ್ರೂಸ್ ಹಡಗುಗಳು ಮುಚ್ಚಿದ ವಾತಾವರಣವನ್ನು ಹೊಂದಿರುವುದರಿಂದ ಮತ್ತು ಸಾವಿರಾರು ಜನರು ಒಟ್ಟಾಗಿ ಇರುವುದರಿಂದ,…

Read More

ತಿರುವಳ್ಳೂರು: ಇಲ್ಲಿನ ಸೆವ್ವಾಪೇಟೆಯ ಖಾಸಗಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ದ ಮತ ಎಣಿಕೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಎಂಕೆ ಏಜೆಂಟ್ ಭಾಸ್ಕರ್ (58) ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತ ಭಾಸ್ಕರ್ ಅವರು ಪೂಂಡಿ ಪಶ್ಚಿಮ ಒಕ್ಕೂಟದ ಅಧ್ಯಕ್ಷರಾಗಿದ್ದರು. ಇವರು ತಿರುವಳ್ಳೂರು ವಿಧಾನಸಭಾ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ವಿ.ಜಿ. ರಾಜೇಂದ್ರನ್ ಅವರ ಪರವಾಗಿ ಎಣಿಕೆ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ಬೆಳಿಗ್ಗೆ ಸುಮಾರು 9 ಗಂಟೆಯ ಸುಮಾರಿಗೆ ಮತ ಎಣಿಕೆ ಕಾರ್ಯ ಭರದಿಂದ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮತ ಎಣಿಕೆ ಕೇಂದ್ರದಲ್ಲಿದ್ದ ಭಾಸ್ಕರ್ ಅವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.ತಕ್ಷಣವೇ ಅಲ್ಲಿದ್ದ ಸಹೋದ್ಯೋಗಿಗಳು ಮತ್ತು ಚುನಾವಣಾ ಸಿಬ್ಬಂದಿ ಅವರನ್ನು ತಿರುವಳ್ಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತೀವ್ರ ರಾಜಕೀಯ ಪೈಪೋಟಿಯ ನಡುವೆ ಹಿರಿಯ ಮುಖಂಡರೊಬ್ಬರ ಸಾವು ಡಿಎಂಕೆ ಕಾರ್ಯಕರ್ತರಲ್ಲಿ ಮತ್ತು ಚುನಾವಣಾ ಸಿಬ್ಬಂದಿಯಲ್ಲಿ ತೀವ್ರ ಶೋಕವನ್ನುಂಟು…

Read More