Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಇಂದು ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯೊಂದಿಗೆ ಬಲವಾದ ಗಾಳಿಯೂ ಬೀಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿವಿಧ ಜಿಲ್ಲೆಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಕೆಲ ಗಂಟೆಗಳ ಅವಧಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಕಾರಣದಿಂದ ಈ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಗುಡುಗು ಮತ್ತು ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಜಾರಿಗೊಳಿಸಲಾಗಿದೆ. ಈ ಭಾಗಗಳಲ್ಲಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ. ಇದೇ ವೇಳೆ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ,…
ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ತಂಬಾಕು ಮುಕ್ತ ಕಚೇರಿ ಎಂದು ಫಲಕ ಅಳವಡಿಸುವಂತೆ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇ ವನೆ ನಿಷೇಧಿಸಿದ್ದು, ಸೇವನೆ ಮಾಡುತ್ತಿರುವುದು ಕಂಡು ಬಂದಲ್ಲಿ ದಂಡ ವಿಧಿಸುವಂತೆ ಸೂಚನೆ ನೀಡಿದರಲ್ಲದೆ, ಅನಿರೀಕ್ಷಿತ ದಾಳಿ ನಡೆಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ತಂಬಾಕು ಉತ್ಪನ್ನಗಳನ್ನು ಬಳಸಬಾರದು ಅವುಗಳಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮ ಕುರಿತು ಶಾಲಾ ಮಕ್ಕಳಿಗೆ ಮಾಹಿತಿ ನೀಡುವುದರ ಮೂಲಕ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರ ಲ್ಲದೆ, ತಂಬಾಕು ಮುಕ್ತ ಶಾಲೆ, ಹಾಸ್ಟೆಲ್ ಎಂದು ಫಲಕ ಅಳವಡಿಸುವಂತೆ ನಿರ್ದೇಶನ ನೀಡಿದರು. ಸದರಿ ಆವರಣಗಳಲ್ಲಿ ಗುಟ್ಕಾ ಕವರ್ ಗಳು ಸಿಕ್ಕರೆ ದಂಡ ವಿಧಿಸಿ ಶಾಲಾ ಮುಖ್ಯಸ್ಥರೆ ಹೊಣೆಗಾರಾರು ಎಂದು ತಿಳಿಸಿದರು. ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳನ್ನು ತಂಬಾಕು ಮುಕ್ತ ನಿಲ್ದಾಣ ಎಂದು ಘೋಷಣೆ ಮಾಡಲು…
ಬೆಂಗಳೂರು: ರಾಜ್ಯದ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರ ಭರ್ಜರಿ ಕೊಡುಗೆಯನ್ನು ಘೋಷಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಅಧಿಕೃತ ಚಾಲನೆ ನೀಡಿದೆ. ಆರ್ಥಿಕ ಪರಿಸ್ಥಿತಿ ಯಾವುದೇ ಆಗಿರಲಿ, ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣ ಪಡೆಯುವ ಅವಕಾಶ ಸುಲಭವಾಗಬೇಕು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರ ಸುಮಾರು ₹286 ಕೋಟಿ ವೆಚ್ಚ ಭರಿಸುತ್ತಿದೆ. ಯಾರಿಗೆ ಈ ಉಚಿತ ಬಸ್ ಪಾಸ್ ಸೌಲಭ್ಯ ಲಭ್ಯ? ಕರ್ನಾಟಕದಲ್ಲಿ ವಾಸವಾಗಿದ್ದು, ರಾಜ್ಯದ ಮಾನ್ಯತೆ ಪಡೆದ ಶಾಲೆ, ಕಾಲೇಜು ಹಾಗೂ ಇತರೆ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಉಚಿತ ಬಸ್ ಪಾಸ್ ಪಡೆಯಲು ಇರುವ ಪ್ರಮುಖ ನಿಯಮಗಳು 1. ಅಗತ್ಯ ದಾಖಲೆ ಸಲ್ಲಿಕೆ ಕಡ್ಡಾಯ ವಿದ್ಯಾರ್ಥಿಗಳು ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರವೇಶಕ್ಕೆ ಸಂಬಂಧಿಸಿದ ಶಾಲೆ ಅಥವಾ ಕಾಲೇಜಿನ ಅಧಿಕೃತ ದಾಖಲೆಗಳನ್ನು…
ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಳಿತ ಕಾಣುತ್ತಿದ್ದರೂ, ಬಂಗಾರದ ಮೇಲಿನ ಸಾಲ (Gold Loan) ಪಡೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಕ್ವಿಫ್ಯಾಕ್ಸ್ನ (Equifax) ಇತ್ತೀಚಿನ ವರದಿಯ ಪ್ರಕಾರ, ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಚಿನ್ನದ ಸಾಲಕ್ಕೆ ಇರುವ ಬೇಡಿಕೆ ಬರೋಬ್ಬರಿ 103% ರಷ್ಟು ಹೆಚ್ಚಾಗಿದೆ. ತುರ್ತು ಹಣದ ಅಗತ್ಯವಿರುವವರಿಗೆ ಗೋಲ್ಡ್ ಲೋನ್ ಒಂದು ವರ ಹೌದು. ಆದರೆ, ವಿವಿಧ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಸಾಲದ ಮೌಲ್ಯ (LTV) ಮತ್ತು ಬಡ್ಡಿ ದರಗಳು ವಿಭಿನ್ನವಾಗಿರುತ್ತವೆ. ಹಾಗಾದರೆ ಸಾಲ ಪಡೆಯುವ ಮುನ್ನ ನಾವು ಗಮನಿಸಬೇಕಾದ ಪ್ರಮುಖ ಅಂಶಗಳು ಯಾವುವು? ಸಂಪೂರ್ಣ ಮಾಹಿತಿ ಇಲ್ಲಿದೆ. ಎಷ್ಟು ಸಾಲ ಸಿಗುತ್ತದೆ? (LTV ಅನುಪಾತ) ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನಿಮ್ಮ ಚಿನ್ನದ ಒಟ್ಟು ಮೌಲ್ಯದ ನಿರ್ದಿಷ್ಟ ಶೇಕಡಾವಾರು ಹಣವನ್ನು ಮಾತ್ರ ಸಾಲವಾಗಿ ನೀಡುತ್ತವೆ. ಬ್ಯಾಂಕುಗಳು: ಸಾಮಾನ್ಯವಾಗಿ ನಿಮ್ಮ ಚಿನ್ನದ ಮೌಲ್ಯದ ಗರಿಷ್ಠ 75% ರಷ್ಟು ಮಾತ್ರ ಸಾಲ ನೀಡುತ್ತವೆ. NBFCಗಳು (ಮುತ್ಥೂಟ್ ಅಥವಾ…
ಇತ್ತೀಚಿನ ದಿನಗಳಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಗ್ಯಾಸ್ ಸಿಲಿಂಡರ್ ಕನಿಷ್ಠ ದಿನಗಳಿಗಿಂತ ಹೆಚ್ಚು ದಿನ ಬರಬೇಕು ಎಂದು ಪ್ರತಿಯೊಬ್ಬ ಗೃಹಿಣಿಯೂ ಬಯಸುತ್ತಾರೆ. ತಜ್ಞರ ಪ್ರಕಾರ, ನಮ್ಮ ಅಡುಗೆ ಮನೆಯ ಕೆಲವು ಸಣ್ಣಪುಟ್ಟ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವುದರಿಂದ ಪ್ರತಿ ತಿಂಗಳು ಶೇಕಡಾ 15 ರಿಂದ 20 ರಷ್ಟು ಗ್ಯಾಸ್ ಉಳಿತಾಯ ಮಾಡಬಹುದು. ಹಾಗಾದರೆ ಗ್ಯಾಸ್ ಉಳಿಸಲು ಸಹಕಾರಿಯಾದ ಆ 5 ಪ್ರಮುಖ ಸಲಹೆಗಳು ಇಲ್ಲಿವೆ ನೋಡಿ: 1. ಗ್ಯಾಸ್ ಸ್ಟೌವ್ ನಿರ್ವಹಣೆ (Maintenance) ಅತ್ಯಗತ್ಯ ಅನೇಕರು ಗ್ಯಾಸ್ ಸ್ಟೌವ್ ಅನ್ನು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ. ಬರ್ನರ್ಗಳಲ್ಲಿ ಧೂಳು ಮತ್ತು ಜಿಡ್ಡು ತುಂಬಿಕೊಂಡರೆ, ಗ್ಯಾಸ್ ಸರಿಯಾಗಿ ಸರಬರಾಜು ಆಗದೆ ಹೆಚ್ಚು ವ್ಯರ್ಥವಾಗುತ್ತದೆ. ಆದ್ದರಿಂದ ಬರ್ನರ್ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಮತ್ತು ಸ್ಟೌವ್ ಅನ್ನು ಸರ್ವಿಸಿಂಗ್ ಮಾಡಿಸಬೇಕು. ಅಲ್ಲದೆ, ರೆಗ್ಯುಲೇಟರ್ ಮತ್ತು ಪೈಪ್ಗಳನ್ನು ಸಹ ಒಂದು ನಿರ್ದಿಷ್ಟ ಅವಧಿಯ ನಂತರ ಬದಲಾಯಿಸುವುದು ಸುರಕ್ಷತೆ ಹಾಗೂ ಗ್ಯಾಸ್ ಉಳಿತಾಯ ಎರಡಕ್ಕೂ ಒಳ್ಳೆಯದು. 2. ಪಾತ್ರೆಗಳ ಮೇಲೆ…
ಬೆಂಗಳೂರು: ಇಂದಿನ ಧಾವಂತದ ಜೀವನದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಕೊಂಡೊಯ್ಯಲು ಹಗುರ ಹಾಗೂ ಸುಲಭವಾಗಿರುವುದರಿಂದ ಕಚೇರಿ, ಪ್ರಯಾಣ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಜನರು ಹೆಚ್ಚಾಗಿ ಇವುಗಳನ್ನೇ ಅವಲಂಬಿಸಿದ್ದಾರೆ. ನಿಯಂತ್ರಕ ಸಂಸ್ಥೆಗಳು ಅನುಮೋದಿತ ಫುಡ್-ಗ್ರೇಡ್ (Food-grade) ಪ್ಲಾಸ್ಟಿಕ್ ಬಾಟಲಿಗಳನ್ನು ಸುರಕ್ಷಿತ ಎಂದು ಪರಿಗಣಿಸಿದರೂ ಸಹ, ಇವುಗಳ ನಿರಂತರ ಬಳಕೆ, ಅಸಮರ್ಪಕ ಸಂಗ್ರಹಣೆ ಮತ್ತು ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಸಂಶೋಧಕರು ಮತ್ತು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ದಿನವೂ ಪ್ಲಾಸ್ಟಿಕ್ ಬಾಟಲಿಗಳಿಂದ ನೀರು ಕುಡಿಯುವುದರಿಂದ ಉಂಟಾಗಬಹುದಾದ 10 ಪ್ರಮುಖ ಆರೋಗ್ಯದ ಆತಂಕಗಳು ಈ ಕೆಳಗಿನಂತಿವೆ: 1. ಮೈಕ್ರೋಪ್ಲಾಸ್ಟಿಕ್ ಭೀತಿ ಬಾಟಲಿಗಳ ಉತ್ಪಾದನೆ, ಸಾಗಣೆ ಮತ್ತು ನಿರಂತರ ಬಳಕೆಯ ಸಂದರ್ಭದಲ್ಲಿ ಅತ್ಯಂತ ಸೂಕ್ಷ್ಮವಾದ ಪ್ಲಾಸ್ಟಿಕ್ ಕಣಗಳು (ಮೈಕ್ರೋಪ್ಲಾಸ್ಟಿಕ್ಸ್) ನೀರಿನಲ್ಲಿ ಸೇರಿಕೊಳ್ಳುತ್ತವೆ. ಇವುಗಳನ್ನು ಪ್ರತಿದಿನ ಸೇವಿಸುವುದರಿಂದ ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಸಂಶೋಧನೆಗಳು ಹೇಳುತ್ತಿವೆ. 2. ತಾಪಮಾನ ಹೆಚ್ಚಾದಾಗ ರಾಸಾಯನಿಕ ಸೋರಿಕೆ…
ನಾವು ಚಿನ್ನವನ್ನು ಖರೀದಿಸಿದಾಗ ಅದು ಹೇಗೆ ಹೊಳೆಯುತ್ತದೆಯೋ, ಎಷ್ಟು ವರ್ಷಗಳಾದರೂ ಅದೇ ರೀತಿ ಕಾಣುತ್ತದೆ. ಆದರೆ ಬೆಳ್ಳಿ ಆಭರಣಗಳು ಹಾಗಲ್ಲ. ಬಳಸುತ್ತಾ ಹೋದಂತೆ ಅವು ತಮ್ಮ ಹೊಳಪನ್ನು ಕಳೆದುಕೊಳ್ಳುತ್ತವೆ. ಕೆಲ ದಿನಗಳ ನಂತರ ಇವು ಸಂಪೂರ್ಣವಾಗಿ ಕಪ್ಪಾಗುತ್ತವೆ. ಇವುಗಳನ್ನು ಮತ್ತೆ ಹೊಸದರಂತೆ ಮಾಡಲು ಅನೇಕರು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಗಳನ್ನು (ಕೆಮಿಕಲ್ಸ್) ಬಳಸುತ್ತಾರೆ. ಆದರೆ ಇದರಿಂದ ಬೆಳ್ಳಿ ಹಾಳಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳನ್ನು ಬಳಸಿ ಬೆಳ್ಳಿ ಆಭರಣಗಳನ್ನು ಕ್ಷಣಾರ್ಧದಲ್ಲಿ ಹೇಗೆ ಹೊಳೆಯುವಂತೆ ಮಾಡಬಹುದು ಎಂಬುದು ಹಲವರಿಗೆ ತಿಳಿದಿಲ್ಲ. ಹೌದು, ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ನಿಂಬೆಹಣ್ಣು, ಅಡುಗೆ ಸೋಡಾ (ಬೇಕಿಂಗ್ ಸೋಡಾ), ಮತ್ತು ಟೂತ್ಪೇಸ್ಟ್ ಬಳಸಿ ಕೆಲವೇ ನಿಮಿಷಗಳಲ್ಲಿ ಬೆಳ್ಳಿಯ ಮೇಲಿರುವ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು. ಇದಕ್ಕೆ ಯಾವುದೇ ಹೆಚ್ಚುವರಿ ಖರ್ಚು ಕೂಡ ಬೇಕಾಗಿಲ್ಲ. ಹಾಗಾದರೆ ಬೆಳ್ಳಿ ಆಭರಣಗಳನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂಬುದನ್ನು ಹಂತ-ಹಂತವಾಗಿ ಇಲ್ಲಿ ತಿಳಿಯೋಣ. ಬೆಳ್ಳಿ ವಸ್ತುಗಳನ್ನು ಹೊಸದರಂತೆ ಕಂಗೊಳಿಸುವಂತೆ ಮಾಡುವ ಟಿಪ್ಸ್: 1.…
ನವದೆಹಲಿ : ಆದಾಯ ತೆರಿಗೆ ಪಾವತಿದಾರರಿಗೆ ಪ್ರಮುಖ ಸೂಚನೆ ಬಂದಿದೆ. 2026-27ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ಮೊದಲ ಮುಂಗಡ ತೆರಿಗೆ (Advance Tax) ಪಾವತಿಸಲು ಜೂನ್ 15 ಕೊನೆಯ ದಿನವಾಗಿದೆ. ವರ್ಷಕ್ಕೆ 10,000 ರೂ.ಗಿಂತ ಹೆಚ್ಚಿನ ಅಂದಾಜು ತೆರಿಗೆ ಹೊಣೆಗಾರಿಕೆ ಹೊಂದಿರುವವರು ಈ ದಿನಾಂಕದೊಳಗೆ ತಮ್ಮ ಒಟ್ಟು ಮುಂಗಡ ತೆರಿಗೆಯ ಶೇಕಡಾ 15 ರಷ್ಟನ್ನು ಪಾವತಿಸಬೇಕಾಗುತ್ತದೆ. ವಿಶೇಷವೆಂದರೆ, ಹೊಸ ಆದಾಯ ತೆರಿಗೆ ಕಾಯ್ದೆ 2025 ಮತ್ತು ಆದಾಯ ತೆರಿಗೆ ನಿಯಮಗಳು 2026 ರ ಅಡಿಯಲ್ಲಿ ಸಂಪೂರ್ಣವಾಗಿ ಜಾರಿಗೆ ಬರುತ್ತಿರುವ ಮೊದಲ ಮುಂಗಡ ತೆರಿಗೆ ಪಾವತಿ ಇದಾಗಿದೆ. ನಿಗದಿತ ಗಡುವಿನೊಳಗೆ ಅಗತ್ಯ ಮೊತ್ತವನ್ನು ಪಾವತಿಸದಿದ್ದರೆ, ತೆರಿಗೆ ಕಾಯ್ದೆಯ ನಿಯಮಗಳ ಪ್ರಕಾರ ಬಡ್ಡಿ ಪಾವತಿಸಬೇಕಾಗುತ್ತದೆ. ಎಟಿಎಂ ವಹಿವಾಟು ಶುಲ್ಕಗಳಲ್ಲಿ ಬದಲಾವಣೆ ವಿವಿಧ ಬ್ಯಾಂಕುಗಳು ಕೆಲವು ಎಟಿಎಂ ವಹಿವಾಟುಗಳು ಮತ್ತು ಸಂಬಂಧಿತ ಸೇವೆಗಳ ಮೇಲಿನ ಶುಲ್ಕವನ್ನು ಪರಿಷ್ಕರಿಸಿವೆ. ಉಚಿತ ವಹಿವಾಟಿನ ಮಿತಿ ಮೀರಿದ ನಗದು ಹಿಂಪಡೆಯುವಿಕೆ, ಮಿನಿ ಸ್ಟೇಟ್ಮೆಂಟ್ ಮತ್ತು ಎಟಿಎಂಗಳಲ್ಲಿ ಬ್ಯಾಲೆನ್ಸ್ ವಿಚಾರಣೆಗೆ ಅನ್ವಯಿಸುವ…
ಬೆಂಗಳೂರು : ಮಕ್ಕಳು 18 ವರ್ಷ ಪೂರೈಸಿದ ತಕ್ಷಣ ಕಾನೂನುಬದ್ಧವಾಗಿ ವಯಸ್ಕರಾಗುತ್ತಾರೆ. ಭಾರತದಲ್ಲಿ 18 ವರ್ಷ ದಾಟುತ್ತಿದ್ದಂತೆ ಹಲವು ಕಾನೂನು ಮತ್ತು ಆರ್ಥಿಕ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಇದಕ್ಕಾಗಿ ಕೆಲವು ಪ್ರಮುಖ ಸರ್ಕಾರಿ ದಾಖಲೆಗಳನ್ನು ಹೊಂದಿರುವುದು ಅತ್ಯಗತ್ಯವಾಗಿದೆ. ಅನೇಕ ಪೋಷಕರು ಕಾಲೇಜು ಪ್ರವೇಶ, ಬ್ಯಾಂಕ್ ಕೆಲಸ ಅಥವಾ ಸರ್ಕಾರಿ ಯೋಜನೆಗಳ ತುರ್ತು ಅಗತ್ಯ ಬರುವವರೆಗೂ ಈ ಬಗ್ಗೆ ಗಮನ ಹರಿಸುವುದಿಲ್ಲ. ಆ ಬಳಿಕ ಕೊನೆ ಕ್ಷಣದಲ್ಲಿ ಓಡಾಡುವುದು ತಪ್ಪಿಸಲು, ಮಗುವಿಗೆ 18 ವರ್ಷ ತುಂಬಿದ ತಕ್ಷಣ ಈ ಕೆಳಗಿನ ಪ್ರಮುಖ ದಾಖಲೆಗಳನ್ನು ಜರೂರಾಗಿ ಮಾಡಿಸುವುದು ಜಾಣತನ. 1. ಪ್ಯಾನ್ ಕಾರ್ಡ್ (PAN Card) ಅತ್ಯಂತ ಕಡ್ಡಾಯ 18 ವರ್ಷದ ನಂತರ ಯಾವುದೇ ಬ್ಯಾಂಕ್ನಲ್ಲಿ ಹೊಸ ಖಾತೆ ತೆರೆಯಲು, ಫಿಕ್ಸೆಡ್ ಡೆಪಾಸಿಟ್ (FD) ಮಾಡಲು ಅಥವಾ ಹೊಸ ಕ್ರೆಡಿಟ್ ಕಾರ್ಡ್ ಪಡೆಯಲು ಪ್ಯಾನ್ ಕಾರ್ಡ್ ಅತ್ಯಗತ್ಯ. ಒಂದು ವೇಳೆ ಯುವಕರು ಪಾರ್ಟ್-ಟೈಮ್ ಕೆಲಸ ಮಾಡುತ್ತಿದ್ದರೆ ಅಥವಾ ಉನ್ನತ ಶಿಕ್ಷಣಕ್ಕಾಗಿ ಸ್ಕಾಲರ್ಶಿಪ್ ಪಡೆಯಬೇಕಾಗಿದ್ದರೆ ಪ್ಯಾನ್ ಕಾರ್ಡ್…
ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಜನರ ಜೀವನಮಟ್ಟವನ್ನು ಸುಧಾರಿಸಲು ಮತ್ತು ನಗರ ಪ್ರದೇಶದ ಮಾದರಿಯಲ್ಲೇ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಒದಗಿಸಬೇಕಾದ 15 ಪ್ರಮುಖ ಮೂಲಭೂತ ಸೌಕರ್ಯಗಳನ್ನು ಗುರುತಿಸಿ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಿದೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 61.43 ರಷ್ಟು ಜನರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದು, ಅವರಿಗೆ ದೈನಂದಿನ ಜೀವನಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಗ್ರಾಮಗಳಲ್ಲಿ ಜಾರಿಯಾಗಲಿರುವ 15 ಪ್ರಮುಖ ಸೌಲಭ್ಯಗಳು: ಶುದ್ಧ ಕುಡಿಯುವ ನೀರು: ಪ್ರತಿ ಕುಟುಂಬಕ್ಕೆ ದಿನಕ್ಕೆ ಕನಿಷ್ಠ 55 ಲೀಟರ್ ಶುದ್ಧ ನೀರು ಒದಗಿಸುವುದು ಮತ್ತು ಶೇ. 80 ರಷ್ಟು ಮನೆಗಳಿಗೆ ವೈಯಕ್ತಿಕ ನಳ ಸಂಪರ್ಕ ನೀಡುವುದು. ವೈಯಕ್ತಿಕ ಶೌಚಾಲಯ: ‘ನಿರ್ಮಲ ಭಾರತ ಅಭಿಯಾನ’ದಡಿ ಪ್ರತಿ ಮನೆಗೆ ಶೌಚಾಲಯ ನಿರ್ಮಾಣ ಹಾಗೂ ಶಾಲೆ-ಅಂಗನವಾಡಿಗಳಲ್ಲಿ ನೈರ್ಮಲ್ಯ ಕಾಪಾಡುವುದು. ರಸ್ತೆ ನಿರ್ಮಾಣ: ಕಚ್ಚಾ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸುಸಜ್ಜಿತ ಗ್ರಾಮೀಣ…














