Author: kannadanewsnow57

ವರ್ತಕರಿಗೆ ಹಾಗೂ ಬಳಕೆದಾರರು ಪ್ಲಾಸ್ಟಿಕ್ ತ್ಯಾಜ್ಯವಸ್ತುಗಳ (ವ್ಯವಸ್ಥಾಪನೆ ಮತ್ತು ನಿರ್ವಹಣೆ) ನಿಯಮ-2016ರನ್ವಯ ಘನತ್ಯಾಜ್ಯ ನಿರ್ವಹಣಾ ಉಪನಿಯಮಗಳು-2019ನ್ನು ಹಾಸನ ಮಹಾನಗರ ಪಾಲಿಕೆಯಲ್ಲಿ ಹಾಗೂ ಅಳವಡಿಸಿಕೊಳ್ಳಲಾಗಿದೆ. ಇದರ ಅನ್ವಯ ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಏಕಬಳಕೆಯ ಪ್ಲಾಸ್ಟಿಕ್ ಸಾಮಗ್ರಿಗಳನ್ನು ನಿಷೇಧಿಸಲಾಗಿದ್ದು ಸಾರ್ವಜನಿಕರು ಪ್ಲಾಸ್ಟಿಕ್ ವಸ್ತುಗಳ ಸಂಗ್ರಹಣೆ, ಬಳಕೆ ಸಾಗಾಣಿಕೆ ಮಾಡುವುದು ಕಂಡು ಬಂದಲ್ಲಿ ನಿಯಮಗಳ ಅನ್ವಯ ದಂಡ ವಿಧಿಸಲಾಗುವುದು. ಮಹಾನಗರ ಪಾಲಿಕೆಯಿಂದ ಪ್ಲಾಸ್ಟಿಕ್ ಬಳಕೆ, ಸಂಗ್ರಹಣೆ ಮತ್ತು ಸಾಗಾಣಿಕೆ ಕಂಡುಬಂದಲ್ಲಿ ರೂ. 1000 ದಿಂದ 10,000 ವರಗೂ ದಂಡ ವಿಧಿಸಲಾಗುವುದಲ್ಲದೇ ಕಾನೂನು ಕ್ರಮ ಜರುಗಿಸಲು ಅವಕಾಶವಿರುತ್ತದೆ. ಆದ್ದರಿಂದ ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ತ್ಯಜಿಸಿ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಸಹಕರಿಸುವಂತೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

Read More

ಬೆಂಗಳೂರು : ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುವ ಜನನ ಹಾಗೂ ಮರಣ ಘಟನೆಗಳನ್ನು 21 ದಿನಗಳೊಳಗಾಗಿ ಕಡ್ಡಾಯವಾಗಿ ನೋಂದಣಿ ಮಾಡಿ ಉಚಿತ ಪ್ರಮಾಣ ಪತ್ರವನ್ನು ನೀಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ 1969 (2023) ರಲ್ಲಿ ತಿದ್ದುಪಡಿ ಪ್ರಕಾರ ಜನನ ಮರಣ ನೋಂದಣಿ ಪ್ರಮಾಣ ಪತ್ರ ನೀಡಲು ಕ್ರಮವಹಿಸುವಂತೆ ಉಲ್ಲೇಖಿತ ಪತ್ರಗಳಲ್ಲಿ ಸೂಚಿಸಲಾಗಿದೆ ಅದರಂತೆ ಆಸ್ಪತ್ರೆಯಲ್ಲಿ ಆಗುವ ಜನನ & ಮರಣ ಘಟನೆಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿ 21 ದಿನಗಳೊಳಗಾಗಿ ಉಚಿತವಾಗಿ ಪ್ರಮಾಣ ಪತ್ರವನ್ನು ನೀಡಬೇಕಾಗಿರುತ್ತದೆ. ದಿನಾಂಕ 03/12/2025 ರಂದು ನಡೆದ ನಾಗರಿಕ ನೋಂದಣಿ ಪದ್ಧತಿಯ 32ನೇ ಅಂತರ ಇಲಾಖೆ ಸಮನ್ವಯ ಸಮಿತಿ (Inter Departmental Co Ordination committee-IDCC) ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ ಅದರಂತೆ ಈ ಅಂಶಗಳು ಕೆಳಕಂಡಂತಿರುತ್ತವೆ. 2025ನೇ ಸಾಲಿನಲ್ಲಿ ರಾಜ್ಯದಲ್ಲಿ (ದಿನಾಂಕ: 28/11/2025 ರವರೆಗೆ) ನೋಂದಣಿಯಾಗಿರುವ ಜನನ ಮತ್ತು ಮರಣ ಘಟನೆಗಳ ಶೇಕಡವಾರು ವಿವರಗಳು…

Read More

ತುಮಕೂರು: ಅರ್ಹತೆ ಇದ್ದರೂ ಇದ್ದ ಜಾತಿ ಕಾರಣಕ್ಕೆ ಮುಖ್ಯಮಂತ್ರಿ ಹುದ್ದೆ ನೀಡದೇ ವಂಚಿಸಲಾಗುತ್ತಿದೆ, ಅರ್ಹತೆ ಇರುವ ಅದೆಷ್ಟು ಮಂದಿ ಉನ್ನತ ಹುದ್ದೆಗಳಿಂದ ವಂಚಿತರಾಗಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ಅಸ ಮಾಧಾನ ವ್ಯಕ್ತಪಡಿಸಿದರು. ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ “ತಲ್ಲಣ ಸದಿರುವ ಮನವೇ” ಸಂಸ್ಕೃತಿ ಚಿಂತನ ಚಾರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ, ಪರಂಪರೆಯ ಹೆಸರಿನಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಅನುಭವಿಸುವ ನೋವು, ಸಂಕಷ್ಟಗಳ ಬಗ್ಗೆ ಮಾತನಾಡದಿರುವುದು, ಯಾವ ಭಾ ರತೀಯತೆ ಎಂದು ಪ್ರಶ್ನಿಸಿದರು. ದೇಶದ ಸ್ವಾತಂತ್ರ, ಸಮಾನತೆಗಾಗಿ ಹೋರಾಟ ಮಾಡಿದ ಗಾಂಧೀಜಿಯ ಹೆಸರನ್ನು ಹೇಳಲು ಹಿಂಜರಿಯು ವಂ ತಹ ಮಟ್ಟಕ್ಕೆ ಇಳಿದಿದ್ದೇವೆ. ಇದು ಯಾವ ಭಾರತ ಬುದ್ದ, ಬಸವ, ಗಾಂಧಿ ಹೇಳಿದ ಸಮಾನತೆಯ ಬಗ್ಗೆ ಮಾತನಾಡುತಿದ್ದೇವೆಯೇ ಹೊರತು ಅದನ್ನು ಅನುಸ ರಿಸುತ್ತಿಲ್ಲ ವಿದ್ಯಾವಂತರು, ಪದವಿಧರರ ಸಂಖ್ಯೆ ಹೆಚ್ಚಾ ದಂತೆ ಅಸಮಾನತೆ ತೊಲಗಬೇಕಿತ್ತು ಆದರೆ ಮತ್ತೊಂದು ರೂಪದಲ್ಲಿ ನಮ್ಮೊಳಗೆ ಬೇರೂರುತ್ತಿದೆ ಎಂದರು. ಸಮಾಜದಲ್ಲಿ ಸಮಾನತೆತರಲು ಹಲವರು ನಿರಂತರ ವಾಗಿ ಶ್ರಮಿಸಿದ್ದಾರೆ. ಅವರ…

Read More

ಮೈಸೂರು : ಕೆಎಸ್ಆಕರ್ ಟಿಸಿ ಬಸ್ ನಲ್ಲಿ ಬೆಕ್ಕಿನ ಮರಿಗೂ ನಿರ್ವಾಹಕ ಟಿಕೆಟ್ ನೀಡಿರುವ ಘಟನೆ ನಡೆದಿದೆ. ಹೌದು, ಮೈಸೂರು – ಮಡಿಕೇರಿಗೆ ಹೋಗುವ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಕ ತನ್ನ ಜೊತೆ ಬೆಕ್ಕಿನ ಮರಿಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ನಿರ್ವಾಹಕ ಬೆಕ್ಕಿನ ಮರಿಗೂ ಆಫ್ ಟಿಕೆಟ್ ನೀಡಿದ್ದಾರೆ. ಮೈಸೂರು – ಮಡಿಕೇರಿ KSRTC ಬಸ್ಸಿನಲ್ಲಿ ಬರುವಾಗ ಬೆಕ್ಕಿನ ಮರಿಗೆ ಟಿಕೇಟ್ ಕೇಳಿ, ಕಂಡೆಕ್ಟರ್ “ಅದು ಬೆಕ್ಕಿನ ಮರಿನೆ ಆಗಲಿ ಮಕ್ಕಳೆ ಆಗಲಿ ಆಫ್ ಟಿಕೆಟ್ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಈಗ ಬೆಕ್ಕಿಗೆ ಕ್ಯಾಟ್ ಪಾಸ್ ಮಾಡಬೇಕಾ. ಅದು ಅಲ್ಲದೆ ದುಡ್ಡು ತೆಗೆದು ಸೀಟು ಕೂಡಾ ಕೊಟ್ಟಿಲ್ಲ. ಇದು ನ್ಯಾಯನಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೂ ಟ್ಯಾಗ್ ಮಾಡಿದ್ದಾರೆ.

Read More

ಬೆಂಗಳೂರು : ರಾಜ್ಯದ  ಪೊಲೀಸ್ ಇಲಾಖೆಯು ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಸುರಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಹೊಸ ವರ್ಷದ ಸಂಭ್ರಮಾಚರಣೆಯು ಮದ್ಯಪಾನದ ಪರಿಣಾಮವಾಗಿ ಜನಸಮೂಹದ ಮನಸ್ಥಿತಿಯು ತೀವ್ರಗೊಳ್ಳುವ ಸಾಧ್ಯತೆ ಇರುತ್ತದೆ. ಮದ್ಯಪಾನವು ಜನರ ವಿವೇಕಶಕ್ತಿಯನ್ನು ದುರ್ಬಲಗೊಳಿಸುತ್ತದೆ ಹಾಗೂ ಸಂಕೋಚತಾ/ಹಿಂಜರಿಕಾ ಮನೋಭಾವವನ್ನು ಮೀರುವಂತೆ ಮಾಡುತ್ತದೆ. ಕೌಂಟ್‌ಡೌನ್‌ಗಳು ಮತ್ತು ಸಂಭ್ರಮದ ಕ್ಷಣಗಳಿಂದ ಉಂಟಾಗುವ ಉಲ್ಲಾಸವು ಜನಸಮೂಹದಲ್ಲಿ ಸಾಮೂಹಿಕ ಪ್ರೇರೇಪಣೆಯನ್ನು ಸೃಷ್ಟಿಸಿ, ದಟ್ಟ ಗುಂಪಿನೊಳಗಿರುವ ಕಾರಣ ಯಾವ ನಡೆಗೂ ಅಪಾಯವಿಲ್ಲವೆಂಬ ತಪ್ಪು ಕಲ್ಪನೆಯನ್ನು ಉಂಟುಮಾಡುತ್ತದೆ. ವೇದಿಕೆಗಳಲ್ಲಿ ಜನಸ್ತೋಮದ ಹರಿವು ಅಥವಾ ಪಟಾಕಿ ಸಿಡಿಸುವಂತಹ ಪ್ರದರ್ಶನಗಳು ಮುಂತಾದ ಹಲವು ಕಾರಣಗಳಿಂದಾಗಿ ಅಪ್ರಜ್ಞಾತ್ಮಕ ವರ್ತನೆಗಳು ಕಂಡುಬರುತ್ತವೆ. ಜನಸಮೂಹದ ಹರಿವನ್ನು ಒಮ್ಮೆಲೇ ಪ್ರೇರೇಪಿಸಿ ಅಪಾಯಕರ ಅಲೆಗಳಂತೆ ರೂಪುಗೊಳ್ಳಬಹುದಾದಂತಹ ಸಂಗೀತದ ತೀವ್ರತೆಯ ಘಟನಾವಳಿಗಳನ್ನು ಪೊಲೀಸ್ ಅಧಿಕಾರಿಗಳು ಗಮನಿಸಬೇಕಿದೆ. ಪಟಾಕಿ ಸಿಡಿಯುವಲ್ಲಿ ವಿಳಂಬವಾದರೆ ನಿರಾಶೆ ಉಂಟಾಗಿ, ಜನಸಮೂಹದ ಸಂಭ್ರಮವು ತಕ್ಷಣವೇ ಅಸಹನೆ ಮತ್ತು ಕೋಪಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. ಗುಂಪಿನಲ್ಲಿ ವದಂತಿಗಳು ವೇಗವಾಗಿ ಹರಡಿ, ಅಪಾಯದ ಭ್ರಮೆಯು…

Read More

ಬೆಂಗಳೂರು: ನಟ, ನಿರ್ದೇಶಕ ಪ್ರೇಮ್ ಗೂ ವಿವಾದಗಳಿಗೂ ಗಳಸ್ಯ ಕಂಠಸ್ಯ ಸಂಬಂಧ ಎನ್ನುವುದು ಹಲವು ಬಾರಿ ಕಂಡು ಬರುತ್ತಿದೆ. ತಮ್ಮ ಹೊಸ ಸಿನಿಮಾ ಕೆಡಿಯ ಜೋಡೆತ್ತು ಸಾಂಗ್ ರಿಲೀಸ್ ಆಗಿದ್ದು, ಹಾಡಿನಲ್ಲಿ ಬಳಕೆ ಮಾಡಿರುವ ಕೆಲವು ಪದಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಮಂದಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಹಾಡಿನಲ್ಲಿ ಬರುವ ರಂಡೆ-ಮುಂಡೆಯರು ಪದದ ಬಗ್ಗೆ ಹಲವು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕಂಟ್ರೋಲ್ ಆಲ್ಟ್ ಡಿಲಿಟ್ ಎನ್ನುವ ಪೇಸ್‌ಬುಕ್‌ ಪೇಜಿನಲ್ಲಿ ತಗಡ್ ನನ್ಮಕ್ಕಳಿಗೆ ಅರ್ಥವೇ ಆಗಲ್ಲ ಅದ್ರಲ್ಲೇನ್ ತಪ್ಪದೆ ಅಂತ. ಮುಂಡೆ ಅನ್ನೋದು ತಪ್ಪಾಗಲ್ಲ. ವಿದವೆ ಅನ್ನೋದು ಅಲಂಕಾರಿಕ ಪದ, ಮುಂಡೆ ಅನ್ನೋದು ಆಡುಸೊಗಡು ಅಂತ ಒಪ್ಕೊಳೋಣ‌. ಅವಳು ಮುಂಡೆ ಎಂಬುದಕ್ಕೂ, ಆ ಮುಂಡೆ ಕಣ್ಣು ಬೀಳಬಾರದು ಎಂಬುದಕ್ಕೂ ವ್ಯತ್ಯಾಸವಿದೆ ಅನ್ನೋದು ಅನೇಕರಿಗೆ ಗೊತ್ತಿಲ್ಲ. ರಂಡೆ-ಮುಂಡೆಯರು ಸಮಾಜದಲ್ಲಿ ಜನರ ನಡುವೆ ಬೆರೆಯಬಾರದು, ಅವರ ಕಣ್ಣು ಯಾರ ಮೇಲೂ ಬೀಳಬಾರದು ಎಂದು ಅವರನ್ನು ದೂರವಿಡುತ್ತಿದ್ದ ಕಾಲದ ಕಿಡಿನುಡಿಗಳನ್ನು ಈ ಕಾಲಕ್ಕೆ ತರಬಾರದು. ‘ಊರು…

Read More

ಬೆಂಗಳೂರು : ಜನಸಮುದಾಯಕ್ಕೆ ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಕ್ಷೇತ್ರದಲ್ಲಿ ದೇಶದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಸ್ವಾತಂತ್ರ್ಯದ ನಂತರ ಭಾರತ ಸರ್ಕಾರವು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ರಚಿಸುವ ಮುನ್ನವೇ ಆಗಿನ ಮೈಸೂರು ಸಂಸ್ಥಾನವು ಪ್ರಾಥಮಿಕ ಆರೋಗ್ಯ ಘಟಕಗಳನ್ನು ಸ್ಥಾಪಿಸಿ ರೋಗ ನಿರೋಧಕ, ಚಿಕಿತ್ಸಾತ್ಮಕ, ಉತ್ತೇಜಕ ಹಾಗೂ ಪುನರ್ವಸತಿ ಸೇವೆಗಳನ್ನು ಜನಸಮುದಾಯಕ್ಕೆ ಒದಗಿಸಿಕೊಂಡು ಬರಲಾಗುತ್ತಿದೆ. ಉದ್ದೇಶ: ಸಮಗ್ರ ಮತ್ತು ವ್ಯಾಪಕ ಆರೋಗ್ಯ ರಕ್ಷಣೆಯನ್ನು ಒದಗಿಸುವುದು (ಪ್ರಾಥಮಿಕ, ಮಾಧ್ಯಮಿಕ, ತೃತೀಯ ಮತ್ತು ಆಯುಷ್ಪ ಪದ್ಧತಿಯನ್ನು ಒಳಗೊಂಡಂತೆ). ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸುಧಾರಿಸುವುದು. ಜನಸಂಖ್ಯೆ ಬೆಳವಣಿಗೆ ದರವನ್ನು ಇಳಿಸುವುದರ ಮೂಲಕ ಜನಸಂಖ್ಯೆ ಸ್ಥಿರವಾಗುವಂತೆ ಖಚಿತಪಡಿಸುವುದು. ಸಾಂಕ್ರಾಮಿಕವಲ್ಲದ ರೋಗಗಳ ನಿರ್ವಹಣೆ. ಹೆಚ್‌ಐವಿ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿವಾರಣೆ ಮತ್ತು ನಿರ್ಮೂಲನೆ ಖಾಸಗಿ-ಸಹಭಾಗಿತ್ವದ ಮೂಲಕ ಸೇವೆ ದೊರಕದ ಪ್ರದೇಶಗಳಲ್ಲಿ ಉತ್ತಮ ಆರೋಗ್ಯ ರಕ್ಷಣೆ ಒದಗಿಸುವುದು. ಔಷದೀಯ ಗಿಡಗಳ ಲಭ್ಯತೆಯನ್ನು ಸುಧಾರಿಸುವುದು. ಆರೋಗ್ಯ ಸೇವೆಯ ಲಭ್ಯತೆ, ಗುಣಮಟ್ಟದಲ್ಲಿ ಸುಧಾರಣೆ ಹಾಗೂ ಆರೈಕೆಯ ವೆಚ್ಚವನ್ನು ಕಡಿಮೆ ಮಾಡುವುದು. ಎಲ್ಲಾ ವಯೋಮಾನದವರಿಗೂ ಸಾಧ್ಯವಾದಷ್ಟು…

Read More

2025ನೇ ವರ್ಷವು ಅಂತ್ಯಗೊಳ್ಳುತ್ತಿದೆ, ಮತ್ತು 2026 ಸಮೀಪಿಸುತ್ತಿದೆ. ಹೊಸ ವರ್ಷದ ಆಗಮನವು ಕೇವಲ ಕ್ಯಾಲೆಂಡರ್ ಬಗ್ಗೆ ಮಾತ್ರವಲ್ಲ, ಬ್ಯಾಂಕಿಂಗ್, ಸಂಬಳ ರಚನೆಗಳು ಮತ್ತು ದೈನಂದಿನ ವೆಚ್ಚಗಳಿಗೆ ಸಂಬಂಧಿಸಿದ ಅನೇಕ ಮಹತ್ವದ ಬದಲಾವಣೆಗಳನ್ನು ಸಹ ತರುತ್ತದೆ. 2026 ರಲ್ಲಿ ಜಾರಿಗೆ ಬರಲಿರುವ ಈ ನಿಯಮಗಳು ನಿಮ್ಮ ಹಣಕಾಸು ಮತ್ತು ಜೀವನಶೈಲಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ತೆರಿಗೆ ಸ್ಲ್ಯಾಬ್ ಸುಧಾರಣೆಗಳಿಂದ ಹಿಡಿದು ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಯಂತ್ರಿಸುವ ನಿಯಮಗಳವರೆಗೆ ಸರ್ಕಾರ ಮತ್ತು ನಿಯಂತ್ರಕ ಸಂಸ್ಥೆಗಳು ಹೊಸ ವರ್ಷಕ್ಕೆ ವಿವರವಾದ ಮಾರ್ಗಸೂಚಿಯನ್ನು ಸಿದ್ಧಪಡಿಸಿವೆ. ಈ ಬದಲಾವಣೆಗಳು ಸಾಮಾನ್ಯ ಜನರಿಗೆ ಪರಿಹಾರವನ್ನು ಒದಗಿಸುವುದು ಮತ್ತು ಡಿಜಿಟಲ್ ಭದ್ರತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿವೆ. ಹೊಸ ವರ್ಷದಲ್ಲಿ ಬದಲಾಗಲಿರುವ ಪ್ರಮುಖ ನಿಯಮಗಳನ್ನು ಹತ್ತಿರದಿಂದ ನೋಡೋಣ. ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ ಮುಂಬರುವ ವರ್ಷವು ಸಂಬಳ ಪಡೆಯುವ ವ್ಯಕ್ತಿಗಳು ಮತ್ತು ತೆರಿಗೆದಾರರಿಗೆ ಸ್ವಲ್ಪ ಪರಿಹಾರವನ್ನು ತರಬಹುದು. ಅತಿದೊಡ್ಡ ಚರ್ಚೆ ೮ನೇ ವೇತನ ಆಯೋಗದ ಸುತ್ತ. ಇದನ್ನು ಜನವರಿ 1, 2026 ರಿಂದ…

Read More

ಆರೋಗ್ಯ ವಿಮಾ ಕ್ಲೇಮ್ ತಿರಸ್ಕರಿಸಲ್ಪಟ್ಟರೆ ಹತಾಶೆಗೊಳ್ಳುವ ಅಗತ್ಯವಿಲ್ಲ ಎಂದು ತಜ್ಞರು ಸೂಚಿಸುತ್ತಾರೆ. ಕ್ಲೇಮ್ ತಿರಸ್ಕರಿಸಲ್ಪಟ್ಟ ತಕ್ಷಣ ಚಿಂತೆ ಮಾಡುವ ಬದಲು, ಕ್ಲೇಮ್ ಏಕೆ ತಿರಸ್ಕರಿಸಲ್ಪಟ್ಟಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ, ನಿಮ್ಮ ವಿಮಾ ಪಾಲಿಸಿ ದಾಖಲೆಗಳು, ನಿಯಮಗಳು ಮತ್ತು ಷರತ್ತುಗಳು ಹಾಗೂ ವೈದ್ಯಕೀಯ ವರದಿಗಳನ್ನು ನೀವು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಕ್ಲೇಮ್ ನಿರಾಕರಣೆಗೆ ಕಾರಣವನ್ನು ಅರ್ಥಮಾಡಿಕೊಳ್ಳಲು ನೀವು ಪ್ರಯತ್ನಿಸಬೇಕು ಎಂದು ತಜ್ಞರು ಹೇಳುತ್ತಾರೆ. ಮೊದಲನೆಯದಾಗಿ, ನಿಮ್ಮ ಪಾಲಿಸಿಯಿಂದ ಒಳಗೊಳ್ಳಲ್ಪಟ್ಟ ರೋಗಗಳ ಪಟ್ಟಿಯಲ್ಲಿ ನಿಮ್ಮ ಅನಾರೋಗ್ಯವಿದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಕೆಲವು ವೈದ್ಯಕೀಯ ಮಾನದಂಡಗಳನ್ನು ಪೂರೈಸಿದಾಗ ಹೆಚ್ಚಿನ ಆರೋಗ್ಯ ವಿಮಾ ಪಾಲಿಸಿಗಳು ಗಂಭೀರ ಕಾಯಿಲೆಗಳನ್ನು ಸಹ ಒಳಗೊಳ್ಳುತ್ತವೆ. ಉದಾಹರಣೆಗೆ, ಪಾಲಿಸಿ ದಾಖಲೆಗಳ ವಿವರವಾದ ಪರಿಶೀಲನೆಯು ಬ್ಯಾಕ್ಟೀರಿಯಾದ ಮೆನಿಂಜೈಟಿಸ್‌ನಂತಹ ಗಂಭೀರ ಕಾಯಿಲೆಗಳು ಸಹ ಒಳಗೊಳ್ಳುವ 32 ರೋಗಗಳ ಪಟ್ಟಿಯಲ್ಲಿವೆ ಎಂದು ಬಹಿರಂಗಪಡಿಸುತ್ತದೆ. ವೈದ್ಯಕೀಯ ವರದಿಗಳು ಮತ್ತು ರೋಗನಿರ್ಣಯ ದಾಖಲೆಗಳು ಈ ವಿಷಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪಾಲಿಸಿ ನಿಯಮಗಳು ಮತ್ತು ವೈದ್ಯಕೀಯ ದಾಖಲೆಗಳು ಹೊಂದಿಕೆಯಾದರೆ,…

Read More

ಆನ್‌ ಲೈನ್ ಆಟಗಳಿಗೆ ವ್ಯಸನಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಆನ್‌ ಲೈನ್ ಆಟಗಳಲ್ಲಿ ಲಕ್ಷ ಕೋಟಿಗಳನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಅಂತಿಮವಾಗಿ ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೆಡ್ಚಲ್ ಜಿಲ್ಲೆಯ ಸೂರಾರಾಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 24 ವರ್ಷದ ರವೀಂದರ್ ಎಂಬ ಯುವಕ ಕೆಲವು ಸಮಯದಿಂದ ಆನ್‌ಲೈನ್ ಆಟಗಳಿಗೆ ವ್ಯಸನಿಯಾಗಿದ್ದ. ಹಣ ಕಳೆದುಕೊಂಡ ನಂತರ, ಸೆಲ್ಫಿ ವಿಡಿಯೋ ತೆಗೆದುಕೊಂಡು ನಂತರ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೂರಾರಾಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆನ್‌ಲೈನ್ ಆಟಗಳಿಗೆ ವ್ಯಸನಿಯಾಗಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಸ್ಥಳೀಯವಾಗಿ ಸಂಚಲನ ಮೂಡಿಸಿದೆ. ಸೂರಾರಾಮ್ ಪೊಲೀಸರ ಪ್ರಕಾರ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಸ್ಥಳೀಯ ನಿವಾಸಿ ರವೀಂದರ್ (24) ಕಡಿಮೆ ಸಮಯದಲ್ಲಿ ದೊಡ್ಡ ಮೊತ್ತದ ಹಣ ಗಳಿಸುವ ಉದ್ದೇಶದಿಂದ ಆನ್‌ಲೈನ್ ಆಟಗಳಿಗೆ ವ್ಯಸನಿಯಾಗಿದ್ದ. ದೊಡ್ಡ ಮೊತ್ತದ ಹಣಕ್ಕಾಗಿ ಹಲವು ಬಾರಿ ಮೋಸ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.…

Read More