Subscribe to Updates
Get the latest creative news from FooBar about art, design and business.
Author: kannadanewsnow09
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಚಳಿಗಾಯದಲ್ಲಿ ಅನೇಕ ಕಾಲೆಯೆಗಳು ಕಾಡುತ್ತವೆ. ಅದರಲ್ಲೂ ನೆಗಡಿ, ಕೆಮ್ಮು, ಕಫದಂತಹ ಸಮಸ್ಯೆಗಳು ಕಾಡಲು ಆರಂಭಿಸುತ್ತವೆ. ಕೆಲವರಿಗೆ ಕಫ ಬೇಗನೆ ವಾಸಿ ಆಗುವುದಿಲ್ಲ, ಇಂತಹ ಸಮಯದಲ್ಲಿ ಕೆಲವು ಮನೆಮದ್ದುಗಳು ಸಹಕಾರಿಯಾಗಿವೆ. ಈ ಮನೆಮದ್ದುಗಳು ನೈಸರ್ಗಿಕವಾಗಿ ಕಫದ ಸಮಸ್ಯೆಯನ್ನು ನಿವಾರಿಸುತ್ತದೆ. ಈ ಮನೆಮದ್ದುಗಳನ್ನು ಮಾಡುವುದರಿಂದ ರೋಗನಿರೋಧಕ ಶಕ್ತಿಯೂ ಬಲಗೊಳ್ಳುತ್ತದೆ. ಇಲ್ಲಿದೆ ಹೆಚ್ಚಿನ ಮಾಹಿತಿ. ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು ಕಫದ ಸಮಸ್ಯೆಯನ್ನು ಹೋಗಲಾಡಿಸಲು, ಒಂದು ಲೋಟ ಉಗುರುಬೆಚ್ಚನೆಯ ನೀರನ್ನು ತೆಗೆದುಕೊಳ್ಳಿ. ಅದರಲ್ಲಿ ಅರ್ಧ ಟೀಚಮಚ ಉಪ್ಪಿನೊಂದಿಗೆ ಗಾರ್ಗ್ಲ್ ಮಾಡಿ. ದಿನಕ್ಕೆ 2 ರಿಂದ 3 ಬಾರಿ ಬಾಯಿ ಮುಕ್ಕಳಿಸುವುದರಿಂದ ಕಫ ದೂರವಾಗುತ್ತದೆ. ಕೆಮ್ಮಿನ ಸಮಸ್ಯೆಯೂ ದೂರವಾಗುತ್ತದೆ. ಬೆಚ್ಚಗಿನ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ಸೋಂಕು ನಿವಾರಣೆಯಾಗುತ್ತದೆ. ಜೇನು ತುಪ್ಪ ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣಗಳು ಕಂಡುಬರುತ್ತವೆ. ಇದು ಕಫ ಮತ್ತು ಸೋಂಕನ್ನು ಗುಣಪಡಿಸುತ್ತದೆ. ಕಫ ಇರುವಾಗ ಜೇನುತುಪ್ಪವನ್ನು ಸೇವಿಸಬಹುದು. ಬಿಸಿ ನೀರು ಮತ್ತು ನಿಂಬೆ ಬೆಚ್ಚಗಿನ…
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದಂತ ಕನ್ನಡದ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಘೋಷಣೆಗೆ ಮುನ್ನವೇ ಮಾಹಿತಿ ಸೋರಿಕೆಯಾಗಿದೆ. ಸೋರಿಕೆಯಾದಂತ ಮಾಹಿತಿಯಂತೆ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಹನುಮಂತು ಗೆಲುವು ಸಾಧಿಸಿದ್ದಾರೆ. ಹೌದು. ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳ ಗೆಲುವಿನ ವಿಚಾರ ಘೋಷಣೆಗೆ ಮುನ್ನವೇ ವೈರಲ್ ಆಗಿದೆ. ಇದಕ್ಕಾಗಿ ಕ್ರಿಯೆಟ್ ಆಗಿರುವಂತ ಪೇಜ್ ನಲ್ಲಿ ಮೊದಲ ದಿನದಿಂದ ಹಿಡಿದು, ಇಲ್ಲಿಯವರೆಗೆ ಯಾರು ಎಲಿಮಿನೇಟ್ ಆದರು, ಯಾರೆಲ್ಲ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ರು ಎನ್ನುವ ಮಾಹಿತಿಯನ್ನು ದಾಖಲಿಸಲಾಗಿದೆ. ಇನ್ನೂ ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿಗಳಲ್ಲಿ ವಿನ್ನರ್ ಯಾರು ಅಂತ ಘೋಷಿಸೋ ಕೆಲವೇ ಗಂಟೆಗಳ ಮೊದಲೇ ವಿಕಿಪೀಡಿಯಾದಲ್ಲಿ ವಿನ್ನರ್ ಯಾರು ಎನ್ನುವುದನ್ನು ಅಪ್ ಡೇಟ್ ಮಾಡಲಾಗಿದೆ. ಅದರ ಮಾಹಿತಿ ಅನುಸಾರ ಹನುಮಂತು ಅವರು ಬಿಗ್ ಬಾಸ್ ಕನ್ನಡ 11ರ ವಿನ್ನರ್ ಎನ್ನುವಂತ ಮಾಹಿತಿಯನ್ನು ಬರೆಯಲಾಗಿದೆ. ಜೊತೆಗೆ ಮೋಕ್ಷಿತಾ ರನ್ನರ್ ಅಪ್, ನಾಲ್ಕನೇ ರನ್ನರ್ ಅಪ್ ಮಂಜು ಎಂಬುದಾಗಿ…
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕೆಲವೊಮ್ಮೆ ಕೈ ಜಾರಿ ಫೋನ್ ಗಳು ನೀರಿನಲ್ಲಿ ಬೀಳುತ್ತವೆ. ಇದರಿಂದ ಪೋನ್ ಹಾಳಾಗಬಹುದು, ಇಲ್ಲಿವೆ ಸಣ್ಣ-ಪುಣ್ಣ ಡ್ಯಾಮೇಜ್ ಆಗುವ ಸಾಧ್ಯತೆ ಇರುತ್ತದೆ. ಆದರೆ ನೀರಿನಲ್ಲಿ ಫೋನ್ ಬಿದ್ದಾಗ ಕೆಲವೊಂದು ಕೆಲಸಗಳನ್ನು ಮಾಡಬಾರದು. ಅವುಗಳ ಕುರಿತ ಮಾಹಿತಿ ಇಲ್ಲಿದೆ. ಫೋನ್ ಒದ್ದೆಯಾದಾಗ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ ಫೋನ್ನಲ್ಲಿ ಹೇರ್ ಡ್ರೈಯರ್ ಅನ್ನು ಬಳಸಬೇಡಿ ಅನೇಕ ಜನರು ತಮ್ಮ ಫೋನ್ ಒದ್ದೆಯಾದಾಗ ಹೇರ್ ಡ್ರೈಯರ್ನಿಂದ ಒಣಗಿಸಲು ಪ್ರಾರಂಭಿಸುತ್ತಾರೆ. ಆದರೆ ಹೇರ್ ಡ್ರೈಯರ್ನಿಂದ ಹೊರಬರುವ ಗಾಳಿಯು ತುಂಬಾ ಬಿಸಿಯಾಗಿರುತ್ತದೆ, ಇದು ಫೋನ್ ಸೂಕ್ಷ್ಮ ಎಲೆಕ್ಟ್ರಾನಿಕ್ ಭಾಗವನ್ನು ಸುಲಭವಾಗಿ ಹಾನಿಗೊಳಿಸುತ್ತದೆ. ಫೋನ್ ಬಿದ್ದ ನಂತರ ಅದನ್ನು ಚಾರ್ಜ್ ಮಾಡಬೇಡಿ ನೀರಿನಲ್ಲಿ ಬೀಳುವ ಕಾರಣ ನಿಮ್ಮ ಫೋನ್ ಆಫ್ ಆಗಿರುವಾಗ ಮತ್ತು ಆನ್ ಮಾಡಲು ಸಾಧ್ಯವಾಗದಿದ್ದರೆ, ನಂತರ ಚಾರ್ಜರ್ ಅನ್ನು ಬಳಸಬೇಡಿ. ಫೋನ್ ಎಲ್ಲಾ ಭಾಗಗಳು ಒದ್ದೆಯಾಗಿದ್ದು, ಅಂತಹ ಪರಿಸ್ಥಿತಿಯಲ್ಲಿ ಚಾರ್ಜ್ ಆಗುವುದರಿಂದ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಒದ್ದೆಯಾದ…
ಬೆಂಗಳೂರು: ನಿರ್ದೇಶಕರೊಬ್ಬರಿಗೆ ಬ್ಲಾಕ್ ಮೇಲ್ ಮಾಡಿ, ಮದುವೆಯಾಗಿ ಕಿರುಕುಳ ನೀಡುತ್ತಿರುವ ಆರೋಪದಡಿ ಕನ್ನಡದ ಖ್ಯಾತ ಕಿರುತೆರೆ ಹಿರಿಯ ನಟಿ ಶಶಿಕಲಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಜಾರಾಜ್ಯ ಚಿತ್ರದ ನಿರ್ದೇಶಕ ಹರ್ಷವರ್ಧನ್ ಅವರು ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ತೆರಳಿ ಬ್ಲಾಕ್ ಮೇಲ್ ಮಾಡಿ ಮದುವೆಯಾಗಿದ್ದು, ದೂರವಿದ್ದರೂ ಕೂಡ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂಬುದಾಗಿ ನಟಿ ಶಶಿಕಲಾ ವಿರುದ್ಧ ದೂರು ನೀಡಿದ್ದಾರೆ. ನನ್ನನ್ನು ಸಿನಿಮಾಗೆ ಹಣ ಹೂಡಿಕೆ ಮಾಡೋದಾಗಿ ನಂಬಿಸಿ ಮದುವೆಯಾದರು. ಆ ಬಳಿಕ ಯಾವುದಾದರೂ ವಿಚಾರಕ್ಕೆ ಪ್ರಶ್ನೆ ಮಾಡಿದ್ರೇ ನನಗೆ ಕಿರುಕುಳ ನೀಡುತ್ತಿದ್ದರು ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಿರ್ದೇಶಕರ ಹರ್ಷವರ್ಧನ್ ದೂರಿನ ಅನ್ವಯ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕನ್ನಡದ ಕಿರುತೆರೆ ಹಿರಿಯ ನಟಿ ಶಶಿಕಲಾ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. https://kannadanewsnow.com/kannada/my-candidature-for-bjp-state-presidents-post-is-certain-victory-is-certain-mla-basanagouda-patil-yatnal/ https://kannadanewsnow.com/kannada/appeal-for-help-of-journalist-hospitalised-due-to-illness/
ವಿಜಯಪುರ: ನಾನು ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ಸ್ಪರ್ಧಿಸಲು ಸಿದ್ಧನಿದ್ದೇನೆ. ನನ್ನ ಸ್ಪರ್ಧೆ ಖಚಿತವಾಗಿದ್ದು, ಗೆಲುವು ಕೂಡ ಅಷ್ಟೇ ನಿಶ್ಚಿತವಾಗಿದೆ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನನ್ನ ಹೆಸರು ಬಿಜೆಪಿ ನಿಷ್ಠಾವಂತರ ಗುಂಪಿನ ಕೋರ್ ಕಮಿಟಿಯಲ್ಲಿ ಅಂತಿಮ ಆದ್ರೆ ಸ್ಪರ್ಧಿಸೋದು ಖಚಿತವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾನು ರೆಡಿ ಎಂಬುದಾಗಿ ತಿಳಿಸಿದರು. ನಾನು ಬಿಜೆಪಿ ಉಸ್ತುವಾರಿ ಸಭೆಗೆ ಹೋಗಿಲ್ಲ. ಅಲ್ಲಿ 600 ಶಾಸಕರ ಬೆಂಬಲ ಇದೆ. ಅಲ್ಲಿಗೆ ನಮಗೇನು ಕೆಲಸ. 600 ಶಾಸಕರು, 1,500 ಸಂಸದರು, 2000 ಎಂಎಲ್ಸಿಗಳ ಬೆಂಬಲ ಇದೆ ಎಂಬುದಾಗಿ ವ್ಯಂಗ್ಯವಾಡಿದರು. ನಾನು ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ಸ್ಪರ್ಧಿಸೋದು ಖಚಿತ. ಅಷ್ಟೇ ಅಲ್ಲದೇ ನಾನು ಸ್ಪರ್ಧಿಸಿ ಗೆಲುವು ಕೂಡ ಸಾಧಿಸಲಿದ್ದೇನೆ ಎಂಬುದಾಗಿ ವಿಶ್ವಾಸ ವ್ಯಕ್ತ ಪಡಿಸಿದರು. https://kannadanewsnow.com/kannada/five-injured-in-another-fatal-accident-in-kerala/ https://kannadanewsnow.com/kannada/appeal-for-help-of-journalist-hospitalised-due-to-illness/
ಚಿಕ್ಕಮಗಳೂರು: ಬಸ್ಸಿನ ಸ್ಟೇರಿಂಗ್ ಕಟ್ ಆಗಿ ಉಂಟಾದಂತ ಪಲ್ಟಿಯಲ್ಲಿ ಐವರು ಗಂಭೀರವಾಗಿ ಗಾಯಗೊಂಡು, ಇತರರಿಗೆ ಸಣ್ಣಪುಟ್ಟ ಗಾಯವಾಗಿರುವಂತ ಘಟನೆ ಚಿಕ್ಕಮಗಳೂರಿನ ಬಿದರಹಳ್ಳಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಬಿದರಹಳ್ಳಿಯಲ್ಲಿ ಮೈಸೂರಿನ ಅಪೊಲೋ ಆಸ್ಪತ್ರೆಯ ಸಿಬ್ಬಂದಿ ಧರ್ಮಸ್ಥಳಕ್ಕೆ ಬಸ್ಸಿನಲ್ಲಿ ಪ್ರವಾಸಕ್ಕೆ ತೆರಳಿದ್ದಾಗ, ಬಸ್ ಸ್ಟೇರಿಂಗ್ ಕಟ್ ಆಗಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಐವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಮೈಸೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಇನ್ನೂ ಸಣ್ಣಪುಟ್ಟ ಗಾಯವಾಗಿದ್ದಂತ ಇತರರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/housewives-beware-do-not-put-these-ingredients-in-a-mixer-and-grind-them/ https://kannadanewsnow.com/kannada/appeal-for-help-of-journalist-hospitalised-due-to-illness/
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮಿಕ್ಸಿಯು ಮನೆಯ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಉಪಕರಣವಾಗಿದೆ. ಈ ಉಪಕರಣವಿಲ್ಲದೆ ಯಾವುದೇ ಕೆಲಸ ಮಾಡಲಾಗುವುದಿಲ್ಲ. ಅಷ್ಟರಮಟ್ಟಿಗೆ, ಮಿಕ್ಸಿಯು ಅಡುಗೆಮನೆಯಲ್ಲಿ ಬಹಳ ಪ್ರಮುಖ ಸ್ಥಾನವನ್ನು ಹೊಂದಿದೆ. ಈ ಮಿಕ್ಸಿ ಅನೇಕ ಕಾರ್ಯಗಳನ್ನು ಬಹಳ ಸುಲಭವಾಗಿ ಪೂರ್ಣಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯ ಅಡುಗೆಮನೆಯಲ್ಲಿ ಸ್ಥಾನವನ್ನು ಕಂಡುಕೊಂಡಿದೆ. ಪ್ರಾಚೀನ ಕಾಲದಲ್ಲಿ, ಈ ರೀತಿಯ ಯಾವುದೇ ವಿಷಯವಿರಲಿಲ್ಲ. ಏಕೆಂದರೆ ಆ ದಿನಗಳಲ್ಲಿ ಎಲ್ಲಾ ಪದಾರ್ಥಗಳನ್ನು ರುಬ್ಬಲು ಅರೆಯುವ ಕಲ್ಲಿನಲ್ಲಿ ಬಳಸಲಾಗುತ್ತಿತ್ತು. ಕಲ್ಲಿನಲ್ಲಿ ಅರೆದ ಎಲ್ಲಾ ಆಹಾರಗಳು ತುಂಬಾ ರುಚಿಕರವಾಗಿವೆ. ಅಲ್ಲದೆ, ಇದು ಆರೋಗ್ಯಕರವೂ ಹೌದು. ಇದನ್ನು ಅರೆಯಲು ಸ್ವಲ್ಪ ಹೆಚ್ಚು ಸಮಯವಿದೆ. ಆದರೆ ಇಂದಿನ ಪೀಳಿಗೆಯೂ ಮಿಕ್ಸಿ ಬಹುಬೇಗನೆ ಕೆಲಸ ಮಾಡೋದಕ್ಕೆ ಸಾಧ್ಯವೆಂದು ಕೊಂಡು ಹೆಚ್ಚಿನ ಜನರು ಬಳಸುತ್ತಾರೆ ಎಲ್ಲಾ ದೇಶಗಳಲ್ಲಿ ಮಿಕ್ಸಿಯ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಿಕ್ಸಿ ಅಡುಗೆಮನೆಯ ಪ್ರಮುಖ ಭಾಗವಾಗಿದೆ. ಆದಾಗ್ಯೂ, ಕೆಲವು ಪದಾರ್ಥಗಳನ್ನು ಮಾತ್ರ ಮಿಕ್ಸರ್ ನಲ್ಲಿ ಹಾಕಿ ರುಬ್ಬಬಾರದು ಎಂಬುವುದನ್ನು ಗೃಹಿಣಿಯರು ಎಚ್ಚರವಹಿಸಬೇಕಾಗಿದೆ…
ಚೀನಾದ ಮೊದಲ ಕಾರ್ಗಿ ಪೊಲೀಸ್ ನಾಯಿ ಫುಜೈ ಅಸಾಂಪ್ರದಾಯಿಕ ನಡವಳಿಕೆಯಿಂದಾಗಿ ವರ್ಷಾಂತ್ಯದ ಬೋನಸ್ ಕಳೆದುಕೊಂಡ ನಂತರ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ. ವಿಶಿಷ್ಟ ಮೋಡಿಗೆ ಹೆಸರುವಾಸಿಯಾದ ಶ್ವಾನ ಅಧಿಕಾರಿಗೆ ಕರ್ತವ್ಯದ ಸಮಯದಲ್ಲಿ ನಿದ್ರೆಗೆ ಜಾರಿದ್ದಕ್ಕಾಗಿ ಮತ್ತು ಅದರ ಆಹಾರದ ಬಟ್ಟಲಿನಲ್ಲಿ ಮೂತ್ರ ವಿಸರ್ಜನೆಯ ಅಸಾಮಾನ್ಯ ವರ್ತನೆಗಾಗಿ ದಂಡ ವಿಧಿಸಲಾಗಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಆಗಸ್ಟ್ 28, 2023 ರಂದು ಜನಿಸಿದ ಫುಜೈ, 2024 ರ ಜನವರಿಯಲ್ಲಿ ಶಾಂಡೊಂಗ್ ಪ್ರಾಂತ್ಯದ ವೀಫಾಂಗ್ನಲ್ಲಿರುವ ಪೊಲೀಸ್ ಶ್ವಾನ ತರಬೇತಿ ನೆಲೆಗೆ ನಾಲ್ಕು ತಿಂಗಳ ಮೀಸಲು ಸ್ಫೋಟಕ ಪತ್ತೆ ಕಾರ್ಯಾಚರಣೆಯಾಗಿ ಸೇರಿದರು. ಮಾರ್ಚ್ ವೇಳೆಗೆ, ಸಣ್ಣ ಕಾಲಿನ ನಾಯಿ ತನ್ನ ಪ್ರೀತಿಯ ನಗು ಮತ್ತು ಪ್ರಭಾವಶಾಲಿ ಪತ್ತೆ ಕೌಶಲ್ಯಗಳಿಂದಾಗಿ ಇಂಟರ್ನೆಟ್ ಸೆನ್ಸೇಷನ್ ಆಗಿ ಮಾರ್ಪಟ್ಟಿತು. ಚಾಂಗ್ಲೆ ಕೌಂಟಿ ಪಬ್ಲಿಕ್ ಸೆಕ್ಯುರಿಟಿ ಬ್ಯೂರೋದ ತರಬೇತುದಾರ ಜಾವೋ ಕ್ವಿಂಗ್ಶುವೈ ಅವರು ಕೇವಲ ಎರಡು ತಿಂಗಳ ಮಗುವಾಗಿದ್ದಾಗ ಉದ್ಯಾನವನದಲ್ಲಿ ಅದರ ಸಾಮರ್ಥ್ಯವನ್ನು ಗುರುತಿಸಿದ ನಂತರ ಫುಜೈ…
ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: 2025ರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ಜಾನಿಕ್ ಸಿನ್ನರ್ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಅವರನ್ನು ಸತತ ಮೂರು ಸೆಟ್ಗಳಲ್ಲಿ ಮಣಿಸಿ ಪ್ರಶಸ್ತಿ ಜಯಿಸಿದ್ದಾರೆ. ಜರ್ಮನ್ ಆಟಗಾರ್ತಿಯ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಸಿನ್ನರ್ ಝ್ವೆರೆವ್ ಅವರನ್ನು 6-3, 7-6 (7-4), 6-3 ಸೆಟ್ ಗಳಿಂದ ಸೋಲಿಸಿ ಯಶಸ್ವಿ ಪ್ರಶಸ್ತಿ ರಕ್ಷಣೆಯನ್ನು ಖಚಿತಪಡಿಸಿದರು. ಈ ಗೆಲುವಿನೊಂದಿಗೆ, ಸಿನ್ನರ್ ಕಳೆದ ವರ್ಷ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ ಮೊದಲ ಗೆಲುವಿನ ನಂತರ ಮೂರನೇ ಗ್ರ್ಯಾಂಡ್ ಸ್ಲಾಮ್ ಕಿರೀಟ ಮತ್ತು ಆಸ್ಟ್ರೇಲಿಯನ್ ಓಪನ್ ನಲ್ಲಿ ಎರಡನೇ ಸ್ಥಾನವನ್ನು ಪಡೆದರು. ಆಂಡ್ರೆ ಅಗಾಸ್ಸಿ, ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಕ್ ಈ ಶತಮಾನದ ಆರಂಭದಿಂದ ರಾಡ್ ಲೇವರ್ ಅರೆನಾದಲ್ಲಿ ಈ ಸಾಧನೆ ಮಾಡಿದ್ದಾರೆ. https://kannadanewsnow.com/kannada/the-raj-bhavan-in-bengaluru-will-be-open-for-public-viewing-today-tomorrow/ https://kannadanewsnow.com/kannada/appeal-for-help-of-journalist-hospitalised-due-to-illness/
ಬೆಂಗಳೂರು: 76ನೇ ಗಣರಾಜ್ಯೋತ್ಸವದ ನಿಮಿತ್ತ ದಿನಾಂಕ 26 ಮತ್ತು 27 ಜನವರಿ ರಂದು ರಾಜಭವನಕ್ಕೆ ಸಾರ್ವಜನಿಕರ ಪ್ರವೇಶವನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ಮುಖ್ಯದ್ವಾರದ ಮೂಲಕ ಉಚಿತ ಪ್ರವೇಶ ಪಡೆಯಬಹುದಾಗಿದೆ. ರಾಜಭವನ ಪ್ರವೇಶ ಪಡೆಯಲಿಚ್ಚಿಸುವವರು ಆಧಾರ್ ಕಾರ್ಡ್ ಅಥವಾ ಭಾವಚಿತ್ರವಿರುವ ಅಧಿಕೃತ ಗುರುತಿನ ಚೀಟಿಯನ್ನು ಹಾಜರುಪಡಿಸತಕ್ಕದ್ದು. ಪ್ರವೇಶದ ಸಮಯ: ಸಂಜೆ 6 ರಿಂದ 7.30 ಸಾರ್ವಜನಿಕರು ಯಾವುದೇ ರೀತಿಯ ಕ್ಯಾಮರಾ, ಕೈ ಚೀಲ, ಚೂಪಾದ ವಸ್ತುಗಳು, ತಿಂಡಿ-ತಿನಿಸು, ಪ್ಲಾಸ್ಟಿಕ್ ವಸ್ತುಗಳು ಇನ್ನಿತರ ಯಾವುದೇ ಲಗೇಜ್ ಬ್ಯಾಗ್ ತರುವಂತಿಲ್ಲ. ರಾಜಭವನದ ಒಳಗಡೆ ವಾಹನ ನಿಲುಗಡೆಗೆ ಅವಕಾಶವಿರುವುದಿಲ್ಲ. ಸಾರ್ವಜನಿಕರು ಭದ್ರತಾ ಸಿಬ್ಬಂದಿಗಳು ನೀಡುವ ಸೂಚನೆಗಳನ್ನು ಪಾಲಿಸಿ, ಸಹಕರಿಸಬೇಕಾಗಿ ಕೋರಿದೆ ಎಂದು ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಅವರು ಪ್ರಕಟಣೆಲ್ಲಿ ತಿಳಿಸಿದ್ದಾರೆ. https://kannadanewsnow.com/kannada/do-not-use-these-items-obtained-from-others-at-home-this-guarantees-financial-loss/ https://kannadanewsnow.com/kannada/appeal-for-help-of-journalist-hospitalised-due-to-illness/









