Subscribe to Updates
Get the latest creative news from FooBar about art, design and business.
Author: kannadanewsnow09
ಚಿಕ್ಕಮಗಳೂರು: ದತ್ತಮಾಲಾ ಅಭಿಯಾನವನ್ನು ನಡೆಸುತ್ತಿರುವ ಹಿನ್ನಲೆಯಲ್ಲಿ ನವೆಂಬರ್.9ರಿದಂ 11ರವರೆಗೆ ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣಗಳಾದಂತ ಮುಳ್ಳಯ್ಯನಗಿರಿ, ಮಾಣಿಕ್ಯಧಾರಾ, ಸೀತಾಳಯ್ಯನಗಿರಿ, ಗಾಳಿಕೆರೆ ಸೇರಿದಂತೆ ಚಂದ್ರದ್ರೋಣ ಪರ್ವತ ಶ್ರೇಣಿಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶಿಸಿದೆ. ಈ ಸಂಬಂಧ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ದತ್ತ ಮಾಲಾಧಾರಿಗಳು 7 ದಿನಗಳ ಕಾಲ ವ್ರತ ಮಾಡಿ, ನವೆಂಬರ್.1ರಂದು ದತ್ತ ಪೀಠಕ್ಕೆ ಆಗಮಿಸುತ್ತಾರೆ. ಈ ಕಾರಣದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನವೆಂಬರ್.9ರ ಬೆಳಿಗ್ಗೆ 6ರಿಂದ ನವೆಂಬರ್.11ರ ಬೆಳಿಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ನವೆಂಬರ್.10ರಂದು ದತ್ತಪೀಠದಲ್ಲಿ ದತ್ತಮಾಲಾಧಾರಿಗಳಿಂದ ವಿಶೇಷ ಪೂಜೆ, ಹೋಮ ಹವನದಂತ ಕೈಂಕರ್ಯಗಳು ನಡೆಸಲಾಗುತ್ತಿದೆ. ಈ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ ಹಾಗೂ ಗಾಳಿಕೆರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಿ ಆದೇಶಿಸಲಾಗಿದೆ. https://kannadanewsnow.com/kannada/breaking-lineman-dies-due-to-electrocution-in-tumkur/ https://kannadanewsnow.com/kannada/state-excise-department-to-go-on-strike-to-protest-corruption-liquor-sale-to-be-closed-across-the-state-on-november-20/ https://kannadanewsnow.com/kannada/when-will-the-results-of-the-2024-us-elections-be-announced-heres-the-complete-information/
ಬೆಂಗಳೂರು: ರಾಜ್ಯದ ಅಬಕಾರಿ ಇಲಾಖೆಯ ಭ್ರಷ್ಟಾಚಾರದ ವಿರುದ್ಧ ಸನ್ನದ್ದು ಮಾಲೀಕರು ಸಿಡಿದೆದ್ದಿದ್ದಾರೆ. ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನವೆಂಬರ್.20ರಂದು ರಾಜ್ಯಾಧ್ಯಂತ ಮದ್ಯ ಮಾರಾಟ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಅಬಕಾರಿ ಇಲಾಖೆಗೆ ಮಂತ್ರಿ ಬೇಕಾಗಿಲ್ಲ ಎಂಬುದಾಗಿ ಒತ್ತಾಯಿಸಿ ನವೆಂಬರ್.20ರಂದು ರಾಜ್ಯಾಧ್ಯಂತ ಮದ್ಯ ಮಾರಾಟ ಬಂದ್ ಮಾಡಿ ಪ್ರತಿಭಟನೆಯನ್ನು ಮದ್ಯ ಮಾರಾಟಗಾರರು ನಡೆಸಲಿದ್ದಾರೆ. ಅಲ್ಲದೇ ಹಣಕಾಸು ಸಚಿವರಿಗೆ ಅಬಕಾರಿ ಇಲಾಖೆಯ ಹೊಣೆ ನೀಡುವಂತೆಯೂ ಒತ್ತಾಯಿಸಲಾಗುತ್ತಿದೆ. ವರ್ಗಾವಣೆ, ಪ್ರಮೋಷನ್ ಗೆ ಕೋಟಿ ಕೋಟಿ ಲಂಚ ನೀಡಬೇಕು. ಹೀಗಾಗಿ ಸನ್ನದುದಾರರಿಂದ ಮನಸೋ ಇಚ್ಛೆ ಲಂಚವನ್ನು ಸ್ವೀಕರಿಸುತ್ತಿದ್ದಾರೆ. ಇಂತಹ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದಾಗಿಯೂ ಆಗ್ರಹಿಸಲಿದ್ದಾರೆ. ಅಬಕಾರಿ ಇಲಾಖೆಯ ಲಂಚಾವತಾರದಿಂದ ನಕಲಿ ಅಂತರರಾಜ್ಯ ಮದ್ಯ ಹೆಚ್ಚಳವಾಗಿದೆ. ರಾಜ್ಯ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದನ್ನು ನಿಲ್ಲಿಸುವಂತೆ ಆಗ್ರಹಿಸಿ ನವೆಂಬರ್.20ರಂದು ರಾಜ್ಯಾಧ್ಯಂತ ಮದ್ಯ ಮಾರಾಟ ಬಂದ್ ಮಾಡಿ ಸನ್ನದು ಮಾಲೀಕರು ಮುಷ್ಕರ ನಡೆಸಲಿದ್ದಾರೆ. https://kannadanewsnow.com/kannada/breaking-lineman-dies-due-to-electrocution-in-tumkur/ https://kannadanewsnow.com/kannada/when-will-the-results-of-the-2024-us-elections-be-announced-heres-the-complete-information/
ಬೆಂಗಳೂರು: ರಾಜ್ಯದಲ್ಲಿ ಮದ್ಯ ಮಾರಾಟಗಾರರು ಅಬಕಾರಿ ಇಲಾಖೆಯ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿದ್ದಾರೆ. ನವೆಂಬರ್.20ರಂದು ರಾಜ್ಯಾಧ್ಯಂತ ಮದ್ಯ ಮಾರಾಟವನ್ನು ಬಂದ್ ಮಾಡಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಈ ಬಗ್ಗೆ ಮದ್ಯ ಮಾರಾಟಗಾರರ ಸಂಘದಿಂದ ಮಾಹಿತಿ ನೀಡಲಾಗಿದ್ದು, ಅಬಕಾರಿ ಇಲಾಖೆಯ ಭ್ರಷ್ಟಾಚಾರ, ಅಬಕಾರಿ ಇಲಾಖೆಯ ಅಧಿಕಾರಿಗಳ ಕಿರುಕುಳವನ್ನು ವಿರೋಧಿಸಿ ನವೆಂಬರ್.20ರಂದು ರಾಜ್ಯಾಧ್ಯಂತ ಮದ್ಯ ಮಾರಾಟ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದೆ. ನವೆಂಬರ್.20ರಂದು ರಾಜ್ಯಾಧ್ಯಂತ ಮದ್ಯ ಮಾರಾಟ ಬಂದ್ ಮಾಡಿ ಮದ್ಯದಂಗಡಿಯ ಮಾಲೀಕರು ಪ್ರತಿಭಟನೆಗೆ ಇಳಿಯಲಿದ್ದಾರೆ. ಅದು ಬಹುತೇಕವಾಗಿ ಎಣ್ಣೆಪ್ರಿಯರಿಗೆ ಮದ್ಯ ಸಿಗೋದು ಡೌಟ್ ಎನ್ನಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ. https://kannadanewsnow.com/kannada/breaking-lineman-dies-due-to-electrocution-in-tumkur/ https://kannadanewsnow.com/kannada/when-will-the-results-of-the-2024-us-elections-be-announced-heres-the-complete-information/
ಅಮೇರಿಕಾ: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಕಮಲಾ ಹ್ಯಾರಿಸ್ ನಡುವೆ ತೀವ್ರ ಸ್ಪರ್ಧೆ ಕಂಡ ಚುನಾವಣೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಮತ ಚಲಾಯಿಸುವುದರೊಂದಿಗೆ, ಈಗ ಎಲ್ಲರ ಕಣ್ಣುಗಳು ಫಲಿತಾಂಶಗಳ ಮೇಲೆ ನೆಟ್ಟಿವೆ. ಹಾಗಾದ್ರೆ ಅಮೇರಿಕಾ 2024ರ ಚುನಾವಣೆಯ ಫಲಿತಾಂಶ ಯಾವಾಗ ಪ್ರಕಟ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಮುಂದೆ ಓದಿ. ಈ ವರ್ಷದ ಸೆಪ್ಟೆಂಬರ್ ನಲ್ಲೇ ಅಮೆರಿಕದಲ್ಲಿ ಮತದಾನ ಆರಂಭವಾಗಿತ್ತು. ದೇಶಾದ್ಯಂತ ಈಗಾಗಲೇ 74 ದಶಲಕ್ಷಕ್ಕೂ ಹೆಚ್ಚು ಮತಗಳು ಚಲಾವಣೆಯಾಗಿವೆ – 2020 ರಲ್ಲಿ ಚಲಾವಣೆಯಾದ ಒಟ್ಟು ಮತಗಳ ಅರ್ಧದಷ್ಟು – ಮೇಲ್-ಇನ್ ಮತಪತ್ರಗಳು ಅಥವಾ ಆರಂಭಿಕ ವೈಯಕ್ತಿಕ ಮತದಾನದ ರೂಪದಲ್ಲಿ. ಭಾನುವಾರದ ರಾಷ್ಟ್ರೀಯ ಮತದಾನದ ಸರಾಸರಿಯಲ್ಲಿ, ಹ್ಯಾರಿಸ್ ಟ್ರಂಪ್ಗಿಂತ ಸ್ವಲ್ಪ ಮೇಲುಗೈ ಸಾಧಿಸಿದ್ದಾರೆ. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಮಹಿಳಾ ಮತದಾರರಲ್ಲಿ ಹ್ಯಾರಿಸ್ ಬಲವಾದ ಬೆಂಬಲದಿಂದ ಬಲಗೊಂಡರೆ, ಟ್ರಂಪ್ ಹಿಸ್ಪಾನಿಕ್ ಮತದಾರರೊಂದಿಗೆ, ವಿಶೇಷವಾಗಿ ಪುರುಷರೊಂದಿಗೆ ನೆಲೆ ಕಂಡುಕೊಂಡಿದ್ದಾರೆ. ಮತದಾನ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ? ಮಂಗಳವಾರ, ಹೆಚ್ಚಿನ ರಾಜ್ಯಗಳು…
ನವದೆಹಲಿ: 2036 ರಲ್ಲಿ ಭಾರತದಲ್ಲಿ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟವನ್ನು ( Olympic and Paralympic Games in India in 2036 ) ಆಯೋಜಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ಮಹತ್ವದ ಹೆಜ್ಜೆಯಲ್ಲಿ, ಭಾರತೀಯ ಒಲಿಂಪಿಕ್ ಸಂಸ್ಥೆ ( Indian Olympic Association – IOA) ಅಧಿಕೃತವಾಗಿ ರಾಷ್ಟ್ರದ ಆಸಕ್ತಿಯನ್ನು ವ್ಯಕ್ತಪಡಿಸಿದೆ. ಐಒಎ ಅಕ್ಟೋಬರ್ 1 ರಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ( International Olympic Committee’s – IOC) ಭವಿಷ್ಯದ ಆತಿಥೇಯ ಆಯೋಗಕ್ಕೆ ಉದ್ದೇಶಿತ ಪತ್ರವನ್ನು ಸಲ್ಲಿಸಿದ್ದು, ಈ ಪ್ರತಿಷ್ಠಿತ ಜಾಗತಿಕ ಕ್ರೀಡಾಕೂಟಕ್ಕೆ ಭಾರತದ ಔಪಚಾರಿಕ ಬಿಡ್ ಅನ್ನು ಗುರುತಿಸಿದೆ. “ಈ ಸ್ಮರಣೀಯ ಅವಕಾಶವು ಗಣನೀಯ ಪ್ರಯೋಜನಗಳನ್ನು ತರುತ್ತದೆ, ದೇಶಾದ್ಯಂತ ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ ಮತ್ತು ಯುವ ಸಬಲೀಕರಣವನ್ನು ಉತ್ತೇಜಿಸುತ್ತದೆ” ಎಂದು ಮೂಲಗಳು ಇಂಡಿಯಾ ಟುಡೇಗೆ ದೃಢಪಡಿಸಿವೆ. ಅಮೆರಿಕದ ಲಾಸ್ ಏಂಜಲೀಸ್ 2028ರ ಬೇಸಿಗೆ ಒಲಿಂಪಿಕ್ಸ್ ಆತಿಥ್ಯ ವಹಿಸಲಿದ್ದು, ಆಸ್ಟ್ರೇಲಿಯಾದ ಬ್ರಿಸ್ಬೇನ್ 2032ರ ಒಲಿಂಪಿಕ್ಸ್ ಆತಿಥ್ಯ…
ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಪ್ಯಾರಿಸ್ನಲ್ಲಿ ನಡೆದ 2024 ರ ಬೇಸಿಗೆ ಒಲಿಂಪಿಕ್ಸ್ನಲ್ಲಿ ಮಹಿಳಾ ಬಾಕ್ಸಿಂಗ್ನಲ್ಲಿ ಚಿನ್ನ ಗೆದ್ದ ಅಲ್ಜೀರಿಯಾದ ಬಾಕ್ಸರ್, ತಿಂಗಳುಗಳ ಹಿಂದೆ ಬಿಸಿಯಾದ ಲಿಂಗ ಚರ್ಚೆಯನ್ನು ಹುಟ್ಟುಹಾಕಿದ ನಂತರ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಖೇಲಿಫ್ 5-ಆಲ್ಫಾ ರಿಡಕ್ಟೇಸ್ ಕೊರತೆ ಎಂದು ಕರೆಯಲ್ಪಡುವ ಸ್ಥಿತಿಯನ್ನು ಹೊಂದಿರಬಹುದು ಎಂದು ಸೂಚಿಸುವ ವೈದ್ಯಕೀಯ ವರದಿ ಸೋರಿಕೆಯಾದ ನಂತರ ವಿವಾದ ಭುಗಿಲೆದ್ದಿದೆ. ಈ ಬಹಿರಂಗಪಡಿಸುವಿಕೆಯು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಸ್ಪರ್ಧೆಯಿಂದ ಅನ್ಯಾಯವಾಗಿದೆ ಎಂದು ಭಾವಿಸುವವರಿಂದ ನ್ಯಾಯಕ್ಕಾಗಿ ಕರೆಗಳನ್ನು ತೀವ್ರಗೊಳಿಸಿದೆ. ಜೈವಿಕ ಪುರುಷರಲ್ಲಿ ಲೈಂಗಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಅಪರೂಪದ ಆನುವಂಶಿಕ ಅಸ್ವಸ್ಥತೆಯಾಗಿ, ಈ ಪರಿಸ್ಥಿತಿಯು ಮಹಿಳಾ ಕ್ರೀಡೆಗಳಲ್ಲಿ ಲಿಂಗ ಗುರುತಿಸುವಿಕೆ ಮತ್ತು ನ್ಯಾಯಸಮ್ಮತತೆಯ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. 5-ಆಲ್ಫಾ ರಿಡಕ್ಟೇಸ್ ಕೊರತೆ ಎಂದರೇನು? ಫ್ರೆಂಚ್ ಪತ್ರಕರ್ತ ಜಾಫರ್ ಐಟ್ ಔಡಿಯಾ ಪಡೆದ ಈ ದಾಖಲೆಯು ಖೇಲಿಫ್ ಆಂತರಿಕ ವೃಷಣಗಳು ಮತ್ತು ಎಕ್ಸ್ವೈ ಕ್ರೋಮೋಸೋಮ್ಗಳನ್ನು ಹೊಂದಿದೆ ಮತ್ತು ‘ಗರ್ಭಾಶಯವಿಲ್ಲ’ ಎಂದು ಸೂಚಿಸುತ್ತದೆ. 5-ಆಲ್ಫಾ ರಿಡಕ್ಟೇಸ್…
ಬೆಂಗಳೂರು: ವಕ್ಫ್ ವಿವಾದ ಕರ್ನಾಟಕದಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ರೈತರಿಗೆ ವಕ್ಫ್ ನೀಡಿರುವಂತ ನೋಟಿಸ್ ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಈ ನಡುವೆ JPC ಅಧ್ಯಕ್ಷರು ನವೆಂಬರ್.7ರಂದು ಹುಬ್ಬಳ್ಳಿ, ವಿಜಯಪುರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ರೈತರೊಂದಿಗೆ ಸಂವಾದ ನಡೆಸಿ, ಅವರ ಅಹವಾಲು ಸ್ವೀಕರಿಸಲಿದ್ದಾರೆ ಎಂಬುದಾಗಿ ಸಂಸದ ತೇಜಸ್ವಿ ಸೂರ್ಯ ಮಾಹಿತಿ ಹಂಚಿಕೊಂಡಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಅವರು, ನವೆಂಬರ್ 7 ರಂದು ಹುಬ್ಬಳ್ಳಿ ಮತ್ತು ಬಿಜಾಪುರಕ್ಕೆ ಭೇಟಿ ನೀಡಿ ವಕ್ಫ್ನ ಲೂಟಿಕೋರ ಕ್ರಮದಿಂದ ಬಾಧಿತರಾದ ರೈತರೊಂದಿಗೆ ಸಂವಾದ ನಡೆಸಲು ನಾನು ಮಾಡಿದ ಮನವಿಗೆ ವಕ್ಫ್ ಕುರಿತ ಜೆಪಿಸಿ ಅಧ್ಯಕ್ಷರು ಸಮ್ಮತಿಸಿದ್ದಾರೆ ಎಂದು ತಿಳಿಸಿದ್ದಾರೆ. ಅಧ್ಯಕ್ಷರು ರೈತ ಸಂಘಟನೆಗಳು, ಮಠಗಳೊಂದಿಗೆ ಸಂವಾದ ನಡೆಸುತ್ತೇನೆ. ಅವರು ನೀಡುವಂತ ಮನವಿಗಳನ್ನು ಜೆಪಿಸಿ ಮುಂದೆ ಇಡಲಾಗುವುದು ಎಂಬುದಾಗಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. https://twitter.com/Tejasvi_Surya/status/1853697465297383506 https://kannadanewsnow.com/kannada/another-big-scam-in-bbmp-nr-ramesh-files-complaint-with-lokayukta-for-probe/ https://kannadanewsnow.com/kannada/are-you-in-the-habit-of-using-a-mobile-phone-in-the-toilet-this-problem-is-not-wrong/
ಬೆಂಗಳೂರು: ಕೇವಲ ಬಿಬಿಎಂಪಿ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆಂದು ಕಳೆದ 10 ವರ್ಷಗಳಲ್ಲಿ ಬಿಡುಗಡೆಯಾಗಿರುವ 46,300 ಕೋಟಿ ರೂಪಾಯಿಗಳಷ್ಟು ಬೃಹತ್ ಪ್ರಮಾಣದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಬೃಹತ್ ಹಗರಣ ಬಯಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಭ್ರಷ್ಟಾಚಾರ ವಿರೋಧಿ ವೇದಿಕೆಯ ಅಧ್ಯಕ್ಷರು ಹಾಗೂ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕರಾದಂತ ಎನ್ ಆರ್ ರಮೇಶ್ ಲೋಕಾಯುಕ್ತ ಎಡಿಜಿಪಿಗೆ ದಾಖಲೆ ಸಹಿತ ದೂರು ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್ ಗಳ ವ್ಯಾಪ್ತಿಯಲ್ಲಿರುವ ಮುಖ್ಯರಸ್ತೆಗಳು ಮತ್ತು ವಾರ್ಡ್ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆಂದು 2013-14 ರಿಂದ 2023-24 ರವರೆಗಿನ 10 ವರ್ಷಗಳ ಅವಧಿಯಲ್ಲಿ ವಿವಿಧ ಅನುದಾನಗಳ ಮೂಲಕ ಒಟ್ಟು ₹ 46,292.23 ಕೋಟಿ (ನಲವತ್ತಾರು ಸಾವಿರದ ಇನ್ನೂರಾ ತೊಂಬತ್ತೆರಡು ಕೋಟಿ ಇಪ್ಪತ್ತ ಮೂರು ಲಕ್ಷ) ರೂಪಾಯಿಗಳಷ್ಟು ಬೃಹತ್ ಮೊತ್ತ ಬಿಡುಗಡೆಯಾಗಿರುತ್ತದೆ !!! ಮೇಲ್ಸೇತುವೆಗಳು, ಕೆಳ ಸೇತುವೆಗಳು ಮತ್ತು White Topping ರಸ್ತೆಗಳನ್ನು ಹೊರತುಪಡಿಸಿ ಕೇವಲ ರಸ್ತೆಗಳ…
ಬೆಂಗಳೂರು: ಮುಡಾ ಪರ್ಯಾಯ ನಿವೇಶನ ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ನಾಗಪ್ರಸನ್ನ ಅವರು ಸಿಬಿಐ, ಕೇಂದ್ರ ಸರ್ಕಾರ ಮತ್ತು ಲೋಕಾಯುಕ್ತ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದಾರೆ. 25-11-2024 ರವರೆಗೆ ನಡೆಸಿದ ತನಿಖೆಯನ್ನು ದಾಖಲಿಸುವಂತೆ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದೆ. ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಲಾಗಿದೆ. ಮುಡಾ ಹಗರಣದ ಮೂವರು ದೂರುದಾರರಲ್ಲಿ ಒಬ್ಬರಾದ ಸ್ನೇಹಮಯಿ ಕೃಷ್ಣ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಕೆ.ಜಿ.ರಾಘವನ್, ತನಿಖೆಯು ಸಾರ್ವಜನಿಕ ವಿಶ್ವಾಸವನ್ನು ಮೂಡಿಸಬೇಕಾಗಿರುವುದರಿಂದ ಸಿಬಿಐ ತನಿಖೆಯನ್ನು ಕೋರಿ ಅರ್ಜಿ ಸಲ್ಲಿಸಲಾಗಿದೆ ಎಂದು ಹೇಳಿದರು. ಇದು ಕೇಂದ್ರ ಸಂಸ್ಥೆಯಿಂದ ತನಿಖೆ ನಡೆಸಲು ಸೂಕ್ತವಾದ ಪ್ರಕರಣವಾಗಿದ್ದು, ಇದರಿಂದ ಅಧಿಕಾರ ದುರುಪಯೋಗ ಮತ್ತು ಕ್ರಮಕ್ಕೆ ಕಾರಣರಾದ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡಬಹುದು ಮತ್ತು ಹಗರಣದ ಪ್ರಮಾಣವನ್ನು ನಿರ್ಧರಿಸಬಹುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿಯಮಗಳನ್ನು…
ಕೆಎನ್ ಎನ್ ನ್ಯೂಸ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲಿ ಮೊಬೈಲ್. ಅದು ಇಲ್ಲದೆ ಒಂದು ದಿನ ಕೂಡ ಇರೋಕೆ ಆಗೊಲ್ಲ. ಹಾಗೆ ಅದನ್ನ ಮೂರು ಹೊತ್ತು ನೋಡ್ತಾ ಇದ್ದರೆ, ಪ್ರಪಂಚದಲ್ಲಿ ಏನು ಆದ್ರೂ ಗೊತ್ತಾಗುವುದಿಲ್ಲ. ಕೆಲವರು ಶೌಚಾಲಯದಲ್ಲೂ ಕೂಡ ಬಳಸುತ್ತಾರೆ. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಕುತ್ತು ಬರುತ್ತದೆ. ಹಾಗಾದ್ರೆ ಫೋನ್ ಬಳಸುವುದರಿಂದ ಏನು ಆಗುತ್ತೆ ತಿಳಿದುಕೊಳ್ಳೋಣ. ಮಲಬದ್ದತೆ ಮತ್ತು ಫೈಲ್ಸ್ : ಜೀರ್ಣಾಂಗ ವ್ಯವಸ್ಥೆ ಸರಿಯಾಗದಿದ್ದಾಗ ಮಲಬದ್ಧತೆ ಮತ್ತು ಪೈಲ್ಸ್ನಂತಹ ಸಮಸ್ಯೆಗಳನ್ನು ಎದುರಿಸಬಹುದು. ಹೆಚ್ಚು ಕಾಲ ವಾಶ್ ರೂಂನಲ್ಲಿ ಕುಳಿತುಕೊಳ್ಳುವುದು ನಿಮ್ಮ ವಿಸರ್ಜನಾ ಅಂಗಗಳ ಮೇಲೆ ಅನಗತ್ಯ ಒತ್ತಡ ಉಂಟುಮಾಡಬಹುದು.ಹೀಗಾಗಿ ಅನಾರೋಗ ಕಾಡುತ್ತದೆ. ಸೋಂಕಿನ ಅಪಾಯ: ಪ್ರತಿಯೊಂದು ಶೌಚಾಲಯಗಳಲ್ಲೂ ಬ್ಯಾಕ್ಟೀರಿಯಾಗಳ ಇರುತ್ತದೆ. ನೀವು ಮೊಬೈಲ್ ಫೋನ್ ಬಳಸುವಾಗ, ನಿಮ್ಮ ಸ್ಮಾರ್ಟ್ಫೋನ್ಗೆ ಅಂಟಿಕೊಳ್ಳುವ ಬ್ಯಾಕ್ಟೀರಿಯಾಗಳಿಂದ ಅಂತಿಮ ಪರಿಣಾಮ ನಿಮ್ಮ ಮೇಲೆ ಆಗುತ್ತದೆ. ಇದರಿಂದ ಹೊಟ್ಟೆ ನೋವು ಮತ್ತು ಮೂತ್ರದ ಸೋಂಕು ಉಂಟಾಗುತ್ತದೆ. ಅತಿಸಾರ ಸಂಬಂಧಿತ ಸಮಸ್ಯೆಗಳು: ಕೆಲವರು ವಾಶ್ರೂಮ್ನಲ್ಲಿ ನೈರ್ಮಲ್ಯ ಪಾಲಿಸುವ ಬಗ್ಗೆ…