Subscribe to Updates
Get the latest creative news from FooBar about art, design and business.
Author: kannadanewsnow09
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತದ ಪುರುಷರ ಹಾಕಿ ತಂಡವು ಕ್ವಾಟರ್ ಫೈನಲ್ ಗೆದ್ದು, ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಅಮಿತ್ ರೋಹಿದಾಸ್ ಗೆ ರೆಡ್ ಕಾರ್ಡ್ ನೀಡಿದ ನಂತರ ಶೂಟೌಟ್ ನಲ್ಲಿ ಭಾರತಕ್ಕೆ ಗೆಲುವು ಸಾಧಿಸಿದೆ. ಪೆನಾಲ್ಟಿ ಶೂಟೌಟ್ನಲ್ಲಿ ಗ್ರೇಟ್ ಬ್ರಿಟನ್ ಹಾಕಿ ತಂಡವನ್ನು ಮಣಿಸಿದ ಭಾರತ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್ನ ಸೆಮಿಫೈನಲ್ಗೆ ಪ್ರವೇಶಿಸಿದೆ. ಜಿಬಿ ಆಟಗಾರನ ಮುಖಕ್ಕೆ ಕೋಲಿನಿಂದ ಕೆಂಪು ಕಾರ್ಡ್ ಪಡೆದ ಅಮಿತ್ ರೋಹಿದಾಸ್ ಅವರನ್ನು ನೋಡಿದ ನಂತರ, ಭಾರತವು ಆಟದಲ್ಲಿ 1-0 ಮುನ್ನಡೆ ಸಾಧಿಸಿತು. ಆದರೆ ಗ್ರೇಟ್ ಬ್ರಿಟನ್ ತಂಡವು ಅರ್ಧ ಸಮಯದ ಆಟದಲ್ಲಿ ಗೋಲು ಗಳಿಸಿ 1-1 ರಲ್ಲಿ ಸಮಬಲ ಸಾಧಿಸಿತು. 60 ನಿಮಿಷಗಳ ಅಂತ್ಯದವರೆಗೂ ಸ್ಕೋರ್ 1-1 ಆಗಿತ್ತು. ಭಾರತದ ಪರ ನಾಯಕ ಹರ್ಮನ್ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ನಿಂದ ಗೋಲು ಗಳಿಸಿದರು, ಇದು ಪ್ಯಾರಿಸ್ 2024 ರಲ್ಲಿ ಅವರ ಏಳನೇ ಗೋಲು. ಅಮಿತ್ ರೋಹಿದಾಸ್ ಅವರಿಗೆ ರೆಡ್…
ಮಂಡ್ಯ : ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ಬಿಜೆಪಿಯ 21 ಭ್ರಷ್ಟ ಹಗರಣಗಳ ವಿರುದ್ದ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿರುವ ಬೃಹತ್ ಜನಾಂದೋಲನ ಸಮಾವೇಶವನ್ನು ಸೋಮವಾರ ಬೆಳಿಗ್ಗೆ 11 ಗಂಟೆಗೆ ಮದ್ದೂರು ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಭಾನುವಾರ ತಿಳಿಸಿದರು. ಕಾರ್ಯಕ್ರಮವನ್ನು ಆಯೋಜಿಸಿರುವ ತಾಲೂಕು ಕ್ರೀಡಾಂಗಣಕ್ಕೆ ಶಾಸಕ ಕೆ.ಎಂ.ಉದಯ್ ಭಾನುವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾರ್ಯಕ್ರಮದ ರೂಪುರೇಷೆಗಳ ಕುರಿತು ಜನಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿದರು. ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೆ.ಎಂ.ಉದಯ್ ಕಾರ್ಯಕ್ರಮದ ಉದ್ಘಾಟನೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸರ್ಕಾರದ ವಿವಿಧ ಸಚಿವರು, ಜಿಲ್ಲೆಯ ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ ಎಂದರು. ಕೇಂದ್ರ ಸರ್ಕಾರದ ಮಲತಾಯಿ ಧೋರಣೆ, ಎನ್.ಡಿ.ಎ ಮೈತ್ರಿ ಕೂಟದ ಅಪಪ್ರಚಾರ, ರಾಜ್ಯ ಸರ್ಕಾರದ ಸಿಎಂ ಹಾಗೂ ಡಿಸಿಎಂ ವಿರುದ್ಧ ಅಪಪ್ರಚಾರ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಜನಾಂದೋಲನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ…
ಕೇರಳ: ವಯನಾಡು ಭೂ ಕುಸಿತ ದುರಂತದಲ್ಲಿ ಈವರೆಗೆ 360ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಷ್ಟೇ ಜನರು ನಾಪತ್ತೆಯಾಗಿದ್ದಾರೆ. ನೂರಾರು ಜನರು ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿ ಕಾಳಜಿ ಕೇಂದ್ರಗಳಲ್ಲಿ ಇದ್ದಾರೆ. ಹೀಗೆ ವಯನಾಡು ಭೂ ಕುಸಿತ ದುರಂತದಲ್ಲಿ ಸಂತ್ರಸ್ತರಾದಂತವರ ನೆರವಿಗಾಗಿ ನಟ ಅಲ್ಲು ಅರ್ಜುನ್ ಧಾವಿಸಿದ್ದು, ಸಂತ್ರಸ್ತರಿಗೆ 25 ಲಕ್ಷ ರೂ.ದೇಣಿಗೆಯನ್ನು ನೀಡುವುದಾಗಿ ಘೋಷಿಸಿದ್ದಾರೆ. ಭೂಕುಸಿತ ಪೀಡಿತ ವಯನಾಡ್ನಲ್ಲಿನ ಪರಿಹಾರ ಕಾರ್ಯಗಳಿಗೆ ಅಲ್ಲು ಅರ್ಜುನ್ ತಮ್ಮ ಬೆಂಬಲವನ್ನು ತೋರಿಸಿದ್ದಾರೆ. ಕೇರಳ ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ನಟ ಭಾನುವಾರ ಬೆಳಿಗ್ಗೆ ಇನ್ಸ್ಟಾಗ್ರಾಮ್ ಮತ್ತು ಎಕ್ಸ್ನಲ್ಲಿ ಟಿಪ್ಪಣಿಯನ್ನು ಹಂಚಿಕೊಂಡರು, ಅದರಲ್ಲಿ ಅವರು ಭೂಕುಸಿತದಿಂದ ಬಾಧಿತರಾದ ಸಂತ್ರಸ್ತರ ಸುರಕ್ಷತೆಯನ್ನು ಹಾರೈಸಿದರು. ಅಲ್ಲು ಅರ್ಜುನ್ ಪೋಸ್ಟ್ ನಲ್ಲಿ ಏನು ಹೇಳಿದ್ದಾರೆ.? ಅಲ್ಲು ಅರ್ಜುನ್ ಹೇಳಿಕೆಯಲ್ಲಿ, “ವಯನಾಡ್ನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ನನಗೆ ತೀವ್ರ ದುಃಖವಾಗಿದೆ. ಕೇರಳವು ಯಾವಾಗಲೂ ನನಗೆ ತುಂಬಾ ಪ್ರೀತಿಯನ್ನು ನೀಡಿದೆ, ಮತ್ತು ಪುನರ್ವಸತಿ ಕಾರ್ಯವನ್ನು ಬೆಂಬಲಿಸಲು ಕೇರಳ…
ನವದೆಹಲಿ: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ಸಿಆರ್ಪಿ ಪಿಒ / ಎಂಟಿ-14 ಅಡಿಯಲ್ಲಿ 4455 ಪ್ರೊಬೇಷನರಿ ಆಫೀಸರ್ / ಮ್ಯಾನೇಜ್ಮೆಂಟ್ ಟ್ರೈನಿಗಳ ನೇಮಕಾತಿಗಾಗಿ ಐಬಿಪಿಎಸ್ ಬ್ಯಾಂಕ್ ಪಿಒ / ಎಂಟಿ ನೇಮಕಾತಿ 2024 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. IBPSನಲ್ಲಿ ಖಾಲಿ ಇರುವಂತ 4455 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಐಬಿಪಿಎಸ್ ಪಿಒ ಪರೀಕ್ಷೆಗೆ ಅರ್ಜಿ ಪ್ರಕ್ರಿಯೆಯು ಆಗಸ್ಟ್ 1, 2024 ರಿಂದ ಪ್ರಾರಂಭವಾಗಿದ್ದು, ಆಗಸ್ಟ್ 21, 2024 ರವರೆಗೆ ಮುಂದುವರಿಯುತ್ತದೆ. ಐಬಿಪಿಎಸ್ ಬ್ಯಾಂಕ್ ಪಿಒ ಆಯ್ಕೆ ಪ್ರಕ್ರಿಯೆಯು ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ. ಐಬಿಪಿಎಸ್ ಬ್ಯಾಂಕ್ ಪಿಒ / ಎಂಟಿ ನೇಮಕಾತಿ 2024 ಅಧಿಸೂಚನೆ ಪಿಡಿಎಫ್ ಅನ್ನು ಆಗಸ್ಟ್ 1, 2024 ರಂದು ಬಿಡುಗಡೆ ಮಾಡಲಾಗಿದೆ. ಪ್ರೊಬೇಷನರಿ ಆಫೀಸರ್ (ಪಿಒ) / ಮ್ಯಾನೇಜ್ಮೆಂಟ್ ಟ್ರೈನಿ (ಎಂಟಿ) ಹುದ್ದೆಗಳಿಗೆ ಒಟ್ಟು 4455 ಹುದ್ದೆಗಳನ್ನು ಘೋಷಿಸಲಾಗಿದೆ. ಆನ್ಲೈನ್ ನೋಂದಣಿ ವಿಂಡೋವನ್ನು ಆಗಸ್ಟ್ 1 ರಂದು ಸಕ್ರಿಯಗೊಳಿಸಲಾಗಿದೆ ಮತ್ತು 21…
ಬೆಂಗಳೂರು : ರಾಜ್ಯದ 10 ಜಿಲ್ಲೆಗಳಲ್ಲಿ ಆವರಿಸಿರುವ ಪಶ್ಚಿಮಘಟ್ಟ ಸೇರಿದಂತೆ ಎಲ್ಲ ಘಟ್ಟ ಪ್ರದೇಶದಲ್ಲಿ ಅಕ್ರಮವಾಗಿ ತಲೆ ಎತ್ತಿರುವ ರೆಸಾರ್ಟ್, ಹೋಂ ಸ್ಟೇ ಮತ್ತು ಇಲ್ಲಿನ ಎಲ್ಲ ಅರಣ್ಯ ಒತ್ತುವರಿಗಳನ್ನು ತೆರವು ಮಾಡಲು ‘ಪಶ್ಚಿಮಘಟ್ಟ ಸೇರಿ ಅರಣ್ಯ ಒತ್ತುವರಿ ತೆರವು ಕಾರ್ಯಪಡೆ’ ರಚಿಸಿರುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಘೋಷಿಸಿದ್ದಾರೆ. ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ಅವರು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರ ನೇತೃತ್ವದಲ್ಲಿ ಈ ಕಾರ್ಯಪಡೆ ರಚಿಸಲಾಗಿದ್ದು, ನಾಳೆಯಿಂದಲೇ ಪಶ್ಚಿಘಟ್ಟ ಮತ್ತು ಇತರ ಘಟ್ಟ ಪ್ರದೇಶಗಳಲ್ಲಿನ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಘಟ್ಟ ಪ್ರದೇಶಗಳಲ್ಲಿನ ಅರಣ್ಯದಲ್ಲಿ 2015ರ ನಂತರ ಆಗಿರುವ ಒತ್ತುವರಿಗೆ ಸಂಬಂಧಿಸಿದಂತೆ 64ಎ ಪ್ರಕ್ರಿಯೆ ಪೂರ್ಣಗೊಂಡಿರುವ ಎಲ್ಲ ಪ್ರಕರಣಗಳಲ್ಲಿ ಇಂದಿನಿಂದಲೇ ತೆರವು ಕಾರ್ಯಾಚರಣೆ ಮಾಡಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಎಸಿಎಫ್, ಡಿಸಿಎಫ್, ಸಿಎಫ್, ಸಿಸಿಎಫ್, ಎ.ಪಿ.ಸಿಸಿಎಫ್ ಗಳಿಗೂ ಅರಣ್ಯ…
ಬೆಂಗಳೂರು: ಈ ಹಿಂದೆ ಬಿಗ್ ಬಾಸ್ ಸ್ಪರ್ಧಿ, ನಟ ಪ್ರಥಮ್ ಗೆ ಸೋಷಿಯಲ್ ಮೀಡಿಯಾದ ಮೂಲಕ ದರ್ಶನ್ ಅಭಿಮಾನಿಗಳು ಕಾಟ ಕೊಟ್ಟಿದ್ದರು. ಈಗ ಅಣ್ಣಾವ್ರ ಅಭಿಮಾನಿಗಳ ಹಿಂದೆ ಬಿದ್ದಿದ್ದಾರೆ. ಡಿ ಬಾಸ್ ಅಭಿಮಾನಿಗಳ ಕೈಗೆ ಸಿಕ್ಕರೇ ನಿನ್ನನ್ನು ಮುಗಿಸುತ್ತೇನೆ ಎಂಬುದಾಗಿ ಬೆದರಿಕೆ ಹಾಕಲಾಗಿದೆ. ಹೀಗಾಗಿ ಡಿ ಬಾಸ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲಾಗಿದೆ. ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲುಪಾಲಾಗಿದೆ. ಪರಪ್ಪನ ಅಗ್ರಹಾರ ಜೈಲು ಸೇರಿರುವಂತ ನಟ ದರ್ಶನ್, ನನಗೆ ಜೈಲೂಟ ಬೇಡ. ಮನೆಯೂಟ ಬೇಕು. ನನ್ನ ತೂಕ ಕಡಿಮೆ ಆಗುತ್ತಿದೆ ಎಂಬುದಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರೂ, ನ್ಯಾಯಾಲಯ ಜೈಲಿನ ಖೈದಿಗಳಿಗೆ ಬೇರೆ ಆಹಾರ, ನಿನಗೆ ಬೇರೆ ಆಹಾರಕ್ಕೆ ಅವಕಾಶ ಮಾಡಿಕೊಡೋದಿಲ್ಲ ಅಂತ ನಿರಾಕರಿಸಿ, ಅರ್ಜಿ ವಜಾಗೊಳಿಸಿತ್ತು. ಈಗ ಜೈಲೂಟವೇ ಗತಿಯಾಗಿದೆ. ಇದರ ನಡುವೆ ದಿವಂಗತ ಡಾ.ರಾಜ್ ಕುಮಾರ್ ಅಭಿಮಾನಿಯಾಗಿರುವಂತ ಯೋಗಿ ಎಂಬಾತನಿಗೆ ನಟ ದರ್ಶನ್ ಅಭಿಮಾನಿಗಳು ಬೆದರಿಕೆ ಹಾಕೋದಕ್ಕೆ ಶುರುಮಾಡಿದ್ದಾರೆ ಎಂಬುದಾಗಿ…
ಬಾಂಗ್ಲಾದೇಶ: ಢಾಕಾದ ಹೊರವಲಯದಲ್ಲಿ ಪ್ರತಿಭಟನಾಕಾರರು ಮತ್ತು ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿಗರ ನಡುವೆ ಬಾಂಗ್ಲಾದೇಶದಲ್ಲಿ ಹೊಸ ಘರ್ಷಣೆಗಳು ಭುಗಿಲೆದ್ದಿದ್ದರಿಂದ ಭಾನುವಾರ (ಆಗಸ್ಟ್ 4) ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಸಾವಿರಾರು ಪ್ರತಿಭಟನಾಕಾರರು ಬಾಂಗ್ಲಾದೇಶದ ರಾಜಧಾನಿಯಲ್ಲಿ ಜಮಾಯಿಸಿದ್ದಾರೆ. ಪ್ರಧಾನಿ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಅಸಹಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು ಆಡಳಿತಾರೂಢ ಅವಾಮಿ ಲೀಗ್, ಅದರ ವಿದ್ಯಾರ್ಥಿ ಅಂಗಸಂಸ್ಥೆ ಛತ್ರ ಲೀಗ್ ಮತ್ತು ಜುಬೊ ಲೀಗ್ ಕಾರ್ಯಕರ್ತರಿಂದ ವಿರೋಧವನ್ನು ಎದುರಿಸಿದಾಗ ಇಂದು ಬೆಳಿಗ್ಗೆ ಇತ್ತೀಚಿನ ಘರ್ಷಣೆಗಳು ಭುಗಿಲೆದ್ದವು. “ಮುನ್ಶಿಗಂಜ್ನಲ್ಲಿ ಪ್ರತಿಭಟನಾಕಾರರು ಮತ್ತು ಅವಾಮಿ ಲೀಗ್ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ” ಎಂದು ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ಘಟನೆಯ ಸಮಯದಲ್ಲಿ ಹಲವಾರು ಕಾಕ್ಟೈಲ್ ಸ್ಫೋಟಗಳು ಸಂಭವಿಸಿವೆ ಎಂದು ಪತ್ರಿಕೆ ಹೇಳಿದೆ. ಢಾಕಾದ ಶಹಬಾಗ್ನಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ವೃತ್ತಿಪರರು…
ಕೊಪ್ಪಳ್ಳ: ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸ್ತಿದ್ದ ಪರಶುರಾಮ್ ಅನುಮಾನಾಸ್ಪದ ರೀತಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಇಂತಹ ಅವರ ಮೃತದೇಹವನ್ನು ಇದೀಗ ಸ್ವಗ್ರಾಮ ಸೋಮನಾಳದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಯಾದಗಿರಿಗೆ ಪಿಎಸ್ಐ ಪರಶುರಾಮ್ ಅವರು ಸೈಬರ್ ಕ್ರೈಮ್ ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದರು. ಮೊನ್ನೆ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ನಿನ್ನೆ ಸಂಜೆ ಪೊಲೀಸ್ ಕ್ವಾಟರ್ಸ್ ನಿವಾಸದಲ್ಲಿ ಅನುಮಾನಾಸ್ಪದವಾಗಿ ಹಠಾತ್ ಸಾವನ್ನಪ್ಪಿದ್ದರು. ಪಿಎಸ್ಐ ಪರಶುರಾಮ್ ಸಾವಿಗೆ ಶಾಸಕರು ಹಾಗೂ ಅವರ ಪುತ್ರ ಕಾರಣ ಎನ್ನಲಾಗಿತ್ತು. ಈ ಸಂಬಂಧ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಮೃತ ಪಿಎಸ್ಐ ಪರಶುರಾಮ್ ಅವರ ಪಾರ್ಥಿವ ಶರೀರವನ್ನು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮಕ್ಕೆ ಕೊಂಡಯ್ಯಲಾಗಿತ್ತು. ಪರಶುರಾಮ್ ಅವರ ಕುಟುಂಬಕ್ಕೆ ಸೇರಿದಂತ ಸ್ವಗ್ರಾಮ ಸೋಮನಾಳದಲ್ಲಿ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸರು. ಈ ಮೂಲಕ ಪಿಎಸ್ಐ ಪರಶುರಾಮ್ ಮಣ್ಣಲ್ಲಿ ಮಣ್ಣಾಗಿದ್ದಾರೆ. https://kannadanewsnow.com/kannada/pms-son-becoming-cm-is-not-a-big-deal-farmers-son-becoming-deputy-cm-is-a-big-deal-pradeep-easwar-to-hdk/ https://kannadanewsnow.com/kannada/good-news-for-veerashaiva-lingayat-communities-applications-invited-for-these-schemes/
ಬೆಂಗಳೂರು: ಪ್ರಧಾನಿ ಮಗ ಮುಖ್ಯಮಂತ್ರಿ ಆಗುವುದು ದೊಡ್ಡ ವಿಚಾರವಲ್ಲ. ಅದೇ ಒಬ್ಬ ರೈತನ ಮಗ ಉಪ ಮುಖ್ಯಮಂತ್ರಿ ಆಗುವುದು ದೊಡ್ಡವಿಚಾರ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಪರವಾಗಿ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಶಾಸಕ ಪ್ರದೀಪ್ ಈಶ್ವರ್ ಟಾಂಗ್ ನೀಡಿದ್ದಾರೆ. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದಂತ ಅವರು, ಕುಮಾರಸ್ವಾಮಿ ಅವರೇ, ಪ್ರಧಾನಮಂತ್ರಿಯ ಮಗ ಮುಖ್ಯಮಂತ್ರಿ ಆಗುವುದು ದೊಡ್ಡ ವಿಚಾರವಲ್ಲ, ಕನಕಪುರದ ರೈತನ ಮಗ ಉಪ ಮುಖ್ಯಮಂತ್ರಿ ಆಗುವುದು ದೊಡ್ಡ ವಿಚಾರ ಅಂತ ಹೆಚ್.ಡಿಕೆಗೆ ತಿರುಗೇಟು ನೀಡಿದ್ದಾರೆ. ಹಿಂದುಳಿದ ವರ್ಗದ ವ್ಯಕ್ತಿ ಮುಖ್ಯಮಂತ್ರಿ ಆಗಿರುವುದನ್ನು, ನಿಮ್ಮ ಸಮುದಾಯದ ವ್ಯಕ್ತಿ ಉಪ ಮುಖ್ಯಮಂತ್ರಿ ಆಗಿರುವುದನ್ನು ಸಹಿಸಿಕೊಳ್ಳಲು ನಿಮ್ಮಿಂದ ಆಗುತ್ತಿಲ್ಲ ಎಂಬುದಾಗಿ ವಾಗ್ಧಾಳಿ ನಡೆಸಿದ್ದಾರೆ. ಭ್ರಷ್ಟರೆಲ್ಲರೂ ಸೇರಿ ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ಆರಂಭಿಸಿದ್ದಾರೆ ಎಂಬುದಾಗಿ ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ. https://twitter.com/INCKarnataka/status/1819762035552334067 https://kannadanewsnow.com/kannada/muda-scam-bjp-govt-allotted-plots-and-now-they-are-making-allegations-says-ugrappa/ https://kannadanewsnow.com/kannada/man-who-committed-suicide-by-jumping-on-metro-rail-tracks-in-bengaluru-has-been-identified/
ಬೆಂಗಳೂರು: ಬಿಜೆಪಿ ಸರ್ಕಾರವೇ ನಿವೇಶನ ಹಂಚಿಕೆ ಮಾಡಿ ಈಗ ಅವರೇ ಆರೋಪ ಮಾಡುತ್ತಿದ್ದಾರೆ. ಮೂಡ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಕೈವಾಡ ಇಲ್ಲ ಎನ್ನುವುದಕ್ಕೆ ಅನೇಕ ಸಾಕ್ಷಿಗಳಿವೆ. ಭೂಮಿ ಡಿ ನೋಟಿಫೈ ಆಗಿದ್ದು 1998 ರಲ್ಲಿ. ಅಂದರೆ 26 ವರ್ಷಗಳಾಗಿವೆ. ಸಿದ್ದರಾಮಯ್ಯನವರ ಕೈವಾಡ ಇದ್ದಿದ್ದರೆ ಈ ಹಿಂದೆಯೇ ವಿರೋಧ ಪಕ್ಷದವರು ದನಿ ಎತ್ತಬೇಕಾಗಿತ್ತು. ಈ ಭೂಮಿ ಮಾರಾಟವಾಗಿದ್ದು 2004ರಲ್ಲಿ ಅಂದರೆ ಭೂಮಿ ಮಾರಾಟವಾಗಿ 20 ವರ್ಷಗಳಾಯಿತು ಆಗಲು ಸಹ ಯಾರು ಕೂಡ ಭೂಮಿ ಮಾರಾಟ ಅಕ್ರಮ ಎಂದು ಪ್ರಶ್ನಿಸಲಿಲ್ಲ ಎಂಬುದಾಗಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಉಗ್ರಪ್ಪ ಅವರು ಕಿಡಿಕಾರಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ಈ ಭೂಮಿಯನ್ನ ಉಡುಗೊರೆಯಾಗಿ ನೀಡಿರುವುದು 2010ರಲ್ಲಿ ಆಗಲು ಸಹ ಯಾರು ಕೂಡ ಈ ಉಡುಗೊರೆ ಕೊಟ್ಟಿರೋದು ಅಕ್ರಮ ಎಂದು ಪ್ರಕರಣ ದಾಖಲಿಸಿಲ್ಲ. 14 ವರ್ಷದ ಆದರು ಯಾರು ಪ್ರಶ್ನೆ ಮಾಡಿಲ್ಲ ಎಂದರು. ಮೂಡ ನಮ್ಮ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ಪಾರ್ವತಿಯವರು 2015,…