Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕಸವನ್ನು ಎಲ್ಲೆಂದರಲ್ಲಿ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕಳೆದ 3 ತಿಂಗಳಲ್ಲಿ 30 ಲಕ್ಷ ರೂ. ದಂಡ ವಸೂಲಿಯನ್ನು ಮಾಡಿರುವುದಾಗಿ ಜಿಬಿಎ ಆಯುಕ್ತ ಕೆ. ಎನ್ ರಮೇಶ್ ತಿಳಿಸಿದ್ದಾರೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಾರ್ಡ್ಗಳ ವ್ಯಾಪ್ತಿಯಲ್ಲಿನ ಸಾರ್ವಜನಿಕರ ಸ್ಥಳಗಳಲ್ಲಿ ಹಾಗೂ ಸರ್ಕಾರಿ ಸ್ವತ್ತುಗಳಲ್ಲಿ ಕಸಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು, ಶೇಖರಿಸುವುದನ್ನು ಅಥವಾ ಬ್ಲ್ಯಾಕ್ ಸ್ಪಾಟ್ ತಡೆಗಟ್ಟುವ ಸಲುವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ಕ್ರಮಕೈಗೊಳ್ಳಲಾಗಿರುತ್ತದೆ. ಕಸಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ಅಥವಾ ಬ್ಲ್ಯಾಕ್ ಸ್ಪಾಟ್ ತಡೆಗಟ್ಟುವ ಸಲುವಾಗಿ ವಾರ್ಡ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಆರೋಗ್ಯ ಪರಿವೀಕ್ಷಕರು. ಲಿಂಕ್ ವರ್ಕರ್ ಹಾಗೂ ಪೌರ ಕಾರ್ಮಿಕರ ಮೇಲ್ವಿಚಾರಕರು ವಾರ್ಡ್ ವ್ಯಾಪ್ತಿಯಲ್ಲಿನ ನಿವಾಸಿಗಳನ್ನು ವಿಚಾರಿಸಿದಾಗ ಕೆಲವು ನಿವಾಸಿಗಳು ಕಸವನ್ನು ಸಂಗ್ರಹಿಸುವ ಆಟೋಗಳು ನಿಗದಿತ ವೇಳೆಯಲ್ಲಿ ಬರುತ್ತಿಲ್ಲ ಹಾಗೂ ಆಟೋಗಳು ಬರುವ ವೇಳೆಯಲ್ಲಿ ನಿವಾಸಿಗಳು ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದೇವೆ ಎಂದು ತಿಳಿಸಿರುತ್ತಾರೆ. ಈ ಸಂಬಂಧ ಕೆಲಸ ಕಾರ್ಯಗಳಿಗಾಗಿ ತೆರಳುವ ನಿವಾಸಿಗಳಿಗೆ…
ನವದೆಹಲಿ: ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ವಾಟ್ಸಾಪ್ ವಾಯ್ಸ್ ನೋಟ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ಅದರಲ್ಲಿ ಕೋಟಿ ಕೋಟಿ ಹಣಕ್ಕೂ ಬೇಡಿಕೆ ಇಟ್ಟಿರುವುದಾಗಿ ಹೇಳಲಾಗುತ್ತಿದೆ. ಸಂದೇಶ ಸ್ವೀಕರಿಸಿದ ನಂತರ, ರಣವೀರ್ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ತಕ್ಷಣವೇ ತಮ್ಮ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಬೆದರಿಕೆ ವಾಯ್ಸ್ ನೋಟ್ ಕಳುಹಿಸಿದ ವ್ಯಕ್ತಿಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ತನಿಖೆ ಮುಂದುವರೆದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. https://kannadanewsnow.com/kannada/that-one-word-from-the-guru-changed-the-young-mans-life/ https://kannadanewsnow.com/kannada/all-railway-services-now-in-one-place-railone-super-app/
ನವದೆಹಲಿ: ಭಾರತೀಯ ರೈಲ್ವೆಯು ತನ್ನ ಅಧಿಕೃತ ‘ಆಲ್-ಇನ್-ಒನ್’ ಸೂಪರ್ ಆ್ಯಪ್ ಆದ ‘ರೈಲ್ಒನ್’ (RailOne) ಅನ್ನು ಬಿಡುಗಡೆ ಮಾಡಿದೆ. ಇದು ಪ್ರಯಾಣಿಕರಿಗೆ ಹಲವಾರು ರೈಲ್ವೆ ಸೇವೆಗಳನ್ನು ಪಡೆಯಲು ಸುಲಭ ಮತ್ತು ಅನುಕೂಲಕರ ಡಿಜಿಟಲ್ ವೇದಿಕೆಯನ್ನು ಒದಗಿಸುತ್ತದೆ. ಈ ಅಪ್ಲಿಕೇಶನ್ ಹಲವಾರು ಪ್ರಯಾಣಿಕ ಸೌಲಭ್ಯಗಳನ್ನು ಒಂದೇ ಅಪ್ಲಿಕೇಶನ್’ನಲ್ಲಿ ಒಳಗೊಂಡಿದ್ದು, ರೈಲ್ವೆ ಪ್ರಯಾಣವನ್ನು ಹೆಚ್ಚು ಸ್ಮಾರ್ಟ್, ವೇಗ ಮತ್ತು ತೊಂದರೆ ರಹಿತವಾಗಿಸುತ್ತದೆ. ರೈಲ್ಒನ್ ಆ್ಯಪ್ ಮೂಲಕ ಪ್ರಯಾಣಿಕರು ಕಾಯ್ದಿರಿಸಿದ (Reserved) ಟಿಕೆಟ್’ಗಳು, ಕಾಯ್ದಿರಿಸದ (Unreserved) ಟಿಕೆಟ್’ಗಳು, ಪ್ಲಾಟ್ಫಾರ್ಮ್ ಟಿಕೆಟ್’ಗಳು ಮತ್ತು ಸೀಸನ್ ಟಿಕೆಟ್’ಗಳನ್ನು ಬುಕ್ ಮಾಡಬಹುದು. ಇದರೊಂದಿಗೆ ರೈಲುಗಳ ಹುಡುಕಾಟ, ಪಿಎನ್ಆರ್ (PNR) ಸ್ಥಿತಿ, ಕೋಚ್ ವಿವರ ಮತ್ತು ರೈಲು ಎಲ್ಲಿದೆ ಎಂಬ ನೈಜ ಸಮಯದ ಮಾಹಿತಿ (Real-time tracking) ಸೇರಿದಂತೆ ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಈ ಆ್ಯಪ್ ಒದಗಿಸುತ್ತದೆ. ಡಿಜಿಟಲ್ ಟಿಕೆಟ್ ಬುಕಿಂಗ್ ಸೌಲಭ್ಯವು ಪ್ರಯಾಣಿಕರು ಟಿಕೆಟ್ ಕೌಂಟರ್’ಗಳಲ್ಲಿ ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ಪ್ರಯಾಣಿಕರ ಸಂಖ್ಯೆ…
ಒಬ್ಬ ಯುವಕನಿಗೆ ಬದುಕೇ ಬೇಸರವಾಗಿತ್ತು. ಯಾವುದರಲ್ಲೂ ಆಸಕ್ತಿ ಇಲ್ಲ. ಒಂಥರಾ ಖಿನ್ನತೆ. ಮನೆಯಲ್ಲಿ ಒಬ್ಬನೇ ಕುಳಿತಿರುತ್ತಿದ್ದ. ಸ್ನೇಹಿತರ ಜತೆಗೆ ಬೆರೆಯುವುದು ಕೂಡಾ ಬೇಡ ಅನಿಸುತ್ತಿತ್ತು. ಒಂದು ದಿನ ಆ ಊರಿಗೆ ಒಬ್ಬ ಗುರುಗಳು ಬಂದಿದ್ದಾರೆ ಎನ್ನುವ ಸುದ್ದಿ ಅವನಿಗೆ ಗೊತ್ತಾಯಿತು. ತನ್ನ ಸಮಸ್ಯೆಗೆ ಅವರ ಬಳಿ ಏನಾದರೂ ಪರಿಹಾರ ಇರಬಹುದಾ ಎಂದು ಯೋಚಿಸಿದ. ಯುವಕ ಗುರುಗಳ ಬಳಿಗೆ ಹೋಗಿ, ʻʻಜೀವನದಲ್ಲಿ ನನಗೆ ಹಲವಾರು ಸಮಸ್ಯೆಗಳಿವೆ. ಹಾಗಾಗಿ ಸದಾ ಬೇಸರದಲ್ಲಿ ಕಾಲ ಕಳೆಯುತ್ತಿದ್ದೇನೆ. ನಾನು ಎಲ್ಲರ ಹಾಗೆ ಸಂತೋಷವಾಗಿರೋದು ಹೇಗೆ? ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ತಿಳಿಸಿʼʼ ಎಂದು ಕೇಳಿದ. ಗುರುಗಳು ಯುವಕ ಹೇಳಿದ್ದೆಲ್ಲವನ್ನೂ ಗಮನವಿಟ್ಟು ಕೇಳಿದರು. ಆದರೆ, ಏನೂ ಉತ್ತರ ನೀಡದೆ ಎದ್ದು ಒಳಗೆ ನಡೆದರು. ಯುವಕನಿಗೆ ಗೊಂದಲವಾಯಿತು. ʻʻನಾನೇನೋ ಇವರಾದರೂ ಪರಿಹಾರ ಹೇಳುತ್ತಾರೆ ಎಂದು ಇಲ್ಲಿಗೆ ಬಂದರೆ ಏನೂ ಹೇಳದೆ ಒಳಗೆ ಹೋಗಿಬಿಟ್ಟರಲ್ಲʼʼ ಅಂತ ಮನಸ್ಸಿನೊಳಗೇ ಹೇಳಿಕೊಂಡ. ಅಷ್ಟು ಹೊತ್ತಿಗೆ ಗುರುಗಳು ಹೊರಗೆ ಬಂದರು. ಅವರ ಒಂದು ಕೈಯಲ್ಲಿ ಒಂದು…
ಬೆಂಗಳೂರು: ಬೆಂಗಳೂರು ನಗರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ನೀಡಿದ್ದಂತ ತಡೆಯಾಜ್ಞೆಯನ್ನು ಸಿಟಿ ಸಿವಿಲ್ ಕೋರ್ಟ್ ತೆರವುಗೊಳಿಸಿದೆ. ಅಲ್ಲದೇ ಒಂದು ತಿಂಗಳ ಒಲಗಾಗಿ ಅರ್ಜಿದಾರನ ನಾಮಪತ್ರವನ್ನು ಪರಿಗಣಿಸಿ ಚುನಾವಣೆ ನಡೆಸಲು ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಬೆಂಗಳೂರು ನಗರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ಕೋರ್ಟ್ ಈ ಹಿಂದೆ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆ ತೆರವುಗೊಳಿಸುವಂತೆ ಕೆಯುಡಬ್ಲ್ಯೂಜೆಯಿಂದ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದಂತ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್, ವಾದ – ಪ್ರತಿವಾದವನ್ನು ಆಲಿಸಿದ ಬಳಿಕ, ಇಂದು ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಇನ್ನೂ ಬೆಂಗಳೂರಿನ ನಗರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ವಾದಿಯ ನಾಮಪತ್ರವನ್ನು ಪರಿಗಣಿಸುವಂತೆ ಸಿಟಿ ಸಿವಿಲ್ ಕೋರ್ಟ್ ಸೂಚಿಸಿದೆ. ಚುನಾವಣೆಯನ್ನು ಕ್ಯಾಲೆಂಡರ್ ಪ್ರಕಾರ ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ತಿಳಿಸಿದೆ. ಅಲ್ಲದೆ, ವಾದಿಯು ನ್ಯಾಯಾಲಯದಲ್ಲಿ ದಾಖಲಿಸಿದ್ದ ದಾವವನ್ನು ವಜಾಗೊಳಿಸಿದೆ. ನ್ಯಾಯಾಲಯ ತೀರ್ಪಿಗೆ ಸ್ವಾಗತ: ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನೀಡಿರುವ ತೀರ್ಪು ನ್ನು ಸ್ವಾಗತಿಸಿರುವ ಕರ್ನಾಟಕ…
ಬೆಂಗಳೂರು : ಮುಂಬರುವ ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಬೇಡಿಕೆ ಹಾಗು ನೀರಿನ ಅಭಾವ ಎದುರಾಗಬಹುದಾದ ಪ್ರದೇಶಗಳಲ್ಲಿ ಪರಿಸ್ಥಿತಿ ಪರಿಣಾಮಕಾರಿಯಾಗಿ ನಿಭಾಯಿಸಲು ಬೆಂಗಳೂರು ಜಲಮಂಡಳಿ ಅಗತ್ಯ ತಯಾರಿ ಮಾಡಿಕೊಂಡಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು. ಇಂದು ಜಲಮಂಡಳಿ ಕೇಂದ್ರ ಕಛೇರಿಯಲ್ಲಿ ಮುಂಬರುವ ಬೇಸಿಗೆಯ ಸಿದ್ದತೆಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಸಿದ್ಧತೆಗಳ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, ನಗರದಾದ್ಯಂತ ಈ ಬಾರಿ ಬೇಸಿಗೆಯನ್ನು ಸಮರ್ಥವಾಗಿ ಎದುರಿಸಲು ಬೆಂಗಳೂರು ಜಲಮಂಡಳಿ ಸಿದ್ದವಾಗಿದೆ. ಈಗಾಗಲೇ, ನೀರಿನ ಅಭಾವ ಎದುರಾಗಬಹುದಾದ ಹಾಗೂ ಜನಸಾಂದ್ರಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿನ ಜನರಿಗೆ ಉಚಿತವಾಗಿ ಕುಡಿಯುವ ನೀರು ಒದಗಿಸಲು ‘ಮಿನಿ ವಾಟರ್ ಟ್ಯಾಂಕ್’ಗಳನ್ನು (ಸಿಂಟೆಕ್ಸ್ ಟ್ಯಾಂಕ್) ಅಳವಡಿಸಲು ನಿರ್ಧರಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು. ಈ ಮಿನಿ ಟ್ಯಾಂಕ್ಗಳಿಗೆ ನೀರು ತುಂಬಿಸಲು ಬೆಂಗಳೂರು ಜಲಮಂಡಳಿ ಹಾಗೂ…
ನವದೆಹಲಿ: ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯದವರೆಗೆ ಸ್ಪೀಕರ್ ಪೀಠದಲ್ಲಿ ಕೂರದೇ ಇರೋದಕ್ಕೆ ಓಂ ಬಿರ್ಲಾ ಅವರು ನಿರ್ಧಾರ ಕೈಗೊಂಡಿರೋದಾಗಿ ಮೂಲಗಳಿಂದ ತಿಳಿದು ಬಂದಿದೆ. ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಪತ್ರವನ್ನು ಮಂಡಿಸಲಾಗಿದೆ. ಅವಿಶ್ವಾಸ ನಿರ್ಣಯದ ಬಗ್ಗೆ ಮಾರ್ಚ್.9ರಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಅಲ್ಲಿಯವರೆಗೆ ಸ್ಪೀಕರ್ ಪೀಠದಲ್ಲಿ ಕೂರದೇ ಇರೋದಕ್ಕೆ ಓಂ ಬಿರ್ಲಾ ನಿರ್ಧರಿಸಿದ್ದಾರೆ ಎನ್ನಲಾಗಿದೆ. https://twitter.com/ANI/status/2021196692704620641 ತಾವು ನೈತಿಕತೆಯಿಂದ ಸ್ಪೀಕರ್ ಪೀಠದಲ್ಲಿ ಕೂರದೇ ಇರೋದಕ್ಕೆ ಓಂ ಬಿರ್ಲಾ ನಿರ್ಧರಿಸಿದ್ದಾರೆ. ಅವಿಶ್ವಾಸ ನಿರ್ಣಯದ ಬಗ್ಗೆ ಸದನದಲ್ಲಿ ವಿಸ್ತೃತ ಚರ್ಚೆ ನಡೆಸಿ. ಮತಕ್ಕೆ ಹಾಕುವವರೆಗೆ ಸ್ಪೀಕರ್ ಪೀಠದಲ್ಲಿ ಕೂರದಿರಲು ಓಂ ಬಿರ್ಲಾ ನಿರ್ಧರಿಸಿದ್ದಾರೆ. ನಿಯಮಗಳ ಪ್ರಕಾರ ಅಂತಹ ಕ್ರಮ ಅಗತ್ಯವಿಲ್ಲದಿದ್ದರೂ ನಿರ್ಧಾರವನ್ನು ಮಾಡಿದ್ದಾರೆ. ಸರ್ಕಾರ, ವಿಪಕ್ಷಗಳು ಮನವೊಲಿಸೋದಕ್ಕೆ ಪ್ರಯತ್ನಿಸಿದರೂ ಹೋಗಲ್ಲ. ಲೋಕಸಭೆ ಪ್ರವೇಶಿಸದಿರಲು ಸ್ಪೀಕರ್ ಓಂ ಬಿರ್ಲಾ ನಿರ್ಧರಿಸಿದ್ದಾರೆ ಎನ್ನಲಾಗಿದೆ. https://kannadanewsnow.com/kannada/re-survey-report-on-former-devadasi-women-submitted-to-state-government/ https://kannadanewsnow.com/kannada/forest-land-clearance-notice-in-sagara-kdp-member-unhappy-with-his-own-government/
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬಹುನಿರೀಕ್ಷಿತ ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷಾ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಮರು ಸಮೀಕ್ಷೆಯ ವಿಶ್ಲೇಷಣಾ ವರದಿಯಲ್ಲಿ ಮಾಜಿ ದೇವದಾಸಿ ಮಹಿಳೆಯರು ಹಾಗೂ 01ನೇ ತಲೆಮಾರು, 02ನೇ ತಲೆಮಾರು ಮತ್ತು 03ನೇ ತಲೆಮಾರಿನ ಕುಟುಂಬದವರ ಮಾಹಿತಿ, ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿಗಾಗಿ ಮಾಡಲಾಗಿರುವ ಶಿಫಾರಸ್ಸುಗಳು ಸಮೀಕ್ಷಾ ವರದಿಯಲ್ಲಿವೆ. ಮೂಲಹಂತದ ಸಮೀಕ್ಷೆಯ ಉದ್ದೇಶ: ಈ ಹಿಂದಿನ ಸಮೀಕ್ಷೆಯಲ್ಲಿ ಒಳಪಟ್ಟ ಮಾಜಿ ದೇವದಾಸಿ ಮಹಿಳೆಯರ ದತ್ತಾಂಶದಲ್ಲಿ ಲಭ್ಯವಿಲ್ಲದ ಮಾಜಿ ದೇವದಾಸಿ ಮಹಿಳೆಯರ ವಯಸ್ಸು, ವಿಳಾಸ, ಶಿಕ್ಷಣ, ಸಾಮಾಜಿಕ ಮತ್ತು ಆರ್ಥಿಕಸ್ಥಿತಿ ಹಾಗೂ ಅವರ 1ನೇ ತಲೆಮಾರು, 2ನೇ ತಲೆಮಾರು ಮತ್ತು 3ನೇ ತಲೆಮಾರಿನ ಮಕ್ಕಳ ಮಾಹಿತಿಗಳನ್ನು ಸಂಗ್ರಹಿಸುವುದು. ಕಾರಣಾಂತರಗಳಿಂದ ಈ ಹಿಂದಿನ ಸಮೀಕ್ಷೆಯಿಂದ ಹೊರಗುಳಿದಿರುವ ಮಾಜಿ ದೇವದಾಸಿ ಮಹಿಳೆಯರನ್ನು ಸಮೀಕ್ಷಾ ಪಟ್ಟಿಗೆ ಸೇರ್ಪಡೆಗೊಳಿಸುವುದು ಹಾಗೂ ಅವರ ಶಿಕ್ಷಣ, ಸಾಮಾಜಿಕ ಮತ್ತು…
BREAKING: ‘ಸೋಷಿಯಲ್ ಮೀಡಿಯಾ’ಗಳ ಹಾನಿಕಾರಕ ‘ಪೋಸ್ಟ್’ಗಳನ್ನು 3 ಗಂಟೆಗಳಲ್ಲಿ ತೆಗೆದುಹಾಕಬೇಕು: ಕೇಂದ್ರ ಸರ್ಕಾರ ಆದೇಶ
ನವದೆಹಲಿ: ಸಾಮಾಜಿಕ ಮಾಧ್ಯಮ ವೇದಿಕೆಗಳು AI-ರಚಿತ ವಿಷಯವನ್ನು ಪ್ರಮುಖವಾಗಿ, ಹಾನಿಕಾರಕ ವಿಷಯಗಳನ್ನು 3 ಗಂಟೆಯಲ್ಲೇ ತೆಗೆದು ಹಾಕಬೇಕು ಎಂಬುದಾಗಿ ಕೇಂದ್ರ ಸರ್ಕಾರ ಆದೇಶಿಸಿದೆ. ಆ ಮೂಲಕ ಸೋಷಿಯಲ್ ಮೀಡಿಯಾ ಎಐ-ರಚಿತ ವಿಷಯಗಳ ನಿಯಂತ್ರಣಕ್ಕೆ ಬ್ರೇಕ್ ಹಾಕಿದೆ. ಭಾರತ ಸರ್ಕಾರವು AI-ರಚಿತ ಮತ್ತು ಡೀಪ್ಫೇಕ್ ವಿಷಯದ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳು ಮೂರು ಗಂಟೆಗಳ ಒಳಗೆ ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕುವುದನ್ನು ಕಡ್ಡಾಯಗೊಳಿಸಿದೆ. AI-ರಚಿತ ವಿಷಯವನ್ನು ಲೇಬಲ್ ಮಾಡುವುದನ್ನು ಕಡ್ಡಾಯಗೊಳಿಸುತ್ತದೆ. ತಿದ್ದುಪಡಿ ಮಾಡಿದ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳ ಅಡಿಯಲ್ಲಿ, ವೇದಿಕೆಗಳು AI ಪರಿಕರಗಳನ್ನು ಬಳಸಿಕೊಂಡು ರಚಿಸಲಾದ ಯಾವುದೇ ವಿಷಯವನ್ನು ಸ್ಪಷ್ಟವಾಗಿ ಮತ್ತು ಪ್ರಮುಖವಾಗಿ ಲೇಬಲ್ ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು. ಜೊತೆಗೆ ಬಳಕೆದಾರರು ತಾವು ಅಪ್ಲೋಡ್ ಮಾಡಿದ ವಿಷಯವನ್ನು AI ಬಳಸಿ ರಚಿಸಲಾಗಿದೆಯೇ ಅಥವಾ ಬದಲಾಯಿಸಲಾಗಿದೆಯೇ ಎಂದು ಘೋಷಿಸಬೇಕಾಗುತ್ತದೆ. ಹೊಸ ನಿಯಮಗಳು ಮಧ್ಯವರ್ತಿಗಳು ಮೂರು ಗಂಟೆಗಳ ಒಳಗೆ ಕೆಲವು ವರ್ಗಗಳ ಕಾನೂನುಬಾಹಿರ…
ಚಿತ್ರದುರ್ಗ: ಹೊನ್ನೇಕೆರೆ ಗೊಲ್ಲರಹಟ್ಟಿ (ಅಮರಾವತಿ ಗೊಲ್ಲರಹಟ್ಟಿ) ಗ್ರಾಮದ ಆರಾಧ್ಯ ದೈವಗಳಾದ ಶ್ರೀ ಮೇಲುಕುಂಟೆ ರಂಗನಾಥ ಸ್ವಾಮಿ, ಶ್ರೀ ಮಲೆಯಾಂಬಿಕೆ ದೇವಿ ಹಾಗೂ ಬ್ಯಾಡರಹಳ್ಳಿ ತಿಮ್ಮಪ್ಪ ಮತ್ತು ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ತಿರುಪತಿ ತಿಮ್ಮಪ್ಪನ ದಿವ್ಯ ಆಶೀರ್ವಾದದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಐದು ದಿನಗಳ ‘ಕುಟುಂಬ ಯಾತ್ರಾ ಪ್ರವಾಸ’ವು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂಬುದಾಗಿ ಕಾಡುಗೊಲ್ಲರ ಜನಪದ ಸೊಗಡು ವೇದಿಕೆಯ ಸಂಸ್ಥಾಪಕ ಪ್ರವೀಣ್ ಕುಮಾರ್.ಹೆಚ್.ಡಿ ತಿಳಿಸಿದ್ದಾರೆ. ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸುಮಾರು 15 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಗ್ರಾಮದ ಅಣ್ಣ-ತಮ್ಮಂದಿರು ಹಾಗೂ ನೆಂಟರಿಷ್ಟರೆಲ್ಲರೂ ಸೇರಿ ಕೈಗೊಂಡಿದ್ದ ಈ ಯಾತ್ರೆಯು ಭಕ್ತರಲ್ಲಿ ಭಕ್ತಿಯ ಸಂಚಲನ ಮೂಡಿಸಿತ್ತು. ಯಾತ್ರೆ ಮುಗಿಸಿ ಮರಳಿದ ಭಕ್ತಾದಿಗಳನ್ನು ಸಂಪ್ರದಾಯದಂತೆ ಊರಿನ ಹೊರವಲಯದಲ್ಲಿರುವ ಅರಳಿಹಳ್ಳಿ ಕೆರೆ ಅಂಗಳದಲ್ಲಿ ಸ್ವಾಗತಿಸಲಾಯಿತು. ಅಲ್ಲಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ತಿಮ್ಮಪ್ಪ ಸ್ವಾಮಿಯ ‘ಬಿಲ್ಲು ಗೂಡು’ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಹಾಗೂ ಮಂಗಳಾರತಿ ನೆರವೇರಿಸಲಾಯಿತು. ಈ ಪವಿತ್ರ ಸಂದರ್ಭದಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹಾಗೂ…














