Author: kannadanewsnow09

ಹಾವೇರಿ: ಮಹದಾಯಿ ಯೋಜನೆಗೆ ಕಾಂಗ್ರೆಸ್ ನವರಿಂದಲೇ ಹಿನ್ನಡೆಯಾಗಿದ್ದು, ಕರ್ನಾಟಕಕ್ಕೆ ಮಹಾದಾಯಿಯ ಹನಿ ನೀರನ್ನು ಕೊಡುವುದಿಲ್ಲ ಎಂದು 2009 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದರು. ಟ್ರಿಬ್ಯುನಲ್ ಮಾಡುವ ಅಗತ್ಯ ಇಲ್ಲದಿದ್ದರೂ ಟ್ರಿಬ್ಯುನಲ್ ಮಾಡಿದರು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾದಾಯಿ ವಿಚಾರವಾಗಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯುವುದಾಗಿ ಕಾನೂನು ಸಚಿವ ಹೆಚ್ ಕೆ ಪಾಟೀಲ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಹಾದಾಯಿ ಯೋಜನೆಗೆ ಹಿನ್ನಡೆ ಮಾಡಿದ್ದರೆ ಅದು ಕಾಂಗ್ರೆಸ್. ಮಹಾದಾಯಿ ಹನಿ ನೀರನ್ನು ರಾಜ್ಯಕ್ಕೆ ಕೊಡುವುದಿಲ್ಲ ಎಂದು ಹಿಂದೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದರು. ಮಹದಾಯಿ ನೀರಿನ ಹಂಚಿಕೆಗೆ ಟ್ರಿಬ್ಯುನಲ್ ಮಾಡುವ ಅಗತ್ಯ ಇಲ್ಲದಿದ್ದರೂ ಟ್ರಿಬ್ಯುನಲ್ ಮಾಡಿದರು. ಟ್ರಿಬ್ಯುನಲ್ ಅಧ್ಯಕ್ಷರಿಗೆ ನಾಲ್ಕೈದು ವರ್ಷ ಒಂದು ಆಫೀಸ್ ಕೂಡಾ ಕೊಡಲಿಲ್ಲ, ವಿಳಂಬ ಮಾಡಿದರು. ಟ್ರಿಬ್ಯುನಲ್ ನಲ್ಲಿ ತಾವೇ ಬರೆದು ಕೊಟ್ಟು, ನಾವು ನಿರ್ಮಿಸಿದ ಇಂಟಲ್ ಲಿಂಕಿಂಗ್ ಕೆನಾಲ್ ಗೆ ಗೋಡೆ…

Read More

ನವದೆಹಲಿ: ಇತ್ತೀಚೆಗೆ ವಿದೇಶದಿಂದ ಪ್ರಯಾಣಿಸಿದ ಮತ್ತು ಪ್ರಸ್ತುತ ಎಂಪೋಕ್ಸ್ (ಮಂಕಿಪಾಕ್ಸ್) ಪ್ರಸರಣವನ್ನು ಅನುಭವಿಸುತ್ತಿರುವ ಯುವ ಪುರುಷ ರೋಗಿಯನ್ನು ಎಂಪಾಕ್ಸ್ ಶಂಕಿತ ಪ್ರಕರಣವೆಂದು ಗುರುತಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ರೋಗಿಯನ್ನು ಗೊತ್ತುಪಡಿಸಿದ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದ್ದು, ಪ್ರಸ್ತುತ ಸ್ಥಿರವಾಗಿದೆ. ಎಲ್ಲಿ ಎಂಬುದು ಸ್ಪಷ್ಟವಾಗಿಲ್ಲ. ಎಂಪಾಕ್ಸ್ ಇರುವಿಕೆಯನ್ನು ಖಚಿತಪಡಿಸಿಕೊಳ್ಳಲು ರೋಗಿಯ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ. “ಈ ಪ್ರಕರಣದ ಅಭಿವೃದ್ಧಿಯು ಎನ್ಸಿಡಿಸಿ ನಡೆಸಿದ ಹಿಂದಿನ ಅಪಾಯದ ಮೌಲ್ಯಮಾಪನಕ್ಕೆ ಅನುಗುಣವಾಗಿದೆ ಮತ್ತು ಯಾವುದೇ ಅನಗತ್ಯ ಆತಂಕಕ್ಕೆ ಕಾರಣವಿಲ್ಲ” ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. https://twitter.com/ANI/status/1832726785177329665 https://kannadanewsnow.com/kannada/actor-darshan-gets-bail-after-chargesheet-filed-in-jail/ https://kannadanewsnow.com/kannada/alert-beware-of-those-who-use-mobile-phones-excessively-this-dangerous-disease-can-haunt-you/

Read More

ನವದೆಹಲಿ: ಎಂಪೋಕ್ಸ್ (ಮಂಕಿಪಾಕ್ಸ್) ಪ್ರಸರಣ ಹೊಂದಿರುವ ದೇಶದಿಂದ ಇತ್ತೀಚೆಗೆ ಹಿಂದಿರುಗಿದ ಯುವ ಪುರುಷ ರೋಗಿಯನ್ನು ವೈರಸ್ನ ಶಂಕಿತ ಪ್ರಕರಣವೆಂದು ಗುರುತಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ರೋಗಿಯನ್ನು ಗೊತ್ತುಪಡಿಸಿದ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಮತ್ತು ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ರೋಗಿಯು ಎಂಪಾಕ್ಸ್ ಸೋಂಕಿಗೆ ಒಳಗಾಗಿದ್ದಾರೆಯೇ ಎಂದು ಪರಿಶೀಲಿಸಲು ಪರೀಕ್ಷೆಗೆ ಒಳಗಾಗುತ್ತಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ, ಈ ಬೆಳವಣಿಗೆಯು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್ಸಿಡಿಸಿ) ನಡೆಸಿದ ಹಿಂದಿನ ಅಪಾಯದ ಮೌಲ್ಯಮಾಪನಗಳೊಂದಿಗೆ ಹೊಂದಿಕೆಯಾಗುತ್ತದೆ ಎಂದು ಹೇಳಿದ್ದಾರೆ. https://kannadanewsnow.com/kannada/tmc-mp-jawahar-sircar-resigns-from-rajya-sabha/ https://kannadanewsnow.com/kannada/actor-darshan-gets-bail-after-chargesheet-filed-in-jail/ https://kannadanewsnow.com/kannada/alert-beware-of-those-who-use-mobile-phones-excessively-this-dangerous-disease-can-haunt-you/

Read More

ಬೆಂಗಳೂರು: ನಟ ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ನಾಳೆಗೆ ಮುಕ್ತಾಯಗೊಳ್ಳಲಿದೆ. ಈ ಹಿನ್ನಲೆಯಲ್ಲಿ ನಾಳೆ ಜಾಮೀನಿಗಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಹೀಗಾಗಿ ಚಾರ್ಜ್ ಶೀಟ್ ಬೆನ್ನಲ್ಲೇ ನಟ ದರ್ಶನ್ ಗೆ ಜಾಮೀನು ಟೆನ್ಷನ್ ಶುರುವಾಗಿದ್ದು, ಜೈಲಲ್ಲಿ ಅತ್ತಿಂದಿತ್ತ ಓಡಾಡುತ್ತಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿ ರಾಜಾತಿಥ್ಯದ ಪೋಟೋ ವೈರಲ್ ನಂತ್ರ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ನಿನ್ನೆಯಷ್ಟೇ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಭೇಟಿಯಾಗಿ ಜಾಮೀನು ಅರ್ಜಿಗೆ ಸಹಿಯನ್ನು ಪಡೆದಿದ್ದರು ಎನ್ನಲಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲುಪಾಲಾಗಿರುವಂತ ನಟ ದರ್ಶನ್ ನ್ಯಾಯಾಂಗ ಬಂಧನದ ಅವಧಿ ನಾಳೆಗೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಕೋರ್ಟ್ ನಲ್ಲಿ ನಾಳೆ ಕೇಸ್ ವಿಚಾರಣೆ ನಡೆಯಲಿದೆ. ಇದಲ್ಲದೇ ನಟ ದರ್ಶನ್ ಪರವಾಗಿ ವಕೀಲರು ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸುವ ಸಾಧ್ಯತೆ ಇದೆ. ಹೀಗಾಗಿ ನಾಳೆ ಕೋರ್ಟ್ ನಲ್ಲಿ ಜಾಮೀನು ಸಿಗುತ್ತೋ ಅಥವಾ ನ್ಯಾಯಾಂಗ ಬಂಧನ…

Read More

ನವದೆಹಲಿ: ಟಿಎಂಸಿ ಸಂಸದ ಜವಾಹರ್ ಸಿರ್ಕಾರ್ ಭಾನುವಾರ ತಮ್ಮ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಲು ಮತ್ತು ರಾಜಕೀಯವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಸಿರ್ಕಾರ್, ತಮ್ಮ ಪಕ್ಷದ ಕೆಲವು ನಾಯಕರ ಭ್ರಷ್ಟಾಚಾರ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ತಮ್ಮ ನಿರ್ಧಾರಕ್ಕೆ ಒಂದು ಕಾರಣವಾಗಿದೆ ಎಂದು ಹೇಳಿದ್ದಾರೆ. ಆರ್ಜಿ ಕಾರ್ ಆಸ್ಪತ್ರೆಯಲ್ಲಿ ನಡೆದ ಭಯಾನಕ ಘಟನೆಯ ನಂತರ ನಾನು ಒಂದು ತಿಂಗಳಿನಿಂದ ತಾಳ್ಮೆಯಿಂದ ಬಳಲುತ್ತಿದ್ದೇನೆ ಮತ್ತು ಮಮತಾ ಬ್ಯಾನರ್ಜಿ ಅವರ ಹಳೆಯ ಶೈಲಿಯಲ್ಲಿ ಪ್ರತಿಭಟನಾನಿರತ ಕಿರಿಯ ವೈದ್ಯರೊಂದಿಗೆ ನಿಮ್ಮ ನೇರ ಹಸ್ತಕ್ಷೇಪವನ್ನು ನಿರೀಕ್ಷಿಸುತ್ತಿದ್ದೆ. ಅದು ಸಂಭವಿಸಿಲ್ಲ ಮತ್ತು ಸರ್ಕಾರ ಈಗ ತೆಗೆದುಕೊಳ್ಳುತ್ತಿರುವ ಯಾವುದೇ ದಂಡನಾತ್ಮಕ ಕ್ರಮಗಳು ತುಂಬಾ ಕಡಿಮೆ ಮತ್ತು ತಡವಾಗಿವೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಭ್ರಷ್ಟ ವೈದ್ಯರ ಕಾಕಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದರೇ ಮತ್ತು ಅನುಚಿತ ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಂಡ ತಪ್ಪಿತಸ್ಥರಿಗೆ ಖಂಡನೀಯ…

Read More

ಬೆಂಗಳೂರು: ಕೃಷಿ ಇಲಾಖೆಯಿಂದ 2024-25ನೇ ಸಾಲಿನಲ್ಲಿ ಸಹಾಯಧನ ಯೋಜನೆಯಡಿ ಮಿನಿ ಟ್ರ್ಯಾಕ್ಟರ್, ಟಿಲ್ಲರ್, ಪವರ್ ವೀಡರ್ ಸೇರಿದಂತೆ ಇತರೆ ಯಂತ್ರೋಪಕರಣಗಳನ್ನು ಖರೀದಿಸಲು ಸಬ್ಸಿಡಿ ದರದಲ್ಲಿ ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕೃಷಿ ಯಾಂತ್ರೀಕರಣ, ಕೃಷಿ ಸಂಸ್ಕರಣ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಶೇ.50 ರವರೆಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಶೇ.90 ವರೆಗೆ ಸಹಾಯಧನ ನೀಡಲಾಗುತ್ತದೆ. ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕಗಳಿಗೆ ಎಲ್ಲಾ ವರ್ಗದ ರೈತರಿಗೆ ಶೇ.90 ರಷ್ಟು ಸಹಾಯಧನ ಒದಗಿಸಲಾಗುತ್ತದೆ. ಅರ್ಜಿ ಸಲ್ಲಿಕೆ ಹೇಗೆ.? ಆಸಕ್ತ ರೈತರು ಅರ್ಜಿಗಳನ್ನು ಸಂಬಂಧಪಟ್ಟ ನಿಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಅರ್ಜಿಯನ್ನು ಪಡೆದು, ಸಬ್ಸಿಡಿ ದರದಲ್ಲಿ ಯಂತ್ರಗಳನ್ನು ಖರೀದಿಸಲು ಅರ್ಜಿಯನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು. ಯಾವೆಲ್ಲ ಯಂತ್ರಗಳನ್ನು ಪಡೆಯಲು ಸಬ್ಸಿಡಿ ದೊರೆಯಲಿದೆ ಗೊತ್ತಾ? ಮಿನಿ ಟ್ರ್ಯಾಕ್ಟರ್ ಪವರ್ ಟಿಲ್ಲರ್ ಕಳೆ ಕೊಚ್ಚುವಂತ ಯಂತ್ರ ಪವರ್ ವೀಡರ್ ರೋಟೋವೇಟರ್ ಪವರ್ ಸ್ಟ್ರೇಯರ್ ಡೀಸೆಲ್ ಪಂಪ್ ಸೆಂಟ್…

Read More

ಉತ್ತರ ಪ್ರದೇಶ: ಶಿಕ್ಷಣ ಇಲಾಖೆಯ ಸಹಾಯಕ ಅಕೌಂಟೆಂಟ್ ಒಬ್ಬರು ವ್ಯಕ್ತಿಯೊಬ್ಬರಿಂದ 1 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ವಿಜಿಲೆನ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಮಸೋಧಾ ಅಯೋಧ್ಯೆಯಲ್ಲಿ ಈ ಘಟನೆ ನಡೆದಿದೆ. ಅಯೋಧ್ಯಾ ಬ್ಲಾಕ್ ಎಜುಕೇಷನ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಂತ ಸಹಾಯಕ ಅಕೌಂಟೆಂಟ್ ವ್ಯಕ್ತಿಯೊಬ್ಬರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ವಿಜಿಲೆನ್ಸ್ ಅಧಿಕಾರಿಗಳಿಗೆ ಅಕೌಂಟೆಂಟ್ ವಿರುದ್ಧ ದೂರು ನೀಡಿದ್ದರು. ನಿನ್ನೆ ವ್ಯಕ್ತಿ ಅಯೋಧ್ಯಾ ಬ್ಲಾಕ್ ಎಜುಕೇಷನ್ ಕಚೇರಿಯ ಅಕೌಂಟೆಂಟ್ ಗೆ ಒಂದು ಲಕ್ಷ ಲಂಚದ ಹಣವನ್ನು ನೀಡೋದಕ್ಕೆ ತೆರಳಿದ್ದರು. ಹಣವನ್ನು ವ್ಯಕ್ತಿಯಿಂದ ಪಡೆದ ಕೆಲವೇ ಕ್ಷಣಗಳಲ್ಲಿ ವಿಜಿಲೆನ್ಸ್ ತಂಡದ ಅಧಿಕಾರಿ, ಸಿಬ್ಬಂದಿಗಳು ರೆಡ್ ಹ್ಯಾಂಡ್ ಆಗಿಯೇ ಹಿಡಿದಿದ್ದಾರೆ. ಒಟ್ಟಾರೆಯಾಗಿ ಉತ್ತರ ಪ್ರದೇಶದ ಮಸೋಧಾ ಅಯೋಧ್ಯಾ ಬ್ಲಾಕ್ ಎಜುಕೇಶನ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ಅಕೌಂಟೆಂಟ್ 1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ವಿಚಕ್ಷಣಾ ತಂಡ ಬಂಧಿಸಿದೆ. ಆ ವೀಡಿಯೋ ಈ ಕೆಳಗಿದೆ ನೋಡಿ. https://twitter.com/gharkekalesh/status/1832395872195191097 https://kannadanewsnow.com/kannada/maharashtra-two-jawans-killed-in-maharashtra-accident/ https://kannadanewsnow.com/kannada/four-injured-as-gas-cylinder-explodes-in-dharwad/

Read More

ಮಹಾರಾಷ್ಟ್ರ: ಇಲ್ಲಿನ ತಿಲಾರಿ ಡ್ಯಾಂ ಹಿನ್ನೀರಿನಲ್ಲಿ ತರಬೇತಿ ವೇಳೆಯಲ್ಲಿ ಬೋಡ್ ಮುಗುಚಿದ ಪರಿಣಾಮ ಇಬ್ಬರು ಕಮಾಂಡೋಗಳು ದುರ್ಮರಣ ಹೊಂದಿರುವಂತ ಘಟನೆ ನಡೆದಿದೆ. ಚಂದಗಢದ ತಿಲಾರಿ ಅಣೆಕಟ್ಟಿನ ಹಿನ್ನೀರಿನಲ್ಲಿ ಭಾರತೀಯ ಸೇನೆಯ ರಜಪೂತಾನಾ ರೈಫಲ್ ಸಿಬ್ಬಂದಿಯ ತರಬೇತಿ ಅಭ್ಯಾಸದ ವೇಳೆ ದೋಣಿ ಪಲ್ಟಿಯಾದ ಪರಿಣಾಮ ಇಬ್ಬರು ಸೈನಿಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ತಿಲಾರಿ ಅಣೆಕಟ್ಟಿನ ಹಿನ್ನೀರಿನ ಹಜ್ಗೋಲಿ ಪ್ರದೇಶದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಮೃತರನ್ನು ವಿಜಯಕುಮಾರ್ (28) ಮತ್ತು ದಿವಾಕರ್ ರಾಯ್ (28) ಎಂದು ಗುರುತಿಸಲಾಗಿದೆ. ರಜಪೂತಾನಾ ರೈಫಲ್ ಸಿಬ್ಬಂದಿ ಹಜ್ಗೋಲಿ ಪ್ರದೇಶದ ಅಣೆಕಟ್ಟಿನ ನೀರಿಗೆ ತರಬೇತಿಗಾಗಿ ತೆರಳಿದ್ದರು. ದೋಣಿ ಇದ್ದಕ್ಕಿದ್ದಂತೆ ಪಲ್ಟಿಯಾದಾಗ ಒಟ್ಟು ಆರು ಕಮಾಂಡೋಗಳು ಅಭ್ಯಾಸ ಮಾಡುತ್ತಿದ್ದರು. ಎಲ್ಲಾ ಆರು ಮಂದಿ ನೀರಿಗೆ ಬಿದ್ದರು. ಈ ನಾಲ್ವರು ಸೈನಿಕರು ದಡಕ್ಕೆ ಈಜಿದರು. ವಿಜಯಕುಮಾರ್ ಮತ್ತು ದಿವಾಕರ್ ಇಬ್ಬರೂ ತಮ್ಮ ಬೆನ್ನಿನ ಮೇಲೆ ಭಾರಿ ಹೊರೆಯನ್ನು ಹೊಂದಿದ್ದರು. ಹಗ್ಗವು ಅವನ ಕಾಲಿಗೆ ಸಿಲುಕಿದ್ದರಿಂದ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರು…

Read More

ರಾಯಚೂರು; ಜಿಲ್ಲೆಯಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದಂತ ಅಪ್ರಾಪ್ತರು ಹಾಗೂ ಯುವಕರ ಗಲಾಟೆಯನ್ನು ನಿಲ್ಲಿಸೋದಕ್ಕೆ ವೃದ್ಧರೊಬ್ಬರು ತೆರಳಿದ್ದರು. ಈ ವೇಳೆಯಲ್ಲಿ ಅವರಿಗೆ ಯುವಕನೊಬ್ಬ ಕೆನ್ನೆಗೆ ಬಾರಿಸಿದ್ದಾರೆ. ಇದರಿಂದ ಸ್ಥಳದಲ್ಲೇ ವೃದ್ಧ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಗಣೇಶ ಮೂರ್ತಿ ವಿಸರ್ಜನೆಯ ಸಂದರ್ಭದಲ್ಲಿ ಯುವಕರ ಮಧ್ಯೆ ಗಲಾಟೆಯಾಗುತ್ತಿತ್ತು. ಈ ವೇಳೆ ಗಲಾಟೆ ಬಿಡಿಸೋದಕ್ಕೆ ವೃದ್ಧ ವೀರಬಸಪ್ಪ ಎಂಬುವರು ಹೋಗಿದ್ದರು. ಆದರೇ ಬುದ್ಧಿವಾದ ಹೇಳಿ, ಗಲಾಟೆ ಬಿಡಿಸೋದಕ್ಕೆ ಮುಂದಾದಂತ ವೀರ ಬಸಪ್ಪ ಅವರ ಕೆನ್ನಗೆ ಮಹೇಶ್ ಎಂಬಾತ ಹೊಡೆದಿದ್ದಾನೆ. ಮಹೇಶ್ ವೃದ್ಧ ವೀರ ಬಸಪ್ಪ ಕೆನ್ನೆಗೆ ಹೊಡೆಯುತ್ತಿದ್ದಂತೆ ಅವರು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಸಂಬಂಧ ಯುವಕರ ವಿರುದ್ಧ ಕುಟುಂಬಸ್ಥರು ನೀಡಿದಂತ ದೂರು ಆಧರಿಸಿ, ಸಿಂಧನೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮಹೇಶ್, ಪರಶುರಾಮ್ ಹಾಗೂ ಓರ್ವ ಅಪ್ರಾಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. https://kannadanewsnow.com/kannada/do-you-know-how-many-ganesha-idols-were-immersed-in-bengaluru-on-a-single-day-yesterday-here-are-the-details/ https://kannadanewsnow.com/kannada/four-injured-as-gas-cylinder-explodes-in-dharwad/

Read More

ಧಾರವಾಡ: ಜಿಲ್ಲೆಯಲ್ಲಿ ಮನೆಯಲ್ಲಿನ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ.  ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ರೊಟ್ಟಿಗವಾಡದಲ್ಲಿ ಸಿದ್ದಲಿಂಗ ಹಿರೇಮಠ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಈ ದುರಂತ ಸಂಭವಿಸಿದೆ. ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆಯಲ್ಲಿದ್ದಂತ ಸಿದ್ದಲಿಂಗಯ್ಯ ಹಿರೇಮಠ, ಪತ್ನಿ ವಿಶಾಲ ಹಿರೇಮಠ ಹಾಗೂ ಪುತ್ರ ಶ್ರೀಪಾದಯ್ಯ ಮತ್ತು ಸಿದ್ದಲಿಂಗಯ್ಯ ಅವರ ತಮ್ಮನ ಹೆಂಡತಿ ನಿರ್ಮಾಲಾ ಹಿರೇಮಠ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ನಾಲ್ವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಮ ದಾಖಲಾಗಿದೆ. https://kannadanewsnow.com/kannada/do-you-know-how-many-ganesha-idols-were-immersed-in-bengaluru-on-a-single-day-yesterday-here-are-the-details/ https://kannadanewsnow.com/kannada/actor-darshan-was-given-royal-patronage-by-jail-staff-probe/

Read More