Author: kannadanewsnow09

ನವದೆಹಲಿ: ಕಳೆದ ಕೆಲ ದಿನಗಳಿಂದ ಸೆನ್ಸೆಕ್ಸ್ ಹಾಗೂ ನಿಫ್ಟಿ ನಿರಂತರವಾಗಿ ಕುಸಿತದತ್ತ ಸಾಗುತ್ತಿದೆ. ಹೀಗಾಗಿ ಹೂಡಿಕೆದಾರರಿಗೆ ಬಾರಿ ದೊಡ್ಡ ಹೊಡೆತವನ್ನೇ ನೀಡಿದೆ. ಇಂದು ಸೆನ್ಸೆಕ್ಸ್ 200.85 ಪಾಯಿಂಟ್ಸ್ ಕಳೆದುಕೊಂಡು ಕೊನೆಗೊಂಡರೇ, ನಿಫ್ಟಿ 73.30 ಪಾಯಿಂಟ್ಸ್ ಕುಸಿತಗೊಂಡಿದೆ. ಹಣದುಬ್ಬರ ದತ್ತಾಂಶವನ್ನು ಮೃದುಗೊಳಿಸಿದ ಹೊರತಾಗಿಯೂ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಗುರುವಾರ ಆರಂಭಿಕ ಲಾಭವನ್ನು ಕಳೆದುಕೊಂಡವು. ಆಟೋ ಮತ್ತು ಐಟಿ ವಲಯದ ಷೇರುಗಳು ಕುಸಿದವು, ಮಾರುಕಟ್ಟೆಗಳನ್ನು ಕೆಳಕ್ಕೆ ಎಳೆಯಿತು. ಬಿಎಸ್ಇ ಸೆನ್ಸೆಕ್ಸ್ 200.85 ಪಾಯಿಂಟ್ಸ್ ಕಳೆದುಕೊಂಡು 73,828.91 ಕ್ಕೆ ಕೊನೆಗೊಂಡರೆ, ಎನ್ಎಸ್ಇ ನಿಫ್ಟಿ 50 73.30 ಪಾಯಿಂಟ್ಸ್ ಕುಸಿದು 22,397.20 ಕ್ಕೆ ತಲುಪಿದೆ. ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಮಾತನಾಡಿ, ಯುಎಸ್ ಕಿರು ಮಾರುಕಟ್ಟೆಯಲ್ಲಿ ವ್ಯಾಪಾರ ವಾರವನ್ನು ಕಡಿಮೆ ಮಾಡುವುದು ಮತ್ತು ಮಾರಾಟವು ಜಾಗತಿಕ ಮಾರುಕಟ್ಟೆಗೆ ಬಿಕ್ಕಟ್ಟನ್ನು ಒದಗಿಸುತ್ತಿದೆ. ಆದಾಗ್ಯೂ, ಭಾರತವು ಸಂಕುಚಿತ ನಕಾರಾತ್ಮಕ ಪ್ರವೃತ್ತಿಯಿಂದ ಸ್ಥಿತಿಸ್ಥಾಪಕತ್ವ ಮತ್ತು ಆರೋಗ್ಯಕರ ಕಾರ್ಯಕ್ಷಮತೆಯನ್ನು ಎದುರಿಸುತ್ತಿದೆ. ಹಣದುಬ್ಬರದಲ್ಲಿನ ಮಿತಗೊಳಿಸುವಿಕೆ, ಭವಿಷ್ಯದ ದರ…

Read More

ಬೆಂಗಳೂರು: ಬೆಂಗಳೂರು ಅರಮನೆ ಭೂ ಬಳಕೆ, ನಿಯಂತ್ರಣ ವಿಧೇಯಕಕ್ಕೆ ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ ಎರಡು ಸದನದಲ್ಲಿ ಅಂಕಿತ ಸೂಚಿಸಲಾಗಿತ್ತು. ಈ ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಇದೀಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರು ಅರಮನೆ( ಭೂ ಬಳಕೆ ಮತ್ತು ನಿಯಂತ್ರಣ) ಅಧಿನಿಯಮ 2025ಕ್ಕೆ ಅಂಕಿತ ಸೂಚಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದಿಂದ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ವಿಶೇಷ ಗೆಜೆಟ್ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ, 2025 ಇದಕ್ಕೆ 2025 ರ ಮಾರ್ಚ್ ತಿಂಗಳ 12ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2025 ರ ಕರ್ನಾಟಕ ಅಧಿನಿಯಮ ಸಂಖ್ಯೆ: 14 ಎಂಬುದಾಗಿ ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ (ಭಾಗ-IVA) ಪ್ರಕಟಿಸಬೇಕೆಂದು ಆದೇಶಿಸಲಾಗಿದೆ ಎಂದಿದೆ. ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಅಧಿನಿಯಮ, 2025 ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996…

Read More

ತಿರುಪತಿ: ತಿರುಪತಿ ತಿಮ್ಮಪ್ಪನ ಸನ್ನಿಧಿಯ ಲಡ್ಡು ಪ್ರಸಾದಕ್ಕೆ ಕರ್ನಾಟಕದಿಂದ ನಂದಿನಿ ತುಪ್ಪವನ್ನು ಸರಬರಾಜು ಮಾಡಲಾಗುತ್ತಿದೆ. ಈಗ ತಿರುಪತಿಯ ಲಡ್ಡು ಪ್ರಸಾದ ತಯಾರಿಕೆಗೆ ನಂದಿನಿ ತುಪ್ಪಕ್ಕೆ ಮತ್ತಷ್ಟು ಬೇಡಿಕೆಯನ್ನು ಟಿಟಿಡಿ ಇರಿಸಿದೆ. ಯುಗಾದಿಗೆ ತುರ್ತಾಗಿ 2000 ಟನ್ ತುಪ್ಪ ಕಳುಹಿಸುವಂತೆ ಮನವಿ ಮಾಡಿರುವುದಾಗಿ ತಿಳಿದು ಬಂದಿದೆ. ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ತಯಾರಿಕೆಗೆ ಕರ್ನಾಟಕದ ನಂದಿನಿ ತುಪ್ಪವನ್ನು ಬಳಕೆ ಮಾಡಲಾಗುತ್ತಿದೆ. ಕೆಎಂಎಫ್ ನಿಂದ ತಿರುಮಲಕ್ಕೆ ನಂದಿನಿ ತುಪ್ಪವನ್ನು ಸರಬರಾಜು ಮಾಡಲಾಗುತ್ತಿದೆ. ಯುಗಾದಿ ಸಮೀಪಿಸುತ್ತಿದ್ದು, ತಿಮ್ಮಪ್ಪನ ದೇಗುಲಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡುವ ಸಾಧ್ಯತೆ ಇರುವುದರಿಂದ ತುರ್ತಾಗಿ 2000 ಟನ್ ತುಪ್ಪ ಕಳುಹಿಸುವಂತೆ ಟಿಟಿಡಿ ಕೆಎಂಎಫ್ ಗೆ ಮನವಿ ಮಾಡಿದೆ ಎನ್ನಲಾಗಿದೆ. ಅಲ್ಲದೇ ಈ ತಿಂಗಳಿನಲ್ಲೇ ಸಪ್ಲೈ ಮಾಡುವಂತೆ ತಿಳಿಸಿದೆ ಎಂಬುದಾಗಿ ಹೇಳಲಾಗುತ್ತಿದೆ. ಅಂದಹಾಗೇ ಟಿಟಿಡಿಗೆ ಲಡ್ಡು ಪ್ರಸಾದ ತಯಾರಿಕೆಗೆ ಈಗಾಗಲೇ ಕೆ ಎಂ ಎಫ್ ನಿಂದ ಬರೋಬ್ಬರಿ 600 ಟನ್ ತುಪ್ಪವನ್ನು ಕಳುಹಿಸಿಕೊಡಲಾಗಿದೆ. ಇದರ ನಡುವೆ ಈ ವರ್ಷ 5000 ಟನ್ ತುಪ್ಪ…

Read More

ಬೆಂಗಳೂರು: ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳಸಾಗಾಟ ಪ್ರಕರಣಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಇಂದು ಈ ಪ್ರಕರಣ ಸಂಬಂಧ ಇಸಿಐಆರ್ ದಾಖಲಿಸಿಕೊಂಡಿರುವಂತ ಇಡಿ ಅಧಿಕಾರಿಗಳು, ಬೆಂಗಳೂರು, ಮುಂಬೈನ ಹಲವೆಡೆ ದಾಳಿಯನ್ನು ನಡೆಸಿದ್ದಾರೆ. ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳಸಾಗಾಣಿಕೆ ಪ್ರಕರಣಕ್ಕೆ ಇಡಿ ಎಂಟ್ರಿಯಾಗಿದ್ದು, ಬೆಂಗಳೂರು, ಮುಂಬೈನ ಹಲವೆಡೆ ದಾಳಿಯನ್ನು ನಡೆಸಿದೆ. ಪಿಎಂಎಲ್ಎ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡಿರುವಂತ ಇಡಿ ಅಧಿಕಾರಿಗಳು, ಭಾರತದಿಂದ ಅಕ್ರಮವಾಗಿ ಹಣ ವರ್ಗಾವಣೆ ಬಗ್ಗೆಯೂ ತನಿಖೆ ನಡೆಸುತ್ತಿದೆ. ಅಲ್ಲದೇ ಇದು ದೃಢಪಟ್ಟಿದೆ ಎನ್ನಲಾಗುತ್ತಿದೆ. ಹವಾಲಾ ದಂಧೆಯ ಮೂಲಕ ಭಾರತದಿಂದ ದುಬೈಗೆ ಹಣ ಹೋಗುತ್ತಿರೋದನ್ನು ಪತ್ತೆ ಹಚ್ಚಿರುವಂತ ಇಡಿ ಅಧಿಕಾರಿಗಳು, ಬಳಿಕ ಚಿನ್ನದ ಗಟ್ಟಿಯ ರೂಪದಲ್ಲಿ ಬೆಂಗಳೂರಿಗೆ ವಾಪಾಸ್ ಬರುವ ಬಗ್ಗೆಯೂ ಮಾಹಿತಿಯನ್ನು ಕಲೆ ಹಾಕಿದ್ದಾರೆ. ವಿದೇಶದಲ್ಲಿರುವವರಿಗೆ ಅಕ್ರಮವಾಗಿ ಹಣ ವರ್ಗಾವಣೆ ಹಾಗೂ ಅಕ್ರವಾಗಿ ಚಿನ್ನ ಕಳ್ಳ ಸಾಗಾಣಿಕೆ ಸಂಬಂಧ ಇಡಿ ಅಧಿಕಾರಿಗಳು…

Read More

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಬಾಹ್ಯಾಕಾಶ ಡಾಕಿಂಗ್ ಪ್ರಯೋಗದ (SpaDEX) ಭಾಗವಾಗಿ ಉಪಗ್ರಹಗಳ ಡಾಕಿಂಗ್ ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಇದು ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಒಂದು ಪ್ರಮುಖ ಪ್ರಗತಿಯಾಗಿದೆ. ಈ ಸಾಧನೆಯು ಭಾರತೀಯ ಆಂಟ್ರಿಕ್ಯಾ ಸ್ಟೇಷನ್, ಚಂದ್ರಯಾನ 4 ಮತ್ತು ಗಗನ್ಯಾನ್ ಸೇರಿದಂತೆ ಭವಿಷ್ಯದ ಕಾರ್ಯಾಚರಣೆಗಳಿಗೆ ಅಡಿಪಾಯ ಹಾಕುತ್ತದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು X (ಹಿಂದೆ ಟ್ವಿಟರ್) ನಲ್ಲಿ ತಂಡವನ್ನು ಅಭಿನಂದಿಸಿದರು, ಪ್ರಧಾನಿ ನರೇಂದ್ರ ಮೋದಿಯವರ “ನಿರಂತರ ಪ್ರೋತ್ಸಾಹವು ಉತ್ಸಾಹವನ್ನು ಹೆಚ್ಚಿಸುತ್ತಿದೆ” ಎಂದು ಹೇಳಿದರು. https://twitter.com/DrJitendraSingh/status/1900066791424221321 ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಒಂದು ಪ್ರಮುಖ ಹೆಜ್ಜೆ ನಿರ್ಣಾಯಕ ಬಾಹ್ಯಾಕಾಶ ನೌಕೆ ಸಂಧಿಸುವುದು, ಡಾಕಿಂಗ್ ಮತ್ತು ಡಿ-ಡಾಕಿಂಗ್ ತಂತ್ರಜ್ಞಾನಗಳನ್ನು ಪರೀಕ್ಷಿಸಲು ISRO ಡಿಸೆಂಬರ್ 30, 2024 ರಂದು SpaDEX ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಮೊದಲ ಯಶಸ್ವಿ ಡಾಕಿಂಗ್ ಜನವರಿ 16 ರಂದು ಪೂರ್ಣಗೊಂಡಿತು, ಹಿಂದಿನ ಪ್ರಾಯೋಗಿಕ ಪ್ರಯತ್ನಗಳ ನಂತರ, ಬಾಹ್ಯಾಕಾಶ ನೌಕೆಯನ್ನು ಸುರಕ್ಷಿತ ದೂರಕ್ಕೆ ಸ್ಥಳಾಂತರಿಸುವ ಮೊದಲು…

Read More

ಬೆಂಗಳೂರು: ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧಿಸಲ್ಪಟ್ಟು ಜೈಲು ಪಾಲಾಗಿದ್ದಾರೆ. ನಟಿ ರನ್ಯಾ ರಾವ್ ಅವರು ಬಾಯ್ ಫ್ರೆಂಡ್ ಒಬ್ಬರನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ. ಬಿಸ್ಕೆಟ್ ರಾಣಿ ರನ್ಯಾ ರಾವ್ ಬಾಯ್ ಫ್ರೆಂಡ್ ತರುಣ್ ಎಂಬುದಾಗಿ ತಿಳಿದು ಬಂದಿದ್ದು ಆತ ಯಾರು ಎನ್ನುವ ಬಗ್ಗೆ ಮುಂದೆ ಓದಿ. ನಟಿ ರನ್ಯಾ ರಾವ್ ಅವರು ಟಾಲಿವುಡ್ ನಟ ತರುಣ್ ಎಂಬುವರು ಬಾಯ್ ಫ್ರೆಂಡ್ ಎಂಬುದಾಗಿ ಹೇಳಲಾಗುತ್ತಿದೆ. ತೆಲುಗು ಸಿನಿಮಾಕ್ಕೆ ಎಂಟ್ರಿ ಕೊಡುವ ಮೊದಲು ಸಿನಿಮಾಗಾಗಿ ತನ್ನ ಹೆಸರನ್ನು ತರುಣ್  ಎಂಬುದಾಗಿ ಬದಲಿಸಿಕೊಂಡಿದ್ದನಂತೆ. ತರುಣ್ ಮೂಲ ಹೆಸರು ವಿರಾಟ್ ಕೊಂಡೂರು ರಾಜ್ ಎಂಬುದಾಗಿದೆ. 2018ರಲ್ಲಿ ತೆರೆ ಕಂಡಂತ ಪರಿಚಯಂ ಸಿನಿಮಾದಲ್ಲಿ ತರುಣ್ ಜೊತೆಗೆ ನಟಿ ರನ್ಯಾ ರಾವ್ ನಟಿಸಿದ್ದರು. ಪರಿಚಯಂ ಸಿನಿಮಾದ ನಾಯಕ ನಟರಾಗಿದ್ದದ್ದೇ ತರುಣಾ ರಾಜ್ ಆಗಿದ್ದಾರೆ. ತೆಲುಗಿನ ಮೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ತರುಣ್ ಹೀರೋ ಆಗಿ ನಟಿಸಿದ್ದಾರೆ. ತರುಣ್ ಅವರೇ ನಟಿ ರನ್ಯಾ ರಾವ್ ಅವರ ಬಾಯ್ ಫ್ರೆಂಡ್…

Read More

ಬೆಂಗಳೂರು: ನಟಿ ರನ್ಯಾ ರಾವ್ ಪ್ರಕರಣಕ್ಕೆ ಇಡಿ ಎಂಟ್ರಿಯಾಗಿದೆ. ಇಸಿಐಆರ್ ದಾಖಲಿಸಿಕೊಂಡಿರುವಂತ ಇಡಿ ಅಧಿಕಾರಿಗಳು ಬೆಂಗಳೂರಿನ ಹಲವೆಡೆ ರನ್ಯಾ ರಾವ್ ಸ್ಮಗ್ಲಿಂಗ್ ಪ್ರಕರಣ ಸಂಬಂಧ ದಾಳಿ ನಡೆಸಿದೆ. ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಾಣಿಕೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಸಿಐಡಿ ದಾಳಿಯನ್ನು ರಾಜ್ಯ ಸ್ರಕಾರ ಹಿಂಪಡೆದಿದ್ದು, ಎಸಿಎಸ್ ಗೌರವ್ ಗುಪ್ತ ನೇತೃತ್ವದಲ್ಲಿ ಪ್ರತ್ಯೇಕ ತನಿಖೆಗೆ ಆದೇಶಿಸಿದೆ. ಈ ನಡುವೆ ಇಸಿಐಆರ್ ದಾಖಲಿಸಿಕೊಂಡಿರುವಂತ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ನಟಿ ರನ್ಯಾ ರಾವ್ ಪ್ರಕರಣ ದಾಖಲಿಸಿಕೊಂಡು ಬೆಂಗಳೂರಿನ ಹಲವೆಡೆ ದಾಳಿ ನಡೆಸಿ, ತನಿಖೆ ನಡೆಸುತ್ತಿದ್ದಾರೆ. https://kannadanewsnow.com/kannada/isros-spadex-satellites-accomplish-de-docking-union-minister-jitendra-singh-congratulates-space-agency/ https://kannadanewsnow.com/kannada/scientist-on-dialysis-dies-after-fight-with-mohali-neighbour-over-parking-video-surfaces/

Read More

ನಮ್ಮಲ್ಲಿ ಹಲವರಿಗೆ ಒಂದು ಸಂದೇಹವಿದೆ, ನಾವು ಬೇಗನೆ ಹಣವನ್ನು ಗಳಿಸಲು ನಾವು ಏನು ಮಾಡಬಹುದು, ಶಾಶ್ವತ ಆದಾಯದ ಮಾರ್ಗ ಯಾವುದು ಮತ್ತು ಅವರು ಹೆಚ್ಚು ಹಣವನ್ನು ಹೇಗೆ ಗಳಿಸುತ್ತಾರೆ? ಹಣ ಗಳಿಸುವುದು ಅಷ್ಟು ಕಷ್ಟವಲ್ಲ. ಹಣವನ್ನು ಹೆಚ್ಚು ಪ್ರೀತಿಸುವವರು ಹಣವನ್ನು ತಮ್ಮ ಕೈಯಲ್ಲಿ ಇಟ್ಟುಕೊಳ್ಳುತ್ತಾರೆ. ‘ ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ಈ ಹಣ ಸಂಪಾದಿಸುವ ಮೊದಲು ಸಾಕು’ ಎಂದು ಬೇಸರ ಪಡುವವರೂ ಅಷ್ಟೆ. ಈ ಪೋಸ್ಟ್ ಮೂಲಕ, ಆದಾಯವನ್ನು ಶಾಶ್ವತವಾಗಿಸಲು ಆದಾಯವನ್ನು ಹಲವು ಬಾರಿ ಹೆಚ್ಚಿಸಲು ಏನು ಮಾಡಬೇಕು ಎಂಬ ಮಾಹಿತಿಯನ್ನು ನಾವು ತಿಳಿಯಲಿದ್ದೇವೆ. ಇದರಲ್ಲಿ ಹೇಳಿದ ಉಪಾಯಗಳನ್ನು ಮಾಡಿದರೂ ಹಣ ಉಳಿಯುತ್ತದೆ. ಪರಿಹಾರವನ್ನು ಹೊರತುಪಡಿಸಿ, ಅನುಸರಿಸಬೇಕಾದ ಕೆಲವು ವಿಷಯಗಳನ್ನು ಸಹ ಉಲ್ಲೇಖಿಸಲಾಗಿದೆ. ಬೇಕಾದವರು ಓದಿ ಪ್ರಯೋಜನ ಪಡೆಯಬಹುದು. ಹಣವನ್ನು ಸಂಗ್ರಹಿಸಲು ಅನುಸರಿಸಬೇಕಾದ ವಿಷಯಗಳು: ಈ ತಿಂಗಳ ನಿಮ್ಮ ಸಂಬಳವನ್ನು ನೀವು ಸ್ವೀಕರಿಸಿದ್ದೀರಾ?…

Read More

ಪಾಕಿಸ್ತಾನ: ಬಲೂಚಿಸ್ತಾನ ಪ್ರಾಂತ್ಯದಲ್ಲಿ ಅಪಹರಣಕ್ಕೊಳಗಾದ ರೈಲಿನಿಂದ ಪಾಕಿಸ್ತಾನ ಭದ್ರತಾ ಪಡೆಗಳು ಎಲ್ಲಾ ಉಗ್ರರನ್ನು ಕೊಂದು 190 ಒತ್ತೆಯಾಳುಗಳನ್ನು ರಕ್ಷಿಸಿವೆ ಎಂದು ಹಲವಾರು ವರದಿಗಳು ಬುಧವಾರ ತಿಳಿಸಿವೆ. ಜಾಫರ್ ಎಕ್ಸ್ಪ್ರೆಸ್ ವಿಮಾನದಲ್ಲಿದ್ದ 500 ಪ್ರಯಾಣಿಕರನ್ನು ರಕ್ಷಿಸುವ ಮಿಲಿಟರಿ ಕಾರ್ಯಾಚರಣೆ ಕೊನೆಗೊಂಡಿದ್ದು, 28 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಎಎಫ್ಪಿ ವರದಿ ಮಾಡಿದೆ. ರೈಲು ಅಪಹರಣ ಘಟನೆಯ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಡಜನ್ಗಟ್ಟಲೆ ಭಯೋತ್ಪಾದಕರನ್ನು ‘ನರಕಕ್ಕೆ ಕಳುಹಿಸಲಾಗಿದೆ’ ಮತ್ತು ಮುಗ್ಧ ಜೀವಗಳ ನಷ್ಟದಿಂದ ತೀವ್ರ ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳಿದರು. “ಜಾಫರ್ ಎಕ್ಸ್‌ಪ್ರೆಸ್ ಮೇಲಿನ ಘೋರ ಭಯೋತ್ಪಾದಕ ದಾಳಿಯ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನನಗೆ ವಿವರಿಸಿದ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಅವರೊಂದಿಗೆ ಮಾತನಾಡಿದೆ. ಇಡೀ ರಾಷ್ಟ್ರವು ಈ ಹೇಯ ಕೃತ್ಯದಿಂದ ತೀವ್ರವಾಗಿ ಆಘಾತಕ್ಕೊಳಗಾಗಿದೆ ಮತ್ತು ಮುಗ್ಧ ಜೀವಗಳ ನಷ್ಟದಿಂದ ದುಃಖಿತವಾಗಿದೆ – ಇಂತಹ ಹೇಡಿತನದ ಕೃತ್ಯಗಳು ಪಾಕಿಸ್ತಾನದ ಶಾಂತಿಯ ಸಂಕಲ್ಪವನ್ನು ಅಲುಗಾಡಿಸುವುದಿಲ್ಲ. ಹುತಾತ್ಮರ ಕುಟುಂಬಗಳಿಗೆ ನಾನು ನನ್ನ ಹೃತ್ಪೂರ್ವಕ ಸಂತಾಪಗಳನ್ನು…

Read More

ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಮಾಡಿದ ಆರೋಪಗಳ ತನಿಖಾ ವರದಿ ಹಾಗೂ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ 1 ರಿಂದ 18ರವರೆಗಿನ ಉಪ ಸೀಳು ಕಾಲುವೆಗಳ ಅಧುನೀಕರಣ ಅಂದಾಜು ಪಟ್ಟಿಯ ತನಿಖಾ ವರದಿಯನ್ನು ಸಲ್ಲಿಕೆ ಮಾಡಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಸಿಎಂ ಕಚೇರಿಯು, ಮುಖ್ಯ ಮಂತ್ರಿ ಸಿದ್ದರಾಮಯ್ಯರವರಿಗೆ ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ ದಾಸ್ ವಿಚಾರಣಾ ಆಯೋಗವು ದಿನಾಂಕ: 12.03.2025 ರಂದು ಈ ಕೆಳಕಂಡಂತೆ ಎರಡು ಪ್ರತ್ಯೇಕ ತನಿಖಾ ವರದಿಗಳನ್ನು ಸಲ್ಲಿಸಿದೆ ಎಂದಿದೆ. 1) ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಮಾಡಿದ ಆರೋಪಗಳ ತನಿಖಾ ವರದಿ 2) ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ 01 ರಿಂದ 18 ರವರೆಗಿನ ಉಪ/ಸೀಳು ಕಾಲುವೆಗಳ ಆಧುನೀಕರಣ ಅಂದಾಜು ಪಟ್ಟಿ – ತನಿಖಾ ವರದಿ ಮೇಲಿನ ಕ್ರಮಸಂಖ್ಯೆ (1)ರ ತನಿಖಾ ವರದಿಯಲ್ಲಿ: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಸರ್ಕಾರದ…

Read More