Author: kannadanewsnow09

ಮಂಡ್ಯ: ಪ್ರಿಯಾಂಕ ಖರ್ಗೆ ಮಾತಿಗೆ ಮುಂಚೆ ಊರಿಗೆಲ್ಲ ಬುದ್ಧಿ ಹೇಳುತ್ತಿದ್ದರು. ಈಗ ಅವರೇ ಬುದ್ಧಿ ಹೇಳಿಸಿಕೊಳ್ಳುವ ಸ್ಥಿತಿಗೆ ಬಂದು ತಲುಪಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ಮಂಡ್ಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು. ಖರ್ಗೆ ಅವರ ಕುಟುಂಬ ಕೆಐಡಿಬಿಯಿಂದ ಸಿಎ ಸೈಟ್ ಪಡೆದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು; ಹಲವಾರು ಜನರಿಗೆ ಈ ರೀತಿಯಲ್ಲಿ ಜಾಗ ಕೊಟ್ಟಿದ್ದಾರೆ, ಬೇಕಾದಷ್ಟು ಪ್ರಕರಣಗಳು ನಡೆದಿವೆ. ಖರ್ಗೆ ಅವರು ದೇಶಕ್ಕೆ, ನಾಡಿಗೆಲ್ಲ ಬುದ್ದಿ ಹೇಳುವವರು, ಉಪದೇಶ ಮಾಡುವವರು. ಯಾವ ಆಧಾರದ ಮೇಲೆ ಈ ಜಾಗವನ್ನು ಇವರು ತೆಗೆದುಕೊಂಡಿದ್ದಾರೆ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು. ದುಡ್ಡು ಕೊಟ್ಟು ಖರೀದಿಸಲು ಆಗುತ್ತಿರಲಿಲ್ಲವಾ? ಖಾಸಗಿ ಜಮೀನು ಖರೀದಿ ಮಾಡಬಹುದಿತ್ತು. ಕೆಐಎಡಿಬಿ ಜಾಗವೇ ಬೇಕಿತ್ತಾ? ಇದು ಅಧಿಕಾರ ದುರಪಯೋಗ. ದೇಶಕ್ಕೆ ಬುದ್ದಿ ಹೇಳುವವರು ಇದಕ್ಕೆ ಉತ್ತರ ಹೇಳಬೇಕು ಎಂದು ಅವರು ಟೀಕಿಸಿದರು. ರಾಜಭವನ ಚಲೋಗೆ ಸಚಿವರ ವ್ಯಂಗ್ಯ:…

Read More

ಮಂಡ್ಯ: ಇಂದು ಮಂಡ್ಯ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್‌ನ ನಾಗೇಶ್, ಉಪಾಧ್ಯಕ್ಷರಾಗಿ ಬಿಜೆಪಿಯ ಅರುಣ್ ಕುಮಾರ್ ಆಯ್ಕೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಗೆ ಭಾರೀ ಮುಖಭಂಗವೇ ಆಗಿದೆ. ಮಂಡ್ಯ ನಗರ ಸಭೆಯು 35 ಸದಸ್ಯರ ಬಲ ಹೊಂದಿದೆ. ಇದರಲ್ಲಿ ಎಂಪಿ 1, ಶಾಸಕ 1 ಸೇರಿ 37 ಜನರಿಗೆ ಮತದಾನದ ಹಕ್ಕು ಹೊಂದಿದ್ದರು. ಒಟ್ಟು ಜೆಡಿಎಸ್‌ 18 ಸದಸ್ಯರಿದ್ದರೇ, ಒಟ್ಟು ಬಿಜೆಪಿಯ 2 ಸದಸ್ಯರು ಇದ್ದಾರೆ. ಒಟ್ಟು ಕಾಂಗ್ರೆಸ್‌ನ 10 ಸದಸ್ಯರು. ಒಟ್ಟು ಪಕ್ಷೇತರ 5 ಸದಸ್ಯರು. ಜೆಡಿಎಸ್‌ 15+, ಬಿಜೆಪಿ 2+, ಕಾಂಗ್ರೆಸ್‌ನಿಂದ ಅಪರೇಷನ್ 1+, ಸಂಸದ 1 = ಜೆಡಿಎಸ್‌ 19 ಸದಸ್ಯರ ಸಂಖ್ಯಾಬಲವಿತ್ತು. ಕಾಂಗ್ರೆಸ್ 9+, ಪಕ್ಷೇತರ 5+, ಜೆಡಿಎಸ್‌ನಿಂದ ಅಪರೇಷನ್ 3+, ಶಾಸಕ 1 = 18 ಸದಸ್ಯರ ಬಲವಿತ್ತು. ಅಂತಿಮವಾಗಿ ಮಂಡ್ಯ ನಗರಸಭೆ ಜೆಡಿಎಸ್ ತೆಕ್ಕೆಗೆ ಸೇರಿದೆ. ಮಂಡ್ಯ ನಗರಸಭೆ ಗದ್ದುಗೆಯನ್ನು ಜೆಡಿಎಸ್ ಏರಿದೆ. ಆಪರೇಷನ್‌ಗೆ ಸೆಡ್ಡು ಹೊಡೆದು ಜೆಡಿಎಸ್‌…

Read More

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಪಾಲಾಗಿರುವಂತ ಪವಿತ್ರಾಗೌಡಗೆ, ಮತ್ತೆ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್.9ರವರೆಗೆ ಕೋರ್ಟ್ ವಿಸ್ತರಿಸಿ ಆದೇಶಿಸಿದೆ. ಹೀಗಾಗಿ ಆರೋಪಿ ಪವಿತ್ರಾಗೌಡಗೆ ಜೈಲೇ ಗತಿ ಎನ್ನುವಂತೆ ಆಗಿದೆ. ಇಂದು ಪ್ರಕರಣ ಸಂಬಂಧ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾಗೌಡ ಅವರ ನ್ಯಾಯಾಂಗ ಬಂಧನ ಕುರಿತಂತ ಅರ್ಜಿಯನ್ನು ವಿಚಾರಣೆ ನಡೆಸಿತು. ಜಾಮೀನು ಅರ್ಜಿಯ ವಿಚಾರಣೆಯ ನಡುವೆಯೂ ಕೋರ್ಟ್ ಸೆಪ್ಟೆಂಬರ್.9ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶಿಸಿದೆ. ಅಂದಹಾಗೇ ನಿನ್ನೆ ಕೋರ್ಟ್ ನಲ್ಲಿ ಆರೋಪಿ ಸ್ಥಾನದಲ್ಲಿರುವಂತ ಮಹಿಳೆ ಹಾಗೂ ಆನಾರೋಗ್ಯದ ಕಾರಣದಿಂದಾಗಿ ಸಿಆರ್ ಪಿಸಿ ಸೆಕ್ಷನ್ ನಡಿ 437ನಂತೆ ಆರೋಪಿ ಪವಿತ್ರಾಗೌಡಗೆ ಜಾಮೀನು ನೀಡುವಂತೆ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದಿಸಿದ್ದರು. ಈ ಕುರಿತಾದಂತ ವಿಚಾರಣೆ ಇಂದಿಗೆ ಮುಂದೂಡಲಾಗಿತ್ತು. ಆ ವಿಚಾರಣೆ ಬಾಕಿ ಬೆನ್ನಲ್ಲೇ, ಕೋರ್ಟ್ ಸೆಪ್ಟೆಂಬರ್.9ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶಿಸಿದೆ. https://kannadanewsnow.com/kannada/bengaluru-power-outages-in-these-areas-of-the-city-on-august-29/ https://kannadanewsnow.com/kannada/breaking-court-extends-actor-darshans-judicial-custody-till-september-9/

Read More

ಬೆಂಗಳೂರು: 20/66/11ಕೆವಿ ಮತ್ತಿಕೆರೆ ಎಂ ಯು ಎಸ್ ಎಸ್ ದಿನಾಂಕ 29.08.2024 ರಂದು 10:00ಗಂಟೆಗಳಿಂದ 17:00ಗಂಟೆಗಳವರೆಗೆ ವಾರ್ಷಿಕ ನಿರ್ವಹಣೆ  ಆದ್ದರಿಂದ ಈ ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್.ಜಿ. ಹಳ್ಳಿ, ಆರ್.ಎಮ್.ವಿ 2ನೇ ಹಂತ, ಸಂಜೀವಪ್ಪ ಕಾಲೋನಿ, ನ್ಯೂ ಬಿ.ಇ.ಎಲ್‌ ರಸ್ತೆ, ಎಂ.ಎಸ್. ಆರ್‌ ನಗರ, ಮೋಹನ್‌ ಕುಮಾರ ನಗರ, ಪಂಪಾ ನಗರ, ಬಿ.ಕೆ. ನಗರ,ಬಾಂಬೆ ಡೈಯಿಂಗ್‌ ರಸ್ತೆ, ಯಶವಂತಪುರ ಮೊದಲನೆ ಮುಖ್ಯ ರಸ್ತೆ, ಗೋಕುಲ, ಹೆಚ್.ಎಂ.ಟಿ. ಮುಖ್ಯ ರಸ್ತೆ, ಹೆಚ್.ಎಂ.ಟಿ. ಲೇ ಔಟ್‌, ಬೃಂದಾವನ ನಗರ, ಎಸ್.ಬಿ.ಎಮ್ ಕಾಲೋನಿ, ಎಂ.ಆರ್.ಜೆ ಕಾಲೋನಿ, ವಿ.ಆರ್.ಲೇ ಔಟ್‌, ಜೆ.ಪಿ ಪಾರ್ಕ್‌ ರಸ್ತೆಗಳಲ್ಲಿ ಆಗಸ್ಟ್.29ರ ನಾಳೆ ಕರೆಂಟ್ ಇರೋದಿಲ್ಲ ಎಂಬುದಾಗಿ ಬೆಸ್ಕಾಂ ತಿಳಿಸಿದೆ. https://kannadanewsnow.com/kannada/good-news-for-railway-passengers-special-train-service-between-mysuru-and-sengottai-launched/ https://kannadanewsnow.com/kannada/breaking-court-extends-actor-darshans-judicial-custody-till-september-9/ https://kannadanewsnow.com/kannada/the-process-of-transformation-has-begun-in-jammu-and-kashmir-under-the-bjp-central-government/

Read More

ಮೈಸೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಮೈಸೂರು ಮತ್ತು ಸೆಂಗೊಟ್ಟೈ ನಡುವೆ ವಿಶೇಷ ರೈಲು ಸೇವೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ. ಈ ಸೇವೆಯು ಎರಡು ಟ್ರಿಪ್ ಗಳಿಗೆ ಮಾತ್ರ ಲಭ್ಯವಿರುತ್ತದೆ. ಹೆಚ್ಚು ಆರಾಮದಾಯಕ ಪ್ರಯಾಣಕ್ಕಾಗಿ ಈ ಸೇವೆಯ ಲಾಭವನ್ನು ಪಡೆಯಲು ಪ್ರಯಾಣಿಕರನ್ನು ಪ್ರೋತ್ಸಾಹಿಸಲಾಗುತ್ತದೆ. ರೈಲು ವೇಳಾಪಟ್ಟಿ: 1.ರೈಲು ಸಂಖ್ಯೆ 06241 ಮೈಸೂರಿನಿಂದ ಸೆಂಗೊಟ್ಟೈ ಎಕ್ಸ್ಪ್ರೆಸ್: ಮೈಸೂರಿನಿಂದ ಸೆಪ್ಟೆಂಬರ್ 4, 2024 ರ ಬುಧವಾರ ಮತ್ತು ಸೆಪ್ಟೆಂಬರ್ 7, 2024 ರ ಶನಿವಾರ 21:20 ಗಂಟೆಗೆ ನಿರ್ಗಮಿಸುತ್ತದೆ ಮತ್ತು ಮರುದಿನ 16:50 ಗಂಟೆಗೆ ಸೆಂಗೊಟ್ಟೈಗೆ ಆಗಮಿಸುತ್ತದೆ ರೈಲು ಈ ಕೆಳಗಿನ ನಿಲ್ದಾಣಗಳಲ್ಲಿ ವಾಣಿಜ್ಯ ನಿಲುಗಡೆಗಳನ್ನು ಮಾಡುತ್ತದೆ ಮಂಡ್ಯ, ಮದ್ದೂರು, ರಾಮನಗರ, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ನಾಮಕ್ಕಲ್, ಕರೂರ್, ತಿರುಚಿರಾಪಳ್ಳಿ, ಪುದುಕೊಟ್ಟೈ, ಕಾರೈಕುಡಿ, ಶಿವಗಂಗಾ, ಮನಮದುರೈ, ಅರುಪ್ಪುಕ್ಕೊಟ್ಟೈ, ವಿರುದುನಗರ ಜಂಕ್ಷನ್, ಶಿವಕಾಶಿ, ಶ್ರೀವಿಲ್ಲಿಪುಟ್ಟೂರು, ರಾಜಪಾಲಯಂ, ಶಂಕರನ್ ಕೋವಿಲ್, ಪಂಬಾಕೋವಿಲ್ ಶಾಂಡಿ, ಕಡಯನಲ್ಲೂರ್, ತೆಂಕನಲ್ಲೂರ್. 2. ರೈಲು…

Read More

ಬೆಂಗಳೂರು: ಸೈಬರ್ ವಂಚನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ತಡೆಗೆ ಪೊಲೀಸರು ಎಷ್ಟೇ ಕ್ರಮ ವಹಿಸಿದ್ರೂ ವಂಚಕರು ಮಾತ್ರ ಮಗದೊಂದು ದಾರಿಯನ್ನು ಹಿಡಿಯುವ ಮೂಲಕ ಬ್ಯಾಂಕ್ ಗ್ರಾಹಕರ ಖಾತೆಗೆ ಕನ್ನ ಹಾಕಲಾಗುತ್ತಿದೆ. ಇದರ ನಡುವೆ ನೀವು ಈ ಆನ್ ಲೈನ್ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿದ್ದೇ ಆದ್ರೇ, ನೀವು ವಂಚನೆಗೆ ಒಳಗಾಗೋಕೆ ಸಾಧ್ಯವೇ ಇಲ್ಲ. ಅವು ಏನು ಅಂತ ಮುಂದೆ ಓದಿ. ಸೋಷಿಯಲ್ ಮೀಡಿಯಾಗಳ ಬಳಕೆ ಹೆಚ್ಚಾದಂತೆ, ನಮ್ಮ ವೈಯಕ್ತಿಕ ಮಾಹಿತಿಗಳನ್ನು ಅಲ್ಲಿ ಹಂಚಿಕೊಂಡು, ಆನ್ ಲೈನ್ ವಂಚಕರಿಗೆ ನಾವೇ ಅವಕಾಶ ಮಾಡಿಕೊಡುವಂತ ನಡೆಯನ್ನು ತೋರಿ ಬಿಡುತ್ತೇವೆ. ಆದರೇ ಹೀಗೆ ಮಾಡೋದನ್ನು ತಪ್ಪಿಸಿದ್ರೇ, ಅಗತ್ಯವಿರುವ, ಗೌಪ್ಯತೆಗೆ ಧಕ್ಕೆ ಆಗದಂತ ವಿಷಯಗಳನ್ನು ಅಷ್ಟೇ ಹಂಚಿಕೊಳ್ಳುವುದರಿಂದ ನೀವು ಆನ್ ಲೈನ್ ವಂಚನೆಯನ್ನು ತಡೆಯಬಹುದಾಗಿದೆ. 5 ಆನ್ ಲೈನ್ ಸುರಕ್ಷಾ ಕ್ರಮಗಳು ಯಾವುದೇ ಕಾರಣಕ್ಕೂ ನಿಮ್ಮ ಮಾಹಿತಿಗಳಾದ ಪೂರ್ಣ ಹೆಸರು, ಮನೆಯ ವಿಳಾಸ ಮತ್ತು ನಿಮ್ಮ ಮಕ್ಕಳ ಶಾಲೆಯ ಹೆಸರನ್ನು ಇಂಟರ್ನೆಟ್ ನಲ್ಲಿ ಹಂಚಿಕೊಳ್ಳಬೇಡಿ. ಯಾವಾಗಲೂ ನಿಮ್ಮ ಕಂಪ್ಯೂಟರ್…

Read More

ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಶೇ.60 ರಿಂದ 74.99 ಹಾಗೂ ಶೇ.75ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು WWW.SW.KAR.NIC.IN ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ನೀಡಿ, ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. https://kannadanewsnow.com/kannada/good-news-for-those-going-home-for-ganesh-festival-special-train-service-between-bengaluru-and-kalaburagi/ https://kannadanewsnow.com/kannada/good-news-from-the-central-government-rs-72000-will-be-available-every-year-under-this-scheme-pension/ https://kannadanewsnow.com/kannada/karnataka-govt-advertisements-heres-the-guidelines-for-digital-media/

Read More

ಬೆಂಗಳೂರು: ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್ ಎನ್ನುವಂತೆ ಬೆಂಗಳೂರು ಟು ಕಲಬುರ್ಗಿ ನಡುವೆ ವಿಶೇಷ ರೈಲು ಸಂಚಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕುರಿತು ನೈರುತ್ಯ ರೈಲ್ವೆ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಪ್ರಯಾಣಿಕರ ಹೆಚ್ಚಿನ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ರೈಲು ಸಂಖ್ಯೆ 06589/06590 ಎಸ್.ಎಂ.ವಿ.ಟಿ ಬೆಂಗಳೂರು- ಕಲಬುರಗಿ- ಎಸ್.ಎಂ.ವಿ.ಟಿ ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ ರೈಲನ್ನು ಪ್ರತಿ ದಿಕ್ಕಿನಲ್ಲಿ 03 ಟ್ರಿಪ್ ಓಡಿಸಲಿದೆ ಎಂದಿದೆ. ರೈಲು ಸಂಖ್ಯೆ 06589 ಎಸ್.ಎಂ.ವಿ.ಟಿ ಬೆಂಗಳೂರು-ಕಲಬುರಗಿ ಎಕ್ಸ್ಪ್ರೆಸ್ ವಿಶೇಷ ರೈಲು ಎಸ್.ಎಂ.ವಿ.ಟಿ ಬೆಂಗಳೂರಿನಿಂದ 05.09.2024, 06.09.2024 ಮತ್ತು 07.09.2024 ರಂದು ರಾತ್ರಿ 9.15 ಕ್ಕೆ ಹೊರಟು ಮರುದಿನ ಬೆಳಿಗ್ಗೆ 07.40 ಕ್ಕೆ ಕಲಬುರಗಿ ತಲುಪಲಿದೆ. ರೈಲು ಸಂಖ್ಯೆ 06590 ಕಲಬುರಗಿ – ಎಸ್.ಎಂ.ವಿ.ಟಿ ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ ರೈಲು ಕಲಬುರಗಿಯಿಂದ 06.09.2024, 07.09.2024 ಮತ್ತು 08.09.2024 ರಂದು ಬೆಳಿಗ್ಗೆ 09.35 ಕ್ಕೆ ಹೊರಟು ಅದೇ ದಿನ ರಾತ್ರಿ 08.00 ಗಂಟೆಗೆ ಎಸ್.ಎಂ.ವಿ.ಟಿ ಬೆಂಗಳೂರು…

Read More

ಬೆಂಗಳೂರು: “ಘನತೆವೆತ್ತ ರಾಜ್ಯಪಾಲರು ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಹಾಗೂ ಶಶಿಕಲಾ ಜೊಲ್ಲೆ ಸೇರಿದಂತೆ ತಮ್ಮ ಮುಂದೆ ವಿಚಾರಣೆಗೆ ಅನುಮತಿ ಕೋರಿ ಬಾಕಿ ಇರುವ ಪ್ರಕರಣಗಳಲ್ಲೂ ಅನುಮತಿ ನೀಡಬೇಕು ಎಂದು ಮನವಿ ಮಾಡಲು ಕಾಂಗ್ರೆಸ್ ಪಕ್ಷದ ವತಿಯಿಂದ ಆಗಸ್ಟ್ 31ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಶಿವಕುಮಾರ್ ಅವರು, “ನಮ್ಮ ಬಿಗ್ ಬ್ರದರ್, ಪ್ರಾಮಾಣಿಕ ಕುಮಾರಸ್ವಾಮಿ ಅವರ ವಿರುದ್ಧ ಅಕ್ರಮವಾಗಿ ಗಣಿಗಾರಿಕೆಗೆ ಮಂಜೂರು ಮಾಡಿದ ಪ್ರಕರಣವೂ ರಾಜ್ಯಪಾಲರ ಮುಂದಿದೆ. ಲೋಕಾಯುಕ್ತ ಸಂಸ್ಥೆಯು ಸುದೀರ್ಘ 10 ವರ್ಷಗಳ ತನಿಖೆ ನಡೆಸಿ ಕುಮಾರಸ್ವಾಮಿ ಅವರ ವಿಚಾರಣೆಗೆ ಅನುಮತಿ ಕೋರಿದ್ದಾರೆ. ಆದರೂ ವಿಚಾರಣೆಗೆ ಅನುಮತಿ ನೀಡಿಲ್ಲ. ಕುಮಾರಸ್ವಾಮಿ ಅವರು ಎಂದಿಗೂ ನಕಲಿ ಕೆಲಸ ಮಾಡುವುದಿಲ್ಲ ಕೇವಲ ಅಸಲಿ ಕೆಲಸ ಮಾಡುವವರು” ಎಂದು ಲೇವಡಿ ಮಾಡಿದರು. “ಆಗಸ್ಟ್ 31ರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಗಾಂಧಿ…

Read More

ಬೆಂಗಳೂರು: ವಿಶ್ವದ ವಿವಿಧೆಡೆ ಮಂಕಿಪಾಕ್ಸ್ ಆರ್ಭಟಿಸುತ್ತಿದೆ. ಕೋವಿಡ್ ರೀತಿಯಲ್ಲಿ ಜನರನ್ನು ತಲ್ಲಣಗೊಳಿಸುತ್ತಿದೆ. ಈ ಕಾರಣದಿಂದಲೇ ಮಂಕಿಪಾಕ್ಸ್ ಅನ್ನು ತುರ್ತು ಆರೋಗ್ಯ ಪರಿಸ್ಥಿತಿ ಎಂಬುದಾಗಿ ಡಬ್ಲ್ಯೂ ಹೆಚ್ಓ ಘೋಷಣೆ ಮಾಡಲಾಗಿತ್ತು. ಈಗ ಕರ್ನಾಟಕ ಸರ್ಕಾರವು ಮಂಕಿಪಾಕ್ಸ್ ಪ್ರಕರಣಗಳ ಸರ್ವೇಕ್ಷಣೆಗೆ ಮಹತ್ವದ ಮಾರ್ಗಸೂಚಿ ಕ್ರಮಗಳನ್ನು ಹೊರಡಿಸಿದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ  ಆಫ್ರಿಕಾದ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC)ದಲ್ಲಿ ನವೆಂಬರ್ 2023 ರಿಂದ ಹರಡುತ್ತಿರುವ ಮಂಕಿಪಾಕ್ಸ್ (ಎಮ್-ಪಾಕ್ಸ್ ಪಕರಣಗಳು ಇತ್ತೀಚೆಗೆ ದಕ್ಷಿಣ ಆಫ್ರಿಕಾ, ಕೀನ್ಯಾ, ರುವಾಂಡಾ, ಉಗಾಂಡಾ, ಬುರುಂಡಿ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಕಾಂಗೋ ಬ್ರಜಾವಿ, ಕ್ಯಾಮರೂನ್, ನೈಜೀರಿಯಾ, ಐವರಿ ಕೋಸ್ಟ್, ಲೈಬೀರಿಯಾ ಸೇರಿದಂತೆ ಆಫ್ರಿಕನ್ ಮತ್ತು ಇತರ ದೇಶಗಳಿಗೆ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ದಿನಾಂಕ 14-08-2024 ರಂದು ಎಮ್-ಪಾಕ್ಸ್ ನ್ನು ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತು. ಆಫ್ರಿಕನ್ ರಾಷ್ಟ್ರವು ಜನವರಿ 2023 ರಿಂದ ಇಲ್ಲಿಯವರೆಗೆ…

Read More