Author: kannadanewsnow09

ಶಿವಮೊಗ್ಗ: ಜಿಲ್ಲೆಯಲ್ಲಿ ಮಾರ್ಚ್ 1 ರಿಂದ 20 ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು ಪರೀಕ್ಷೆಗಳು ಶಾಂತಿಯುತವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಯಲು ಅವಶ್ಯಕವಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಂದ್ರಪ್ಪ ಎಸ್ ಗುಂಡಪಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸಿದ್ದತೆ ಕುರಿತು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಒಟ್ಟು 39 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 18218 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಶಿವಮೊಗ್ಗದಲ್ಲಿ 16 ಭದ್ರಾವತಿ 06, ತೀರ್ಥಹಳ್ಳಿ 03, ಸಾಗರ 05, ಹೊಸನಗರ 03, ಶಿಕಾರಿಪುರ 04, ಸೊರಬ 02 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ರವರೆಗೆ ನಡೆಯಲಿದ್ದು, 17193 ರೆಗ್ಯಲರ್ ವಿದ್ಯಾರ್ಥಿಗಳು, 526 ರಿಪೀಟರ್ ಹಾಗೂ 496 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು. ಪ್ರಶ್ನೆ ಪತ್ರಿಕೆ ಸಾಗಾಟ ಮಾಡಲು…

Read More

ನವದೆಹಲಿ : ‘ಚಟೋರಿ ರಜನಿ’ ಎಂದೇ ಖ್ಯಾತರಾಗಿದ್ದ ಆಹಾರ ವ್ಲಾಗರ್ ರಜನಿ ಜೈನ್ ಅವರ ಪುತ್ರ ಸೋಮವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರಜನಿ ಜೈನ್ ಮತ್ತು ಅವರ ಪತಿ ಸಂಗೀತ್ ಜೈನ್ ಫೆಬ್ರವರಿ 18, 2025 ರಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ತಮ್ಮ 17 ವರ್ಷದ ಮಗ ತರಣ್ ಜೈನ್ ಅನಿರೀಕ್ಷಿತವಾಗಿ ನಿಧನರಾದರು ಎಂದು ಘೋಷಿಸಿದರು. ದುರಂತ ಸುದ್ದಿಯನ್ನು ತಿಳಿಸಲು ಅವಳು ಪ್ರಕಟಿಸಿದ ಸಂದೇಶದಲ್ಲಿ ಅವನು ಸಂಚಾರ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಅವಳ ಅನುಯಾಯಿಗಳು ಆಘಾತಕ್ಕೊಳಗಾಗಿದ್ದರು. ಮೃತ ತರಣ್ ಹನ್ನೊಂದನೇ ತರಗತಿಯಲ್ಲಿ ಓದುತ್ತಿದ್ದನು. ಈ ಘಟನೆ ನಡೆದಾಗ ಟ್ಯೂಷನ್ ನಿಂದ ಹಿಂದಿರುಗುತ್ತಿದ್ದನು. ನಮ್ಮ ಪ್ರೀತಿಯ ರತ್ನ ತರಣ್ ಜೈನ್ ರಸ್ತೆ ಅಪಘಾತದಲ್ಲಿ ನಿಧನರಾದ ಅಸಹನೀಯ ಸುದ್ದಿಯನ್ನು ನಾವು ನೋವಿನಿಂದ ಹಂಚಿಕೊಳ್ಳುತ್ತೇವೆ” ಎಂದು ರಜನಿ ಜೈನ್ ಮತ್ತು ಅವರ ಪತಿ ಸಂಗೀತ್ ಜೈನ್ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತರಣ್ ಅವರ ನಿಧನದ ಬಗ್ಗೆ ದಂಪತಿಗಳು ಮತ್ತೊಂದು…

Read More

ಶಿವಮೊಗ್ಗ: ರೈತರ ಕೃಷಿ ಪಂಪ್ ಸೆಟ್ ಗಳಿಗೆ ಪಡೆದಿದ್ದಂತ ವಿದ್ಯುತ್ ಸಂಪರ್ಕವನ್ನೇ ಏಕಾಏಕಿ ಕತ್ತರಿಸಿ, ಬೆಳೆ ಒಣಗುವಂತೆ ಮಾಡಿದ್ದಾರೆ. ಮೆಸ್ಕಾಂ ಅಧಿಕಾರಿಗಳ ಈ ನಿರ್ಧಾರದಿಂದ ರೈತರ ಬೆಳೆ ಒಣಗುತ್ತಿದೆ. ಈ ನಡೆಯನ್ನು ತೋರಿದಂತ ಜೋಗ ವಿಭಾಗದ ಮೆಸ್ಕಾಂ ಎಇಇ ಪ್ರವೀಣ್, ಜೆಇ ನಿರಂಜನ್ ಎಂಬುವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ರೈತ ಮುಖಂಡ ಎಂ.ಬಿ ಮಂಜಪ್ಪ ಹಿರೆನೆಲ್ಲೂರು ಆಗ್ರಹಿಸಿದರು. ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಾಗರದ ತಾಳಗುಪ್ಪ ಹೋಬಳಿಯ, ಶಿರವಂತೆ ಗೋಳಗೋಡು ಎಸ್ ಟಿ ಕಾಲೋನಿಯಲ್ಲಿ ಟಿಸಿ ಸುಟ್ಟು ಹೋಗಿ 15 ದಿನಗಳಾಗಿತ್ತು. ಇನ್ನೂ ಅಳವಡಿಸಿಲ್ಲ ಅಂತ ರೊಚ್ಚಿಗೆದ್ದ ಜನರು ಮೇಲಧಿಕಾರಿಗಳಿಗೆ ಪೋನ್ ಮಾಡಿ, ಜನರಿಗೆ ಕುಡಿಯೋದಕ್ಕೆ ನೀರಿನ ಸಮಸ್ಯೆ ಆಗಿದೆ. ಟಿಸಿ ಹಾಕಿಸುವಂತೆ ಒತ್ತಾಯಿಸಿದ್ದರ ಪರಿಣಾಮ, ಟಿಸಿ ಹಾಕಿದ್ದಾರೆ ಎಂದರು. ಟಿಸಿ ಹಾಕದ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಿದ್ದಕ್ಕೆ ಜೋಗದ ಎಇಇ(ಇ) ಪ್ರವೀಣ್ ಮತ್ತು ಜೆಇ ನಿರಂಜನ್ ಸಿಟ್ಟಿಗೆದ್ದು, ರೈತರ…

Read More

ಬೆಂಗಳೂರು: ಮೈಸೂರು ರಿಂಗ್ ರಸ್ತೆಯ (ಎನ್ಎಚ್-275 ಕೆ) ಕೆಳ ಸೇತುವೆ ಸಂಖ್ಯೆ 293-ಎ (ಮೈಸೂರು ಮತ್ತು ಮೈಸೂರು ನ್ಯೂ ಗೂಡ್ಸ್ ಬೈಪಾಸ್ ರೈಲ್ವೆ ನಿಲ್ದಾಣ ನಡುವೆ) ನಲ್ಲಿ ಸರ್ವಿಸ್ ರಸ್ತೆಯೊಂದಿಗೆ ಆರು ಪಥದ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ, ಈ ಕೆಳಗಿನ ರೈಲುಗಳನ್ನು ಬೆಳಗುಳ ಮತ್ತು ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. 1. ಫೆಬ್ರವರಿ 20 ಮತ್ತು 22, 2025 ರಂದು ರೈಲು ಸಂಖ್ಯೆ 56267 ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ರೈಲು ಬೆಳಗುಳ-ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಬೆಳಗುಳದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸುತ್ತದೆ. 2. ಫೆಬ್ರವರಿ 20 ಮತ್ತು 22, 2025 ರಂದು ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್ ಪ್ರೆಸ್ ರೈಲು ಮೈಸೂರು ಮತ್ತು ಬೆಳಗುಳ ನಡುವೆ ಭಾಗಶಃ ರದ್ದಾಗಿದೆ. ಇದು ಮೈಸೂರಿನ ಬದಲು ಬೆಳಗುಳದಿಂದ ನಿಗದಿತ ಸಮಯಕ್ಕೆ ಹೊರಡಲಿದೆ. ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿ ಕೊಳ್ಳಬೇಕು ಅಂತ…

Read More

ರಾಜಸ್ಥಾನ :”ಕೇಂದ್ರ ಜಲಶಕ್ತಿ ಸಚಿವರು ಇದೇ ಫೆ. 25ರಂದು ಭೇಟಿಗೆ ಸಮಯಾವಕಾಶ ನೀಡಿದ್ದು, ರಾಜ್ಯದ ನೀರಾವರಿ ಯೋಜನೆಗಳ ಪ್ರಸ್ತಾವನೆ ಸಲ್ಲಿಸುತ್ತೇನೆ. ನಮ್ಮ ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವ ವಿಶ್ವಾಸವಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಉದಯಪುರದಲ್ಲಿ ಕೆಂದ್ರ ಜಲಶಕ್ತಿ ಸಚಿವಾಲಯ ನಡೆಸುತ್ತಿರುವ ಅಖಿಲ ಭಾರತ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಮ್ಮೇಳನದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. “ಕೇಂದ್ರ ಸಚಿವರನ್ನು ಭೇಟಿ ಮಾಡಿ, ಈ ಹಿಂದೆ ಘೋಷಿಸಲಾಗಿರುವ ಅನುದಾನ ಹಾಗೂ ಮಹದಾಯಿ, ಮೇಕೆದಾಟು ಹಾಗೂ ಕೃಷ್ಮಾ ಮೇಲ್ದಂಡೆ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುವುದು” ಎಂದು ತಿಳಿಸಿದರು. “ಈ ಸಮ್ಮೇಳನ ಎಲ್ಲಾ ರಾಜ್ಯಗಳ ಸಚಿವರುಗಳನ್ನು ಒಗಗೂಡಿಸಿದೆ. ಎಲ್ಲಾ ರಾಜ್ಯಗಳ ಅತ್ಯುತ್ತಮ ನೀರಾವರಿ ವ್ಯವಸ್ಥೆಗಳ ಪರಿಚಯವಾಗುತ್ತಿದೆ. ಇದರ ಜತೆಗೆ ನಮ್ಮಲ್ಲಿರುವ ಸಮಸ್ಯೆಗಳನ್ನು ಅರಿತು, ಅವುಗಳನ್ನು ಕೇಂದ್ರ ಜಲಶಕ್ತಿ ಸಚಿವಾಲಯದ ಮುಂದೆ ಇಡಬಹುದಾಗಿದೆ. ನೀರನ್ನು ಸಂರಕ್ಷಿಸಬೇಕು, ಮರುಬಳಕೆ ಮಾಡಬೇಕು. ಎಂಬುದು ಈ ಸಮ್ಮೇಳನದ ಉದ್ದೇಶ. ನಮ್ಮ ಯೋಜನೆಗಳನ್ನು ರಾಜಕೀಯ ಉದ್ದೇಶದಿಂದ ನೋಡಬೇಡಿ, ಸಮಸ್ಯೆಗಳನ್ನು…

Read More

ನವದೆಹಲಿ: 11 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಶಿಕ್ಷೆಗೊಳಗಾದ ಮಾಜಿ ಲೆಫ್ಟಿನೆಂಟ್ ಕರ್ನಲ್ ಗೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದೆ. ಜನರಲ್ ಕೋರ್ಟ್ ಮಾರ್ಷಲ್ (ಜಿಸಿಎಂ) 2021 ರ ತೀರ್ಪನ್ನು ದೃಢೀಕರಿಸಿದ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ (ಎಎಫ್ಟಿ) ಜನವರಿ 2024 ರ ಆದೇಶವನ್ನು ಪ್ರಶ್ನಿಸಿ ಅಧಿಕಾರಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ನೀಲಾ ಗೋಖಲೆ ಅವರ ವಿಭಾಗೀಯ ಪೀಠ ಸೋಮವಾರ ವಜಾಗೊಳಿಸಿದೆ. ‘ಅಜ್ಜನ ವಾತ್ಸಲ್ಯ’ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ ಮಾಜಿ ಸೇನಾಧಿಕಾರಿ ತನ್ನ ಮನವಿಯಲ್ಲಿ, ಹುಡುಗಿಯ ಕೈಯನ್ನು ಹಿಡಿದು, ಅವಳ ತೊಡೆಯನ್ನು ಸ್ಪರ್ಶಿಸುವುದು ಮತ್ತು ಚುಂಬನವನ್ನು ಕೇಳುವುದು – “ಅಜ್ಜ / ತಂದೆಯ” ಪ್ರೀತಿಯಿಂದ ಮಾಡಿದ ಕೃತ್ಯಗಳು ಎಂದು ವಾದಿಸಿದರು. ಆದಾಗ್ಯೂ, ಹೈಕೋರ್ಟ್ ಈ ವಾದವನ್ನು ತಳ್ಳಿಹಾಕಿತು. ಅನುಚಿತ ನಡವಳಿಕೆಯನ್ನು ಗುರುತಿಸುವಲ್ಲಿ ಬಲಿಪಶುವಿನ ಪ್ರವೃತ್ತಿಯನ್ನು ನಂಬಬೇಕು ಎಂದು ಒತ್ತಿಹೇಳಿತು. ಬಾಲಕಿ ಈ ಮೊದಲು ಆರೋಪಿಯನ್ನು ಭೇಟಿ ಮಾಡಿಲ್ಲ ಮತ್ತು…

Read More

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿ ಡಾ.ನಾ ಡಿಸೋಜ ಅವರ ಸ್ಮರಣಾರ್ಥ ಜತೆಗಿರುವನು ಚಂದಿರ ಎಂಬ ನಾಟಕವನ್ನು ಆಯೋಜಿಸಲಾಗಿದೆ. ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸ್ಪಂದನ (ರಿ)ಯ ಎಂ.ವಿ ಪ್ರತಿಭಾ ಅವರು ಮಾತನಾಡಿದರು. ಸಾಗರದ ಸ್ಪಂದನ (ರಿ)ಯ 21ನೇ ವಾರ್ಷಿಕೋತ್ಸವದ ಅಂಗವಾಗಿ ಡಾ.ನಾ ಡಿಸೋಜ ಸ್ಮರಣಾರ್ಥ ಜತೆಗಿರುವನ ಚಂದಿರ ಎಂಬ ನಾಟಕವನ್ನು ಆಯೋಜಿಸಲಾಗಿದೆ ಎಂದರು. ಈ ನಾಟಕದ ಪ್ರಸ್ತುತಿ ಮೈಸೂರಿನ ಸಂಕಲ್ಪ ಅವರದ್ದಾಗಿದೆ. ಜಯಂತ ಕಾಯ್ಕಿಣಿ ಅವರ ರೂಪಾಂತರ ಇದಾಗಿದೆ. ಹುಲುಗಪ್ಪ ಕಟ್ಟೀಮನಿ ವಿನ್ಯಾಸ, ನಿರ್ದೇಶಕ ಒಳಗೊಂಡಿದೆ ಎಂದು ತಿಳಿಸಿದರು. ದಿನಾಂಕ 22-02-2025ರ ಶನಿವಾರ ಸಂಜೆ 6.30ಕ್ಕೆ ಸಾಗರದ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಜತೆಗಿರುವನು ಚಂದಿರ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು. ಮಲೆನಾಡಿನ ಮುಳುಗಡೆ ಸಂದರ್ಭದಲ್ಲಿ ನಡೆದ ಸ್ಥಳಾಂತರದ ಕತೆಯನ್ನು ನಾಟಕ ನೆನಪಿಸುತ್ತದೆ. ಕುಟುಂಬದ ಕತೆಯೊಂದರ ಮೂಲಕವೇ ದೇಶದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸ್ಥಿತ್ಯಂತರಗಳಿಗೆ ಕನ್ನಡಿ ಹಿಡಿಯುವುದು ಈ ನಾಟಕದ ವಿಶೇಷ ಎಂಬುದಾಗಿ ತಿಳಿಸಿದರು. ವರದಿ: ವಸಂತ ಬಿ…

Read More

ಬೆಂಗಳೂರು: ಮಕ್ಕಳ ಹೆಸರು ಬದಲಾವಣೆ ಕುರಿತಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಮಾಡಿದೆ. ಅದೇ  ಜನನ ಪ್ರಮಾಣ ಪತ್ರದಲ್ಲಿ ಒಮ್ಮೆ ನಮೂದಿಸಿದ ಹೆಸರನ್ನು ಮತ್ತೆ ಬದಲಾವಣೆ ಮಾಡುವುದಕ್ಕೆ ಅವಕಾಶ ಕಲ್ಪಿಸುವ ರೀತಿಯಲ್ಲಿ ಜನನ ಮರಣ ಪ್ರಮಾಣ ನೋಂದಣಿ ಕಾಯಿದೆ 1969ಕ್ಕೆ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಕುರಿತಂತೆ ಹೈಕೋರ್ಟ್ ಗೆ ಸಲ್ಲಿಕೆ ಮಾಡಲಾಗಿದ್ದಂತ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಅವರು ನಡೆಸಿದರು. ತಮ್ಮ ಮಗನ ಹೆಸರನ್ನು ಬದಲಾವಣೆಗೆ ಅವಕಾಶ ಕಲ್ಪಿಸಲು ಜನನ – ಮರಣ ನೋಂದಣಾಧಿಕಾರಿಗಳಿಗೆ ನಿರ್ದೇಶನ ನೀಡಲು ಕೋರಿ ಮಗುವಿನ ಪರವಾಗಿ ಅವರ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದರು. ವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು, ಜನನ ಪ್ರಮಾಣ ಪತ್ರದಲ್ಲಿ ಒಮ್ಮೆ ಹೆಸರನ್ನು ನೋಂದಾಯಿಸಿದ ಬಳಿಕ ಅದನ್ನು ಪೋಷಕರು ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಹಲವು ಹೆಸರುಗಳನ್ನು ಇಡುವುದು ನಮ್ಮ ದೇಶದಲ್ಲಿ ಸಾಮಾನ್ಯವಾಗಿದೆ. ಆದರೆ, ದಾಖಲೆಗಳು ಒಂದೇ ಹೆಸರನ್ನು ನಮೂದಿಸಿವುದಕ್ಕೆ ಅವಕಾಶವಿರುವುದರಿಂದ ಇದು…

Read More

ಮೈಸೂರು: ಜಿಲ್ಲೆಯ ಹುಣಸೂರು ಪಟ್ಟಣದ ಪ್ರತಿಷ್ಠಿತ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜು ಇವರು ವಿದ್ಯಾರ್ಥಿಗಳಿಗೆ ಉದ್ಯೋಗ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು Techno Tut Solutions LLP Mysore ಇವರ ಸಹಯೋಗದೊಂದಿಗೆ Full Stack Java, Learning and Development Skill ಎಂಬ ವಿಷಯಾಧಾರಿತ 10 ದಿನಗಳ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾದಂತಹ ಕೀರ್ತನಾ Technical trainer, ಪ್ರೀತಿ ಕಂಡಮ್ Soft Skills Trainer ಇವರುಗಳು ನಡೆಸಿಕೊಟ್ಟರು. ಈ ವೇಳೆ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಆರೋಕ್ಯ ಮೇರಿರವರು ಪದವಿ ಶಿಕ್ಷಣ ಮುಗಿದ ನಂತರ ಎಷ್ಟೋ ವಿದ್ಯಾರ್ಥಿಗಳು ಉದ್ಯೋಗವನ್ನು ಹುಡುಕುತ್ತಾ ಹೊರಗೆ ಹೋಗುತ್ತಿದ್ದಾರೆ. ಆದ್ದರಿಂದ ಪದವಿ ಹಂತದಲ್ಲಿ ಮಕ್ಕಳಿಗೆ ಉದ್ಯೋಗ ತರಬೇತಿ ಕಾರ್ಯಕ್ರಮವನ್ನು ನೀಡಿದರೆ ಮಕ್ಕಳಿಗೆ ಅದು ನೆರವಾಗುತ್ತದೆ ಎಂದರು. ಎಲ್ಲಾ ಮಕ್ಕಳಿಗೂ ಉದ್ಯೋಗದ ಬಗ್ಗೆ ಮಾಹಿತಿಯನ್ನು ಹಾಗೂ ತರಬೇತಿಯನ್ನು ನೀಡುವುದು ಕಾಲೇಜಿನ ಕರ್ತವ್ಯವೆಂದು ನನ್ನ ಭಾವನೆ ಎಂದು ತಿಳಿಸಿದರು. ವಿಜ್ಞಾನ ವಿಭಾಗದ ಮುಖ್ಯಸ್ಥರಾದಂತಹ ಕುಮಾರಿ ತೇಜಾ ಎಚ್ ಆರ್…

Read More

ಬೆಂಗಳೂರು: ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಪಂದ್ಯಾವಳಿ ನಡೆಯುತ್ತಿದೆ. ಬೆಂಗಳೂರಲ್ಲಿ ಉದ್ಘಾಟನೆಗೊಂಡಿರುವಂತ ಪಂದ್ಯಾವಳಿಗಳು, ಈಗ ಮೈಸೂರಿಗೂ ಶಿಫ್ಟ್ ಆಗಲಿವೆ. ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ನಾನು ಈ ವಿಷಯವನ್ನು ಘೋಷಣೆ ಮಾಡೋದಕ್ಕೆ ಹರ್ಷಿಸುತ್ತಿದ್ದೇನೆ. ಸಿಸಿಎಲ್ 2025 ಪಂದ್ಯಾವಳಿಗಳು ಮೈಸೂರಿಗೂ ಕಾಲಿಡುತ್ತಿವೆ. ಎರಡು ಸೆಮಿ ಫೈನಲ್ ಹಾಗೂ ಒಂದು ಫೈನಲ್ ಪಂದ್ಯಾವಳಿಯನ್ನು ಮೈಸೂರಿನಲ್ಲಿ ನಡೆಸಲಾಗುತ್ತಿದೆ ಎಂದಿದ್ದಾರೆ. ಇನ್ನೂ ಮಾರ್ಚ್.1ರಂದು ಸೆಮಿ ಫೈನಲ್ ಹಾಗೂ ಮಾರ್ಚ್.2ರಂದು ಫೈನಲ್ ಸಿಸಿಎಲ್ 2025ರ ಪಂದ್ಯಾವಳಿಗಳು ಮೈಸೂರಿನಲ್ಲಿ ನಡೆಯಲಿದ್ದಾವೆ ಎಂಬುದಾಗಿ ತಿಳಿಸಿದ್ದಾರೆ. https://twitter.com/KicchaSudeep/status/1891854620231946550 ಅಂದಹಾಗೇ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2025 ಫೆಬ್ರವರಿ.8ರಿಂದ ಪ್ರಾರಂಭವಾಗಿದೆ. ಬಾಲಿವುಡ್ ಮತ್ತು ಪ್ರಾದೇಶಿಕ ಚಲನಚಿತ್ರ ತಾರೆಯರನ್ನು ಒಳಗೊಂಡ ರೋಮಾಂಚಕ ಪಂದ್ಯಗಳು ನಡೆಯುತ್ತಿವೆ. ಇದೀಗ ಮೈಸೂರು ನಗರದಲ್ಲಿ ಅತ್ಯಾಕರ್ಷಕ ಪಂದ್ಯಗಳನ್ನು ಅಭಿಮಾನಿಗಳು ವೀಕ್ಷಿಸುವಂತ ಅವಕಾಶ ಸಿಕ್ಕಂತೆ ಆಗಿದೆ. https://kannadanewsnow.com/kannada/farmer-fulfills-woman-labourers-wish-to-travel-by-air/ https://kannadanewsnow.com/kannada/maha-kumbh-mela-extended-in-prayagraj-heres-the-district-magistrates-clarification/

Read More