Subscribe to Updates
Get the latest creative news from FooBar about art, design and business.
Author: kannadanewsnow09
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ತರಾವರಿ ಪ್ರಚೋದನಕಾರಿ ಪೋಸ್ಟ್ ಗಳು ವೈರಲ್ ಆಗಿದ್ದವು. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ರಕ್ತಕ್ಕೆ ರಕ್ತವೇ ಉತ್ತರ ಎಂಬುದಾಗಿ ಪೋಸ್ಟ್ ಹಾಕಿದಂತ 12 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಸೋಷಿಲ್ ಮೀಡಿಯಾಗಳ ಮೇಲೆ ಪೊಲೀಸರು ಹತ್ತಿನ ಕಣ್ಣಿಟ್ಟಿದ್ದರು. ಇನ್ಸ್ಟಾ ಗ್ರಾಂ, ಫೇಸ್ ಬುಕ್, ವಾಟ್ಸ್ ಆಪ್ ಗಳಲ್ಲಿನ ಸಂದೇಶ, ಪೋಸ್ಟ್ ಗಳ ಬಗ್ಗೆ ಗಮನ ಇರಿಸಲಾಗಿತ್ತು. ಈ ಸಾಮಾಜಿಕ ಮಾಧ್ಯಮಗಳಲ್ಲಿ ಮುಲ್ಕಿ ಉರ್ವಾ, ಮಂಗಳೂರು ಉತ್ತರ, ಬರ್ಕೆ, ಮಂಗಳೂರು ದಕ್ಷಿಣ, ಮೂಡಬಿದ್ರೆ, ಕಾವೂರು ಠಾಣೆ ವ್ಯಾಪ್ತಿಯಲ್ಲಿ ಶತ್ರು ಸಂಹಾರ ಶುರುವಾಗಿದೆ, ಪ್ರತಿರೋಧ ಅಪರಾಧವಲ್ಲ, ಸುಹಾಸ್ ಬಲಿದಾದ ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮನ್ನು ಬೆಂಬಲಿಸಿ ಅಂತೆಲ್ಲ ಪೋಸ್ಟ್ ಮಾಡಿದವರ ವಿರುದ್ಧ 12 ಎಫ್ಐಆರ್ ದಾಖಲಾಗಿದೆ. https://kannadanewsnow.com/kannada/another-gruesome-murder-in-the-state-man-brutally-killed-while-walking-on-the-road/ https://kannadanewsnow.com/kannada/minister-ishwar-khandre-instructs-officials-to-protect-sheebi-forest-land-from-land-grabbers/
ಬೆಳಗಾವಿ: ಮಂಗಳೂರು ಬಳಿಕ ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಭೀಕರ ಮರ್ಡರ್ ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಂತ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಹಿಲ್ ಗಾರ್ಡ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಂತ ಗೋಕಾಕ್ ಗೊಂದಳಿ ಗಲ್ಲಿ ನಿವಾಸಿ ಪರಶುರಾಮ್(26) ಎಂಬಾತನನ್ನು ಕಾರಿನಲ್ಲಿ ಹಿಂಬಾಲಿಸಿ ಬಂದಂತ ದುಷ್ಕರ್ಮಿಗಳು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹಳೇ ವೈಷಮ್ಯದ ಹಿನ್ನಲೆಯಲ್ಲಿ ಪರಶುರಾಮ್ ಹತ್ಯೆ ಮಾಡಿರುವಂತ ಶಂಕೆ ವ್ಯಕ್ತವಾಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಗೋಕಾಕ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. https://kannadanewsnow.com/kannada/minister-ishwar-khandre-instructs-officials-to-protect-sheebi-forest-land-from-land-grabbers/ https://kannadanewsnow.com/kannada/have-you-passed-2nd-puc-apply-for-this-fashion-design-degree-course/
ನವದೆಹಲಿ: ಬಿಎಸ್ಎಫ್ ಕಾನ್ಸ್ಟೇಬಲ್ ಒಂದು ವಾರಕ್ಕೂ ಹೆಚ್ಚು ಕಾಲ ಪಾಕಿಸ್ತಾನದ ವಶದಲ್ಲಿರುವುದರಿಂದ ಪಾಕಿಸ್ತಾನಿ ರೇಂಜರ್ ಒಬ್ಬರನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ ಮತ್ತು ಅವರ ಭವಿಷ್ಯವು ಅನಿಶ್ಚಿತವಾಗಿ ಮುಂದುವರೆದಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ. ಕಳೆದ ವಾರ, ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನಕ್ಕೆ ಪ್ರವೇಶಿಸಿದ ಬಿಎಸ್ಎಫ್ ಕಾನ್ಸ್ಟೇಬಲ್ ಪಿ.ಕೆ.ಸಾಹು ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಅವರ ಸುರಕ್ಷಿತ ಬಿಡುಗಡೆಗೆ ಸಂಬಂಧಿಸಿದಂತೆ ಎಂಟು ದಿನಗಳಿಂದ ಹಲವಾರು ಸುತ್ತಿನ ಮಾತುಕತೆಗಳು ನಡೆದಿವೆ. ಆದಾಗ್ಯೂ, ಅವು ಇಲ್ಲಿಯವರೆಗೆ ಯಾವುದೇ ಫಲಿತಾಂಶಗಳನ್ನು ನೀಡಿಲ್ಲ. ಬಿಎಸ್ಎಫ್ ಅಧಿಕಾರಿಗಳಿಗೆ ಪಾಕಿಸ್ತಾನದಿಂದ ಪದೇ ಪದೇ ಅದೇ ಉತ್ತರವನ್ನು ನೀಡಲಾಗಿದೆ. ನಾವು ಉನ್ನತ ಅಧಿಕಾರಿಗಳ ನಿರ್ದೇಶನಗಳಿಗಾಗಿ ಕಾಯುತ್ತಿದ್ದೇವೆ ಎಂಬುದಾಗಿತ್ತು. ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ. ಸೈನಿಕರು ಅಥವಾ ನಾಗರಿಕರು ಆಕಸ್ಮಿಕವಾಗಿ ಗಡಿ ದಾಟುವುದು ಅಸಾಮಾನ್ಯವೇನಲ್ಲ, ಮತ್ತು ಅವುಗಳನ್ನು ಸಾಮಾನ್ಯವಾಗಿ ಒಪ್ಪಿತ ಮಿಲಿಟರಿ ಕಾರ್ಯವಿಧಾನಗಳ ಮೂಲಕ ಪರಿಹರಿಸಲಾಗುತ್ತದೆ. ಅಧಿಕಾರಿಗಳ…
ಬೆಂಗಳೂರು: ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದಂತ ಖ್ಯಾತ ಗಾಯಕ ಸೋನು ನಿಗಮ್ ಅವರು ಇಷ್ಟಾದ್ರೂ ಕನ್ನಡಿಗರ ಕ್ಷಮೆಯನ್ನು ಮಾತ್ರ ಕೇಳಿಲ್ಲ. ಬದಲಾಗಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ವೀಡಿಯೋ ರಿಲೀಸ್ ಮಾಡಿರುವಂತ ಅವರು, ಕನ್ನಡ ಹಾಡು ಅನ್ನೋದಕ್ಕೂ ಬೆದರಿಕೆ ಹಾಕೋದಕ್ಕೂ ವ್ಯತ್ಯಾಸವಿದೆ. ಅವರು ನನಗೆ ಬೆದರಿಕೆ ಒಡ್ಡಿದ್ದರು ಎಂಬುದಾಗಿ ಹೇಳಿದ್ದಾರೆ. ಎಲ್ಲಾ ಕಡೆಯೂ ಇಂಥ ನಾಲ್ಕು ಐದು ಕೆಟ್ಟ ಮಂದಿ ಇದ್ದೇ ಇರ್ತಾರೆ. ಅವರು ಬೆದರಿಕೆ ಒಡ್ಡುವ ರೀತಿಯಲ್ಲಿ ಹಾಡುವಂತೆ ಕೇಳಿದರು. ಕಾಶ್ಮೀರದಲ್ಲಿ ಉಗ್ರರು ಭಾಷೆ ಕೇಳಲಿಲ್ಲ, ಜಾತಿ ಕೇಳಿ ಕೊಂದರು. ಹಾಗಾಗಿ ನಾನು ಪಹಲ್ಗಾಮ್ ಘಟನೆಯನ್ನು ಉದಾಹರಿಸಿದೆ ಎಂಬುದಾಗಿ ವೀಡಿಯೋ ಮೂಲಕ ಸ್ಪಷ್ಟನೆಯನ್ನು ಗಾಯಕ ಸೋನು ನಿಗಮ್ ತಿಳಿಸಿದ್ದಾರೆ. https://kannadanewsnow.com/kannada/minister-ishwar-khandre-instructs-officials-to-protect-sheebi-forest-land-from-land-grabbers/ https://kannadanewsnow.com/kannada/have-you-passed-2nd-puc-apply-for-this-fashion-design-degree-course/
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋರಮಂಗಲ ಕಣಿವೆ ವಿಭಾಗದ ಕಂಠೀರವ ಸ್ಟೇಡಿಯಂ ಹತ್ತಿರ ರಾಜಕಾಲುವೆಯ ವಾರ್ಷಿಕ ನಿರ್ವಹಣಾ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವ ಗುತ್ತಿಗೆದಾರರಾದ ವಿ.ವಾಸು ರವರಿಗೆ 50,000 ರೂ. ದಂಡ ವಿಧಿಸಲಾಗಿದೆ. ಕಾರ್ಯಪಾಲಕ ಅಭಿಯಂತರರು, ಬೃಹತ್ ನೀರುಗಾಲುವೆ-ಕೋರಮಂಗಲ ಕಣಿವೆ ವಿಭಾಗ ರವರ ಅಡಿಯಲ್ಲಿ ಗುತ್ತಿಗೆದಾರರಾದ ವಿ.ವಾಸು ಎಂಬುವವರು ಕಂಠೀರವ ಸ್ಟೇಡಿಯಂ ಹತ್ತಿರ ರಾಜಕಾಲುವೆಯ ವಾರ್ಷಿಕ ನಿರ್ವಹಣಾ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿರುವುದಿಲ್ಲ. ಮುಂದುವರಿದು, ಸಾರ್ವಜನಿಕರಿಗೆ ಅನಾನುಕೂಲ ಉಂಟು ಮಾಡಿರುವ ಹಿನ್ನಲೆಯಲ್ಲಿ ಗುತ್ತಿಗೆ ಕರಾರಿನಂತೆ ಪರಿಶೋಧ 41(1) ಮತ್ತು 41(2) ರಂತೆ ಮೊದಲ ಕಂತಾಗಿ ರೂ.50,000/-ಗಳ ದಂಡವನ್ನು ವಿಧಿಸಲಾಗಿರುತ್ತದೆ. https://kannadanewsnow.com/kannada/kerala-govt-always-ready-for-development-of-kannadigas-minister-chaluvarayaswamy/ https://kannadanewsnow.com/kannada/home-minister-g-parameshwara-to-set-up-task-force-to-prevent-communal-violence-in-dakshina-kannada-udupi-districts/
ಕಾಸರಗೋಡು : ಕಾಸರಗೋಡು ಜಿಲ್ಲೆ ಆಡಳಿತದ ದೃಷ್ಟಿಯಿಂದ ಕೇರಳ ರಾಜ್ಯಕ್ಕೆ ಒಳಪಟ್ಟರೂ ಸಹ ನಮ್ಮ ರಾಜ್ಯದ ಕನ್ನಡಿಗರ ಮನಸ್ಸು, ಹೃದಯದಲ್ಲಿ ಸ್ಥಾನ ಪಡೆದಿದೆ. ಈ ನಿಟ್ಟಿನಲ್ಲಿ ಕಾಸರಗೋಡಿನ ಕನ್ನಡಿಗರ ಹಾಗೂ ಕನ್ನಡ ಪತ್ರಕರ್ತರ ಕ್ಷೇಯೋಭಿವೃದ್ದಿಗೆ ಸದಾ ರಾಜ್ಯ ಸರ್ಕಾರ ಬದ್ಧವಾಗಿರುತ್ತದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದರು. ಶನಿವಾರದಂದು ಇಲ್ಲಿನ ಸೀತಾಂಗೋಳಿಯಲ್ಲಿ ನಡೆದ ಕೆ.ಯು.ಡಬ್ಲೂಜೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಮಾತನಾಡಿದರು. ನಮ್ಮ ಸರ್ಕಾರ ಯಾವಾಗಲೂ ಗಡಿನಾಡು ಕನ್ನಡಿಗರ ಹಾಗೂ ಪತ್ರಕರ್ತರ ಹಿತ ಕಾಪಾಡಲು ಸಿದ್ದವಾಗಿದೆ. ಗಡಿ ಪ್ರದೇಶದ ಕನ್ನಡಿಗರ ರಕ್ಷಣೆ, ಅಭಿವೃದ್ಧಿ, ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡಲು ಆದ್ಯತೆ ನೀಡಲಾಗುವುದು ಎಂದರು. ಕಾಸರಗೋಡಿನ ಪತ್ರಕರ್ತರು ಸೇರಿದಂತೆ ಕನ್ನಡಿಗರ ಯಾವುದೇ ನೆರವು ಬೇಕಾಗಿದ್ದಲ್ಲಿ ತಕ್ಷಣವೇ ಒದಗಿಸುವ ಕೆಲಸ ಸರ್ಕಾರ ಮಾಡ್ತಾ ಇದ್ದು, ಹಂತ ಹಂತವಾಗಿ ಅನುದಾನವನ್ನು ಸಹ ಸರ್ಕಾರದಿಂದ ನೀಡಲಾಗುವುದು ಎಂದರು. ನಮ್ಮ ರಾಜ್ಯ ಸೇರಿದಂತೆ ಬೇರೆ, ಬೇರೆ ರಾಜ್ಯಗಳ ಕನ್ನಡಿಗ ಪತ್ರಕರ್ತರನ್ನು ಒಗ್ಗೂಡಿಸುವ ಕೆಲಸವನ್ನು…
ಬೆಂಗಳೂರು: ಖ್ಯಾತ ಗಾಯಕ ಸೋನು ನಿಗಮ್ ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಕಾನೂನಿನ ಕುಣಿಕೆಗೆ ಸಿಲುಕಿದ್ದಾರೆ. ಇದರ ನಡುವೆ ತಮ್ಮ ಮೊದಲ ಹೇಳಿಕೆಯಲ್ಲಿ ತಮ್ಮ ಕಾರ್ಯಕ್ರಮದ ವೇಳೆ ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದರು. ಅದಕ್ಕೆ ಪಹಲ್ಗಾಮ್ ಹೋಲಿಕೆ ಕೊಟ್ಟಿದ್ದಾಗಿ ತಿಳಿಸಿದ್ದಾರೆ. ಇಂತ ಹೇಳಿಕೆ ನೀಡಿದಂತ ಸೋನು ನಿಗಮ್ ವಿರುದ್ಧ ಕನ್ನಡದ ಖ್ಯಾತ ಚಿತ್ರ ಸಾಹಿತಿ ಕವಿರಾಜ್ ಕಿಡಿಕಾರಿದ್ದಾರೆ. ತಮ್ಮ ಫೇಸ್ ಬುಕ್ ಮುಖ ಪುಟದಲ್ಲಿ ಬರೆದುಕೊಂಡಿರುವಂತ ಚಿತ್ರಸಾಹಿತಿ ಕವಿರಾಜ್ ಅವರು, ಸೋನು ನಿಗಮ್ ಅವರ ವೀಡಿಯೊ ಕ್ಲಿಪ್ ಬಗ್ಗೆ ನನಗೆ ಸ್ವಲ್ಪ ಅನುಮಾನ ಇತ್ತು. ಅದು conclusive ಆಗಿರಲಿಲ್ಲ. ಹಾಗಾಗಿ ನಾನು ಯಾವತ್ತೂ ವಿಧಿಸಿಕೊಂಡಿರುವ ನಿಯಮದಂತೆ ಸರಿಯಾದ ಮಾಹಿತಿ ಬರೋವರೆಗೂ ಅವಸರಕ್ಕೆ ಬಿದ್ದು ಕಾಮೆಂಟ್ ಮಾಡಿರಲಿಲ್ಲ ಎಂದಿದ್ದಾರೆ. ಈಗಷ್ಟೇ ಸೋನುನಿಗಮ್ ಸ್ಪಷ್ಟೀಕರಣ ನೀಡಿದ ವೀಡಿಯೊ ನೋಡಿದೆ. ಅಲ್ಲಿಗೆ ಕನ್ನಡ ಹಾಡಿಗೆ ಬೇಡಿಕೆ ಇಟ್ಟಿದ್ದನ್ನು ಪೆಹಲ್ಗಾಮ್ ಉಗ್ರಗಾಮಿಗಳ ದಾಳಿಯೊಂದಿಗೆ ಸಮೀಕರಿಸಿದ್ದು ಅವರ ಮೂರ್ಖತನ ಮತ್ತು ದುರಹಂಕಾರವನ್ನು ಇನ್ನಷ್ಟು ಜಾಹೀರು ಮಾಡಿದೆ. ಹಿಂದಿ ಚಿತ್ರೋದ್ಯಮದಿಂದ ಅಘೋಷಿತ…
BIG NEWS: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೋಮು ಹಿಂಸೆ ನಿಗ್ರಹ ಕಾರ್ಯಪಡೆ ರಚನೆ: ಗೃಹ ಸಚಿವ ಡಾ.ಜಿ ಪರಮೇಶ್ವರ್
ಬೆಂಗಳೂರು: ನಕ್ಸಲ್ ನಿಗ್ರಹ ಪಡೆ ಮಾದರಿಯಲ್ಲೇ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೋಮು ಹಿಂಸೆ ನಿಗ್ರಹ ಕಾರ್ಯಪಡೆ ರಚನೆ ಮಾಡಲಾಗುತ್ತದೆ ಎಂಬುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮು ಹಿಂಸಾಚಾರ ನಿಯಂತ್ರಿಸಲು ನಕ್ಸಲ್ ನಿಗ್ರಹ ಪಡೆ ಮಾದರಿಯಲ್ಲಿ ʼಕೋಮು ಹಿಂಸೆ ನಿಗ್ರಹ ಕಾರ್ಯಪಡೆʼಯನ್ನು ರಚಿಸಲಿದ್ದೇವೆ. ಇದು ಪೊಲೀಸರ ಸಹಯೋಗದಲ್ಲಿ ಕೆಲಸ ಮಾಡಲಿದೆ. ಯಾರು ಕೋಮು ಚಟುವಟಿಕೆಯನ್ನು ನಡೆಸುತ್ತಾರೆ, ಯಾರು ಅದನ್ನು ಬೆಂಬಲಿಸುತ್ತಾರೆ, ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಅಧಿಕಾರವನ್ನು ಈ ಕಾರ್ಯಪಡೆಗೆ ಒದಗಿಸುತ್ತೇವೆ ಎಂದು ತಿಳಿಸಿದ್ದಾರೆ. https://twitter.com/KarnatakaVarthe/status/1918655931707257165 ಮಂಗಳೂರು ಶಾಂತಿಗೆ ಬರುತ್ತಿತ್ತು. ಕಳೆದ ನಾಲ್ಕೈದು ದಿನದಿಂದ ಆದ ಘಟನೆ ಮತ್ತು ನಿನ್ನೆ ನಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ನಾವು ಇದನ್ನು ಹೀಗೆ ಮುಂದುವರಿಯಲು ಯಾವುದೇ ಕಾರಣಕ್ಕು ಬಿಡುವುದಿಲ್ಲ. ಆರೋಪಿಗಳ ಪತ್ತೆಗಾಗಿ ಈಗಾಗಲೇ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದ್ದು, ಶೋಧ ನಡೆಸಿದ್ದಾರೆ. ಇನ್ನು ಮುಂದೆಯೂ ಇಂತಹ ಘಟನೆ…
ಬೆಂಗಳೂರು: ಖ್ಯಾತ ಗಾಯಕ ಸೋನು ನಿಗಮ್ ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಕಾನೂನಿನ ಕುಣಿಕೆಗೆ ಸಿಲುಕಿದ್ದಾರೆ. ಇದರ ನಡುವೆ ತಮ್ಮ ಮೊದಲ ಹೇಳಿಕೆಯಲ್ಲಿ ತಮ್ಮ ಕಾರ್ಯಕ್ರಮದ ವೇಳೆ ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದರು. ಅದಕ್ಕೆ ಪಹಲ್ಗಾಮ್ ಹೋಲಿಕೆ ಕೊಟ್ಟಿದ್ದಾಗಿ ತಿಳಿಸಿದ್ದಾರೆ. ಇಂತ ಹೇಳಿಕೆ ನೀಡಿದಂತ ಸೋನು ನಿಗಮ್ ವಿರುದ್ಧ ಕನ್ನಡದ ಖ್ಯಾತ ಚಿತ್ರ ಸಾಹಿತಿ ಕವಿರಾಜ್ ಕಿಡಿಕಾರಿದ್ದಾರೆ. ತಮ್ಮ ಫೇಸ್ ಬುಕ್ ಮುಖ ಪುಟದಲ್ಲಿ ಬರೆದುಕೊಂಡಿರುವಂತ ಚಿತ್ರಸಾಹಿತಿ ಕವಿರಾಜ್ ಅವರು, ಸೋನು ನಿಗಮ್ ಅವರ ವೀಡಿಯೊ ಕ್ಲಿಪ್ ಬಗ್ಗೆ ನನಗೆ ಸ್ವಲ್ಪ ಅನುಮಾನ ಇತ್ತು. ಅದು conclusive ಆಗಿರಲಿಲ್ಲ. ಹಾಗಾಗಿ ನಾನು ಯಾವತ್ತೂ ವಿಧಿಸಿಕೊಂಡಿರುವ ನಿಯಮದಂತೆ ಸರಿಯಾದ ಮಾಹಿತಿ ಬರೋವರೆಗೂ ಅವಸರಕ್ಕೆ ಬಿದ್ದು ಕಾಮೆಂಟ್ ಮಾಡಿರಲಿಲ್ಲ ಎಂದಿದ್ದಾರೆ. ಈಗಷ್ಟೇ ಸೋನುನಿಗಮ್ ಸ್ಪಷ್ಟೀಕರಣ ನೀಡಿದ ವೀಡಿಯೊ ನೋಡಿದೆ. ಅಲ್ಲಿಗೆ ಕನ್ನಡ ಹಾಡಿಗೆ ಬೇಡಿಕೆ ಇಟ್ಟಿದ್ದನ್ನು ಪೆಹಲ್ಗಾಮ್ ಉಗ್ರಗಾಮಿಗಳ ದಾಳಿಯೊಂದಿಗೆ ಸಮೀಕರಿಸಿದ್ದು ಅವರ ಮೂರ್ಖತನ ಮತ್ತು ದುರಹಂಕಾರವನ್ನು ಇನ್ನಷ್ಟು ಜಾಹೀರು ಮಾಡಿದೆ. ಹಿಂದಿ ಚಿತ್ರೋದ್ಯಮದಿಂದ ಅಘೋಷಿತ…
ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಅವರು ಪ್ರಸ್ತುತ ತಾತ್ಕಾಲಿಕ ಅಮಾನತು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಇದು 2025 ರ ಇಂಡಿಯನ್ ಪ್ರೀಮಿಯರ್ ಲೀಗ್ನ ಮಧ್ಯದಲ್ಲಿ ಅವರನ್ನು ನಿರ್ಗಮಿಸಲು ಕಾರಣವಾಯಿತು. 29 ವರ್ಷದ ವೇಗಿ ಗುಜರಾತ್ ಟೈಟಾನ್ಸ್ ಅಭಿಯಾನದ ಮಧ್ಯದಲ್ಲಿ ಐಪಿಎಲ್ನಿಂದ ಏಕೆ ನಿರ್ಗಮಿಸಿದರು ಎಂಬುದನ್ನು ಸ್ಪಷ್ಟಪಡಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ವರದಿಯಾಗಿರುವಂತೆ, ನಾನು ಇತ್ತೀಚೆಗೆ ವೈಯಕ್ತಿಕ ಕಾರಣಗಳಿಗಾಗಿ ಐಪಿಎಲ್ನಲ್ಲಿ ಭಾಗವಹಿಸದೆ ದಕ್ಷಿಣ ಆಫ್ರಿಕಾಕ್ಕೆ ಮರಳಿದೆ. ಮನರಂಜನಾ ಔಷಧದ ಬಳಕೆಗಾಗಿ ಪ್ರತಿಕೂಲವಾದ ವಿಶ್ಲೇಷಣಾತ್ಮಕ ಸಂಶೋಧನೆಯನ್ನು ನಾನು ಹಿಂದಿರುಗಿಸಿದ್ದರಿಂದ ಇದು ಸಂಭವಿಸಿದೆ ಎಂದಿದ್ದಾರೆ. ನಾನು ನಿರಾಶೆಗೊಂಡ ಎಲ್ಲದಕ್ಕೂ ನಾನು ತೀವ್ರವಾಗಿ ವಿಷಾದಿಸುತ್ತೇನೆ. ಕ್ರಿಕೆಟ್ ಆಡುವ ಸವಲತ್ತನ್ನು ನಾನು ಎಂದಿಗೂ ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಇದು ನನ್ನ ವೈಯಕ್ತಿಕ ಆಕಾಂಕ್ಷೆಗಳನ್ನು ಮೀರಿದೆ ಎಂದು ಹೇಳಿದ್ದಾರೆ. ನಾನು ತಾತ್ಕಾಲಿಕ ಅಮಾನತು ಶಿಕ್ಷೆಯನ್ನು ಅನುಭವಿಸುತ್ತಿದ್ದೇನೆ ಮತ್ತು ನಾನು ಆಡಲು ಇಷ್ಟಪಡುವ ಆಟಕ್ಕೆ ಮರಳಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ನಾನು ಇದನ್ನು ಒಬ್ಬಂಟಿಯಾಗಿ…











