Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ರೈತರ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆಯನ್ನು ಎರಡು ದಿನಗಳವರೆಗೆ ಸ್ಥಗಿತಗೊಳಿಸಲಾಗುವುದು ಎಂದು ರೈತ ಮುಖಂಡರೊಬ್ಬರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. “ಖನೌರಿಯಲ್ಲಿ ನಡೆದ ಘಟನೆಯ ಬಗ್ಗೆ ನಾವು ಚರ್ಚೆ ನಡೆಸುತ್ತೇವೆ. ದೆಹಲಿಯೆಡೆಗಿನ ನಮ್ಮ ಮೆರವಣಿಗೆಗೆ ಎರಡು ದಿನಗಳ ತಡೆ ಇರುತ್ತದೆ. ನಮ್ಮ ಮುಂದಿನ ಆಂದೋಲನ ಏನು ಎಂಬುದನ್ನು ನಾವು ನಂತರ ಸ್ಪಷ್ಟಪಡಿಸುತ್ತೇವೆ” ಎಂದು ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಮುಖ್ಯಸ್ಥ ರೈತ ಮುಖಂಡ ಸರ್ವನ್ ಸಿಂಗ್ ಪಂಧೇರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಮತ್ತೊಂದು ಸುತ್ತಿನ ಚರ್ಚೆಗಾಗಿ ಕೇಂದ್ರವು ರೈತರಿಗೆ ಮನವಿ ಮಾಡಿದ ನಂತರ ರೈತರ ಪ್ರಕಟಣೆ ಬಂದಿದೆ. “ರೈತರು ದೇಶಾದ್ಯಂತ ಇದ್ದಾರೆ. ನೀತಿಯನ್ನು ರೂಪಿಸುವಾಗ, ಇಡೀ ದೇಶದ ರೈತರ ಹಿತಾಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ. ಇದನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ” ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಪಿಟಿಐಗೆ ತಿಳಿಸಿದ್ದಾರೆ. ಕೇಂದ್ರದೊಂದಿಗಿನ ನಾಲ್ಕನೇ ಸುತ್ತಿನ ಮಾತುಕತೆ ವಿಫಲವಾದ ನಂತರ ರೈತ…
ಕೆಎನ್ಎನ್ ಡಿಜಿಟಲ್ ಡೆಸ್ಕ್: ಅಮೆಜಾನ್ ಮಳೆಕಾಡಿನ ಆಳವನ್ನು ಅನ್ವೇಷಿಸುವ ಸಂಶೋಧಕರು ಬೃಹತ್ ಸರ್ಪವನ್ನು ಕಂಡುಹಿಡಿದಿದ್ದಾರೆ. ಇದು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಈ ಅಭೂತಪೂರ್ವ ಆವಿಷ್ಕಾರವು ಅನಕೊಂಡ ಕುಟುಂಬದಲ್ಲಿ ಹೊಸ ದೈತ್ಯನನ್ನು ನಮಗೆ ಪರಿಚಯಿಸುತ್ತದೆ. ಅದರ ಸಂಬಂಧಿಕರ ಪ್ರಸಿದ್ಧ ಗಾತ್ರವನ್ನು ಎರಡು ಪಟ್ಟು ಮೀರಿಸುತ್ತದೆ. ಅಮೆಜಾನ್ ಕಾಡಿನ ಹೃದಯಭಾಗದಲ್ಲಿ ನ್ಯಾಷನಲ್ ಜಿಯಾಗ್ರಫಿಕ್ ಎಕ್ಸ್ಪೆಡಿಷನ್ ತಂಡವು ನಡೆಸಿದ ವಾಡಿಕೆಯ ವೀಡಿಯೊ ಚಿತ್ರೀಕರಣದ ಸಮಯದಲ್ಲಿ ವಿಸ್ಮಯಕಾರಿ ಮುಖಾಮುಖಿ ಅನಾವರಣಗೊಂಡಿತು. ಸೊಂಪಾದ ದೃಶ್ಯಾವಳಿಗಳನ್ನು ಸೆರೆಹಿಡಿಯುತ್ತಾ ಕ್ಯಾಮೆರಾ ಉರುಳುತ್ತಿದ್ದಂತೆ, ಅದು ಅನಿರೀಕ್ಷಿತವಾಗಿ ಅಮೆಜಾನ್ ನ ನದಿ ಪಾತ್ರದ ಉದ್ದಕ್ಕೂ ವಿಶ್ರಾಂತಿ ಪಡೆಯುತ್ತಿರುವ ಬೃಹತ್ ಗಾತ್ರದ ಮೇಲೆ ಎಡವಿ ಬಿದ್ದಿತು. ಹಾವಿನ ಅಗಾಧ ಉದ್ದವನ್ನು ಪ್ರದರ್ಶಿಸುವ ಸೆರೆಹಿಡಿಯಲಾದ ತುಣುಕುಗಳು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಪ್ರೇಕ್ಷಕರನ್ನು ತ್ವರಿತವಾಗಿ ಆಕರ್ಷಿಸಿದವು, ತ್ವರಿತವಾಗಿ ವೈರಲ್ ಆದವು. ದಕ್ಷಿಣ ಹಸಿರು ಅನಕೊಂಡ ಎಂದು ಗುರುತಿಸಲ್ಪಟ್ಟ ಈ ಬೃಹತ್ ಜೀವಿಯು ಜಲಪ್ರದೇಶಗಳಲ್ಲಿ ಅಲೆದಾಡುತ್ತದೆ. ಬೇಟೆ ಮತ್ತು ಪೋಷಣೆಯಲ್ಲಿ ಸುಲಭವಾಗುವಂತೆ ತನ್ನ ಜಲ ಆವಾಸಸ್ಥಾನವನ್ನು ಬಳಸಿಕೊಳ್ಳುತ್ತದೆ ಎಂದು…
ನವದೆಹಲಿ: ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆಯನ್ನು 2 ದಿನಗಳ ಕಾಲ ಸ್ಥಗಿತಗೊಳಿಸಲಾಗುವುದು ಎಂದು ರೈತ ಮುಖಂಡರು ಘೋಷಿಸಿದ್ದಾರೆ. ಈ ಮೂಲಕ ತಾತ್ಕಾಲಿಕವಾಗಿ ದೆಹಲಿ ಚಲೋ ರೈತರ ಪ್ರತಿಭಟನಾ ಮೆರವಣಿಯನ್ನು ಸ್ಥಗಿತಗೊಳಿಸಲಾಗಿದೆ. ರೈತರ ಪ್ರತಿಭಟನೆ ಒಂದೆಡೆ ತೀವ್ರಗೊಳ್ಳುತ್ತಿದ್ದರೇ, ಮತ್ತೊಂದೆಡೆ ಅದು ವಿಕೋಪಕ್ಕೆ ತಿರುಗಿ, ಕಾನೂನು ಕೈಗೆತ್ತಿಕೊಳ್ಳೋ ಹಂತವನ್ನು ತಲುಪಿದೆ. ಇಂದು ರೈತರ ಪ್ರತಿಭಟನೆಯ ವೇಳೆಯಲ್ಲಿ ಕಲ್ಲು ತೂರಾಟ ನಡೆದಿದೆ ಎನ್ನಲಾಗುತ್ತಿದೆ. ಈ ಘಟನೆಯಲ್ಲಿ 12 ಪೊಲೀಸರಿಗೆ ಗಂಭೀರ ಗಾಯವಾಗಿರೋದಾಗಿ ಹರಿಯಾಣ ಪೊಲೀಸರು ಆರೋಪಿಸಿದ್ದಾರೆ. ಶಾಂತಿ ಮತ್ತು ಸಹಕಾರಕ್ಕಾಗಿ ಅವರು ಮತ್ತಷ್ಟು ಮನವಿ ಮಾಡಿದರು. ಇದಲ್ಲದೆ, ರೈತರು ಪೊಲೀಸರ ಮೇಲೆ ದೊಣ್ಣೆಗಳು, ಗದೆಗಳು ಮತ್ತು ಕಲ್ಲು ತೂರಾಟದಿಂದ ಹಲ್ಲೆ ನಡೆಸಿದ್ದಾರೆ ಎಂದು ಹರಿಯಾಣ ಪೊಲೀಸರು ಆರೋಪಿಸಿದ್ದಾರೆ. ಪ್ರತಿಭಟನಾಕಾರರು ಎಲ್ಲಾ ಕಡೆಯಿಂದಲೂ ಪೊಲೀಸರನ್ನು ಸುತ್ತುವರೆದರು ಮತ್ತು ಅದಕ್ಕೆ ಮೆಣಸಿನ ಪುಡಿಯನ್ನು ಸುರಿಯುವ ಮೂಲಕ ಕಸವನ್ನು ಸುಟ್ಟುಹಾಕಿದರು ಎಂದು ವರದಿಯಾಗಿದೆ. ಶಾಂತಿ ಕಾಪಾಡಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಹರಿಯಾಣ ಪೊಲೀಸರು ಪ್ರತಿಭಟನಾಕಾರರಿಗೆ ಮನವಿ ಮಾಡಿದರು. ಕೇಂದ್ರದೊಂದಿಗಿನ…
ನವದೆಹಲಿ: ರೈತರ ಪ್ರತಿಭಟನೆ ಒಂದೆಡೆ ತೀವ್ರಗೊಳ್ಳುತ್ತಿದ್ದರೇ, ಮತ್ತೊಂದೆಡೆ ಅದು ವಿಕೋಪಕ್ಕೆ ತಿರುಗಿ, ಕಾನೂನು ಕೈಗೆತ್ತಿಕೊಳ್ಳೋ ಹಂತವನ್ನು ತಲುಪಿದೆ. ಇಂದು ರೈತರ ಪ್ರತಿಭಟನೆಯ ವೇಳೆಯಲ್ಲಿ ಕಲ್ಲು ತೂರಾಟ ನಡೆದಿದೆ ಎನ್ನಲಾಗುತ್ತಿದೆ. ಈ ಘಟನೆಯಲ್ಲಿ 12 ಪೊಲೀಸರಿಗೆ ಗಂಭೀರ ಗಾಯವಾಗಿರೋದಾಗಿ ಹರಿಯಾಣ ಪೊಲೀಸರು ಆರೋಪಿಸಿದ್ದಾರೆ. ಶಾಂತಿ ಮತ್ತು ಸಹಕಾರಕ್ಕಾಗಿ ಅವರು ಮತ್ತಷ್ಟು ಮನವಿ ಮಾಡಿದರು. ಇದಲ್ಲದೆ, ರೈತರು ಪೊಲೀಸರ ಮೇಲೆ ದೊಣ್ಣೆಗಳು, ಗದೆಗಳು ಮತ್ತು ಕಲ್ಲು ತೂರಾಟದಿಂದ ಹಲ್ಲೆ ನಡೆಸಿದ್ದಾರೆ ಎಂದು ಹರಿಯಾಣ ಪೊಲೀಸರು ಆರೋಪಿಸಿದ್ದಾರೆ. ಪ್ರತಿಭಟನಾಕಾರರು ಎಲ್ಲಾ ಕಡೆಯಿಂದಲೂ ಪೊಲೀಸರನ್ನು ಸುತ್ತುವರೆದರು ಮತ್ತು ಅದಕ್ಕೆ ಮೆಣಸಿನ ಪುಡಿಯನ್ನು ಸುರಿಯುವ ಮೂಲಕ ಕಸವನ್ನು ಸುಟ್ಟುಹಾಕಿದರು ಎಂದು ವರದಿಯಾಗಿದೆ. ಶಾಂತಿ ಕಾಪಾಡಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಹರಿಯಾಣ ಪೊಲೀಸರು ಪ್ರತಿಭಟನಾಕಾರರಿಗೆ ಮನವಿ ಮಾಡಿದರು. ಕೇಂದ್ರದೊಂದಿಗಿನ ನಾಲ್ಕನೇ ಸುತ್ತಿನ ಮಾತುಕತೆಯು ರೈತರ ಬೇಡಿಕೆಗಳನ್ನು ಈಡೇರಿಸಲು ವಿಫಲವಾದ ಕಾರಣ ಪ್ರತಿಭಟನಾನಿರತ ರೈತರು ಫೆಬ್ರವರಿ 21 ರಂದು ತಮ್ಮ ‘ದೆಹಲಿ ಚಲೋ’ ಮೆರವಣಿಗೆಯನ್ನು ಪುನರಾರಂಭಿಸಿದರು. ಶಂಭು ಗಡಿಯಲ್ಲಿ ದೆಹಲಿಗೆ…
ಬೆಂಗಳೂರು : ರಾಜ್ಯದಲ್ಲಿ ವಿದ್ಯುನ್ಮಾನ ಉಪಕರಣ ತಯಾರಕರಿಗೆ (Extended Producer Responsibility-EPR) ವಿಸ್ತರಿತ ಹೊಣೆಗಾರಿಕೆ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ. ವಿಕಾಸಸೌಧದಲ್ಲಿಂದು ಇ-ತ್ಯಾಜ್ಯ ಸಂಸ್ಕರಣೆದಾರರು/ ಮರುಬಳಕೆದಾರರ (Refurbishers /Recyclers) ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿವರು ಇ- ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು. ಇರುವುದು ಇದೊಂದೇ ಭೂಮಿ, ಈ ಭೂಮಿಯನ್ನು ತ್ಯಾಜ್ಯದ ಗುಂಡಿ ಮಾಡಬಾರದು, ಇ-ತ್ಯಾಜ್ಯ ಅಪಾಯಕಾರಿಯಾಗಿದ್ದು, ಇದನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಬೇಕು, ಮುಂದಿನ ಪೀಳಿಗೆಯ ಮತ್ತು ಸಮುದಾಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಜಾಗರೂಕತೆಯಿಂದ ಮತ್ತು ವೈಜ್ಞಾನಿಕವಾಗಿ ಇವುಗಳ ಪುನರ್ ಬಳಕೆ ಮತ್ತು ನಿರ್ವಹಣೆ ಮಾಡುವಂತೆ ಸೂಚಿಸಿದರು. ದೇಶದಲ್ಲಿ ವಾರ್ಷಿಕ 3.8 ಮಿಲಿಯನ್ ಮೆಟ್ರಿಕ್ ಟನ್ ಇ-ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಈ ಪೈಕಿ ರಾಜ್ಯದಲ್ಲಿ 0.8 ಮಿಲಿಯನ್ ಮೆಟ್ರಿಕ್ ಟನ್ ಅಷ್ಟು ಇ-ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ರಾಜ್ಯ ಮೂರನೇ ಸ್ಥಾನದಲ್ಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುವಂತೆ ತಿಳಿಸಿದರು. ರಾಜ್ಯದಲ್ಲಿ ಒಟ್ಟು 108 ಇ-ತ್ಯಾಜ್ಯ ಸಂಸ್ಕರಣಾ…
ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಂತ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರು, ಇಂದು ಭಗವಂತನ ಹೆಸರಿನಲ್ಲಿ ವಿಧಾನಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂದು ವಿಧಾನಪರಿಷತ್ ಕಲಾಪ ಆರಂಭಕ್ಕೂ ಮುನ್ನಾ ನೂತನ ಸದಸ್ಯ ಪುಟ್ಟಣ್ಣಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಮಾಣವಚನ ಬೋಧಿಸಿದರು. ಈ ವೇಳೆ ಪುಟ್ಟಣ್ಣ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ಬಳಿಕ ಮಾತನಾಡಿದಂತ ಅವರು, ವಿಧಾನಪರಿಷತ್ ಉಪ ಚುನಾವಣೆಯ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಾದರೂ ಶಿಕ್ಷಕರ ಕ್ಷೇತ್ರದಲ್ಲಿ ಸೋಲು ಕಂಡಿದೆ. ಮುಂದಿನ ಚುನಾವಣೆಗೂ ಈ ಫಲಿತಾಂಶ ಮಾರ್ಗಸೂಚಿಯಾಗಲಿದೆ ಎಂದರು. ಅಂದಹಾಗೆ ನಿನ್ನೆ ವಿಧಾನಪರಿಷತ್ ಉಪ ಚನಾವಣೆಯ ಮತಏಣಿಕೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ 1506 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎ.ಪಿ ರಂಗನಾಥ್ ಸೋಲು ಕಂಡಿದ್ದರು. https://kannadanewsnow.com/kannada/bengaluru-mega-job-fair-to-be-held-on-feb-26-27-it-is-mandatory/ https://kannadanewsnow.com/kannada/icc-test-ranking-jaiswal-breaks-into-top-20/
ಬೆಂಗಳೂರು: ರಾಜ್ಯ ಸರ್ಕಾರದಿಂದಲೇ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಬೆಂಗಳೂರಲ್ಲಿ ಫೆಬ್ರವರಿ 26, 27ರಂದು ಉದ್ಯೋಗ ಮೇಳವನ್ನು ಆಯೋಗಿಸಲಾಗುತ್ತಿದೆ. ಈ ಉದ್ಯೋಗ ಮೇಳದಲ್ಲಿ ನೀವು ಭಾಗವಹಿಸೋದಕ್ಕೆ ಮೊದಲು ನೋಂದಣಿ ಮಾಡಿಕೊಳ್ಳುವುದು ಮುಖ್ಯವಾಗಿದೆ. ಹಾಗಾದ್ರೇ ಹೇಗೆ ನೋಂದಣಿ ಮಾಡಿಕೊಳ್ಳಬೇಕು ಎನ್ನುಬ ಬಗ್ಗೆ ಮುಂದೆ ಓದಿ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ಮಾಹಿತಿ ಹಂಚಿಕೊಂಡಿದ್ದು, ಯುವ ಸಮೃದ್ಧಿ ಸಮ್ಮೇಳನದ ಭಾಗವಾಗಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಫೆಬ್ರಪರಿ.26, 27ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಹೀಗೆ ಮಾಡುವುದು ಕಡ್ಡಾಯ ಫೆಬ್ರವರಿ.26, 27ರಂದು ನೀವು ಉದ್ಯೋಗ ಮೇಳದಲ್ಲಿ ಭಾಗವಹಿಸೋದಾದರೇ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ನೋಂದಣಿ ಮಾಡಿಕೊಂಡವರಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸೋದಕ್ಕೆ ಅವಕಾಶ ನೀಡಲಾಗುತ್ತಿದೆ. ಹೀಗೆ ನೋಂದಣಿ ಮಾಡಿ ಉದ್ಯೋಗಾಕಾಂಕ್ಷಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ, ಉದ್ಯೋಗ ಮೇಳದಲ್ಲಿ ಭಾಗಿಯಾಗಬಹುದಾಗಿದೆ. https://skillconnect.kaushalkar.com/ ಗೆ ಭೇಟಿ ನೀಡಿ ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಿ ಉದ್ಯೋಗ ಮೇಳ ಮೇಲೆ ಕ್ಲಿಕ್ ಮಾಡಿ ಅಭ್ಯರ್ಥಿ ನೋಂದಣಿ ಮೇಲೆ ಕ್ಲಿಕ್ ಮಾಡಿ…
ನಮ್ಮ ಕರ್ನಾಟಕದಲ್ಲಿ ಸಾವಿರಾರು ದೇವಾಲಯಗಳಿವೆ. ಕೆಲವು ದೇವಾಲಯಗಳು ತಮ್ಮ ಸಾಂಸ್ಕೃತಿಕ ಹಿನ್ನೆಲೆ, ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಕಾರಣದಿಂದಾಗಿ ಪ್ರಖ್ಯಾತಿಯಾಗಿದ್ದರೆ ಇನ್ನು ಕೆಲವು ಸ್ಥಳ ಮಹಾತ್ಮೆ ಕಾರಣದಿಂದಾಗಿ ಜಗತ್ ವಿಖ್ಯಾತಗೊಂಡಿವೆ. ನಮ್ಮ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕೂಡ ಇಂತಹ ಶಕ್ತಿಶಾಲಿ ದೈವ ಬಲವುಳ್ಳ ಸಾಕಷ್ಟು ದೇವಸ್ಥಾನಗಳು ನೆಲೆಗೊಂಡಿರುವುದು ಮತ್ತು ಅಲ್ಲಿ ಪ್ರತಿನಿತ್ಯವೂ ಭಕ್ತರ ಸಮೂಹ ತುಂಬಿರುವುದನ್ನು ನಾವು ಕಾಣಬಹುದು. ಅಂತಹದ್ದೇ ಒಂದು ವಿಶೇಷ ಧಾರ್ಮಿಕ ಸ್ಥಳದ ಬಗ್ಗೆ ನಾವು ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ. ಈ ಸ್ಥಳದ ಮಹಾತ್ಮೆಯನ್ನು ತಿಳಿದ ಮೇಲೆ ನೀವು ಕೂಡ ಈ ದೇವಸ್ಥಾನಕ್ಕೆ ಹೋಗಲು ಬಯಸುವುದರಲ್ಲಿ ಎರಡು ಮಾತಿಲ್ಲ. ಈಗ ನಾವು ಹೇಳುತ್ತಿರುವುದು ಹಾಸನ ಜಿಲ್ಲೆಯಲ್ಲಿರುವ ಪ್ರತಿಮನೆಯ ಆರಾಧ್ಯ ದೈವವಾಗಿ ಕಾಯುತ್ತಾ ಮನೆಮನೆ ಮಾತಾಗಿರುವ ತಾಯಿ ಪುರದಮ್ಮ ವಾಸವಿರುವ ದೇವಸ್ಥಾನದ ಬಗ್ಗೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564. ನಂ…
ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಮಹತ್ವದ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದೆ. ಈ ತಿದ್ದುಪಡಿ ವಿದೇಯಕದ ಮೂಲಕ ರಾಜ್ಯದ ಮುಜರಾಯಿ ದೇವಸ್ಥಾನಗಳು ಕೊಡುತ್ತಿರುವಂತ ಆದಾಯವನ್ನು ದ್ವಿಗುಣಮಾಡಲಾಗಿದೆ. ಇದಷ್ಟೇ ಅಲ್ಲದೇ ಮುಜರಾಯಿ ಇಲಾಖೆಯ ದೇಗುಲಗಳಲ್ಲಿ 10 ಲಕ್ಷದಿಂದ 1 ಕೋಟಿ ರೂ ಆದಾಯ ಹೊಂದಿರೋ ದೇಗುಲಗಳು ಶೇ.5ರಷ್ಟು ಹಣ ಸಲ್ಲಿಸಬೇಕು. 1 ಕೋಟಿಗೂ ಹೆಚ್ಚು ಆದಾಯ ಮೀರಿದ ದೇಗುಲಗಳು ಶೇ.10ರಷ್ಟು ಹಣ ಸಲ್ಲಿಸಬೇಕು ಎಂಬುದಾಗಿ ತಿದ್ದುಪಡಿ ವಿದೇಯಕದಲ್ಲಿ ತಿಳಿಸಲಾಗಿದೆ. ಮುಜರಾಯಿ ಇಲಾಖೆಯ ದೇಗುಲಗಳ ಅರ್ಚಕರು, ಸಿಬ್ಬಂದಿಗೆ ಗುಡ್ ನ್ಯೂಸ್ ಎನ್ನುವಂತೆ ಸಿ-ಗ್ರೇಡ್ ದೇವಾಲಯದವರಿಗೆ ವಿಮೆ ಸೌಕರ್ಯ ಒದಗಿಸಲು ಬಿಲ್ ನಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಅರ್ಚಕರು, ದೇಗುಲದ ಸಿಬ್ಬಂದಿಗಳಿ ಈ ವಿಮೆ ಸೌಲಭ್ಯ ಜಾರಿಯಾದ ನಂತ್ರ ಮೃತಪಟ್ಟಾಗ 5 ಲಕ್ಷ ರೂ ಪರಿಹಾರ ಸೀಗಲಿದೆ. ಈ ಮೂಲಕ 35000 ಸಾವಿರದಿಂದ ವಿಮಾ ಪರಿಹಾರವನ್ನು 5 ಲಕ್ಷಕ್ಕೆ ಹೆಚ್ಚಳ ಮಾಡಿದಂತೆ ಆಗಿದೆ. ದೇಗುಲದ ಸಿಬ್ಬಂದಿ, ಅರ್ಚಕರಿಗೆ ಗುಡ್ ನ್ಯೂಸ್ ಎನ್ನುವಂತೆ…
ಕೋಲಾರ: ವಿದ್ಯುತ್ ನಿರ್ವಹಣಾ ಕಾಮಗಾರಿ ನಡೆಸುತ್ತಿದ್ದಂತ ವೇಳೆಯಲ್ಲಿ ವಿದ್ಯುತ್ ಶಾಕ್ ನಿಂದಾಗಿ ಬೆಸ್ಕಾಂ ಗುತ್ತಿಗೆ ನೌಕರರನೊಬ್ಬ ಕಂಬದಲ್ಲೇ ಸಾವನ್ನಪ್ಪಿರೋ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಾಗೇರಿ ಬಳಿಯಲ್ಲಿ ಬೆಸ್ಕಾಂ ಗುತ್ತಿಗೆ ನೌಕರ ಮಂಜುನಾಥ್(45) ವಿದ್ಯುತ್ ದುರಸ್ತಿ ಮಾಡೋದಕ್ಕೆ ಕಂಬ ಹತ್ತಿದ್ದನು. ಈ ವೇಳೆಯಲ್ಲಿ ವಿದ್ಯುತ್ ಶಾಕ್ ಹೊಡೆದು, ಕಂಬದಲ್ಲೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/bmtc-gives-good-news-to-students-appearing-for-ii-puc-exams/ https://kannadanewsnow.com/kannada/icc-test-ranking-jaiswal-breaks-into-top-20/