Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಮಂಡಿಸಲಾದಂತ ಮಸೂಧೆ ಸಂಬಂಧ ಚರ್ಚಿಸಲು ಜಂಟಿ ಸಂಸದೀಯ ಸಮಿತಿಗೆ ವರ್ಗಾಯಿಸಲಾಗಿದೆ. ಇದೀಗ ಬಿಜೆಪಿ ಸಂಸದ ಪಿ.ಪಿ ಚೌಧರಿ ಅಧ್ಯಕ್ಷತೆಯಲ್ಲಿ 39 ಸದಸ್ಯರ ಜೆಪಿಸಿ ಸಮಿತಿ ರಚಿಸಲಾಗಿದೆ. ಇಂದು ರಾಜ್ಯಸಭೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಲೋಕಸಭಾ ಸದಸ್ಯರಾದಂತ ಪಿ.ಪಿ ಚೌಧರಿ ಅಧ್ಯಕ್ಷತೆಯಲ್ಲಿ ಸದಸ್ಯರನ್ನು ನೇಮಿಸಿ ಆದೇಶಿಸಿದ್ದಾರೆ. ಈ ಸಮಿತಿಯಲ್ಲಿ ಲೋಕಸಭೆಯ ಸದಸ್ಯರಾದಂತ ಡಾ.ಸಿಎಂ ರಮೇಶ್, ಬನ್ಸೂರಿ ಸ್ವರಾಜ್, ಪರ್ಸೋತ್ತಮಬಾಯ್ ರೂಪಲ, ಅನುರಾಗ್ ಸಿಂಗ್ ಠಾಕೋರ್, ವಿಷ್ಣು ದಯಾಳ್ ರಾಮ್, ಭಾತೃಹರಿ ಮಹತಬ್, ಸಂಬಿತ್ ಪಾತ್ರ, ಅನೀಲ್ ಬಾಲುನಿ, ವಿಷ್ಣು ದತ್ ಶರ್ಮಾ, ಬೈಜಯಂತ್ ಪಾಂಡು, ಡಾ.ಸಂಜಯ್ ಜೈಸ್ವಾಲ್, ಪ್ರಿಯಾಂಕ ಗಾಂಧಿ ವಾದ್ರ, ಮನೀಶ್ ತಿವಾರಿ, ಸುಖ್ ದೇವ್ ಭಗತ್, ಧರ್ಮೇಂದ್ರ ಯಾದವ್, ಛೋಟೆಲಾಲ್, ಕಲ್ಯಾಣ್ ಬ್ಯಾನರ್ಜಿ, ಟಿಎಂ ಸೆಲ್ವಗಣಪತಿ, ಜಿಎಂ ಹರೀಶ್ ಬಾಲಯೋಗಿ, ಅನಿಲ್ ಯಶ್ವಂತ್ ದೇಸಾಯಿ, ಸುಪ್ರೀಯ ಸೂಲೆ, ಡಾ.ಶ್ರೀಕಾಂತ್ ಏಕನಾಥ್ ಸಿಂಧೆ, ಶಾಂಭವಿ, ಕೆ.ರಾಧಾಕೃಷ್ಣನ್, ಚಂದ್ರ ಚೌವ್ಹಾಣ್, ಬಾಲಶೌರ್ಯ…
ನವದೆಹಲಿ: 855 ಕೋಟಿ ರೂ.ಗಳ ಬಜೆಟ್ ವೆಚ್ಚದೊಂದಿಗೆ 2025 ಕ್ಕೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ಪ್ರತಿ ಕ್ವಿಂಟಾಲ್ಗೆ 420 ರೂ.ಗಳಿಂದ 12,100 ರೂ.ಗೆ ಹೆಚ್ಚಿಸುವುದಾಗಿ ಸರ್ಕಾರ ಇಂದು (ಡಿಸೆಂಬರ್ 20) ಘೋಷಿಸಿದೆ. 2025ರ ವೇಳೆಗೆ ‘ಮಿಲ್ಲಿಂಗ್ ಕೊಬ್ಬರಿ’ಯ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್ಗೆ 420 ರೂ.ಗಳಿಂದ 11,582 ರೂ.ಗೆ ಮತ್ತು ‘ಚೆಂಡು ಕೊಬ್ಬರಿ’ಯ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್ಗೆ 100 ರೂ.ಗಳಿಂದ 12,100 ರೂ.ಗೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. https://twitter.com/ANI/status/1870118152098771427 ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, “ರೈತರ ಕಲ್ಯಾಣಕ್ಕಾಗಿ ಸರಣಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇದು ನಮ್ಮ ಬದ್ಧತೆಯನ್ನು, ರೈತರ ಜೀವನವನ್ನು ಸುಧಾರಿಸುವ ಪ್ರಧಾನಿಯವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.. ನಮ್ಮ ದೇಶದಲ್ಲಿ, ಕರ್ನಾಟಕವು ಕೊಬ್ಬರಿ ಉತ್ಪಾದನೆಯಲ್ಲಿ…
ಭೋಪಾಲ್: ಮಧ್ಯಪ್ರದೇಶದ ಭೋಪಾಲ್ನಲ್ಲಿ ಬಿಟ್ಟುಹೋದ ಎಸ್ಯುವಿ ಕಾರಿನಲ್ಲಿ 40 ಕೋಟಿ ರೂ.ಗಳ ಮೌಲ್ಯದ 52 ಕೆಜಿ ಚಿನ್ನದ ಗಟ್ಟಿಗಳು ಮತ್ತು 11 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಆದಾಯ ತೆರಿಗೆ (ಐಟಿ) ಇಲಾಖೆ ಮತ್ತು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಗುರುವಾರ ರಾತ್ರಿ ವಾಹನವು ಕುಶಾಲನಗರ ರಸ್ತೆಯಲ್ಲಿ ವಾರಸುದಾರರಿಲ್ಲದೆ ನಿಂತಿದೆ ಎಂಬ ಸುಳಿವು ಸಿಕ್ಕಿತು. ನಗರದ ಹೊರವಲಯದಲ್ಲಿರುವ ಮೆಂಡೋರಿ ಅರಣ್ಯದಲ್ಲಿ ಕಾರು ಪತ್ತೆಯಾಗಿದೆ. 100 ಪೊಲೀಸರು ಮತ್ತು 30 ವಾಹನಗಳ ತಂಡವು ಕಾರನ್ನು ತಪ್ಪಿಸಿಕೊಳ್ಳಲು ಬಿಡದಂತೆ ಸುತ್ತುವರೆದಿತು. ಆದರೆ ಶೋಧಿಸಿದಾಗ, ಚಿನ್ನ ಮತ್ತು ಹಣದ ಕಟ್ಟುಗಳನ್ನು ಸಂಗ್ರಹಿಸಿದ ಎರಡು ಚೀಲಗಳನ್ನು ಹೊರತುಪಡಿಸಿ ಒಳಗೆ ಯಾರೂ ಕಂಡುಬಂದಿಲ್ಲ. ಡಿಸಿಪಿ ಪ್ರಿಯಾಂಕಾ ಶುಕ್ಲಾ ಮಾತನಾಡಿ, “ಕುಶಾಲನಗರ ರಸ್ತೆಯಲ್ಲಿ ಇನ್ನೋವಾ ಕ್ರಿಸ್ಟಾ ಕಾರು ಬಹಳ ಸಮಯದಿಂದ ವಾರಸುದಾರರಿಲ್ಲದೆ ನಿಂತಿದೆ ಮತ್ತು ವಾಹನದೊಳಗೆ ಸುಮಾರು ಏಳರಿಂದ ಎಂಟು ಚೀಲಗಳು ಇದ್ದವು ಎಂದು ವ್ಯಕ್ತಿಯೊಬ್ಬರು ರತಿಬಾದ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಕೆಲವು…
ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಕೇಂದ್ರವಾದ ಕಲಬುರಗಿಯಲ್ಲಿ ಕೆ.ಕೆ.ಆರ್.ಡಿ.ಬಿ.ಯ 302 ಕೋಟಿ ರೂ. ಸೇರಿ ಒಟ್ಟಾರೆ 327.17 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 371 ಹಾಸಿಗೆ ಸಾಮರ್ಥ್ಯದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯ ಕಲಬುರಗಿ ಶಾಖಾ ಆಸ್ಪತ್ರೆ ಇದೇ ಡಿಸೆಂಬರ್ 22 ರಂದು ಲೋಕಾರ್ಪಣೆ ಮಾಡಲಾಗುತ್ತಿದ್ದು, ಕಾರ್ಪೊರೇಟ್ ಆಸ್ಪತ್ರೆ ಮೀರಿಸುವ ಗುಣಮಟ್ಟದ ಸೇವೆ ಇಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು. ಶುಕ್ರವಾರ ನೂತನ ಜಯದೇವ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರದೇಶದ ಸಚಿವರು-ಶಾಸಕರು ಅಗಮಿಸಲಿದ್ದು, ಅಂದಾಜು 2,500 ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದರು. ನೂತನ ಆಸ್ಪತ್ರೆಯ ಸಾಮರ್ಥ್ಯಕ್ಕೆ ತಕ್ಕಂತೆ ಈಗಿರುವ 10 ಹೃದ್ರೋಗ ವೈದ್ಯರ ಜೊತೆಗೆ ಹೆಚ್ಚುವರಿಯಾಗಿ 21 ವೈದ್ಯರು, 120 ಸ್ಟಾಫ್ ನರ್ಸ್…
ಕೆಎನ್ಎನ್ ಸ್ಪೆಷಲ್ ಡೆಸ್ಕ್: ಮಲೆನಾಡಿನ ಸೊಬಸು ಸವಿಯೋದಕ್ಕೆ ಬಹುತೇಕರು ಇಷ್ಟ ಪಡುತ್ತಾರೆ. ಈ ಸೊಬಗಿನ ಸಿರಿಯಲ್ಲಿ ಹೊಸ ವರ್ಷ ಆಚರಣೆ ಇನ್ನೂ ಮನಮೋಹಕ. ಅಷ್ಟೇ ಅಚ್ಚಳಿಯದೇ ಉಳಿಯುವ ನೆನಪು ಕೂಡ. ಹೀಗೆ ಮಲೆನಾಡಲ್ಲಿ ಹೊಸ ವರ್ಷಾಚರಣೆ ಮಾಡುವ ಆಸೆ ಇದ್ದರೇ.. ನಿಮಗೆ ಅವಕಾಶವೊಂದಿದೆ. ಅದು ಎಲ್ಲಿ.? ಏನೆಲ್ಲಾ ಇರುತ್ತೆ ಎನ್ನುವ ಮಾಹಿತಿ ಮುಂದೆ ಓದಿ. ಸದ್ಗುರು ಗ್ರೂಪ್ಸ್ ವತಿಯಿಂದ ಸಂಗೀತ ಕಾರ್ಯಕ್ರಮ ಸದ್ಗುರು ಗ್ರೂಪ್ಸ್ ವತಿಯಿಂದ ಸಾಗರದಲ್ಲಿ ಮೊದಲ ಬಾರಿಗೆ ಅತಿದೊಡ್ಡ ಸಂಗೀತ ಕಾರ್ಯಕ್ರಮವನ್ನು ಹೊಸ ವರ್ಷಾಚರಣೆಗೆ ಆಯೋಜಿಸಲಾಗುತ್ತಿದೆ. ಪ್ರಸಿದ್ಧ ಸಿಂಗರ್ ಗಳ ಮ್ಯೂಸಿಕಲ್ ನೈಟ್ಸ್ ನಿಮ್ಮ ಹೊಸ ವರ್ಷಾಚರಣೆಗೆ ಮತ್ತಷ್ಟು ಮೆರುಗು ನೀಡಲಿದೆ. ಡಿಸೆಂಬರ್.31ರ ಸಂಜೆ 7 ಗಂಟೆಗೆ ಸಂಗೀತ, ಡಿಜೆ, ಸೆಲ್ಪಿ ಬೂತ್, ವೆಜ್ ಅಂಡ್ ನಾನ್ ವೆಜ್ ಪುಡ್, ಆಟಗಳ ಜೊತೆಗೆ ಹೊಸ ವರ್ಷ ಬರ ಮಾಡಿಕೊಳ್ಳೋರಿಗೆ ಸಖತ್ ಮುದಗೊಳಿಸು ಸದ್ಗುರು ಗ್ರೂಪ್ ಸಿದ್ಧಗೊಂಡಿದೆ. ಮಲೆನಾಡಿನಲ್ಲಿ ಏಲ್ಲಿ ಆಚರಣೆ ಗೊತ್ತಾ? ಶಿವಮೊಗ್ಗ ಜಿಲ್ಲೆಯ ಸಾಗರದ ತ್ಯಾಗರ್ತಿ ಕ್ರಾಸ್…
ಬೆಳಗಾವಿ: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷ ನಿರಂತರವಾಗಿ ನೋಯಿಸಿ, ವಂಚಿಸಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು. ಇಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಡಾ. ಅಂಬೇಡ್ಕರ್ ಅವರ ಹೇಳಿಕೆಗಳನ್ನು ವಿರೋಧಿಸಿದ್ದಲ್ಲದೆ ಖಂಡಿಸುತ್ತ ಬಂದಿದೆ. ಬಾಬಾ ಸಾಹೇಬರು ದಲಿತರಿಗೆ ಪ್ರತ್ಯೇಕ ಇಲೆಕ್ಟೊರೇಟ್ ಬೇಕೆಂದು ಬ್ರಿಟಿಷರನ್ನು ಕೇಳಿದಾಗ ಕಾಂಗ್ರೆಸ್ಸಿಗರು ಅದನ್ನು ವಿರೋಧಿಸಿದ್ದರು; ಚುನಾವಣೆಗಳಲ್ಲಿ ಅವರು ನಿಂತಾಗ ಕೂಡ ಅವರನ್ನು ನೆಹರೂ ಅವರು ಗುಂಪು ಕಟ್ಟಿಕೊಂಡು ಸೋಲಿಸಿದ್ದರು ಎಂದು ಗಮನ ಸೆಳೆದರು. ಅಂಥ ಮೇಧಾವಿ ವ್ಯಕ್ತಿ ಸಂವಿಧಾನ ಬರೆದ ಮೇಲೂ ಈ ದೇಶದಲ್ಲಿ ಅವರು ಬರೆದ ಸಂವಿಧಾನ ಜಮ್ಮು-ಕಾಶ್ಮೀರದಲ್ಲಿ ಜಾರಿಯಲ್ಲಿ ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇವತ್ತು ಸಂವಿಧಾನವನ್ನು ಜತೆಯಲ್ಲಿ ಇಟ್ಟುಕೊಂಡು ಓಡಾಡುವುದು ನಾಟಕವಲ್ಲದೇ ಇನ್ನೇನು ಎಂದು ಪ್ರಶ್ನಿಸಿದರು. ಮೊದಲಿನಿಂದ ರಾಹುಲ್ ಗಾಂಧಿ, ಇತರ ಕಾಂಗ್ರೆಸ್ಸಿಗರು ಸಂವಿಧಾನದ ಪ್ರತಿಯನ್ನು ಯಾಕೆ ಕೈಯಲ್ಲಿ ಹಿಡಿದಿಲ್ಲ? ಇವತ್ತು ನಮಗೆ ಸ್ವಾತಂತ್ರ್ಯ ಬಂದಿದೆಯೇ ಎಂದು ಕೇಳಿದರು. ಸಂವಿಧಾನ ಪ್ರದರ್ಶನ ಕೇವಲ ನಾಟಕ ಎಂದು…
ಬೆಂಗಳೂರು: ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಯಶವಂತಪುರ-ಮಂಗಳೂರು ಜಂಕ್ಷನ್ ನಡುವೆ ಪ್ರತಿ ದಿಕ್ಕಿನಲ್ಲಿ ಎರಡು ಟ್ರಿಪ್ ವಿಶೇಷ ರೈಲುಗಳನ್ನು ನೈಋತ್ಯ ರೈಲ್ವೆಯು ಓಡಿಸಲಿದೆ. ರೈಲು ಸಂಖ್ಯೆ 06505/06506 ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಖ್ಯೆ 06505 ಯಶವಂತಪುರ-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 23 ಮತ್ತು 27 ರಂದು ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗ್ಗೆ 11.45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಮರಳಿ, ಇದೇ ರೈಲು (06506) ಡಿಸೆಂಬರ್ 24 ಮತ್ತು 28ರಂದು ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಮಧ್ಯಾಹ್ನ 1:00 ಗಂಟೆಗೆ ಹೊರಟು, ಅದೇ ದಿನ ರಾತ್ರಿ 10.30ಕ್ಕೆ ಯಶವಂತಪುರ ತಲುಪಲಿದೆ. ಈ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು ಮತ್ತು ಬಂಟ್ವಾಳ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. https://kannadanewsnow.com/kannada/good-news-for-job-seekers-5977-vacancies-to-be-notified-soon-minister-d-sudhakar/ https://kannadanewsnow.com/kannada/is-there-a-desire-for-new-year-celebrations-in-malnad-heres-a-golden-opportunity/ https://kannadanewsnow.com/kannada/girl-who-should-have-studied-and-done-well-falls-ill-appeals-for-your-help-cooperation/
ಹುಬ್ಬಳ್ಳಿ: ಇಲ್ಲಿನ ಗದಗ ರಸ್ತೆಯಲ್ಲಿರುವ ರೈಲ್ ಸೌಧ ಸಭಾಭವನದಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ ಅವರು ಗುರುವಾರ (19.12.2024) ವಿವಿಧ ಇಲಾಖೆಗಳ ಪ್ರಧಾನ ಮುಖ್ಯಸ್ಥರೊಂದಿಗೆ ಸುರಕ್ಷತಾ ಸಭೆ ನಡೆಸಿದರು. ರೈಲ್ವೆ ಸುರಕ್ಷತೆಯನ್ನು ಖಾತ್ರಿಪಡಿಸುವ ಈ ನಿರ್ಣಾಯಕ ಚರ್ಚೆಯ ನಂತರ, ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಂಭವಿಸಬಹುದಾಗಿದ್ದ ಅನಾಹುತಗಳನ್ನು ತಪ್ಪಿಸಿದ, ಜಾಗರೂಕತೆ ವಹಿಸಿದ ಹಾಗೂ ಕರ್ತವ್ಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ, ಅನುಕರಣೀಯ ಸುರಕ್ಷತಾ ಪ್ರಜ್ಞೆ ತೋರಿದ ವಲಯದ ಮೈಸೂರು ಮತ್ತು ಬೆಂಗಳೂರು ವಿಭಾಗಳ ನೌಕರರಿಗೆ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ್ ಅವರು ಉದ್ಯೋಗಿಗಳಿಗೆ “ತಿಂಗಳ ಸುರಕ್ಷತಾ ವ್ಯಕ್ತಿ” ಪ್ರಶಸ್ತಿ ನೀಡಿ ಗೌರವಿಸಿದರು. ಅಪಾಯಕಾರಿ ಸಂದರ್ಭಗಳು ಗಂಭೀರ ಅಪಘಾತಗಳಾಗಿ ಬದಲಾಗುವ ಮೊದಲು ಅದನ್ನು ನಿಲ್ಲಿಸಲು ನೌಕರರು ತ್ವರಿತವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದರು. ಪ್ರಶಸ್ತಿ ಪುರಸ್ಕೃತರನ್ನು ಆಯಾ ವಿಭಾಗಗಳಿಂದ ಪಟ್ಟಿ ಮಾಡಲಾಗಿದೆ: ಮೈಸೂರು ವಿಭಾಗ: 1. ಅಮಿತ್, ಸ್ಟೇಷನ್ ಮಾಸ್ಟರ್/ ಬಳ್ಳೇಕೆರೆ 2. ರವಿ ಲಮಾಣಿ, ಸ್ಟೇಷನ್ ಮಾಸ್ಟರ್/ ಬ್ಯಾಡಗಿ 3. ಯಲ್ಲಪ್ಪ…
ಮಂಡ್ಯ : “ಬಿಜೆಪಿ ನಾಯಕ ಸಿ.ಟಿ ರವಿ ಅವರ ಹೇಳಿಕೆ ಇಡೀ ಹೆಣ್ಣು ಕುಲಕ್ಕೆ ಮಾಡಲಾದ ದೊಡ್ಡ ಅಪಮಾನ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು. “ಈ ವ್ಯಕ್ತಿಯಿಂದ ಇಂತಹ ಪ್ರವೃತ್ತಿ ಇದೇ ಮೊದಲಲ್ಲ. ಸಿದ್ದರಾಮಯ್ಯ ಅವರು, ಜಯಮಾಲ, ಸೇರಿದಂತೆ ನಮ್ಮ ನಾಯಕರ ಬಗ್ಗೆ ಈ ಹಿಂದೆ ಅನೇಕ ಬಾರಿ ಹೀನವಾಗಿ ಮಾತನಾಡಿದ್ದಾರೆ. ಸಿ.ಟಿ. ರವಿ ಅವರ ಹೇಳಿಕೆ ಹಾಗೂ ನಡತೆ ಸರಿಯೋ ತಪ್ಪೋ ಎಂದು ಬಿಜೆಪಿಯ ಎಲ್ಲಾ ನಾಯಕರು ಹೇಳಲಿ. ಪೊಲೀಸರ ವಿಚಾರ ನಂತರ ಮಾತನಾಡೋಣ. ಅದನ್ನು ಬಿಟ್ಟು ಪೊಲೀಸರ ಮೇಲೆ ದೂರು ನೀಡುವುದಲ್ಲ. ಪೊಲೀಸರು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳೋಣ” ಎಂದು ತಿಳಿಸಿದರು. ಚಿಕ್ಕಮಗಳೂರು ಬಂದ್ ಕರೆ ನೀಡಿರುವ ಬಗ್ಗೆ ಕೇಳಿದಾಗ, “ಚಿಕ್ಕಮಗಳೂರು ಮಾತ್ರವಲ್ಲ, ದೇಶವನ್ನೇ ಬಂದ್ ಮಾಡಲಿ. ಆತ ಮಾಡಿರುವುದು ಘನಕಾರ್ಯವೇ?…
ಪ್ರಾಚೀನ ಕಾಲದಿಂದಲೂ ರತ್ನಗಳನ್ನು ಉಪಯೋಗಿಸುವುದು ಶೃಂಗಾರಕ್ಕಾಗಿ, ಅಲಂಕಾರಕ್ಕಾಗಿ ಮತ್ತು ಐಶ್ವರ್ಯವನ್ನು ಪ್ರದರ್ಶನ ಮಾಡುವುದಕ್ಕಾಗಿ ಎಂಬಲ್ಲಿ ಎರಡು ಮಾತಿಲ್ಲ. ರತ್ನಗಳ ವಿಭಿನ್ನ ಪ್ರಭಾವವು ದೇಹ ವಿಜ್ಞಾನದ ಜೊತೆಗೆ ಆಯುರ್ವೇದದ ವಿಷಯವೂ ಆಗಿದೆ. ವೈದ್ಯಕೀಯ ಗ್ರಂಥಗಳಲ್ಲಿ ರತ್ನಗಳ ಭಸ್ಮ, ರತ್ನಗಳ ಪುಡಿ ಮತ್ತು ರಸಾಯನ ಕ್ರಿಯೆಗಳ ಪ್ರಯೋಗವನ್ನು ಅಸಾಧ್ಯ ರೋಗಗಳ ನಿವಾರಣೆಗಾಗಿ ಸಾವಿರಾರು ವರ್ಷಗಳಿಂದ ಮಾಡಲಾಗುತ್ತಿದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9686268564 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ…