Subscribe to Updates
Get the latest creative news from FooBar about art, design and business.
Author: kannadanewsnow09
ಕೊಲಂಬೋ: ಶ್ರೀಲಂಕಾದ ವಾಸ್ಗಮುವಾ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ವೇಳೆಯಲ್ಲಿ ಆನೆಯೊಂದು ವಾಹನದ ಮೇಲೆ ನುಗ್ಗಿ ಬಂದಿದೆ. ಸಫಾರಿ ಜೀಪಿನ ಚಾಲಕ ಮದಗಜವನ್ನು ಹೇಗೆ ಕೆಲವೇ ನಿಮಿಷಗಳಲ್ಲಿ ದಾಳಿ ಮಾಡೋದನ್ನು ತಡೆದು ನಿಲ್ಲಿಸಿದರು ಅಂತ ಮುಂದೆ ಓದಿ ಜೊತೆಗೆ ವೀಡಿಯೋ ನೋಡಿ. ಮೂಲತಃ ಇಮಾಲ್ ನಾಣಯಕ್ಕರ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಈ ಕ್ಲಿಪ್ನಲ್ಲಿ ಪ್ರವಾಸಿಗರನ್ನು ಹೊತ್ತ ವಾಹನವು ಸಮೀಪಿಸುತ್ತಿದ್ದಂತೆ ಎರಡು ಆನೆಗಳು ಸಾಲಿನಲ್ಲಿ ನಡೆಯುತ್ತಿರುವುದನ್ನು ತೋರಿಸುತ್ತದೆ. ಇದ್ದಕ್ಕಿದ್ದಂತೆ, ಆನೆಗಳಲ್ಲಿ ಒಂದು ಅವರ ಕಡೆಗೆ ಧಾವಿಸಿತು. ಭೀತಿಯು ಪ್ರಾರಂಭವಾಗುತ್ತಿದ್ದಂತೆಯೇ, ಮಾರ್ಗದರ್ಶಿ ತ್ವರಿತವಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡನು, ಸಂಭವನೀಯ ಅಪಾಯಕಾರಿ ಮುಖಾಮುಖಿಯನ್ನು ತಪ್ಪಿಸಿದನು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. https://www.youtube.com/watch?v=vCSytkHMlXQ ಈ ಕ್ಷಣವನ್ನು ವಿವರಿಸಿದ ಇಮಾಲ್, “ಅಡ್ರಿನಾಲಿನ್ ರಶ್ ಬಗ್ಗೆ ಮಾತನಾಡಿ! ಈ ಆನೆ ನಮ್ಮನ್ನು ಬೆನ್ನಟ್ಟಲು ನಿರ್ಧರಿಸುತ್ತಿದ್ದಂತೆ, ನಮ್ಮ ಮಾರ್ಗದರ್ಶಿ ಎಲ್ಲರನ್ನೂ ಸುರಕ್ಷಿತವಾಗಿಡಲು ನಿಪುಣತೆಯಿಂದ ಹೆಜ್ಜೆ ಹಾಕಿದರು. ಪ್ರಕೃತಿಯು ಕ್ರೂರವಾಗಿರಬಹುದು, ಆದರೆ ಅದು ಅದನ್ನು ಮರೆಯಲಾಗದು ಎಂದಿದ್ದಾರೆ. ಅಪ್ಲೋಡ್ ಮಾಡಿದಾಗಿನಿಂದ, ವೀಡಿಯೊವನ್ನು…
ಬೆಂಗಳೂರು: ಇಂದು ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್, ಮಾಧವ್ ಕುಸೆಕರ್ ಭಾಆಸೇ, ಎಂ.ಎಸ್.ಆರ್.ಟಿ.ಸಿ ಉಪಾಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳ ತಂಡವು ಕರಾರಸಾ ನಿಗಮದ, ಘಟಕ, ಕಾರ್ಯಾಗಾರ ಹಾಗೂ ಕೇಂದ್ರ ಕಛೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನಿಗಮದಲ್ಲಿನ ಪ್ರತಿಷ್ಠಿತ ವಾಹನಗಳ ಕಾರ್ಯಾಚರಣೆ, ಕಾರ್ಮಿಕ ಕಲ್ಯಾಣ ಉಪಕ್ರಮಗಳು, ವಾಣಿಜ್ಯ ಆದಾಯ, ಬಸ್ಸುಗಳ ಪುನಃಶ್ಚೇತನ/ ನವೀಕರಣ, ಹೆಚ್.ಆರ್.ಎಂ.ಎಸ್., ಇ-ಟೆಕೇಟಿಂಗ್, ಕೆ.ಎಸ್.ಆರ್.ಟಿ.ಸಿ. ಆರೋಗ್ಯ, ರೂ 1 ಕೋಟಿ ಅಪಘಾತ ವಿಮೆ, ಇತರೆ ಉಪಕ್ರಮಗಳ ಬಗ್ಗೆ ರಾಮಲಿಂಗಾ ರೆಡ್ಡಿ ಸಾರಿಗೆ ಮತ್ತು ಮುಜರಾಯಿ ಸಚಿವರು, ಕರ್ನಾಟಕ ಸರ್ಕಾರ ಮತ್ತು ರಿಜ್ವಾನ್ ನವಾಬ್ ಮಾನ್ಯ ಉಪಾಧ್ಯಕ್ಷರು, ಕರಾರಸಾ. ನಿಗಮ., ಸರ್ಕಾರದ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ, ವ್ಯವಸ್ಥಾಪಕ ನಿರ್ದೇಶಕರು, ಕರಾರಸಾ ನಿಗಮ ಅವರೊಂದಿಗೆ ವಿವರವಾಗಿ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಮುಂದುವರೆದು, ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ಕ್ಕೆ ಭೇಟಿ ನೀಡಿದ ತಂಡವು ಐರಾವತ ಕ್ಲಬ್ ಕಾಸ್, ಐರಾವತ ಕ್ಲಬ್ ಕಾಸ್ 2.0, ಅಂಬಾರಿ ಡ್ರೀಮ್ ಕ್ಲಾಸ್, ಪಲ್ಲಕ್ಕಿ,…
ಚನ್ನಪಟ್ಟಣ : “ಚನ್ನಪಟ್ಟಣದ ಜನರು ಸ್ವಾಭಿಮಾನಿ ಮತದಾರರು.ಈ ಜಿಲ್ಲೆಯ ಮಗನಿಗೆ ಅವಕಾಶ ಮಾಡಿಕೊಡಿ ಎನ್ನುವ ಮನವಿಗೆ ಸ್ಪಂದಿಸಿ ಇಡೀ ಕಾಂಗ್ರೆಸ್ ಸರ್ಕಾರಕ್ಕೆ ಬಲ ತುಂಬಿದ್ದೀರಿ. ನಮ್ಮ ಕೈ ಹಿಡಿದ ನಿಮ್ಮ ಋಣ ತೀರಿಸುತ್ತೇವೆ” ಎಂದು ಮಾಜಿ ಸಂಸದ ಡಿ. ಕೆ. ಸುರೇಶ್ ಅವರು ತಿಳಿಸಿದರು. ಭಾನುವಾರ ಹಮ್ಮಿಕೊಂಡಿದ್ದ ಚನ್ನಪಟ್ಟಣ ಉಪಚುನಾವಣೆ ಗೆಲುವಿಗೆ ಕಾರಣರಾದ ಮತದಾರರಿಗೆ ಕೃತಜ್ಞತಾ ಸಮಾವೇಶದಲ್ಲಿ ಅವರು ಮಾತನಾಡಿದರು. “ಇಡೀ ರಾಜ್ಯ ಚನ್ನಪಟ್ಟಣದ ಉಪಚುನಾವಣೆಯನ್ನು ನೋಡುತ್ತಿತ್ತು. ಇದು ಅತ್ಯಂತ ಸವಾಲಿನ ಚುನಾವಣೆಯಾಗಿ ಮಾರ್ಪಾಡಾಗಿತ್ತು. ಚನ್ನಪಟ್ಟಣದ ಚುನಾವಣಾ ಇತಿಹಾಸದಲ್ಲಿ ಯೋಗೇಶ್ವರ್ ಅವರಿಗೆ ಅತ್ಯಂತ ಹೆಚ್ಚಿನ ಮತ ನೀಡಿದವರು ನೀವು. ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ್ ಸೇರಿದಂತೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ನೀವು ಶಕ್ತಿ ನೀಡಿದ್ದೀರಿ” ಎಂದರು. “ನಮ್ಮ ಸರ್ಕಾರಕ್ಕೆ ಶಕ್ತಿ ಕೊಟ್ಟ ನಿಮ್ಮ ಬದುಕನ್ನು ಹಸನು ಮಾಡುವ ಕೆಲಸ ನಾವು ಮಾಡುತ್ತೇವೆ. ಪ್ರತಿ ಮನೆಗೆ ಹೋಗಿ ನಿಮ್ಮ ಕಷ್ಟ ಸುಖ ವಿಚಾರಿಸಿದ್ದೇವೆ. ಈ ಜಿಲ್ಲೆಯ ಮನೆ ಮಗನಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ…
ದಾವಣಗೆರೆ: ಜಿಲ್ಲೆಯಲ್ಲಿ ರಜೆ ಇದ್ದ ಕಾರಣ ಕೆರೆಗೆ ಈಜಲು ತೆರಳಿದ್ದಂತ ಇಬ್ಬರು ಬಾಲಕರು ನೀರುಪಾಲಾಗಿರುವಂತ ಧಾರುಣ ಘಟನೆ ಕುರ್ಕಿ ಗ್ರಾಮದ ಬಳಿಯಲ್ಲಿ ನಡೆದಿದೆ. ದಾವಣಗೆರೆಯ ಗುರುಕುಲ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಇಂದು ಭಾನುವಾರದ ಕಾರಣ ಈಜಾಡಲು ಕುರ್ಕಿ ಗ್ರಾಮದ ಕೆರೆಯ ಬಳಿಗೆ ತೆರಳಿದ್ದರು. ನೀರಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಯತೀಂದ್ರ(16) ಮತ್ತು ಪಾಂಡು(16) ಎಂಬುದಾಗಿ ಗುರುತಿಸಲಾಗಿದೆ. ಮೃತ ವಿದ್ಯಾರ್ಥಿಗಳು ತುರ್ಚಘಟ್ಟದ ಗುರುಕುಲ ಶಾಲೆಯ ವಿದ್ಯಾರ್ಥಿಗಳು ಆಗಿದ್ದಾರೆ. ಶಾಲೆಗೆ ರಜೆ ಇದ್ದಿದ್ದರಿಂದ ಈಜಾಡಲು ತೆರಳಿದ್ದರು. ಮೃತ ವಿದ್ಯಾರ್ಥಿಗಳಲ್ಲಿ ಒಬ್ಬರ ಶವ ದೊರೆತಿದೆ. ಇನ್ನೊಬ್ಬನ ಶವಕ್ಕಾಗಿ ಶೋಧಕಾರ್ಯಾಚರಣೆಯನ್ನು ಅಗ್ನಿಶಾಮಕ ಸಿಬ್ಬಂದಿ ಮುಂದುವರೆಸಿದ್ದಾರೆ. ಈ ಸಂಬಂಧ ಮಾಯಕೊಂಡ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/if-siddaramaiah-goes-to-jail-1-crore-people-including-me-will-go-vatal-nagaraj/ https://kannadanewsnow.com/kannada/shocking-consuming-this-oil-increases-the-risk-of-diabetes-cancer-heart-attack/
ಮೈಸೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧರಾಮಯ್ಯ ರಾಜೀನಾಮೆ ನೀಡಬಾರದು. ಅವರು ಜೈಲಿಗೆ ಹೋದರೂ ಅಲ್ಲಿಂದಲೇ ಕೆಲಸ ಮಾಡಬೇಕು. ಒಂದು ವೇಳೆ ಜೈಲಿಗೆ ಹೋಗಿದ್ದೇ ಆದಲ್ಲಿ ನಾನು ಸೇರಿದಂತೆ 1 ಕೋಟಿ ಜನರು ಜೈಲಿಗೆ ಹೋಗ್ತೀವಿ ಎಂಬುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದ್ದಾರೆ. ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಿದ್ದರಾಮಯ್ಯ ರಾಜೀನಾಮೆಯನ್ನು ಯಾವುದೇ ಸಂದರ್ಭದಲ್ಲೂ ನೀಡಬಾರದು. ಏನಾದರೂ ಜೈಲಿಗೆ ಹೋದ್ರೆ ನಾನು ಸೇರಿದಂತೆ 1 ಕೋಟಿ ಜನರು ಜೈಲಿಗೆ ಹೋಗಲು ಸಿದ್ಧರಾಗಿದ್ದೇವೆ ಎಂದರು. ಸಿಎಂ ಸಿದ್ಧರಾಮಯ್ಯ ಜೈರಿಗೆ ಹೋದರೂ ಅಲ್ಲಿಂದಲೇ ಅಧಿಕಾರ ಮಾಡಲಿ. ಸಿಎಂ ಸಿದ್ಧರಾಮಯ್ಯ ಅವರು ನೂರಾರು ನಾಗರಹಾವುಗಳ ಮಧ್ಯೆ ಇದ್ದಾರೆ. ಹಿತಶತ್ರುಗಳ ಕಾಟ ಇದೆ. ವಿಪಕ್ಷಕ್ಕಿಂತ ಕಾಂಗ್ರೆಸ್ ಪಕ್ಷದವರೇ ಹಿತಶತ್ರುಗಳಾಗಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷದವರು ಬಾಯಿ ಮುಚ್ಚಿಕೊಂಡು ಇರಬೇಕು. ವಿರೋಧ ಪಕ್ಷದವರು ಅವರ ಮನೆ ಮೊದಲು ನೋಡಿಕೊಳ್ಳಲಿ. ಸಿಎಂ ಸ್ಥಾನಕ್ಕೆ ಡೆಡ್ ಲೈನ್ ಇಲ್ಲ. ಅದೊಂದು ಜೋಕ್ ಆಗಿದೆ. 5 ವರ್ಷ ಸಿದ್ಧರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂಬುದಾಗಿ ತಿಳಿಸಿದರು.…
ಕೋಲಾರ: ರಾಜ್ಯದಲ್ಲಿ ಸಿಎಂ ವಾರ್ನಿಂಗ್ ನಡುವೆಯೂ ಮೈಕ್ರೋ ಫೈನಾನ್ಸ್ ಕಿರುಕುಳ ಮುಂದುವರೆದಿದೆ. ಇಂದು ರಾಜ್ಯದಲ್ಲಿ ಫೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದೆ. ಕೋಲಾರದಲ್ಲಿ ಸಾಲದ ಬಾಧೆ ತಾಳಲಾರದೇ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದ ನಾಗರಾಜ್ ಎಂಬುವರು ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ. 10 ಲಕ್ಷ ಸಾಲವನ್ನು ಮಾಡಿದ್ದಂತ ನಾಗರಾಜ್ ಗೆ ಸಾಲ ಮರುಪಾವತಿಗೆ ಫೈನಾನ್ಸ್ ಕಂಪನಿಗಳು ಸೂಚಿಸಿದ್ದವು. ಈ ಸಾಲದ ಬಾಧೆಯನ್ನು ತಾಳಲಾರದೇ ಮನೆಯಲ್ಲೇ ನೇಣುಬಿಗಿದುಕೊಂಡು ನಾಗರಾಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ. https://kannadanewsnow.com/kannada/shocking-consuming-this-oil-increases-the-risk-of-diabetes-cancer-heart-attack/ https://kannadanewsnow.com/kannada/how-will-the-income-tax-slab-changes-affect-your-salary-heres-the-information/
ನವದೆಹಲಿ: ಇತ್ತೀಚಿನ ದಿನಗಳಲ್ಲಿ, ಸ್ಕ್ಯಾಮರ್ಗಳು ಜನರ ಮಾಹಿತಿಯನ್ನು ಕದಿಯಲು ಎಐ ಅನ್ನು ಬಳಸಲು ಪ್ರಾರಂಭಿಸಿದ್ದಾರೆ. ನೀವು ಜಿಮೇಲ್ ಬಳಕೆ ಮಾಡುತ್ತಿದ್ದರೇ, ನಿಮಗೂ ಹೀಗೆ ಕರೆ ಬರಬಹುದು ಎಚ್ಚರವಾಗಿರಬೇಕು. ಅದೇನು ಅಂತ ಮುಂದೆ ಓದಿ. ಮಾಧ್ಯಮ ವರದಿಗಳ ಪ್ರಕಾರ, ಸ್ಕ್ಯಾಮರ್ಗಳು ಪಾಸ್ವರ್ಡ್ಗಳು ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಕದಿಯಲು ಗೂಗಲ್ ಪ್ರತಿನಿಧಿಗಳಂತೆ ನಟಿಸಿ ಜಿಮೇಲ್ ಬಳಕೆದಾರರಿಗೆ ಕರೆ ಮಾಡುತ್ತಿದ್ದಾರೆ. ಈ ಸೈಬರ್ ಅಪರಾಧಿಗಳು ಜನರನ್ನು ಕರೆಯಲು ಎಐ ಬಳಸಿ ಮಾನವನಂತಹ ಧ್ವನಿಗಳನ್ನು ಸೃಷ್ಟಿಸುತ್ತಾರೆ. ನಂತರ ಅವರು ತಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ಅದನ್ನು ಮರುಪಡೆಯಬೇಕಾಗಿದೆ ಎಂದು ನಂಬುವಂತೆ ವ್ಯಕ್ತಿಗಳನ್ನು ಮೋಸಗೊಳಿಸುತ್ತಾರೆ. ನಕಲಿ ಇಮೇಲ್ ಕಳಿಸ್ತಾರೆ ಹುಷಾರ್ ಕರೆ ನಂತರ, ಸ್ಕ್ಯಾಮರ್ಗಳು ಗೂಗಲ್ ಇಮೇಲ್ ವಿಳಾಸದಿಂದ ನಕಲಿ ಇಮೇಲ್ ಕಳುಹಿಸುತ್ತಾರೆ. ಅದು ನೈಜವಾಗಿ ಕಾಣುತ್ತದೆ. ಇದು ಅಧಿಕೃತವಾಗಿ ಕಾಣುವಂತೆ ಮಾಡಲು, ಇದು ಖಾತೆ ಮರುಪಡೆಯುವಿಕೆಗಾಗಿ ಕೋಡ್ ಅನ್ನು ಒಳಗೊಂಡಿದೆ. ತಮ್ಮ ಖಾತೆಯನ್ನು ನಿಜವಾಗಿಯೂ ಹ್ಯಾಕ್ ಮಾಡಲಾಗಿದೆ ಎಂದು ಜನರಿಗೆ ಮನವರಿಕೆ ಮಾಡಲು ಇದನ್ನು…
ನವದೆಹಲಿ: 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ತೆರಿಗೆ ಸ್ಲ್ಯಾಬ್ ಪರಿಚಯ ಮಾಡಿದ್ದಾರೆ. ಅಲ್ಲದೇ 12 ಲಕ್ಷದವರೆಗೆ ತೆರಿಗೆ ವಿನಾಯ್ತಿಯನ್ನು ನೀಡಿದ್ದಾರೆ. ಹಾಗಾದ್ರೇ ನಿಮ್ಮ ಸಂಬಳದ ಮೇಲೆ ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆಗಳು ಹೇಗೆ ಪರಿಣಾಮ ಬೀರುತ್ತೆ ಎನ್ನುವ ಮಾಹಿತಿ ಮುಂದೆ ಓದಿ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಕೇಂದ್ರ ಬಜೆಟ್ 2025 ಭಾಷಣದಲ್ಲಿ 12 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಘೋಷಿಸಿದರು. ಇದು 1997 ರ ನಂತರ ಮಧ್ಯಮ ವರ್ಗದವರಿಗೆ ಅತಿದೊಡ್ಡ ತೆರಿಗೆ ಪರಿಹಾರವಾಗಿದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಪರಿಗಣಿಸಿ, ವಿನಾಯಿತಿ 12.75 ಲಕ್ಷ ರೂಪಾಯಿಗಳವರೆಗೆ ಹೋಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಸರ್ಕಾರವು ಡೀಫಾಲ್ಟ್ ತೆರಿಗೆ ವ್ಯವಸ್ಥೆಯನ್ನು ಮಾಡಿದ ಹೊಸ ತೆರಿಗೆ ಆಡಳಿತವು ರಿಯಾಯಿತಿ ತೆರಿಗೆ ದರಗಳು ಮತ್ತು ಉದಾರ ಸ್ಲ್ಯಾಬ್ಗಳನ್ನು ಒದಗಿಸುತ್ತದೆ. ಆದಾಗ್ಯೂ, ಈ ಆಡಳಿತವು ಹಳೆಯ ತೆರಿಗೆ…
ಉಡುಪಿ: ಉಡುಪಿ ಜಿಲ್ಲಾಧಿಕಾರಿಯ ಮುಂದೆ ನಕ್ಸಲ್ ಲಕ್ಷ್ಮೀ ತೊಂಬಟ್ಟು ಅವರು ಶರಣಾಗತಿಯಾದರು. ಅವರಿಗೆ ಎ ಕೆಟಗರಿಯಡಿ ಸೂಕ್ತ ಪರಿಹಾರ ನೀಡಲಾಗುವುದು ಅಂತ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಮುಂದೆ ನಕ್ಸಲ್ ಲಕ್ಷ್ಮೀ ತೊಂಬಟ್ಟು ಅವರು ಶರಣಾಗತಿಯಾದರು. ಆ ಬಳಿಕ ತಾನು ಯಾರ ಒತ್ತಡವಿಲ್ಲದೇ ಶರಣಾಗಿದ್ದೇನೆ. ಸಿಎಂ ಕೊಟ್ಟ ಅವಕಾಶ ನೋಡಿ ಮುಖ್ಯವಾಹನಿಗೆ ಬಂದಿರುವುದಾಗಿ ತಿಳಿಸಿದರು. ನನ್ನ ಊರಿಗೆ ಏನೂ ಇಲ್ಲ. ಶಾಲೆ, ಆಸ್ಪತ್ರೆ, ನೀರು ಬೇಕಿದೆ. ಅವುಗಳ ವ್ಯವಸ್ಥೆ ಮಾಡುವ ಭರವಸೆಯನ್ನು ಸರ್ಕಾರ ನೀಡಿದೆ. ಹೀಗಾಗಿ ತಾನು ಮುಖ್ಯವಾಹಿನಿಗೆ ಬರೋದಕ್ಕೆ ಇಂದು ಶರಣಾಗಿರುವುದಾಗಿ ಹೇಳಿದರು. ಈ ಬಳಿಕ ಮಾತನಾಡಿದಂತ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರು ನಕ್ಸಲ್ ಲಕ್ಷ್ಮೀ ತೊಂಬಟ್ಟು ಅವರು ಶರಣಾಗತಿಯಾಗಿದ್ದಾರೆ. ಅವರಿಗೆ ಎ ಕೆಟಗರಿಯಡಿಯಲ್ಲಿ ಪರಿಹಾರವನ್ನು ಜಿಲ್ಲಾಡಳಿತ ನೀಡಲಿದೆ. ಅವರ ತಿಳಿಸಿರುವಂತ ಸಮಸ್ಯೆ ಪರಿಹಾರದತ್ತವೂ ಗಮನ ಹರಿಸಿವುದಾಗಿ ತಿಳಿಸಿದರು. https://kannadanewsnow.com/kannada/u-19-womens-t20-world-cup-india-beat-south-africa-to-win-for-second-time-in-a-row/ https://kannadanewsnow.com/kannada/non-bailable-arrest-warrant-issued-against-baba-ramdev/
ಕೆಎನ್ಎನ್ ಸ್ಪೋರ್ಟ್ ಡೆಸ್ಕ್: ಐಸಿಸಿ ಮಹಿಳಾ ಅಂಡರ್ 19 ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಭಾರತವು ದಕ್ಷಿಣ ಆಫ್ರಿಕಾವನ್ನು ಏಕಪಕ್ಷೀಯ ಫೈನಲ್ನಲ್ಲಿ ಸೋಲಿಸಿದೆ. ಜಿ ತ್ರಿಷಾ (44*) ಅವರ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಭಾರತ ಕೇವಲ 11.2 ಓವರ್ಗಳಲ್ಲಿ 83 ರನ್ಗಳ ಸಣ್ಣ ಗುರಿಯನ್ನು ಬೆನ್ನಟ್ಟಿ 9 ವಿಕೆಟ್ಗಳ ಜಯ ಸಾಧಿಸಿತು. ಈ ಮೂಲಕ ಟೂರ್ನಿಯ ಇತಿಹಾಸದಲ್ಲಿ ಅಜೇಯವಾಗಿ ಪ್ರಶಸ್ತಿ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ದಕ್ಷಿಣ ಆಫ್ರಿಕಾವನ್ನು 20 ಓವರ್ಗಳಲ್ಲಿ 82 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಭಾರತೀಯ ಸ್ಪಿನ್ನರ್ಗಳು ಪ್ರಬಲ ಪ್ರದರ್ಶನ ನೀಡಿದರು. ಭಾರತದ ಪರ ತ್ರಿಷಾ 15ಕ್ಕೆ 3 ವಿಕೆಟ್ ಪಡೆದು ಮಿಂಚಿದರು. ಐಸಿಸಿ ಅಂಡರ್-19 ಮಹಿಳಾ ಟಿ 20 ವಿಶ್ವಕಪ್ 2025 ರ ಫೈನಲ್ನ ಮೊದಲ ಇನ್ನಿಂಗ್ಸ್ನಲ್ಲಿ ವೈಷ್ಣವಿ ಶರ್ಮಾ, ಆಯುಷಿ ಶುಕ್ಲಾ ಮತ್ತು ಪರುಣಿಕಾ ಸಿಸೋಡಿಯಾ ತಲಾ ಎರಡು ವಿಕೆಟ್ ಪಡೆದರೆ, ಶಬ್ನಮ್ ಶಕೀಲ್ ಒಂದು ವಿಕೆಟ್ ಪಡೆದರು.…