Author: kannadanewsnow09

ಬೆಂಗಳೂರು: ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವಂತ ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದೇ ಹೋದರೇ ಕ್ಷಮೆಗೆ ಆಗ್ರಹಿಸಿ ಕರ್ನಾಟಕ ಬಂದ್ ಮಾಡುವುದಾಗಿ ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗುತ್ತದೆ. ಈ ಬಗ್ಗೆ ಎಲ್ಲಾ ಸಂಘಟನೆಗಳ ಜೊತೆಗೆ ಮಾತನಾಡಿ ಬೆಂಬಲ ಕೇಳುತ್ತೇವೆ ಎಂದರು. ಕಮಲ್ ಹಾಸನ್ ಚಿತ್ರ ಬಿಡುಗಡೆ ಆದ್ರೇ ಕರ್ನಾಟಕ ರಣರಂಗವಾಗುತ್ತೆ. ಜಿಲ್ಲಾ, ತಾಲ್ಲೂಕುಗಳಲ್ಲಿಯೂ ಹೋರಾಟಗಾರರು ಸಜ್ಜಾಗಬೇಕು. ಜೈಲಿಗೆ ಹೋಗೋದಕ್ಕೂ ಎಲ್ಲಾ ಹೋರಾಟಗಾರರು ಸಜ್ಜಾಗಿ ಎಂದರು. ನಟ ಕಮಲ್ ಹಾಸನ್ ಒಬ್ಬ ಅವಿವೇಕಿ. ಅಯೋಗ್ಯ. ಮೂರ್ಖ. ರಾಜ್ಯ ಸರ್ಕಾರ ತುರ್ತಾಗಿ ವಿಶೇಷ ಅಧಿವೇಶನ ಕರೆಯಬೇಕು. ಕನ್ನಡಕ್ಕೆ ಆಗುತ್ತಿರುವ ಅವಮಾನದ ಬಗ್ಗೆ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.

Read More

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 17 ಜನರಿಗೆ ಕೊರೋನಾ ಸೋಂಕು ( Corona Virus ) ದೃಢಪಟ್ಟಿದೆ. ಹೀಗಾಗಿ ಸಕ್ರೀಯ ಪ್ರಕರಣಗಳ ಸಂಖ್ಯೆ 253ಗೆ ಏರಿಕೆಯಾಗಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಆರ್ ಟಿ ಪಿ ಸಿ ಆರ್ ಮೂಲಕ 257 ಹಾಗೂ ರಾಟ್ ಮೂಲಕ 19 ಸೇರಿದಂತೆ 276 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 17 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ ಎಂದು ತಿಳಿಸಿದೆ. ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ ಇಬ್ಬರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿತರಾದ ಒಬ್ಬರು ಸರ್ಕಾರಿ, ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತ 250 ಸೋಂಕಿತರು ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದೆ. ಅಂದಹಾಗೇ ಕರ್ನಾಟಕದಲ್ಲಿ ಇದುವರೆಗೆ 442 ಜನರಿಗೆ ಕೊರೋನಾ ಪಾಸಿಟಿವ್ ಬಂದಿದ್ದರೇ, 185 ಮಂದಿ ಗುಣಮುಖರಾಗಿದ್ದಾರೆ. ನಾಲ್ವರು ಕೋವಿಡ್…

Read More

ಚಿಕ್ಕಬಳ್ಳಾಪುರ: ಆತನಿಗೆ ಮದುವೆಯಾಗಿ ಮಕ್ಕಳಿದ್ದರೂ ಮತ್ತೊಬ್ಬ ಯುವತಿಯೊಂದಿಗೆ ಲವ್ವಿಡವ್ವಿ. ಜೊತೆಗೆ ಆಕೆಯನ್ನು ಗರ್ಭಿಣಿ ಮಾಡಿದ್ದನು. ಅಲ್ಲದೇ ಕದ್ದುಮುಚ್ಚಿ ಸಂಸಾರ ನಡೆಸುತ್ತಿದ್ದನು. ಈ ವಿಷಯ ಎರಡು ಕಡೆಯ ಮನೆಯವರಿಗೆ ಗೊತ್ತಿಗಿತ್ತು. ಹೀಗಾಗಿ ಇಬ್ಬರು ಮನೆ, ಊರು ಬಿಟ್ಟು ಹೋಗಿದ್ದರು. ಮನೆ, ಊರು ಬಿಟ್ಟೋದಂತ ಅವರಿಗೆ ಇರೋದಕ್ಕೆ ನೆಲೆ ಇಲ್ಲದೇ, ಬಾಡಿಗೆ ಮನೆಯಲ್ಲಿ ಸಂಸಾರ ಸಾಗಿಸುತ್ತಿದ್ದರು. ಆದರೇ ಕುಟುಂಬ ನಿರ್ವಣೆಗಾಗಿ ಆ ಪ್ರೇಮಿಗಳು ಇಳಿದಿದ್ದು ಮಾತ್ರ ಸರಗಳ್ಳತನ. ಹೌದು ಹೀಗೆ ಸರಗಳ್ಳತನಕ್ಕೆ ಇಳಿದಿದ್ದಂತ ಇಬ್ಬರು ಪ್ರೇಮಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರು ತಾಲ್ಲೂಕಿನ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮುದುಗೆರೆ ಗ್ರಾಮದ ಅಶ್ವಿನಿ ಹಾಗೂ ಗೋವಿಂದರಾಜು ಎಂಬುದಾಗಿ ತಿಳಿದು ಬಂದಿದೆ. ಮನೆ ಮಾಡೋದಕ್ಕೆ ಹಣ ವಿಲ್ಲದೇ ಬೈಕ್ ಕದ್ದಿದ್ದಂತ ಗೋವಿಂದರಾಜು, ಅದೇ ಬೈಕಿನಲ್ಲಿ ಸರಗಳ್ಳತನಕ್ಕೆ ಇಳಿದಿದ್ದನು. ಸಿಸಿಟಿವಿಗಳಲ್ಲಿ ದಾಖಲಾಗಿದ್ದಂತ ದೃಶ್ಯ ಆಧರಿಸಿ ಅಶ್ವಿನಿ, ಗೋವಿಂದರಾಜು ಬಂಧಿಸಿದ್ದಾರೆ. ಬಂಧನದ ನಂತ್ರ ವಿಚಾರಣೆ ವೇಳೆಯಲ್ಲಿ ಸತ್ಯ ಬಾಯಿಬಿಟ್ಟಿದ್ದಾರೆ. https://kannadanewsnow.com/kannada/large-scale-drone-attack-due-to-the-conflict-with-ukraine-watch-the-terrifying-video/ https://kannadanewsnow.com/kannada/good-news-for-rural-people-under-this-scheme-you-will-get-rs-2-lakh-subsidized-loan/

Read More

ರಷ್ಯಾ: ಸೈಬೀರಿಯಾದ ಕಾರ್ಯತಂತ್ರದ ವಾಯುನೆಲೆಯಲ್ಲಿ ಪರಮಾಣು ಸಾಮರ್ಥ್ಯದ ಬಾಂಬರ್‌ಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ರಷ್ಯಾದ ಪ್ರದೇಶದೊಳಗೆ ಆಳವಾದ ಪ್ರಮುಖ ಡ್ರೋನ್ ದಾಳಿಯನ್ನು ನಡೆಸಿತು. ರಾಯಿಟರ್ಸ್ ಉಲ್ಲೇಖಿಸಿದ ಮೂಲಗಳ ಪ್ರಕಾರ, ದೀರ್ಘ-ಶ್ರೇಣಿಯ ಶತ್ರು ವಿಮಾನಗಳನ್ನು ನಾಶಮಾಡಲು ಈ ದಾಳಿಯನ್ನು “ದೊಡ್ಡ ಪ್ರಮಾಣದ ವಿಶೇಷ ಕಾರ್ಯಾಚರಣೆ” ಎಂದು ವಿವರಿಸಲಾಗಿದೆ. ಉಕ್ರೇನಿಯನ್ ಗಡಿಯಿಂದ 4,300 ಕಿ.ಮೀ.ಗಿಂತ ಹೆಚ್ಚು ದೂರದಲ್ಲಿರುವ ಇರ್ಕುಟ್ಸ್ಕ್ ಒಬ್ಲಾಸ್ಟ್‌ನಲ್ಲಿರುವ ಬೆಲಾಯಾ ವಾಯುನೆಲೆಯ ಮೇಲೆ ಸಂಘಟಿತ ಡ್ರೋನ್ ದಾಳಿಯಲ್ಲಿ 40 ಕ್ಕೂ ಹೆಚ್ಚು ರಷ್ಯಾದ ಮಿಲಿಟರಿ ವಿಮಾನಗಳು ಹೊಡೆದವು ಎಂದು ಉಕ್ರೇನಿಯನ್ ಭದ್ರತಾ ಮೂಲವೊಂದು ರಾಯಿಟರ್ಸ್‌ಗೆ ತಿಳಿಸಿದೆ. ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿ, ಉಕ್ರೇನ್‌ನ ದೇಶೀಯ ಭದ್ರತಾ ಸಂಸ್ಥೆ SBU ಈ ದಾಳಿಯನ್ನು ನಡೆಸಿದೆ ಮತ್ತು ರಷ್ಯಾ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸಲು ಬಳಸುತ್ತಿದ್ದ Tu-95 ಮತ್ತು Tu-22 ಬಾಂಬರ್‌ಗಳ ಮೇಲೆ ದಾಳಿಗಳನ್ನು ಒಳಗೊಂಡಿದೆ ಎಂದು ಹೇಳಿದರು. ರಷ್ಯಾದಿಂದ ಉಕ್ರೇನ್ ಮೇಲೆ ಬೃಹತ್ ಡ್ರೋನ್ ದಾಳಿ ಮಾಡಲಾಗಿದೆ ಎಂದು SBU ಹೇಳಿಕೆಯಲ್ಲಿ ತಿಳಿಸಿದೆ. ಜೊತೆಗೆ ಸ್ಫೋಟಗಳು…

Read More

ಬೆಂಗಳೂರು: ಬೆಸ್ಕಾಂ ( BESCOM ) ಗ್ರಾಹಕರಿಗೆ ವಿದ್ಯುತ್ ಸಂಬಂಧಿತ ದೂರು ದಾಖಲಿಸಲು ಮತ್ತಷ್ಟು ಸುಲಭಗೊಳಿಸಲಾಗಿದೆ. ಇದಕ್ಕಾಗಿ ಜಿಲ್ಲಾವಾರು ವಾಟ್ಸ್ ಆಪ್ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಲಾಗಿದೆ. ಹೌದು. ಬೆಸ್ಕಾಂ ವ್ಯಾಪ್ತಿಯ ಪ್ರತಿ ಜಿಲ್ಲೆಗಳಿಗೂ ವಿಶೇಷ ವಾಟ್ಸ್ ಆಪ್ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ. ನಿಮ್ಮ ಜಿಲ್ಲೆಯ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಪೋಟೋ, ವೀಡಿಯೋಗಳನ್ನು ವಾಟ್ಸ್ ಅಪ್ ಮೂಲಕ ಸಹಾಯವಾಣಿ ಸಂಖ್ಯೆಗೆ ( WhatsApp Helpline Number ) ಕಳುಹಿಸಿದರೇ, ಕ್ಷಣಾರ್ಧದಲ್ಲಿ ಪರಿಹಾರ ಸಿಗಲಿದೆ. ನಿಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಫೋಟೋ ಅಥವಾ ವಿಡಿಯೋಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸ್‌ಆ್ಯಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ, ತ್ವರಿತ ಪರಿಹರ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆಮಾಡಿ. https://twitter.com/NammaBESCOM/status/1929004896428179901 https://kannadanewsnow.com/kannada/11-month-old-baby-tests-positive-for-covid-19-in-karnataka/ https://kannadanewsnow.com/kannada/good-news-for-rural-people-under-this-scheme-you-will-get-rs-2-lakh-subsidized-loan/

Read More

ಹುಬ್ಬಳ್ಳಿ: ಧಾರವಾಡದಲ್ಲಿ ಮೊದಲ ಕೋವಿಡ್ -19 ಪ್ರಕರಣ ವರದಿಯಾದ ನಂತರ, ಹುಬ್ಬಳ್ಳಿಯಲ್ಲಿ ಎರಡನೇ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿ 11 ತಿಂಗಳ ಮಗುವಿಗೆ ವೈರಸ್ ಪಾಸಿಟಿವ್ ಬಂದಿದೆ. ಬೈರಿದೇವರಕೊಪ್ಪ ನಿವಾಸಿಯಾಗಿರುವ ಮಗು ಪ್ರಸ್ತುತ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 11 ತಿಂಗಳ ಮಗುವಿಗೆ ಯಾವುದೇ ಪ್ರಯಾಣದ ಇತಿಹಾಸವಿಲ್ಲ. ಆದರೆ ಮಗುವಿಗೆ ಕೋವಿಡ್ ಸೋಂಕಿನ ಲಕ್ಷಣಗಳಿದ್ದಂತ ಕಾರಣ ಕೊರೋನಾ ಪರೀಕ್ಷೆ ಮಾಡಲಾಯಿತು. ಆ ಸಂದರ್ಭದಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ದಿವ್ಯಾ ಪ್ರಭು ಹೇಳಿದರು. ಇದಲ್ಲದೆ, ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಇಲ್ಲಿಯವರೆಗೆ ಹೊಸ ತಳಿಯು ತೀವ್ರ ಹಾನಿಯನ್ನುಂಟುಮಾಡುವ ಯಾವುದೇ ಮಾರ್ಗವನ್ನು ಹೊಂದಿಲ್ಲ. ಆದರೆ ಅದೇ ಸಮಯದಲ್ಲಿ, ಹರಡುವಿಕೆಯ ಬಗ್ಗೆ ಜಾಗರೂಕರಾಗಿರಬೇಕು. ಪ್ರಸ್ತುತ ಆರೋಗ್ಯ ಇಲಾಖೆಯ ಮಾರ್ಗದರ್ಶನದ ಆಧಾರದ ಮೇಲೆ ವಿಷಯಗಳನ್ನು ನೋಡಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ಮತ್ತು ವಿಶೇಷವಾಗಿ ಮಕ್ಕಳು ಮಾಸ್ಕ್ ಧರಿಸುವಂತೆ ಅವರು ವಿನಂತಿಸಿದರು. ಶೀತ ಮತ್ತು ಇತರ ಅಲರ್ಜಿಗಳಿಂದ ಬಳಲುತ್ತಿರುವ ಜನರು…

Read More

ಬೆಂಗಳೂರು: ಶಿವರಾಜ್ ಕುಮಾರ್ ರೀತಿಯಲ್ಲಿ ಇನ್ಯಾರು ನಟ ಕಮಲ್ ಹಾಸನ್ ಪರವಾಗಿದ್ದಾರೋ ಅವರೆಲ್ಲ ನಾಡದ್ರೋಹಿಗಳು ಎಂಬುದಾಗಿ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ತಮಿಳು ನಟನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅಲ್ಲದೇ ನಟ ಶಿವರಾಜ್ ಕುಮಾರ್ ವಿರುದ್ಧವೂ ಗರಂ ಆದಂತ ಅವರು, ಶಿವಣ್ಣ ರೀತಿಯಲ್ಲಿ ಇನ್ಯಾರು ಕಮಲ್ ಹಾಸನ್ ಪರವಾಗಿದ್ದರೂ ಅವರೆಲ್ಲ ನಾಡದ್ರೋಹಿಗಳು ಅಂತ ಕೆಂಡಕಾರಿದ್ದಾರೆ. ನಟ ಕಮಲ್ ಹಾಸನ್ ಹೇಳಿಕೆ ನಮ್ಮ ನಾಡಿಗೆ ಅವಮಾನ. ಈ ಘಟನೆಗೆ ಸಾಕ್ಷಿಯಾದಂತ ಶಿವರಾಜ್ ಕುಮಾರ್ ಪಲಾಯನವಾದ ಮಾಡಿ ಬಿಟ್ಟಿದ್ದಾರೆ. ಅವರು ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಬೇಕಿತ್ತು ಎಂದರು. ನಾಡು ನುಡಿಗೆ ಧಕ್ಕೆ ಬಂದಾಗ ರಾಜ್ ಕುಟುಂಬ ಒಂದೇ ಕನ್ನಡ ನಾಡಲ್ಲ, ಶಿವಣ್ಣ ಒಬ್ಬರೇ ಕನ್ನಡ ನಾಡಲ್ಲ. ಕನ್ನಡ ನಾಡಿನಿಂದ ಅವರೆಲ್ಲ ಬಂದಿದ್ದಾರೆ. ಆದ್ರೇ ಅವರ ಪ್ರತಿಕ್ರಿಯೆ ನೋಡಿದಾಗ ಅರಿವಿನ ಕೊರತೆಯಿಂದ ಫಲಾಯನವಾದ ಮಾಡಿದ್ರು ಅನ್ನಿಸುತ್ತೆ ಎಂಬುದಾಗಿ ಬೇಸರ ಹೊರ ಹಾಕಿದರು. ಬೆಂಗಳೂರಿಗೆ ಬಂದಾಗ ಕೇಳಬಹುದಿತ್ತಲ್ಲ ಅಂತ ಹೇಳ್ತಾರೆ. ಹಾಗಿದ್ದರೇ ಕನ್ನಡ ವಿಚಾರಕ್ಕೆ…

Read More

ರಾಯಚೂರು: ಜಿಲ್ಲೆಯಲ್ಲಿ ದೇವಸ್ಥಾನದ ಪೂಜೆ ವಿಚಾರಕ್ಕೆ ಇಬ್ಬರು ಸಹೋದರರ ನಡುವೆ ಮಾರಾಮಾರಿ ನಡೆದಿರುವಂತ ಘಟನೆ ನಡೆದಿದೆ. ಈ ಘಟನೆಯಲ್ಲಿ ಹಲವರಿಗೆ ಗಾಯವಾಗಿದೆ. ರಾಯಚೂರು ಜಿಲ್ಲೆಯ ವಡವಟ್ಟಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀ ರಂಗನಾಥ ದೇವಸ್ಥಾನದ ಪೂಜೆ ವಿಚಾರಕ್ಕೆ ವೆಂಕಟೇಶ್, ಸಹೋದರ ತಿಮ್ಮಯ್ಯ ಕಿರಿಕ್ ಮಾಡಿದ್ದಾರೆ ಎಂಬುದಾಗಿ ವೆಂಕಟೇಶ್, ನಾಗರಾಜ್, ಸುಮಿತ್ರಾ ಎಂಬುವರ ಮೇಲೆ ಆರೋಪಿಸಿದ್ದಾರೆ. ಗಲಾಟೆ ತಾರಕಕ್ಕೇರಿದಂತ ಸಂದರ್ಭದಲ್ಲಿ ಎರಡು ಕುಟುಂಬದವರು ದೊಣ್ಣೆ, ಕಟ್ಟಿಗೆಗಳಿಂದ ಹೊಡೆದಾಡಿಕೊಂಡಿದ್ದಾರೆ. ಎರಡು ಕುಟಂಬಗಳ ಹೊಡೆದಾಟದಲ್ಲಿ ಹಲವರಿಗೆ ಗಾಯವಾಗಿದೆ. https://kannadanewsnow.com/kannada/two-dead-hundreds-arrested-in-france-as-psg-fans-celebrate-champions-league-triumph/ https://kannadanewsnow.com/kannada/good-news-for-rural-people-under-this-scheme-you-will-get-rs-2-lakh-subsidized-loan/

Read More

ಪ್ಯಾರಿಸ್: ಫ್ರಾನ್ಸ್‌ನಲ್ಲಿ ರಾತ್ರಿಯಿಡೀ ಫುಟ್ಬಾಲ್ ಅಭಿಮಾನಿಗಳು ಪ್ಯಾರಿಸ್ ಸೇಂಟ್-ಜರ್ಮೈನ್‌ನ ಅದ್ಭುತ ಚಾಂಪಿಯನ್ಸ್ ಲೀಗ್ ಅಂತಿಮ ವಿಜಯವನ್ನು ಆಚರಿಸುತ್ತಿದ್ದ ವೇಳೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೇ ಪೊಲೀಸರ ಜೊತೆಗೆ ವಾಗ್ವಾದಕ್ಕಿಳಿದಂತ ನೂರಾರು ಜನರನ್ನು ಬಂಧಿಸಲಾಗಿದೆ ಎಂದು ಆಂತರಿಕ ಸಚಿವಾಲಯ ಭಾನುವಾರ ತಿಳಿಸಿದೆ. ಮ್ಯೂನಿಚ್‌ನಲ್ಲಿ ಇಂಟರ್ ಮಿಲನ್ ವಿರುದ್ಧ ಪಿಎಸ್‌ಜಿ 5-0 ಅಂತರದಿಂದ ಜಯಗಳಿಸಿದ ನಂತರ ರಾತ್ರಿಯಿಡೀ ಕಾರು ಹಾರ್ನ್‌ಗಳು, ಚಿಯರ್‌ಗಳು, ಬೀದಿಯಲ್ಲಿ ಹಾಡುಗಾರಿಕೆ ಮತ್ತು ಪಟಾಕಿಗಳ ರಂಗಮಂದಿರವಾಗಿದ್ದ ಪ್ಯಾರಿಸ್‌ನಲ್ಲಿ ಸಂಭ್ರಮದ ಕೇಂದ್ರಬಿಂದುವಾಗಿತ್ತು. ಚಾಂಪ್ಸ್-ಎಲಿಸೀಸ್ ಅವೆನ್ಯೂದಲ್ಲಿ ಜನಸಮೂಹ ಒಟ್ಟುಗೂಡಿದಾಗ ಮತ್ತು ಅಧಿಕಾರಿಗಳೊಂದಿಗೆ ಘರ್ಷಣೆಗಳು ನಡೆದಾಗ ರಾಜಧಾನಿಯಲ್ಲಿ 491 ಜನರನ್ನು ಬಂಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಪ್ಯಾರಿಸ್ ಸೇರಿದಂತೆ ಫ್ರಾನ್ಸ್‌ನಾದ್ಯಂತ ಒಟ್ಟು 559 ಜನರನ್ನು ಬಂಧಿಸಲಾಗಿದೆ ಎಂದು ಅದು ಹೇಳಿದೆ. ಆಚರಣೆಗಳು ನಡೆಯುತ್ತಿರುವಾಗ ಈ ಎರಡು ಸಾವು ಪ್ಯಾರಿಸ್‌ನಲ್ಲಿ ಮೋಟಾರ್ ಸ್ಕೂಟರ್ ಸವಾರಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ಚಾಂಪ್ಸ್-ಎಲಿಸೀಸ್‌ನಿಂದ ಕೇವಲ ಒಂದೆರಡು ಕಿಲೋಮೀಟರ್ (1.3 ಮೈಲುಗಳು) ದೂರದಲ್ಲಿರುವ ನಗರದ ದಕ್ಷಿಣ 15 ನೇ ಅರೋಂಡಿಸ್ಮೆಂಟ್‌ನಲ್ಲಿ ಕಾರು ಡಿಕ್ಕಿ ಹೊಡೆದು…

Read More

ಬೆಳಗಾವಿ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ತೊಡಗಿದ್ದಂತ ಕೂಲಿ ಕಾರ್ಮಿಕರ ಮೇಲೆ ಆಯಿಲ್ ಟ್ಯಾಂಕ್ ಹರಿದು ಉರುಳಿ ಬಿದ್ದ ಪರಿಣಾಮ, ಮೂವರು ಸಾವನ್ನಪ್ಪಿ, ಮತ್ತೆ ಮೂವರು ಗಾಯಗೊಂಡಿರುವಂತ ಘಟನೆ ನಡೆದಿದೆ.  ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಇಟಗಿ ಕ್ರಾಸ್ ನಲ್ಲಿ ಇಂದು ಭೀಕರ ದುರ್ಘಟನೆ ಸಂಭವಿಸಿದೆ. ಟ್ಯಾಂಕರ್ ಹರಿದು ಮೂವರು ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಆಯಿಲ್ ಟ್ಯಾಂಕ್ ಹರಿದ ಪರಿಣಾಮ ಈ ದುರ್ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 4ರ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಕಲಬುರ್ಗಿಯ ವಡ್ಡರಗಲ್ಲಿ ನಿವಾಸಿ ರಾಮಚಂದ್ರ ಚಾಧವ್(45), ರಾಮಚಂದ್ರ ಪುತ್ರ ಮಹೇಶ್ ರಾಮಚಂದ್ರ ಜಾಧವ್ (18), ಶಿರೋಳಿ ನಿವಾಸಿ ರಾಮಣ್ಣ ಆಲಿಯಾಸ್ ರಮೇಶ್ (38) ಎಂಬುವರು ಸಾವನ್ನಪ್ಪಿದ್ದಾರೆ. ಇನ್ನೂ ಈ ಅಪಘಾತದಲ್ಲಿ ರಾಮಣ್ಣ ಆಲಿಯಾಸ್ ರಮೇಶ್ ಪತ್ನಿ ಭೀಮವ್ವನವರ ಎರಡು ಕಾಲ್ ಕಟ್ ಆಗಿದೆ. ರಾಮಚಂದ್ರ ಜಾಧವ್ ಪತ್ನಿ ಲಕ್ಷ್ಮೀ ಭಾಯಿಗೂ ಗಂಭೀರ ಗಾಯವಾಗಿದೆ. ಆಯಿಲ್ ಟ್ಯಾಂಕರ್ ಚಾಲಕ ದಿನೇಶ್ ಶೆಟ್ಟಿಗೂ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು…

Read More