Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ : ಅಗ್ನಿಪಥ್ ಯೋಜನೆಯಡಿ 2025-26ನೇ ಸಾಲಿನ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಬಾಗಲಕೋಟೆ, ಗದಗ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಉಡುಪಿ, ದಾವಣಗೆರೆ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಆನ್ಲೈನ್ ನೋಂದಣಿಯು ಮಾರ್ಚ್ 12 ರಿಂದ ಏಪ್ರಿಲ್ 10 ರವರೆಗೆ ಇರುತ್ತದೆ. ನೋಂದಣಿ ಪೊರ್ಟಲ್- WWW.JOININDINARMY.NIC.IN ಹಾಗೂ ಆನ್ಲೈನ್ ಪರೀಕ್ಷೆಯು ಜೂನ್ 2025 ರಲ್ಲಿ ನಡೆಯುವ ಸಾಧ್ಯತೆಯಿದ್ದು, ದಿನಾಂಕವನ್ನು ನಂತರ ಪ್ರಕಟಿಸಲಾಗುವುದು. ಭಾರತೀಯ ಸೇನೆಯಲ್ಲಿ ಆಯ್ಕೆ ‘ನ್ಯಾಯಯುತ ಮತ್ತು ಪಾರದರ್ಶಕ’ವಾಗಿದ್ದು, ಅರ್ಹತೆ ಮೇಲೆ ಮಾತ್ರ ನಡೆಯುತ್ತದೆ. ಯಾವುದೇ ಹಂತದಲ್ಲಿ ಭಾರತೀಯ ಸೇನೆಯಲ್ಲಿ ಆಯ್ಕೆ ಅಥವಾ ನೇಮಕಾತಿಗಾಗಿ ಯಾರಿಗೂ ಲಂಚ ನೀಡಬಾರದು ಹಾಗೂ ನೇಮಕಾತಿ ಏಜೆಂಟ್ಗಳAತೆ ನಟಿಸುವ, ಆಮಿಷ ಒಡ್ಡುವ ವ್ಯಕ್ತಿಗಳಿಗೆ ಬಲಿಯಾಗಬಾರದೆಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಸೇನಾ ನೇಮಕಾತಿ ಕಛೇರಿ ದೂರವಾಣಿ ಸಂಖ್ಯೆ- 0824-2951279 ಹಾಗೂ…
ನವದೆಹಲಿ: ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಾರ್ಚ್ 19 ರೊಳಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್ಎಸ್) ತೊರೆಯಲಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ. ನಾಸಾ ತನ್ನ ಸ್ಪೇಸ್ಎಕ್ಸ್ ಕ್ರೂ -10 ಮಾರ್ಚ್ 14 ರಂದು ಸಂಜೆ 7:03 ಕ್ಕಿಂತ ಮುಂಚಿತವಾಗಿ ಟ್ರಾನ್ಸ್ಪೋರ್ಟರ್ -13 ಮಿಷನ್ ಅನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ. ಈ ಹಿಂದೆ ಗುರುವಾರ ನಿಗದಿಯಾಗಿದ್ದ ಮಿಷನ್, ಹೆಚ್ಚಿನ ಗಾಳಿ ಮತ್ತು ವಿಮಾನದ ಹಾದಿಯಲ್ಲಿ ಮಳೆಯ ಮುನ್ಸೂಚನೆಯಿಂದಾಗಿ ವಿಳಂಬವಾಯಿತು. ಇದು ನಾಲ್ಕು ಸಿಬ್ಬಂದಿ ಸದಸ್ಯರನ್ನು ಐಎಸ್ಎಸ್ಗೆ ಉಡಾಯಿಸಲು ಪ್ರಯತ್ನಿಸುತ್ತದೆ. ಹೆಚ್ಚುವರಿಯಾಗಿ, ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದ ಲಾಂಚ್ ಕಾಂಪ್ಲೆಕ್ಸ್ 39 ಎ ನಲ್ಲಿ ಫಾಲ್ಕನ್ 9 ರಾಕೆಟ್ಗಾಗಿ ಗ್ರೌಂಡ್ ಸಪೋರ್ಟ್ ಕ್ಲಾಂಪ್ ಆರ್ಮ್ನೊಂದಿಗೆ ಹೈಡ್ರಾಲಿಕ್ ಸಿಸ್ಟಮ್ ಸಮಸ್ಯೆಯನ್ನು ಪರಿಹರಿಸಲು ಉಡಾವಣಾ ತಂಡಗಳು ಕೆಲಸ ಮಾಡುತ್ತಿವೆ. ಮಾರ್ಚ್ 14 ರಂದು ಕ್ರೂ -10 ಉಡಾವಣೆಯೊಂದಿಗೆ, ನಾಸಾ ಗಗನಯಾತ್ರಿಗಳಾದ ನಿಕ್ ಹೇಗ್,…
ನವದೆಹಲಿ: ಮಾರ್ಚ್ 22 ರಿಂದ ಪ್ರಾರಂಭವಾಗಲಿರುವ ಐಪಿಎಲ್ 2025 ರ ಮೊದಲ ಕೆಲವು ಪಂದ್ಯಗಳಿಂದ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಹೊರಗುಳಿಯುವ ನಿರೀಕ್ಷೆಯಿದೆ. ಬುಮ್ರಾ ಪ್ರಸ್ತುತ ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದ ಸಮಯದಲ್ಲಿ ಅವರು ಚೇತರಿಸಿಕೊಂಡರು. ಅಂದಿನಿಂದ ಅವರು ಆಟದಿಂದ ಹೊರಗುಳಿದಿದ್ದಾರೆ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಿಂದ ವಂಚಿತರಾಗಿದ್ದಾರೆ. 31ರ ಹರೆಯದ ಸೈನಾ ಏಪ್ರಿಲ್ ಮೊದಲ ವಾರದಲ್ಲಿ ಮುಂಬೈ ಶಿಬಿರಕ್ಕೆ ಸೇರಲಿದ್ದಾರೆ. ಅದಕ್ಕೂ ಮುಂಚಿತವಾಗಿ, ಕ್ರಿಕೆಟಿಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್ಸಿಎ) ವರದಿ ಮಾಡಬೇಕಾಗುತ್ತದೆ ಮತ್ತು ವೈದ್ಯರ ಅನುಮತಿಯ ನಂತರವೇ ಅವರು ಐಪಿಎಲ್ನಲ್ಲಿ ಕಾಣಿಸಿಕೊಳ್ಳಬಹುದು. ಐಪಿಎಲ್ 2025ರ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಮುಂಬೈ ಇಂಡಿಯನ್ಸ್ ಮತ್ತು ಸಿಎಸ್ಕೆ ಎರಡೂ ಐಪಿಎಲ್ ಇತಿಹಾಸದಲ್ಲಿ ಎರಡು ಅತ್ಯಂತ ಯಶಸ್ವಿ ತಂಡಗಳಾಗಿವೆ. ತಲಾ ಐದು ಪ್ರಶಸ್ತಿಗಳನ್ನು…
ಸಂಸ್ಕಾರವೆಂದರೇನು??? ಕೈಯಲ್ಲಿ ಕೋಟಿ ಇದ್ದರು ಹಿರಿಯರು ಕಂಡೊಡನೆ ಕಾಲಿಗೆ ಬೀಳೋದು ಸಂಸ್ಕಾರ.! ರಾತ್ರಿಯಲ್ಲಾ ಗಂಡನ ಜೊತೆ ಇದ್ದರೂ ಹಗಲೊತ್ತು ಗ೦ಡ ಕಂಡೊಡನೆ ತಲೆ ಮೇಲೆ ಸೆರಗಾಕಿಕೊಳ್ಳೋದು ಸಂಸ್ಕಾರ.! ಎಷ್ಟೇ ಆಧುನಿಕತೆ ಬಂದರೂ ಹಣೆಯ ಮೇಲಿನ ಬೊಟ್ಟು ಸಂಸ್ಕಾರ.! ಡಿಗ್ರಿ ಮೇಲೆ ಡಿಗ್ರಿ ಪಡೆದರು ಗುರು ಕಂಡೊಡನೆ ತೋರಿಸುವ ಭಯ ಭಕ್ತಿ ಸಂಸ್ಕಾರ.! ಯಜಮಾನಿಕೆ ದೊಡ್ಡಸ್ತಿಕೆಯಲ್ಲಿದ್ದರೂ ಚಿಕ್ಕವರಿಗಾಗಿ ತೋರಿಸುವ ಪ್ರೀತಿ ವಿಶ್ವಾಸ ಕಳಕಳಿ ನಿಜವಾದ ಸಂಸ್ಕಾರ.! ನಮ್ಮ ನಡವಳಿಕೆಯಲ್ಲಿರುವ ನಯ ವಿನಯ ನಾಜೂಕು ನಿಜವಾದ ಸಂಸ್ಕಾರ.! ಓದು ಬರಹ ಉದ್ಯೋಗದ ಹೊರತಾಗಿಯೂ ಹೋರುವ ಆ ಜವಾಬ್ದಾರಿ ಸಂಸ್ಕಾರ.! ಖಾಯಿಲೆ ಬಿದ್ದ ತಂದೆ ತಾಯಿಯ ಮಗುವಿನ ಹಾಗೆ ನೋಡಿಕೊಳ್ಳುವುದು ಸಂಸ್ಕಾರ.! ಸದಾ ಕುಟುಂಬದ ಕಣ್ಣಾದ ತಾಯಿಯ ಬೇಕು ಬೇಡ ಕೇಳಿ ಈಡೇರಿಸುವುದು ಸಂಸ್ಕಾರ.! ಮುದ್ದಿನ ಮಗ ಮಗಳು ತಪ್ಪು ಮಾಡಿದಾಗಮಾಡಿದಾಗ ಮ್ರುದು ಮಾತಿನಿಂದ ದಾರಿಗೆ ತರೋದು ಸಂಸ್ಕಾರ.! ಅಡ್ಡ ದಾರಿ ತುಳಿತಾ ಇರೋ ಮಗಳಿಗೆ ಮಗನಿಗೆ ನಲ್ಮೆಯ ಮಾತುಗಳಿಂದ ಮನವೊಲಿಸುವುದು ಸಂಸ್ಕಾರ.! ತನ್ನ ನೂರು…
ಶಿವಮೊಗ್ಗ: ಆ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳ ಸಂಚಾರ. ಸಾಗರ, ಸೊರಬ ಮಾರ್ಗವಾಗಿ ವಿಜಯಪುರ, ಹುಬ್ಬಳ್ಳಿಗೆ, ಶಿರಸಿ, ಸಿದ್ದಾಪುರ, ಆನವಟ್ಟಿ, ಶಿಕಾರಿಪುರಕ್ಕೆ ಸಂಚರಿಸುವ ವಾಹನಗಳೇ ಹೆಚ್ಚು. ಜೊತೆ ಜೊತೆಗೆ ರೈತಾಪಿ ವರ್ಗದವರು, ಕೂಲಿಕಾರರು ದಿನವೂ ಪ್ರಯಾಣ. ಹೀಗೆ ಬ್ಯುಸಿಯಾಗಿರೋ ರಸ್ತೆಯಲ್ಲೇ ಒಣಗಿ, ಭಾಗಿ, ಗಾಳಿ ಬಂದರೇ ಸಾಕು ಬಿದ್ದೋಗುವಂತಿರುವ ಒಣ ಮರಗಳನ್ನು ಮಾತ್ರ ಕಡಿತಲೆ ಮಾಡಿಲ್ಲ. ಅದು ಒಂದಲ್ಲ ಎರಡಲ್ಲ ಬರೋಬ್ಬರಿ 10ಕ್ಕೂ ಹೆಚ್ಚು. ಆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದ ಸಂಪೂರ್ಣ ಸುದ್ದಿ ಮುಂದೆ ಓದಿ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಭದ್ರಾಪುರದ ನಂತ್ರ ರಾಮಕೃಷ್ಣ ಎಂಬುವರ ಮನೆಯಿಂದ ಹಿಡಿದು ಅಮಚಿ ಸಮೀಪದ ಸೇತುವೆಯವರೆಗೆ ಸುಮಾರು 22 ಅಕೇಶಿಯಾ ಮರಗಳ ಸಾಲು ಜೊತೆಗೆ ಒಂದೆರೆಡು ಹುನಾಲು ಮರಗಳಿದ್ದಾವೆ. ದಾರಿಯುದ್ಧಕ್ಕೂ ಸಾಲು ಗಟ್ಟಿರುವಂತ 24 ಮರಗಳಲ್ಲಿ ಬರೋಬ್ಬರಿ 10ಕ್ಕೂ ಹೆಚ್ಚು ಮರಗಳು ಒಣಗಿ ಹೋಗಿದ್ದಾವೆ. ದಾರಿ ಹೋಕರ ಮೇಲೆ ಈಗಲೋ ಆಗಲೋ ಬೀಳೋ ಸ್ಥಿತಿಯಲ್ಲಿದ್ದಾವೆ. ರಸ್ತೆಗೆ ಭಾಗಿ ಬೀಳುವಂತಿದ್ದರೂ ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ ಅಧಿಕಾರಿಗಳು…
ಬೆಂಗಳೂರು : ಬಡ ಹಾಗೂ ಭೂ ರಹಿತ ರೈತರಿಗೆ ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಭೂ ಮಂಜೂರು ಮಾಡಲು ರಾಜ್ಯಾದ್ಯಂತ ಈವರೆಗೆ ಒಟ್ಟಾರೆ 185 ಸಭೆಗಳನ್ನು ನಡೆಸಲಾಗಿದ್ದು, ಅರ್ಜಿ ವಿಲೇವಾರಿಯನ್ನೂ ತ್ವರಿತಗೊಳಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲೇ ಇದೊಂದು ಹೊಸ ದಾಖಲೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು. ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕರಾದ ಶೈಲೇಂದ್ರ ಬೆಲ್ದಾಳೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ, ಅತಿಹೆಚ್ಚು ಬಗರ್ ಹುಕುಂ ಸಮಿತಿಗಳನ್ನು ರಚಿಸಿದ್ದು ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ. ಅಲ್ಲದೆ, ಅರ್ಜಿ ವಿಲೇವಾರಿಗೊಳಿಸಿ ಅರ್ಹ ರೈತರಿಗೆ ಭೂ ಮಂಜೂರುಗೊಳಿಸುವ ಪ್ರಕ್ರಿಯೆಗೂ ಸಾಕಷ್ಟು ವೇಗ ತುಂಬಲಾಗುತ್ತಿದೆ. ಸ್ವತಃ ನಾನೇ ನೇರವಾಗಿ ಪರಿಶೀಲಿಸಿ ವಿಲೇ ಕೆಲಸಗಳನ್ನು ಶೀಘ್ರ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಸಂಬಂಧ ಅಧಿಕಾರಿಗಳಿಗೆ ಗಡುವು ನೀಡಿದ್ದು ನಿಜ, ಸರ್ಕಾರವೇ ಅದನ್ನು ಬೆನ್ನಟ್ಟಿರುವುದೂ ನಿಜ” ಎಂದು ತಿಳಿಸಿದರು. ಈ ವೇಳೆ…
ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೇ, ಮಾನಸಿಕ ಶಾಂತ ಚಿತ್ತತೆಯ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ಹೆಚ್ಚಿಸೋದಕ್ಕೆ ನುರಿತ ಮನೋ ವೈದ್ಯರಿಂದ ಮಾರ್ಚ್.15ರ ನಾಳೆ ಯೂಟ್ಯೂಬ್ ನಲ್ಲಿ ವಿಶೇಷ ಕಾರ್ಯಕ್ರಮವ ಪ್ರಸಾರವಾಗಲಿದೆ. ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಪರೀಕ್ಷಾ ವಿಭಾಗದ ನಿರ್ದೇಶಕರಾದಂತ ಹೆಚ್.ಎನ್ ಗೋಪಾಲಕೃಷ್ಣ ಮಾಹಿತಿ ನೀಡಿದ್ದು, ಎಸ್.ಎಸ್ಎಲ್.ಸಿ ಪರೀಕ್ಷೆಯನ್ನು ದಿನಾಂಕ:21-03-2025 ರಿಂದ 04-04-2025ರವರೆಗೆ ನಡೆಸಲಾಗುತ್ತಿದೆ. ಸದರಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಾವುದೇ ಆತಂಕ ಮತ್ತು ಭಯವಿಲ್ಲದೆ ಆತ್ಮ ಕ್ರೌರ್ಯದಿಂದ ಎದುರಿಸಬೇಕು ಎಂಬುದು ಮಂಡಲಿಯ ಆಶಯವಾಗಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಪೂರ್ವ, ಪರೀಕ್ಷಾ ಸಂದರ್ಭ ಮತ್ತು ಪರೀಕ್ಷಾ ನಂತರದಲ್ಲಿ ವಿದ್ಯಾರ್ಥಿಗಳಲ್ಲಿ ಉಂಟಾಗಬಹುದಾದ ಮಾನಸಿಕ ಸಂದಿಗ್ಧತೆಗಳನ್ನು ನಿವಾರಿಸಿ, ಆತ್ಮ ಸ್ಟೈರ್ಯವನ್ನು ಹೆಚ್ಚಿಸಿ ಪರೀಕ್ಷೆಯನ್ನು ಅತ್ಯಂತ ಲವಲವಿಕೆಯಿಂದ ಎದುರಿಸಲು ಅಗತ್ಯವಿರುವ ಮಾರ್ಗದರ್ಶನವನ್ನು National Institute of Mental Health and Neuro Sciences (NIMHANS),…
ನವದೆಹಲಿ: 2024-25ರ ಹಣಕಾಸು ವರ್ಷದ ಮುಂಗಡ ತೆರಿಗೆಯ ಅಂತಿಮ ಕಂತನ್ನು ಪಾವತಿಸಲು ಮಾರ್ಚ್ 15, 2025ರ ನಾಳೆ ಕೊನೆಯ ದಿನಾಂಕವಾಗಿದೆ. ಈ ದಿನಾಂಕದ ಮೊದಲು ತಮ್ಮ ಮುಂಗಡ ತೆರಿಗೆ ಪಾವತಿಗಳನ್ನು ತೆರವುಗೊಳಿಸುವಂತೆ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ನೆನಪಿಸಿದೆ. 2024-25ರ ಹಣಕಾಸು ವರ್ಷದ ಮುಂಗಡ ತೆರಿಗೆಯ ಅಂತಿಮ ಕಂತು 2025 ರ ಮಾರ್ಚ್ 15 ರೊಳಗೆ ಬಾಕಿ ಇದೆ. ಸಮಯೋಚಿತ ಪಾವತಿಯು ತೆರಿಗೆ ಕಾನೂನುಗಳ ಅನುಸರಣೆಯನ್ನು ಖಚಿತಪಡಿಸುತ್ತದೆ ಮತ್ತು ಸ್ವಾವಲಂಬನೆ ಮತ್ತು ಸಮೃದ್ಧಿಯತ್ತ ಭಾರತದ ಪ್ರಯಾಣವನ್ನು ಮುನ್ನಡೆಸುವ ‘ವಿಕ್ಷಿತ್ ಭಾರತ್ ಮೂವ್ಮೆಂಟ್’ ಅನ್ನು ಬೆಂಬಲಿಸುತ್ತದೆ. ಮುಂಗಡ ತೆರಿಗೆ ಎಂದರೇನು? ಮುಂಗಡ ತೆರಿಗೆ, ಇದನ್ನು ‘ಪೇ ಆಸ್ ಯು ಎರ್ನ್ ಸ್ಕೀಮ್’ ಎಂದೂ ಕರೆಯಲಾಗುತ್ತದೆ. ಹಣಕಾಸು ವರ್ಷದ ಕೊನೆಯಲ್ಲಿ ಒಂದೇ ಪಾವತಿ ಮಾಡುವ ಬದಲು, ಸರ್ಕಾರ ಹೊರಡಿಸಿದ ದಿನಾಂಕಗಳ ಪ್ರಕಾರ ಇದನ್ನು ಕಂತುಗಳಲ್ಲಿ ಪಾವತಿಸಲಾಗುತ್ತದೆ. ಮುಂಗಡ ತೆರಿಗೆಯನ್ನು ಯಾರು ಪಾವತಿಸಬೇಕು? ಹಣಕಾಸು ವರ್ಷದಲ್ಲಿ ಅಂದಾಜು ತೆರಿಗೆ ಹೊಣೆಗಾರಿಕೆ 10,000 ರೂ ಅಥವಾ ಅದಕ್ಕಿಂತ…
ಬೆಂಗಳೂರು: 2023-24 ಮತ್ತು 2024-25ನೇ ಸಾಲಿನಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ, ನಿವೃತ್ತಿ ಹೊಂದಿರುವ ಶಿಕ್ಷಕ, ಸಿಬ್ಬಂದಿಗಳಿಗೆ ನಿವೃತ್ತಿ ನಂತರದ ಗಳಿಕೆ ರಜೆ ನಗಧೀಕರಣಕ್ಕಾಗಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿ ಆದೇಶಿಸಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದು, ಶಾಲಾ ಶಿಕ್ಷಣ ಇಲಾಖೆಯಲ್ಲಿ 2023-24 ರಿಂದ 2024-25 ನೇ ಸಾಲಿನವರೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ನಿವೃತ್ತಿ ನಂತರದ ಗಳಿಕೆ ರಜೆ ನಗಧೀಕರಣಕ್ಕಾಗಿ ಅಗತ್ಯವಾದ ಅನುದಾನವನ್ನು ಲೆಕ್ಕಶೀರ್ಷಿಕೆ:2071-01-109-1-02 ಯ ಉದ್ದೇಶಿತ ಶೀರ್ಷಿಕೆ:251 ರಡಿ ಉಲ್ಲೇಖ(1) ರ ಸರ್ಕಾರದ ಪತ್ರದನ್ವಯ ಬಿಡುಗಡೆ ಮಾಡಲಾಗಿರುತ್ತದೆ ಎಂದಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತರಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು/ಸಿಬ್ಬಂದಿಗಳ ಮಾಹಿತಿಗಳನ್ನು ತಾಲ್ಲೂಕು ಕಛೇರಿಗಳಿಂದ ಪಡೆದು ಕ್ರೋಢಿಕರಿಸಿ ಕ್ರೋಢೀಕೃತ ಮಾಹಿತಿಯನ್ನು ಈ ಕಛೇರಿಗೆ ಪರಿಶೀಲನೆಗಾಗಿ ದಿ:11.02.2025 ರ ಒಳಗಾಗಿ ಒದಗಿಸುವಂತೆ ಜಿಲ್ಲಾ ಕಛೇರಿಗಳಿಗೆ ಉಲ್ಲೇಖ(2)ರಲ್ಲಿ ಸೂಚಿಸಲಾಗಿರುತ್ತದೆ. ಅದಗ್ಯೂ ಮೂರು ದಿನಗಳು ಹೆಚ್ಚುವರಿಯಾಗಿ…
ಬೆಂಗಳೂರು : ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ನಿವೃತ್ತಿ ವಯಸ್ಸನ್ನು 65ಕ್ಕೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ. ಆದರೆ 65ಕ್ಕೆ ಹೆಚ್ಚಿಸುವ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ಆದರೆ ನಿವೃತ್ತಿ ವಯಸ್ಸು ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ ಎಂಬುದಾಗಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ಜಯದೇವ ಹೃದಯ ರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರೊಂದಿಗೆ ಗುರುವಾರ ನಡೆದ ಸಂವಾದದ ವೇಳೆ ಮಾತನಾಡಿದರು. ಸಂವಾದದ ವೇಳೆ ಜಯದೇವದ ಹಿರಿಯ ವೈದ್ಯರು ಕೆಲವು ವಿಷಯ ಪ್ರಸ್ತಾಪಿಸಿದರು. ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ ಪಡೆದ ನಂತರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸಲು ಅತಿ ಹೆಚ್ಚು ವರ್ಷಗಳನ್ನು ವ್ಯಯಿಸಿರಲಾಗಿರುತ್ತದೆ. 60 ನೇ ವಯಸ್ಸಿನಲ್ಲಿ ನಿವೃತ್ತರಾಗುವ ಮೊದಲು ನಮಗೆ 20-25 ವರ್ಷಗಳ ಕಾಲ ಮಾತ್ರ ಸೇವೆ ಸಲ್ಲಿಸಲು ಅವಕಾಶ ಲಭ್ಯವಾಗಿರುತ್ತದೆ ಎಂದು…














