Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳಬೇಡಿ ಅಂತ ಹೇಳಿಕೆಯನ್ನು ಡಿಸಿಎಂ ಡಿ.ಕೆ ಶಿವಕುಮಾರ್ ನೀಡಿದ್ದಾರೆ. ಅದು ಹೇಳಿಕೆ ಅಷ್ಟೇ. ಎಚ್ಚರಿಕೆ ಅಲ್ಲ. ಎಚ್ಚರಿಕೆ ಗಿಚ್ಚರಿಕೆ ಎಲ್ಲ ನಡೆಯೋದಿಲ್ಲ. ಈಗ ಎಚ್ಚರಿಕೆನ ಯಾರು ಕೇಳ್ತಾರೆ ಎಂಬುದಾಗಿ ಸಚಿವ ಕೆ.ಎನ್ ರಾಜಣ್ಣ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾವು ಯಾರ ಹೆಸರನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಅವರು ಎಐಸಿಸಿ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಎಲ್ಲದಕ್ಕೂ ಎಐಸಿಸಿ ಹೇಳಿದೆ ಎಂದು ಅವರ ಹೆಸರನ್ನು ಹೇಳುತ್ತಿದ್ದಾರೆ. ಅವರು ಆ ಮೂಲಕ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬಾರದು ಅಂತ ಗುಡುಗಿದರು. ನನ್ನದು ಇದು ಆರೋಪವಲ್ಲ. ವಾಸ್ತವ ಸಂಗತಿಯಾಗಿದೆ. ನಾನು ಯಾರಿಂದಲೂ ಶಿಸ್ತಿನ ಪಾಠ ಮಾಡಿಸಿಕೊಳ್ಳಬೇಕಿಲ್ಲ. 50 ವರ್ಷ ಪಕ್ಷಕ್ಕೆ ಕೆಲಸ ಮಾಡಿದ್ದೇನೆ. ನಾನು ಮಾತನಾಡಿದರೇ ಸತ್ಪರಿಣಾಮ ಬೀರುವ ಮಾತನಾಡುತ್ತೇನೆಯೇ ಹೊರತು, ದುಷ್ಪರಿಣಾಮ ಬೀರುವಂತೆ ಮಾತನಾಡಲ್ಲ ಎಂಬುದಾಗಿ ತಿಳಿಸಿದರು. ನಾನು ಸಿಎಂ ಪೂರ್ಣಾವಧಿ ವಿಚಾರದಲ್ಲಿ ಹಠಕ್ಕೆ ಬಿದ್ದಿಲ್ಲ. ಅಂತಿಮ ನಿರ್ಧಾರ ಹೈಕಮಾಂಡ್ ಗೆ…
ನವದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ಹೋಲ್ಡಿಂಗ್ ವಲಯಗಳನ್ನು ರಚಿಸಲು, ಜನಸಂದಣಿ ನಿಯಂತ್ರಣಕ್ಕಾಗಿ ಎಐ ತಂತ್ರಜ್ಞಾನವನ್ನು ಬಳಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ. ಕೇಂದ್ರ ಸರ್ಕಾರವು ದೇಶಾದ್ಯಂತ ಎಲ್ಲಾ ನಿಲ್ದಾಣಗಳಲ್ಲಿ ಶಾಶ್ವತ ಹೋಲ್ಡಿಂಗ್ ವಲಯಗಳನ್ನು ನಿರ್ಮಿಸಲಿದೆ ಮತ್ತು ಜನಸಂದಣಿ ಮತ್ತು ಬಿಕ್ಕಟ್ಟು ನಿರ್ವಹಣೆಗಾಗಿ ಕೃತಕ ಬುದ್ಧಿಮತ್ತೆಯನ್ನು (ಎಐ) ಬಳಸಲಿದೆ ಎಂದು ಮೂಲಗಳು ತಿಳಿಸಿವೆ. ಅಂದಹಾಗೇ ಎರಡು ದಿನಗಳ ಹಿಂದಷ್ಟೇ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಜನ ಸಂದಣಿ ಉಂಟಾದ ಪರಿಣಾಮ, ರೈಲು ಹತ್ತೋದಕ್ಕೆ ನೂಗು ನುಗ್ಗಲು ಉಂಟಾಗಿ 18 ಮಂದಿ ಪ್ರಾಯಾಣಿಕರು ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಇಂತದ್ದೊಂದು ಮಹತ್ವದ ಕ್ರಮಕ್ಕೆ ಮುಂದಾಗಿದೆ. https://kannadanewsnow.com/kannada/what-could-be-more-shameful-than-modiji/ https://kannadanewsnow.com/kannada/breaking-gold-prices-rise-to-rs-550-per-10-grams-today-rise-gold-price-hike/ https://kannadanewsnow.com/kannada/a-woman-suffering-from-leptospira-endometriosis-a-rare-disease-was-successfully-treated-at-fortis-hospital/
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಅಮೇರಿಕಾ ಪ್ರವಾಸದಲ್ಲಿ ಇರುವಾಗಲೇ 116 ವಲಸಿಗ ಭಾರತೀಯರನ್ನು ಅಮೇರಿಕಾ ಕೋಳ ಹಾಕಿ ಭಾರತಕ್ಕೆ ಕಳುಹಿಸಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ಯಾವುದಿದೆ ಅಂತ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಸ್ವಯಂಘೋಷಿತ ವಿಶ್ವಗುರು ಮೋದಿಯವರು ಅಮೆರಿಕ ಪ್ರವಾಸದಲ್ಲಿದ್ದಾಗಲೇ 116 ವಲಸಿಗ ಭಾರತೀಯರನ್ನು ಅಮೆರಿಕ ಕೋಳ ಹಾಕಿ ಭಾರತಕ್ಕೆ ಕಳಿಸಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ಯಾವುದಿದೆ.? ಕಳೆದ ವಾರ 104 ವಲಸಿಗ ಭಾರತೀಯರನ್ನು ಅಮೆರಿಕ, ಕೋಳ- ಸರಪಳಿ ಹಾಕಿ ಕಳಿಸುವ ಮೂಲಕ ಅಮಾನವೀಯವಾಗಿ ವರ್ತಿಸಿತ್ತು. ಈಗ ಮೋದಿಯವರು ಅಮೆರಿಕ ಪ್ರವಾಸದಲ್ಲಿದ್ದ ಸಂದರ್ಭದಲ್ಲೇ ಮತ್ತದೆ ಧಾರ್ಷ್ಟ್ಯ ತೋರಿದೆ. ಇಷ್ಟಾದರೂ ಮೋದಿ ಬಾಬಾ ಮೌನಕ್ಕೆ ಶರಣಾಗಿದ್ದಾರೆ ಎಂಬುದಾಗಿ ವಾಗ್ಧಾಳಿ ನಡೆಸಿದ್ದಾರೆ. ಮೋದಿಯವರು ಅಮೆರಿಕದಲ್ಲಿರುವಾಗಲೇ ಆ ದೇಶ ಭಾರತೀಯ ನಾಗರಿಕರನ್ನು ತುಚ್ಛವಾಗಿ ನಡೆಸಿಕೊಂಡಿದೆ. ಇದರರ್ಥ ಮೋದಿಯವರನ್ನು ಅಮೆರಿಕ ಲೆಕ್ಕಕ್ಕೇ ಇಟ್ಟಿಲ್ಲ ಎಂದು ಭಾಸವಾಗುತ್ತಿದೆ. ಮೋದಿಯವರು ‘ಮನೆಯಲ್ಲಿ ಹುಲಿ.,ಬೀದಿಯಲ್ಲಿ ಇಲಿ’ಯಂತಾದರೆ ಏನು ಪ್ರಯೋಜನ.? ಎಂದು ಕೇಳಿದ್ದಾರೆ.…
ನವದೆಹಲಿ: ಸ್ಮಾರ್ಟ್ಫೋನ್ ರಫ್ತಿನಲ್ಲಿ ಭಾರತ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ದಾಟಿದೆ. ಏಪ್ರಿಲ್ ಮತ್ತು ಜನವರಿ ನಡುವೆ, ಸ್ಮಾರ್ಟ್ಫೋನ್ ರಫ್ತು ಅಂಕಿ ಅಂಶವು 1.55 ಲಕ್ಷ ಕೋಟಿ ರೂ.ಗೆ ತಲುಪಿದ್ದು, ಹೊಸ ದಾಖಲೆಯನ್ನು ನಿರ್ಮಿಸಿದೆ. ಈ ಬೆಳವಣಿಗೆಗೆ ಮುಖ್ಯ ಕಾರಣ ಸರ್ಕಾರದ ಉತ್ಪಾದನಾ-ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆ, ಇದು ಸ್ಮಾರ್ಟ್ಫೋನ್ ರಫ್ತು ಗಮನಾರ್ಹವಾಗಿ ಹೆಚ್ಚಾಗಿದೆ. 2024ರ ಹಣಕಾಸು ವರ್ಷದಲ್ಲಿ ಈ ಮೊತ್ತ 1.31 ಲಕ್ಷ ಕೋಟಿ ರೂ. ಜನವರಿಯಲ್ಲಿ ದಾಖಲೆಯ ರಫ್ತು ಜನವರಿಯಲ್ಲಿ, ಸ್ಮಾರ್ಟ್ಫೋನ್ ರಫ್ತು ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿದೆ, ರಫ್ತು 25,000 ಕೋಟಿ ರೂ.ಗಳಷ್ಟಿದೆ, ಇದು ಜನವರಿ 2024 ಕ್ಕೆ ಹೋಲಿಸಿದರೆ 140% ಹೆಚ್ಚಾಗಿದೆ. 10 ತಿಂಗಳಲ್ಲಿ 56% ಹೆಚ್ಚಳ ಏಪ್ರಿಲ್ನಿಂದ ಜನವರಿವರೆಗಿನ 10 ತಿಂಗಳಲ್ಲಿ ಸ್ಮಾರ್ಟ್ಫೋನ್ ರಫ್ತು ಶೇಕಡಾ 56 ರಷ್ಟು ಏರಿಕೆಯಾಗಿ 1.31 ಲಕ್ಷ ಕೋಟಿ ರೂ.ಗೆ ತಲುಪಿದೆ. ಮಾರಾಟಗಾರರ ಕೊಡುಗೆಗಳು ಈ ದಾಖಲೆಯ ರಫ್ತಿಗೆ ತಮಿಳುನಾಡು ಮೂಲದ ಕೆಲವು ಐಫೋನ್ ಮಾರಾಟಗಾರರಿಂದ ಗಮನಾರ್ಹ ಕೊಡುಗೆ ಬಂದಿದೆ,…
ಧಾರವಾಡ: ಆ ಇಬ್ಬರು ದಂಪತಿಗಳು ರಾತ್ರಿ ಊಟ ಮಾಡಿ ಒಟ್ಟಿಗೆ ಮಲಗಿದ್ದಾರೆ. ಬೆಳಿಗ್ಗೆಯಾದರೂ ಏಳದೇ ಇದ್ದಾಗ ಕುಟುಂಬಸ್ಥರು ಎದ್ದೇಳಿಸೋದಕ್ಕೆ ನೋಡಿದ್ದಾರೆ. ಆದರೇ ಎದ್ದಿಲ್ಲ. ಆ ಮೂಲಕ ಸಾವಿನಲ್ಲೂ ರೈತ ದಂಪತಿಗಳು ಒಂದಾಗಿರುವಂತ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲ್ಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲೇ ಇಂತಹ ಘಟನೆ ನಡೆದಿದೆ. ಈಶ್ವರ್ ಅರೇರ್(82) ಹಾಗೂ ಪಾರ್ವತಿ ಅರೇರ್ (73) ಎಂಬುವರೇ ಸಾವಿನಲ್ಲೂ ಒಂದಾದಂತ ರೈತ ದಂಪತಿಗಳಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಂತ ಪತ್ನಿ ಪಾರ್ವತಿಯನ್ನು ಪತಿ ಈಶ್ವರ್ ಅರೇರ್ ಅವರೇ ಆರೈಕೆ ಮಾಡುತ್ತಿದ್ದರು. ನಿನ್ನೆ ರಾತ್ರಿ ಒಟ್ಟಿಗೆ ಊಟ ಮಾಡಿದಂತ ದಂಪತಿಗಳು ಮಲಗಿದ್ದಾರೆ. ಆದರೇ ಬೆಳಿಗ್ಗೆ ಎಬ್ಬಿಸಲು ಹೋದಾಗ ಎದ್ದಿಲ್ಲ. ಹೀಗೆ ರೈತ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ. ಅಂದಹಾಗೇ ಈಶ್ವರ್ ಹಾಗೂ ಪಾರ್ವತಿ ದಂಪತಿಗಳಿಗೆ ನಾಲ್ವರು ಪುತ್ರಿಯರು. 12 ಮಂದಿ ಮೊಮ್ಮಕ್ಕಳಿದ್ದಾರೆ. ಇಂತಹ ರೈತ ದಂಪತಿಗಳು ನಿನ್ನೆ ಮಲಗಿ, ಇಂದು ಬೆಳಿಗ್ಗೆ ಇನ್ನಿಲ್ಲವಾಗಿ ಸಾವಿನಲ್ಲೂ ಒಟ್ಟಾಗಿ ಪಯಣಿಸಿದ್ದಾರೆ. https://kannadanewsnow.com/kannada/top-3-supplements-to-be-taken-to-keep-the-heart-healthy/ https://kannadanewsnow.com/kannada/a-woman-suffering-from-leptospira-endometriosis-a-rare-disease-was-successfully-treated-at-fortis-hospital/
ಹೃದ್ರೋಗವು ವಿಶ್ವಾದ್ಯಂತ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ, ಮತ್ತು ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳುವುದು ಒಟ್ಟಾರೆ ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದೆ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಜೀವನಶೈಲಿ ಬದಲಾವಣೆಗಳು ಹೃದಯದ ಆರೋಗ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ, ಕೆಲವು ಪೂರಕಗಳು ಹೆಚ್ಚುವರಿ ಬೆಂಬಲವನ್ನು ನೀಡಬಹುದು. ಇತ್ತೀಚೆಗೆ, ಹೃದಯ ಶಸ್ತ್ರಚಿಕಿತ್ಸಕ ಜೆರೆಮಿ ಲಂಡನ್, ಎಂಡಿ ಹೃದಯವನ್ನು ಆರೋಗ್ಯಕರವಾಗಿಡಲು ಸೇವಿಸಬೇಕಾದ ಟಾಪ್ 3 ಪೂರಕಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. “ಹೃದಯದ ಆರೋಗ್ಯಕ್ಕಾಗಿ ನನ್ನ ಟಾಪ್ 3 ಪೂರಕಗಳು: 1. ಕೋಕ್ಯೂ 10 2. ಒಮೆಗಾ 3 ಕೊಬ್ಬಿನಾಮ್ಲಗಳು 3. ಮೆಗ್ನೀಸಿಯಮ್” ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. “ನಾನು ನೋವಿನಿಂದ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ: ಪೂರಕಗಳು ನಿಮ್ಮ ಜೀವನಶೈಲಿಗೆ ಪೂರಕವಾಗಿರಬೇಕು, ಬದಲಿಯಾಗಬಾರದು. ಮಾರುಕಟ್ಟೆಯಲ್ಲಿ ಯಾವುದೇ ಪೂರಕವು ವ್ಯಾಯಾಮ, ಸರಿಯಾಗಿ ಪೋಷಕಾಂಶ ತುಂಬುವುದು ಮತ್ತು ಉತ್ತಮ ಗುಣಮಟ್ಟದ ನಿದ್ರೆಯನ್ನು ಬದಲಾಯಿಸುವುದಿಲ್ಲ. ಆದಾಗ್ಯೂ, ನೀವು ಪೂರಕಗಳನ್ನು ತೆಗೆದುಕೊಳ್ಳಲು ಹೊರಟಿದ್ದರೆ, ನೀವು ತೆಗೆದುಕೊಳ್ಳುತ್ತಿರುವ ಪೂರಕದ ಗುಣಮಟ್ಟದ ಬಗ್ಗೆ ಜಾಗೃತರಾಗಿರಲು ನಾನು ನಿಮ್ಮನ್ನು ಬಲವಾಗಿ…
ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಬಿಬಿಎಂಪಿಯಿಂದ ಇನ್ಮುಂದೆ ಮನೆ ಬಾಗಿಲಿಗೆ ಇ-ಖಾತಾ ತಲುಪಿಸುವಂತ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈ ಬಗ್ಗೆ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ಹಂಚಿಕೊಂಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆಸ್ತಿ ಮಾಲೀಕರ ಮನೆ ಬಾಗಿಲಿಗೆ ಇ- ಖಾತಾ ತಲುಪಿಸುವ ಅಭಿಯಾನವನ್ನು ಮುಂದಿನ ವಾರದಿಂದ ಆರಂಭಿಸಲಾಗುವುದು ಎಂದಿದ್ದಾರೆ. ನಮ್ಮ ವೆಬ್ಸೈಟ್ನಲ್ಲಿ ಲಭ್ಯವಿರುವ ಕರಡು ಇ-ಖಾತಾದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲದಿದ್ದರೆ, ನಮ್ಮ ಸಿಬ್ಬಂದಿ ಅವರ ಮನೆಗೆ ಹೋಗಿ ಅಗತ್ಯ ದಾಖಲೆಗಳನ್ನು ಪಡೆದು ಅಪ್ಲೋಡ್ ಮಾಡಿ ಅಂತಿಮ ಇ-ಖಾತಾ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. https://twitter.com/KarnatakaVarthe/status/1890749482985554411
ಮಂಡ್ಯ : ಮದ್ದೂರು ತಾಲ್ಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿರುವ ಲಕ್ಷ್ಮೀದೇವಿ ಅವರನ್ನು ಕರ್ತವ್ಯ ಲೋಪದಡಿ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶಿಸಿದ್ದಾರೆ. ಮದ್ದೂರು ತಾಲ್ಲೂಕಿನ ಕಸಬಾ ಹೋಬಳಿಯ ಭೀಮನಕೆರೆ ಗ್ರಾಮದ ಸರ್ವೆ ನಂಬರ್ 121/3ರ 2 ಎಕರೆ 4 ಗುಂಟೆ ಭೂಮಿಗೆ ಸಂಬಂಧಪಟ್ಟಂತೆ ಕಾಲಂ 11ರಲ್ಲಿದ್ದ ಋಣಭಾರವನ್ನು ತೆಗೆದು ಹಾಕಿ ಕರ್ತವ್ಯ ಲೋಪವೆಸಗಿದ್ದರು. ಈ ಬಗ್ಗೆ ಸಾರ್ವಜನಿಕರು ತಿಂಗಳ ಹಿಂದೆ ಮದ್ದೂರು ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಶಿಸ್ತುಕ್ರಮಕ್ಕೆ ಆಗ್ರಹಿಸಿದ್ದರು. ಈ ಬಗ್ಗೆ ಉಪ ವಿಭಾಗಾಧಿಕಾರಿ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಿದ್ದರಿಂದ ಜಿಲ್ಲಾಧಿಕಾರಿಯು ಲಕ್ಷ್ಮೀದೇವಿ ಅವರನ್ನು ಅಮಾನತುಗೊಳಿಸಿ ಆದ್ದೇಶಿಸಿದ್ದಾರೆ. ವರದಿ : ಗಿರೀಶ್ ರಾಜ್, ಮಂಡ್ಯ https://kannadanewsnow.com/kannada/3-year-old-boy-killed-in-firing-with-real-gun-as-game-pistol/ https://kannadanewsnow.com/kannada/bescom-urges-farmers-not-to-use-single-phase-farm-pump-sets-for-irrigation-at-night/
ಮಂಡ್ಯ: ಆಟದ ಪಿಸ್ತೂಲ್ ಎಂಬುದಾಗಿ ತಿಳಿದು ನಿಜವಾದ ಪಿಸ್ತೂಲ್ ನಿಂದ ಪುಟಾಣಿ ಮಗುವಿನ ಮೇಲೆ ಮಿಸ್ ಫೈರಿಂಗ್ ಮಾಡಿದ ಕಾರಣ, ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೊಂದೆಮಾದಹಳ್ಳಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಕುಟುಂಬವೊಂದು ಕೋಳಿ ಫಾರಂನಲ್ಲಿ ವಾಸವಾಗಿತ್ತು. ಈ ಫಾರಂ ಮಾಲೀಕ ನರಸಿಂಹಮೂರ್ತಿ ಎಂಬುವರು ಗನ್ ಲೈಸೆನ್ಸ್ ಪಡೆದಿದ್ದರು. ಈ ಕೋಳಿ ಫಾರಂಗೆ ಶಂಕರ್ ದಾಸ್ ಎಂಬುವರು ಆಗಾಗ ಆಗಮಿಸುತ್ತಿದ್ದರು. ಅವರ ಪುತ್ರ ಸುದೀಪ್ ದಾಸ್ ಕೂಡ ಇಂದು ಬಂದಿದ್ದರು. 13 ವರ್ಷದ ಸುದೀಪ್ ದಾಸ್ ಹಾಗೂ 3 ವರ್ಷದ ಅಭಿಷೇಕ್ ಆಟವಾಡುತ್ತಿದ್ದರು. ಸುದೀಪ್ ಕೈಗೆ ನಿಜವಾದ ಗನ್ ಸಿಕ್ಕಿದೆ. ಅದು ಅಸಲಿ ಎಂಬುದು ತಿಳಿಯದೇ ಆಟವಾಡುತ್ತಿದ್ದಾಗ ಆಟದ ಪಿಸ್ತೂಲ್ ಎಂಬುದಾಗಿ ಭಾವಿಸಿ ಅಭಿಷೇಕ್ ಮೇಲೆ ಮಿಸ್ ಫೈರಿಂಗ್ ಮಾಡಿದ್ದಾನೆ. ಗುಂಡು ತಗುಲಿ ಗಾಯಗೊಂಡಿದ್ದಂತ ಅಭಿಷೇಕ್(3) ಅನ್ನು ನಾಗಮಂಗಲದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಈ…
ಬೆಂಗಳೂರು: ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ನಡೆದಂತ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ವಿವೇಕ್ ರೆಡ್ಡಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಇಂದು ಬೆಂಗಳೂರು ವಕೀಲರ ಸಂಘದ ಚುನಾವಣೆ 2025-2028ಗೆ ಮತದಾನ ನಡೆಯಿತು. ಮತದಾನದ ಬಳಿಕ ನಡೆದಂತ ಮತಏಣಿಕೆ ಕಾರ್ಯದಲ್ಲಿ ಮೊದಲ ಸುತ್ತಿನಿಂದ ಅಂತಿಮ ಸುತ್ತಿನವರೆಗೆ ಅಧ್ಯಕ್ಷರ ಹುದ್ದೆಯ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿಯೇ ನಡೆಯಿತು. 9ನೇ ಸುತ್ತಿನಲ್ಲಿ ಒಟ್ಟು 13,403 ಮತಗಳು ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಚಲಾವಣೆಗೊಂಡಿದ್ದವು. ಇವುಗಳಲ್ಲಿ ಎಪಿ ರಂಗನಾಥ್ 4,518 ಮತಗಳನ್ನು ಪಡೆದಿದ್ದರೇ, ವಿವೇಕ್ ಸುಬ್ಬಾರೆಡ್ಡಿ ಅವರು 6,820 ಮತಗಳನ್ನು ಪಡೆದರು. ಅಂತಿಮವಾಗಿ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಮತ್ತೊಮ್ಮೆ ಅಧ್ಯಕ್ಷರಾಗಿ ವಿವೇಕ್ ರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನೂ ಜನರಲ್ ಸೆಕ್ರೇಟರಿ ಸ್ಥಾನಕ್ಕೆ ನಡೆದಂತ ಚುನಾವಣೆಯಲ್ಲಿ ಪ್ರವೀಣ್ ಗೌಡ ಹೆಚ್.ವಿ ಅವರು ಶಿವಮೂರ್ತಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರವೀಣ್ ಗೌಡ ಅವರು 4854 ಮತಗಳನ್ನು ಪಡೆದರೇ, ಶಿವಮೂರ್ತಿ ಅವರು 2,321 ಮತಗಳನ್ನು ಪಡೆದು ಸೋಲು…