Subscribe to Updates
Get the latest creative news from FooBar about art, design and business.
Author: kannadanewsnow09
ಮಂಡ್ಯ : ಅಂತರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆ ಅಂಗವಾಗಿ ಪ್ರಜಾ ಪ್ರಭುತ್ವ ಜಾಗೃತಿ ಮೂಡಿಸುವ ಸಲುವಾಗಿ ಬೀದರ್ ನಿಂದ ಚಾಮರಾಜನಗರ ಜಿಲ್ಲೆಯವರೆಗೆ ಹಮ್ಮಿಕೊಂಡಿದ್ದ ಮಾನವ ಸರಪಳಿ ನಿರ್ಮಾಣದಲ್ಲಿ ಅತಿ ಹೆಚ್ಚು ಖಾಸಗಿ ಕಂಪನಿಗಳ ಭಾಗವಹಿಸುವಿಕೆ ವಿಭಾಗದಲ್ಲಿ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಜಿಲ್ಲಾಧಿಕಾರಿ ಡಾ: ಕುಮಾರ ಅವರಿಗೆ ಅಭಿನಂದನೆ ಸಲ್ಲಿಸಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿವಾರ್ಹಕ ನಿರ್ದೇಶಕ ಕಾಂತರಾಜು ಅವರು ನವೆಂಬರ್ 26 ರಂದು ಬೆಳಗ್ಗೆ 11ಗಂಟೆಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿರುವ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ಶಿವಮೊಗ್ಗ: ಇಂದು ರಾಜ್ಯ ಸರ್ಕಾರದಿಂದ ದಾವಣಗೆರೆ ವಿಶ್ವವಿದ್ಯಾಲಯದ ಸಿಡಿಕೇಟ್ ನಾಮನಿರ್ದೇಶಿತ ಸದಸ್ಯರನ್ನಾಗಿ ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕಿ ಡಾ.ಜಿ.ಕೆ ಪ್ರೇಮ ಅವರನ್ನು ನೇಮಿಸಿ ಆದೇಶಿಸಿದೆ. ಇಂತಹ ಹುದ್ದೆಗೆ ನೇಮಕಗೊಂಡ ಡಾ.ಜಿ.ಕೆ ಪ್ರೇಮ ಅವರಿಗೆ ಹಿರಿಯ ಪತ್ರಕರ್ತ ಚಾರ್ವಕ ರಾಘವೇಂದ್ರ ಅವರು ಅಭಿನಂದನೆ, ಶುಭಾಶಯವನ್ನು ತಿಳಿಸಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು,ಡಾ. ಜಿ.ಕೆ. ಪ್ರೇಮಾ ಅವರು ದಾವಣಗೆರೆ ವಿವಿಯ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆ ಆಗಿರುವುದು ತಿಳಿದು ಬಹಳ ಸಂತೋಷವಾಗಿದೆ. ಪ್ರೇಮಾ ಅವರು ನನಗೆ ಪರಿಚಯವಾಗಿದ್ದು ಜನ ಚಳವಳಿ ಸಂದರ್ಭದಲ್ಲಿ ಆಗಿದೆ. ಜನಪರ ಜೀವಪರ ಚಳವಳಿ ಎಲ್ಲೆ ನಡೆದರು ಪ್ರೇಮಾ ಇರುತ್ತಿದ್ದರು ಎಂಬುದಾಗಿ ತಿಳಿಸಿದ್ದಾರೆ. ಸದ್ಯ ಪ್ರೇಮಾ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ನೆಚ್ಚಿನ ಟೀಚರ್ ಕೂಡ. ಬಹಳ ಹಿಂದುಳಿದ ಕಾಡುಗೊಲ್ಲ ಸಮುದಾಯದಿಂದ ಬಂದಂತ ಇವರು, ತಾವು ಹುಟ್ಟಿದ ಸಮುದಾಯದಲ್ಲಿ ಮಹಿಳೆಯರ ಕುರಿತು ಇರುವ ಮೌಡ್ಯವನ್ನು ಕಿತ್ತೊಗೆಯಲು ಈಗಲೂ ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.…
ಬೆಂಗಳೂರು: ದಾವಣಗೆರೆ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಪ್ರಾಧಿಕಾರಕ್ಕೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ಡಾ.ಜಿ.ಕೆ ಪ್ರೇಮ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇಂದು ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲಯಗಳ ಅಧಿನಿಯಮ 2000ರ ಪ್ರಕರಣ 28(1)(ಜಿ)ರಡಿ ಪ್ರದತ್ತವಾದಂತ ಅಧಿಕಾರವನ್ನು ಚಲಾಯಿಸಿ ಹಾಗೂ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ 2000ರ ಪ್ರಕರಣ 39(1)ರ ಉಪಬಂಧಕ್ಕೊಳಪಟ್ಟು ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಪ್ರಾಧಿಕಾರಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡವರನ್ನು ಸರ್ಕಾರವು ನಾಮನಿರ್ದೇಶನ ಮಾಡಿ ಆದೇಶಿಸಿದೆ ಎಂದಿದ್ದಾರೆ. ಹೀಗಿದೆ ದಾವಣಗೆರೆ ವಿಶ್ವವಿದ್ಯಾಲಯದ ನಾಮ ನಿರ್ದೇಶಿತ ಸದಸ್ಯರ ಪಟ್ಟಿ ಡಾ.ಜಿ.ಕೆ ಪ್ರೇಮ, ಚಿತ್ತಯ್ಯನಹಟ್ಟಿ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ- ಎಂಎ, ಪಿಹೆಚ್.ಡಿ- ಮಹಿಳೆ ದ್ಯಾಮಪ್ಪ, ಬೆಂಚಕಟ್ಟೆ, ಜಗಳೂರು ತಾಲ್ಲೂಕು – ಎಂಎ, ಇಂಗ್ಲೀಷ್ – ಪರಿಶಿಷ್ಟ ಜಾತಿ ಶಬೀರ್ ಆಲಿಖಾನ್, ನರಸರಾಜ್ ಪೇಟೆ, ದಾವಣಗೆರೆ – ಬಿಎಸ್ಸಿ,…
ಬೆಂಗಳೂರು: ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿರುವಂತ ಬಿಪಿಎಲ್ ಕಾರ್ಡ್ ಸಮಸ್ಯೆಯನ್ನು 1 ವಾರದಲ್ಲೇ ಇತ್ಯರ್ಥ ಮಾಡುವುದಾಗಿ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ. ಆದಾಯ ತೆರಿಗೆ ಪಾವತಿದಾರರು ಹಾಗೂ ಸರ್ಕಾರಿ ನೌಕರರನ್ನು ಹೊರತುಪಡಿಸಿ ಬೇರೆ ಯಾರದ್ದೇ ಬಿಪಿಎಲ್ ಕಾರ್ಡ್ಗಳು ಎಪಿಎಲ್ ಕಾರ್ಡ್ಗಳಾಗಿ ಪರಿವರ್ತನೆ ಆಗಿದ್ದರೆ, ಅವುಗಳನ್ನು 1 ವಾರದಲ್ಲಿ ಸರಿಪಡಿಸಲಾಗುವುದು. ಹಳೆಯ ಕಾರ್ಡ್ ಹಾಗೂ ನಂಬರ್ ಬಳಸಿ ಹಿಂದಿನಂತೆಯೇ ಆಹಾರ ಧಾನ್ಯ ಪಡೆಯಲೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ತಿಳಿಸಿದ್ದಾರೆ. https://twitter.com/KarnatakaVarthe/status/1859914159346884646 https://kannadanewsnow.com/kannada/good-news-for-fishermen-in-the-state-rs-10-lakh-compensation-in-case-of-death-in-accident/ https://kannadanewsnow.com/kannada/hc-stays-state-waqf-boards-order-to-issue-marriage-certificates-to-muslim-couples/
ಬೆಂಗಳೂರು: ವಿವಾಹಿತ ಮುಸ್ಲಿಂ ದಂಪತಿಗೆ ವಿವಾಹ ಪ್ರಮಾಣಪತ್ರ ನೀಡಲು ರಾಜ್ಯ ವಕ್ಫ್ ಮಂಡಳಿಗೆ ಅನುಮತಿ ನೀಡಿ ರಾಜ್ಯ ಸರ್ಕಾರ ಮಾಡಿದ್ದ ಆದೇಶವನ್ನು ಜನವರಿ 7ರವರೆಗೆ ಅಮಾನತಿನಲ್ಲಿಡುವ ಮೂಲಕ ರಾಜ್ಯ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ನೀಡಿದೆ. ಅಲ್ಲದೇ, ರಾಜ್ಯ ಸರ್ಕಾರ ಮತ್ತು ವಕ್ಪ್ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ. ಬೆಂಗಳೂರಿನ ಎ ಆಲಂ ಪಾಷಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು. “ಮೇಲ್ನೋಟಕ್ಕೆ ಪ್ರಬಲವಾದ ಪ್ರಕರಣ ಕಂಡುಬಂದಿರುವುದರಿಂದ 2023 ರ ಆಗಸ್ಟ್ 30 ರಂದು ವಕ್ಫ್ ಮಂಡಳಿ ಮತ್ತು ಅದರ ಅಧಿಕಾರಿಗಳಿಗೆ ವಿವಾಹ ಪ್ರಮಾಣಪತ್ರಗಳನ್ನು ನೀಡಲು ಅನುಮತಿಸಿದ್ದ ಆಕ್ಷೇಪಾರ್ಹ ಆದೇಶವನ್ನು ಮುಂದಿನ ವಿಚಾರಣೆವರೆಗೆ ಅಮಾನತಿನಲ್ಲಿಡಲಾಗಿದೆ. ಸರ್ಕಾರದ ಆದೇಶದ ನೆಪದಲ್ಲಿ ವಕ್ಫ್ ಮಂಡಳಿ ಅಥವಾ ಅಧಿಕಾರಿಗಳು ವಿವಾಹ ಪ್ರಮಾಣಪತ್ರಗಳನ್ನು ಮುಂದಿನ ಆದೇಶದವರೆಗೆ ನೀಡುವಂತಿಲ್ಲ. ಯಾವುದೇ ಅರ್ಹತೆ ಇಲ್ಲದ ವಕ್ಫ್ ಮಂಡಳಿ…
ಬೆಂಗಳೂರು: ಮೀನುಗಾರರ ಬದುಕನ್ನು ಹಸನಾಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಮೀನುಗಾರಿಕೆಗೆ ತೆರಳಿದಾಗ ಅಪಾಯಕ್ಕೆ ಸಿಲುಕಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ಇನ್ನು ಮುಂದೆ ₹10 ಲಕ್ಷ ಪರಿಹಾರ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ. ಈ ಹಿಂದೆ ಮೀನುಗಾರರಿಗೆ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಹಾನಿಯಾದರೆ ಪರಿಹಾರವಾಗಿ ₹6 ಲಕ್ಷ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ₹8 ಲಕ್ಷಕ್ಕೆ ಏರಿಸಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ₹10 ಲಕ್ಷಕ್ಕೆ ಏರಿಸುತ್ತೇವೆ” ಎಂದು ಘೋಷಣೆ ಮಾಡಿದರು. “ಈ ವರ್ಷ ಮೀನುಗಾರರಿಗಾಗಿ 10 ಸಾವಿರ ಮನೆಗಳನ್ನು ನೀಡಲು ತೀರ್ಮಾನ ಮಾಡಿದ್ದೇವೆ. ಮಂಗಳೂರಿನಲ್ಲಿ ₹49 ಕೋಟಿ ವೆಚ್ಚದಲ್ಲಿ ಮೀನುಗಾರಿಕೆ ಬಂದರು ಕಾಮಗಾರಿ ಪೂರ್ಣಗೊಂಡಿದೆ. ಸಮೀಕ್ಷೆ ಪ್ರಕಾರ 99% ಮೀನುಗಾರರು ಆರ್ಥಿಕವಾಗಿ ಹಿಂದುಳಿದಿದ್ದು, ಈ ಮೀನುಗಾರರ ರಕ್ಷಣೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಮೀನು ಮಾರಾಟ ಮಾಡಲು ತ್ರಿಚಕ್ರ ಎಲೆಕ್ಟ್ರಿಕ್ ವಾಹನ ಹಂಚಲಾಗಿದೆ” ಎಂದು ತಿಳಿಸಿದರು. https://kannadanewsnow.com/kannada/broken-desk-filth-everywhere-current-shock-this-is-the-plight-of-the-prestigious-college-of-the-ocean/ https://kannadanewsnow.com/kannada/sagar-rural-police-arrest-rabari-accused-traced-within-24-hours-arrested/
ಶಿವಮೊಗ್ಗ: ರಾಬರಿ ಪ್ರಕರಣ ದಾಖಲಾದಂತ ಕೇವಲ 24 ಗಂಟೆಯಲ್ಲೇ ಆರೋಪಿಯ ಸುಳಿವು ಪತ್ತೆ ಹಚ್ಚಿದಂತ ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು, ಅಷ್ಟೇ ವೇಗವಾಗಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಹಂಚಿಕೊಂಡರು. ಕಳೆದ 10 ದಿನಗಳ ಹಿಂದೆ ಸಾಗರ ಗ್ರಾಮಾಂತರ ಠಾಣೆಯ ಕಲ್ಮನೆ ಗ್ರಾಮದ ಕುಂಬಾರಗುಂಡಿಯಲ್ಲಿನ ಒಂಟಿ ಮನೆಯಲ್ಲಿದ್ದಂತ ಮಹಿಳೆಯನ್ನು ಓರ್ವ ಆರೋಪಿ ಚಾಕು ತೋರಿಸಿ, ಮನೆಯ ಲಾಕರ್ ನಲ್ಲಿದ್ದಂತ ಬಂಗಾರದ ಮಾಂಗಲ್ಯ ಸರ, ಮೊಬೈಲ್ ಹಾಗೂ ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದ ಬಗ್ಗೆ ದೂರು ನೀಡಲಾಗಿತ್ತು. ಈ ದೂರಿನ ಸಂಬಂಧ ಬಿಎನ್ ಎಸ್ ಕಾಯ್ದೆಯ ಕಲಂ 307, 309(4) ಅಡಿ ಕೇಸ್ ದಾಖಲಿಸಲಾಗಿತ್ತು ಎಂದರು. ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗೂ 1ನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದಂತ ಅನಿಲ್ ಕುಮಾರ್ ಭೂಮಾರೆಡ್ಡಿ, 2ನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದಂತ ಕಾರಿಯಪ್ಪ.ಎ.ಜಿ ಅವರಿಗೆ ಮಾಹಿತಿ ನೀಡಲಾಗಿತ್ತು. ಅವರ…
ಶಿವಮೊಗ್ಗ: ಮುರಿದೋದ, ಕುಳಿತ್ರೆ ಮುರಿದೋಗುತ್ತೆ ಎನ್ನುವ ಭಯ, ಫ್ಯಾನ್, ಲೈಟ್ ಹಾಕೋದಕ್ಕೆ ಹೋದ್ರೆ ಕರೆಂಟ್ ಶಾಕ್, ತಲೆಯ ಮೇಲೆ ಮಣ್ಣು, ಡೆಸ್ಕ್ ಮೇಲಂತೂ ಧೂಳೋ ಧೂಳು. ಇದು ಸಾಗರ ನಗರದಲ್ಲಿರುವಂತ ಪ್ರತಿಷ್ಠಿತ ಕಾಲೇಜಿನ ದುಸ್ಥಿತಿ. ಇದನ್ನು ಖಂಡಿಸಿ ಇಂದು ವಿದ್ಯಾರ್ಥಿಗಳು ಆಡಳಿತ ಮಂಡಳಿಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಿದ್ದು ಕಂಡು ಬಂದಿತು. ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಜೋಗ ರಸ್ತೆಯಲ್ಲಿರುವಂತ ಎಲ್ ಬಿ ಕಾಲೇಜಿನ ಆಡಳಿತ ಮಂಡಳಿಯಾದಂತ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ(ರಿ) ವಿರುದ್ಧ ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಕಾಲೇಜಿನಲ್ಲಿ ಶುಚಿತ್ವಕ್ಕೆ ಒತ್ತು ನೀಡುತ್ತಿಲ್ಲ. ಗಲೀಜು ಪ್ರದೇಶದಲ್ಲೇ ಕುಳಿತು ಪಾಠ ಕೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದಾಗಿ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದರು. https://youtu.be/RaFDU2mB5Vo ಪತ್ರಕರ್ತರನ್ನು ಬನ್ನಿ ಸಾರ್ ನೋಡಿ ಕಾಲೇಜಿನಲ್ಲಿನ ನಮ್ಮ ಕೊಠಡಿಗಳನ್ನು. ಕುಳಿತು ಪಾಠ ಕೇಳೋಕೆ ಮನಸ್ಸಾಗೋದು ಇರಲಿ, ಭಯವಾಗುತ್ತದೆ ಆ ಸ್ಥಿತಿಯಲ್ಲಿ ಇದೆ ಅಂತ ವಿದ್ಯಾರ್ಥಿಗಳು ಅಂದಾಗ, ಎಲ್ ಬಿ ಕಾಲೇಜಿನ ಕೊಠಡಿಗಳಿಗೆ ಭೇಟಿ ನೀಡಿದಾಗ ಕಂಡಿದ್ದೇ…
ಬಾಗಲಕೋಟೆ: ಜಿಲ್ಲೆಯಲ್ಲಿ ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯೊಬ್ಬರ ಎರಡು ಕೈಗಳ ಬೆರಳುಗಳು ಛಿದ್ರಗೊಂಡಿದ್ದ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರೋಪಿಯೊಬ್ಬ ಶಶಿಕಲಾ ಎನ್ನುವವರ ಮೇಲಿನ ಸಿಟ್ಟಿನಿಂದ ಹೇರ್ ಡ್ರೈಯರ್ ನಲ್ಲಿ ಡಿಟನೇಟರ್ ಇಟ್ಟು ಕಳುಹಿಸಿದ್ದರ ಪರಿಣಾಮ, ಸ್ಪೋಟಗೊಂಡಿರೋ ವಿಷಯ ಬಹಿರಂಗವಾಗಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ಆರೋಪಿ ಸಿದ್ದಪ್ಪ ಶೀಲವಂತ ಎಂಬಾತ ಮಾಜಿ ಯೋಧನ ಪತ್ನಿ ಬಸವರಾಜೇಶ್ವರಿ ಎಂಬಾಕೆಯನ್ನು ಪ್ರೀತಿಸುತ್ತಿದ್ದನು. ಈ ವಿಷಯ ತಿಳಿದಂತ ಶಶಿಕಲಾ ಹಡಪದ ಎಂಬಾಕೆಯು ಬಸವರಾಜೇಶ್ವರಿಗೆ ನೀನು ಸಿದ್ದಪ್ಪ ಶೀಲವಂತ ಸಹವಾಸ ಬಿಡುವಂತೆ ಬುದ್ಧಿವಾದ ಹೇಳಿದ್ದಳು. ಈ ವಿಚಾರ ಸಿದ್ದಪ್ಪನಿಗೆ ತಿಳಿದು ಶಶಿಕಲಾ ಹಡಪದ ಕೊಲೆಗೆ ಸಂಚು ರೂಪಿಸಿದ್ದನು. ಶಶಿಕಲಾ ಅವರ ಹೆಸರಿಗೆ ಹೇರ್ ಡ್ರೈಯರ್ ಕೋರಿಯರ್ ಮಾಡಿದ್ದಂತ ಸಿದ್ದಪ್ಪ ಶೀಲವಂತ, ಅದರಲ್ಲಿ ಡಿಟೋನೇಟರ್ ಇರಿಸಿ ಕಳುಹಿಸಿದ್ದನು. ಕರೆಂಟ್ ಗೆ ಪ್ಲಗ್ ಹಾಕಿ ಸ್ವಿಚ್ ಹಾಕಿದ ತಕ್ಷಣವೇ ಸ್ಪೋಟಗೊಂಡು ಶಶಿಕಲಾ ಹತ್ಯೆ ಮಾಡುವ ಸಂಚು ಇದಾಗಿತ್ತು. ನವೆಂಬರ್.20, 2024ರಂದು ಕೋರಿಯರ್ ಬಂದಾಗ ಶಶಿಕಲಾ ಹಡಪದ ಮನೆಯಲ್ಲಿ ಇರಲಿಲ್ಲ.…
ಬೆಂಗಳೂರು: ಭಾನುವಾರ ಪೀಣ್ಯ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಬೆಂಗಳೂರು: 220/66/11 kV ಎಸ್ಆರ್ಎಸ್ ಪೀಣ್ಯ ಸಬ್ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಪೀಣ್ಯ ವಿಭಾಗದ ಎನ್-4/ ಎನ್-5/ ಎನ್-7 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 24.11.2024 ರಂದು ಬೆಳಗ್ಗೆ 10:00 ಯಿಂದ ಮಧ್ಯಾಹ್ನ 03:30 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಎಚ್ಎಂಟಿ ರಸ್ತೆ, ಆರ್ಎನ್ಎಸ್ ಅಪಾರ್ಟ್ಮೆಂಟ್, ಸಿಎಮ್ಟಿಐ, ಬೋರ್ಲಿಂಗಪ್ಪ ಗಾರ್ಡನ್, ಪೀಣ್ಯ ಪೊಲೀಸ್ ಠಾಣೆ ರಸ್ತೆ, ಟೆಲಿಫೋನ್ ಎಕ್ಸ್ಚೇಂಜ್, 6ನೇ ಕ್ರಾಸ್, ರಿಲಯನ್ಸ್ ಕಮ್ಯುನಿಕೇಷನ್, ಗಣಪತಿನಗರ ಮುಖ್ಯ ರಸ್ತೆ, ಪೊಲೀಸ್ ಠಾಣೆ ರಸ್ತೆ, ಚಾಮುಂಡಿಪುರ, ಮುನೇಶ್ವರ ದೇವಸ್ಥಾನ ರಸ್ತೆ, ಮೆಕ್ ಲೇಔಟ್, ಮಲಯಾಳಿ ಅತಿಥಿ ಗೃಹ ರಸ್ತೆ, ಕೆಎಚ್ಬಿ ಲೇಔಟ್ ರಾಜೇಶ್ವರಿನಗರ, ಆಕಾಶ್ ಥೇಟರ್ ರಸ್ತೆ ಕರೆಂಟ್ ಇರಲ್ಲ. ಸ್ನೇಹಿತರು ವೃತ್ತ, ವಿಜ್ಞಾನ ಪಬ್ಲಿಕ್ ಸ್ಕೂಲ್ ರಸ್ತೆ. ಭೈರವೇಶ್ವರ ನಗರ, ಬ್ಯಾಂಕ್ ಕಾಲೋನಿ, 6 ನೇ ಮುಖ್ಯ ರಸ್ತೆ, ವಿಭಾಗ ರಸ್ತೆ, 5 ನೇ…