Subscribe to Updates
Get the latest creative news from FooBar about art, design and business.
Author: kannadanewsnow09
ಕೆಎನ್ಎನ್ ಡಿಜಿಟಲ್ ಡೆಸ್ಕ್: ಇಂದು ಎಟಿಎಂ ಭದ್ರತೆ ಏಕೆ ಮುಖ್ಯ: ಡಿಜಿಟಲ್ ವ್ಯಾಲೆಟ್ಗಳು, ಯುಪಿಐ ಮತ್ತು ಕ್ರೆಡಿಟ್ ಕಾರ್ಡ್ಗಳ ಏರಿಕೆಯೊಂದಿಗೆ, ಹೆಚ್ಚಿನ ಜನರು ಇನ್ನು ಮುಂದೆ ದೊಡ್ಡ ಪ್ರಮಾಣದ ಹಣವನ್ನು ವಿರಳವಾಗಿ ಒಯ್ಯುತ್ತಾರೆ. ಆದರೂ, ಎಟಿಎಂನಿಂದ ಹಣವನ್ನು ಹಿಂಪಡೆಯುವುದು ಅನಿವಾರ್ಯವಾಗುವ ಸಂದರ್ಭಗಳಿವೆ. ಅದಕ್ಕಾಗಿಯೇ ಸುರಕ್ಷಿತ ಎಟಿಎಂ ಅಭ್ಯಾಸಗಳನ್ನು ಅಭ್ಯಾಸ ಮಾಡುವುದು ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ. ಸಾಮಾನ್ಯ ಎಟಿಎಂ ಸುರಕ್ಷತಾ ಅಭ್ಯಾಸಗಳು ನಗದು ಹಿಂಪಡೆಯುವಾಗ, ಜನರು ಸಾಮಾನ್ಯವಾಗಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ – ಕೀಪ್ಯಾಡ್ ಅನ್ನು ರಕ್ಷಿಸುವುದು, ಪರದೆಯನ್ನು ಮುಚ್ಚುವುದು ಮತ್ತು ಅವರ ಸುತ್ತಮುತ್ತಲಿನ ಪ್ರದೇಶಗಳನ್ನು ಸೂಕ್ಷ್ಮವಾಗಿ ಗಮನಿಸುವುದು. ಈ ಸಣ್ಣ ಹಂತಗಳು ನಿಮ್ಮ ಪಿನ್ ಮತ್ತು ವಹಿವಾಟು ಮೊತ್ತದಂತಹ ಸೂಕ್ಷ್ಮ ವಿವರಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಕಡೆಗಣಿಸಲಾದ ಎಟಿಎಂ ತಪ್ಪು ಆಶ್ಚರ್ಯಕರವಾಗಿ, ದೊಡ್ಡ ಅಪಾಯವು ಯಾವಾಗಲೂ ಹಿಂಪಡೆಯುವ ಸಮಯದಲ್ಲಿ ಸಂಭವಿಸುವುದಿಲ್ಲ, ಆದರೆ ತಕ್ಷಣವೇ ಸಂಭವಿಸುತ್ತದೆ. ನಿಮ್ಮ ಹಣವನ್ನು ವಿತರಿಸಿದ ನಂತರ, ಯಂತ್ರವು ನಿಮಗೆ ರಶೀದಿ ಬೇಕೇ ಎಂದು ಕೇಳುತ್ತದೆ. ಅನೇಕ ಬಳಕೆದಾರರು ಸಹಜವಾಗಿಯೇ…
ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್ ಬಳಿಯಲ್ಲಿ ಖಾಸಗಿ ಬಸ್ ಅಪಘಾತದ ನಂತ್ರ ಬೆಂಕಿ ಹೊತ್ತಿಕೊಂಡು, 20 ಮಂದಿ ಸಜೀವ ದಹನವಾಗಿದ್ದರು. ಈ ದುರಂತದ ಬೆನ್ನಲ್ಲೇ ಕೆ ಎಸ್ ಆರ್ ಟಿ ಸಿ ಪ್ರಯಾಣಿಕರ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇನ್ಮುಂದೆ ಸಾರಿಗೆ ಬಸ್ಸುಗಳಲ್ಲಿ ಸ್ಪೋಟಗೊಳ್ಳುವಂತ ವಸ್ತುಗಳನ್ನು ಪ್ರಯಾಣಿಕರು ಕೊಂಡೊಯ್ಯೋದಕ್ಕೆ ನಿಷೇಧ ಹೇರಲಾಗಿದೆ. ಜೊತೆಗೆ ಸುರಕ್ಷತೆಯ ದೃಷ್ಠಿಯಿಂದ ಪ್ರಯಾಣಿಕರ ಪ್ರತಿ ಬ್ಯಾಗ್ ಚೆಕ್ ಮಾಡುವಂತೆಯೂ ರಾಜ್ಯ ಸರ್ಕಾರ ಸೂಚಿಸಿದೆ. ಈ ಕುರಿತಂತೆ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದು, ಇತ್ತೀಚೆಗೆ ಕರ್ನೂಲ್ ಬಸ್ ದುರಂತ ತೀವ್ರ ದುಃಖಕರವಾದ ಸಂಗತಿ. ಆ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿರುವ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಬೇಕು. ಈ ಹಿಂದೆ ನಾನು ಸಾರಿಗೆ ಸಚಿವನಾಗಿದ್ದಾಗ ಹಾವೇರಿ ಬಳಿ ಜಬ್ಬಾರ್ ಟ್ರಾವೆಲ್ಸ್ ನ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಪ್ರಯಾಣಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು ಎಂದು…
ಬೆಂಗಳೂರು: ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರಿಗೆ ಉಚಿತ ಚಿಕಿತ್ಸೆ ಕಲ್ಪಿಸುವಂತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಈ ಆರೋಗ್ಯ ಸಂಜೀವಿನಿ ಯೋಜನೆ ಕುರಿತಂತೆ ಸರ್ಕಾರಿ ನೌಕರರಿಗೆ ಸಂಘದಿಂದ ಮಹತ್ವದ ಸ್ಪಷ್ಟನೆಯನ್ನು ನೀಡಲಾಗಿದೆ. ಅದೇನು ಅಂತ ಮುಂದೆ ಓದಿ. ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಬಗ್ಗೆ ಈ ಕೆಳಕಂಡಂತೆ ಸ್ಪಷ್ಟನೆಯನ್ನು ನೀಡಿದೆ. 1. ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯು ದಿನಾಂಕ: 01-10-2025 ರಿಂದ ಜಾರಿಗೆ ಬಂದಿರುತ್ತದೆ. 2. ಈ ಯೋಜನೆಯಲ್ಲಿ ಸರ್ಕಾರಿ ನೌಕರರು ಹಾಗೂ ಅವಲಂಬಿತ ಕುಟುಂಬ ಸದಸ್ಯರು ಒಳರೋಗಿಯಾಗಿ ಸುಮಾರು 2000 ಕಾಯಿಲೆಗಳಿಗೆ ನಗದುರಹಿತ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ 3. ಮುಂದಿನ ಹಂತದಲ್ಲಿ ಹೊರ ರೋಗಿಗಳಿಗೂ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುವುದು 4. ಗಂಡ ಹೆಂಡತಿ ಇಬ್ಬರೂ ಸರ್ಕಾರಿ ನೌಕರರಾಗಿದ್ದರೆ ಒಬ್ಬರು ಮಾತ್ರ ವಂತಿಕೆ ನೀಡುವುದು 5. ಮಹಿಳಾ ಸರ್ಕಾರಿ ನೌಕರರ ತಂದೆ-ತಾಯಿಗಳು…
ಪುತ್ತೂರು: ಕೋಮು ದ್ವೇಷ ಹುಟ್ಟಿಸುವ ಪ್ರಚೋದನಕಾರಿ ಭಾಷಣದ ಆರೋಪದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರು ನೀಡಿದಂತ ದೂರು ಆಧರಿಸಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಪುತ್ತೂರು ತಾಲ್ಲೂಕಿನ ಉಪ್ಪಳಿಗೆಯಲ್ಲಿ ನಡೆದಂತ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಕೋಮು ದ್ವೇಷ ಹುಟ್ಟಿಸುವಂತೆ ಪ್ರಚೋದನಕಾರಿ ಭಾಷಣೆ ಮಾಡಿದ್ದಾರೆ. ಧಾರ್ಮಿಕ ದ್ವೇಷ, ಮಹಿಳೆಯರ ಘನತೆಗೆ ಧಕ್ಕೆ ತರುವಂತ ಭಾಷಣ ಇದಾಗೆ ಎಂಬುದಾಗಿ ಈಶ್ವರಿ ಪದ್ಮುಂಜ ಎಂಬುವರು ದೂರು ನೀಡಿದ್ದರು. ಈ ದೂರು ಆಧರಿಸಿ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಬಿಎನ್ಎಸ್ 79, 196, 290, 302, ಮತ್ತು 3(5) ಕಲಂ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. https://kannadanewsnow.com/kannada/big-news-big-shock-from-the-government-for-those-who-illegally-obtained-bpl-ration-cards/ https://kannadanewsnow.com/kannada/alert-are-the-pills-you-are-taking-genuine-or-fake-just-check-this-way/
ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್ ಬಳಿಯಲ್ಲಿ ಖಾಸಗಿ ಬಸ್ ಅಪಘಾತದ ನಂತ್ರ ಬೆಂಕಿ ಹೊತ್ತಿಕೊಂಡು, 20 ಮಂದಿ ಸಜೀವ ದಹನವಾಗಿದ್ದರು. ಈ ದುರಂತದ ಬೆನ್ನಲ್ಲೇ ಕೆ ಎಸ್ ಆರ್ ಟಿ ಸಿ ಪ್ರಯಾಣಿಕರ ಸುರಕ್ಷತೆಗಾಗಿ ಮಹತ್ವದ ಕ್ರಮ ಕೈಗೊಂಡಿದೆ. ಇನ್ಮುಂದೆ ಸಾರಿಗೆ ಬಸ್ಸುಗಳಲ್ಲಿ ಈ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಿ, ಸಚಿವ ರಾಮಲಿಂಗಾರೆಡ್ಡಿ ಆದೇಶಿಸಿದ್ದಾರೆ. ಈ ಕುರಿತಂತೆ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದು, ಇತ್ತೀಚೆಗೆ ಕರ್ನೂಲ್ ಬಸ್ ದುರಂತ ತೀವ್ರ ದುಃಖಕರವಾದ ಸಂಗತಿ. ಆ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿರುವ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಬೇಕು. ಈ ಹಿಂದೆ ನಾನು ಸಾರಿಗೆ ಸಚಿವನಾಗಿದ್ದಾಗ ಹಾವೇರಿ ಬಳಿ ಜಬ್ಬಾರ್ ಟ್ರಾವೆಲ್ಸ್ ನ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಪ್ರಯಾಣಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು ಎಂದು ಹೇಳಿದ್ದಾರೆ. ನಾನು ಆ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಸುಮಾರು 50000 ವಾಹನಗಳಲ್ಲಿ ( ಸಾರಿಗೆ ಸಂಸ್ಥೆಗಳ…
ಬೆಂಗಳೂರು: ಶಾಲಾ ಪಠ್ಯಪುಸ್ತಕಗಳಲ್ಲಿನ ಇತಿಹಾಸವನ್ನು ನೀರಸವೆಂದು ಭಾವಿಸುವ ಮಕ್ಕಳಿಗೆ ಈಗ ಸುವರ್ಣಾವಕಾಶ. ಭಾರತದ ಶ್ರೀಮಂತ ಚರಿತ್ರೆಯ ಒಳಹೊಕ್ಕು, ಅದರೊಂದಿಗೆ ಬೆರೆತು ಜ್ಞಾನ ಸಂಪಾದಿಸಲು ಇದೀಗ ಅತ್ಯಾಕರ್ಷಕ ವೇದಿಕೆಯೊಂದು ಸಜ್ಜಾಗಿದೆ. ಇತಿಹಾಸವನ್ನು ವ್ಯಕ್ತಿತ್ವ ವಿಕಸನದೊಂದಿಗೆ ಸಮೀಕರಿಸಿ ನಡೆಸುತ್ತಿರುವ ವಿಶಿಷ್ಟ ಶಿಬಿರ ಇದು. ಮಾತುಗಾರಿಕೆ, ವೇದಿಕೆಯಲ್ಲಿ ಹಿಂಜರಿಕೆಯಿಲ್ಲದೇ ಮಾತನಾಡುವುದು, ಕಥನ ಕಲೆಯೊಂದಿಗೆ ವಿಷಯ ಪ್ರಸ್ತುತಿ, ಇತರರೊಂದಿಗೆ ಪರಿಣಾಮಕಾರಿ ಸಂವಹನ ಇವೆಲ್ಲ ಮಗುವು ಭವಿಷ್ಯದಲ್ಲಿ ಯಾವುದೇ ವೃತ್ತಿರಂಗಕ್ಕೆ ಹೋದರೂ ಬೇಕಾಗುವ ಕೌಶಲಗಳು. ಇತಿಹಾಸದ ವಿಷಯಗಳನ್ನು ಬಳಸಿಕೊಂಡು ಈ ಎಲ್ಲ ಕೌಶಲಗಳನ್ನು ಮಕ್ಕಳಲ್ಲಿ ತುಂಬುವ ನಿಟ್ಟಿನಲ್ಲಿ ಈ ಶಿಬಿರ ವಿನ್ಯಾಸಗೊಂಡಿದೆ. ‘ಪರಮ್ ಹಿಸ್ಟರಿ ಸೆಂಟರ್’ ಆಯೋಜಿಸಿರುವ “ಹಿಸ್ಟರಿ ಮೇಕರ್ಸ್” ಎಂಬ ರಂಗಭೂಮಿ ಕಾರ್ಯಾಗಾರವು ಕೇವಲ ಪಾಠಕ್ಕೆ ಸೀಮಿತವಾಗದೆ, ಇತಿಹಾಸದ ಸ್ವ ಅನುಭವನ್ನು ಪಡೆದುಕೊಳ್ಳುವ ಮತ್ತು ಅದನ್ನು ಪ್ರದರ್ಶನ ರೂಪದಲ್ಲಿ ತೋರಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೂಡಿಸಲು ಸಿದ್ಧವಾಗಿದೆ. ರಂಗಭೂಮಿಯ ಮೂಲಕ ಇತಿಹಾಸದ ಅನಾವರಣ: 8 ರಿಂದ 16 ವರ್ಷ ವಯಸ್ಸಿನ ಮಕ್ಕಳಿಗೆಂದೇ 8 ವಾರಾಂತ್ಯಗಳ…
ಮೈಸೂರು: ಪ್ರಯಾಣಿಕರೊಬ್ಬರು ರೈಲ್ವೆ ನಿಲ್ದಾಣದ ಫ್ಲಾಟ್ ಫಾರ್ಮ್ ನಲ್ಲಿಯೇ ಲ್ಯಾಪ್ ಟಾಪ್ ಒಂದನ್ನು ಬಿಟ್ಟು ಹೋಗಿದ್ದರು. ಇಂತಹ ಲ್ಯಾಪ್ ಟಾಪ್ ಪತ್ತೆ ಹಚ್ಚಿದಂತ ರೈಲ್ವೆ ಸಿಬ್ಬಂದಿಗಳು, ಮರಳಿ ಪ್ರಯಾಣಿಕನಿಗೆ ನೀಡಿ, ಪ್ರಾಮಾಣಿಕತೆಯನ್ನು ಮರೆದಿರುವಂತ ಘಟನೆ ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಲ್ಲಿ ನಡೆದಿದೆ. ಪ್ರಯಾಣಿಕ ನಂದಕಿಶೋರ್ ಎಸ್. ಎನ್. ಅವರು 25.10.2025 ರಂದು ಹರಿಹರ ದಿಂದ ರೈಲು ಸಂಖ್ಯೆ 22697ರಲ್ಲಿ ಪ್ರಯಾಣ ಆರಂಭಿಸುವ ಸಂದರ್ಭದಲ್ಲಿ ತಮ್ಮ ಲ್ಯಾಪ್ಟಾಪ್ ಅನ್ನು ಹರಿಹರ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 2/3 ರಲ್ಲಿ ಮರೆತು ಬಿಟ್ಟು ಹೋಗಿದ್ದರು. ಈ ಮಾಹಿತಿ ಪ್ರಯಾಣ ಟಿಕೆಟ್ ಪರೀಕ್ಷಕರಾದ ಅವಿನಾಶ್ ಭೋವಿ ಅವರಿಂದ ಮಾಹಿತಿ ದೊರೆತ ತಕ್ಷಣ, ಅಂತರರಾಷ್ಟ್ರೀಯ ವಾಲಿಬಾಲ್ ಆಟಗಾರರಾದ ಶ್ರೀ ಕೆ. ಇಮ್ತಿಯಾಜ್ ಅಹ್ಮದ್, ವಾಣಿಜ್ಯ ಹಾಗೂ ಕಾಯ್ದಿರಿಸುವ ಲಿಪಿಕರು, ಹರಿಹರ, ತಕ್ಷಣವೇ ಶೋಧ ಕಾರ್ಯ ಪ್ರಾರಂಭಿಸಿದರು. ಲ್ಯಾಪ್ಟಾಪ್ ಪತ್ತೆಹಚ್ಚಿ ಸುರಕ್ಷಿತವಾಗಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ರೈಲು ನೌಕರರ ಈ ಸಮಯೋಚಿತ ಮತ್ತು ಪ್ರಾಮಾಣಿಕ ಕಾರ್ಯವು ನೈರುತ್ಯ ರೈಲ್ವೆ ನೌಕರರ…
ಬೆಂಗಳೂರು: ಮಾಹಿತಿ ತಂತ್ರಜ್ಞಾನ (ಐಟಿ) ವ್ಯವಸ್ಥೆಯ ತುರ್ತು ನಿರ್ವಹಣೆ ಕಾರ್ಯ ಹಿನ್ನೆಲೆಯಲ್ಲಿ ಐದು ಎಸ್ಕಾಂಗಳ ಆನ್ ಲೈನ್ ಸೇವೆಗಳಾದ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ ಹಾಗೂ ಹೊಸ ಸಂಪರ್ಕ ಸೇರಿದಂತೆ ಆನ್ ಲೈನ್ ಆಧರಿತ ಸೇವೆಗಳು ಅಕ್ಟೋಬರ್ 27ರ ರಾತ್ರಿ 8 ಗಂಟೆಯಿಂದ ಅಕ್ಟೋಬರ್ 28ರ ಬೆಳಗ್ಗೆ 11 ಗಂಟೆಯವರೆಗೆ ನಗರ ಪ್ರದೇಶಗಳಲ್ಲಿ ಲಭ್ಯವಿರುವುದಿಲ್ಲ. ಎಲ್ಲಾ ಐದು ವಿದ್ಯುತ್ ಸರಬರಾಜು ಕಂಪನಿಗಳ ಈ ಕೆಳಕಂಡ ನಗರ ಉಪ ವಿಭಾಗದ ಗ್ರಾಹಕರಿಗೆ https://www.bescom.co.in, www.hescom.co.in, www.gescomglb.org, www.mescom.org.in ಮತ್ತು .cescmysore.in ಪೋರ್ಟಲ್ ಗಳ ಮೂಲಕ ಮಾಡುವ ಆನ್ ಲೈನ್ ಸೇವೆಗಳಾದ ಬಿಲ್ ಪಾವತಿ, ಹೊಸ ಸಂಪರ್ಕ ಲಭ್ಯವಿರುವುದಿಲ್ಲ . ಹಾಗೆಯೇ ವಿದ್ಯುತ್ ಬಿಲ್ ಪಾವತಿಗಾಗಿ ಬಳಸುವ ಬೆಸ್ಕಾಂ ಮಿತ್ರ ಆಪ್, ಬೆಂಗಳೂರು ಒನ್, ಕರ್ನಾಟಕ ಒನ್ ಸೇರಿದಂತೆ ಮೊದಲಾದ ಥರ್ಡ್ ಪಾರ್ಟಿ ಪಾವತಿ ವಿಧಾನಗಳಲ್ಲಿ ಆನ್ ಲೈನ್ ಸೇವೆ ಅಲಭ್ಯ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಬೆಸ್ಕಾಂ ಬೆಂಗಳೂರು…
ಮದ್ರಾಸ್: ಶನಿವಾರ ಮದ್ರಾಸ್ ಹೈಕೋರ್ಟ್, ಕ್ರಿಪ್ಟೋಕರೆನ್ಸಿ ಭಾರತೀಯ ಕಾನೂನಿನ ಅಡಿಯಲ್ಲಿ ಆಸ್ತಿಯಾಗಿ ಅರ್ಹತೆ ಪಡೆದಿದ್ದು, ಮಾಲೀಕತ್ವಕ್ಕೆ ಅರ್ಹವಾಗಿದೆ ಮತ್ತು ಟ್ರಸ್ಟ್ನಲ್ಲಿ ಇರಿಸಬಹುದಾಗಿದೆ ಎಂದು ತೀರ್ಪು ನೀಡಿದೆ. ಕ್ರಿಪ್ಟೋಕರೆನ್ಸಿ ಅಮೂರ್ತವಾಗಿದ್ದು ಕಾನೂನುಬದ್ಧವಲ್ಲದಿದ್ದರೂ, ಅದು ಆಸ್ತಿಯ ಅಗತ್ಯ ಗುಣಲಕ್ಷಣಗಳನ್ನು ಹೊಂದಿದೆ ಎಂದು ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅಭಿಪ್ರಾಯಪಟ್ಟರು. “”ಕ್ರಿಪ್ಟೋ ಕರೆನ್ಸಿ” ಒಂದು ಆಸ್ತಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಮೂರ್ತ ಆಸ್ತಿಯಲ್ಲ ಅಥವಾ ಕರೆನ್ಸಿಯೂ ಅಲ್ಲ. ಆದಾಗ್ಯೂ, ಇದು ಒಂದು ಆಸ್ತಿಯಾಗಿದ್ದು, ಅದನ್ನು ಆನಂದಿಸಲು ಮತ್ತು ಹೊಂದಲು (ಪ್ರಯೋಜನಕಾರಿ ರೂಪದಲ್ಲಿ) ಸಮರ್ಥವಾಗಿದೆ. ಇದನ್ನು ಟ್ರಸ್ಟ್ನಲ್ಲಿ ಇರಿಸಿಕೊಳ್ಳಲು ಸಮರ್ಥವಾಗಿದೆ” ಎಂದು ನ್ಯಾಯಾಲಯ ಹೇಳಿದೆ. 2024 ರ ಸೈಬರ್ ದಾಳಿಯ ನಂತರ WazirX ಪ್ಲಾಟ್ಫಾರ್ಮ್ನಲ್ಲಿ XRP ಹಿಡುವಳಿಗಳನ್ನು ಸ್ಥಗಿತಗೊಳಿಸಿದ ಹೂಡಿಕೆದಾರರು (ಅರ್ಜಿದಾರರು) ಸಲ್ಲಿಸಿದ ಅರ್ಜಿಯಲ್ಲಿ ಈ ತೀರ್ಪು ಬಂದಿದೆ. ಅರ್ಜಿದಾರರು ಜನವರಿ 2024 ರಲ್ಲಿ Zanmai Labs ನಿರ್ವಹಿಸುವ WazirX ವಿನಿಮಯ ವೇದಿಕೆಯಲ್ಲಿ ₹1,98,516 ಹೂಡಿಕೆ ಮಾಡಿ 3,532.30 XRP ನಾಣ್ಯಗಳನ್ನು ಖರೀದಿಸಿದ್ದರು. ಅವರಿಗೆ ಪೋರ್ಟ್ಫೋಲಿಯೊ ಖಾತೆಯನ್ನು…
ಬೆಂಗಳೂರು: ಜೈಲಿನಲ್ಲಿ ಗುಬ್ಬಚ್ಚಿ ಸೀನಾ ಬರ್ತ್ ಡೇಯನ್ನು ಆಚರಣೆ ಮಾಡಿಕೊಂಡಿದ್ದಾರೆ. ಒಬ್ಬರಿಗೆ ಒಂದು ಕಾನೂನು, ಮತ್ತೊಬ್ಬರಿಗೆ ಮತ್ತೊಂದು ಕಾನೂನು ಮಾಡಲಾಗುತ್ತಿದೆ. ಕ್ವಾರಂಟೈನ್ ಸೆಲ್ಲಿನಿಂದ ಮೇನ್ ಸೆಲ್ ಗೆ ಶಿಫ್ಟ್ ಮಾಡಿ. ನಾವು ಟ್ರಯಲ್ ಗೆ ಸಿದ್ಧರಿದ್ದೇವೆ. ಒಂದೇ ದಿನದಲ್ಲಿ ಟ್ರಯಲ್ ನಡೆದು, ಜೀವಾವಧಿ ಶಿಕ್ಷೆ ಬೇಕಾದ್ರೂ ವಿಧಿಸಿ ಎಂಬುದಾಗಿ ನಟ ದರ್ಶನ್ ಪರ ವಕೀಲರು ಕೋರ್ಟಿನಲ್ಲಿ ವಾದಿಸಿದ್ದಾರೆ. ಇಂದು ಹಾಸಿಗೆ ದಿಂಬು ನೀಡದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದಂತ ಅರ್ಜಿಯನ್ನು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಯಿತು. ಈ ವೇಳೆಯಲ್ಲಿ ನಟ ದರ್ಶನ್ ಪರವಾದಂತ ವಕೀಲರು ಕಾನೂನು ಸೇವಾ ಪ್ರಾಧಿಕಾರದ ಸದಸ್ಯರನ್ನು ಜೈಲು ಅಧಿಕಾರಿಗಳು ಮಿಸ್ ಲೀಡ್ ಮಾಡಿದ್ದಾರೆ. ಆದೇಶದಲ್ಲಿ ಎಲ್ಲಿಯೂ ಜೈಲು ಅಧಿಕಾರಿಗಳಿಂದ ಮಾಹಿತಿ ಕೇಳಿ ಅಂತ ಹೇಳಿಲ್ಲ ಎಂದು ವಾದಿಸಿದರು. ಜೈಲಿನಲ್ಲೇ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಇದು ಒಬ್ಬರಿಗೆ ಒಂದು, ಮತ್ತೊಬ್ಬರಿಗೆ ಮಗಗೊಂದು ಕಾನೂನು ಎಂಬಂತೆ ತೋರಿಸುತ್ತಿದೆ. ನಟ ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್ಲಿನಿಂದ ಮೇನ್…














